Baidashree

Home

Slide 1

ದಾನಿಗಳ, ಸರಕಾರದ ಅನುದಾನದ ಮೂಲಕ ಕಟ್ಟಿಸಿಕೊಂಡ ನೆಲಮಹಡಿ ಸಮೇತ ನಾಲ್ಕು ಮಹಡಿಗಳ ಸುಸಜ್ಜಿತ ಕಟ್ಟಡದಲ್ಲಿ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ.

previous arrow
next arrow

ಸಂಸ್ಥೆಯ ಬಗ್ಗೆ

ಅನ್ಯಾಯ ಅಧರ್ಮಗಳ ಮೆಟ್ಟಿ ನಿಂತು, ಸದಾ ಸತ್ಯ, ಧರ್ಮ, ನ್ಯಾಯದ ರಕ್ಷಣೆಗಾಗಿ ಹೋರಾಡಿದ ತುಳುನಾಡ ಅವಳಿ ವೀರರಾದ ಕೋಟಿ – ಚೆನ್ನಯರ ವೀರಗಾಥೆ, ಪಾಡ್ದನದಲ್ಲಿ ಉಲ್ಲೇಖವಿರುವಂತೆ “ಏಳ್ ಇರ್ಲು ಎಡ್ಮ ಪಗೆಲ್ ಪನ್ಪಿನಾತುಂಡು”. ಅಂದರೆ ಹೇಳಹೊರಟರೆ ಏಳು ರಾತ್ರಿ ಎಂಟು ಹಗಲು ಸಾಲದು.

ಅಂತಹ ಕೋಟಿ-ಚೆನ್ನಯರ ಕಾಲದಲ್ಲಿ ಅಂಗ ಸಾಧನೆ, ಮಲ್ಲ ಸಾಧನೆಗಳ ಕೇಂದ್ರವಾಗಿದ್ದ, ಇಂದು ಕೋಟಿ -ಚೆನ್ನಯರನ್ನು ಆರಾಧಿಸುತ್ತಿರುವ ಗರೋಡಿಗಳು 250 ಕ್ಕೂ ಹೆಚ್ಚಿವೆ. ಕೋಟಿ – ಚೆನ್ನಯರು ತಮ್ಮ ಜೀವಿತ ಕಾಲದಲ್ಲಿಯೇ 66 ಗರೋಡಿ 33 ತಾವುಗಳನ್ನು ಕಟ್ಟಿಸಿಕೊಂಡಿದ್ದರು ಎಂಬುದು ಇಂದಿಗೂ ಬೈದರ ದರ್ಶನದ ನುಡುಕಟ್ಟಿನಲ್ಲಿದೆ. ಇಂದು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಐನೂರರಿಂದ ಸಾವಿರ ಮನೆಗಳಿಗೊಂದು ಗರೋಡಿಯಿದ್ದು ಕೂಡುಕಟ್ಟಿನ ವ್ಯವಸ್ಥೆಯಿದೆ. ನಂಬುವ ಲಕ್ಷೋಪಲಕ್ಷ ಭಕ್ತರಿದ್ದಾರೆ.

ಗ್ಯಾಲರಿ

ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಫೋಟೋಗಳು.