ಶ್ರೀ ಬ್ರಹ್ಮಬೈದರ್ಕಳ ಗರೋಡಿ ಪಾದೆಮಠ, ಕೆಂಜೂರು
ಉಡುಪಿಯಿಂದ ಕೊಕ್ಕರ್ಣೆ ತಲುಪಿ, ಕೊಕ್ಕರ್ಣೆ – ಮಂದಾರ್ತಿ ರಸ್ತೆಯಲ್ಲಿ ಕೊಕ್ಕರ್ಣೆ ಬಸ್ಸು ನಿಲ್ದಾಣದಿಂದ ಸುಮಾರು 5ಕಿ.ಮೀ. ದೂರದಲ್ಲಿ ಬೈದೆಬೆಟ್ಟು ಎಂಬಲ್ಲಿ ರಸ್ತೆಯ ಎಡಬದಿಯಲ್ಲಿದೆ ಈ ಗರೋಡಿ.
ಗರೋಡಿಗೆ ಬಡಗು ಮುಖವಾಗಿರುವ ಮುಖ್ಯದ್ವಾರವಿದೆ. ಬ್ರಹ್ಮಗುಡಿಯು ಪೂರ್ವಾಭಿಮುಖವಾಗಿದೆ. ಇಲ್ಲಿ ಷಡಾಧಾರ ಪ್ರತಿಷ್ಟೆ ಇಲ್ಲ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ ಈ ಪ್ರದೇಶದ ಜನ ಮೊದಲು ವಡ್ಡಂಬೆಟ್ಟು ಗರೋಡಿಗೆ ಹೋಗುತ್ತಿದ್ದರು. ಒಂದು ಸಂದರ್ಭದಲ್ಲಿ ಪಾದೆಮಠದವರನ್ನು ಬಿಟ್ಟು ವಡ್ಡಂಬೆಟ್ಟು ಗರೋಡಿಯಲ್ಲಿ ಪೂಜೆ ನಡೆಸಿದರೆಂಬ ವಿವಾದದ ಪರಿಣಾಮವಾಗಿ ಈ ಗರೋಡಿ ನಿರ್ಮಾಣವಾಯಿತಂತೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಮೂರಂತಸ್ತಿನ ಬ್ರಹ್ಮಗುಂಡದಲ್ಲಿ ಕೆಳಗೆ ನಾಗ ಬ್ರಹ್ಮರ ಪಂಚಲೋಹದ ಮೂರ್ತಿ, ಮದ್ಯದ ಅಂತಸ್ತಿನಲ್ಲಿ ಗಾಳಿದೇವರ ಆರಾಧನೆ. ಮೇಲಿನ ಅಂತಸ್ತಿನಲ್ಲಿ ದೀಪವನ್ನಿಟ್ಟು ಪೂಜಿಸುತ್ತಾರೆ.
ಗುಂಡದ ಬಲಭಾಗದಲ್ಲಿ ದೇಯಿಬೈದೆತಿ ಹಾಗೂ ಕೋಟಿಬೈದರ ಮರದ ಮೂರ್ತಿಗಳಿವೆ.
ಎಡಭಾಗದಲ್ಲಿ ಚೆನ್ನಯಬೈದರು ಹಾಗೂ ಕುಜುಂಬ ಕಾಂಜವರ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಹುಲಿಚಾಮುಂಡಿ ದೈವದ ಮಣೆಮಂಚ, ಕೈಯಲ್ಲಿ ಮಗುವನ್ನು ಹಿಡಿದ ಮೈಂದಾಳ್ತಿಯ ಮರದ ಮೂರ್ತಿ, ಚಿಕ್ಕುವಿನ ಮರದ ಮೂರ್ತಿ, ಮೂವರು ಮಕ್ಕಳ ಮರದ ಮೂರ್ತಿ, ಜೋಗಿ ಪುರುಷ ಮರದ ಮೂರ್ತಿ ಹಾಗೂ ಗುರುಕಂಭಕ್ಕೆ ಪೂಜೆ ನಡೆಯುತ್ತದೆ.
ಗರೋಡಿಯ ಆವರಣದಲ್ಲಿರುವ ಗುಡಿಯಲ್ಲಿ ಶಿವರಾಯ ಮತ್ತು ಬಂಟರ ಮರದ ಮೂರ್ತಿ ಹಾಗೂ ಪರಿವಾರ ದೈವಗಳ ಮಣೆಮಂಚಗಳಿವೆ.
ಗರೋಡಿಯ ಆವರಣದೊಳಗೆ ತುಳಸಿಕಟ್ಟೆ, ಬಲಿಕಲ್ಲು, ನೇಮ ನಡೆಯುವ ಚಪ್ಪರ, ದೀಪದ ಕಂಬಗಳಿವೆ.
ಮಂಜುನಾಥ ಪೂಜಾರಿ
2014ರಿಂದ ಮಂಜುನಾಥ ಪೂಜಾರಿ(69 ವರ್ಷ) ಇವರು ಇಲ್ಲಿಯ ಅರ್ಚಕರಾಗಿದ್ದಾರೆ. ಇವರ ಮೊದಲು ಗೋಪ ಪೂಜಾರಿ, ಸುಬ್ಬ ಪೂಜಾರಿ, ಪರದೇಶಿ ಪೂಜಾರಿ, ಬೆರ್ಮು ಪೂಜಾರಿ ಮೊದಲಾದ ಹಿರಿಯರು ಈ ಸೇವೆ ಮಾಡಿದ್ದರು.
ಗುಂಡು ಪೂಜಾರಿ ಹಾಗೂ ವಾಸು ಪೂಜಾರಿಯವರು ಈ ಗರೋಡಿಯ ಬೈದರ ದರ್ಶನ ಸ್ಥಳ ಪಾತ್ರಿಗಳು. ಇವರ ಮೊದಲು ಕೊಂಬ ಪೂಜಾರಿ, ಸುಬ್ಬ ಪೂಜಾರಿ ಇವರುಗಳು ಈ ಸೇವೆ ಮಾಡಿದ್ದರು.
ಸುಧಾಕರ ಶೆಟ್ಟಿಯವರು ಈ ಗರೋಡಿಯ ಮೊಕ್ತೇಸರರು. ಗರೋಡಿಯ ಉಸ್ತುವಾರಿಗೆ ಆಡಳಿತ ಸಮಿತಿಯಿದ್ದು ಕೆಂಜೂರು ಮನೆ ಸುಧಾಕರ ಶೆಟ್ಟಿಯವರು ಸಮಿತಿಯ ಅಧ್ಯಕ್ಷರಾಗಿಯೂ ಚಂದ್ರಕಾಂತ ಶ್ಯಾನುಭೋಗ ಇವರು ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ(ಪೆರ್ಡೂರು) ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರುಕಟ್ಟುವುದು, ನವೆಂಬರ್ ತಿಂಗಳಲ್ಲಿ ಹಾಲುಹಬ್ಬ, ಅಗೆಲು ಸೇವೆ, ಮಾರ್ಚ 26ಕ್ಕೆ ಅಗೆಲು ಸೇವೆ, 27ಕ್ಕೆ ಬೈದೇರುಗಳ ನೇ, ಮಾಯಂದಾಳ್ ಕೋಲ, ಶಿವರಾಯ ಕೋಲ ನಡೆಯುತ್ತದೆ.
ಕೆಂಜೂರು ಗ್ರಾಮದ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದವರಗಿದ್ದು, ಗರೋಡಿಯಲ್ಲಿ ತುಲಾಭಾರ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ. ಊರವರ ವಂತಿಗೆ, ಕಾಣಿಕೆ ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಷ್ಷ ಭರಿಸಲಾಗುತ್ತದೆ.
1981ರಲ್ಲಿ ಹಾಗೂ 2017-18ರಲ್ಲಿ ಗರೋಡಿಯ ಜೀರ್ಣೋದ್ಧಾರವಗಿರುತ್ತದೆ
ನರಸಿಂಹ ಪರವ ಮತ್ತು ಸಂಘಡಿಗರು ಚೇರ್ಕಾಡಿ ಇವರು ನೃತ್ಯವಿಶಾರದರಾಗಿ, ಕುಮಾರ ಮಡಿವಾಳ ಕೆಂಜೂರು ಇವರು ಮಡಿವಾಳರಾಗಿ ಈ ಗರೋಡಿಯ ಸೇವೆ ಸಲ್ಲಿಸುತ್ತಿದ್ದಾರೆ.
ಗರೋಡಿಯ ವಿಳಾಸ:
ಶ್ರೀ ಬ್ರಹ್ಮಬೈದರ್ಕಳ ಗರೋಡಿ ಪಾದೆಮಠ,
ಕೆಂಜೂರು ಗ್ರಾಮ ಮತ್ತು ಅಂಚೆ,
ಬ್ರಹ್ಮಾವರ ತಾಲೂಕು, ಉಡುಪಿ.
ಕೆಂಜೂರು ಗ್ರಾಮ ಮತ್ತು ಅಂಚೆ,
ಬ್ರಹ್ಮಾವರ ತಾಲೂಕು, ಉಡುಪಿ.
ಅರ್ಚಕರು:
ಮಂಜುನಾಥ ಪೂಜಾರಿ – 7259660969
ಮಾಹಿತಿ ನೀಡಿದವರು :
ಮಂಜುನಾಥ ಪೂಜಾರಿ
ಮಾಹಿತಿ ಸಂಗ್ರಹಿಸಿದ ದಿನಾಂಕ :
27.12.2024