Baidashree

Shree Shivaraya & Brahma Baidarkala Garodi – Kavadi

ಶ್ರೀ ಶಿವರಾಯ ಮತ್ತು ಬ್ರಹ್ಮ ಬೈದರ್ಕಳ ಗರೋಡಿ – ಕಾವಡಿ

ಉಡುಪಿಯಿಂದ ಬ್ರಹ್ಮಾವರಕ್ಕೆ ಬಂದು ಬಾರ್ಕೂರು ಮುಖ್ಯ ರಸ್ತೆಗೆ ತಿರುಗಿ ಬಾರ್ಕೂರು ಪೇಟೆಯಿಂದ ಸುಮಾರು 3 ಕಿ. ಮೀ. ನಂತರ ಎಡಕ್ಕೆ ತಿರುಗಿ ಸುಮಾರು 2.5 ಕಿ. ಮೀ ದೂರದಲ್ಲಿದೆ ಈ ಗರೋಡಿ.
ಇದು ತುಂಬಾ ಹಳೆಯ ಕಟ್ಟಡದ ಗರೋಡಿಯಾಗಿದ್ದು ಜೀರ್ಣೋದ್ಧಾರದ ಯೋಜನಾ ಹಂತದಲ್ಲಿದೆ. ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು, ಬ್ರಹ್ಮ ಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಬೆಳ್ಳಿ ಕವಚದ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರಿಗೆ ಪೂಜೆಯಿದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರು ಹಾಗೂ ತಾಯಿ ದೇಯಿ ಬೈದೆತಿಯ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ನಂದಿಕೇಶ್ವರ ದೈವದ ಮರದ ಮುಖ ಮೂರ್ತಿ ಹಾಗೂ ಮಣೆಮಂಚವಿದೆ. ಪಕ್ಕದಲ್ಲಿ ಮೈಸಂದಾಯ ದೈವದ ಮಣೆಮಂಚ ಹಾಗೂ ಪಂಜ ಬೈದರ ಮರದ ಮೂರ್ತಿಯಿದೆ.
ಬ್ರಹ್ಮಗುಡಿಯ ಹೊರಗಡೆ ಬಲಭಾಗದಲ್ಲಿ ಪಂಜುರ್ಲಿಯ ಮರದ ಮೂರ್ತಿ ಹಾಗೂ ಪರಿವಾರ ದೈವಗಳ ಮಣೆ ಮಂಚವಿದೆ. ಬ್ರಹ್ಮಗುಡಿಯ ಎಡಭಾಗದಲ್ಲಿ ಪಂಜುರ್ಲಿ ದೈವದ ಮರದ ಗದ್ದ್ದಿಗೆಯಲ್ಲಿ ಕಂಚಿನ ಮೂರ್ತಿ ಇದೆ. ಪಕ್ಕದಲ್ಲಿ ಪರಿವಾರ ದೈವಗಳ ಮಣೆ ಮಂಚಗಳಿವೆ.
ಬಾಲಯ್ಯ, ಮೈಂದಾಳ್ತಿ, ಗೋರಲಮ್ಮ, ಚಿಕ್ಕು, ಮರ್ಲುಚಿಕ್ಕು, ದೈವಗಳ ಮರದ ಮೂರ್ತಿಗಳು, ಪರಿವಾರ ದೈವಗಳ ಮಣೆ ಮಂಚಗಳಿವೆ.
ಬ್ರಹ್ಮ ಗುಡಿಯ ಎದುರಿಗೆ ಜೋಗಿಪುರುಷ, ಹಳಿಯಮ್ಮ, ಬಾಲಚಿಕ್ಕುವಿನ ಮರದ ಮೂರ್ತಿ ಹಾಗೂ ಚೌ೦ಡಿ ದೈವದ ಕಲ್ಲು ಇದೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲು ಬೊಬ್ಬರ್ಯ, ಬಬ್ಬರ್ತಿಯ ಮರದ ಮೂರ್ತಿಯಿದೆ.
ಗರೋಡಿಯ ಎದುರಿನ ಗುಡಿಯಲ್ಲಿ ಮರದ ಗದ್ದಿಗೆಯೊಳಗೆ ಪಂಚಲೋಹದ ಶಿವರಾಯ ಮೂರ್ತಿಯಿದೆ.
ಗರೋಡಿಯ ಆವರಣದೊಳಗೆ ತುಳಸಿಕಟ್ಟೆ, ಕ್ಷೇತ್ರಪಾಲ, ಹೈಗುಳಿ, ಕೊರಗಜ್ಜ, 17 ಶಕ್ತಿ ಕಲ್ಲುಗಳು ಹಾಗೂ ಬಲಿಕಲ್ಲುಗಳಿವೆ. ಗರೋಡಿಯ ಪರಿಸರದಲ್ಲಿ ರಾವು, ಕೇತು, ಹಾಗೂ ಯಕ್ಷಿಣಿ ದೈವಗಳ ಸಾನಿಧ್ಯವಿದೆ.

ಸತೀಶ್ ಪೂಜಾರಿ

ತಿಮ್ಮ ಪೂಜಾರಿ

ಸತೀಶ್ ಪೂಜಾರಿ (55 ವರ್ಷ) ತಿಮ್ಮ ಪೂಜಾರಿ (67 ವರ್ಷ) ಹಾಗೂ ರಾಜು ಪೂಜಾರಿ (72 ವರ್ಷ) ಇವರು ಗರೋಡಿಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮೊದಲು ಚಂದು ಪೂಜಾರಿ, ದೊಟ್ಟಿ ಪೂಜಾರಿ, ಬಚ್ಚ ಪೂಜಾರಿ, ಹಾಗೂ ಸಂಜೀವ ಪೂಜಾರಿ ಇವರು ಈ ಸೇವೆ ಮಾಡಿದ್ದರು.
ಈ ಗರೋಡಿಯಲ್ಲಿ ಈಗ ಬೈದರ ದರ್ಶನದ ಸ್ಥಳ ಪಾತ್ರಿಗಳಿಲ್ಲ. ಹಿಂದೆ ಶಿವ ಪೂಜಾರಿ, ಬಚ್ಚ ಪೂಜಾರಿಯವರು ಈ ಸೇವೆ ಮಾಡಿದ್ದರು,
ದಿನಕರ ಶೆಟ್ಟಿ, ಶೇಖರ ಶೆಟ್ಟಿಯವರು ಗರೋಡಿಯ ಮೊಕ್ತೇಸರರು.
ಗರೋಡಿಯಲ್ಲಿ ನಿತ್ಯವೂ ದೀಪ ಹಚ್ಚುವ ಕ್ರಮವಿದೆ. ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ದೀಪಾವಳಿ ಪೂಜೆ, ಹಸರಣೆ ಪೂಜೆ, ಕೊಡಿ ತಿಂಗಳಲ್ಲಿ ಅಗೆಲು ಸೇವೆ, ಹಾಲುಹಬ್ಬ, ನಡೆಯುತ್ತದೆ. ಫೆಬ್ರವರಿ 7ರಿಂದ ಕೆಂಡ ಸೇವೆ, ಶಿವರಾಯ ಕೋಲ, ಪಂಜುರ್ಲಿ ಕೋಲ, ಮತ್ತು ತುಲಾಭಾರ ಸೇವೆ ನಡೆಯುತ್ತದೆ.
ಹವರಾಲು, ಮಾನಂಬಳ್ಳಿ, ಮೂಡುತೋಟ, ಕಾವಡಿ ಊರುಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರುತ್ತವೆ. ಊರ ಜನರು ಗರೋಡಿಯಲ್ಲಿ ತುಲಾಭಾರ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆಯಂತಹ ಹರಕೆಯ ಸೇವೆಗಳಲ್ಲಿ ಪಾಲ್ಗೊಳ್ಳುತ್ತಾರೆ.
ಗರೋಡಿಯ ಪರಿಸರದಲ್ಲಿ ಶಿವರಾಯ ಪ್ರೆಂಡ್ಸ ಎನ್ನುವ ಯುವಕರ ಸಂಸ್ಥೆಯೊಂದು ಕಾರ್ಯನಿರ್ವಹಿಸುತ್ತಿದೆ.

ಗರೋಡಿಯ ವಿಳಾಸ:

ಶ್ರೀ ಶಿವರಾಯ ಮತ್ತು ಬ್ರಹ್ಮಬೈದರ್ಕಳ ಗರೋಡಿ, ಕಾವಡಿ,
ಅಂಚೆ ಕಾವಡಿ,
ಬ್ರಹ್ಮಾವರ ತಾಲೂಕು,
ಉಡುಪಿ 576210.

ಪಾತ್ರಿ:

ಸತೀಶ್ ಪೂಜಾರಿ – 9611050180
ತಿಮ್ಮ ಪೂಜಾರಿ – 7022207425
ರಾಜು ಪೂಜಾರಿ – 9743330753

ಮಾಹಿತಿ ನೀಡಿದವರು :

ಸತೀಶ್ ಪೂಜಾರಿ
ತಿಮ್ಮ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

04.01.2025