ಶ್ರೀ ಬ್ರಹ್ಮಬೈದರ್ಕಳ - ಶಿವರಾಯ ಪರಿವಾರ ದೈವಗಳ ಗರೋಡಿ, ಕುಕ್ಕುಡೆ - ಹಾರಾಡಿ
ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ ಎನ್ಎಚ್ 66 ರಲ್ಲಿ ಬ್ರಹ್ಮಾವರಕ್ಕೆ ಮೊದಲು ದೂಪದಕಟ್ಟೆ ಜಂಕ್ಷನ್ನಿಂದ ಎಡಕ್ಕೆ ತಿರುಗಿ ಸುಮಾರು 4.8ಕಿ. ಮೀ. ದೂರದಲ್ಲಿದೆ ಈ ಗರೋಡಿ.
ಇದು ಆಯದ ಶಿಲಾಮಯ ಗರೋಡಿಯಾಗಿದ್ದು ಹಂಚಿನ ಮಾಡನ್ನು ಹೊಂದಿದೆ. ಪೂರ್ವಾಭಿಮುಖವಾದ ಒಂದು ದ್ವಾರವಿದೆ. ಬ್ರಹ್ಮ ಗುಡಿಯ ದ್ವಾರವು ಬಡಗು ಮುಖವಾಗಿದ್ದು, ಬ್ರಹ್ಮಗುಡಿಗೆ ಬಾಗಿಲು ಅಳವಡಿಸಿರುವುದಿಲ್ಲ. ಷಢಾಧಾರ ಪ್ರತಿಷ್ಟೆಯೂ ಇದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಬೆಳ್ಳಿಯ ಕವಚ ಹೊಂದಿದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಕುದುರೆಯ ಮೇಲೆ ಕುಳಿತ ಗಾಳಿದೇವರ ಪಂಚಲೋಹದ ಬೆಳ್ಳಿಯ ಕವಚ ಹೊಂದಿದ ಮೂರ್ತಿಯಿದೆ.
ಗುಂಡದ ಎಡಭಾಗದಲ್ಲಿ ದೇಯಿಬೈದೆತಿ, ಕೋಟಿಚೆನ್ನಯರು ಹಾಗೂ ಇಬ್ಬರು ಮಕ್ಕಳ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ಕುಜುಂಬ ಕಾಂಜವ ಮತ್ತು ಮಗುವಿನ ಮರದ ಮೂರ್ತಿ ಹಾಗೂ ಮೈಸಂದಾಯ ದೈವದ ಮಣೆಮಂಚವಿದೆ.
ಬ್ರಹ್ಮಗುಡಿಯ ಹೊರಗೆ ಎಡಭಾಗದಲ್ಲಿ ಮಣೆಮಂಚದಲ್ಲಿ ಪಂಜುರ್ಲಿಯ ಪಂಚಲೋಹದ ಬೆಳ್ಳಿ ಕವಚ ಹೊಂದಿದ ಮೂರ್ತಿಯಿದೆ. ಪಕ್ಕದಲ್ಲಿ ಚೌಂಡಿಯ ಮಣೆಮಂಚ, ಮಾಯಂದಾಲ್ ಮತ್ತು ಮಗುವಿನ ಮರದ ಮೂರ್ತಿಯಿದೆ. ಬ್ರಹ್ಮಗುಡಿಯ ಬಲಭಾಗದಲ್ಲಿ ಜುಮಾದಿ ಹಾಗೂ ಬಂಟರ ಮಣೆಮಂಚಗಳಿವೆ.
ಬ್ರಹ್ಮಗುಡಿಯ ಎದುರಿಗೆ ಜೋಗಿಪುರುಷ ಮರದ ಮೂತಿ, ಗುರುಕಂಬ, ಚಿಕ್ಕಮ್ಮನ ಮರದ ಮೂರ್ತಿ, ಹೈಗುಳಿ ಮಣೆಮಂಚವಿದೆ.
ಬ್ರಹ್ಮಗುಡಿಯ ಎದುರಿಗೆ ಜೋಗಿಪುರುಷ ಮರದ ಮೂತಿ, ಗುರುಕಂಬ, ಚಿಕ್ಕಮ್ಮನ ಮರದ ಮೂರ್ತಿ, ಹೈಗುಳಿ ಮಣೆಮಂಚವಿದೆ.
ಗರೋಡಿಯ ಎದುರಿನ ಗುಡಿಯ ಗುಡಿಯಲ್ಲಿ ಶಿವರಾಯ, ಬಂಟ ಹಾಗೂ ಕಾಳಿಯ ಮರದ ಮೂರ್ತಿಗಳಿವೆ.
ಗರೋಡಿಯ ಆವರಣದೊಳಗೆ ತುಳಸಿಕಟ್ಟೆ, ಕ್ಷೇತ್ರಪಾಲ ಗುಡಿ, ನೆಲ್ಲಿಕಾಯಿ ಮರದ ಕಟ್ಡೆ, ಬಲಿಕಲ್ಲುಗಳಿವೆ.
ಗರೋಡಿಯ ಪರಿಸರದಲ್ಲಿ ನಾಗಬನ, ನೇಮದ ಚಪ್ಪರ, ಮಲಸಾವರ ಮತ್ತು ಪರಿವಾರ ದೈವಗಳ ಗುಡಿಯಿದೆ. ನಾಗಬನದಲ್ಲಿ ರೆಂಜದ ಮರ, ಗರೋಡಿಯ ಎದುರಿಗೆ ಅಶ್ವಸ್ಥ ಮರದ ಕಟ್ಟೆ, ಅತ್ತಿಮರದ ಕಟ್ಟೆ, ಜಾರಿಗೆ ಮರಗಳಿವೆ.
ನಾರಾಯಣ ಪೂಜಾರಿ
ಶೇಖರ ಪೂಜಾರಿ
2007 ರಿಂದ ನಾರಾಯಣ ಪೂಜಾರಿ (72 ವರ್ಷ) ಇವರು ಇಲ್ಲಿಯ ಅರ್ಚಕರಾಗಿದ್ದಾರೆ. 1982 ರಿಂದ ಶೇಖರ ಪೂಜಾರಿ (57 ವರ್ಷ) ಹಾಗೂ ಸುಶಾಂತ ಪೂಜಾರಿ (30 ವರ್ಷ) ಇವರುಗಳು ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಮೊದಲು ಹಿರಿಯರಾದ ಮಂಜಯ್ಯ ಪೂಜಾರಿ, ಅಣ್ಣಯ್ಯ ಪೂಜಾರಿ, ತೌಡ ಪೂಜಾರಿ, ಸೋಮ ಪೂಜಾರಿ ಇವರುಗಳು ಈ ಸೇವೆ ಮಾಡಿದ್ದರು. ತೌಡ ಪೂಜಾರಿ ಹಾಗೂ ಸೋಮ ಪೂಜಾರಿಯವರ ಕಾಲದಲ್ಲಿ ಈ ಗರೋಡಿಯ ನಿರ್ಮಾಣವಾಯಿತಂತೆ.
2020 ರಿಂದ ಸತೀಷ್ ಪೂಜಾರಿ (38 ವರ್ಷ) ಯವರು ಇಲ್ಲಿ ಬೈದರ ದರ್ಶನದ ಸ್ಥಳ ಪಾತ್ರಿಯಾಗಿದ್ದಾರೆ. ಹಿಂದೆ ಗೋವಿಂದ ಪೂಜಾರಿ, ಅಂಗರ ಪೂಜಾರಿ, ಬಾಬು ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಕುಕ್ಕುಡೆ ಮನೆ ಜಗದೀಶ ಶೆಟ್ಟಿಯವರು ಈ ಗರೋಡಿಯ ಮೊಕ್ತೇಸರರು. ಇವರ ಮೊದಲು ಶ್ರೀಧರ ಶೆಟ್ಟಿ, ಶಿವರಾಮ ಹೆಗ್ಡೆ, ನಂದ್ಯಪ್ಪ ಶೆಟ್ಟಿ, ನಾರಾಯಣ ಶೆಟ್ಟಿ, ರಾಮಣ್ಣ ಶೆಟ್ಟಿ ಇವರುಗಳು ಇಲ್ಲಿ ಮೊಕ್ತೇಸರರಾಗಿದ್ದರು. ರಾಮಣ್ಣ ಶೆಟ್ಟಿಯವರ ಕಾಲದಲ್ಲಿ ಈ ಗರೋಡಿ ಸ್ಥಾಪನೆಯಾಯಿತಂತೆ.
ಗರೋಡಿಯ ಉಸ್ತುವಾರಿಗೆ ಆಡಳಿತ ಸಮಿತಿಯಿದ್ದು ಸುರೇಶ ಪೂಜಾರಿಯವರು ಅಧ್ಯಕ್ಷರಾಗಿಯೂ, ಉಮೇಶ ಪೂಜಾರಿಯವರು ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಗರೋಡಿಯಲ್ಲಿ ವಾರದ ಎಡರು ದಿನ ಪೂಜೆ, ಸಂಕ್ರಾಂತಿ ಪೂಜೆ, (ಪೆರ್ಡೂರು) ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಪಸರಣೆ ಪೂಜೆ, ಶಿವರಾಯನಿಗೆ ಹರಕೆಯ ಕುರಿ ಕೋಳಿ ಸೇವೆ, ಕದಿರು ಕಟ್ಟುವುದು, ಕೊಡಿ ತಿಂಗಳಲ್ಲಿ ಅಗೆಲು ಸೇವೆ, ಹಾಲು ಹಬ್ಬ, ತುಲಾಭಾರ ಸೇವೆ, ದರ್ಶನ , ಸುಗ್ಗಿ ತಿಂಗಳಲ್ಲಿ 10ನೇ ದಿನ ಅಗೆಲು, ದರ್ಶನ ಸೇವೆ, 11ನೇ ದಿನ ನೇಮ, ಜೋಗಿಪುರುಷ, ಮಾಯಂದಾಲ್ ಕೋಲ, ಶಿವರಾಯ ಕೋಲ ನಡೆಯುತ್ತದೆ.
ಮೂಡು ಕುಕ್ಕುಡೆ, ಪಡು ಕುಕ್ಕುಡೆ, ಕುಕ್ಕುಡೆ, ಹಾರಾಡಿ, ಊರುಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರಿವೆ. ಊರ ಜನರು ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ತುಲಾಭಾರ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಊರ ಜನರ ವರಡ, ವಂತಿಗೆಯಿAದ ಗರೋಡಿಯ ಕಾರ್ಯಕ್ರಮಗಳ ವೆಚ್ಚವನ್ನು ಭರಿಸಲಾಗುತ್ತಿದೆ.
ಗರೋಡಿಗೆ 26 ಸೆಂಟ್ಸ ಜಾಗವಿದೆ. 2000 ನೇ ಇಸವಿಯಲ್ಲಿ ಜೀರ್ಣೋದ್ದಾರ ಗೊಂಡಿದ್ದ ಗರೋಡಿಯು 2014ರಲ್ಲಿ ಜೀರ್ಣೋದ್ದಾರಗೊಂಡು ಶಿಲಾಮಯವಾಗಿ ಮೂಡಿ ಬಂದಿದೆ.
ಸಂತು ಪರವ ಬೈಲೂರು ಮತ್ತು ಸಂಘಡಿಗರು ಇಲ್ಲಿಯ ನೃತ್ಯವಿಶಾದರಾಗಿ, ಬಾಲಕೃಷ್ಣ ಮಡಿವಾಳ ಹಾರಾಡಿ ಮಡಿವಾಳರಾಗಿ, ರವಿ ಸೇರಿಗಾರ ಆರೂರು ವಾದ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.
ಗರೋಡಿಯ ವಿಳಾಸ:
ಶ್ರೀ ಬ್ರಹ್ಮಬೈದರ್ಕಳ – ಶಿವರಾಯ ಪರಿವಾರ ದೈವಗಳ ಗರೋಡಿ,
ಕುಕ್ಕುಡೆ – ಹಾರಾಡಿ
ಬ್ರಹ್ಮಾವರ ತಾಲೂಕು
ಉಡುಪಿ ಜಿಲ್ಲೆ – 576213.
ಕುಕ್ಕುಡೆ – ಹಾರಾಡಿ
ಬ್ರಹ್ಮಾವರ ತಾಲೂಕು
ಉಡುಪಿ ಜಿಲ್ಲೆ – 576213.
ಅರ್ಚಕರು:
ಶೇಖರ ಪೂಜಾರಿ – 9481847573
ಸುಶಾಂತ ಪೂಜಾರಿ – 9902560499
ಸುಶಾಂತ ಪೂಜಾರಿ – 9902560499
ಮೊಕ್ತೇಸರರು:
ಜಗದೀಶ ಶೆಟ್ಟಿ – 9902280701
ಆಡಳಿತ ಸಮಿತಿಯ ಅಧ್ಯಕ್ಷರು:
ಸುರೇಶ ಪೂಜಾರಿ – 9880605713.
ಮಾಹಿತಿ ನೀಡಿದವರು :
ಶೇಖರ ಪೂಜಾರಿ
ಮಾಹಿತಿ ಸಂಗ್ರಹಿಸಿದ ದಿನಾಂಕ :
04.01.2025