ಶ್ರೀ ಬ್ರಹ್ಮಬಂಟ ಶಿವರಾಯ ಗರೋಡಿ, ಕೊಳ್ಕೆಬೈಲು
ಉಡುಪಿಯಿಂದ ಬಾರ್ಕೂರು – ಯಡ್ತಾಡಿ – ಸೈಬ್ರಕಟ್ಟೆ – ಅಲ್ಲಿಂದ ಮುಂದೆ ಶಿರಿಯಾರಕ್ಕೆ ಹೋಗುವ ರಸ್ತೆಯಲ್ಲಿ ಸುಮಾರು 2ಕಿ.ಮೀ. ನಂತರ ಕುದುರುಕಟ್ಟೆ ಬಸ್ ನಿಲ್ದಾಣದ ಹತ್ತಿರ ಎಡಕ್ಕೆ ತಿರುಗಿ ಸುಮಾರು ಮುಕ್ಕಾಲು ಕಿ. ಮೀ. ಸಾಗಿದರೆ ಕೊಳ್ಕೆಬೈಲು ಗರೋಡಿ ಸಿಗುವುದು.
ಗರೋಡಿಯ ಮುಖ್ಯದ್ವಾರವು ಪೂರ್ವಾಭಿಮುಖವಾಗಿದ್ದು ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ. ಇದು ಆಯದ ಗರೋಡಿಯಾಗಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ಅಶ್ವಾರೂಢ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ಥಿನಲ್ಲಿ ಗಾಳಿದೇವರ ಆರಾಧನೆಯಿದೆ.
ಗುಂಡದ ಎಡಭಾಗದಲ್ಲಿ ದೇಯಿಬೈದೆತಿ, ಕೋಟಿಚೆನ್ನಯರ ಇಬ್ಬರು ಮಕ್ಕಳ ಹಾಗೂ ನಂದಿಯ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ಕುಜುಂಬ ಕಾಂಜವ ಮತ್ತು ಒಂದು ಮಗುವಿನ ಮರದ ಮೂರ್ತಿ, ಮೈಸಂದಾಯ ದೈವದ ಪಂಚಲೋಹದ ಮುಖ ಮೂರ್ತಿ ಹಾಗೂ ಬಲ್ಲಾಳರ ಮಂಚವಿದೆ.
ಬ್ರಹ್ಮಗುಡಿಯ ಹೊರಗೆ ಎಡಭಾಗದಲ್ಲಿ ಮರದ ಗುಡಿಯಲ್ಲಿ ಪಂಜುರ್ಲಿಯ ಮರದ ಮೂರ್ತಿ, ದೂಮಾವತಿಯ ಮಣೆಮಂಚ, ಮೈಂದಾಳ್ತಿ ಮತ್ತು ಮಗುವಿನ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಎದುರು ಜೋಗಿಪುರುಷ ಹಾಗೂ ಚೌಂಡೇಶ್ವರ ದೈವಗಳ ಮರದ ಮೂರ್ತಿಗಳಿವೆ.
ಗರೋಡಿಯ ಬಾಗಿಲ ಹತ್ತಿರ ಜಗಲಿಯಲ್ಲಿ ಬಾಗಿಲ ಬೊಬ್ಬರ್ಯನ ಮರದ ಮೂರ್ತಿ ಇದೆ.
ಗರೋಡಿಯ ಎದುರಿನ ಗುಡಿಯಲ್ಲಿ ಶಿವರಾಯ ಹಾಗೂ ಬಂಟರ ಮರದ ಮೂರ್ತಿಗಳಿವೆ. ಗುಡಿಯ ಹೊರಗೆ ಹೈಗುಳಿ ದೈವದ ಮರದ ಗದ್ದಿಗೆಯಿದೆ.
ಗರೋಡಿಯ ಆವರಣದಲ್ಲಿ ಕ್ಷೇತ್ರಪಾಲ, ತುಳಸೀಕಟ್ಟೆ, ಕೃತಿಮಗಣ ಬೋಗಲ್ಲು(ಬಲಿಕಲ್ಲು)ಗಳಿವೆ.
ಗಿರಿಯ ಪೂಜಾರಿ
ಗರೋಡಿಮನೆ ಗಿರಿಯ ಪೂಜಾರಿ(83 ವರ್ಷ) ಇವರು ಈ ಗರೋಡಿಯ ಅರ್ಚಕರಾಗಿದ್ದಾರೆ. ರಾಘವೇಂದ್ರ ಪೂಜಾರಿ ಮತ್ತು ಕುಶಲ ಪೂಜಾರಿಯವರು ಇಲ್ಲಿಯ ಸಹ ಅರ್ಚಕರು. ಗಿರಿಯ ಪೂಜಾರಿಯವರ ಮೊದಲು ಪಂಜು ಪೂಜಾರಿ, ಅಣ್ಣಪ್ಪ ಪೂಜಾರಿ, ಕರಿಯ ಪೂಜಾರಿ ಮೊದಲಾದ ಹಿರಿಯರು ಇಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು.
ಸೋಮ ಪೂಜಾರಿ ಮತ್ತು ಸುಕ್ರ ಪೂಜಾರಿಯವರು ಇಲ್ಲಿ ಬೈದರ ದರ್ಶನದ ಸ್ಥಳ ಪಾತ್ರಿಗಳು. ಇವರ ಮೊದಲು ಬೋಳು ಪೂಜಾರಿ, ಕೊರಗ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಶಿರಿಯಾರ ರಾಮಣ್ಣ ಹೆಗ್ಡೆಯವರು ಈ ಗರೋಡಿಯ ಮೊಕ್ತೇಸರರಾಗಿದ್ದವರು. ನಡುಮನೆ ರವೀಂದ್ರ ಶೆಟ್ಟಿಯವರು, ಹೊಸಮನೆ ಬೀನಾ ಆರ್.ಶೆಟ್ಟಿ, ಹೊಸಮನೆ ದಿವಾಕರ ಶೆಟ್ಟಿ, ಮೂಡುಹದ್ದು ಮನೆ ಕಿಶನ್ ಹೆಗ್ಡೆ ಇವರುಗಳು ರಾಮಣ್ಣ ಹೆಗ್ಡೆಯವರ ವಂಶಸ್ತರು (ಮತ್ತು ಉತ್ತರಾಧಿಕಾರಿಗಳು).
ರವೀಂದ್ರನಾಥ ಶೆಟ್ಟಿ
ಗರೋಡಿಯ ಉಸ್ತುವಾರಿಗೆ ಆಡಳಿತ ಸಮಿತಿಯಿದ್ದು ರವೀಂದ್ರನಾಥ ಶೆಟ್ಟಿ ಅಧ್ಯಕ್ಷರಾಗಿಯೂ, ಶೇಖರ ಸುವರ್ಣ ಇವರು ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಗರೋಡಿಯಲ್ಲಿ ನಿತ್ಯ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ ಕದಿರುಕಟ್ಟುವುದು, ಶಿವರಾಯನಿಗೆ ಕುರಿ ಸೇವೆ, ಡಿಸೆಂಬರ್ ತಿಂಗಳ ಮೊದಲವಾರ ಅಗೆಲು ಸೇವೆ, ಮರುದಿನ ಹಾಲುಹಬ್ಬ, ತುಲಾಭಾರ ಸೇವೆ ನಡೆಯುತ್ತದೆ. ಗರೋಡಿಯ ಯಕ್ಷಗಾನ ಕಲಾಸಂಘ ದಿಂದ ಯಕ್ಷಗಾನ ನಡೆಯುತ್ತದೆ. ನಾರಾಯಣಗುರು ಜಯಂತಿಯನ್ನು ಗರೋಡಿಯಲ್ಲಿ ವಿಶೇಷವಾಗಿ ಆಚರಿಸುತ್ತಾರೆ.
ಶಿರಿಯಾರ ಗ್ರಾಮದ ಬಡಾಕೆರೆ, ಕಲ್ಬೆಟ್ಟು, ಕಲ್ಲಾಡಿ, ಪಡುಮುಂಡು, ಬಂಟಾಡಿ, ಕೊಡ್ಲಬೈಲು ಪ್ರದೇಶದ ಜನರು ಈ ಗರೋಡಿಯಲ್ಲಿ ತುಲಾಭಾರ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವಡೆಗಳನ್ನು ಸಲ್ಲಿಸುತ್ತಾರೆ. ಊರಜನರ ವರಡ ವಂತಿಗೆ ಕಾಣಿಕೆ ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತಿದೆ.
27-04-1990, 10-07-2003 ಹಾಗೂ 2020ನೇ ಇಸವಿಯಲ್ಲಿ ಗರೋಡಿಯ ಜೀಣೋದ್ಧಾರವಾಗಿದೆ.
ಗರೋಡಿಯಲ್ಲಿರುವ ಶ್ರೀ ಬ್ರಹ್ಮಬಂಟ ಶಿವರಾಯ ಯಕ್ಷಗಾನ ಕಲಾ ಸಂಘ ಕಳೆದ 35 ವರ್ಷಗಳಿಂದ ಇಲ್ಲಿ ಹಾಲುಹಬ್ಬದಂದು ಯಕ್ಷಗಾನ ಬಯಲಾಟ ನಡೆಸುತ್ತಾರೆ.
ಗರೋಡಿಯ ವಿಳಾಸ:
ಶ್ರೀ ಬ್ರಹ್ಮಬಂಟ ಶಿವರಾಯ ಗರೋಡಿ, ಕೊಳ್ಕೆಬೈಲು,
ಶಿರಿಯಾರ ಗ್ರಾಮ, ಕೊಳ್ಕೆಬೈಲು ಅಂಚೆ,
ಬ್ರಹ್ಮಾವರ ತಾಲೂಕು,
ಉಡುಪಿ 576210.
ಶಿರಿಯಾರ ಗ್ರಾಮ, ಕೊಳ್ಕೆಬೈಲು ಅಂಚೆ,
ಬ್ರಹ್ಮಾವರ ತಾಲೂಕು,
ಉಡುಪಿ 576210.
ಅರ್ಚಕರು:
ಗಿರಿಯ ಪೂಜಾರಿ – 9008389120
ದರ್ಶನ ಪಾತ್ರಿಗಳು:
ಸೋಮ ಪೂಜಾರಿ – 99001001341,
ಸುಕ್ರ ಪೂಜಾರಿ – 9982915394.
ಸುಕ್ರ ಪೂಜಾರಿ – 9982915394.
ಆಡಳಿತ ಸಮಿತಿ:
ಅಧ್ಯಕ್ಷರು – ರವೀಂದ್ರನಾಥ ಶೆಟ್ಟಿ – 9741968860,
ಕಾರ್ಯದರ್ಶಿ: ಶೇಖರ ಸುವರ್ಣ- 7019674359
ಕಾರ್ಯದರ್ಶಿ: ಶೇಖರ ಸುವರ್ಣ- 7019674359
ಮಾಹಿತಿ ನೀಡಿದವರು :
ರವೀಂದ್ರನಾಥ ಶೆಟ್ಟಿ,
ಗಿರಿಯ ಪೂಜಾರಿ
ಗಿರಿಯ ಪೂಜಾರಿ
ಮಾಹಿತಿ ಸಂಗ್ರಹಿಸಿದ ದಿನಾಂಕ :
02.01.2025