ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಮಣಿಕಲ್ಲು (ಬಿಲ್ಲಾಡಿ)
ಉಡುಪಿಯಿಂದ ಬಾರ್ಕೂರು – ಸೈಬ್ರಕಟ್ಟೆಯಲ್ಲಿ ಬಲಕ್ಕೆ ತಿರುಗಿ ಶೀರೂರು ಮೂರುಕೈ ಎಂಬಲ್ಲಿ ಎಡಕ್ಕೆ ತಿರುಗಿ ಸುಮಾರು 1ಕಿ.ಮೀ. ಒಳಗೆ ಸಾಗಿದರೆ ಶ್ರೀ ಅರ್ಭಕ ಧಾರಕೇಶ್ವರಿ ದೇವಸ್ಥಾನದ ಹತ್ತಿರದಲ್ಲಿದೆ ಈ ಗರೋಡಿ.
ಇದೊಂದು ಆಯದ ಗರೋಡಿಯಾಗಿದ್ದು, ಪೂರ್ವಾಭಿಮುಖವಾದ ಒಂದು ದ್ವಾರವನ್ನು ಹೊಂದಿದೆ. ಇಲ್ಲಿ ಷಢಾಧಾರ ಪ್ರತಿಷ್ಠೆಯಾಗಿಲ್ಲ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ ಕೋಟಿಚೆನ್ನಯರು ಬಿಲ್ಲಾಡಿಯ ಚಿತ್ತಾರಿಗೆ ಬಂದಾಗ ಅಲ್ಲಿ ಮೊದಲೇ ನೆಲೆನಿಂತಿದ್ದ ಹಲವಾರು ಸ್ಥಳೀಯ ಶಕ್ತಿ, ದೈವ ದೇವರುಗಳಿರುವುದರಿಂದ ಮುಂದೆ ಸಾಗಿ ಮಣಿಕಲ್ಲು ಅರ್ಬಕ ಧಾರಕೇಶ್ವರಿಯ ಆಶ್ರಯ ಪಡೆದು ಮಣಿಕಲ್ಲಿನ ಈ ಪ್ರದೇಶದಲ್ಲಿ ನೆಲೆ ನಿಂತರಂತೆ. ಆ ಸಮಯದಲ್ಲಿ ಗರೋಡಿ ಮನೆಯ ಹಿರಿಯ ಶೀನ ಪೂಜಾರಿಯವರ ಮುತ್ತಜ್ಜನ ಕನಸಿನಲ್ಲಿ ಈರ್ವರು ತರುಣರು ಬಂದು ಮಣಿಕಲ್ಲು ಪ್ರದೇಶದಲ್ಲಿ ನಿಂತಿದ್ದ ಅನುಭವವಾಗಿ ಮರುದಿನ ಆ ಸ್ಥಳದಲ್ಲಿ ಪರೀಕ್ಷಿಸಿದಾಗ ಕೋಟಿಚೆನ್ನಯರ ಪಾದದ ಗುರುತು ಮತ್ತು ಸುರಿಯ ಊರಿದ ಗುರುತು ತೋರಿ ಬಂತು. ಆ ಸಮಾಚಾರವನ್ನು ಸ್ಥಳದ ಮಾಲಿಕರಾಗಿದ್ದ ಜೈನ ಬಲ್ಲಾಳ ಸೆಟ್ಟಿಯ ಬಳಿ ತಿಳಿಸಿದಾಗ ಅವರು ಈ ವಿಚಾರ ಸತ್ಯವಾದರೆ ತನಗೆ ಕೂಡಾ ಕನಸಿನಲ್ಲಿ ಬೈದರು ತೋರಿ ಬರಲಿ ಎಂದರಂತೆ. ಆ ಪ್ರಕಾರ ಕೋಟಿಚೆನ್ನಯರು ಬಲ್ಲಾಳ ಸೆಟ್ಟಿಯ ಕನಸಿನಲ್ಲಿ ತೋರಿದಾಗ ಅವರಿಗೆ ವಿಶ್ವಾಸ ಮೂಡಿ ಗರಡಿ ಕಟ್ಟಲು ಒಪ್ಪಿಕೊಂಡರು. ನಂತರ ಸೀನ ಪೂಜಾರಿಯವರ ಮನೆತನದ ಹಿರಿಯರಾದ ಊರವರ ಸಹಕಾರದಿಂದ ಗರೋಡಿ ಕಟ್ಟಿದರಂತೆ. ಪೂಜೆ ಯಾವ ರೀತಿ ಆಚರಿಸುವುದೆಂದು ಯೋಚಿಸುತ್ತಿದ್ದಾಗ ರಾತ್ರಿ ಪೂಜಾರಿಗೆ ಕನಸಿನಲ್ಲಿ ಕೋಟಿಚೆನ್ನಯರು ಬಂದು ಒಂದು ಶ್ರೀ ಗಂಧದ ತುಂಡು ಐದು ಅಶ್ವತ್ಥದ ಎಲೆ, ಅಡಿಕೆ ಇವೆಲ್ಲವನ್ನು ಸ್ಥಳೀಯ ಹಲಸಿನ ಮರದಲ್ಲಿ ಕಟ್ಟಿ ಅದೇ ಹಲಸಿನ ಮರದಿಂದ ತಮ್ಮ ಪಾಪೆ ತಯಾರಿಸ ಬೇಕೆಂದು ಅಪ್ಪಣೆಯಾಯಿತು.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ ಕೋಟಿಚೆನ್ನಯರು ಬಿಲ್ಲಾಡಿಯ ಚಿತ್ತಾರಿಗೆ ಬಂದಾಗ ಅಲ್ಲಿ ಮೊದಲೇ ನೆಲೆನಿಂತಿದ್ದ ಹಲವಾರು ಸ್ಥಳೀಯ ಶಕ್ತಿ, ದೈವ ದೇವರುಗಳಿರುವುದರಿಂದ ಮುಂದೆ ಸಾಗಿ ಮಣಿಕಲ್ಲು ಅರ್ಬಕ ಧಾರಕೇಶ್ವರಿಯ ಆಶ್ರಯ ಪಡೆದು ಮಣಿಕಲ್ಲಿನ ಈ ಪ್ರದೇಶದಲ್ಲಿ ನೆಲೆ ನಿಂತರಂತೆ. ಆ ಸಮಯದಲ್ಲಿ ಗರೋಡಿ ಮನೆಯ ಹಿರಿಯ ಶೀನ ಪೂಜಾರಿಯವರ ಮುತ್ತಜ್ಜನ ಕನಸಿನಲ್ಲಿ ಈರ್ವರು ತರುಣರು ಬಂದು ಮಣಿಕಲ್ಲು ಪ್ರದೇಶದಲ್ಲಿ ನಿಂತಿದ್ದ ಅನುಭವವಾಗಿ ಮರುದಿನ ಆ ಸ್ಥಳದಲ್ಲಿ ಪರೀಕ್ಷಿಸಿದಾಗ ಕೋಟಿಚೆನ್ನಯರ ಪಾದದ ಗುರುತು ಮತ್ತು ಸುರಿಯ ಊರಿದ ಗುರುತು ತೋರಿ ಬಂತು. ಆ ಸಮಾಚಾರವನ್ನು ಸ್ಥಳದ ಮಾಲಿಕರಾಗಿದ್ದ ಜೈನ ಬಲ್ಲಾಳ ಸೆಟ್ಟಿಯ ಬಳಿ ತಿಳಿಸಿದಾಗ ಅವರು ಈ ವಿಚಾರ ಸತ್ಯವಾದರೆ ತನಗೆ ಕೂಡಾ ಕನಸಿನಲ್ಲಿ ಬೈದರು ತೋರಿ ಬರಲಿ ಎಂದರಂತೆ. ಆ ಪ್ರಕಾರ ಕೋಟಿಚೆನ್ನಯರು ಬಲ್ಲಾಳ ಸೆಟ್ಟಿಯ ಕನಸಿನಲ್ಲಿ ತೋರಿದಾಗ ಅವರಿಗೆ ವಿಶ್ವಾಸ ಮೂಡಿ ಗರಡಿ ಕಟ್ಟಲು ಒಪ್ಪಿಕೊಂಡರು. ನಂತರ ಸೀನ ಪೂಜಾರಿಯವರ ಮನೆತನದ ಹಿರಿಯರಾದ ಊರವರ ಸಹಕಾರದಿಂದ ಗರೋಡಿ ಕಟ್ಟಿದರಂತೆ. ಪೂಜೆ ಯಾವ ರೀತಿ ಆಚರಿಸುವುದೆಂದು ಯೋಚಿಸುತ್ತಿದ್ದಾಗ ರಾತ್ರಿ ಪೂಜಾರಿಗೆ ಕನಸಿನಲ್ಲಿ ಕೋಟಿಚೆನ್ನಯರು ಬಂದು ಒಂದು ಶ್ರೀ ಗಂಧದ ತುಂಡು ಐದು ಅಶ್ವತ್ಥದ ಎಲೆ, ಅಡಿಕೆ ಇವೆಲ್ಲವನ್ನು ಸ್ಥಳೀಯ ಹಲಸಿನ ಮರದಲ್ಲಿ ಕಟ್ಟಿ ಅದೇ ಹಲಸಿನ ಮರದಿಂದ ತಮ್ಮ ಪಾಪೆ ತಯಾರಿಸ ಬೇಕೆಂದು ಅಪ್ಪಣೆಯಾಯಿತು.
ಗರೋಡಿಯ ಬ್ರಹ್ಮಗುಡಿಯ ಒಳಗೆ ಮೂರು ಅಂತಸ್ತಿನ ಗುಂಡದಲ್ಲಿ ನಾಗ ಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಮದ್ಯದ ಅಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
ಗುಂಡದ ಎಡಭಾಗದಲ್ಲಿ ದೇಯಿಬೈದೆತಿ, ಕೋಟಿಚೆನ್ನಯರ ಇಬ್ಬರು ಮಕ್ಕಳ ಹಾಗೂ ನಂದಿಯ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ಕುಜುಂಬ ಕಾಂಜವ ಮತ್ತು ಮಗುವಿನ ಮರದ ಮೂರ್ತಿ ಹಾಗೂ ಬಲ್ಲಾಳರ ಮಣೆ ಮಂಚವಿದೆ.
ಬ್ರಹ್ಮಗುಡಿಯ ಹೊರಗೆ ಹುಲಿದೇವರು, ಮರದ ಗದ್ದಿಗೆಯಲ್ಲಿ ಪಂಜುರ್ಲಿಯ ಮರದ ಮೂರ್ತಿಗಳಿವೆ.
ಪಕ್ಕದಲ್ಲಿ ಧೂಮಾವತಿ ಹಾಗು ಜೋಗಿಪುರುಷರ ಮರದ ಮೂರ್ತಿಗಳಿವೆ.
ಗರೋಡಿಯ ಹಿಂಬದಿಯಲ್ಲಿರುವ ಗುಡಿಯಲ್ಲಿ ಮೈಂದಾಳತಿ ಮತ್ತು ಮಗುವಿನ ಮರದ ಮೂರ್ತಿಗಳಿವೆ.
ಗರೋಡಿಯ ಎದುರಿನಲ್ಲಿರುವ ಗುಡಿಯಲ್ಲಿ ಶಿವರಾಯನ ಮರದ ಮೂರ್ತಿಯಿದೆ.
ಗರೋಡಿಯ ಬಾಗಿಲ ಹತ್ತಿರ ಜಗುಲಿಯಲ್ಲಿ ಬಾಗಿಲು ಬೊಬ್ಬರ್ಯನ ಮರದ ಮೂರ್ತಿಯಿದೆ.
ಗರೋಡಿಯ ಆವರದಲ್ಲಿ ತುಳಸೀಕಟ್ಟೆ, ಬಲಿಕಲ್ಲು ಇದೆ.
ಕೊಲ್ಲ ಪೂಜಾರಿ
ಗರೋಡಿ ಮನೆ ಕೊಲ್ಲ ಪೂಜಾರಿ (55 ವರ್ಷ ಪ್ರಾಯ) ಇವರು ಗರೋಡಿಯ ಅರ್ಚಕರಾಗಿದ್ದಾರೆ. ಇವರಿಗೆ ಮೊದಲು ಶೀನ ಪೂಜಾರಿ, ಬಸವ ಪೂಜಾರಿ, ವೆಂಕಟ ಪೂಜಾರಿಯವರು ಗರೋಡಿಯ ಅರ್ಚಕರಾಗಿ ಸೇವೆ ಮಾಡಿದ್ದರು. ಈ ಗರೋಡಿಯಲ್ಲಿ ದರ್ಶನಕ್ಕೆ ಸ್ಥಳ ಪಾತ್ರಿಗಳಿಲ್ಲ. ಹಿಂದೆ ಕೋಟಿ ಪೂಜಾರಿ, ಕೊಲ್ಲ ಪೂಜಾರಿಯವರು ಸ್ಥಳ ಪಾತ್ರಿಗಳಾಗಿದ್ದರು.
ಬಿಲ್ಲಾಡಿ ಮನೆ ಶಂಕರ ಶೆಟ್ಟಿ
ಬಿಲ್ಲಾಡಿ ಮನೆ ಶಂಕರ ಶೆಟ್ಟಿಯವರು ಇಲ್ಲಿಯ ಮೊಕ್ತೇಸರರು. ರಾಧಾಕೃಷ್ಣ ಶೆಟ್ಟಿಯವರು ಸಹ ಮೊಕ್ತೇಸರರಾಗಿದ್ದಾರೆ. ಹಿಂದೆ ಅಂತಣ್ಣ ಶೆಟ್ಟಿ ಹಾಗೂ ಬಿಲ್ಲಾಡಿ ಜಯರಾಮ ಶೆಟ್ಟಿ ಇವರು ಇಲ್ಲಿಯ ಸಹ ಮೊಕ್ತೇಸರರಾಗಿದ್ದರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರುಕಟ್ಟುವುದು, ಡಿಸೆಂಬರ್ ತಿಂಗಳಲ್ಲಿ ಅಗೆಲು ಸೇವೆ, ಮಾರ್ಚ ತಿಂಗಳ 26ನೇ ತಾರೀಖಿನಂದು ಹಾಲುಹಬ್ಬ, ದರ್ಶನ ಸೇವೆ ನಡೆಯುತ್ತದೆ.
ಬಿಲ್ಲಾಡಿ, ಶೀರೂರು, ನೈಲಾಡಿ, ಹೆಗ್ಗುಂಜೆ, ವಂಡಾರ್, ಆವರ್ಸೆ ಊರ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದ್ದಾರೆ. ಈ ಗರೋಡಿಯಲ್ಲಿ ಹೆರಿಗೆಯಾದ ನಂತರ ತಿಂಗಳು ಮಾಡುವ ಕ್ರಮ ಇದೆ. ಊರವರ ವಂತಿಗೆ, ಕಾಣಿಕೆಗಳಿಂದ ಗರೋಡಿಯ ಖರ್ಚು ವೆಚ್ಚಗಳನ್ನು ಭರಿಸಲಾಗುತ್ತದೆ.
ಗರೋಡಿಯು 2001 ರಲ್ಲಿ ಜೀಣೋದ್ಧಾರಗೊಂಡಿದೆ.
ಬಾಲಯ್ಯ ಮಡಿವಾಳ ಮಣಿಕಲ್ಲು ಇವರು ಮಡಿವಾಳರಾಗಿ, ರಾಜು ದೇವಾಡಿಗ ಮಣಿಕಲ್ಲು ಇವರು ವಾದ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.
ಗರೋಡಿಯ ವಿಳಾಸ:
ಶ್ರೀ ಬ್ರಹ್ಮಬೈದರ್ಕಳ ಗರೋಡಿ ಮಣಿಕಲ್ಲು,
ಬಿಲ್ಲಾಡಿ ಗ್ರಾಮ, ಜಾನುವಾರುಕಟ್ಟೆ ಅಂಚೆ,
ಬ್ರಹ್ಮಾವರ ತಾಲೂಕು,
ಉಡುಪಿ 576223.
ಬ್ರಹ್ಮಾವರ ತಾಲೂಕು,
ಉಡುಪಿ 576223.
ಅರ್ಚಕರು:
ಕೊಲ್ಲ ಪೂಜಾರಿ – 8105379877
ಮೊಕ್ತೇಸರರು:
ಬಿಲ್ಲಾಡಿ ಮನೆ ಶಂಕರ ಶೆಟ್ಟಿ – 9632820976
ಮಾಹಿತಿ ನೀಡಿದವರು :
ಬಿಲ್ಲಾಡಿ ಮನೆ ಶಂಕರ ಶೆಟ್ಟಿ
ಮಾಹಿತಿ ಸಂಗ್ರಹಿಸಿದ ದಿನಾಂಕ :
02.01.2025