ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಹಿಲಿಯಾಣ
ಉಡುಪಿಯಿಂದ ಬಾರ್ಕೂರು – ಸೈಬ್ರಕಟೆ – ಶೀರೂರು ಮೂರುಕೈ – ವಂಡಾರು – ಮಾವಿನಕಟ್ಟೆ – ಆವರ್ಸೆಯಿಂದ ಮುಖ್ಯರಸ್ತೆಯಲ್ಲಿ ಹಿಲಿಯಾಣ ತಲುಪಿ ಮುಖ್ಯ ರಸ್ತೆಯಿಂದ ಎಡಕ್ಕೆ ತಿರುಗಿ ಸುಮಾರು 1.2ಕಿ.ಮೀ. ಒಳಗೆ ಹೋದರೆ ಹಿಲಿಯಾಣ ಗರೋಡಿ ಸಿಗುವುದು.
ಇದು ಆಯದ ಗರೋಡಿಯಾಗಿದ್ದು, ಪೂರ್ವಾಭಿಮುಖವಾದ ಮುಖ್ಯದ್ವಾರವಿದೆ. ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದ್ದು, ಷಢಾಧಾರ ಪ್ರತಿಷ್ಠೆಯಲ್ಲಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಮೂರಂತಸ್ತಿನ ಗುಂಡದ ಕೆಳಗಿನ ಅಂತಸ್ತಿನಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಮದ್ಯದ ಅಂತಸ್ತಿನಲ್ಲಿ ವಿಷ್ಣುವಿಗೂ ಮೇಲಂತಸ್ತಿನಲ್ಲಿ ಮಹೇಶ್ವರರಿಗೂ ಪೂಜೆಯಿದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರು, ಕುಜುಂಬ ಕಾಂಜವ ಹಾಗೂ ಮೂವರು ಮಕ್ಕಳ ಮರದ ಮೂರ್ತಿಗಳಿವೆ. ಪಕ್ಕದಲ್ಲಿ ನಿಗಳದ ಮೂರ್ತಿ ಇದೆ.
ಗುಂಡದ ಬಲಭಾಗದಲ್ಲಿ ಬಲ್ಲಾಳರ, ಬ್ರಾಂಚ ಹಾಗೂ ದೇಯಿಬೈದೆತಿಯ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಹೊರಗೆ ಮೈಂದಾಳ್ತಿ ಮತ್ತು ಮಗು, ಜುಮಾದಿ, ಧೂಮಾವತಿ, ಜೋಗಿಪುರುಷ, ಹಾಗೂ ಚಿಕ್ಕುವಿನ ಮರದ ಮೂರ್ತಿ ಇದೆ.
ಗರೋಡಿಯ ಬಾಗಿಲ ಪಕ್ಕದಲ್ಲಿ ಜಗುಲಿಯಲ್ಲಿ ಬಾಗಿಲ ಬೊಬ್ಬರ್ಯಮರದ ಮೂರ್ತಿಯಿದೆ.
ಗರೋಡಿಯ ಎದುರಿನ ಗುಡಿಯಲ್ಲಿ ಶಿವರಾಯನ ಮರದ ಮೂರ್ತಿಯಿದೆ.
ಇನ್ನೊಂದು ಗುಡಿ “ಭೂತ ಗರಡಿ” ಯಲ್ಲಿ ಪಂಜುರ್ಲಿ, ಹೈಗುಳಿ, ನಂದಿಕೇಶ್ವರ, ಹುಲಿರಾಯನ ಮರದ ಮೂರ್ತಿಗಳಿವೆ.
ಗರೋಡಿಯ ಆವರಣದೊಳಗೆ ತುಳಸೀಕಟ್ಟೆ, ಬಲಿಕಲ್ಲುಗಳಿವೆ. ಗರೋಡಿ ಪರಿಸರದಲ್ಲಿರುವ ನಾಗಬನದಲ್ಲಿ ನಾಗ ಮತ್ತು ಬೊಬ್ಬರ್ಯನ ಸಾನಿಧ್ಯಗಳಿವೆ.
ಗರೋಡಿಯ ಪ್ರಾಂಗಣದಲ್ಲಿ ವೇದಿಕೆ ಹಾಗು ಭೋಜನ ಶಾಲೆಗಳಿದ್ದು, ಶುಭ ಕಾರ್ಯಕ್ರಮಗಳು ನಡೆಯುತ್ತವೆ.
ಗರೋಡಿಯಿಂದ ಕಾಣುತ್ತಿರುವ ಗರೋಡಿಮನೆಯ ನೋಟ.
ಕರುಣಾಕರ ಪೂಜಾರಿ
1986ರಿಂದ ಕರುಣಾಕರ ಪೂಜಾರಿಯವರು (77 ವರ್ಷ) ಗರೋಡಿಯ ಅರ್ಚಕರಾಗಿರುವರು. ಇವರ ಮೊದಲು ಶೀನ ಪೂಜಾರಿ, ಬಡಿಯ ಪೂಜಾರಿಯವರು ಈ ಗರೋಡಿಯ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು.
ಕೇಶವ ಪೂಜಾರಿ (40 ವರ್ಷ) ಹಾಗೂ ಶಂಕರ ಪೂಜಾರಿ (50 ವರ್ಷ) ಯವರು ಇಲ್ಲಿಯ ದರ್ಶನದ ಸ್ಥಳ ಪಾತ್ರಿಗಳು. ಇವರ ಮೊದಲು ಶೇಷ ಪೂಜಾರಿ ಹಾಗೂ ನಂದಿ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಹಿಲಿಯಾಣ ದೊಡ್ಮನೆ ತಾರಾನಾಥ ಶೆಟ್ಟಿಯವರು ಗರೋಡಿಯ ಮುಕ್ಕಾಲಿ, ವೈ. ಕರುಣಾಕರ ಶೆಟ್ಟಿ ಯರುಕೋಣ್ ಇವರು ಗರೋಡಿಯ ಅಧ್ಯಕ್ಷರಾಗಿದ್ದಾರೆ.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಹೂವಿನ ಪೂಜೆ, ಕದಿರುಕಟ್ಟುವುದು, ಡಿಸೆಂಬರ್ 6ನೇ ತಾರೀಖಿನಂದು ಹಾಲುಹಬ್ಬ, ದೀಪೋತ್ಸವ, ಅಗೆಲು ಸೇವೆ, ತುಲಾಭಾರಸೇವೆ, ತುಳಸೀಪೂಜೆ ನಡೆಯುತ್ತದೆ. ಮಾರ್ಚ ತಿಂಗಳಲ್ಲಿ ಅಗೆಲು ಸೇವೆ, ನೇಮೋತ್ಸವ, ಶಿವರಾಯ ಕೋಲ, ಗೆಂಡ ಸೇವೆ, ಮಾರಿಹಬ್ಬ ನಡೆಯುತ್ತದೆ.
ಹಿಲಿಯಾಣ, ಹಳ್ಳಿ, ಹೆಸ್ಕುಂದ, ಆವರ್ಸೆಯ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದವರಾಗಿದ್ದು, ಗರೋಡಿಯಲ್ಲಿ ತುಲಾಭಾರ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಊರ ಜನರ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಖರ್ಚುವೆಚ್ಚಗಳನ್ನು ಭರಿಸಲಾಗುತ್ತದೆ.
ಗರೋಡಿಗೆ ಸುಮಾರು 1ಎಕರೆ 25ಸೆಂಟ್ಸ ಜಾಗವಿದ್ದು ಗರೋಡಿಯ ಹೆಸರಿನಲ್ಲಿದೆ.
1961 ರಲ್ಲಿ ಮರ ಬಿದ್ದು ಶಿಥಿಲಗೊಂಡ ಗರೋಡಿಯನ್ನು 1986ರಲ್ಲಿ ಬಾಲಾಲಯಕ್ಕೆ ಸ್ಥಳಾಂತರಗೊಳಿಸಲಾಯಿತು. 2013 ರಲ್ಲಿ ಬಾಲಾಲಯದಲ್ಲಿದ್ದ ಗರೋಡಿಯನ್ನು ಪುನ: ತಂದು ಸ್ಥಾಪಿಸಲಾಯಿತು.
2003 ರಲ್ಲಿ ಬೈದಶ್ರೀಯಿಂದ ಪ್ರಕಾಶಿತ ಪುಸ್ತಕ "ಬೈದ ದರ್ಶನ" ಪುಸ್ತಕದಲ್ಲಿ ಬಾಲಾಲಯದಲ್ಲಿದ್ದ ಹಿಲಿಯಾಣ ಗರೋಡಿಯ ಛಾಯಾಚಿತ್ರ
ನರಸಿಂಹ ಪರವ ಚೇರ್ಕಾಡಿ ಇವರು ಬೈದರ ನೇಮದ ನೃತ್ಯವಿಶಾರದರಾಗಿ, ಗಿರಿಜ ಮಡಿವಾಳ್ತಿಯ ಮಕ್ಕಳು ಮಡಿವಾಳರಾಗಿ, ರಾಜು ಮತ್ತು ಬಳಗದವರು ವಾಧ್ಯದವರಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.
ಗರೋಡಿಯ ವಿಳಾಸ:
ಶ್ರೀ ಬ್ರಹ್ಮಬೈದರ್ಕಳ ಗರೋಡಿ ಹಿಲಿಯಾಣ,
ಹಿಲಿಯಾಣ ಅಂಚೆ,
ಬ್ರಹ್ಮಾವರ ತಾಲೂಕು,
ಉಡುಪಿ – 576212.
ಹಿಲಿಯಾಣ ಅಂಚೆ,
ಬ್ರಹ್ಮಾವರ ತಾಲೂಕು,
ಉಡುಪಿ – 576212.
ಅರ್ಚಕರು:
ಕರುಣಾಕರ ಪೂಜಾರಿ – 9731106663
ಮಾಹಿತಿ ನೀಡಿದವರು :
ಕರುಣಾಕರ ಪೂಜಾರಿ
ಮಾಹಿತಿ ಸಂಗ್ರಹಿಸಿದ ದಿನಾಂಕ :
02.01.2025