Baidashree

Shree Brahma Baidarkala Garodi, Halli, Vaddambettu

ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಹಳ್ಳಿ, ವಡ್ಡಂಬೆಟ್ಟು

ಉಡುಪಿಯಿಂದ ಕೊಕ್ಕರ್ಣೆ ತಲುಪಿ, ಕೊಕ್ಕರ್ಣಿ ಬಸ್ ನಿಲ್ದಾಣದಿಂದ ಸುಮಾರು 2.5 ಕಿ.ಮೀ. ದೂರದಲ್ಲಿ ಎಡಕ್ಕೆ ತಿರುಗಿ ಸುಮಾರು ಅರ್ದ ಕಿ.ಮೀ. ದೂರದಲ್ಲಿದೆ ಈ ಗರೋಡಿ.
ಗರೋಡಿಗೆ ಉತ್ತರಾಭಿಮುಖವಾದ ಒಂದು ದ್ವಾರವಿದೆ. ಬ್ರಹ್ಮಗುಡಿಯು ಪೂರ್ವಾಭಿಮುಖವಾಗಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ಬೇರೆ ಗರೋಡಿಗಳಲ್ಲಿ ನಾಗಬ್ರಹ್ಮರ ಕುದುರೆಯ ಮೇಲೆ ಕುಳಿತ ಮೂರ್ತಿಗಳಿದ್ದರೆ, ಈ ಗರೋಡಿಯಲ್ಲಿ ಅದಕ್ಕೆ ವ್ಯತಿರಿಕ್ತವಾಗಿ ಚತುರ್ಮುಖ ಬ್ರಹ್ಮನ ನಿಂತಿರುವ ಭಂಗಿಯ ಕಂಚಿನ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರಿಗೆ ಪೂಜೆ ನಡೆಯುತ್ತದೆ.
ಗುಂಡದ ಬಲಭಾಗದಲ್ಲಿ ಕೋಟಿಚೆನ್ನಯರು ಮತ್ತು ಇಬ್ಬರು ಮಕ್ಕಳ ಮರದಮೂರ್ತಿ ಹಾಗೂ ಚೌಂಡಿ ದೈವದ ಮಣೆಮಂಚವಿದೆ.
ಗುಂಡದ ಎಡಭಾಗದಲ್ಲಿ ಬಲ್ಲಾಳರು ಮತ್ತು ಮಗುವಿನ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಜೋಗಿಪುರುಷರ ಮರದ ಮೂರ್ತಿ, ಪರಿವಾರ ದೈವಗಳ ಮಣೆಮಂಚ, ಪಂಜುರ್ಲಿ ದೈವದ ಗದ್ದಿಗೆ, ಮೈಂದಾಳ್ತಿ ಮಗು ಹಾಗೂ ತೊಟ್ಟಿಲಿನ ಮರದ ಮೂರ್ತಿಗಳಿವೆ. ಪಕ್ಕದಲ್ಲಿ ಚಿಕ್ಕಮ್ಮ , ಜುಮಾದಿ, ಒಂದು ದೈವಗಳ ಮಣೆಮಂಚವಿದೆ.
ಗರೋಡಿಯ ಎದುರಿನಲ್ಲಿರುವ ಗುಡಿಯಲ್ಲಿ ಶಿವರಾಯ ಹಾಗೂ ಬಂಟರ ಮರದ ಮೂರ್ತಿಗಳಿವೆ.
ಗರೋಡಿಯ ಹತ್ತಿರದಲ್ಲಿಯೇ ಶ್ರೀ ವೀರಭದ್ರ ಅಬ್ಬಗ ಧಾರಗ ದೇವಸ್ಥಾನ, ಬ್ರಹ್ಮ ಹಾಗೂ ಚಿಕ್ಕಮ್ಮ ಗುಡಿಗಳಿವೆ.
ಹತ್ತಿರದಲ್ಲಿಯೇ ಕಂಬಳ ಗದ್ದೆಗಳಿವೆ.
ಗರೋಡಿಯ ಆವರಣದಲ್ಲಿ ತುಳಸೀಕಟ್ಟೆ, ಬಲಿಕಲ್ಲು ಹಾಗೂ ದೀಪದ ಕಂಬಗಳಿವೆ.

ನರಸಿಂಹ ಪೂಜಾರಿ

ಅಣ್ಣಪ್ಪ ಪೂಜಾರಿ

1) ನರಸಿಂಹ ಪೂಜಾರಿ (65 ವರ್ಷ) 2) ಅಣ್ಣಪ್ಪ ಪೂಜಾರಿ (50 ವರ್ಷ) 3) ಬಾಲ ಪೂಜಾರಿ (50 ವರ್ಷ) ಹಾಗೂ ಗಣೇಶ ಪೂಜಾರಿ ಹೀಗೆ ಗರಡಿ ಮನೆಯ ಮೂರು ಮನೆಯವರು ವರ್ಷಕ್ಕೊಂದು ಮನೆಯವರಂತೆ ಅರ್ಚಕರಾಗಿ ಸೇವೆ ಮಾಡುತ್ತಾರೆ. ಇವರ ಮೊದಲು ಈ ಮೂರು ಮನೆಗಳ ಹಿರಿಯರಾದ ಗೋಪಾಲ ಪೂಜಾರಿ, ಬುಡ್ಡ ಪೂಜಾರಿ, ರಾಮ ಪೂಜಾರಿ, ಸಾಸ ಪೂಜಾರಿಯವರು ಈ ಗರೋಡಿಯ ಅರ್ಚಕರಾಗಿದ್ದರು.
ಅದೇ ರೀತಿ 1) ಹಳ್ಳಿ ಮೇಲ್ಮನೆ ರಂಜಿತ್ ಶೆಟ್ಟಿ 2) ನಡುಮನೆ ಗಣಪತಿ ಮಾಸ್ಟರ್ 3) ಕೆಳಮನೆ ಕೃಷ್ಣಯ್ಯ ಶೆಟ್ಟಿ ಇವರುಗಳು ಈ ಗರೋಡಿಯ ಮೊಕ್ತೇಸರರಾಗಿದ್ದು, ವರ್ಷಕ್ಕೊಮ್ಮೆ ಈ ಮೂರು ಮನೆಗಳ ಮಧ್ಯೆ ಈ ಜವಾಬ್ದಾರಿ ಬದಲಾಯಿಸಲಾಗುತ್ತದೆ.
ಅರ್ಚಕರಾದ ಅಣ್ಣಪ್ಪ ಪೂಜಾರಿಯವರು ಗರೋಡಿಯ ಸ್ಥಳ ಪಾತ್ರಿಯಾಗಿಯೂ ಸೇವೆ ಮಾಡುತ್ತಿದ್ದಾರೆ. ಹಿಂದೆ ಗೋಪಾಲ ಪೂಜಾರಿ, ಬುಡ್ಡ ಪೂಜಾರಿ, ಹಾಗೂ ವಿಠಲ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಹಗಲು ಪನಿವಾರ, ಕದಿರು ಕಟ್ಟುವುದು, ಡಿಸೆಂಬರ್ ತಿಂಗಳ ಸಂಕ್ರಾಂತಿಯಂದು ಅಗೆಲು ಸೇವೆ, ಎಲ್ಲಾ ದೈವಗಳ ದರ್ಶನ ಸೇವೆ ನಡೆದು, ಹಳ್ಳಿ ಮೂರು ಮನೆಯವರ ವತಿಯಿಂದ ಕಂಬಳ ನಡೆಯುತ್ತದೆ. ಏಪ್ರಿಲ್ ತಿಂಗಳ 5 ನೇ ತಾರೀಖಿನಂದು ಕಂಬ ಮುಹೂರ್ತ, 6 ಕ್ಕೆ ಸ್ವಚ್ಚ ಮಾಡುವುದು, 7 ಕ್ಕೆ ಅಗೆಲು ಸೇವೆ, ದರ್ಶನ ಸೇವೆ, 8 ಕ್ಕೆ ನೇಮೋತ್ಸವ, ಜೋಗಿ ಪುರುಷ, ಮೈಂದಾಳ್ತಿಕೋಲ, ದರ್ಶನ ಸೇವೆ ನಡೆಯುತ್ತದೆ. ಏಪ್ರಿಲ್ 24 ಕ್ಕೆ ಶಿವರಾಯ ಮಾರಿ ಹಬ್ಬಗಳು ನಡೆಯುತ್ತದೆ.
ಸೂರಾಲು ಮಾಗಣೆ, ಕುದಿ, ಪೆಜಮಂಗೂರು, ಹೊಸೂರು, ಊರುಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರಿದ್ದು, ಜನರು ಗರೋಡಿಯಲ್ಲಿ ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರ ಜನರ ವರಡ ವಂತಿಗೆ, ಕಾಣಿಕೆಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
1940 ಹಾಗೂ 1979ರಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿದೆ.
ನರಸಿಂಹ ಪರವ ಚೇರ್ಕಾಡಿ, ಇವರು ನೃತ್ಯ ವಿಶಾರದರಾಗಿ, ರಾಮ ಮಡಿವಾಳ ಹಳ್ಳಿ ಇವರು ಮಡಿವಾಳರಾಗಿ, ಜಬ್ಬ ದೇವಾಡಿಗ ಸೂರಾಲು ಇವರು ವಾಧ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ ಗರೋಡಿ, ಹಳ್ಳಿ ವಡ್ಡಂಬೆಟ್ಟು,
ಬ್ರಹ್ಮಾವರ ತಾಲೂಕು,
ಉಡುಪಿ ಜಿಲ್ಲೆ – 576234

ಗರೋಡಿಯ ಅರ್ಚಕರು :

ಗಣೇಶ ಪೂಜಾರಿ – 9113884392

ಮಾಹಿತಿ ನೀಡಿದವರು

ಅಣ್ಣಪ್ಪ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

27.12.2024