ಶ್ರೀ ಬ್ರಹ್ಮಬೈದೇರುಗಳ ಚಿಕ್ಕಮ್ಮದೇವಿ ಗರೋಡಿ ಉಗ್ಗೆಲ್ಬೆಟ್ಟು.
ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಪ್ಪೂರು ಕಡೆ ಸಾಗುತ್ತಾ ಜಾರಬೆಟ್ಟುವಿನಲ್ಲಿ ಬಲಕ್ಕೆ ತಿರುಗಿ ಸಾಗಬೇಕು. ರೈಲ್ವೆ ಸೇತುವೆ ಬುಡದಲ್ಲಿ ಎಡಕ್ಕೆ ಸುಮಾರು 3ಕಿ. ಮೀ.ದೂರದಲ್ಲಿ ಗರೋಡಿಯಿದೆ. ಬ್ರಹ್ಮಾವರ ಕೃಷಿ ಕೇಂದ್ರದ ಮಾರ್ಗವಾಗಿ ಉಗ್ಗೆಲ್ಬೆಟ್ಟು ಅಣೆಕಟ್ಟು ಮಾರ್ಗವಾಗಿಯೂ ಗರೋಡಿ ತಲುಪಬಹುದು.
ಉಡುಪಿ ಜಿಲ್ಲಾ ಬ್ರಹ್ಮಾವರ ತಾಲೂಕು, ಉಪ್ಪೂರು ಗ್ರಾಮದಲ್ಲಿರುವ ಉಗ್ಗೆಲ್ಬೆಟ್ಟು ಶ್ರೀ ಬ್ರಹ್ಮಬೈದೇರುಗಳ ಚಿಕ್ಕಮ್ಮದೇವಿ ಗರೋಡಿಯು ಆಯದ ಗರೋಡಿಯಾಗಿದ್ದು ಷಡಾಧಾರ ಪ್ರತಿಷ್ಠೆ ಗೊಂಡಿದೆ. ಮುಖ್ಯ ದ್ವಾರ ಮೂಡು ಮುಖವಾಗಿದ್ದು ಇನ್ನೊಂದು ದ್ವಾರ ಪಡುಮುಖವಿದೆ.
ಗರೋಡಿಯ ಬ್ರಹ್ಮಗುಡಿಯಲ್ಲಿ ಗುಂಡದ ಒಳಗೆ ನಾಗ ಬ್ರಹ್ಮ ಮೂರ್ತಿ ಇದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರಿಗೆ ಗಿಂಡೆ ಇದೆ.
ಗುಂಡದ ಎಡ ಬದಿಯಲ್ಲಿ ಕೋಟಿಚೆನ್ನಯರ ಪಾಪೆ, ಇಬ್ಬರು ಮಕ್ಕಳ ಪಾಪೆ, ದೇಯಿ ಬೈದೆತಿಯ ಪಾಪೆ ಇದೆ.
ಗುಂಡದ ಎಡ ಬದಿಯಲ್ಲಿ ಕೋಟಿಚೆನ್ನಯರ ಪಾಪೆ, ಇಬ್ಬರು ಮಕ್ಕಳ ಪಾಪೆ, ದೇಯಿ ಬೈದೆತಿಯ ಪಾಪೆ ಇದೆ.
ವಾಲಗ ಚಾವಡಿಯಲ್ಲಿ ಮಾಯಂದಾಲ್ ಮತ್ತು ಮಗು, ಕುಲತ ಜುಮಾದಿ, ಬಹಳಷ್ಟು ಕಾರ್ಣಿಕ ಮೆರೆಯುತ್ತಿರುವ ಚಿಕ್ಕಮ್ಮದೇವಿ, ಬಗ್ಗು ಚಿಕ್ಕು, ಬಾಳ್ ಚಿಕ್ಕು, ಹೈಗುಳಿ, ಜೋಗಿಪುರುಷರ ಪಾಪೆಗಳಿವೆ. ಆಯದ ಕಂಬವೇ ಗುರುಕಂಬವಾಗಿದೆ.
ಆವರಣದಲ್ಲಿ ಹುಲಿಚಾಮುಂಡಿ, ಆಯದ ಕಲ್ಲು ಇದೆ. ಹೊರ ಆವರಣದಲ್ಲಿ ಕ್ಷೇತ್ರಪಾಲ, ನಾಗ ಸನ್ನಿಧಿ ಇದೆ.
ಸೋಮ ಪೂಜಾರಿ
ದಿ. ಸಂಜೀವ ಪೂಜಾರಿ
ಸುಮಾರು 22 ವರ್ಷಗಳಿಂದ ಉಗ್ಗೆಲ್ಬೆಟ್ಟು ಗರೋಡಿ ಮನೆ ಸೋಮ ಪೂಜಾರಿ (70 ವರ್ಷ) ಯವರು ಗರೋಡಿ ಅರ್ಚಕರಾಗಿದ್ದಾರೆ. ಹಿಂದೆ ಇವರ ಮಾವ ಸಂಜೀವ ಪೂಜಾರಿಯವರು ಸುಮಾರು 30 ವರ್ಷಗಳ ಕಾಲ ಅರ್ಚಕರಾಗಿದ್ದರು. ಇವರ ಮೊದಲು ಕೊರಗ ಪೂಜಾರಿ, ಗರೋಡಿ ಮನೆ ಚೆನ್ನಪ್ಪ ಪೂಜಾರಿ, ಅನಂತ ಪೂಜಾರಿ, ಕಾಳ ಪೂಜಾರಿಯವರು ಪೂ ಪೂಜನೆಯವರಾಗಿದ್ದರು.
ಸದ್ಯ ಈ ಗರೋಡಿಗೆ ಸ್ಥಳ ಪಾತ್ರಿಗಳಿಲ್ಲ. ಹಿಂದೆ ಕೊರಗ ಪೂಜಾರಿಯವರು, ಕಾಳು ಪೂಜಾರಿಯವರು, ಅನಂತ ಪೂಜಾರಿಯವರು ಸ್ಥಳ ಪಾತ್ರಿಗಳಾಗಿದ್ದರು.
ದಯಾನಂದ ಕರ್ಕೇರ ಉಗ್ಗೆಲ್ಬೆಟ್ಟು
ದಯಾನಂದ ಕರ್ಕೇರ ಉಗ್ಗೆಲ್ಬೆಟ್ಟು ಇವರು ಗರೋಡಿಯ ಆಡಳಿತ ಸಮಿತಿಯ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ.
ಈ ಗರೋಡಿಯಲ್ಲಿ ಪ್ರತೀ ಶುಕ್ರವಾರ ಪೂಜೆ ಇದೆ. ಉಳಿದಂತೆ ಸೂಡ ಸಂಕ್ರಮಣ ಅನುಸರಿಸಿ ಪ್ರತೀ ತಿಂಗಳ ಸಂಕ್ರಾಂತಿ ಪೂಜೆ ಜರಗುತ್ತದೆ. ಅಂದು ಅನ್ನದಾನ ಸೇವೆ ನಡೆಯುತ್ತದೆ. ಚೌತಿ ಪೂಜೆ ಇದೆ. ದೀಪಾವಳಿಯಂದು ದೀಪದ ಕಂಬವನ್ನಿಟ್ಟು ಪೂಜೆ, ಸೋಣ ತಿಂಗಳಿಡೀ ನಿತ್ಯ ಪೂಜೆ, ಕದಿರು ಕಟ್ಟುವುದು, ಊರು ಸೇರಿ ಪಂಚ ಕಜ್ಜಾಯ ಸೇವೆ ಇದೆ.
ಡಿಸೆಂಬರ್ 6 ನೇ ತಾರೀಕಿನಂದು ಕೊಡಿ ತಿಂಗಳಲ್ಲಿ ಅನ್ನ ನೈವೇದ್ಯ ಅಗೆಲು ಸೇವೆ ಇದೆ. ಮರುದಿನ ನೇಮೋತ್ಸವ, ಮರುದಿನ ಮಾಯಂದಾಳ್ ನೇಮ, ಅದರ ಮರುದಿನ ಹುಲಿಚಾಮುಂಡಿ ಕೋಲವಿದೆ. ಮಾರ್ಚ 29ರಂದು ಕಾಲಾವಧಿ ಅನ್ನ ನೈವೇದ್ಯ, 30ರಂದು ನೇಮೋತ್ಸವ, ಮರುದಿನ ಮಾಯಂದಾಲ್ ನೇಮವಿದೆ.
ಇಲ್ಲಿನ ಕೂಡು ಕಟ್ಟಿಗೆ ಹೇರೂರು, ಉಪ್ಪೂರು, ಉಗ್ಗೆಲ್ಬೆಟ್ಟು, ಜಾತಬೆಟ್ಟು, ಕುದ್ರುಬೆಟ್ಟು, ತೆಂಕಬೆಟ್ಟು, ಹೆರಂಜೆ, ಅಮ್ಮುಂಜೆ ಗ್ರಾಮಗಳು ಸೇರುತ್ತವೆ. ವಂತಿಗೆ, ವರಡದ ರೂಪದಲ್ಲಿ ಖರ್ಚು ವೆಚ್ಚಗಳು ನಿಭಾಯಿಸಲ್ಪಡುತ್ತವೆ. ಇದರ ಉಸ್ತುವಾರಿಯನ್ನು ಗುರಿಕಾರರುಗಳಾದ ಗರೋಡಿ ಮನೆ ಪೂಜಾರಿ, ಕೋಟಿ ಪೂಜಾರಿ, ಶಂಕರ ಪೂಜಾರಿ, ವಿಶ್ವನಾಥ ಪೂಜಾರಿ, ಅವರು ನೋಡಿಕೊಳ್ಳುತ್ತಾರೆ.
ಕೂಡುಕಟ್ಟಿಗೆ ಸೇರಿದ ಮಂದಿ ನೀರು ಸ್ನಾನಕ್ಕೆ, ಕಂಚಿಲ್ ಸೇವೆಗಾಗಿ ಗರೋಡಿಗೆ ಬರುತ್ತಾರೆ. ಮದುವೆ ಮುಂತಾದ ಶುಭ ಸಂದರ್ಭಗಳಲ್ಲಿ ಬೈದೇರುಗಳಿಗೆ ಜೋಡು ಕಾಯಿ ಕಾಣಿಕೆ ತೆಗೆದಿಡುತ್ತಾರೆ. ಪೂಜಾರಿ ಕಲಶ ಇಟ್ಟು ಶುದ್ಧ ಮಾಡುವ ಕ್ರಮ ಇದೆ.
1984 ಹಾಗೂ 1996ರಲ್ಲಿ ಗರೋಡಿ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶವಾಗಿದೆ. ಮುಂದಿನ ದಿನಗಳಲ್ಲಿ ಸಮಗ್ರ ಅಭಿವೃದ್ದಿಯ ಯೋಜನೆಗಳನ್ನು ಗರೋಡಿ ಆಡಳಿತ ಮಂಡಳಿ ಹಮ್ಮಿಕೊಂಡಿದೆ.
ಈ ಗರೋಡಿಯಲ್ಲಿ ಬೊಗ್ಗು ಪರವ, ಜಯ ಪರವ ಅವರ ಸಂಘಟಿಗರು ನೃತ್ಯ ವಿಶಾರದರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಿಂದೆ ಮೆಣ್ಕ ಪರವ, ಅಮ್ಮು ಪರವ, ಪಿಜಿನ ಪರವ, ನರಂಗ ಪರವ ಇಲ್ಲಿನ ನೃತ್ಯ ವಿಶಾರದರಾಗಿದ್ದರು.
ಗರೋಡಿಯ ವಿಳಾಸ:
ಶ್ರೀ ಬ್ರಹ್ಮಬೈದೇರುಗಳ ಚಿಕ್ಕಮ್ಮದೇವಿ ಗರೋಡಿ ಉಗ್ಗೆಲ್ಬೆಟ್ಟು.
ಕೊಳಲಗಿರಿ ಅಂಚೆ,
ಉಪ್ಪೂರು ಗ್ರಾಮ,
ಬ್ರಹ್ಮಾವರ ತಾಲೂಕು.
ಕೊಳಲಗಿರಿ ಅಂಚೆ,
ಉಪ್ಪೂರು ಗ್ರಾಮ,
ಬ್ರಹ್ಮಾವರ ತಾಲೂಕು.
ಆಡಳಿತ ಸಮಿತಿ:
ಅಧ್ಯಕ್ಷರು
ದಯಾನಂದ ಕರ್ಕೇರ ಉಗ್ಗೆಲ್ಬೆಟ್ಟು – 9632634704
ದಯಾನಂದ ಕರ್ಕೇರ ಉಗ್ಗೆಲ್ಬೆಟ್ಟು – 9632634704
ಮಾಹಿತಿ ನೀಡಿದವರು :
ಸೋಮ ಪೂಜಾರಿ, ಬೊಗ್ರ ಪೂಜಾರಿ, ದಯಾನಂದ ಕರ್ಕೇರ ಉಗ್ಗೆಲ್ಬೆಟ್ಟು
ಮಾಹಿತಿ ಸಂಗ್ರಹಿಸಿದ ದಿನಾಂಕ :
12.03.25