ಶ್ರೀ ಬ್ರಹ್ಮಬೈದರ್ಕಳ ಗರೋಡಿ ಅಂಜಾರು
ಈ ಗರೋಡಿಯು ಪೂವಾಭಿಮುಖವಾಗಿದೆ. ಉಡುಪಿ ಹಿರಿಯಡ್ಕ ಮಾರ್ಗವಾಗಿ ಹಿರಿಯಡ್ಕ ನಾರಾಯಣಗುರು ಮಂದಿರದ ಎದುರಿನಲ್ಲಿ ಅಂಜಾರು ರಸ್ತೆಯಲ್ಲಿ ಒಂದೂವರೆ ಕಿ.ಮೀ.ಸಾಗಿದರೆ ಗರೋಡಿ ಸಿಗುತ್ತದೆ.
ಉಡುಪಿಯ ಹಿರಿಯಡ್ಕ ಅಂಜಾರು ಗ್ರಾಮದಲ್ಲಿರುವ ಶ್ರೀ ಬ್ರಹ್ಮಬೈದರ್ಕಳ ಗರೋಡಿಯು ಆಯದ ಗರೋಡಿಯಾಗಿದ್ದು ಇಲ್ಲಿ ಷಡಾಧಾರ.
ಪ್ರತಿಷ್ಠೆಯಾಗಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗ ಬ್ರಹ್ಮರು, ಮೇಲಂತಸ್ತಿನಲ್ಲಿ ಗಾಳಿದೇವರು, ಮಧ್ಯದ ಅಂತಸ್ತಿನಲ್ಲಿ, ಪಾರ್ದನದ ಉಲ್ಲೇಖ ಪ್ರಕಾರ ಕಾಂತನ ಬೈದ ಹಾಗು ದೇಯಿ ಬೈದೆತಿಗೆ ಆರಾಧನೆ ಇರಬೇಕು ಎನ್ನುತ್ತಾರೆ ಪೂಪೂಜನೆಯವರು. ಇವರಿಗೆ ಹಿರಿಯರಿಂದ ಈ ಬಗ್ಗೆ ಸರಿಯಾದ ಮಾಹಿತಿ ಸಿಕ್ಕಿಲ್ಲ ಎನ್ನುತ್ತಾರೆ. ಗುಂಡದ ಎಡ ಭಾಗದಲ್ಲಿ ಕೋಟಿ ಚೆನ್ನಯ್ಯರ ಹಾಗು ಇಬ್ಬರು ಬಾಲಕರ ಮರದ ಪಾಪೆ, ಬಲ ಭಾಗದಲ್ಲಿ ಕುಜುಂಬ ಕಾಂಜವ ಹಾಗು ಒಬ್ಬ ಬಾಲಕನ ಮರದ ಪಾಪೆಗಳಿವ. ದೇಯಿ ಬೈದತಿ ಮಂಚ [ದೇಯಿ ಬೈದತಿಯು ಪೆಜನಾರ್ ಓಪೆತ್ತಿ ಬ್ರಾಹ್ಮಣ ದಂಪತಿಗಳ ಮನೆಯಲ್ಲಿ ಬೆಳೆದುದರಿಂದ ಈ ಮಂಚವನ್ನು ಬ್ರಾಣೆದಿ ಮಂಚ ಅಂತ ಬಹಳ ಹಿಂದೆ ಕರೆಯುತ್ತಿದ್ದರಂತೆ.] ವಾಲಗ ಚಾವಡಿಯಲ್ಲಿ ಮಾಯಂದಾಳ್ ಮತ್ತು ಮಗು , ಜೋಗಿ ಪುರುಷ ರ ಮರದ ಪಾಪೆ ಹುಲಿ ಚಾವುಂಡಿ ದೈವದ ಮಣೆಮಂಚಗಳಿವೆ.
ಗರೋಡಿಯ ಆವರಣದಲ್ಲಿ ಮಾರಿ ಶಿವರಾಯ ಗುಡಿ, ಜುಮಾದಿ-ಬಂಟ ಗುಡಿ, ಆಯದ ಕಲ್ಲು, ಅಮ್ನೂರು (ದುರ್ಗಾಪರಮೇಶ್ವರಿ) ಪೀಠಗಳಿವೆ.
ಸುಂದರ ಪೂಜಾರಿ
1999 ರಿಂದ ಸುಂದರ ಪೂಜಾರಿ, ಅಂಜಾರು ಗರೋಡಿಮನೆ.ಅಂಚೆ ಹಿರಿಯಡ್ಕ, (ದೂರವಾಣಿ: 94494 70205) ಇವರು ಗರೋಡಿ ಪೂಪೂಜನೆಯವರಾಗಿ ಸೇವೆ ಮಾಡುತ್ತಿದ್ದಾರೆ. ಇವರಿಗೆ ಮೊದಲು ಅಬ್ಬು ಪೂಜಾರಿ (1959-1999), ಪಿಜಿನ ಪೂಜಾರಿ (1959 ರ ಮೊದಲು) ಈ ಸೇವೆ ಮಾಡುತಿದ್ದರು.
ಕೃಷ್ಣ ಪೂಜಾರಿ ಹಾಗು ರಮೇಶ್ ಪೂಜಾರಿ ಇವರು ಈ ಗರೋಡಿಯ ಬೈದರ ದರ್ಶನದ ಸ್ಥಳ ಪಾತ್ರಿಗಳು. ಇವರ ಮೊದಲು ಕಾಂತಪ್ಪ ಪೂಜಾರಿ, ಹೆರಿಯಣ್ಣ ಪೂಜಾರಿ, ಶೇಖರ ಪೂಜಾರಿ ಇವರು ಈ ಸೇವೆ ಮಾಡಿದ್ದರು.
ಸುಭಾಶ್ಚಂದ್ರ ಹೆಗ್ಡೆ, ಅಂಜಾರು ಬೀಡು, ಅಂಚೆ ಹಿರಿಯಡ್ಕ, ಉಡುಪಿ ತಾಲೂಕು & ಜಿಲ್ಲೆ (ದೂರವಾಣಿ-9481447474) ಇವರು ಗರೋಡಿಯ ಮೊಕ್ತೇಸರರು. ಗರೋಡಿಗೆ ಆಡಳಿತ ಸಮಿತಿ ಇದ್ದು, ಶ್ರೀ ಸುಭಾಶ್ಚಂದ್ರ ಹೆಗ್ಡೆ ಅಧ್ಯಕ್ಷರಾಗಿ, ಶ್ರೀ ಕೆ. ಸುಧೀರ್ ಹೆಗ್ಡೆ ಕಾರ್ಯದರ್ಶಿಯಾಗಿದ್ದಾರೆ.
ಈ ಗರೋಡಿಯಲ್ಲಿ ಮಂಗಳವಾರದ ಪೂಜೆ, ಸಂಕ್ರಾತಿ ಪೂಜೆ, ಸೋಣ ತಿಂಗಳಿಡೀ ಸೋಣಾರ್ತಿ ಹೂವಿನ ಪೂಜೆ, ಕದಿರು ಕಟ್ಟುವುದು, ಊರು ಸೇರಿ ಗಜ್ಜೇಯಿ ಸೇವೆ, ಅಗೆಲು ಅನ್ನ ನೈವೇದ್ಯ ಸೇವೆ ಇದೆ. ಕಾಲಾವಧಿ ನೇಮೋತ್ಸವ,ಮಾಯಂದಾಳ ನೇಮ, ಹುಲಿ ಚಾಮುಂಡಿ, ಜುಮಾದಿ- ಬಂಟ ಕೋಲವಿದೆ. ಶಿವರಾಯ ದರ್ಶನ ಸೇವೆ ಇದೆ,ಅಮ್ನೂರ ದರ್ಶನ ಸೇವೆ ಇದೆ, ದೀಪಾವಳಿಗೆ ಕಂಬ ನೆಟ್ಟು ದೀಪ ಉರಿಸಿ ಬಲಿಯೇಂದ್ರ ಪೂಜೆ ಇದೆ.
ಅಂಜಾರು ಗರೋಡಿ ಕೂಡುಕಟ್ಟಿನಲ್ಲಿ ಸುಮಾರು 150 ಮನೆಗಲಿವೆ. ಮೂಡು ಅಂಜಾರು, ಪಡು ಅಂಜಾರು, ಪಾಪುಜೆ, ವಾಂಕಡೆಬೆಟ್ಟು, ಬಜೆ, ಮಾಂಬೆಟ್ಟು, ಪಂಜಡ್ಕ, ಬೈರಂಜೆ, ಕಾಜಾರ ಗುತ್ತು, ಮೂತ್ತೂರು ಇವು ಈ ಗರೋಡಿಯ ಕೂಡುಕಟ್ಟಿಗೆ ಸೇರಿದ ಊರುಗಳು. ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭಗಳಲ್ಲಿ ಜೋಡು ಕಾಯಿ ತೆಗೆದಿಡುವ ಪದ್ಧತಿ, ಹೆರಿಗೆಯ ನಂತರದ ತಿಂಗೊಳ್ ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಈ ಊರಿನ ಮಂದಿ ಭಾಗಿಯಾಗುತ್ತಾರೆ.
1989 ರಲ್ಲಿ ಜೀರ್ಣೋದ್ಧಾರ- ಬ್ರಹ್ಮಕಲಶ ಹಾಗು 2014 ರಲ್ಲಿ ಬ್ರಹ್ಮಕಲಶ ನಡೆದಿದೆ.
ಪಾಡಿಗಾರ ಶೇಖರ ಪರವ, ಉಗ್ಗಪ್ಪ ಪರವ, ಪೂವಪ್ಪ ಪರವ, ಅಣ್ಣಪ್ಪ ಪರವ ಇವರು ಈ ಗರೋಡಿಯ ನೃತ್ಯ ವಿಶಾರದರಾಗಿದ್ದಾರೆ. ಹಿಂದೆ ಮೆಣ್ಕ ಪರವ, ಅಮ್ಮು ಪರವ, ಪಿಜಿನ ಪರವ ಇವರುಗಳು ಈ ಸೇವೆ ಮಾಡಿದ್ದರು.
ಗರೋಡಿಯ ವಿಳಾಸ:
ಶ್ರೀ ಬ್ರಹ್ಮಬೈದರ್ಕಳ ಗರೋಡಿ ಅಂಜಾರು,
ಅಂಚೆ- ಹಿರಿಯಡ್ಕ,
ಉಡುಪಿ ತಾಲೂಕು & ಜಿಲ್ಲೆ -576113M
ಮಾಹಿತಿ ಸಂಗ್ರಹಿಸಿದ ದಿನಾಂಕ:
14-7-2022