ತೊಂಬತ್ತು ಶ್ರೀ ಬ್ರಹ್ಮಬೈದರ್ಕಳ ಗರೋಡಿ.
ಉಡುಪಿಯಿಂದ ಬ್ರಹ್ಮಾವರ – ಬಾರ್ಕೂರು – ಸೈಬ್ರಕಟ್ಟೆಯಿಂದ ಗೋಳಿಯಂಗಡಿ ತಲುಪಿ ಅಲ್ಲಿಂದ ಗೋಳಿಯಂಗಡಿ – ಹೆಂಗವಳ್ಳಿ ರಸ್ತೆಯಲ್ಲಿ ಸುಮಾರು ಆರುವರೆ ಕಿ. ಮೀ. ದೂರದಲ್ಲಿದೆ ಈ ಗರೋಡಿ.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಒಳಗೆ ಬ್ರಹ್ಮಗುಡಿಯಲ್ಲಿ ಗುಂಡದೊಳಗೆ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರಿಗೆ ಪೂಜೆಯಿದೆ.
ಗುಂಡದ ಎಡಬದಿಯಲ್ಲಿ ಕೋಟಿಚೆನ್ನಯ, ಕುಜುಂಬ ಕಾಂಜವ ಹಾಗೂ ಮೂವರು ಮಕ್ಕಳ ಮರದ ಮೂರ್ತಿಯಿದೆ. ಗುಂಡದ ಹಿಂಬದಿಯಲ್ಲಿ ದೇಯಿ ಬೈದೆತಿಯ ಮುಂಡಿಗೆ ಇದೆ.
ಗುಂಡದ ಬಲಬದಿಯಲ್ಲಿ ಬಲ್ಲಾಳರ ಮಂಡಿಗೆ ಇದೆ.
ಬ್ರಹ್ಮಗುಡಿಯ ಹೊರಗೆ ಎಡಭಾಗದಲ್ಲಿ ಪರಿವಾರ ದೈವಗಳ ಮಣೆಮಂಚ, ಮೈಂದಾಳ್ತಿ ಹಾಗೂ ಮಗುವಿನ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಎದುರಿಗೆ ಜೋಗಿಪುರುಷರ ಮರದ ಮೂರ್ತಿ, ಪರಿವಾರ ದೈವಗಳ ಮುಂಡಿಗೆ ಹಾಗೂ ಬ್ರಾಹ್ಮಣರ ಮಂಡಿಗೆಗಳಿವೆ.
ಗರೋಡಿಗೆ ಬಲಭಾಗದಲ್ಲಿರುವ ಗುಡಿಯಲ್ಲಿ ಶಿವರಾಯ ಹಾಗೂ ಜಿಟಕರ ಮರದ ಮೂರ್ತಿ ಇದೆ.
ಪಕ್ಕದಲ್ಲಿರುವ ಇನ್ನೊಂದು ಗುಡಿಯಲ್ಲಿ ಕಲ್ಲು ಕುಟುಗ, ವರ್ತೆ, ಪಂಜುರ್ಲಿ, ಧೂಮಾವತಿ, ಬಂಟ, ಹುಲಿದೇವರು(ಚಾಂಡಿ) ನಂದಿ ದೈವಗಳ ಮರದ ಮೂರ್ತಿಗಳಿವೆ.
ಗರೋಡಿಯ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯನ ಮರದ ಎರಡು ಮುಂಡಿಗೆಗಳಿವೆ. ಗರೋಡಿಯ ಆವರಣದೊಳಗೆ ತುಳಸಿಕಟ್ಟೆ ಹಾಗೂ ಬಲಿ ಕಲ್ಲುಗಳಿವೆ.
ನಾರಾಯಣ ಪೂಜಾರಿ
ಸುಮಾರು 40 ವರ್ಷಗಳಿಂದ ನಾರಾಯಣ ಪೂಜಾರಿ (62 ವರ್ಷ) ಯವರು ಈ ಗರೋಡಿಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮೊದಲು ಅಪ್ಪು ಪೂಜಾರಿ, ನಂದ ಪೂಜಾರಿಯವರು ಈ ಸೇವೆ ಮಾಡಿದ್ದರು.
ನಾರಾಯಣ ಪೂಜಾರಿ (ಅರ್ಚಕರು), ಮಂಜಪ್ಪ ಪೂಜಾರಿ (62 ವರ್ಷ), ವಿಠಲ ಪೂಜಾರಿ (60 ವರ್ಷ) ಇವರು ಇಲ್ಲಿಯ ದರ್ಶನದ ಸ್ಥಳ ಪಾತ್ರಿಗಳು. ಇವರ ಮೊದಲು ಕೊರಗ ಪೂಜಾರಿ, ನಂದ ಪೂಜಾರಿ, ಇವರು ಇಲ್ಲಿ ಸ್ಥಳ ಪಾತ್ರಿಗಳಾಗಿ ಸೇವೆ ಮಾಡಿರುತ್ತಾರೆ.
ಸೀತಾರಾಮ ಶೆಟ್ಟಿಯವರು ಇಲ್ಲಿಯ ಮೊಕ್ತೇಸರರು. ಇವರ ಮೊದಲು ಸಂಜೀವ ಶೆಟ್ಟಿಯವರು ಈ ಗರೋಡಿಯ ಮೊಕ್ತೇಸರರಾಗಿದ್ದರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ಮಂಡಿಗೆ ಪೂಜೆ, ಹಗಲು ಪನಿಯಾರ, ಕದಿರು ಕಟ್ಟುವುದು, ಕೊಡಿ ತಿಂಗಳಲ್ಲಿ ಅಗೆಲು ಸೇವೆ, ದರ್ಶನ , ತುಲಾಭಾರ ಸೇವೆ, ಮಾರ್ಚ ತಿಂಗಳಲ್ಲಿ ಹಾಲು ಹಬ್ಬ, ಏಪ್ರಿಲ್ ತಿಂಗಳ 9ನೇ ತಾರೀಖಿಗೆ ಅಗೆಲು ಸೇವೆ, 10ಕ್ಕೆ ಬೈದರ್ಕಳ ನೇಮ, ಜೋಗಿಪುರುಷ, ಮೈಂದಾಳ್ತಿ, ಶಿವರಾಯ ದೈವಗಳ ಕೋಲ ಸೇವೆ ನಡೆಯುತ್ತದೆ.
ಹೆಂಗವಳ್ಳಿ, ದಬ್ಲಾಡಿ ಹಾಗೂ ಭಾಗಶ: ಶೇಡಿಮನೆ ಗ್ರಾಮಗಳ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದವರು. ಈ ಗ್ರಾಮಗಳ ಜನರು ಗರೋಡಿಯಲ್ಲಿ ತುಲಾಭಾರ ಸೇವೆ, ಮದುವೆ ಮುಂತಾದ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ.
ಗರೋಡಿಗೆ 85ಸೆಂಟ್ಸ ಜಾಗ ಸರಕಾರಿ ಜಾಗವಿದ್ದು ಊರಜನರ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತಿದೆ.
ನರಸಿಂಹ ಪರವ ಚೇರ್ಕಾಡಿ ಮತ್ತು ಸಂಘಡಿಗರು ನೃತ್ಯವಿಶಾರದರಾಗಿ, ಅಪ್ಪು ಮಡಿವಾಳ ತೊಂಬತ್ತು ಇವರು ಮಡಿವಾಳರಾಗಿ, ಸೂರ್ಯ ಶೇರಿಗಾರ ಹೆಬ್ರಿ ಇವರು ವಾದ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.
ಗರೋಡಿಯ ವಿಳಾಸ:
ತೊಂಬತ್ತು ಶ್ರೀ ಬ್ರಹ್ಮಬೈದರ್ಕಳ ಗರೋಡಿ,
ತೊಂಬತ್ತು ಹೆಂಗುವಳ್ಳಿ ಗ್ರಾಮ ಮತ್ತು ಅಂಚೆ,ಕುಂದಾಪುರ ತಾಲೂಕು, ಉಡುಪಿ 576212
ತೊಂಬತ್ತು ಹೆಂಗುವಳ್ಳಿ ಗ್ರಾಮ ಮತ್ತು ಅಂಚೆ,ಕುಂದಾಪುರ ತಾಲೂಕು, ಉಡುಪಿ 576212
ಅರ್ಚಕರು:
ನಾರಾಯಣ ಪೂಜಾರಿ – 9008757296
ಮಾಹಿತಿ ನೀಡಿದವರು :
ನಾರಾಯಣ ಪೂಜಾರಿ
ಮಾಹಿತಿ ಸಂಗ್ರಹಿಸಿದ ದಿನಾಂಕ :
16.01.2025