ಶ್ರೀ ಬ್ರಹ್ಮಬೈದರ್ಕಳ ಮತ್ತು ಸಹ ಪರಿವಾರ ದೈವಗಳ ಗರೋಡಿ, ಮೊಳಹಳ್ಳಿ
ಉಡುಪಿಯಿಂದ ಕೋಟೇಶ್ವರ ಬಲಕ್ಕೆ ಹಾಲಾಡಿ ರಸ್ತೆಯಲ್ಲಿ ಸಾಗಿ ಹುಣಸೆಮಕ್ಕಿ ಎಂಬಲ್ಲಿ ಎಡಕ್ಕೆ ತಿರುಗಿ ಸುಮಾರು ಒಂದೂವರೆ ಕಿ. ಮೀ.ದೂರ
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದೆ. ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ. ಗರೋಡಿಯು ಷಡಾಧಾರ ಪ್ರತಿಷ್ಠೆಯನ್ನು ಹೊಂದಿದೆ.
ಗರೋಡಿಯ ಒಳಗೆ ಬ್ರಹ್ಮಗುಡಿಯಲ್ಲಿ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆ ಇದೆ.
ಗುಂಡದ ಎಡಭಾಗದಲ್ಲಿ ದೇಯಿ ಬೈದೆತಿ, ಕೋಟಿಚೆನ್ನಯರು ಹಾಗೂ ಇಬ್ಬರು ಮಕ್ಕಳ ಮರದ ಮೂರ್ತಿಯಿದೆ.
ಗುಂಡದ ಬಲಭಾಗದಲ್ಲಿ ಪೈಯಬೈದ ಹಾಗೂ ಜಿಟಿಕರ ಮರದ ಮೂರ್ತಿ ಹಾಗೂ ಬಲ್ಲಾಳರ ಕಲ್ಲಿನ ಕಂಬವಿದೆ.
ಬ್ರಹ್ಮಗುಡಿಯ ಹೊರಗೆ ಬಲಭಾಗದಲ್ಲಿ ಕೋಣ ಬೊಬ್ಬರ್ಯನ ಮರದ ಮೂರ್ತಿಯಿದೆ. ಎಡಬದಿಯಲ್ಲಿ ಮರದ ಗದ್ದಿಗೆಯಲ್ಲಿ ಪಂಜುರ್ಲಿಯ ಮರದ ಮೂರ್ತಿ, ಮಹಾಶೇಷ, ಮೈಂದಾಳ್ತಿ ಮತ್ತು ಮಗು, ಕೋಣದ ಮರದ ಮೂರ್ತಿ ಇದೆ.
ಪಕ್ಕದಲ್ಲಿ ಕಲ್ಲಿನ ಮಾಸ್ತಿಕಂಬ, ಹಳೆಯಮ್ಮ, ಎಳೆಯಮ್ಮ, ಬಾಲಚಿಕ್ಕು, ಬಲಿಚಿಕ್ಕು, ದೈವಗಳ ಮರದ ಮೂರ್ತಿಗಳಿವೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯ ಮರದ ಮೂರ್ತಿ ಇದೆ.
ಗರೋಡಿಯ ಎದುರಿನ ಗುಡಿಯಲ್ಲಿ ಶಿವರಾಯ ಮತ್ತು ಜಿಟಿಕರ ಮರದ ಮೂರ್ತಿ ಇದೆ.
ಗರೋಡಿಯ ಆವರಣದೊಳಗೆ ತುಳಸೀಕಟ್ಟೆ, ಬಲಿಕಲ್ಲು, ಕ್ಷೇತ್ರಪಾಲ, ರಾಹು ಮತ್ತು ಪರಿವಾರ ದೈವಗಳ ಸಾನಿಧ್ಯವಿದೆ.
ಗರೋಡಿಯ ಪರಿಸರದಲ್ಲಿ ನಾಗ ಬನ, ವೀರಭದ್ರ ನಂದಿಕೇಶ್ವರ ಹೈಗುಳಿ ದೇವಸ್ಥಾನಗಳಿವೆ.
ಸುರೇಶ್ ಪೂಜಾರಿ
ಸುರೇಶ್ ಪೂಜಾರಿ (47 ವರ್ಷ) ಇವರು ಗರೋಡಿಯ ಅರ್ಚಕರಾಗಿದ್ದಾರೆ. ಇವರ ಮೊದಲು ಇವರ ತಂದೆ ಬಸವ ಪೂಜಾರಿ ಹಾಗೂ ಅಜ್ಜ ಬಡಿಯ ಪೂಜಾರಿಯವರು ಈ ಸೇವೆ ಮಾಡಿದ್ದರು. ಈ ಗರೋಡಿಯಲ್ಲಿ ದರ್ಶನದ ಸ್ಥಳ ಪಾತ್ರಿಗಳಿಲ್ಲ.
ಎಂ. ಮಹೇಶ್ ಹೆಗ್ಡೆಯವರು ಈ ಗರೋಡಿಯ ಮೊಕ್ತೇಸರರಾಗಿದ್ದು, ಆಡಳಿತ ಸಮಿತಿಯ ಅಧ್ಯಕ್ಷರಾಗಿದ್ದಾರೆ.
ಗರೋಡಿಯಲ್ಲಿ ಮಂಗಳವಾರ ಹಾಗು ಶುಕ್ರವಾರ ಪೂಜೆ ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಕೊಡಿ ತಿಂಗಳಲ್ಲಿ ಹಾಲಹಬ್ಬ (ಕೈದ ಪೂಜೆ), ಎಲ್ಲಾ ದೈವಗಳ ದರ್ಶನ ಸೇವೆ, ತುಲಾಭಾರ ಸೇವೆ, ಮಾರ್ಚ ತಿಂಗಳಲ್ಲಿ ಪ್ರತೀ ಮೂರು ವರ್ಷಕ್ಕೊಮ್ಮೆ ಶಿವರಾಯ ಮಾರಿ ಸೇವೆ ನಡೆಯುತ್ತದೆ. ಶಿವರಾಯನಿಗೆ ಮಂಗಳವಾರ ಮತ್ತು ಆದಿತ್ಯವಾರ ಊರವರು ಕೋಳಿ ಬಲಿ ಕೊಡುವ ಕ್ರಮ ಇದೆ.
ಮೊಳಹಳ್ಳಿ ಗ್ರಾಮದ ಜನರು ಈ ಗರೋಡಿಗೆ ಸೇವೆ ನೀಡುತ್ತಾರೆ. ತುಲಾಭಾರ ಸೇವೆ, ಮದುವೆ ಮುಂತಾದ ಶುಭ ಸಂದರ್ಭಗಳಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಪಾಲ್ಗೊಳ್ಳುತ್ತಾರೆ
ಗರೋಡಿಗೆ ಮೂರು ಮುಡಿ ಜಮೀನು ಉಂಬಳಿ ಇದೆ. ಊರವರ ವಂತಿಗೆ, ಕಾಣಿಕೆಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ. ಗರೋಡಿಯು ಸುಮಾರು ಒಂದೂವರೆ ಎಕ್ರೆ ಸರಕಾರಿ ಜಮೀನಿನಲ್ಲಿದೆ.
ಗರೋಡಿಯು 2023ರ ಫೆಬ್ರವರಿ ತಿಂಗಳಲ್ಲಿ ಜೀರ್ಣೋದ್ದಾರಗೊಂಡಿದೆ
ಶೀನ ದೇವಾಡಿಗ ಮೊಳಹಳ್ಳಿ ಇವರ ಪರಿವಾರಸ್ಥರು ವಾದ್ಯದವರಾಗಿ, ಹುಣಸೇ ಮಕ್ಕಿ ವೀರನ ಮಕ್ಕಳು ಡೋಳಿನವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.
ಗರೋಡಿಯ ವಿಳಾಸ:
ಶ್ರೀ ಬ್ರಹಬೈದರ್ಕಳ ಮತ್ತು ಸಹ ಪರಿವಾರ ದೈವಗಳ ಗರೋಡಿ,
ಮೊಳಹಳ್ಳಿ ಅಂಚೆ,
ಕುಂದಾಪುರ ತಾಲೂಕು,
ಉಡುಪಿ – 576222.
ಮೊಳಹಳ್ಳಿ ಅಂಚೆ,
ಕುಂದಾಪುರ ತಾಲೂಕು,
ಉಡುಪಿ – 576222.
ಅರ್ಚಕರು:
ಸುರೇಶ್ ಪೂಜಾರಿ : 9945631027
ಮಾಹಿತಿ ನೀಡಿದವರು :
ಸುರೇಶ್ ಪೂಜಾರಿ,
ಅವಿನಾಶ್ ಪೂಜಾರಿ
ಅವಿನಾಶ್ ಪೂಜಾರಿ
ಮಾಹಿತಿ ಸಂಗ್ರಹಿಸಿದ ದಿನಾಂಕ :
16.01.2025