Baidashree

Sri Brahmabantara Kotichennaiah, Panjurli, Haiguli and the Garodi

ಶ್ರೀ ಬ್ರಹ್ಮಬಂಟರ ಕೋಟಿಚೆನ್ನಯ್ಯ, ಪಂಜುರ್ಲಿ, ಹೈಗುಳಿ ಹಾಗೂ ಪರಿವಾರ ದೈವಗಳ ಗರೋಡಿ, ಗುಜ್ಜಾಡಿ

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ ಎನ್ಎಚ್66 ರಲ್ಲಿ ಕುಂದಾಪುರ ದಾಟಿ, ಸೌಪರ್ಣಿಕ ನದಿಸೇತುವೆ ದಾಟಿದ ನಂತರ ಎಡಕ್ಕೆ ತಿರುಗಿ ನಾಯಕವಾಡಿ ರಸ್ತೆಯಲ್ಲಿ ಸುಮಾರು 3.5ಕಿ.ಮೀ. ಸಾಗಿದ ನಂತರ ಪುನ: ಎಡಕ್ಕೆ ತಿರುಗಿ ಸುಮಾರು 850ಮೀ. ಒಳಗೆ ಹೋದರೆ ಈ ಗರೋಡಿ ಸಿಗುವುದು.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ. ಇಲ್ಲಿ ಷಡಾಧಾರ ಪ್ರತಿಷ್ಟೆಯಾಗಿಲ್ಲ.
ಗರೋಡಿಯ ಬ್ರಹ್ಮಗುಡಿಯ ಎದುರು ನಾಗಬ್ರಹ್ಮರ ಪಂಚಲೋಹದ ಮೂರ್ತಿ, ಗುಂಡದ ಒಳಗೊಂದು ಬೆಳ್ಳಿ ಮುಚ್ಚಿದ ಮರದ ನಾಗಬ್ರಹ್ಮರ ಮೂರ್ತಿ ಇದೆ.
ಗುಂಡದ ಎಡಭಾಗದಲ್ಲಿ ದೇಯಿಬೈದೆತಿ, ಕೋಟಿಚೆನ್ನಯರು ಹಾಗೂ ಇಬ್ಬರು ಮಕ್ಕಳ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ಕುಜುಂಬ ಕಾಂಜವ ಹಾಗೂ ಮಗುವಿನ ಮರದ ಮೂರ್ತಿ ಇದೆ.
ಬ್ರಹ್ಮಗುಡಿಯ ಹೊರಗಡೆ ಬಲಬದಿಯಲ್ಲಿ ಮೂಡೂರು ಹೈಗುಳಿ, ನಂದಿ (ಎರಡು), ಪಂಜುರ್ಲಿ ದೈವಗಳ ಗದ್ದಿಗೆ ಹಾಗೂ ಮರದ ಮೂರ್ತಿಗಳಿವೆ. ಎಡಭಾಗದಲ್ಲಿ ಹಣಾರ ಹೈಗುಳಿ, ದೈವದ ಗದ್ದಿಗೆ ಹಾಗೂ ಪಂಚಲೋಹದ ಮೂರ್ತಿ ಇದೆ.
ಪಕ್ಕದಲ್ಲಿ ಮೈಂದಾಳ್ತಿ, ಬಾಲಯ್ಯ, ಬೊಬ್ಬರ್ಯ, ದೊಡ್ಡಕಾಲಮ್ಮ, ಮೂಡೂರ ಅಮ್ಮ, ಬಚ್ಚಲಮ್ಮ ದೈವಗಳ ಮರದ ಮೂರ್ತಿ ಹಾಗೂ ಕುಂ಼ಜ್ಞಾಡಿ ಹೈಗುಳಿ ದೈವದ ಮಣೆಮಂಚವಿದೆ.
ಬ್ರಹ್ಮಗುಡಿಯ ಎದರು ಸ್ಥಳದ ಮಾಸ್ತಿ, ಜೋಗಿಪುರುಷ, ಅಣ್ಣುಣ ಹೈಗುಳಿ, ಮುರಸಂಡಿ, ಸಂಕ್ರಣ ಹೈಗುಳಿ, ಹಿಂಜಾಣ ಚಿಕ್ಕು, ಮಾಸ್ತಿಕಟ್ಟೆ ಅಮ್ಮ, ಮರ್ಲುಚಿಕ್ಕು ಹಾಗೂ ಪಾತ್ರಿಗಳ ಮರದ ಮೂರ್ತಿಗಳಿವೆ.
ಗರೋಡಿಯ ಹೊರಗೆ ಬಾಗಿಲ ಪಕ್ಕದಲ್ಲಿ ಬಾಗಿಲು ಬೊಬ್ಬರ್ಯ ಮರದ ಮೂರ್ತಿಯಿದೆ.
ಗರೋಡಿಯ ಹೊರಾಂಗಣದಲ್ಲಿ ಹೊರಸುತ್ತಿನ ಹೈಗುಳಿ, ರಾಹು ಮತ್ತು ಗ್ರಾಮಕಲ್ಲು, ಕ್ಷೇತ್ರಪಾಲ, ಬಲಿಕಲ್ಲುಗಳಿವೆ. ಗರೋಡಿಯ ಪರಿಸರದಲ್ಲಿ ಸ್ವಾಮಿ ದೈವದ ಸಾನಿಧ್ಯ ಹಾಗೂ ನಾಗಬನಗಳಿವೆ.
ಸುಬ್ಬ ಪೂಜಾರಿ(65 ವರ್ಷ) ಹಾಗೂ ರಾಮ ಪೂಜಾರಿಯವರು ಗರೋಡಿಯ ಅರ್ಚಕರಾಗಿದ್ದಾರೆ. ಇವರ ಮೊದಲು ಬುಡ್ಡು ಪೂಜಾರಿ, ಭದ್ರ ಪೂಜಾರಿ ಮೊದಲಾದ ಹಿರಿಯರು ಈ ಸೇವೆ ಮಾಡಿದ್ದರು.
ರಾಘವೇಂದ್ರ ಪೂಜಾರಿ (40 ವರ್ಷ) ಇವರು ಇಲ್ಲಿಯ ದರ್ಶನದ ಸ್ಥಳ ಪಾತ್ರಿಯಾಗಿದ್ದಾರೆ. ಇವರ ಮೊದಲು ಚೆನ್ನ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಯಾಗಿದ್ದರು.
ರೋಹಿದಾಸ್ ನಾಯಕ್ ಇವರು ಗರೋಡಿಯ ಮೊಕ್ತೇಸರರಾಗಿ, ಪಟೇಲರ ಮನೆ ಪ್ರದೀಪ್ ಶೆಟ್ಟಿಯವರು ಮುಕ್ಕಾಲಿಯಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಶುಕ್ರ ಪೂಜಾರಿ

ಗರೋಡಿಯ ಉಸ್ತುವಾರಿಗೆ ಆಡಳಿತ ಸಮಿತಿಯಿದೆ. ಶಿವರಾಮ ಪೂಜಾರಿ ಜಡ್ಡಿನಕೋಡ್ಲು ಗೌರವಾಧ್ಯಕ್ಷರಾಗಿ, ಶಿವನಾಯ್ಕ ಇವರು ಅಧ್ಯಕ್ಷರಾಗಿ, ಶುಕ್ರ ಪೂಜಾರಿಯವರು ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗರೋಡಿಯಲ್ಲಿ ನಿತ್ಯಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಜನವರಿ 24ಕ್ಕೆ ಅಗೆಲು ಸೇವೆ ದರ್ಶನ ಸೇವೆ, ಹಾಲುಹಬ್ಬ ನಡೆಯುತ್ತದೆ.
27-04-2025ಕ್ಕೆ ಪಂಜುರ್ಲಿ ಹಾಗೂ ಹೈಗುಳಿ ದೈವಗಳಿಗೆ ಮೊದಲ ಬಾರಿಗೆ ಹರಕೆಯ ಕೋಲ ಸೇವೆ ನಡೆಯಲಿದೆ.
ಗುಜ್ಜಾಡಿ, ಮಂಕಿ, ಬೆಣ್ಗೇರಿ, ಕೊಡಪಾಡಿ, ಗಂಗೊಳ್ಳಿ, ಊರುಗಳ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದ್ದು, ಗರೋಡಿಯಲ್ಲಿ ತುಲಾಭಾರ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರಜನರ ಹರಕೆ, ಕಾಣಿಕೆ, ದೇಣಿಗೆ, ವರಡ ವಂತಿಗೆಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಗರೋಡಿಗೆ 11 ಸೆಂಟ್ಸ ಜಾಗವಿದೆ. ಗರೋಡಿಯು 24-01-2014ರಲ್ಲಿ ಜೀರ್ಣೋದ್ಧಾರವಾಗಿದೆ,
ಮಾಲಿಂಗ ದೇವಾಡಿಗ ಗಂಗೊಳ್ಳಿ ಇವರು ಈ ಗರೋಡಿಯ ವಾದ್ಯದವರಾಗಿ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬಂಟರ ಕೋಟಿಚೆನ್ನಯ್ಯ,
ಪಂಜುರ್ಲಿ, ಹೈಗುಳಿ ಹಾಗೂ ಪರಿವಾರ ದೈವಗಳ ಗರೋಡಿ,
ಗುಜ್ಜಾಡಿ,
ಕುಂದಾಪುರ ತಾಲೂಕು,
ಉಡುಪಿ – 576247.

ಗರೋಡಿಯ ಆಡಳಿತ ಸಮಿತಿ:

ಶುಕ್ರ ಪೂಜಾರಿ
ಕಾರ್ಯದರ್ಶಿ – 9341919878.

ಮಾಹಿತಿ ನೀಡಿದವರು :

ಶುಕ್ರ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

27.01.2025