ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರೋಡಿ, ಯರ್ಲಪ್ಪಾಡಿ
ಉಡುಪಿಯಿಂದ ಹಿರಿಯಡ್ಕ ಮಾರ್ಗವಾಗಿ ಬೈಲೂರು ಪದವಿ ಪೂರ್ವ ಕಾಲೇಜಿನ ಪಕ್ಕದ ರಸ್ತೆಗೆ ಎಡಕ್ಕೆ ತಿರುಗಿ ಸುಮಾರು 4ಕಿ.ಮೀ. ಸಾಗಿದರೆ ಈ ಗರೋಡಿ ಸಿಗುವುದು.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದ್ದು ಷಢಾಧಾರ ಪ್ರತಿಷ್ಠೆಯನ್ನು ಹೊಂದಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರ ಮರದ ಮೂರ್ತಿಯಿದೆ. ಗುಂಡದ ಬಲಭಾಗದಲ್ಲಿ ಕುಜುಂಬ ಕಾಂಜವರ ಮಣೆಮಂಚವಿದೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಮಾಯಂದಾಲ್ ಮತ್ತು ಮಗುವಿನ ಮರದ ಮೂರ್ತಿಗಳಿವೆ. ಎಡಬದಿಯಲ್ಲಿ ಜೋಗಿಪುರುಷ ಮರದ ಮೂರ್ತಿಯಿದೆ.
ಗರೋಡಿಯ ಆವರಣದಲ್ಲಿರುವ ಗುಡಿಯಲ್ಲಿರುವ ಗುಡಿಯೊಂದರಲ್ಲಿ ಕೊಡಮಣಿತ್ತಾಯ, ಧರ್ಮರಸು, ಕುಕ್ಕಿನಂತಾಯ ದೈವಗಳ ಆರಾಧನೆಯಿದೆ.
ಇನ್ನೊಂದು ಗುಡಿಯಲ್ಲಿ ಹುಲಿಚಾಮುಂಡಿ ದೈವದ ಸಾನಿಧ್ಯವಿದೆ.
ಈ ಗರೋಡಿಯ ಎಡಬದಿಯಲ್ಲಿರುವ ಗುಡಿಯಲ್ಲಿ ಮಹಾಮ್ಮಾಯಿದೇವಿಯ ಆರಾಧನೆಯಿದೆ. ಗರೋಡಿಯ ಆವರಣದಲ್ಲಿ ತುಳಸಿಕಟ್ಟೆ, ಬಲಿಕಲ್ಲುಗಳಿವೆ.
ಎಚ್. ಯುವರಾಜ ನಾಯ್ಕ ಹೆಕ್ಕಡ್ಕ ಗುತ್ತು ಇವರು ಗರೋಡಿಯ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಆಡಳಿತ ಮೊಕ್ತೇಸರರಾಗಿದ್ದಾರೆ. ಉದಯ ಕುಮಾರ್ ಹೆಗ್ಡೆಯವರು ಕಾರ್ಯದರ್ಶಿಯಾಗಿದ್ದಾರೆ.
ಆನಂದ ಪೂಜಾರಿ ಹಾಗೂ ಪ್ರಸಾದ ಪೂಜಾರಿಯವರು ಗರೋಡಿಯ ದರ್ಶನದ ಸ್ಥಳ ಪಾತ್ರಿಗಳಾಗಿದ್ದಾರೆ. ಇವರ ಮೊದಲು ಕುಟ್ಟಿ ಪೂಜಾರಿ, ಶೀನ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆಗಳು ನಡೆಯುತ್ತಿದೆ. ಸುಗ್ಗಿ ತಿಂಗಳ ದ್ವಾದಶಿಯಂದು (ಹುಣ್ಣಿಮೆಗೆ 3 ದಿನ ಮೊದಲು) ಕುಕ್ಕುಡೆ ವಿದ್ಯಾನಂದ ಮುದ್ಯರ ಮನೆಯಿಂದ ಭಂಡಾರ ಬಂದು ರಾತ್ರಿ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ, ದೈವಗಳ ದರ್ಶನ , ಬೈದರ್ಕಳ ನೇಮ, ಜೋಗಿಪುರುಷ ಕೋಲ, ಬೈದರ್ಕಳ ದರ್ಶನ, ಪಿಲ್ಚಂಡಿ ಕೋಲ ನಡೆಯುತ್ತದೆ. ಮರುದಿನ ಮಾಯಂದಾಳ್ ಕೋಲ ನಡೆದ ನಂತರ ಭಂಡಾರ ವಾಪಾಸು ಹೋಗುವುದು.
ಯರ್ಲಪ್ಪಾಡಿ ಗ್ರಾಮದ ಜನರು ಗರೋಡಿಯಲ್ಲಿ ನೀರುಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ, ಕಾಣಿಕೆ ಸೇವೆ, ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ. ಊರಜನರ ವರಡ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚಭರಿಸಲಾಗುತ್ತದೆ. 2022ರಲ್ಲಿ ಗರೋಡಿಯ ಜೀರ್ಣೋದ್ದಾರವಾಗಿದೆ.
ಚುಕುಡ ಪರವ ಕುಕ್ಕುಂದೂರು ಮತ್ತು ಸಂಗಡಿಗರು ಗರೋಡಿಯ ನೃತ್ಯವಿಶಾರದರಾಗಿ, ಚುಕುಡ ಮಡಿವಾಳ ಯರ್ಲಪ್ಪಾಡಿ ಇವರು ಮಡಿವಾಳರಾಗಿ, ಸದಾನಂದ, ಸಂತು ಸೇರಿಗಾರ ಇವರು ವಾದ್ಯದವರಾಗಿ, ದೂಜ ನೀರೆ ಇವರು ಡೋಲಿನವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.
ಮಾಹಿತಿ ಸಂಗ್ರಹಿಸಿದವರು.
ಗರೋಡಿಯ ವಿಳಾಸ:
ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರೋಡಿ, ಯರ್ಲಪಾಡಿ,
ಅಂಚೆ ಮತ್ತು ಗ್ರಾಮ, ಕಾರ್ಕಳ ತಾಲೂಕು.
ಅಂಚೆ ಮತ್ತು ಗ್ರಾಮ, ಕಾರ್ಕಳ ತಾಲೂಕು.
ಆಡಳಿತ ಸಮಿತಿ:
ಉದಯ ಕುಮಾರ್ ಹೆಗ್ಡೆ –9845235430
(ಕಾರ್ಯದರ್ಶಿ)
ಅರ್ಚಕರು:
ಆನಂದ ಪೂಜಾರಿ -9611624250
ಮಾಹಿತಿ ನೀಡಿದವರು:
ದಿನೇಶ್ ಪೂಜಾರಿ, ನಡಿಬೆಟ್ಟು
ಮಾಹಿತಿ ಸಂಗ್ರಹಿಸಿದವರು:
ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ
ಹರೀಶ್ ಎಮ್. ಕೆ. ಕಲ್ಮಾಡಿ
ಮಾಹಿತಿ ಸಂಗ್ರಹಿಸಿದ ದಿನಾಂಕ:
03.06.2025