Baidashree

Shree Kodamanittaya Brahma Baidarkala Garodi, Didimbiri

ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರೋಡಿ, ದಿಡಿಂಬಿರಿ

ಉಡುಪಿಯಿಂದ ಕಾರ್ಕಳ ಮೂಲಕ ಬಜಗೋಳಿಯಲ್ಲಿ ಎಡಕ್ಕೆ ತಿರುಗಿ ಸುಮಾರು 1 ಕಿ. ಮೀ. ಸಾಗಿದರೆ ಈ ಗರೋಡಿ ಇದೆ.
Didimbiri-Garadi-1
Didimbiri-Garadi-2
ಗರೋಡಿಯು ಪೂರ್ವಾಭಿಮುಖವಾಗಿದ್ದು ಪೂರ್ವ ದಿಕ್ಕಿಗೆ ಒಂದು ದ್ವಾರವಿದೆ.
Didimbiri-Garadi-3
ಗರೋಡಿಯ ಒಳಗೆ ಮರದ ಮಣೆ ಮಂಚದ ಮೇಲೆ ಮರದ ಗುಂಡವಿದ್ದು ನಾಗಬ್ರಹ್ಮರ ಪಂಚ ಲೋಹದ ಮೂರ್ತಿ ಇದೆ. ಗುಂಡದ ಎಡ ಬಲದಲ್ಲಿ ಕೋಟಿ-ಚೆನ್ನಯರ ಮರದ ಮೂರ್ತಿಗಳಿವೆ.
Didimbiri-Garadi-4
ಗರೋಡಿಗೆ ತಾಗಿ ಕೊಂಡಿರುವ ಪಕ್ಕದ ಗುಡಿಯಲ್ಲಿ ಮಾಯಂದಾಲ್ ಮತ್ತು ಮಗುವಿನ ಮರದ ಮೂರ್ತಿಗಳಿವೆ.
Didimbiri-Garadi-5
ಗರೋಡಿಯ ಪಕ್ಕದಲ್ಲಿ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ ದೈವಗಳ ಸಾನಿದ್ಯವಿದ್ದು ಎದುರಿಗೆ ದ್ವಜಸ್ಥಂಭವಿದೆ.
Didimbiri-Garadi-6

ಕೃಷ್ಣಪ್ಪ ಪೂಜಾರಿ

ಕೃಷ್ಣಪ್ಪ ಪೂಜಾರಿ (72 ವರ್ಷ)ಯವರು ಇಲ್ಲಿಯ ಬೈದೇರುಗಳ ಪೂಪೂಜನೆಯವರಾಗಿದ್ದಾರೆ. ಇವರಿಗೆ ಮೊದಲು ಅಚ್ಚು ಪೂಜಾರಿ, ಸಾಧು ಪೂಜಾರಿಯವರು ಇಲ್ಲಿಯ ಪೂ ಪೂಜನೆಯವರಾಗಿದ್ದರು.
ಶೈಲೇಶ್ ಜೈನ್ ರವರು ಇಲ್ಲಿಯ ಮೊಕ್ತೇಸರರಾಗಿದ್ದಾರೆ.
ಗರೋಡಿಯ ಉಸ್ತುವಾರಿಗೆ ಮಿತ್ತ ಪಕ್ಕೊಟ್ಟು ಬರ್ಕೆ, ತಿರ್ತ ಪಕ್ಕೊಟ್ಟು ಬರ್ಕೆ, ಮೈಲೊಟ್ಟು ಬರ್ಕೆ, ಓಂಟ್ಯಡ್ಕ ಬರ್ಕೆಗಳೆಂಬ ನಾಲ್ಕು ಬರ್ಕೆಗಳು, ಹಾಗೂ ರಾಮೇರ ಗುತ್ತು, ಅಪ್ಪಾಯಿ ಗುತ್ತು, ಪೆಂರ್ಗಾಡಿ ಗುತ್ತು, ಹಾಗೂ ಹುಮ್ಮ ಗುತ್ತುಗಳೆಂಬ ನಾಲ್ಕು ಗುತ್ತುಗಳಿವೆ.
ಗರೋಡಿಯಲ್ಲಿ ನಿತ್ಯ ಪೂಜೆ, ಸೋಣ ತಿಂಗಳಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ದೀಪಾವಳಿ ಪೂಜೆ, ಕದಿರುಕಟ್ಟುವ ಕ್ರಮಗಳಿವೆ.
ಪ್ರತೀವರ್ಷ ಮಾರ್ಚ ತಿಂಗಳಲ್ಲಿ ಒಂದು ದಿನ ಭಂಡಾರ ಬಂದು ದ್ವಜಾರೋಹಣವಾಗಿ ಬಲಿ, ಧರ್ಮರಸು ಕೋಲ ನಡೆಯುತ್ತದೆ. ಮರುದಿನ ಕೊಡಮಣಿತ್ತಾಯ ಕುಕ್ಕಿನಂತಾಯ, ಕೋಲ, ಬಲಿ ನಡೆಯುತ್ತದೆ. ಅದರ ಮೂರನೇ ದಿನ ಬೈದರ್ಕಳ ನೇಮ, ಮಾಯಂದಾಲ್, ಕಲ್ಕುಡ, ಕಲ್ಲುರ್ಟಿ, ತೂಕತ್ತೇರಿ ಕೋಲ ನಡೆದು ಮರುದಿನ ದ್ವಜಾವರೋಣದ ನಂತರ ಭಂಡಾರ ವಾಪಾಸು ಹೋಗುವುದು.
ಮಾಳ, ನಲ್ಲೂರು, ಮುಡಾರು, ಈದ್, ನಾರಾವಿಯ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮೊದಲಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ ಮೊದಲಾದ ಹರಕೆಯ ಸೇವೆಗಳಲ್ಲಿ ಜನ ಭಾಗವಹಿಸುತ್ತಾರೆ. ಊರ ಪರವೂರ ಜನರ ವರಡ ವಂತಿಗೆ, ಕಾಣಿಕೆ ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಗಂಗಯ್ಯ ಪರವ, ರಾಜು ಪರವ ಮುಡಾರು ಮತ್ತು ಸಂಘಡಿಗರು ಈ ಗರೋಡಿಯ ನೃತ್ಯ ವಿಶಾರದರಾಗಿ, ಸುಧಾ ಮಡಿವಾಳ ಮುಡಾರು ಮಡಿವಾಳರಾಗಿ, ರಮೇಶ್ ದೇವಾಡಿಗ ನಲ್ಲೂರು ವಾದ್ಯದವರಾಗಿ, ಬ್ಯಾಂಡನವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.
Didimbiri-Garadi-7

ಮಾಹಿತಿ ಸಂಗ್ರಹಿಸಿದವರು

ಗರೋಡಿಯ ವಿಳಾಸ:

ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರೋಡಿ ದಿಡಿಂಬಿರಿ,
ಕಾರ್ಕಳ ತಾಲೂಕು,
ಉಡುಪಿ

ಪೂ ಪೂಜನೆಯವರು:

ಕೃಷ್ಣಪ್ಪ ಪೂಜಾರಿ – 9008663055

ಮಾಹಿತಿ ನೀಡಿದವರು:

ಕೃಷ್ಣಪ್ಪ ಪೂಜಾರಿ

ಮಾಹಿತಿ ಸಂಗ್ರಹಿಸಿದವರು:

ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

16-07-2025