ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಹೋಮಲ್ಕೆ ಬೆಳುವಾಯಿ
ಉಡುಪಿಯಿಂದ ಕಾರ್ಕಳ ತಾಲೂಕು ತಲುಪಿ, ಕಾರ್ಕಳ ಮೂಡಬಿದಿರೆ ಹೆದ್ದಾರಿಯಲ್ಲಿ ಸುಮಾರು 8 ಕಿ. ಮೀ. ದೂರದಲ್ಲಿದೆ ಈ ಗರೋಡಿ.
ಗರೊಡಿಯು ಪಶ್ಚಿಮಾಭಿಮುಖವಾದ ಒಂದು ದ್ವಾರವನ್ನು ಹೊಂದಿದೆ. ಮೂಲ ಗರೊಡಿಯಾದ ನಡ್ಡೋಡಿ ಬೆಳುವಾಯಿ ಗರೋಡಿಯಿಂದ ಕಲಹವೊಂದರ ಕಾರಣ ವಿಭಜನೆಗೊಂಡು ಗ್ರಾಮಸ್ಥರು 1980ರಲ್ಲಿ ಈಗ ಗರೋಡಿ ಇರುವ ಜಾಗದಲ್ಲಿ ಚಪ್ಪರ ಹಾಕಿ ನೇಮ ನಡೆಸಿದರು. 1981-82ರಲ್ಲಿಯೂ ಅದೇ ರೀತಿ ಚಪ್ಪರ ಹಾಕಿ ನೇಮ ನಡೆಸಿದರು. 1982ರಲ್ಲಿ ಪ್ರಶ್ನೆ ಹಾಕಿ ಗರೋಡಿಗೆ ಪಂಚಾಂಗ ಹಾಕಲಾಯಿತು. 1983ರಲ್ಲಿ ಹಾಕಿದ ಪಂಚಾಂಗದ ಮೇಲೆ ಚಪ್ಪರ ಹಾಕಿ ನೇಮೋತ್ಸವ ನಡೆಸಲಾಯಿತು. ನಂತರ 1984ರ ಫೆಬ್ರವರಿ 21ನೇ ತಾರೀಖಿನಂದು ಹೊಸ ಗರೋಡಿಯ ನಿರ್ಮಾಣ ಮುಕ್ತಾಯವಾಯಿತು.
ಗರೋಡಿಯ ಒಳಗೆ ಮಣೆ ಮಂಚದ ಮೇಲೆ ಮರದ ಗುಂಡ ಇದ್ದು, ಗುಂಡದಲ್ಲಿ ನಾಗ ಬ್ರಹ್ಮರ ಕಂಚಿನ ಮೂರ್ತಿ ಇದೆ. ಮಣೆ ಮಂಚದಲ್ಲಿ ಕೋಟಿ-ಚೆನ್ನಯರ ಮತ್ತು ಕುಜುಂಬಕಾಂಜವರ ಆರಾಧನೆಯಿದೆ.
ಗರೋಡಿಯ ಪಕ್ಕದಲ್ಲಿರುವ ಗುಡಿಯಲ್ಲಿ ಮಾಯಂದಾಲ್ ಹಾಗೂ ಮಗುವಿನ ಮರದ ಮೂರ್ತಿಗಳಿಗೆ ಪೂಜೆ ಸಲ್ಲುತ್ತದೆ.
ಗರೋಡಿಯ ಪಕ್ಕದಲ್ಲಿರುವ ಇನ್ನೊಂದು ಗುಡಿಯಲ್ಲಿ ಧರ್ಮರಸು, ಕೊಡಮಣಿತ್ತಾಯ ಹಾಗೂ ಕುಕ್ಕಿನಂತಾಯ ದೈವಗಳ ಸಾನಿಧ್ಯವಿದೆ. ಮಣೆ ಮಂಚದಲ್ಲಿ ಈ ದೈವಗಳ ಕಂಚಿನ ಮೂರ್ತಿಗಳಿವೆ. ಗರೋಡಿಯ ಆವರಣದಲ್ಲಿ ಅಜೆಕಾಯಿ ಕಲ್ಲುಗಳಿವೆ.
ಪೂವಪ್ಪ ಪೂಜಾರಿ(75 ವರ್ಷ) ಇವರು ಇಲ್ಲಿಯ ಪೂ ಪೂಜನೆಯವರಾಗಿದ್ದಾರೆ. ಇವರಿಗೆ ಮೊದಲು ವೀರಪ್ಪ ಪೂಜಾರಿಯವರುಸ ಈ ಸೇವೆ ಮಾಡಿದ್ದರು.
ಗರೋಡಿಯ ಉಸ್ತುವಾರಿಗೆ ಆಡಳಿತ ಸಮಿತಿಯಿದ್ದು, ಹರ್ಷವರ್ಮ ಹೆಗ್ಗಡೆಯವರು ಅಧ್ಯಕ್ಷರಾಗಿಯೂ, ಸುರೇಶ್ ಭಟ್ ಕಾರ್ಯದರ್ಶಿಯಾಗಿ. ರಾಮ ಪ್ರಸಾದ್ ಜೊತೆ ಕಾರ್ಯದರ್ಶಿಯಾಗಿ, ಅಣ್ಣಿ ಬಿ ಪೂಜಾರಿ ಕೋಶಾಧಿಕಾರಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಗರೋಡಿಯಲ್ಲಿ ಸಂಕ್ರಾಂತಿ ಪೂಜೆ, ದೀಪಾವಳಿ ಪೂಜೆ, ಕದಿರು ಕಟ್ಟುವ ಕ್ರಮಗಳಿವೆ. ಪ್ರತೀ ವರ್ಷ ಮಾಯಿ ತಿಂಗಳು(ಫೆಬ್ರವರಿಯಲ್ಲಿ)9 ದಿನ ಹೋಗುವಾಗ ಒಂದು ದಿನ ಭಂಡಾರ ಬಂದು, ದ್ವಜಾರೋಹಣದ ನಂತರ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ ದರ್ಶನ, ಬಲಿ (7 ಸುತ್ತು) ಅನ್ನ ಸಂತರ್ಪಣೆ ನಡೆಯುತ್ತದೆ.
ಎರಡನೇ ದಿನ ಬೈದೇರುಗಳ ನೇಮ, ಅನ್ನ ಸಂತರ್ಪಣೆ, ಬೈದೇರುಗಳ ಹಾಗೂ ಕೊಡಮಣಿತ್ತಾಯ, ಕುಕ್ಕಿನಂತಾಯ ದೈವಗಳ ದರ್ಶನ ಬಲಿ, (9 ಸುತ್ತು) ನಡೆಯುತ್ತದೆ. ಬೆಳುವಾಯಿ ನಾರಾಯಣಗುರು ಸಂಥಕ್ಕೆ ನೇಮದಲ್ಲಿ ಹೋಗಿ ಬೈದೇರುಗಳ ಕಟ್ಟೆ ಪೂಜೆ ಮಾಡಿ ಬರುವ ಕ್ರಮವಿದೆ.
ಮೂರನೇ ದಿನ ಸಂಜೆ ಮಾಯಂದಾಲ್ ಕೋಲದ ನಂತರ ದ್ವಜಾವರೋಹಣ ಮಾಡಿ ಭಂಡಾರ ವಾಪಾಸು ಹೋಗುವುದು.
ಬೆಳುವಾಯಿಯ ಜನ ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಗರೋಡಿಯಲ್ಲಿ ಕಂಚಿಲ್ ಸೇವೆ, ಮದುವೆ ಮೊದಲಾದ ಶುಭ ಸಂದರ್ಭಗಳಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರ ಜನರ ವರಡ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಗರೋಡಿಗೆ ಸುಮಾರು 40ಸೆಂಟ್ಸ ಜಾಗವಿದೆ.
ಉಗ್ಗಪ್ಪ ಪರವ ಕೆರ್ವಾಸೆ ಇವರು ಕೊಡಮಣಿತ್ತಾಯ ಹಾಗೂ ಕುಕ್ಕಿನಂತಾಯ ದೈವಗಳ ನೃತ್ಯವಿಶಾರದರಾಗಿ, ಗಂಗಯ್ಯ ಪರವ ಮತ್ತು ಸಂಘಡಿಗರು ಬೈದೇರುಗಳ ನೇಮದ ನೃತ್ಯವಿಶಾರದರಾಗಿ ಸಂಜೀವ ಸಾಲ್ಯಾನ ಮತ್ತು ಸಂತೋಷ್ ಸಾಲ್ಯನ್ ಹಾಅಗೂ ತಿಮ್ಮ ಮಡಿವಾಳ, ಮಡಿವಾಳರಾಗಿ ಸುಂದರ ಸೇರಿಗಾರರು ವಾದ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.
ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು
ಗರೋಡಿಯ ವಿಳಾಸ:
ಶ್ರೀ ಬ್ರಹ್ಮ ಬೈದೇರುಗಳ ಗರೋಡಿ, ಹೋಮಲ್ಕೆ ಬೆಳುವಾಯಿ,
ಬೆಳುವಾಯಿ ಅಂಚೆ,
ಮೂಡಬಿದಿರೆ ತಾಲೂಕು
ದ.ಕ. ಜಿಲ್ಲೆ 574213
ಬೆಳುವಾಯಿ ಅಂಚೆ,
ಮೂಡಬಿದಿರೆ ತಾಲೂಕು
ದ.ಕ. ಜಿಲ್ಲೆ 574213
ಮಾಹಿತಿ ನೀಡಿದವರು:
ಅಣ್ಣಿ ಬಿ. ಪೂಜಾರಿ – 9686918852
ರಾಮ ಪ್ರಸಾದ್ – 9448725068
ಮಾಹಿತಿ ಸಂಗ್ರಹಿಸಿದವರು:
ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ
ಹರೀಶ್ ಎಮ್. ಕೆ. ಕಲ್ಮಾಡಿ
ಮಾಹಿತಿ ಸಂಗ್ರಹಿಸಿದ ದಿನಾಂಕ:
09.12.2025