ಶ್ರೀ ಬ್ರಹ್ಮ ಬೈದೆರ್ಕಳ ಸಂದುದಾಂತಿ ಗರೋಡಿ, ಎರ್ಮಾಳ್ ತೆಂಕ
ಉಡುಪಿಯಿಂದ ಮಂಗಳೂರು ಕಡೆಗೆ ರಾಷ್ಟ್ರೀಯ ಹೆದ್ದಾರಿ ಎನ್.ಎಚ್.66ರಲ್ಲಿ ಎರ್ಮಾಳಿನಲ್ಲಿ ಹೆದ್ದಾರಿಯ ಎಡಭಾಗದಲ್ಲಿದೆ.
ಈ ಗರೋಡಿಯು ಆಯದ ಗರೋಡಿಯಾಗಿದೆ. ಈ ಗರೋಡಿಗೆ ಎರಡು ದ್ವಾರಗಳಿದ್ದು ಮುಖ್ಯ ದ್ವಾರವು ಪಶ್ಚಿಮಕ್ಕೂ ಇನ್ನೊಂದು ದ್ವಾರವು ಪೂರ್ವ ದಿಕ್ಕಿಗೂ ಇದೆ.
ಕೋಟಿಚೆನ್ನಯರ ಪಾಡ್ದನದಲ್ಲಿ ಉಲ್ಲೇಖಿಸಲ್ಪಟ್ಟಂತೆ 6 ಕಂಬಗಳೊಂದಿಗೆ ಸಂದು ಇಲ್ಲದ(ಸಂದುದಾಂತಿ) ಗರೊಡಿಯೆಂದು ಹೆಸರಾದ 18ನೇ ಶತಮಾನದ ಪ್ರಾಚೀನ ಗರಡಿ ಇದು.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ಬೆಳ್ಳಿಮುಚ್ಚಿದ ಪಂಚಲೋಹದ ಬ್ರಹ್ಮರ ಮೂರ್ತಿ ಇದೆ. ಗುಂಡದ ಮೇಲಂತಸ್ಥಿನಲ್ಲಿ ಗಾಳಿ ದೇವರ ಪಂಚಲೋಹದ ಮೂರ್ತಿಇದೆ. ಗುಂಡದ ಬಲಭಾಗದಲ್ಲಿ ಒಕ್ಕುಬಲ್ಲಾಳರು ಕುದುರೆಯ ಮೇಲೆ ಕುಳಿತ ಮರದ ಪಾಪೆ ಹಾಗೂ ಕುಜುಂಬ ಕಾಂಜವರ ನಿಂತ ಮರದ ಪಾಪೆ ಇದೆ. ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರ ಆಳೆತ್ತರದ ಮರದ ಪಾಪೆ ಇದೆ.
ಬ್ರಹ್ಮ ಗುಡಿಯ ಹೊರಗೆ ಜೋಗಿ ಪುರುಷರ ಮರದ ಪಾಪೆ, ಮಾಯಂದಾಲ್ ಹಾಗೂ ಮಗುವಿನ ಮರದ ಪಾಪೆಗಳಿವೆ. ಗರೋಡಿಯ ಒಳಗೆ ಗುರು ಕಂಬಕ್ಕೂ ಪೂಜೆ ಸಲ್ಲುತ್ತದೆ.
ಗರೋಡಿಯ ಹೊರಾಣಗಣದ ಗುಡಿಯಲ್ಲಿ ಮಣೆ ಮಂಚ ಹಾಗೂ ಪಿಲಿಚಂಡಿ ದೈವದ ಪ್ರತೀಕವಾಗಿ ಮರದ ಹುಲಿಯ ಪಾಪೆಯಿದೆ. ಹೊರಗೆ ಹುಲಿ ಬಂಡಿಯೂ ಇದೆ. ಅಯ್ಯಕಲ್ಲು ಹಾಗೂ ತುಳಸೀ ಕಟ್ಟೆಗಳೂ ಇವೆ. ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ನಾಗಬನವಿದೆ.
ವೈ. ಜಯಕರ ಪೂಜಾರಿ
ವೈ ಜಯಕರ ಪೂಜಾರಿ(87ವರ್ಷ)ಯವರು ಗರಡಿಮನೆ ಪೂ ಪೂಜನೆ ಪೂಜಾರಿಯವರಾಗಿದ್ದಾರೆ. ಹಿಂದೆ ಜಯಕರ ಪೂಜಾರಿಯವರ ಹಿರಿಯರಾದ ಗೋವಿಂದ ಪೂಜಾರಿ, ಚಿಂಗ ಪೂಜಾರಿ ಇವರುಗಳು ಪೂ ಪೂಜನೆ ಸೇವೆ ಮಾಡಿದ್ದರು.
ಗರೋಡಿಗೆ ಆಡಳಿತ ಸಮಿತಿಯಿದ್ದು ಸುಧೀರ್ ಕುಮಾರ್ ಇವರು ಅದ್ಯಕ್ಷರಾಗಿದ್ದಾರೆ. ಬೈದ್ಯರ ದರ್ಶನಕ್ಕೆ ಈ ಗರೋಡಿಯ ಸ್ಥಳಪಾತ್ರಿ ಸದ್ಯಕ್ಕೆ ಇಲ್ಲ. ಹಿಂದೆ ಹಿರಿಯರಾದ ಲಚ್ಚು ಪೂಜಾರಿಯವರು ಇಲ್ಲಿಯ ಸ್ಥಳಪಾತ್ರಿಗಳಾಗಿದ್ದರು.
ಗರೋಡಿಗೆ ಆಡಳಿತ ಸಮಿತಿಯಿದ್ದು ಸುಧೀರ್ ಕುಮಾರ್ ಇವರು ಅದ್ಯಕ್ಷರಾಗಿದ್ದಾರೆ. ಬೈದ್ಯರ ದರ್ಶನಕ್ಕೆ ಈ ಗರೋಡಿಯ ಸ್ಥಳಪಾತ್ರಿ ಸದ್ಯಕ್ಕೆ ಇಲ್ಲ. ಹಿಂದೆ ಹಿರಿಯರಾದ ಲಚ್ಚು ಪೂಜಾರಿಯವರು ಇಲ್ಲಿಯ ಸ್ಥಳಪಾತ್ರಿಗಳಾಗಿದ್ದರು.
ಗರೋಡಿಯಲ್ಲಿ ಸಂಕ್ರಾಂತಿ ಪೂಜೆ, ಚೌತಿ ಪೂಜೆ, ದೀಪಾವಳಿ ಪೂಜೆ, ಕದಿರು ಕಟ್ಟುವುದು, ಹೂವಿನ ಪೂಜೆಗಳು ನಡೆಯುತ್ತವೆ. ಏಪ್ರಿಲ್, ಮೇ, ತಿಂಗಳಲ್ಲಿ ಅಗೆಲು ಸೇವೆ, ಬೈದೇರುಗಳ ನೇಮೋತ್ಸವ, ಜೋಗಿಪುರುಷ, ಮಾಯಂದಾಲ್ ಹಾಗೂ ಪಿಲ್ಚಂಡಿ ದೈವಗಳಿಗೆ ಕೋಲ ಸೇವೆ ನಡೆಯುತ್ತದೆ
ತೆಂಕ ಎರ್ಮಾಳಿನ ಜನ ಈ ಗರೋಡಿಯ ಕೂಡುಕಟ್ಟಿಗೆ ಸೇರಿದವರಾಗಿದ್ದು, ನೀರುಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರನರ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
2022ನೇ ಇಸವಿಯಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿದ್ದು ಹಿಂದೆ 1936ರಲ್ಲಿ ಜೀರ್ಣೋದ್ಧಾರವಾಗಿತ್ತು.
ಗರೋಡಿಯ ವಿಳಾಸ:
ಶ್ರೀ ಬ್ರಹ್ಮ ಬೈದರ್ಕಳ ಸಂದು ದಾಂತಿ ಗರೋಡಿ,
ಎರ್ಮಾಳ್ ತೆಂಕ, ಎರ್ಮಾಳ್ ಅಂಚೆ,
ಕಾಪು ತಾಲೂಕು, ಉಡುಪಿ 574119.
ಎರ್ಮಾಳ್ ತೆಂಕ, ಎರ್ಮಾಳ್ ಅಂಚೆ,
ಕಾಪು ತಾಲೂಕು, ಉಡುಪಿ 574119.
ಪೂಪೂಜನೆಯವರು:
ವೈ. ಜಯಕರ ಪೂಜಾರಿ,
ಜಯಚಂದ್ರ ನಿವಾಸ,
ಎರ್ಮಾಳ್ ತೆಂಕ, ಎರ್ಮಾಳ್ ಅಂಚೆ,
ಕಾಪು ತಾಲೂಕು, ಉಡುಪಿ 574119. ಮೊಬೈಲ್: 9900160673,
9900160675, ಪ್ರಶಾಂತ್ (ಮಗ)
ಜಯಚಂದ್ರ ನಿವಾಸ,
ಎರ್ಮಾಳ್ ತೆಂಕ, ಎರ್ಮಾಳ್ ಅಂಚೆ,
ಕಾಪು ತಾಲೂಕು, ಉಡುಪಿ 574119. ಮೊಬೈಲ್: 9900160673,
9900160675, ಪ್ರಶಾಂತ್ (ಮಗ)
ಮಾಹಿತಿ ಸಂಗ್ರಹಿಸಿದ ದಿನಾಂಕ:
26-11-2024