Baidashree

Shree Dharmarasu, Kodamanittaya, Kukkinantaya, Brahma Baidarkala Garodi, Shirlalu Soodi

ಶ್ರೀಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ, ಬ್ರಹ್ಮಬೈದರ್ಕಳ ಗರೋಡಿ, ಶಿರ್ಲಾಳು ಸೂಡಿ

ಉಡುಪಿಯಿಂದ ಹಿರಿಯಡ್ಕ – ಪೆರ್ಡೂರು – ಅಜೆಕಾರು – ಅಂಡಾರ್ ಮಾರ್ಗವಾಗಿ ಶಿರ್ಲಾಲು ತಲುಪಿ ಅಥವಾ ಹಿರಿಯಡ್ಕ – ಬೈಲೂರು – ಹಿರ್ಗಾನ – ಅಜೆಕಾರು – ಅಚಿಡಾರ್ ಮಾರ್ಗವಾಗಿ ಶಿರ್ಲಾಲು ತಲುಪಿ ಶಿರ್ಲಾಲು – ಕೆರ್ವಾಶೆ ಮಾರ್ಗದ ರಸ್ತೆಯ ಬಲ ಬದಿಯಲ್ಲಿದೆ ಈ ಗರೋಡಿ.
Shirlalu-soodi-1
Shirlalu-soodi-2
Shirlalu-soodi-3
1981ರಲ್ಲಿ ಈ ಗರೋಡಿ ಸ್ಥಾಪನೆಯಾಗಿದೆ. ಗರೋಡಿಗೆ ಪೂರ್ವಾಭಿಮುಖ ವಾದ ಒಂದು ದ್ವಾರವಿದೆ.
Shirlalu-soodi-4
ಗರೋಡಿಯ ಒಳಗೆ ಒಂದು ದೊಡ್ಡದಾದ ಮಣೆ ಮಂಚದ ಮೇಲೆ ಬ್ರಹ್ಮರ ಗುಂಡವಿದ್ದು, ಗುಂಡದ ಬಲಭಾಗದಲ್ಲಿ ಕೋಟಿ ಹಾಗೂ ಎಡಭಾಗದಲ್ಲಿ ಚೆನ್ನಯರಿಗೆ ಪೂಜೆ ಸಲ್ಲುತ್ತದೆ. ಈ ಮಣೆ ಮಂಚದ ಕೆಳಗೆ ಜೋಗಿಪುರುಷರ ಮಣೆ ಇದೆ. ಈ ದೊಡ್ಡದಾದ ಮಣೆಮಂಚದ ಎಡಬದಿಯಲ್ಲಿರುವ ಇನ್ನೊಂದು ಮಣೆಮಂಚದಲ್ಲಿ ಕುಜುಂಬ ಕಾಂಜವ ಹಾಗೂ ಅದರ ಪಕ್ಕದಲ್ಲಿರುವ ಇನ್ನೊಂದು ಮಣೆಮಂಚದಲ್ಲಿ ಮಾಯಂದಾಲ್‌ರ ಆರಾಧನೆಯಿದೆ.
Shirlalu-soodi-5
ಗರೋಡಿಯ ಪಕ್ಕದಲ್ಲಿರುವ ಇನ್ನೊಂದು ಗುಡಿಯಲ್ಲಿ ಧರ್ಮರಸು, ಕೊಡಮಣಿತ್ತಾಯ, ಹಾಗೂ ಕುಕ್ಕಿನಂತಾಯ ದೈವಗಳ ಆರಾಧನೆಯಿದೆ. ಗರೋಡಿಯ ಆವರಣದೊಳಗೆ ಅಜೆಕಾಯಿ ಕಲ್ಲುಗಳಿವೆ.
Shirlalu-soodi-6
Shirlalu-soodi-7
ಗರೋಡಿಯ ಆವರಣದ ಹೊರಗೆ ಮಹಮ್ಮಾಯಿ ಕಟ್ಟೆ ಇದೆ. ಅದರ ಪಕ್ಕದಲ್ಲಿರುವ ಮೂರು ಕಟ್ಟೆಗಳಲ್ಲಿ ಕಲ್ಕುಡ, ಕಲ್ಲುರ್ಟಿ, ತೂಕತ್ತರಿ, ಸದೈವಗಳ (ಇರ್ಲ ಮರ್ಲ ಭೂತಗಳು) ಸಾನಿಧ್ಯವಿದೆ.
Shirlalu-soodi-8
ಗರೋಡಿಯ ಪಕ್ಕದಲ್ಲಿ ಶಿರ್ಲಾಲು – ಕೆರ್ವಾಶೆ ರಸ್ತೆಯ ಇನ್ನೊಂದು ಮಗ್ಗುಲಲ್ಲಿರು ಗುಡಿಯಲ್ಲಿ ಮರ್ಲಜುಮಾದಿ, ಬಂಟ ದೈವಗಳ ಸಾನಿಧ್ಯವಿದೆ.
Shirlalu-soodi-9

ನವೀನ್ ಪೂಜಾರಿ

ನವೀನ್ ಪೂಜಾರಿ (38 ವರ್ಷ) ಇವರು ಇಲ್ಲಿಯ ಪೂ ಪೂಜನೆಯವರಾಗಿದ್ದಾರೆ. ಇವರಿಗೆ ಮೊದಲು ದಯಾನಂದ ಪೂಜಾರಿ, ಶೇಖರ ಪೂಜಾರಿ, ಕೊರಗ ಪೂಜಾರಿ, ಮೊದಲಾದ ಹಿರಿಯರು ಈ ಗರೋಡಿಯ ಪೂಪೂಜನೆಯವರಾಗಿ ಸೇವೆ ಮಾಡಿದ್ದರು. ಈ ಗರೋಡಿಯಲ್ಲಿ ಬೈದರ ದರ್ಶನದ ಸ್ಥಳ ಪಾತ್ರಿಗಳಿಲ್ಲ. ದೊಡ್ಡ ಮನೆ ಅನಂತರಾಜ ಪೂವಣಿಯವರು ಈ ಗರೋಡಿಯ ಆಡಳಿತ ಮೊಕ್ತೇಸರರಾಗಿದ್ದಾರೆ.
ಗರೋಡಿಯಲ್ಲಿ ಸಂಕ್ರಾಂತಿ ಪೂಜೆ, ದೀಪಾವಳಿ ಪೂಜೆಗಳು ನಡೆಯುತ್ತವೆ.
ಪ್ರತೀ ವರ್ಷ ಮಾರ್ಚ ತಿಂಗಳ 24ನೇ ತಾರೀಖಿನಂದು ಭಂಡರದ ಮನೆಯಿಂದ ಭಂಡಾರ ಬಂದು ಧರ್ಮರಸು, ಕೊಡಮಣಿತ್ತಾಯ ಹಾಗೂ ಕುಕ್ಕಿನಂತಾಯ ದೈವಗಳ ಕೋಲ, ಮಹಮ್ಮಾಯಿಗೆ ಗೋಂದೋಳು ಸೇವೆ, ಬಸದಿಗೆ ಕೊಡಮಣಿತ್ತಾಯ ಹಾಗೂ ಕುಕ್ಕಿನಂತಾಯ ದೈವಗಳ ಬೇಟಿ ನಡೆಉಇತ್ತದೆ. ಮರುದಿನ ಮಾರ್ಚ 25ನೇ ತಾರೀಖಿನಂದು ಬೈದರ್ಕಳ ನೇಮ, ಬೈದರ ದರ್ಶನ, ಇರ್ಲಭೂತಗಳ ಕೋಲ, ಜೋಗಿಪುರುಷ ದರ್ಶನ, ಮಾಯಂದಾಲ್ ಕೋಲ ನಡೆದು ಮಾರ್ಚ 26ನೇ ತಾರೀಖಿನಂದು ಭಂಡಾರ ವಾಪಾಸು ಹೋಗುವುದು. ಮದ್ಯಾಹ್ನ ಮರ್ಲ ಜುಮಾದಿ ಹಾಗೂ ಬಂಟ ದೈವಗಳ ಕೋಲ ನಡೆಯುತ್ತದೆ.
ಶಿರ್ಲಾಲು-ಸೂಡಿ ಭಾಗದ ಜನರು ಈ ಗರೋಡಿಯಲ್ಲಿ ಕಂಚಿಲ್ ಸೇವೆ, ಮದುವೆ ಮುಂತಾದ ಶುಭಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರ ಜನರ ವರದ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಉಗ್ಗಪ್ಪ ಪರವ ಕೆರ್ವಾಶೆ ಮತ್ತು ಸಂಗಡಿಗರು ಈ ಗರೋಡಿಯ ನೃತ್ಯವಿಶಾರದರಾಗಿ, ಜಯಕರ ಮಡಿವಾಳ ಶಿರ್ಲಾಲು ಮಡಿವಾಳರಾಗಿ, ಶಿವರಾಮ ಶಿರ್ಲಾಲು ಇವರು ವಾದ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.
Shirlalu-soodi-10

ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು

ಗರೋಡಿಯ ವಿಳಾಸ:

ಶ್ರೀ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ ಬ್ರಹ್ಮಬೈದರ್ಕಳ ಗರೋಡಿ, ಶಿರ್ಲಾಲು – ಸೂಡಿ
ಹಾಡಿಯಂಗಡಿ ಅಂಚೆ,
ಕಾರ್ಕಳ ತಾಲೂಕು,
ಉಡುಪಿ 576101

ಗರೋಡಿ ಪೂ ಪೂಜನೆಯವರು:

ನವೀನ್ ಪೂಜಾರಿ – 7760571043

ಮಾಹಿತಿ ನೀಡಿದವರು:

ನವೀನ್ ಪೂಜಾರಿ

ಮಾಹಿತಿ ಸಂಗ್ರಹಿಸಿದವರು:

ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

15-07-2025