Baidashree

Shree Kodamanittaya & Brahma Baidarkala Garodi, Kemmunje Marne Ajekar

ಶ್ರೀ ಕೊಡಮಣಿತ್ತಾಯ ಮತ್ತು ಬ್ರಹ್ಮಬೈದರ್ಕಳ ಗರೋಡಿ, ಕೆಮ್ಮುಂಜೆ ಮರ್ಣೆ ಅಜೆಕಾರು

ಉಡುಪಿಯಿಂದ ಹಿರಿಯಡ್ಕ ಮಾರ್ಗವಾಗಿ ಅಜೆಕಾರು ತಲುಪಿದರೆ, ಅಜೆಕಾರು ಬಸ್ ನಿಲ್ದಾಣದಿಂದ ಸುಮಾರು 250ಮೀ. ದೂರದಲ್ಲಿದೆ ಈ ಗರೋಡಿ.
Kemmunje-Marne-Ajekar-1
Kemmunje-Marne-Ajekar-2
ಗರೋಡಿಯು ಶಿಲಾಮಯವಾಗಿದ್ದು ಮೂಡು ಮುಖವಾಗಿರುವ ಮುಖ್ಯ ದ್ವಾರವಿದೆ.
Kemmunje-Marne-Ajekar-3
ಗರೋಡಿಯ ಬ್ರಹ್ಮಗುಡಿಯ ಒಳಗೆ ಮಣೆ ಮಂಚದ ಮದ್ಯದಲ್ಲಿ ಬ್ರಹ್ಮಗುಂಡದಲ್ಲಿ ನಾಗಬ್ರಹ್ಮರ ಆರಾಧನೆಯಿದೆ. ಗುಂಡದ ಬಲಬದಿಯಲ್ಲಿ ಕೋಟಿ ಹಾಗೂ ಎಡಬದಿಯಲ್ಲಿ ಚೆನ್ನಯರಿಗೆ ಪೂಜೆ ಸಲ್ಲುತ್ತದೆ. ಗುಂಡದ ಎರಡೂ ಬದಿಯಲ್ಲಿ ಕೋಟಿ-ಚೆನ್ನಯರ ಭಾವ ಚಿತ್ರವನ್ನಿಡಲಾಗಿದೆ.
Kemmunje-Marne-Ajekar-4
ಈ ಮಣೆ ಮಂಚದ ಎಡಬದಿಯಲ್ಲಿ ಕುಜುಂಬ ಕಾಂಜವರ ಮಣೆ ಮಂಚ ಹಾಗೂ ಮಾಯಂದಾಲ್ ಮಣೆ ಮಂಚಗಳಿವೆ.
Kemmunje-Marne-Ajekar-5
ಗರೋಡಿಯ ಪಕ್ಕದಲ್ಲಿರುವ ಗುಡಿಯಲ್ಲಿ ಧರ್ಮರಸು, ಕೊಡಮಣಿತ್ತಾಯ ಹಾಗೂ ಕುಕ್ಕಿನಂತಾಯ ದೈವಗಳ ಸಾನಿದ್ಯವಿದೆ. ಈ ಗುಡಿಯ ಎದುರಿಗೆ ದ್ವಜಸ್ಥಂಭವಿದೆ.
Kemmunje-Marne-Ajekar-6
ಪಕ್ಕದಲ್ಲಿ ಬಲಿ ಮೂರ್ತಿ ಕಟ್ಟೆ ಇದೆ.
ನಾರಾಯಣ ಪೂಜಾರಿ (60) ಇವರು ಇಲ್ಲಿಯ ಪೂ ಪೂಜನೆಯವರಾಗಿದ್ದಾರೆ. ಇವರ ಮೊದಲು ಕುಟ್ಟಿ ಪೂಜಾರಿಯವರು ಈ ಸೇವೆ ಮಾಡಿದ್ದರು.
ಈ ಗರೋಡಿಯಲ್ಲಿ ದರ್ಶನದ ಸ್ಥಳ ಪಾತ್ರಿಗಳು ಇಲ್ಲ. ಹಿಂದೆ ನಾರಾಯಣ ಪೂಜಾರಿ ಹಾಗೂ ಶೇಖರ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು. ಕುರ್ಪಾಡಿ ಗುತ್ತು ಶಿವಕುಮಾರ್ ಇವರು ಇಲ್ಲಿಯ ಮೊಕ್ತೇಸರಾಗಿದ್ದಾರೆ.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ದೀಪಾವಳಿ ಪೂಜೆ ಕದಿರು ಕಟ್ಟುವ ಕ್ರಮಗಳಿವೆ. ಫೆಬ್ರವರಿ ತಿಂಗಳ 28ರಂದು ಭಂಡಾರ ಬಂದು ದ್ವಜಾರೋಹಣ ಮಾಡಿ, ರಾತ್ರಿ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ, ದೈವಗಳ ಕೋಲ, ಬೈದರ್ಕಳ ನೇಮ, ಮಾಯಂದಾಲ್ ಕೋಲದ ನಂತರ ಮರುದಿನ ದ್ವಜಾರೋಹಣ ಮಾಡಿ ಭಂಡಾರ ವಾಪಾಸು ಹೋಗುವುದು.
ಅಜೆಕಾರು, ಮರ್ಣೆ ಗ್ರಾಮದ ಜನರು ಈ ಗರೋಡಿಯಲ್ಲಿ ನೀರುಸ್ನಾನ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರ ಜನರ ವರಡ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಸುನಿಲ ಪರವ, ಅಜೆಕಾರು ಹಾಗೂ ಚುಕುಡ ಪರವ ಕುಕ್ಕುಂದೂರು ಮತ್ತು ಸಂಘಡಿಗರು ಈ ಗರೋಡಿಯ ನೃತ್ಯವಿಶಾರದರಾಗಿ ಸೇವೆ ಮಾಡುತ್ತಿದ್ದಾರೆ.
Kemmunje-Marne-Ajekar-7

ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು

ಗರೋಡಿಯ ವಿಳಾಸ:

ಶ್ರೀ ಕೊಡಮಣಿತ್ತಾಯ ಮತ್ತು ಬ್ರಹ್ಮಬೈದರ್ಕಳ ಗರೋಡಿ ಕೆಮ್ಮುಂಜೆ ಅಜೆಕಾರು,
ಮರ್ಣೆ ಗ್ರಾಮ,
ಕಾರ್ಕಳ ತಾಲೂಕು

ಅರ್ಚಕರು:

ನಾರಾಯಣ ಪೂಜಾರಿ

ಮಾಹಿತಿ ನೀಡಿದವರು:

ಶೇಖರ ಪೂಜಾರಿ (ಹಿಂದಿನ ಅರ್ಚಕರಾದ ಕುಟ್ಟಿ ಪೂಜಾರಿಯವರ ಅಳಿಯ)
ಶೇಖರ ಪೂಜಾರಿ (ಅರ್ಚಕರು ಮಿತ್ತೊಟ್ಟು ಗುತ್ತು ಗರೋಡಿ)

ಮಾಹಿತಿ ಸಂಗ್ರಹಿಸಿದವರು:

ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

15-07-2025