Baidashree

Swamilinga, NagaBrahma, Koti Chennaya, Panjurli & Parivara Daivagala Devasthana, Kergalu Garodi

ಸ್ವಾಮಿಲಿಂಗ, ನಾಗಬ್ರಹ್ಮ, ಕೋಟಿಚೆನ್ನಯ, ಪಂಜುರ್ಲಿ, ಹಾಗೂ ಪರಿವಾರ ದೈವಗಳ ದೇವಸ್ಥಾನ ಕೆರ್ಗಾಲು ಗರೋಡಿ.

ಉಡುಪಿಯಿಂದ ಎನ್ಎಚ್ 66 ರಲ್ಲಿ ಕುಂದಾಪುರ – ಮರವಂತೆ – ನಾವುಂದ – ಕಿರಿಮಂಜೇಶ್ವರ ಖಂಬದಕೋಣೆಯ ನಂತರ ಕೆರ್ಗಾಲ್ ನಾಯ್ಕನ ಕಟ್ಟೆಯಲ್ಲಿ ಎಡಕ್ಕೆ ತಿರುಗಿ ಸುಮಾರು 800ಮೀಟರ್ ದೂರ ಸಾಗಿದರೆ ಈ ಗರೋಡಿ ಸಿಗುತ್ತದೆ.
ಗರೋಡಿಯ ಒಳಗೆ ಬ್ರಹ್ಮಗುಡಿಯಲ್ಲಿ ಸಿಮೆಂಟಿನಿಂದ ನಿರ್ಮಿಸಲಾದ ಬ್ರಹ್ಮಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿ ಇದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರು , ಇಬ್ಬರು ಬಂಟರು ಹಾಗೂ ತಾಣನಂದಿಯ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ಪಯ್ಯಬೈದ, ಬಂಟ ಹಾಗೂ ದೇವಿಬೈದೆತಿಯ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಕೆಂಪಿ ನಂದಿಯ ಮರದ ಹಾಗೂ ಕಂಚಿನ ಮೂರ್ತಿ, ಕಾಸಿನಂದಿ, ಬಂಟ ಪಂಜುರ್ಲಿ ಕಂಚಿನ ಮೂರ್ತಿಗಳಿವೆ.
ಬ್ರಹ್ಮಗುಡಿಯ ಎಡಬದಿಯಲ್ಲಿ ಪತ್ತಿನ ಹೈಗುಳಿ, ಪತ್ತಿನ ನಂದಿ, ಕರಿಬೆಟ್ಟಿನ ಹೈಗುಳಿ, ಪಾಂಡಾಳ, ಶ್ರೀಮಗ, ಮೈಂದಾಳಿ, ಮೂಡರ್ತ ಹೈಗುಳಿ, ಕೆಪ್ಪಹೈಗುಳಿ, ದೊಟ್ಟಿಕಾಲಮ್ಮ, ಮೂಡೂರಮ್ಮ, ಅಣ್ಣುಅಣ್ಣಾಹೈಗುಳಿ, ಜೋಗಿ, ಹೀತ್ರಹೈಗುಳಿ, ಮೂರ್ಚಂಡಿ, ಭೂತರಾಯ, ಗ್ರಾಮದ ಭೂತ, ಸ್ಥಳ ಮಾಸ್ತಿಅಮ್ಮ, ಕಂಡಿಕೋಡ್ಲು ಮಾಸ್ತಿ, ಹೊಲ್ಲಹೈಗುಳಿ, ಹೊಲ್ಲತಂಡದ ಹೈಗುಳಿ ದೈವಗಳ ಆರಾಧನೆಯಿದೆ. ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲಬೊಬ್ಬರ್ಯನ ಮರದ ಮೂರ್ತಿ ಇದೆ.
ಗರೋಡಿಯ ಆವರಣದೊಳಗೆ ಇರುವ ಗುಡಿಯೊಂದರಲ್ಲಿ ಪತ್ತಿನ ನಂದಿ, ಮುರನಂದಿ, ಪಂಗಡದಾರರು, ಏಳು ಕನ್ಯೆಯರು, ಸ್ವಾಮಿಲಿಂಗ, ಭೂಮಿಲಿಂಗ, ಪಲ್ಲ ಜಟ್ಟಿ, ಬೇತೆಬೀರ, ರಂಗ ಅಜ್ಜ, ವೆಂಕ್ಟು ಅಜ್ಜ, ನಾಗಪಾಲ ಹೈಗುಳಿ, ನಾಗದೇವರು, ಪತ್ತಿನ ಹೈಗುಳಿ ದೈವಗಳ ಮರದ ಮೂರ್ತಿಗಳಿವೆ.
ಇನ್ನೊಂದು ಗುಡಿಯೊಳಗೆ ಹಿಜಾಣ ಚಿಕ್ಕು, ಹಾಗೂ ಹಿಜಾಣ ಹೈಗುಳಿ ದೈವಗಳ ಮರದ ಮೂರ್ತಿಗಳಿವೆ.
ಇನ್ನೊಂದು ಗುಡಿಯಲ್ಲಿ ಕೆಂಚ ಹೈಗುಳಿ ದೈವದ ಕಲ್ಲು ಇದ.
ಪಕ್ಕದಲ್ಲಿರುವ ಇನ್ನೊಂದು ಗುಡಿಯಲ್ಲಿ ಬಲ್ಲೆ ಹೈಗುಳಿ ದೈವಗಳ ಕಲ್ಲಿನ ಮೂರ್ತಿ ಇದೆ.
ಗರೋಡಿಯ ಅಂಗಳದಲ್ಲಿ ಹೊರಸುತ್ತಿನ ಹೈಗುಳಿ, ಬಲಿಕಲ್ಲು, ತುಳಸಿಕಟ್ಟೆಗಳಿವೆ.
ಗರೋಡಿಗೆ ಪ್ರವೇಶದ್ವಾರದ ಗೋಪುರವಿದ್ದು, ಬದಿಯಲ್ಲಿ ಕಂಬಳದ ಕೋಣ ಹಾಗೂ ಓಡಿಸುವವರ ಸಿಮೆಂಟಿನ ಮೂರ್ತಿಗಳನ್ನು ರಚಿಸಲಾಗಿದೆ.

ಸಂಜೀವ ಪೂಜಾರಿ

ಸಂಜೀವ ಪೂಜಾರಿ (60ವರ್ಷ) ಇವರು 2014ರಿಂದ ಅರ್ಚಕರಾಗಿ ಸೇವೆ ಮಾಡುತ್ತಿದ್ದು ಇವರೊಂದಿಗೆ ಮೋಹನ ಪೂಜಾರಿ, ರಾಮ ಪೂಜಾರಿ, ರಾಜು ಪೂಜಾರಿ, ಹೆರಿಯ ಪೂಜಾರಿ, ರವಿ ಪೂಜಾರಿ, ವಿನೋದ ಪೂಜಾರಿ, ಸಂದೀಪ ಪೂಜಾರಿಯವರೂ ಅರ್ಚಕರಾಗಿ ಸೇವೆ ಮಾಡುತ್ತಿದ್ದಾರೆ. ಇವರ ಮೊದಲು ಇವರ ಹಿರಿಯರಾದ ಚೆನ್ನ ಪೂಜಾರಿ, ವೆಂಕ್ಟು ಪೂಜಾರಿ, ಪುಟ್ಟಯ್ಯ ಪೂಜಾರಿಯವರು ಈ ಗರೋಡಿಯ ಅರ್ಚಕರಾಗಿ ಸೇವೆ ಮಾಡಿದ್ದರು.
ಸುಬ್ಬ ಪೂಜಾರಿಯವರು ಗರೋಡಿಯ ಪಂಜುರ್ಲಿ ದರ್ಶನದ ಸ್ಥಳ ಪಾತ್ರಿಯಾಗಿದ್ದಾರೆ. ಹಿಂದೆ ಹಿರಿಯರಾದ ಮಂಜು ಪೂಜಾರಿಯವರು ದರ್ಶನದ ಸ್ಥಳ ಪಾತ್ರಿಯಾಗಿದ್ದರು.
ಅರ್ಚಕರಾದ ಸಂಜೀವ ಪೂಜಾರಿಯವರೇ ಗರೋಡಿಯ ಮೊಕ್ತೇಸರರಾಗಿದ್ದಾರೆ. ಗರೋಡಿಯ ಉಸ್ತುವಾರಿಗೆ ಆಡಳಿತ ಸಮಿತಿಯಿದ್ದು ಸುರೇಶ ಎಸ್.ಪೂಜಾರಿಯವರು ಗೌರವಾಧ್ಯಕ್ಷರಾಗಿ, ನರಸಿಂಹ ಪೂಜಾರಿ ಪಡಕೋಣೆಯವರು ಅಧ್ಯಕ್ಷರಾಗಿ, ಚಂದ್ರ ಬಿಲ್ಲವ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗರೋಡಿಯಲ್ಲಿ ನಿತ್ಯ ಪೂಜೆ, ಸಂಕ್ರಾಂತಿ ಪೂಜೆ, ಕದಿರುಕಟ್ಟುವುದು, ಫೆಬ್ರವರಿ ತಿಂಗಳಲ್ಲಿ ಒಂದು ದಿನ ಅಗೆಲು ಸೇವೆ ನಡೆದು ಎರಡನೇ ದಿನ ಗುರಿ ಪೂಜೆ ನಡೆಯುತ್ತದೆ. ಜನವರಿ 14ರಂದು ಹಾಲುಹಬ್ಬ ನಡೆಯುತ್ತದೆ. ಎರಡು ವರ್ಷಕ್ಕೊಮ್ಮೆ ಏಪ್ರಿಲ್ ತಿಂಗಳಲ್ಲಿ ಎಲ್ಲಾ ದೈವಗಳಿಗೆ ಕೋಲ ಸೇವೆ ನಡೆಯುತ್ತದೆ. (5ದಿನ) ಪ್ರತೀ ವರ್ಷ ನವೆಂಬರ್ ತಿಂಗಳ 25, 26ನೇ ತಾರೀಖಿನಂದು ಕಂಬಳವು ನಡೆಯುತ್ತದೆ.
ಕೆರ್ಗಾಲ್, ಚುರುಮಕ್ಕಿ, ಖಂಬದಕೋಣೆ, ನಾಗೂರು, ಬೈಂದೂರಿನ ಜನ ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಊರಜನರ ಕಾಲಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಗರೋಡಿಗೆ 12ಸೆಂಟ್ಸ ಜಾಗವಿದ್ದು, ಗರೋಡಿಯು 2002ರಲ್ಲಿ ಜೋರ್ಣೋದ್ಧಾರಗೊಂಡಿದೆ.
ನಾಗ ಪಾಣಾರ ಹಂಪಾರ್ ಈ ಗರೋಡಿಯ ನೃತ್ಯ ವಿಶಾರದರಾಗಿ, ಭಾಸ್ಕರ ದೇವಾಡಿಗ ಉಪ್ಪುಂದ ಇವರು ವಾದ್ಯದವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.
ಗರೋಡಿಗೆ ಸಂಬಂಧಪಟ್ಟು ಶ್ರೀ ರಾಮ ಭಜನಾ ಮಂಡಳಿ, ಕೆರ್ಗಾಲು ಎಂಬ ಭಜನಾ ಮಂಡಳಿಯೊಂದು ಚಟುವಟಿಕೆಯಲ್ಲಿದೆ.

ಗರೋಡಿಯ ವಿಳಾಸ:

ಶ್ರೀ ಸ್ವಾಮಿಲಿಂಗ, ನಾಗಬ್ರಹ್ಮ, ಕೋಟಿಚೆನ್ನಯ,
ಪಂಜುರ್ಲಿ ಹಾಗೂ ಪರಿವಾರ ದೈವಗಳ ದೇವಸ್ಥಾನ,
ಕೆರ್ಗಲ್ ಗರೋಡಿ, ನಾಯ್ಕನಕಟ್ಟೆ,
ಗ್ರಾಮ ಮತ್ತು ಅಂಚೆ ಕೆರ್ಗಲ್, ಬೈಂದೂರು ತಾಲೂಕು.

ಅರ್ಚಕರು ಮತ್ತು ಮೊಕ್ತೇಸರರು:

ಸಂಜೀವ ಪೂಜಾರಿ – 9742564864

ಮಾಹಿತಿ ನೀಡಿದವರು :

ಸಂಜೀವ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

26.02.2025