ಶ್ರೀ ರಾಜನ್ದೈವ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ವಾಲ್ಪಾಡಿ
ಉಡುಪಿಯಿಂದ ಮೂಡುಬಿದರೆ ತಲುಪಿ ಮೂಡಬಿದರೆ – ಶಿರ್ತಾಡಿ ರಸ್ತೆಯಲ್ಲಿ ಸುಮಾರು 3 ಕಿ. ಮೀ. ನಂತರ ಎಡಕ್ಕೆ ತಿರುಗಿ ಸುಮಾರು 3 ಕಿ. ಮೀ. ಒಳಗೆ ಸಾಗಿದರೆ ಈ ಗರೋಡಿ ಸಿಗುವುದು.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದೆ.
ಗರೋಡಿಯ ಒಳಗೆ ಮಣೆಮಂಚದ ಮೇಲೆ ಮರದ ಗುಂಡವಿದೆ. ಮಣೆ ಮಂಚದ ಹಿಂದೆ ಕೋಟಿ-ಚೆನ್ನಯರ ಭಾವ ಚಿತ್ರ ಇಡಲಾಗಿದೆ. ಪಕ್ಕದಲ್ಲಿರುವ ಮಣೆ ಮಂಚದಲ್ಲಿ ಮಾಯಂದಾಲ್ಗೆ ಪೂಜೆ ಇದೆ.
ಗರೋಡಿಯ ಪಕ್ಕದಲ್ಲಿ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ ಗುಡಿ, ಎದುರಿಗೆ ದ್ವಜಸ್ಥಂಭ ಹಾಗೂ ಧರ್ಮರಸು ಮಾಡಗಳಿವೆ.
ಚೆಲುವಯ್ಯ ಪೂಜಾರಿ (65 ವರ್ಷ) ಇವರು ಇಲ್ಲಿಯ ಮೊಕ್ತೇಸರರಾಗಿದ್ದಾರೆ. ಪ್ರಶಾಂತ್ ಪೂಜಾರಿಯವರು ಇಲ್ಲಿಯ ಆಡಳಿತ ಸಮಿತಿಯ ಅಧ್ಯಕ್ಷರಾಗಿದ್ದಾರೆ.
ಗರೋಡಿಯಲ್ಲಿ ಪ್ರತೀವರ್ಷ ಫೆಬ್ರವರಿಯ ಹುಣ್ಣಿಮೆಯಂದು ಭಂಡಾರ ಬಂದು ದ್ವಜಾರೋಹಣ ಮಾಡಿ ಧರ್ಮರಸು ನೇಮ ನಡೆಯುತ್ತದೆ. ಎರಡನೇ ದಿನ ಕುಕ್ಕಿನಂತಾಯ ಮತ್ತು ಕೊಡಮಣಿತ್ತಾಯ ದೈವಗಳ ನೇಮ, ಮೂರನೇ ದಿನ ಬೈದೇರುಗಳ ನೇಮ ಹಾಗೂ ಮಾಯಂದಾಲ್ ನೇಮ ನಡೆದು ದ್ವಜಾವರೋಹಣ ಮಾಡಿ ಭಂಡಾರ ವಾಪಾಸು ಹೋಗವುದು. ನಾಲ್ಕನೇ ದಿನ ಕುಕ್ಕಿನಂತಾಯ ದೈವದ ಕುರಿತಂಬಿಲ ಕೋಲ ನಡೆಯುವುದು.
ವಾಲ್ಪಾಡಿಯ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಊರ ಜನರ ವರಡವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
2006ರಲ್ಲಿ ಗರೋಡಿಯ ಜೀರ್ಣೋದ್ಧಾರಗೊಂಡಿದೆ.
ಯೋಗೀಶ್ ಪರವ, ಪ್ರಶಾಂತ ಪರವ ಕೊಣಾಜೆ ಮತ್ತು ಸಂಘಡಿಗರು ಇಲ್ಲಿಯ ನೃತ್ಯವಿಶಾರದರಾಗಿ, ಹರೀಶ್ ಪೂಜಾರಿ ನಾರಾವಿ ವಾದ್ಯದವರಾಗಿ ಈ ಗರೋಡಿಗೆ ಸೇವೆ ಸಲ್ಲಿಸುತ್ತಿದ್ದಾರೆ.
ಮಾಹಿತಿ ಸಂಗ್ರಹಿಸಿದವರು
ಗರೋಡಿಯ ವಿಳಾಸ:
ಶ್ರೀ ರಾಜನ್ ದೈವ ಮತ್ತು ಶ್ರೀ ಬ್ರಹ್ಮಬೈದರ್ಕಳ ಗರೋಡಿ ವಾಲ್ಪಾಡಿ,
ಮೂಡಬಿದಿರೆ ತಾಲೂಕು,
ದ.ಕ.ಜಿಲ್ಲೆ
ದ.ಕ.ಜಿಲ್ಲೆ
ಪೂ ಪೂಜನೆಯವರು:
ಚೆಲುವಯ್ಯ ಪೂಜಾರಿ – 8105070296
ಮಾಹಿತಿ ನೀಡಿದವರು:
ಚೆಲುವಯ್ಯ ಪೂಜಾರಿ
ಮಾಹಿತಿ ಸಂಗ್ರಹಿಸಿದವರು:
ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ
ಗೋಪಾಲ ಪೂಜಾರಿ ಇರ್ವತ್ತೂರು
ಹರೀಶ್ ಎಮ್. ಕೆ. ಕಲ್ಮಾಡಿ
ಗೋಪಾಲ ಪೂಜಾರಿ ಇರ್ವತ್ತೂರು
ಮಾಹಿತಿ ಸಂಗ್ರಹಿಸಿದ ದಿನಾಂಕ:
09-12-2025