Baidashree

Yenagudde – Shree Brahma Baiderugala Garodi, Yenagudde Katapadi

ಶ್ರೀ ಬ್ರಹ್ಮಬೈದೇರುಗಳ ಗರೋಡಿ, ಏಣಗುಡ್ಡೆ ಕಟಪಾಡಿ

ಉಡುಪಿ ಕಟಪಾಡಿ ಪೇಟೆಯಲ್ಲಿ ಬಲಕ್ಕೆ ಮಟ್ಟು ರಸ್ತೆಯಲ್ಲಿ ಸುಮಾರು ಎರಡು ಫರ್ಲಾಂಗು ದೂರದಲ್ಲಿ ಬಲಕ್ಕೆ ಸಿಗುವ ಗರೋಡಿಯ ಸ್ವಾಗತ ಗೋಪುರದ ಮೂಲಕ ಸುಮಾರು 350 ಮೀಟರ್ ಮುಂದೆ ಹೋದರೆ ಗರೋಡಿ ಸಿಗುವುದು.
ಉಡುಪಿಯ ಕಟಪಾಡಿಯ ಏಣಗುಡ್ಡೆ ಗರೋಡಿಯು ಶಿಲಾಮಯವಾಗಿದ್ದು ಕೊಡಿ ಕಂಬ ಹೊಂದಿದ ಅತಿ ಪುರಾತನ ಗರೋಡಿ. ಇದು ಆಯದ ಗರೋಡಿಯಾಗಿದ್ದು 2022ರಲ್ಲಿ ಷಡಾಧಾರ ಪ್ರತಿಷ್ಠೆಗೊಂಡಿದೆ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ, ಕಟಪಾಡಿ ಬಳ್ಳಾಲರ ಬೀಡಿಗೆ ಬರುವ ಈರ್ವರು ಸುಂದರ ಕಾಯದ ಯುವಕರು ಇಲ್ಲಿ ತಮಗೆ ಗರೋಡಿ ಕಟ್ಟಲು ಜಾಗ ಕೊಡಿ ಎಂದು ಕೇಳುತ್ತಾರೆ. ಬಳ್ಳಾಲರು ಇಲ್ಲಿ ಗರೋಡಿ ಕಟ್ಟಲು ಜಾಗವಿಲ್ಲ ಎಂದಾಗ ಯುವಕರು ಅಲ್ಲಿಯೇ ಇದ್ದ ಬೃಹತ್ ಕಲ್ಲಿನ ಮರಿಗೆಯನ್ನು (ದಂಬೆ) ಕವುಚಿ ಹಾಕಿ ಮುಂದೆ ಅಗ್ರಹಾರದ ಕಡೆಗೆ ಸಾಗುತ್ತಾರೆ. ಅವರು ಅತ್ತ ಹೋಗುತ್ತಲೆ ಬಳ್ಳಾಲರು ಹೊಟ್ಟೆ ನೋವಿನಿಂದ ನರಳುತ್ತಾರೆ. ಅವರಿಬ್ಬರು ಯಾರೋ ಮಹಾತ್ಮರೇ ಇರಬೇಕು. ತನ್ನಿಂದ ಅಪಚಾರವಾಯಿತು ಎಂದು ಅವರನ್ನು ವಾಪಾಸು ಕರೆಸಲು ಆಳುಗಳನ್ನು ಕಳುಹಿಸುತ್ತಾರೆ. ಆ ಯುವಕರು ಕೋಟಿ ಚೆನ್ನಯ್ಯರಾಗಿದ್ದರು. ಅವರು ನಾವು ಒಮ್ಮೆ ಮುಂದಡಿ ಇಟ್ಟವರು ಹಿಂದೆ ಬರುವುದಿಲ್ಲ ಎನ್ನುತ್ತಾರೆ. ಅಲ್ಲಿಗೆ ಬಂದ ಬಳ್ಳಾಲರು ಕೈ ಮುಗಿಯುತ್ತಾ ಕೋಟಿ ಚೆನ್ನಯ್ಯರು ಬಯಸಿದ ಜಾಗದಲ್ಲೇ ಗರೋಡಿ ಕಟ್ಟಲು ಸಮ್ಮತಿಸುತ್ತಾರೆ. ಅಗ್ರಹಾರದಲ್ಲಿ ಎಸೆದ ತೆಂಗಿನಕಾಯಿ ಈಗ ಗರೋಡಿ ಇರುವಲ್ಲಿ ಬಂದು ಬೀಳುತ್ತದೆ ಅದೊಂದು ನೀರು ಇದ್ದ ಹೊಂಡ ಪ್ರದೇಶವಾಗಿತ್ತು. ಬಳ್ಳಾಲರೇ ಇಲ್ಲಿ ಗರೋಡಿ ಕಟ್ಟಿಸಿ ಕೊಟ್ಟರು ಎಂಬ ಇತಿಹಾಸ ಚಾಲ್ತಿಯಲ್ಲಿದೆ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ನಾಗಬ್ರಹ್ಮರ ಮೂರ್ತಿ ಹಾಗು ಗಾಳಿ ದೇವರು- ಆಂಜನೇಯ ಮೂರ್ತಿ ಇದೆ.
ಗುಂಡದ ಎಡಕ್ಕೆ ಕೋಟಿ ಚೆನ್ನಯರ ಹಾಗು ಇಬ್ಬರು ಮಕ್ಕಳ ಮರದ ಪಾಪೆ ಇದೆ.
ಗುಂಡದ ಬಲಕ್ಕೆ ಕುಜುಂಬ ಕಾಂಜವ ಮತ್ತು ಮಗು, ಕುದುರೆಯ ಮೇಲೆ ಕುಳಿತ ಒಕ್ಕು ಬಳ್ಳಾಲರ ಮರದ ಪಾಪೆಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಭಾಗದ ಮಣೆಮಂಚದಲ್ಲಿ ಹುಲಿ ಚಾಮುಂಡಿ ದೈವದ ಕಂಚಿನ ಮುಖ, ಎಡಭಾಗದಲ್ಲಿ ಜೋಗಿ ಪುರುಷರ ಮರದ ಪಾಪೆ ಹಾಗು ಮಣೆಮಂಚದಲ್ಲಿ ಪಂಜುರ್ಲಿ ದೈವದ ಕಂಚಿನ ಮುಖಗಳಿವೆ.
ಬ್ರಹ್ಮಗುಡಿಯ ಎದುರಿನಲ್ಲಿ ಗುರುಕಂಬಕ್ಕೆ ಪೂಜೆಯಿದೆ.
ಗರೊಡಿಯ ಹೊರಗೆ ಆವರಣದೊಳಗೆ ಮಾಯಂದಾಳ್ ಗುಡಿಯಲ್ಲಿ ಮಾಯಂದಾಳ್, ಮಗು, ಮಗುವನ್ನು ನೋಡಿಕೊಳ್ಳುವ ಪರಿಚಾರಿಕೆಯವಳ ಹಾಗು ಕೊಳತ ಜುಮಾದಿಯ ಮರದ ಮೂರ್ತಿಗಳಿವೆ.
ಇನ್ನೊಂದು ಗುಡಿಯಲ್ಲಿ ಕಾಂತಾರ ಜುಮಾದಿ ಮತ್ತು ಬಂಟ ಸಾನಿದ್ಯವಿದೆ.
ಗರೋಡಿಯ ಆವರಣದೊಳಗೆ ಬೊಬ್ಬರ್ಯ ಗುಡಿ, ಅಯ್ಯಕಲ್ಲು ತೀರ್ಥಬಾವಿ, ಕೊಡಿಕಂಬ ಹಾಗು ತುಳಸಿ ಕಟ್ಟೆಗಳಿವೆ.

ಇಂಪು ಪೂಜಾರಿ

ಗರೋಡಿಮನೆಯ ಇಂಪು ಪೂಜಾರಿಯವರು ಪೂಪೂಜನೆಯವರಾಗಿ ಸೇವೆ ಮಾಡುತ್ತಿದ್ದಾರೆ. ಇವರಿಗೆ ಮೊದಲು ನಾಗಪ್ಪ ಪೂಜಾರಿ (ಇಂಪು ಪೂಜಾರಿಯವರ ಅಣ್ಣ), ಗೋಪಾಲ ಪೂಜಾರಿ (ನಾಗಪ್ಪ ಪೂಜಾರಿಯವರ ಮಾವ), ಅನಂತ ಪೂಜಾರಿ (ಗೋಪಾಲ ಪೂಜಾರಿಯವರ ಮಾವ), ಕೊರಗ ಪೂಜಾರಿ (ಅನಂತ ಪೂಜಾರಿಯವರ ಅಣ್ಣ) ಈ ಗರೋಡಿಯ ಪೂಪೂಜನೆಯವರಾಗಿ ಸೇವೆ ಮಾಡಿದ್ದರು.
ಈಗ ಈ ಗರೋಡಿಯಲ್ಲಿ ಬೈದರ ದರ್ಶನಕ್ಕೆ ಸ್ಥಳ ಪಾತ್ರಿಗಳು ಇಲ್ಲ. ಹಿಂದೆ ಏಣಗುಡ್ಡೆ ಗುರುವ ಪೂಜಾರಿ, ಏಣಗುಡ್ಡೆ ಜಾರು ಪೂಜಾರಿ ಇವರುಗಳು ಗರೋಡಿಯ ಸ್ಥಳ ಪಾತ್ರಿಗಳಾಗಿ ಸೇವೆ ಮಾಡಿದ್ದರು. ಹಿಂದೆ ಇಲ್ಲಿ ಕೊಡಿ ತಿಂಗಳಿನಲ್ಲಿ ಹೊಸಭತ್ತ ಅನ್ನ ನೈವೇದ್ಯ ಅಗೆಲು ದಿನ ದೈವ ಕಾಂತಾರ ಜುಮಾದಿ ದರುಶನದಲ್ಲಿ ಬೈದೇರುಗಳ ಪಾತ್ರಿಗಳನ್ನು ಆಯ್ಕೆ ಮಾಡುವ ಪದ್ಧತಿ ಇತ್ತು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಊರು ಸೇರಿ ಗಜ್ಜೆಯಿ ಸೇವೆಗಳು ಜರಗುತ್ತವೆ. ಅಗೆಲ್ ಅನ್ನ ನೈವೇದ್ಯ ಸೇವೆ, ಕಾಲಾವಧಿ ನೇಮೋತ್ಸವ, ಕಟ್ಟುಕಟ್ಟಳೆ ನೇಮೋತ್ಸವ ಇದೆ. ವಿಶೇಷವಾಗಿ ಊರು ಸೇರಿ ವಂತಿಗೆ ಹಾಕಿ ‘ಊರೊಟ್ಟು ನೇಮ’ ಯುವಕರ ವಂತಿಗೆಯ ‘ಜವನರ‍್ನ ನೇಮ’ ಆಗುತ್ತದೆ. ಮಾಯಿ ತಿಂಗಳಲ್ಲಿ ಕೋಲ ಕಳೆದ ಬಳಿಕ ‘ಗಾಡಿಯವರ ನೇಮ’ಜರಗುತ್ತದೆ. ಮಾಯಿ ತಿಂಗಳ ಅಗೆಲ್ ಅನ್ನ ನೈವೇದ್ಯ ಸೇವೆ ಗರೋಡಿ ಮನೆಯವರಿಂದ, ಬೈದರುಗಳ ನೇಮ ಊರವರ ವಂತಿಗೆಯಿಂದ, ಮಾಯಂದಾಳ ಕೋಲ ಗರೋಡಿ ಮನೆಯವರಿಂದ. ಜುಮಾದಿ,ಕಾಂತಾರ ಜುಮಾದಿ,ಹುಲಿ ಚಾಮುಂಡಿ, ಬೊಬ್ಬರ್ಯ ಕೋಲ ಊರವರ ವಂತಿಗೆಯಿಂದ ನಡೆಯುತ್ತದೆ.
ಏಣಗುಡ್ಡೆ ಗರೋಡಿಯ ಕೂಡುಕಟ್ಟಿನಲ್ಲಿ ಕಟಪಾಡಿ, ಅಂಬಾಡಿ, ಕೋಟೆ, ಪಡು ಏಣುಗುಡ್ಡೆ, ಮೂಡು ಏಣಗುಡ್ಡೆ, ಮಟ್ಟು ಕೊಪ್ಪಲ ಹೀಗೆ ಆರು ಮಾಗಣೆಗಳಿವೆ. (ಗ್ರಾಮಗಳು- ಏಣಗುಡ್ಡೆ, ಮೂಡುಬೆಟ್ಟು, ಕೋಟೆ, ಮಟ್ಟು, ಉದ್ಯಾವರ ಪಡು.) ಕೂಡುಕಟ್ಟಿಗೆ ಸೇರಿದ ಜನರು ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭಗಳಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ, ಹೆರಿಗೆ ನಂತರ ತಿಂಗೊಳ್ ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಪಾಲ್ಗೊಳ್ಳುತ್ತಾರೆ.
ಈಗಿನ ಪೂಪೂಜನೆಯವರ ಮಾಹಿತಿಯಂತೆ 1964, 2006, 2022 ರಲ್ಲಿ ಗರೋಡಿಯ ಜೀರ್ಣೋದ್ಧಾರದ ನಡೆದಿವೆ.
ಬೈದೇರುಗಳ ನೇಮೋತ್ಸವದಲ್ಲಿ ಮೂವರು ನೇಮ ಕಟ್ಟುತ್ತಾರೆ. ಇಬ್ಬರು ಬೈದೇರುಗಳಾದರೆ ಮೂರನೆಯವರು ಯಾರು ಎಂಬ ಕುತೂಹಲದ ಪ್ರಶ್ನೆ ಎಲ್ಲರದ್ದು. ಬಹುತೇಕರು ‘ಕುಜುಂಬ ಕಾಂಜವ’ಅಂತ ಹೇಳುತ್ತಾರೆ. ಈ ಕುಜುಂಬ ಕಾಂಜವ ಯಾರು ಅಂತ ಸ್ಪಷ್ಟ ಚಿತ್ರಣ ನೀಡಿದವರು ಏಣಗುಡ್ಡೆ ಗರೋಡಿಯ ಅರ್ಚಕ ಇಂಪು ಪೂಜಾರಿಯವರು.
ಕೋಟಿಚೆನ್ನಯ್ಯರ ಅವಸಾನವಾಗಿ ಅವರು ದೈವತ್ವಕ್ಕೇರಿದ ನಂತರ ಅವರ ವೀರಗಾಥೆಯನ್ನು, ಮಹಿಮೆಯನ್ನು ಪಾರ್ದನದ ರೂಪದಲ್ಲಿ ಎಣ್ಮೂರು ಬಳ್ಳಾಲರ ಚಾವಡಿಯಲ್ಲಿ ಹೇಳಲು ಆರಂಭಿಸಿದವನು ಪಂಬದ ರಾಮು. ಹರಿವಾಣದಲ್ಲಿ ಒಂದು ಸೂಜಿಯನ್ನು ನೆಟ್ಟು ಅದರ ಮೇಲೆ ಒಂದು ಹರಿವಾಣ ನಿಲ್ಲಿಸಿ ಒಂಟಿಕಾಲಲ್ಲಿ ನಿಂತು ಪಾರ್ದನ ಹೇಳಿ ಬೈದೇರುಗಳನ್ನು ಸಾಕ್ಷಾತ್ಕರಿಸಿ ಕೊಂಡವನು ಪಂಬದ ರಾಮುವಂತೆ. ಪಂಬದ ರಾಮು ಹೇಳುವಂತೆ ಕೋಟಿ ಚೆನ್ನಯರು ತಾವು ಅತೀವ ಪ್ರೀತಿಯಿಂದ ಉತ್ತು ಬೆಳೆಸಿದ ಪೈರಿನ ಫಲವನ್ನು ಉಣ್ಣುವ ಮೊದಲೇ ಅವರು ಊರು ಬಿಡಬೇಕಾಯಿತು. ಇದರಿಂದ ನೊಂದ ಅವರು ಈ ಜಾಗದಲ್ಲಿ ಮುಂದೆ ಯಾರೇ ಏನೇ ಬೆಳೆದರೂ ಅದರ ಫಲ ಅವರಿಗೆ ದಕ್ಕಲಾರದು ಅಂತ ಶಾಪ ಕೊಟ್ಟಿದ್ದರಂತೆ. ಕುಜುಂಬ ಕಾಂಜವ ಎಲ್ಕಟೆ ಕಾಂಜವ ಹಾಗೂ ಬೀರಗ ಕಾಂಜವೆದಿಯ ಪುತ್ರ. ದುರಹಂಕಾರಿ. ಕೋಟಿ ಚೆನ್ನಯರ ಶಾಪಕ್ಕೆ ತುತ್ತಾದ ಜಾಗವೆಂದು ತಿಳಿದಿದ್ದರೂ ಅದರಲ್ಲಿ ಬೇಸಾಯ ಮಾಡಲು ಹೊರಡುತ್ತಾನೆ . ‘ಏನಾಗುತ್ತದೆ ನೋಡಿಯೇ ಬಿಡೋಣ’ಎಂಬ ಉದ್ಧಟತನ. ಆ ಕ್ಷಣದಿಂದ ಆತನ ತಾಯಿ ಬೀರಗ ಕಾಂಜವೇದಿ ಮಣ್ಣಿನ ಮಡಕೆ, ಕಟ್ಟಿಗೆ, ಅಕ್ಕಿ, ವಸ್ತ್ರ ಇವೆಲ್ಲವೂ ಪದೇ ಪದೇ ಕಣ್ಣಿಗೆ ಗೋಚರಿಸುವಂತಹ ಭ್ರಮೆಗೆ ಒಳಗಾಗುತ್ತಾಳೆ. ಕನಸೂ ಬೀಳ ತೊಡಗುತ್ತದೆ. ಇದು ಅಪಶಕುನ ಎಂದರಿತ ತಾಯಿ ‘ಮಗನಲ್ಲಿ ಏನೋ ಕೆಡುಕಾಗಲಿಕ್ಕಿದೆ. ನೀನು ಆ ಜಾಗದಲ್ಲಿ ಬೇಸಾಯ ಮಾಡಬೇಡ’ಎಂದು ಗೋಗರೆಯುತ್ತಾರೆ. ತಾಯಿ ಮಾತನ್ನು ಅಪಹಾಸ್ಯ ಮಾಡುವ ಕುಜುಂಬ ಕಾಂಜವ ಗಡಿಗೆಯನ್ನು ಒಲೆಗೆ ಇಟ್ಟರಾಯಿತು. ಕಟ್ಟಿಗೆಯಲ್ಲಿ ಬೆಂಕಿ ಮಾಡಿದರಾಯಿತು. ಅಕ್ಕಿಯಿಂದ ಅನ್ನ ಬೇಯಿಸಿದರಾಯಿತು. ಬಟ್ಟೆ ಹೊದಿಕೆಯಾಯಿತು ಅಂತ ಬೇಸಾಯವನ್ನು ಮಾಡಿಯೇ ಬಿಡುತ್ತಾನೆ. ಇದು ಆತ ಮಾಡಿದ ಮೊದಲ ತಪ್ಪು ! ಇಷ್ಟು ಮಾತ್ರವಲ್ಲ ಪಂಬದ ರಾಮು ಎಣ್ಮೂರ ಬಳ್ಳಾಲರ ಚಾವಡಿಗೆ ಬೀರ (ಪಾರ್ದನ) ಕರೆಯಲು ಹೋಗುವಾಗ ತಡೆದು ನಿಲ್ಲಿಸಿ ವ್ಯಂಗ್ಯ ಕುಹಕದ ನಗೆ ಬೀರುತ್ತಾ ‘ಏ ರಾಮು ನನ್ನನ್ನೂ ಸೇರಿಸಿ ನೀನು ಬೀರ ಕರೆಯಬೇಕು’ಎನ್ನುವನು. ಇದು ಕುಜುಂಬ ಮಾಡಿದ ಎರಡನೇ ಅಪರಾಧ. ಕೋಟಿಚೆನ್ನಯ್ಯರ ಮಹಿಮೆ ಅರಿತಿದ್ದ ಪಂಬದ ರಾಮು ಹೇಳಿದರಂತೆ ‘ಆಯಿತಲ್ಲ ಎರಡು ಹೋಗಿ ಮೂರು! ನಿನ್ನನ್ನೂ ಸೇರಿಸಿ ಕರೆಯುತ್ತೇನೆ ಬಿಡು’. ಅದರಂತೆ ಈ ಮಾತು ಸತ್ಯವಾಯಿತು. ಕುಜುಂಬ ಕಾಂಜವ ಗದ್ದೆಯಲ್ಲಿ ಪೈರು ಬೆಳೆಯುವಷ್ಟರಲ್ಲೇ ಉದರ ಬೇನೆಯ ಕಾಯಿಲೆಗೆ ಬಿದ್ದ. ಇನ್ನೇನು ಕೊನೆಯ ಕ್ಷಣ ಬಂತು ಅನ್ನುವಾಗ ಆತನ ತಾಯಿ ಬೀರಗ ಕಾಂಜವೆದಿ ಓಡಿ ಹೋಗಿ ಆತ ಬೆಳೆದ ಭತ್ತವನ್ನು ತಂದು ಅರೆದು ಸೋಸಿ ಗಂಜಿ ಮಾಡಿ ಕುಡಿಸುವಷ್ಟರಲ್ಲಿ ಪ್ರಾಣಬಿಟ್ಟು ಕೋಟಿಚೆನ್ನಯ್ಯರನ್ನು ಸೇರಿಕೊಂಡ! ತಪ್ಪಿಗೆ ತಕ್ಕ ಪ್ರಾಯಶ್ಚಿತ್ತ ಎಂಬಂತೆ ಇದೀಗ ಕುಜುಂಬ ಕಾಂಜವ ಬೈದರನ್ನು ನೇಮೋತ್ಸವದಲ್ಲಿ ಹಿಂಬಾಲಿಸುತ್ತಿದ್ದಾನೆ. ಆತನಿಗೆ ಯಾವುದೇ ಪ್ರಾಶಸ್ತ್ಯವಿಲ್ಲ. ಇದು ಒಂಥರಾ ಶಿಕ್ಷೆಯೇ ಆಗಿದೆ. ಇದು ಕುಜುಂಬ ಕಾಂಜವನ ದುರಂತ ಕಥೆ.
ಇಂಪು ಪೂಜಾರಿಯವರು ಬೋಜು ಪೂಜಾರ್ತಿ ಹಾಗೂ ತೋಮ ಪೂಜಾರಿ ಅವರ ಪುತ್ರ. ಬಿಬ್ರಿ ಪೂಜಾರ್ತಿ ಇವರ ಚಿಕ್ಕಮ್ಮ- ಪೂವ ಪೂಜಾರಿ ಚಿಕ್ಕಪ್ಪ. ಭೋಜು ಪೂಜಾರ್ತಿ ಹಾಗೂ ಬಿಬ್ರಿ ಪೂಜಾರ್ತಿಯವರು ಹೇಳುತ್ತಿದ್ದ ಪಾರ್ದನವನ್ನು ಕೇಳಿಸಿಕೊಂಡ ಇಂಪು ಪೂಜಾರಿಯವರು ಈ ಕುಜುಂಬ ಕಾಂಜವ ಕಥೆಯನ್ನು ಬಿಚ್ಚಿಟ್ಟಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದೇರುಗಳ ಗರೋಡಿ,
ಏಣಗುಡ್ಡೆ
ಕಟಪಾಡಿ ಅಂಚೆ,
ಉಡುಪಿ – 574105

ಮಾಹಿತಿ ಸಂಗ್ರಹಿಸಿದ ದಿನಾಂಕ:

28-11-2024

Shree Brahma Baidarkala Garodi, Bolje-Udyavara

ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಬೊಳ್ಜೆ-ಉದ್ಯಾವರ

ಉಡುಪಿಯಿಂದ ಉದ್ಯಾವರ ಬೈಪಾಸಿನ ಹತ್ತಿರ ಎಡಕ್ಕೆ ಬೊಳ್ಜೆಗೆ ಹೋಗುವ ರಸ್ತೆಯಲ್ಲಿ ಸುಮಾರು 1.5 ಕಿ.ಮೀ. ಸಾಗಿದರೆ ಬೊಳ್ಜೆ ಗರೋಡಿ ಸಿಗುತ್ತದೆ. ಸುಮಾರು 350 ವರ್ಷಗಳ ಇತಿಹಾಸವಿರುವ ಉಡುಪಿ ಉದ್ಯಾವರ ಬೊಳ್ಜೆಯ ಶ್ರೀ ಬ್ರಹ್ಮಬೈದರ್ಕಳ ಗರೋಡಿಯು ಆಯದ ಗರೋಡಿಯಾಗಿದ್ದು 1992-1993ರಲ್ಲಿ ಷಡಾಧಾರ ಪ್ರತಿಷ್ಠೆಗೊಂಡಿದೆ.

ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ, ಕೋಟಿ ಚೆನ್ನಯರು ಕುರ್ಕಾಲಿನಿಂದ ಇಲ್ಲಿಗೆ ಬಂದರೆಂಬ ಪ್ರತೀತಿ. ಮೊದಲು ಅಲೆವೂರು ನೈಲಪಾದೆಗೆ ಬಂದು ವಿಷ್ಣುಮೂರ್ತಿ ದೇವರಲ್ಲಿ ಗರೋಡಿ ಕಟ್ಟಲು ಸ್ಥಳ ಕೇಳುತ್ತಾರೆ. ಆಗ ವಿಷ್ಣುಮೂರ್ತಿ ದೇವರು ಇದು ಸಣ್ಣ ಊರು, ಪಡುಭಾಗದಲ್ಲಿ ದುರ್ಗಾಪರಮೇಶ್ವರೀ ದೇವಿ ಇದ್ದಾಳೆ, ಮಧ್ಯಭಾಗದಲ್ಲಿ ಜುಮಾದಿ ನೆಲೆಸಿದ್ದಾನೆ. ನೀವು ಇನ್ನೂ ಸ್ವಲ್ಪ ಮುಂದೆ ಸಾಗಿದರೆ ನಿಮಗೆ ಅನುಕೂಲವಾದ ಜಾಗ ಸಿಗುವುದು ಎನ್ನುತ್ತಾರೆ. ಅಲ್ಲಿಂದ ಮುಂದೆ ಬಂದು ತೆಂಗಿನಕಾಯಿ ಹಾರಿಸುತ್ತಾರೆ. ಬೊಳ್ಜೆಯ ಈಗ ಗರೋಡಿ ಇರುವ ಜಾಗದಲ್ಲಿ ಚೆಂಡೆ ಮುಳ್ಳಿನ ಬಲ್ಲೆಯೊಂದು ವಿಸ್ಮಯಕರವಾಗಿ ನಡುಗತೊಡಗುತ್ತದೆ. ಇದನ್ನು ಕಂಡ ಇಲ್ಲಿನ ಜನ ದಂಗಾಗಿ ಹೋಗುತ್ತಾರೆ. ಪ್ರಶ್ನಾ ಚಿಂತಕರ ಬಳಿ ತೆರಳುತ್ತಾರೆ. ಕೋಟಿ ಚೆನ್ನಯರು ಇಲ್ಲಿಗೆ ಬಂದ ವಿಚಾರ ತಿಳಿದು ಗರೋಡಿ ಕಟ್ಟಿಸುತ್ತಾರೆ. ಅಲೆವೂರಿನ ನೈಲಪಾದೆಯಲ್ಲಿ ಕೋಟಿ ಚೆನ್ನಯರು – ಬ್ರಹ್ಮರು ಬಂದು ನಿಂತ ಹೆಜ್ಜೆ ಗುರುತಿನ ಕುರುಹುಗಳು ಈಗಲೂ ಇವೆ.
ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ಅಶ್ವಾರೂಢ ನಾಗಬ್ರಹ್ಮರ ಮೂರ್ತಿ, ಮೇಲೆ ಗಾಳಿ ದೇವರಿಗೆ ಗಿಂಡೆ ಇದೆ. ಗುಂಡದ ಎಡಕ್ಕೆ ಬೈದೇರುಗಳ ಹಾಗು ಎರಡು ಮಕ್ಕಳ ಮರದ ಪಾಪೆ, ಮುಹೂರ್ತ ಕಂಬ (ಲಕ್ಷ್ಮಿ ಕಂಬ), ಬಲಕ್ಕೆ ಕುಜುಂಬ ಕಾಂಜವ, ಮಗು, ಕುದುರೆ ಮೇಲೆ ಒಕ್ಕು ಬಲ್ಲಾಳ ಹಾಗೂ ಸಾರಥಿ, ಮೂಲ ಮೈಸಂದಾಯ ದೈವಗಳಿಗೆ ಪೂಜೆ ಸಲ್ಲುತ್ತದೆ. ಬ್ರಹ್ಮಗುಡಿಯ ಹೊರಗೆ ವಾಲಗ ಚಾವಡಿಯಲ್ಲಿ ಚಿಕ್ಕಮ್ಮ ದೇವಿ, ಹಾಯ್ಗುಳಿ, ಧೂಮಾವತಿ-ಬಂಟ, ಪಂಜುರ್ಲಿ, ಜೋಗಿಪುರುಷ, ಹುಲಿಚಾಮುಂಡಿ-ಬಂಟ, ಕೊಳತ ಧೂಮಾವತಿ, ಮಾಯಂದಾಳ್ ಮತ್ತು ಮಗು, ಗುರುಕಂಬಗಳ ಆರಾಧನೆಯಿದೆ.
ಗರೋಡಿ ಆವರಣದಲ್ಲಿ ಹುಲಿಚಾಮುಂಡಿಯ ಬಂಡಿ ಹಾಗು ಬ್ರಹ್ಮಸ್ಥಾನವಿದೆ. ಬ್ರಹ್ಮಸ್ಥಾನದಲ್ಲಿ ನಾಗಬ್ರಹ್ಮ, ಕ್ಷೇತ್ರಪಾಲ, ರಕ್ತೇಶ್ವರಿ, ನಂದಿಕೋಣ, ಬೊಬ್ಬರ್ಯ, ನಾಗಬನ ಸನ್ನಿಧಿಗಳಿವೆ.
ಗರಡಿಯ ಆವರಣದಲ್ಲಿ ಹೆಬ್ಬಾಗಿಲ ಗುಡಿಯಲ್ಲಿ ಮಾಯಂದಾಲ್ ದೈವದ ಮರದ ಪಾಪೆ ಇದೆ. ಗರೋಡಿಗೆ ಸ್ಥಿರ ಆದಾಯವಿಲ್ಲ. ಹರಕೆ, ವಂತಿಗೆ, ಸಹಾಯಧನದಿಂದ ಕಾರ್ಯಕ್ರಮಗಳು ನಡೆಯುತ್ತವೆ.

ಅಶೋಕ್ ಪೂಜಾರಿ

ಗರೋಡಿಮನೆ ಅಶೋಕ್ ಪೂಜಾರಿಯವರು 2006ರಿಂದ ಪೂಪೂಜನೆ ಸೇವೆ ಮಾಡುತಿದ್ದಾರೆ. ಹಿಂದೆ ರಾಮ ಪೂಜಾರಿ (ಅಶೋಕ್ ಪೂಜಾರಿ ಅವರ ತಂದೆ) 1935-2006 ಹಾಗು ಮುದುಕರ ಪೂಜಾರಿ 1935ರ ಮೊದಲು ಈ ಸೇವೆ ಮಾಡುತಿದ್ದರು. ಈಗ ಬೈದೇರುಗಳ ದರ್ಶನದ ಸ್ಥಳ ಪಾತ್ರಿಗಳು ಇಲ್ಲ. ಹಿಂದೆ ಗಿರಿಯ ಪೂಜಾರಿ, ಕುಪ್ಪ ಪೂಜಾರಿ, ರಾಮ ಪೂಜಾರಿ, ಕರಿಯ ಪೂಜಾರಿ, ಜಗನ್ನಾಥ ಪೂಜಾರಿ ಇವರು ಸ್ಥಳ ಪಾತ್ರಿಗಳಾಗಿದ್ದರು. ಪ್ರಕಾಶ್ ಟಿ. ಕೋಟ್ಯಾನ್ ಇವರು ಗರೋಡಿಯ ಆಡಳಿತ ಸಮಿತಿ ಅಧ್ಯಕ್ಷರು.
ಗರೋಡಿಯಲ್ಲಿ ನಿತ್ಯ ದೀಪ ಉರಿಸಲಾಗುತ್ತದೆ. ಮಂಗಳವಾರದ ಪೂಜೆ ಇದೆ. ಚಿಕ್ಕಮ್ಮ ದೇವಿ ಇರುವುದರಿಂದ ಶುಕ್ರವಾರದ ಪೂಜೆಯೂ ಇದೆ. ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಹೂವಿನ ಪೂಜೆ, ಕದಿರುಕಟ್ಟುವುದು, ಸೋಣಾರತಿ ಸೇವೆ, ಊರು ಸೇರಿ ಗಜ್ಜೆಯಿ ಸೇವೆ ಕೊಡಿ ತಿಂಗಳಿನಲ್ಲಿ ಅಗೆಲು ಅನ್ನ ನೈವೇದ್ಯ ಸೇವೆ ಮರುದಿನ ಇಡೀ ರಾತ್ರಿ ಕಾಲಾವಧಿ ನೇಮೋತ್ಸವ ಬಳಿಕ ಮಧ್ಯಾಹ್ನ ಮಾಯಂದಾಲ್ ನೇಮ. ರಾತ್ರಿ ಹುಲಿ ಚಾಮುಂಡಿ ಕೋಲ-ಭೋಗ ಇದೆ. ವಾರ ಕಳೆದು ಪೂಜಾರಿ ಶುದ್ಧ ಕಲಶ ಅಗೆಲ್ ನಡೆಯುತ್ತದೆ. ಮೇ 1 ರಂದು ಅಗೆಲ್ ಅನ್ನನೈವೇದ್ಯ ಸೇವೆ ಪ್ರತಿವರುಷ ಜರಗುತ್ತದೆ. ಮೇ 2ರಂದು ಚಿಕ್ಕಮ್ಮ ದರುಶನವಿದೆ.
ಬೊಳ್ಜೆ ಗರೋಡಿಯ ಕೂಡುಕಟ್ಟಿನಲ್ಲಿ ಸುಮಾರು 200 ಮನೆಗಳಿವೆ. ಉದ್ಯಾವರ, ಬೊಳ್ಜೆ, ಅಲೆವೂರು, ಕೆಳಮಣಿಪುರ, ಭಾಗಶಃ ಕೊರಂಗ್ರಪಾಡಿ ಊರುಗಳು ಕೂಡುಕಟ್ಟಿನಲ್ಲಿವೆ.
ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭಗಳಲ್ಲಿ ಜೋಡು ಕಾಯಿ ಕಾಣಿಕೆ ತೆಗೆದಿಡುವ ಪದ್ಧತಿ, ಹೆರಿಗೆ ನಂತರದ ತಿಂಗೊಳ್ ಮಾಡಿಸುವ ಕ್ರಮ, ಕಲಶ ಕಟ್ಟಿ ತೀರ್ಥಸ್ನಾನ ಮೊದಲಾದ ಹರಕೆಯ ಸೇವೆಗಳಲ್ಲಿ ಊರ ಜನರು ಭಾಗಿಯಾಗುತ್ತಾರೆ.
ಗುರಿಕಾರರು : ನಾಲ್ಕರೆ ಗುರಿಕಾರರು ಪ್ರಭಾಕರ ಪೂಜಾರಿ, ವಿಠಲ ಪೂಜಾರಿ ಮೇಲ್ಮನೆ, ವೇಣುಗೋಪಾಲ ಉದ್ಯಾವರ, ವಿಠಲ ಅಂಚನ್, ಉದ್ಯಾವರ, ದಿವಾಕರ ಪೂಜಾರಿ ಉದ್ಯಾವರ.
ಗರೋಡಿಗೆ ಸಂಬಂಧಪಟ್ಟ 45 ಸೆಂಟ್ಸು ಜಾಗ ದಾಖಲಾತಿಯಲ್ಲಿ ಇದೆ.
ಜೀರ್ಣೋದ್ಧಾರದ ವಿವರ :
1961ರಲ್ಲಿ ಬೈಹುಲ್ಲಿನ ಮಾಡು ತೆಗೆದು ಹಂಚಿನ ಮಾಡು ಮಾಡಿ ಬ್ರಹ್ಮಕಲಶ
1993-94ರಲ್ಲಿ ಹಳೆ ಗರೋಡಿಯನ್ನು ಕಳಚಿ ಹೊಸತು ಗರೋಡಿಯ ನಿರ್ಮಾಣ – ಬ್ರಹ್ಮಕಲಶ
2001ರಲ್ಲಿ ಜೀರ್ಣೋದ್ಧಾರ-ಬ್ರಹ್ಮಕಲಶ
2017ರಲ್ಲಿ ಜೀರ್ಣೋದ್ಧಾರ-ಬ್ರಹ್ಮಕಲಶ
ನೃತ್ಯ ವಿಶಾರದರಾಗಿ ನೀರೆ ಸಂತೋಷ ಪರವ, ಬೊಗ್ಗು ಪರವ ಇವರುಗಳು ಸೇವೆ ಮಾಡುತ್ತಿದ್ದು, ಹಿಂದೆ ಮೆಣ್ಕ ಪರವ, ಪಿಜಿನ ಪರವ, ಅಮ್ಮು ಪರವ, ನರಂಗ ಪರವ, ಚಲ್ಲ ಪರವ, ಬಾಬು ಪರವ ಇವರುಗಳು ಈ ಸೇವೆ ಮಾಡಿದ್ದರು.
ಈ ಗರೋಡಿಯ ಹೆಸರಿನಲ್ಲಿ ಶ್ರೀ ಬ್ರಹ್ಮಬೈದರ್ಕಳ ಯಕ್ಷಗಾನ ಕಲಾ ಸಂಘ, ಬೊಳ್ಜೆ ಉದ್ಯಾವರ 1987ರಲ್ಲಿ ಹುಟ್ಟಿಕೊಂಡಿದ್ದು ಪ್ರತೀ ವರ್ಷ ಇಲ್ಲಿನ ರಜತಾಂಗಣದಲ್ಲಿ ಇವರ ಸೇವೆ ಆಟ ಜರಗುತ್ತದೆ. ಇವರು ಶನಿಕಥೆ (ಪೂಜೆ)ಯನ್ನೂ ತಾಳಮದ್ದಲೆಯಾಗಿ ಆಡುತ್ತಾರೆ.
ಬೊಳ್ಜೆ ಗರೋಡಿಯಲ್ಲಿ “ರಜತಾಂಗಣ” ಸಭಾಂಗಣವಿದೆ.

ಗರೋಡಿಯ ಪೂರ್ಣ ವಿಳಾಸ :

ಶ್ರೀ ಬ್ರಹ್ಮಬೈದರ್ಕಳ ಗರೋಡಿ,
ಬೊಳ್ಜೆ ಉದ್ಯಾವರ ಅಂಚೆ,
ಉಡುಪಿ ಜಿಲ್ಲೆ-574118

ಪೂಪೂಜನೆಯವರ ವಿಳಾಸ :

ಅಶೋಕ್ ಪೂಜಾರಿ,
ಗರೋಡಿಮನೆ,
ಬೊಳ್ಜೆ ಉದ್ಯಾವರ
ದೂರವಾಣಿ : 9901954629

ಆಡಳಿತ ಸಮಿತಿ :

ಪ್ರಕಾಶ್ ಟಿ. ಕೋಟ್ಯಾನ್,
ಅಧ್ಯಕ್ಷರು,
ಬೊಳ್ಜೆ ಗರೋಡಿ ಆಡಳಿತ ಸಮಿತಿ.
ಗಣಪತಿ ದೇವಸ್ಥಾನದ ಹತ್ತಿರ,
ಉದ್ಯಾವರ,
ದೂರವಾಣಿ : 99645 83685

ಮಾಹಿತಿ ಸಂಗ್ರಹಿಸಿದ ದಿನಾಂಕ:

11-07-2022

Balkatta Shree Brahma Baidarkala Garodi-Hirebettu

ಬಾಲ್ಕಟ್ಟ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ -ಹಿರೆಬೆಟ್ಟು

ಉಡುಪಿಯಿಂದ ಮಣಿಪಾಲ, ಪರ್ಕಳ ಮಾರ್ಗವಾಗಿ ಆತ್ರಾಡಿ ತಲುಪಿ ಆತ್ರಾಡಿ ಜಂಕ್ಷನ್ನಿಂದ ಬಲಕ್ಕೆ ತಿರುಗಿ ಸುಮಾರು 5ಕಿ.ಮೀ.ದೂರದಲ್ಲಿ ಹಿರೆಬೆಟ್ಟುವಿನಲ್ಲಿ ಬಲಕ್ಕೆ ತಿರುಗಿ 400 ಮೀಟರ್ ದೂರ ಸಾಗಿದರೆ ಬಾಲ್ಕಟ್ಟ ಗರೋಡಿ ಸಿಗುವುದು.
ಇದು ಪುರಾತನ ಗರೋಡಿ. ಗರೋಡಿಗೆ ಒಂದೇ ದ್ವಾರವಿದ್ದು ಪೂರ್ವಾಭಿಮುಖವಾಗಿದೆ.
ಬ್ರಹ್ಮರ ಗುಡಿಯಲ್ಲಿ ಬ್ರಹ್ಮ ಗುಂಡದ ಒಳಗೆ ಕುದುರೆಯ ಮೇಲೆ ಕುಳಿತ ನಾಗ ಬ್ರಹ್ಮರ ಪಂಚಲೋಹದ ಮೂರ್ತಿ ಇದೆ. ಬ್ರಹ್ಮ ಗುಂಡದ ಬಲದಲ್ಲಿ ಒಕ್ಕು ಬಲ್ಲಾಳ್ ಮತ್ತು ಕುಜುಂಬ ಕಾಂಜವರಿಗೆ ಮಣೆ ಮಂಚದಲ್ಲಿ ಪೂಜೆ ಇದೆ. ಎಡಭಾಗದಲ್ಲಿ ಕೋಟಿಚೆನ್ನಯರಿಗೆ ಮಣೆ ಮಂಚದಲ್ಲಿ ಪೂಜೆ ನಡೆಯುತ್ತದೆ. ಬ್ರಹ್ಮ ಗುಡಿಯ ಹೊರಭಾಗದಲ್ಲಿ ಪಿಲ್ಚಂಡಿ, ಮರ್ಲಜುಮಾದಿ ಜೋಗಿ ಪುರುಷರಿಗೆ ಪೂಜೆ ನಡೆಯುತ್ತದೆ.
ಗರಡಿಯ ಆವರಣದಲ್ಲಿ ಹೆಬ್ಬಾಗಿಲ ಗುಡಿಯಲ್ಲಿ ಮಾಯಂದಾಲ್ ದೈವದ ಮರದ ಪಾಪೆ ಇದೆ. ಗರೋಡಿಗೆ ಸ್ಥಿರ ಆದಾಯವಿಲ್ಲ. ಹರಕೆ, ವಂತಿಗೆ, ಸಹಾಯಧನದಿಂದ ಕಾರ್ಯಕ್ರಮಗಳು ನಡೆಯುತ್ತವೆ.

ಬೊಗ್ರ ಪೂಜಾರಿ

ಬಾಲ್ಕಟ್ಟ ಬೊಗ್ರ ಪೂಜಾರಿಯವರು (80ವರ್ಷ) ಪೂ ಪೂಜನೆಯವರಾಗಿದ್ದು, ಬಾಲ್ಕಟ್ಟ ಬೀಡು ಶಶಿಧರ ಹೆಗ್ಡೆಯವರು ಮೊಕ್ತೇಸರರಾಗಿದ್ದು ಸುಕೇಶ ಪೂಜಾರಿಯವರು ದರ್ಶನ ಸ್ಥಳ ಪಾತ್ರಿಯವರಾಗಿರುತ್ತಾರೆ.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ (ಸೂಡ), ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಊರು ಸೇರಿ ಗಜ್ಜೆಯಿ ಸೇವೆ, ಬೈದೇರುಗಳಿಗೆ ಕಾಲಾವಧಿ ಅಗೆಲು, ನೇಮೋತ್ಸವ ಸೇವೆಗಳು ನಡೆಯುತ್ತವೆ. ಇತರ ದೈವಗಳಾದ ಪಿಲ್ಚಂಡಿ, ಮರ್ಲ್ ಜುಮಾದಿ ಬಂಟ, ಮಾಯಂದಾಲ್, ಜೋಗಿ ಪುರುಷರಿಗೆ ಕೋಲ ನಡೆಯುತ್ತದೆ.
ಈ ಗರೋಡಿಯ ಕೂಡುಕಟ್ಟಿಗೆ ಬಾಲ್ಕಟ್ಟ ಮತ್ತು ಹಿರಬೆಟ್ಟು ಗ್ರಾಮದ ಕೆಲವು ಮನೆಗಳು ಸೇರಿವೆ. ಕೂಡು ಕಟ್ಟಿಗೆ ಸೇರಿದ ಮಂದಿ ಇಲ್ಲಿ ನೀರುಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆಗಳನ್ನು ನೀಡುವ ಸಂಪ್ರದಾಯವಿದೆ. ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ, ಕಲಶ ಕಟ್ಟಿ ಶುದ್ದ ಮಾಡುವ ಕ್ರಮಗಳು ಇವೆ.
ಗರೋಡಿಯ ನೃತ್ಯ ವಿಶಾರದರಾಗಿ ಬೊಗ್ಗು ಪರವ, ವಾದ್ಯದವರಾಗಿ ಪ್ರಭಾಕರ ಸೇರಿಗಾರ್ ಕೊಳಂಬೆ, ಮಡಿವಾಳರಗಿ ರಾಮ ಮಡಿವಾಳ ಬಾಲ್ಕಟ್ಟ, ಇವರು ಸೇವೆ ಸಲ್ಲಿಸುತ್ತಿದ್ದಾರೆ.

ಗರೋಡಿಯ ವಿಳಾಸ:

ಬಾಲ್ಕಟ್ಟ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ,
ಹಿರೆಬೆಟ್ಟು, ಹಿರೆಬೆಟ್ಟು ಗ್ರಾಮ ಮತ್ತು ಅಂಚೆ,
ಉಡುಪಿ ತಾಲೂಕು 576107.

ಪೂ ಪೂಜನೆಯವರ ವಿಳಾಸ:

ಬಾಲ್ಕಟ್ಟ ಬೊಗ್ರಪೂಜಾರಿ,
ಗರಡಿಮನೆ, ಹಿರೆಬೆಟ್ಟು ಗ್ರಾಮ ಮತ್ತು ಅಂಚೆ,
ಉಡುಪಿ ತಾಲೂಕು, 576107.

Shree Brahma Baidarkala Garodi Anjaru

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಅಂಜಾರು

ಈ ಗರೋಡಿಯು ಪೂವಾಭಿಮುಖವಾಗಿದೆ. ಉಡುಪಿ ಹಿರಿಯಡ್ಕ ಮಾರ್ಗವಾಗಿ ಹಿರಿಯಡ್ಕ ನಾರಾಯಣಗುರು ಮಂದಿರದ ಎದುರಿನಲ್ಲಿ ಅಂಜಾರು ರಸ್ತೆಯಲ್ಲಿ ಒಂದೂವರೆ ಕಿ.ಮೀ.ಸಾಗಿದರೆ ಗರೋಡಿ ಸಿಗುತ್ತದೆ.
ಉಡುಪಿಯ ಹಿರಿಯಡ್ಕ ಅಂಜಾರು ಗ್ರಾಮದಲ್ಲಿರುವ ಶ್ರೀ ಬ್ರಹ್ಮಬೈದರ್ಕಳ ಗರೋಡಿಯು ಆಯದ ಗರೋಡಿಯಾಗಿದ್ದು ಇಲ್ಲಿ ಷಡಾಧಾರ. ಪ್ರತಿಷ್ಠೆಯಾಗಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗ ಬ್ರಹ್ಮರು, ಮೇಲಂತಸ್ತಿನಲ್ಲಿ ಗಾಳಿದೇವರು, ಮಧ್ಯದ ಅಂತಸ್ತಿನಲ್ಲಿ, ಪಾರ್ದನದ ಉಲ್ಲೇಖ ಪ್ರಕಾರ ಕಾಂತನ ಬೈದ ಹಾಗು ದೇಯಿ ಬೈದೆತಿಗೆ ಆರಾಧನೆ ಇರಬೇಕು ಎನ್ನುತ್ತಾರೆ ಪೂಪೂಜನೆಯವರು. ಇವರಿಗೆ ಹಿರಿಯರಿಂದ ಈ ಬಗ್ಗೆ ಸರಿಯಾದ ಮಾಹಿತಿ ಸಿಕ್ಕಿಲ್ಲ ಎನ್ನುತ್ತಾರೆ. ಗುಂಡದ ಎಡ ಭಾಗದಲ್ಲಿ ಕೋಟಿ ಚೆನ್ನಯ್ಯರ ಹಾಗು ಇಬ್ಬರು ಬಾಲಕರ ಮರದ ಪಾಪೆ, ಬಲ ಭಾಗದಲ್ಲಿ ಕುಜುಂಬ ಕಾಂಜವ ಹಾಗು  ಒಬ್ಬ ಬಾಲಕನ ಮರದ ಪಾಪೆಗಳಿವ. ದೇಯಿ ಬೈದತಿ ಮಂಚ [ದೇಯಿ ಬೈದತಿಯು  ಪೆಜನಾರ್ ಓಪೆತ್ತಿ ಬ್ರಾಹ್ಮಣ ದಂಪತಿಗಳ ಮನೆಯಲ್ಲಿ ಬೆಳೆದುದರಿಂದ ಈ ಮಂಚವನ್ನು ಬ್ರಾಣೆದಿ ಮಂಚ ಅಂತ ಬಹಳ ಹಿಂದೆ ಕರೆಯುತ್ತಿದ್ದರಂತೆ.] ವಾಲಗ ಚಾವಡಿಯಲ್ಲಿ ಮಾಯಂದಾಳ್ ಮತ್ತು ಮಗು , ಜೋಗಿ ಪುರುಷ ರ ಮರದ ಪಾಪೆ  ಹುಲಿ ಚಾವುಂಡಿ ದೈವದ ಮಣೆಮಂಚಗಳಿವೆ.
ಗರೋಡಿಯ ಆವರಣದಲ್ಲಿ ಮಾರಿ ಶಿವರಾಯ ಗುಡಿ, ಜುಮಾದಿ-ಬಂಟ ಗುಡಿ, ಆಯದ ಕಲ್ಲು, ಅಮ್ನೂರು (ದುರ್ಗಾಪರಮೇಶ್ವರಿ) ಪೀಠಗಳಿವೆ.

ಸುಂದರ ಪೂಜಾರಿ

1999 ರಿಂದ ಸುಂದರ ಪೂಜಾರಿ, ಅಂಜಾರು ಗರೋಡಿಮನೆ.ಅಂಚೆ ಹಿರಿಯಡ್ಕ, (ದೂರವಾಣಿ: 94494 70205) ಇವರು ಗರೋಡಿ ಪೂಪೂಜನೆಯವರಾಗಿ ಸೇವೆ ಮಾಡುತ್ತಿದ್ದಾರೆ. ಇವರಿಗೆ ಮೊದಲು ಅಬ್ಬು ಪೂಜಾರಿ (1959-1999), ಪಿಜಿನ ಪೂಜಾರಿ (1959 ರ ಮೊದಲು) ಈ ಸೇವೆ ಮಾಡುತಿದ್ದರು.
ಕೃಷ್ಣ ಪೂಜಾರಿ ಹಾಗು ರಮೇಶ್ ಪೂಜಾರಿ ಇವರು ಈ ಗರೋಡಿಯ ಬೈದರ ದರ್ಶನದ ಸ್ಥಳ ಪಾತ್ರಿಗಳು.  ಇವರ ಮೊದಲು  ಕಾಂತಪ್ಪ ಪೂಜಾರಿ, ಹೆರಿಯಣ್ಣ ಪೂಜಾರಿ, ಶೇಖರ ಪೂಜಾರಿ ಇವರು ಈ ಸೇವೆ ಮಾಡಿದ್ದರು.
ಸುಭಾಶ್ಚಂದ್ರ ಹೆಗ್ಡೆ, ಅಂಜಾರು ಬೀಡು, ಅಂಚೆ ಹಿರಿಯಡ್ಕ, ಉಡುಪಿ ತಾಲೂಕು & ಜಿಲ್ಲೆ (ದೂರವಾಣಿ-9481447474) ಇವರು ಗರೋಡಿಯ ಮೊಕ್ತೇಸರರು. ಗರೋಡಿಗೆ ಆಡಳಿತ ಸಮಿತಿ ಇದ್ದು, ಶ್ರೀ ಸುಭಾಶ್ಚಂದ್ರ ಹೆಗ್ಡೆ ಅಧ್ಯಕ್ಷರಾಗಿ, ಶ್ರೀ ಕೆ. ಸುಧೀರ್ ಹೆಗ್ಡೆ ಕಾರ್ಯದರ್ಶಿಯಾಗಿದ್ದಾರೆ.
ಈ ಗರೋಡಿಯಲ್ಲಿ ಮಂಗಳವಾರದ ಪೂಜೆ, ಸಂಕ್ರಾತಿ ಪೂಜೆ, ಸೋಣ ತಿಂಗಳಿಡೀ ಸೋಣಾರ್ತಿ ಹೂವಿನ ಪೂಜೆ, ಕದಿರು ಕಟ್ಟುವುದು, ಊರು ಸೇರಿ ಗಜ್ಜೇಯಿ ಸೇವೆ, ಅಗೆಲು ಅನ್ನ ನೈವೇದ್ಯ ಸೇವೆ ಇದೆ. ಕಾಲಾವಧಿ ನೇಮೋತ್ಸವ,ಮಾಯಂದಾಳ ನೇಮ, ಹುಲಿ ಚಾಮುಂಡಿ, ಜುಮಾದಿ- ಬಂಟ ಕೋಲವಿದೆ. ಶಿವರಾಯ ದರ್ಶನ ಸೇವೆ ಇದೆ,ಅಮ್ನೂರ ದರ್ಶನ ಸೇವೆ ಇದೆ, ದೀಪಾವಳಿಗೆ ಕಂಬ ನೆಟ್ಟು ದೀಪ ಉರಿಸಿ ಬಲಿಯೇಂದ್ರ ಪೂಜೆ ಇದೆ.
ಅಂಜಾರು ಗರೋಡಿ ಕೂಡುಕಟ್ಟಿನಲ್ಲಿ ಸುಮಾರು 150 ಮನೆಗಲಿವೆ. ಮೂಡು ಅಂಜಾರು, ಪಡು ಅಂಜಾರು, ಪಾಪುಜೆ, ವಾಂಕಡೆಬೆಟ್ಟು, ಬಜೆ, ಮಾಂಬೆಟ್ಟು, ಪಂಜಡ್ಕ, ಬೈರಂಜೆ, ಕಾಜಾರ ಗುತ್ತು, ಮೂತ್ತೂರು ಇವು ಈ ಗರೋಡಿಯ ಕೂಡುಕಟ್ಟಿಗೆ ಸೇರಿದ ಊರುಗಳು. ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭಗಳಲ್ಲಿ ಜೋಡು ಕಾಯಿ ತೆಗೆದಿಡುವ ಪದ್ಧತಿ, ಹೆರಿಗೆಯ ನಂತರದ ತಿಂಗೊಳ್ ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಈ ಊರಿನ ಮಂದಿ ಭಾಗಿಯಾಗುತ್ತಾರೆ.
1989 ರಲ್ಲಿ ಜೀರ್ಣೋದ್ಧಾರ- ಬ್ರಹ್ಮಕಲಶ ಹಾಗು 2014 ರಲ್ಲಿ ಬ್ರಹ್ಮಕಲಶ ನಡೆದಿದೆ.
ಪಾಡಿಗಾರ ಶೇಖರ ಪರವ, ಉಗ್ಗಪ್ಪ ಪರವ, ಪೂವಪ್ಪ ಪರವ, ಅಣ್ಣಪ್ಪ ಪರವ ಇವರು ಈ ಗರೋಡಿಯ ನೃತ್ಯ ವಿಶಾರದರಾಗಿದ್ದಾರೆ. ಹಿಂದೆ ಮೆಣ್ಕ ಪರವ, ಅಮ್ಮು ಪರವ, ಪಿಜಿನ ಪರವ ಇವರುಗಳು ಈ ಸೇವೆ ಮಾಡಿದ್ದರು.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಅಂಜಾರು,
ಅಂಚೆ- ಹಿರಿಯಡ್ಕ,
ಉಡುಪಿ ತಾಲೂಕು &
ಜಿಲ್ಲೆ -576113M

ಮಾಹಿತಿ ಸಂಗ್ರಹಿಸಿದ ದಿನಾಂಕ:

14-7-2022

Shree Brahma Baidarkala Garodi, Kallugudde

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕಲ್ಲುಗುಡ್ಡೆ

ಉಡುಪಿಯಿಂದ ಕಾಪು ಶಿರ್ವ ರಸ್ತೆಯಲ್ಲಿ ಮಜೂರಿನ ನಂತರ ಎಡಕ್ಕೆ ತಿರುಗಿ ಕಲ್ಲುಗುಡ್ಡೆ ರಸ್ತೆಯಲ್ಲಿ 1.5ಕಿ.ಮೀ. ಸಾಗಿದರೆ ರಸ್ತೆಯ ಎಡಬದಿಯಲ್ಲಿ ಕಲ್ಲುಗುಡ್ಡೆ ಗರೋಡಿ ಇದೆ.
ಇದು ಆಯದ ಗರೋಡಿ. ಮುಖ್ಯ ದ್ವಾರವು ಪೂರ್ವಾಭಿಮುಖವಾಗಿಯೂ, ಇನ್ನೊಂದು ದ್ವಾರವು ಪಶ್ಚಿಮಾಭಿಮುಖವಗಿಯೂ ಇದೆ. ಗರೋಡಿಯು ಷಡಾಧಾರ ಪ್ರತಿಷ್ಠೆಯಲ್ಲಿದೆ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ ಕಲ್ಲುಗುಡ್ಡೆಯ ಅನಂತ ಬಲ್ಲಾಳ ಎಂಬ ಜೈನ ವಂಶಸ್ಥರು ಕೇಂಜದಲ್ಲಿ ಗರೋಡಿ ಕಟ್ಟುವಾಗ ವಿವಾದ ಬಂದುದರಿಂದಾಗಿ ಕಲ್ಲುಗುಡ್ಡೆಯಲ್ಲಿಯೇ ಗರೋಡಿ ಸ್ಥಾಪಿಸಿದರಂತೆ. ಕೇಂಜದಲ್ಲಿ ಜಗಳವಾಡಿ ಬಂದುದರಿಂದ ಬೈದೇರುಗಳು ಅವರ ಬೆನ್ನು ಬಿಡದೆ ಈ ಗರೋಡಿ ಸ್ಥಾಪನೆ ಮಾಡಿಸಿದರೆಂಬುದು ಪ್ರತೀತಿ.
ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ಅಶ್ವಾರೂಢ ಬ್ರಹ್ಮರ ಬೆಳ್ಳಿ ಮುಚ್ಚಿದ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ಥಿನಲ್ಲಿ ಗಾಳಿ ದೇವರ ಆರಾಧನೆ ಇದೆ. ಗುಂಡದ ಎಡಭಾಗದಲ್ಲಿ ಉಯ್ಯಾಲೆಯಲ್ಲಿ ಕೋಟಿಚೆನ್ನಯರಿಗೂ ಬಲಬಾಗದಲ್ಲಿ ಮಣೆ ಮಂಚದಲ್ಲಿ ಒಕ್ಕು ಬಲ್ಲಾಳ ಹಾಗೂ ಕುಜುಂಬ ಕಾಂಜವರಿಗೂ ಪೂಜೆ ಸಲ್ಲುತ್ತದೆ. ಬ್ರಹ್ಮ ಗುಡಿಯ ಹೊರಗೆ ಎಡಭಾಗದಲ್ಲಿ ಮಣೆ ಮಂಚದಲ್ಲಿ ಜಾರಂದಾಯ ಹಾಗೂ ಕೊಡಮಣಿತ್ತಾಯ ದೈವಗಳಿಗೂ ಬಲಭಾಗದಲ್ಲಿ ಮಣೆ ಮಂಚದಲ್ಲಿ ಜೋಗಿ ಪುರುಷ, ಪಿಲ್ಚಂಡಿ ದೈವಗಳಿಗೂ ಪೂಜೆ ನಡೆಯುತ್ತದೆ. ಗುಂಡದ ಗರೋಡಿಯ ಒಳಗೆ ಬಡಗು ದಿಕ್ಕಿನಲ್ಲಿ ಗುರು ಕಂಬವಿದೆ.
ಗರೋಡಿಯ ಹೊರಾಂಗಣದಲ್ಲಿ ಗುಡಿಯೊಳಗೆ ಮಾಯಂದಾಲ್ ಹಾಗೂ ಮಗುವಿನ ಮರದ ಪಾಪೆ ಇದೆ. ಅಯ್ಯಕಲ್ಲು , ತುಳಸೀಕಟ್ಟೆ, ಹಾಗೂ ದೀಪದ ಕಂಬಗಲೂ ಇವೆ.
ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ನಾಗಬ್ರಹ್ಮಸ್ಥಾನವೂ ಇದೆ.
ಗರಡಿ ಮನೆ ದಿನೇಶ್ ಪೂಜಾರಿ (50 ವರ್ಷ ಪ್ರಾಯ) ಇವರು ಇಲ್ಲಿಯ ಪೂ ಪೂಜನೆಯವರಾಗಿದ್ದಾರೆ. ಇವರಿಗಿಂತ ಮೊದಲು ಹಿರಿಯರಾದ ಶಿವರಾಮ ಪೂಜಾರಿ, ಹಿರಿಯಣ್ಣ ಪೂಜಾರಿ ಪೂ ಪೂಜನೆಯ ಸೇವೆ ಮಾಡಿದ್ದರು.

ಚಂದ್ರ ಕಾಂತ ಪೂಜಾರಿ

ಚಂದ್ರ ಕಾಂತ ಪೂಜಾರಿ(67 ವರ್ಷ ಪ್ರಾಯ) ಇವರು ಇಲ್ಲಿಯ ಬೈದೇರುಗಳ ದರ್ಶನದ ಸ್ಥಳ ಪಾತ್ರಿ. ಕಲ್ಲುಗುಡ್ಡೆ ಬರ್ಕೆಮನೆ ವಸಂತ ಶೆಟ್ಟಿ ಹಾಗೂ ಬರ್ಪಾಣಿ ಸುಧೀರ್ ಶೆಟ್ಟಿ ಇವರುಗಳು ಇಲ್ಲಿಯ ಮೊಕ್ತೇಸರರು.
ಗರೋಡಿಯಲ್ಲಿ ಸಂಕ್ರಾಂತಿ ಪೂಜೆ, (ಸೂಡ) ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರ ಕಟ್ಟುವುದು, ಪುಯಿಂತೆಲ್(ಜನವರಿ – ಫೆಬ್ರವರಿ) ತಿಂಗಳಲ್ಲಿ ಪ್ರತಿ ವರ್ಷವೂ ಅಗೆಲ್ ಸೇವೆ, ಬೈದೇರುಗಳ ನೇಮೋತ್ಸವ, ಜೋಗಿ ಪುರುಷ, ಮಾಯಂದಾಲ್ ಕೋಲ ಹಾಗೂ ಶುದ್ದದ ಅಗೆಲ್ ಸೇವೆ ನಡೆಯುತ್ತದೆ. ಊರವರ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಎಲ್ಲಾ ಕಾರ್ಯಗಳ ವೆಚ್ಚವನ್ನು ಭರಿಸಲಾಗುತ್ತಿದೆ.
ಕಲ್ಲುಗುಡ್ಡೆ, ಹೇರೂರು, ಪಾದೂರು, (ಭಾಗಶಃ ಕರಂದಾಡಿ, ಮುಡುಂಬು, ಉಂಡಾರು ಗ್ರಾಮದ ಜನರು ಈ ಗರೋಡಿಯ ಕೂಡು ಕಟ್ಟಿಗೆ ಸೇರಿದವರಾಗಿದ್ದಾರೆ. ನೀರುಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಣಿಕೆ, ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ, ಮುಂತಾದ ಹರಕೆ ಸೇವೆಗಳಲ್ಲಿ ಕೂಡು ಕಟ್ಟಿಗೆ ಸೇರಿದ ಜನರು ಭಾಗಿಯಾಗುತ್ತಾರೆ.
ಇತ್ತೀಚೆಗೆ 22-01-2011ರಲ್ಲಿ ಈ ಗರೋಡಿಯು ಜೀರ್ಣೋದ್ಧಾರಗೊಂಡಿದ್ದು ಹಿಂದೆ 1981ರಲ್ಲಿ ಜೀರ್ಣೋದ್ಧಾರವಾಗಿದೆ.
ಗರೋಡಿಯ ನೃತ್ಯ ವಿಶಾರದರಾಗಿ ಬೊಗ್ಗು ಪರವ ಮೂಡುಬೆಳ್ಳೆ, ಮಡಿವಾಳರಾಗಿ ಸುನೀಲ್ ಮಡಿವಾಳ ಕೊಮಬಗುಡ್ಡೆ, ವಾದ್ಯದವರಾಗಿ ಶೇಖರ ಸೇರಿಗಾರ ಬೆಳಿಯಾಲು, ಇವರುಗಳು ಸೇವೆ ಮಾಡುತ್ತಿದ್ದಾರೆ.
ಗರೋಡಿಗೆ ಸಂಬಂಧಪಟ್ಟ “ಶ್ರೀ ಬ್ರಹ್ಮ ಬೈದರ್ಕಳ ಕಲಾ ಸಂಘ‘’ ಎಂಬ ಸಂಘ ಕಾರ್ಯನಿರ್ವಹಿಸುತ್ತಿದ್ದು, ಚಂದ್ರಕಾಂತ ಪೂಜಾರಿಯವರು ಅದ್ಯಕ್ಷರಾಗಿದ್ದಾರೆ. ಅರವಿಂದ ಕಲ್ಲುಗುಡ್ಡೆ ಹಾಗೂ ರಮಾನಂದ ಇವರುಗಳು ಕರ್ಯದರ್ಶಿಗಳಾಗಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ,
ಕಲ್ಲುಗುಡ್ಡೆ ಗ್ರಾಮ, 92ನೇ ಹೇರೂರು,
ಬಂಟಕಲ್ಲು ಅಂಚೆ, ಕಾಪು ತಾಲೂಕು,
ಉಡುಪಿ. 574115.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ,
ಕಲ್ಲುಗುಡ್ಡೆ ಗ್ರಾಮ, 92ನೇ ಹೇರೂರು,
ಬಂಟಕಲ್ಲು ಅಂಚೆ, ಕಾಪು ತಾಲೂಕು,
ಉಡುಪಿ. 574115.

ಮಾಹಿತಿ ಸಂಗ್ರಹಿಸಿದ ದಿನಾಂಕ:

22-11-2024

Shri Brahma Baidarkala Garodi 80 Badagabettu

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ 80 ಬಡಗಬೆಟ್ಟು

ಉಡುಪಿಯಿಂದ ಮಣಿಪಾಲದ ಮೂಲಕ ಪರ್ಕಳ ಪೇಟೆ ತಲುಪಿ ಮುಂದೆ 80ನೇ ಬಡಗಬೆಟ್ಟು ರಸ್ತೆಗೆ ಬಲಕ್ಕೆ ತಿರುಗಿ ಸುಮಾರು 2.5 ಕಿ.ಮೀ. ಸಾಗಿದರೆ ರಸ್ತೆಯ ಬಲಭಾಗದಲ್ಲಿ 80ನೇ ಬಡಗಬೆಟ್ಟು ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಸಿಗುವುದು.
ಇದೊಂದು ಪುರಾತನ ಆಯದ ಗರೋಡಿಯಾಗಿದೆ. ಷಡಾಧಾರ ಪ್ರತಿಷ್ಠೆ ಇರುವ ಈ ಗರೋಡಿಯ ಮುಖ್ಯ ದ್ವಾರವು ಪೂರ್ವಾಭಿಮುಖವಾಗಿದ್ದು, ಉತ್ತರ ದಿಕ್ಕಿಗೆ ಇನ್ನೊಂದು ದ್ವಾರವಿದೆ.
ಗರೋಡಿಯು ಈಗ ಜೀರ್ಣೋದ್ಧಾರದ ಹಂತದಲ್ಲಿದ್ದು, ಕಾಮಗಾರಿಗಳು ಚಾಲ್ತಿಯಲ್ಲಿವೆ.
ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ಬೆರ್ಮೆರ್, ಮೇಲೆ ಗಾಳಿ ದೇವರು, ಗುಂಡದ ಹೊರಗೆ ಎಡಭಾಗದಲ್ಲಿ ಬೈದೇರುಗಳ ಪಾಪೆ, ಮಕ್ಕಳ ಪಾಪೆ, ದೇಯಿಬೈದೆತಿ-ಮಂಚದಲ್ಲಿ, ಬಲಭಾಗದಲ್ಲಿ ಕುಜುಂಬ ಕಾಂಜವರಿಗೆ ಮಣೆಮಂಚದಲ್ಲಿ ಆರಾಧನೆಯಿದೆ. ಬ್ರಹ್ಮಗುಡಿಯ ಹೊರಗೆ ಗುರುಕಂಬ, ಜೋಗಿಪುರುಷ ಪಾಪೆ,
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಕುದುರೆಯ ಮೇಲೆ ಕುಳಿತ ನಾಗ ಬ್ರಹ್ಮರ ಪಂಚಲೋಹದ ಮೂರ್ತಿ ಇದೆ. ಮೇಲಿನ ಅಂತಸ್ತಿನಲ್ಲಿ ಗಿಂಡೆಯಲ್ಲಿ ನೀರು ಹಾಗೂ ದೀಪವನ್ನಿಟ್ಟು ಆರಾಧನೆಯಿದೆ. ಬ್ರಹ್ಮ ಗುಂಡದ ಎಡಬಾಗದಲ್ಲಿ ಮಣೆ ಮಂಚದಲ್ಲಿ ಕೋಟಿಚೆನ್ನಯರ ಕಂಚಿನ ಪಾಪೆಯನ್ನು ಆರಾಧಿಸುತ್ತಾರೆ.
ಬ್ರಹ್ಮ ಗುಂಡದ ಬಲಬಾಗದಲ್ಲಿ ಮಣೆ ಮಂಚದಲ್ಲಿ ಕುಜುಂಬಕಾಂಜವರ ಕಂಚಿನ ಪಾಪೆಯನ್ನು ಆರಾಧಿಸುತ್ತಾರೆ.
ಬ್ರಹ್ಮ ಗುಡಿಯ ಹೊರಗೆ ಬಲಭಾಗದಲ್ಲಿ ಮಣೆ ಮಂಚದಲ್ಲಿ ಜುಮಾದಿಯ ಕಂಚಿನ ಮುಖ ಹಾಗೂ ಜುಮಾದಿ ಬಂಟರಿಗೂ, ಎಡಭಾಗದಲ್ಲಿ ಮಣೆ ಮಂಚದಲ್ಲಿ ಕಂಚಿನ ಮೂರ್ತಿಯನ್ನಿಟ್ಟು ಮಾಯಂದಾಲ್ ಹಾಗೂ ಮಣೆ ಮಂಚದಲ್ಲಿ ಕೂಚಿಯಲ್ಲಿ ನೀರು ಹಾಗೂ ದೀಪವನ್ನಿಟ್ಟು ಅರಸು ದೈವ (ಒಕ್ಕು ಬಲ್ಲಾಳರಿಗೆ) ಪೂಜೆ ನಡೆಯುತ್ತದೆ.
ಗರೋಡಿಯ ಒಳಗೆ ಗುರು ಕಂಬಕ್ಕೂ ಪೂಜೆ ನಡೆಯುತ್ತದೆ.
ಗರೋಡಿಯ ಹೊರಗೆ ಆವರಣದಲ್ಲಿ ಗುಡಿಯಲ್ಲಿ ಮಣೆ ಮಂಚದಲ್ಲಿ ಕೂಚಿಯಲ್ಲಿ ನೀರು ಹಾಗೂ ದೀಪನ್ನಿಟ್ಟು ಪಂಚ ದೈವಗಳಿಗೆ ಆರಾಧನೆ ನಡೆಯುತ್ತದೆ. ಗರೋಡಿಯ ಆವರಣದೊಳಗೆ ಅಯ್ಯ ಕಲ್ಲು, ತುಳಸೀಕಟ್ಟೆಗಳೂ ಇವೆ.

ಸುಕೇಶ ಪೂಜಾರಿ

ಸಂಜೀವ ಪೂಜಾರಿ

ಗರಡಿಮನೆ ಸುಕೇಶ ಪೂಜಾರಿ(44 ವರ್ಷ) ಇವರು ಪೂ ಪೂಜನೆಯವರಾಗಿರುವರು. ಇವರಿಗಿಂತ ಮೊದಲು ಇವರ ಹಿರಿಯರಾದ ಸಂಜೀವ ಪೂಜಾರಿ (72 ವರ್ಷ) ರಾಜು ಪೂಜಾರಿ. ತಿಮ್ಮ ಪೂಜಾರಿ, ಗುರುವ ಪೂಜಾರಿ ಮುಂತಾದವರು ಪೂ ಪೂಜನೆಯವರಾಗಿ ಸೇವೆ ಸಲ್ಲಿಸಿರುವರು.
ಮೂಡುಮನೆ ಅರುಣಾಚಲ ಹೆಗ್ಡೆಯವರು ಆಡಳಿತ ಮೊಕ್ತೇಸರರಾಗಿರುವರು. ಇವರು ಆಡಳಿತ ಸಮಿತಿಯ ಅಧ್ಯಕ್ಷರಾಗಿಯೂ ಇರುವರು. ಕಾರ್ಯದರ್ಶಿಯಾಗಿ ಪ್ರೇಮನಾಥ ಪೂಜಾರಿ ಇವರು ಕಾರ್ಯನಿರ್ವಹಿಸುತ್ತಿರುವರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, (ಸೂಡ) ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಊರು ಸೇರೊಇ ಕಜ್ಜಾಯ ಸೇವೆ, ಮಕರದ ದ್ವಾದಶಿಯಂದು ಅಗೆಲು ಸೇವೆ, ತ್ರಯೋದಶಿಯಂದು – ಬೈದೇರುಗಳ ನೇಮೋತ್ಸವ, ಚತುರ್ದಶಿಯಂದು ಮಾಯಂದಾಲ್, ಜೋಗಿಪುರುಷ, ಹಾಗೂ ಪಂಚ ದೈವಗಳಾದ ಪಡಿಕಂದಾಯ, ಪಿಲ್ಚಂಡಿ, ಪಂಜುರ್ಲಿ, ಜುಮಾದಿ ಮತ್ತು ಬಂಟ, ಹಾಗೂ ರಾಜನ್ ದೈವಗಳಿಗೆ ಕೋಲ ಸೇವೆ ನಡೆಯುತ್ತದೆ. ನೀರುಸ್ನಾನ, ಕಂಚಿಲ್ ಶೇವೆ, ಮದುವೆ ಮುಂತಾದ ಶುಭ ಸಂದರ್ಭಗಳಲ್ಲಿ ತೆದಿಟ್ಟ ಜೋಡು ಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಹರಕೆಯ ಸೇವೆಗಳು, ಗರೋಡಿಯಲ್ಲಿ ನಡೆಯುತ್ತವೆ. ಗರೋಡಿಗೆ ಸ್ಥಿರ ಆದಾಯವಿಲ್ಲದೆ ಖರ್ಚು ವೆಚ್ಚಗಳನ್ನು ಹರಕೆ, ವಂತಿಗೆ, ಸಹಾಯ ಧನಗಳಿಂದ ಭರಿಸಲಾಗಿತ್ತಿದೆ.
ಈಗ 2024 – 2025 ರಲ್ಲಿ ಜಿಣೋದ್ಧಾರಗೊಳ್ಳುತ್ತಿರುವ ಈ ಗರೋಡಿಯು ಹಿಂದೆ 2000 ಹಾಗೂ 1942ನೇ ವರ್ಷಗಳಲ್ಲಿ ಜೀರ್ಣೋದ್ಧಾರ ಗೊಂಡಿತ್ತು.
ಗರೋಡಿಯ ಸೇವೆಯವರಾಗಿ ಜಯ ಪರವ ನೀರೆ, ಹಾಗೂ ಬೊಗ್ಗು ಪರವ ಮೂಡುಬೆಳ್ಳೆ ಇವರುಗಳು ಸೇವೆ ಸಲ್ಲಿಸುತ್ತಿದ್ದಾರೆ.
ಗರೋಡಿಗೆ ಸಂಬಂಧಪಟ್ಟಂತೆ “ ಬಿಲ್ಲವ ಜನ ಜಾಗ್ರತಿ ಸಮಿತಿ” ಎಂಬ ಸಂಸ್ಥೆಯು ಕೆಲಸ ಮಾಡುತ್ತಿದೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, 80 ಬಡಗಬೆಟ್ಟು,
ಬಡಗುಬೆಟ್ಟು ಅಂಚೆ,
ಉಡುಪಿ ತಾಲೂಕು – 576107.

ಆಡಳಿತ ಸಮಿತಿ:

ಅಧ್ಯಕ್ಷರು ಅರುಣಾಚಲ ಹೆಗ್ಡೆ
9113299198 ಕಾರ್ಯದರ್ಶಿಪ್ರೇಮನಾಥ ಪೂಜಾರಿ
944905906

ಪೂಪೂಜನೆಯವರ ವಿಳಾಸ:

ಸುಕೇಶ್ ಪೂಜಾರಿ,
ಗರಡಿ ಮನೆ, 80 ಬಡಗಬೆಟ್ಟು , ಬಡಗಬೆಟ್ಟು ಅಂಚೆ.
ಮೊಬೈಲ್: ನಂ. 9964243488

ಸ್ಥಳ ಪಾತ್ರಿಯವರ ವಿಳಾಸ:

ಸುಧಾಕರ ಪೂಜಾರಿ,
ದರ್ಶನ ಪಾತ್ರಿ, ಹಾಲಂಬಿ, 80 ಬಡಗುಬೆಟ್ಟು,
ಬಡಗುಬೆಟ್ಟು ಅಂಚೆ,
ಉಡುಪಿ – 576107
ಮೊಬೈಲ್ ನಂ: 9844676017

ಮಾಹಿತಿ ಸಂಗ್ರಹಿಸಿದ ದಿನಾಂಕ:

16-11-2024

Shree Brahma Baidarkala Garodi Kakkunje

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಕಕ್ಕುಂಜೆ

ಉಡುಪಿ ಕಲ್ಸಂಕ ಗುಂಡಿಬೈಲು ಮಾರ್ಗವಾಗಿ ಅಂಬಾಗಿಲಿ ನಿಂದ ಬಲಕ್ಕೆ ಮಣಿಪಾಲಕ್ಕೆ ಹೋಗುವ ರಸ್ತೆಯಲ್ಲಿ ಸಾಗಬೇಕು. ಶ್ಯಾಂ ಸರ್ಕಲ್ನಿಂದ ಎಡಕ್ಕೆ ತಿರುಗಿ ಸುಮಾರು 1.25 ಕಿ.ಮೀ. ಸಾಗಬೇಕು. ಇಲ್ಲವಾದರೆ ಮಣಿಪಾಲಕ್ಕೆ ಹೋಗುವ ರಸ್ತೆಯಲ್ಲೇ ಮುಂದುವರಿದು ಪೆರಂಪಳ್ಳಿ ರೈಲ್ವೆ ಸೇತುವೆ ದಾಟುವ ಮೊದಲೇ ಎಡಕ್ಕೆ ತಿರುಗಿ 1 ಕಿ.ಮೀ. ಸಾಗಿದರೆ ಗರೋಡಿಯಿದೆ.
ಉಡುಪಿ ಕಲ್ಸಂಕ ಗುಂಡಿಬೈಲು ಮಾರ್ಗವಾಗಿ ಅಂಬಾಗಿಲಿ ನಿಂದ ಬಲಕ್ಕೆ ಮಣಿಪಾಲಕ್ಕೆ ಹೋಗುವ ರಸ್ತೆಯಲ್ಲಿ ಸಾಗಬೇಕು. ಶ್ಯಾಂ ಸರ್ಕಲ್ನಿಂದ ಎಡಕ್ಕೆ ತಿರುಗಿ ಸುಮಾರು 1.25 ಕಿ.ಮೀ. ಸಾಗಬೇಕು. ಇಲ್ಲವಾದರೆ ಮಣಿಪಾಲಕ್ಕೆ ಹೋಗುವ ರಸ್ತೆಯಲ್ಲೇ ಮುಂದುವರಿದು ಪೆರಂಪಳ್ಳಿ ರೈಲ್ವೆ ಸೇತುವೆ ದಾಟುವ ಮೊದಲೇ ಎಡಕ್ಕೆ ತಿರುಗಿ 1 ಕಿ.ಮೀ. ಸಾಗಿದರೆ ಗರೋಡಿಯಿದೆ.
ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ಬೆರ್ಮೆರ್, ಮೇಲೆ ಗಾಳಿ ದೇವರು, ಗುಂಡದ ಹೊರಗೆ ಎಡಭಾಗದಲ್ಲಿ ಬೈದೇರುಗಳ ಪಾಪೆ, ಮಕ್ಕಳ ಪಾಪೆ, ದೇಯಿಬೈದೆತಿ-ಮಂಚದಲ್ಲಿ, ಬಲಭಾಗದಲ್ಲಿ ಕುಜುಂಬ ಕಾಂಜವರಿಗೆ ಮಣೆಮಂಚದಲ್ಲಿ ಆರಾಧನೆಯಿದೆ. ಬ್ರಹ್ಮಗುಡಿಯ ಹೊರಗೆ ಗುರುಕಂಬ, ಜೋಗಿಪುರುಷ ಪಾಪೆ,
ಗರೋಡಿ ಆವರಣದೊಳಗೆ; ಗುಡಿಯಲ್ಲಿ ಮಾಯಂದಾಲ್-ಮಗು ಪಾಪೆ, ಪಂಚಧೂಮಾವತಿ- ಬಂಟ ಗುಡಿ, ಬೊಬ್ಬರ್ಯಗುಡಿ. ಅಷ್ಟಮಂಗಲ ಪ್ರಶ್ನೆಯಲ್ಲಿ ತೋರಿ ಬಂದಂತೆ 2019ರಲ್ಲಿ ಪಕ್ಕಿಬೆಟ್ಟು ಗರೋಡಿಯಿಂದ ಬಂದ ಪಂಜುರ್ಲಿಯನ್ನು ಗುಡಿಕಟ್ಟಿ ಪ್ರತಿಷ್ಠಾಪಿಸಲಾಗಿದೆ. ಅಯ್ಯರ ಕಲ್ಲು, ಪ್ರತ್ಯೇಕ ನಾಗ ಸನ್ನಿಧಿ ಇದೆ.

ಉದಯ ಪೂಜಾರಿ

ಕಕ್ಕುಂಜೆ ಗರೋಡಿಮನೆ ಉದಯ ಪೂಜಾರಿ ಅವರು 2019ರಿಂದ ಪೂಪೂಜೆಯವರಾಗಿದ್ದಾರೆ. ಈ ಗರೋಡಿಗೆ 98 ವರ್ಷಗಳ ಇತಿಹಾಸವಿದ್ದು 1924ರಿಂದ 1944ರವರೆಗೆ ಸದಿಯ ಪೂಜಾರಿ ಮೊದಲ ಪೂ ಪೂಜನೆಯವರಾಗಿದ್ದರು. ಆ ನಂತರದವರು ಕೊಂಬ ಪೂಜಾರಿ 1944ರಿಂದ 1979. ಈ ನಡುವೆ ತೋಮ ಪೂಜಾರಿ ಅಲ್ಪಾವಧಿ. ಕೊಂಬ ಪೂಜಾರಿ ಅವರ ತಮ್ಮ ಬದಿಯ ಪೂಜಾರಿ 1979-1983. ಉದಯ ಪೂಜಾರಿ 1983-1996. ವಿಜಯ ಪೂಜಾರಿ 1996-1999. ಜಬ್ಬ ಪೂಜಾರಿ 199-2000. ಶಂಕರ ಪೂಜಾರಿ 2000-2004, ವಿಜಯ ಪೂಜಾರಿ ಕಕ್ಕುಂಜೆ 2004-2007. ರಮೇಶ್ ಯು ಕಕ್ಕುಂಜೆ 2007-2019.
ಸ್ಥಳ ಪಾತ್ರಿಗಳು ಈಗ ಇಲ್ಲ. ಹಿಂದೆ ಐತ ಪೂಜಾರಿ ಕಕ್ಕುಂಜೆ, ರಾಜುಪೂಜಾರಿ, ರಾಮ ಪೂಜಾರಿ, ಕಕ್ಕುಂಜೆ ರಾಜು ಪೂಜಾರಿ ಸ್ಥಳ ಪಾತ್ರಿಗಳಾಗಿದ್ದರು.
ಕಕ್ಕುಂಜೆ “ಮೇಲ್ಮನೆ”ಯ ಕೆ. ಶ್ರೀಕಾಂತ್ ಶೆಟ್ಟಿ ಅವರು ಗರೋಡಿ ಮೊಕ್ತೇಸರರಾಗಿರುತ್ತಾರೆ. ಭಾಸ್ಕರ್ ಡಿ. ಸುವರ್ಣ ಗರೋಡಿಯ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸ್ಥಳ ಪುರಾಣ ದಲ್ಲಿ ತಿಳಿದು ಬಂದಂತೆ, ಇಲ್ಲಿಗೆ ಮೂಲ ಪಕ್ಕಿಬೆಟ್ಟು ಗರೋಡಿ ಕಲ್ಯಾಣಪುರ. ಕಕ್ಕುಂಜೆಯಲ್ಲಿ ಗರೋಡಿ ಕಟ್ಟಲು ಕಾರಣವಾದ ಘಟನೆ. ಅಂದು ಕಕ್ಕುಂಜೆಯ ಗುರಿಕಾರರಾದ ಸದಿಯ ಪೂಜಾರಿ, ಹಿರಿಯರಾದ ತಿಮ್ಮ ಮಾಸ್ತರರು, ಅಂಗರ ಮಾಸ್ತರರು, ಅಬ್ಬಣ್ಣಕುದ್ರು ಕೊರಗ ಪೂಜಾರಿಯವರು, ಪೊಕ್ರು ಪೂಜಾರಿಯವರು ಪಕ್ಕಿಬೆಟ್ಟು ಗರೋಡಿಯ ನೇಮಕ್ಕೆ ಚಪ್ಪರ ಹಾಕಲು ಹೋಗುವಾಗ ವಿಳಂಬವಾಗಿತ್ತು. ಇವರಿಗೆ ಅಲ್ಲಿನ ಗುರಿಕಾರರುಗಳು ಖಾರವಾಗಿ ಬೈದು ಬಿಟ್ಟರು. ಇದರಿಂದ ಒಂದು ರೀತಿಯ ಅವಮಾನದಿಂದ ನೊಂದ ಗುರಿಕಾರರುಗಳು ವಾಪಾಸು ಊರಿಗೆ ಬಂದು ಜಮೀನ್ದಾರ್ ರಾಮಣ್ಣ ಶೆಟ್ಟಿ ಅವರಲ್ಲಿ ದೂರಿತ್ತರು. ರಾಮಣ್ಣ ಶೆಟ್ಟರು ನಾವೇ ಕೂಡಿ ಒಂದು ಹೊಸ ಗರೋಡಿ ಕಟ್ಟುವ ಎಂಬ ತೀರ್ಮಾನಕ್ಕೆ ಬಂದು 1924ರಲ್ಲಿ ಇಲ್ಲಿ ಗರೋಡಿ ನಿರ್ಮಾಣವಾಯಿತು. ಕಟ್ಟಿದ ಹೊಸ ಗರೋಡಿಯಲ್ಲಿ ಬಿಕ್ರಿ ಪೂಜಾರಿಯವರ ದರುಶನ ಸೇವೆ ನಡೆಯುತ್ತಿರುವಾಗ ಕೆಲವು ಹಿರಿಯರು ಬೈದೇರುಗಳು ಇಲ್ಲಿ ನೆಲೆಯಾದ ಬಗ್ಗೆ ಸಾಕ್ಷಿ ಬೇಕೆಂದರು. ಬೈದೇರುಗಳು ತಮ್ಮ ಕಲೆ-ನೆಲೆ ತೋರಿಸುತ್ತೇವೆ ಎಂದ ಸ್ವಲ್ಪವೇ ಹೊತ್ತಿನಲ್ಲಿ ಗರೋಡಿ ಸನಿಹದಲ್ಲೇ ಇದ್ದ ಬಾಕಿಮಾರು ಗದ್ದೆಗೆ ಭಾರೀ ಹುಣಸೇ ಮರದ ಬೃಹತ್ ಕೊಂಬೆಯೊಂದು ಜನ ಅವಕ್ಕಾಗಿ ನೋಡುತ್ತಾ ನಿಂತಿದ್ದಂತೆಯೇ ಜರಿದು ಬಿದ್ದಿತ್ತು.!
ಗರೋಡಿಯಲ್ಲಿ ನಿತ್ಯ ದೀಪ ಉರಿಸಲಾಗುತ್ತದೆ. ಪ್ರತಿ ಸೋಮವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಹೂವಿನ ಪೂಜೆ ಕದಿರು ಕಟ್ಟುವುದು, ಊರು ಸೇರಿ ಗಜ್ಜೆಯಿ ಸೇವೆ, ಅಗೆಲ್ ಅನ್ನ ನೈವೇದ್ಯ, ಕಾಲಾವಧಿ ನೇಮೋತ್ಸವ ಇದೆ. ಬೆಳಿಗ್ಗೆ ಮಾಯಂದಾಲ್ ಕೋಲ. 2014ರಿಂದ ರಾತ್ರಿ ಪಂಚಧೂಮಾವತಿ ಕೋಲ ನಡೆಯುತ್ತಿದೆ.
ಕಕ್ಕುಂಜೆ, ಅಬ್ಬಣಕುದ್ರು, ಕರಂಬಳ್ಳಿ ಮೂರು ಊರುಗಳು ಇಲ್ಲಿನ ಗರೋಡಿ ಕೂಡುಕಟ್ಟಿಗೆ ಸೇರುತ್ತವೆ. ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ಜೋಡು ಕಾಯಿ ಕಾಣಿಕೆ, ಹೆರಿಗೆ ನಂತರ ತಿಂಗೊಳ್ ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಊರ ಜನರು ಭಾಗಿಯಾಗುತ್ತಾರೆ.
ಗುರಿಕಾರರುಗಳು : 1. ರೋಹಿದಾಸ ಪೂಜಾರಿ (ನಾಲ್ಕರೆ ಗುರಿಕಾರರು)
2. ಓಮಯ್ಯ ಪೂಜಾರಿ
3. ಅನಂತ ಪೂಜಾರಿ
4. ಕುಟ್ಟಿ ಪೂಜಾರಿ
5. ರಾಮ ಪೂಜಾರಿ
6. ಚೆನ್ನಯ ಪೂಜಾರಿ
7. ಕುಡ್ಪ ಪೂಜಾರಿ
8. ಸುಂದರ ಪೂಜಾರಿ
9. ಗೋಪಾಲ ಪೂಜಾರಿ ಕರಂಬಳ್ಳಿ

ಗುರಿಕಾರರುಗಳು :
1. ರೋಹಿದಾಸ ಪೂಜಾರಿ (ನಾಲ್ಕರೆ ಗುರಿಕಾರರು)
2. ಓಮಯ್ಯ ಪೂಜಾರಿ
3. ಅನಂತ ಪೂಜಾರಿ
4. ಕುಟ್ಟಿ ಪೂಜಾರಿ
5. ರಾಮ ಪೂಜಾರಿ
6. ಚೆನ್ನಯ ಪೂಜಾರಿ
7. ಕುಡ್ಪ ಪೂಜಾರಿ
8. ಸುಂದರ ಪೂಜಾರಿ
9. ಗೋಪಾಲ ಪೂಜಾರಿ ಕರಂಬಳ್ಳಿ

ಗರೋಡಿ ಜೀರ್ಣೋದ್ಧಾರದ ವಿವರ :
1924-ಗರೋಡಿ ಸ್ಥಾಪನೆ
1970-71 ಸಾಧುಶೆಟ್ಟಿ ನೇತೃತ್ವ
2004-2005 ಮುದ್ದು ಪೂಜಾರಿ ಕಕ್ಕುಂಜೆ
2016-ಬ್ರಹ್ಮಕುಂಭಾಭಿಷೇಕ
2019-20 : ಪ್ರತಿಷ್ಠೆ – ಪ್ರವೀಣ ಪೂಜಾರಿ
2022- ಕುಂಭಾಭಿಷೇಕ – ಭಾಸ್ಕರ ಡಿ. ಸುವರ್ಣ
ಬೊಗ್ಗು ಪರವ, ಬೂಬ ಪರವ, ಮನು ಪರವ ಇವರು ನೃತ್ಯ ವಿಶಾರದರಾಗಿ ಸೇವೆ ಮಾಡುತ್ತಿದ್ದು ಹಿಂದೆ ನರಂಗ ಪರವ, ಮೆಣ್ಕ ಪರವ, ಪಿಜಿನ ಪರವ, ಅಮ್ಮು ಪರವ ಸೇವೆ ಮಾಡಿದ್ದರು. ಧೂಮಾವತಿಗೆ ಕೋಲ ಕಟ್ಟುವವರು – ಭಾಸ್ಕರ ಪಡುಬಿದ್ರಿ, ಆನಂದ ಪಡುಬಿದ್ರಿ

ಕಕ್ಕುಂಜೆ ಗರೋಡಿಯ ವಿಶೇಷತೆಗಳು :

ಮುಂಬೈಯ ಗರೋಡಿ ಭಕ್ತರೊಬ್ಬರು ಕಳುಹಿಸಿದ ಎರಡು ಗಿಡಗಳನ್ನು ಗರೋಡಿ ಆವರಣದಲ್ಲಿ ನೆಡಲಾಗಿತ್ತು. ಆ ಗಿಡಗಳು ಎತ್ತರಕ್ಕೆ ಬೆಳೆದು ನಿಂತಾಗ ಅದರ ಎಲೆಗಳು ಗರೋಡಿ ಸುತ್ತಮುತ್ತ ಬೀಳುವುದು ಮಾತ್ರವಲ್ಲದೆ ಬೇರೇನೂ ಪ್ರಯೋಜನ ಇಲ್ಲವೆಂದು ಅವುಗಳನ್ನು ಕಡಿಯಲು ನಿರ್ಧರಿಸಲಾಗಿತ್ತು. ಮರ ಕಡಿಯುವ ಆಳುಗಳಿಗೆ ಕರೆ ಹೋಗಿತ್ತು. ಮುಂಚಿನ ದಿನ ಅಲ್ಲಿನ ಬಂದ ಎರಡು ಮಂಗಗಳು ಆ ಮರದ ಎರಡು ಗೆಲ್ಲುಗಳನ್ನು ಮುರಿದು ಹಾಕಿದವು. ಗರೋಡಿಯ ಮಂದಿ ಆ ಗೆಲ್ಲುಗಳನ್ನು ನೋಡುವಾಗ ಅದರಲ್ಲಿ ರುದ್ರಾಕ್ಷಿ ಕಾಯಿಗಳು ಗೋಚರಿಸಿದವು. ಮುಂದೆ ಮರ ಕಡಿಯಲಿಲ್ಲ. ಇದೇ ಪ್ರಚಾರವಾಗಿ ರುದ್ರಾಕ್ಷಿಗಾಗಿಯೇ ಜನ ಎಲ್ಲೆಲ್ಲಿಂದಲೋ ಬರಲಾರಂಭಿಸಿದ್ದು ಇಲ್ಲಿನ ವಿಶೇಷ. ಅದರಲ್ಲೂ ರುದ್ರಾಕ್ಷಿಯ ಬಗ್ಗೆ ವಿಶೇಷ ಆಸ್ಥೆ ಹೊಂದಿದ್ದ ಹೈದರಾಬಾದಿನ ವ್ಯಕ್ತಿಯೊಬ್ಬರಿಗೆ ಇಲ್ಲಿನ ಗರೋಡಿಯಲ್ಲಿರುವ ರುದ್ರಾಕ್ಷಿ ಮರದ ಕನಸು ಬಿದ್ದು ಅದನ್ನು ಹುಡುಕಿಕೊಂಡು ಈ ಗರೋಡಿಗೆ ಭೇಟಿ ಕೊಟ್ಟು ರುದ್ರಾಕ್ಷಿ ಕಾಯಿಯನ್ನು ಪಡೆದುಕೊಂಡು ಹೋಗಿದ್ದರು.
ನಾಗಮಂಡಲ : ಕಕ್ಕುಂಜೆ ಗರೋಡಿಯಲ್ಲಿ ನಾಗ ಸಾನಿಧ್ಯವಿದ್ದು ಇಲ್ಲಿ ಹಿಂದೆ ನಾಗಮಂಡಲ ಜರಗಿತ್ತು.
ಅಗೆಲು ಸೇವೆ : ಇಲ್ಲಿ ಪ್ರತ್ಯೇಕ ಗುಂಡವಿದ್ದು – ಅದನ್ನು ಅಗೆಲು, ನೇಮೋತ್ಸವದ ಸಂದರ್ಭದಲ್ಲಿ ಅಂಗಣದಲ್ಲಿ ಇರಿಸಿ ದಲ್ಲೆ ಹಾಕುತ್ತಾರೆ.ಭತ್ತ, ನೀರೊಳಿಗೆ ಎಲೆ, ಅಶ್ವತ್ಥ, ಹಲಸಿನ ಎಲೆ, ಬಾಳೆದಿಂಡಿನ ಸಿಪ್ಪೆಯಿಂದ ಮಾಡುತ್ತಾರೆ. ಅನ್ನ ನೈವೇದ್ಯಕ್ಕೆ ಕಾಚಿಕುಂಬಳ, ಬಾಳೆಕಾಯಿ, ನುಗ್ಗೆ, ಮರ್ಸಣ್ ಹಲಸಿನಕಾಯಿ ಹಾಕುತ್ತಾರೆ. ಉದ್ದು ಹಾಕಿದ ಅಕ್ಕಿಯ ಗಟ್ಟಿ ಮಾಡುತ್ತಾರೆ. ಬಹಳ ಹಿಂದೆ ತಿಮ್ಮ ಮಾಸ್ತರರ, ಅಂಗರ ಮಾಸ್ತರರ ಕಾಲದಲ್ಲಿ ಅಗೆಲು ಸೇವೆಯ ದಿನ ಇಲ್ಲಿ ಕೋಡಂಗೆ ನೃತ್ಯ ನಡೆಯುತ್ತಿತ್ತು.

ಗರೋಡಿಯ ವಿಳಾಸ:

“ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಕಕ್ಕುಂಜೆ,
ಶಿವಳ್ಳಿ ಗ್ರಾಮ,
ಉಡುಪಿ -576102

ಮೊಬೈಲ್ ನಂಬರ್ :

ಉದಯ ಪೂಜಾರಿ (ಪೂಪೂಜನೆಯವರು)
9591752769.
ಭಾಸ್ಕರ್ ಡಿ. ಸುವರ್ಣ (ಆಡಳಿತ ಸಮಿತಿಯ ಅಧ್ಯಕ್ಷರು)
9900771242

Shree Brahma Baidarkala Garodi Kalatthuru

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕಳತ್ತೂರು

ಉಡುಪಿಯಿಂದ ಕಾಪು – ಶಿರ್ವ ರಸ್ತೆಯಲ್ಲಿ ಸಾಗಿ ಕಳತ್ತೂರು ಎಂಆರ್‌ಪಿಎಲ್ ಪೆಟ್ರೋಲ್ ಪಂಪಿನ ಬದಿಯ ರಸ್ತೆಯಲ್ಲಿ ಬಲಕ್ಕೆ ತಿರುಗಿ ಸುಮಾರು 1.3ಕಿ.ಮೀ. ದೂರ ಸಾಗಿದರೆ ಕಳತ್ತೂರು ಗರೋಡಿ ಸಿಗುವುದು.
ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕಳತ್ತೂರು
ಆಯದ ಗರೋಡಿಯಾದ ಇದಕ್ಕೆ ಮೂರು ಬಾಗಿಲುಗಳಿವೆ. ಮುಖ್ಯ ದ್ವಾರವು ಪೂರ್ವಾಭಿ ಮುಖವಾಗಿದ್ದು ಉತ್ತರ ಹಾಗೂ ಪಶ್ಚಿಮ ಹಾಗೂ ದಿಕ್ಕಿಗೆ ಒಂದೊಂದು ದ್ವಾರಗವಿದೆ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ಪಂಚಲೋಹದ ಕುದುರೆಯಲ್ಲಿ ಕುಳಿತ ಬ್ರಹ್ಮರ ಮೂರ್ತಿ ಇದೆ. ಗುಂಡದ ಮೇಲಂತಸ್ಥಿನಲ್ಲಿ ಗಾಳಿದೇವರ ಪಂಚಲೋಹದ ಮೂರ್ತಿ ಇದೆ.
ಗುಂಡದ ಎಡಭಾಗದಲ್ಲಿ ಪ್ರತ್ಯೇಕ ಮಣೆ ಮಂಚಗಳಲ್ಲಿ ಕೋಟಿಚೆನ್ನಯರು, ದೇಯಿ ಬೈದೆತಿ ಹಾಗೂ ಜೋಗಿ ಪುರುಷರಿಗೂ ಆರಾಧನೆಯಿದೆ.
ಗುಂಡದ ಬಲ ಭಾಗದಲ್ಲಿ ಪ್ರತ್ಯೇಕ ಮಣೆ ಮಂಚಗಳಲ್ಲಿ ಕುಜುಂಬ ಕಾಂಜವ ಹಾಗೂ ಒಕ್ಕು ಬಲ್ಲಾಳರ ಆರಾಧನೆಯಿದೆ.
ಬ್ರಹ್ಮ ಗುಡಿಯ ಹೊರಗೆ ಬಲ ಭಾಗದಲ್ಲಿ ಮಣೆ ಮಂಚದಲ್ಲಿ ಜುಮಾದಿಗೂ ಎಡಬದಿಯ ಮಣೆ ಮಂಚಗಳಲ್ಲಿ ಕೊಡಮಣಿತ್ತಾಯ ಹಾಗೂ ಜಾರಂದಾಯ ದೈವಗಳ ಆರಾಧನೆ ಇದೆ.
ಗರೋಡಿಯೊಳಗೆ ಉತ್ತರ ದಿಕ್ಕಿನ ದ್ವಾರದ ಬಳಿ ಗುರು ಕಂಬಕ್ಕೂ ಪೂಜೆ ನಡೆಯುತ್ತದೆ.
ಗರೋಡಿಯ ಹೊರಾಂಗಣದಲ್ಲಿ ಗುಡಿಯೊಳಗೆ ಪಿಲ್ಚಂಡಿ ದೈವದ ಬಂಡಿಯನ್ನಿಟ್ಟು ಪೂಜೆ ನಡೆಯುತ್ತದೆ.
ಹೆಬ್ಬಾಗಿಲಿನ ಒಂದು ಬದಿಯಲ್ಲಿ ಗುಡಿಯೊಳಗೆ ಮಾಯಂದಾಲ್ ಮತ್ತು ಮಗುವಿನ ಮರದ ಪಾಪೆಗೂ ಪೂಜೆ ನಡೆಯುತ್ತದೆ.
ಗರೋಡಿಯ ಆವರಣದೊಳಗೆ ಅಯ್ಯಕಲ್ಲು, ತುಳಸೀಕಟ್ಟೆ ಹಾಗೂ ಸ್ಥಳದ ನಾಗಬನಗಳೂ ಇದೆ.

ವಿಶ್ವನಾಥ ಕೆ ಪೂಜಾರಿ

ಗರೋಡಿಮನೆ ವಿಶ್ವನಾಥ ಕೆ ಪೂಜಾರಿ (76 ವರ್ಷ) ಇವರು ಪೂ ಪೂಜನೆಯ ವರಾಗಿದ್ದಾರೆ.ಇವರಿಗಿಂತ ಮೊದಲು ಮುದ್ದು ಪೂಜಾರಿಯವರು ಪೂ ಪೂಜನೆ ಸೇವೆ ಮಾಡುತ್ತಿದ್ದರು.

ಗರೋಡಿಯಲ್ಲಿ ನಿತ್ಯ ಪೂಜೆ, ಸಂಕ್ರಾಂತಿ ಪೂಜೆ, (ಸೂಡ) ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಜಾರ್ದೆ ಹುಣ್ಣಿಮೆಯ ಷಷ್ಠಿಯಂದು ಅಗೆಲು ಸೇವೆ, ಸಪ್ತಮಿಯಂದು ಬೈದೇರುಗಳ ನೇಮೋತ್ಸವ ನಡೆಯುತ್ತದೆ. ಪಿಲ್ಚಂಡಿ, ಮಾಯಂದಾಲ್, ಜೋಗಿ ಪುರುಷರಿಗೂ ಕೋಲ ಸೇವೆ ನಡೆಯುತ್ತದೆ. ನಂತರ ಶುದ್ಧದ ಅಗೆಲು ನಡಿಗುತ್ತು ಮನೆತನದವರ ವತಿಯಿಂದ ನಡೆಯುತ್ತದೆ. ಸೋಣ ತಿಂಗಳಲ್ಲಿ ಬರಬೆಟ್ಟು ಗುತ್ತಿನವರ ವತಿಯಿಂದ ಅಗೆಲು ಸೇವೆ ನಡೆಯುತ್ತದೆ. ಆಟಿಯಲ್ಲಿ ಅಗೆಲ್ ಸೇವೆ ನಡೆಯುವ 6 ಗರೋಗಳಲ್ಲಿ ಇದೂ ಒಂದು. ಸೋಣದ ಸಂಕ್ರಾಂತಿಯಂದು ಹೂವಿನ ಪೂಜೆ ನಡೆಯುತ್ತದೆ.

ಕಳತ್ತೂರು ಹಾಗೂ ಪಾದೂರು ಗ್ರಾಮಗಳ ಜನರು ಈ ಗರೋಡಿಯ ಕೂಡು ಕಟ್ಟಿಗೆ ಸೇರಿದವರಾಗಿದ್ದು ನೀರುಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಸಂದರ್ಭಗಳಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರದ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿಯೂ ಭಾಗಿಯಾಗಿರುತ್ತಾರೆ. ವಂತಿಗೆ ಹಾಗೂ ಹರಕೆಯ ಹಣದಿಂದ ಎಲ್ಲಾ ಕಾರ್ಯಕ್ರಮಗಳ ಖರ್ಚು ವೆಚ್ಚ ಭರಿಸಲಾಗುತ್ತದೆ.

ಗರೋಡಿಯು ಈಗ ಜೀರ್ಣೋದ್ದಾರದ ಯೋಜನೆಯಲ್ಲಿದೆ. ಹಿಂದೆ 25.05.1994 ಹಾಗೂ 1963 ರಲ್ಲಿ ಜೀಣೋದ್ದಾರಗೊಂಡಿತ್ತು.
ಬೊಗ್ಗು ಪರವ, ಉಗ್ಗಪ್ಪ ಪರವ, ಸಂತು ಪರವ ಇವರುಗಳು ಈ ಗರೋಡಿಯ ನೃತ್ಯ ವಿಶಾರದರಾಗಿಯೂ, ಶಶಿ ಮಡಿವಾಳ ಪಣಿಯೂರು, ಇವರು ಮಡಿವಾಳರಾಗಿಯೂ, ಲಕ್ಷಣ ಸೇರಿಗಾಎ ಎಲ್ಲೂರು, ಇವರು ವಾದ್ಯದವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಗರೋಡಿಯ ವಿಳಾಸ:
ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಕಳತ್ತೂರು,
ಕಳತ್ತೂರು ಗ್ರಾಮ ಮತ್ತು ಅಂಚೆ, ಕಾಪು ತಾಲೂಕು,
ಉಡುಪಿ ಜಿಲ್ಲೆ. 576106.
ಪೂ ಪೂಜನೆಯವರ ವಿಳಾಸ:
ವಿಶ್ವನಾಥ ಕೆ. ಪೂಜಾರಿ,
ಗರೋಡಿ ಮನೆ, ಕಳತ್ತೂರು ಗ್ರಾಮ ಮತ್ತು ಅಂಚೆ,
ಕಾಪು ತಾಲೂಕು,
ಉಡುಪಿ ಜಿಲ್ಲೆ – 576106.
ಮೊಬೈಲ್: 9945772269

Shri Brahma Baidarkala Garodi, Parkala, Herga Village

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ , ಪರ್ಕಳ, ಹೆರ್ಗ ಗ್ರಾಮ

ಉಡುಪಿಯಿಂದ ಮಣಿಪಾಲ ಮಾರ್ಗವಾಗಿ ಪರ್ಕಳ ಪೇಟೆಗೆ ಬಂದು ಎಡಕ್ಕೆ ತಿರುಗಿ ಸುಮಾರು 650ಮೀ. ಸಾಗಿ ಪುನ: ಎಡಕ್ಕೆ ಸರಳೇಬೆಟ್ಟು ಮಾರ್ಗದಲ್ಲಿ 300ಮೀ.ನಲ್ಲಿ ಎಡಕ್ಕೆ ತಿರುಗಿ ಸುಮಾರು 200ಮೀ. ಸಾಗಿದರೆ ಬಲಬದಿಯಲ್ಲಿ ಪರ್ಕಳ ಗರೋಡಿ ಇದೆ.

ಇದು ಆಯದ ಗರೋಡಿಯಾಗಿದ್ದು ಮುಖ್ಯದ್ವಾರ ಪೂರ್ವಾಭಿಮುಖವಾಗಿ ಇನ್ನೊಂದು ದ್ವಾರ ಪಶ್ಚಿಮ ಮುಖವಾಗಿದೆ.

ಗರೋಡಿಯ ಬ್ರಹ್ಮ ಗುಡಿಯಲ್ಲಿ ಗುಂಡದ ಒಳಗೆ ಕುದುರೆಯ ಮೇಲೆ ಕುಳಿತ ಬ್ರಹ್ಮರ ಪಂಚಲೋಹದ ಮೂರ್ತಿ ಇದೆ. ಗುಂಡದ ಮೇಲಂತಸ್ಥಿನಲ್ಲಿ ಗಾಳಿದೇವರ ಆರಾಧನೆ ಇದೆ.
ಬ್ರಹ್ಮಗುಡಿಯ ಗುಂಡದ ಒಳಗೆ ಬೆರ್ಮೆರು, ಗಾಳಿದೇವರು, ಗುಂಡದ ಹೊರಗೆ ಮಣೆಮಂಚದಲ್ಲಿ ಕೋಟಿ ಚೆನ್ನಯರು, ಕುಜುಂಬ ಕಾಂಜವ, ಹಾಗು ಮಾಯಂದಾಲ್ ರ ಕಂಚಿನ ಮೂರ್ತಿ ಇವೆ.
ಬ್ರಹ್ಮಗುಡಿಯ ಗುಂಡದ ಒಳಗೆ ಬೆರ್ಮೆರು, ಗಾಳಿದೇವರು, ಗುಂಡದ ಹೊರಗೆ ಮಣೆಮಂಚದಲ್ಲಿ ಕೋಟಿ ಚೆನ್ನಯರು, ಕುಜುಂಬ ಕಾಂಜವ, ಹಾಗು ಮಾಯಂದಾಲ್ ರ ಕಂಚಿನ ಮೂರ್ತಿ ಇವೆ.
ಬ್ರಹ್ಮ ಗುಡಿಯ ಹೊರಗೆ ಮಣೆಮಂಚದಲ್ಲಿ ಜೋಗಿಪುರುಷ, ಜುಮಾದಿಯ ಕಂಚಿನ ಮೂರ್ತಿಗಳಿವೆ.
ಗರೋಡಿಯ ಆವರಣದೊಳಗೆ ಧರ್ಮರಸು, ಕೊಡಮಣಿತ್ತಾಯ, ದೈವಗಳ ಗುಡಿ, ದೇವಿಕಟ್ಟೆ, ತುಳಸಿಕಟ್ಟೆ, ಹಾಗೂ ಅಯ್ಯ ಕಲ್ಲುಗಳಿವೆ. ಗರೋಡಿಯಲ್ಲಿ ನೀರುಸ್ನಾನ,ಕಂಚಿಲ್ ಸೇವೆ, ಮದುವೆ ಮುಂತಾದ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ, ಕಾಣಿಕೆ ಸೇವೆ, ಹೆರಿಗೆ ನಂತರದ ತಿಂಗಳು ಮಾಡಿಸುವ ಕ್ರಮ, ತುಲಾಭಾರ, ಕಳಸ ಕಟ್ಟಿ ಶುದ್ದ ಮಾಡುವ, ಕ್ರಮಗಳು ಹರಕೆಯ ರೂಪದಲ್ಲಿ ನಡೆಯುತ್ತದೆ.

ಪಿ.ಕೆ.ಶೀನ ಪೂಜಾರಿ

ಪಿ.ಕೆ.ಶೀನ ಪೂಜಾರಿ (73 ವರ್ಷ ಪ್ರಾಯ) ಇವರು ಗರೋಡಿಯ ಪೂ ಪೂಜನೆಯವರಾಗಿದ್ದು ಹಳೆಯಮನೆ ದಿನೇಶ್ ಶೆಟ್ಟಿ ಇವರು ಆಡಳಿತ ಮೊಕ್ತೇಸರರಾಗಿದ್ದಾರೆ. ಪಿ.ಕೆ.ಶೀನ ಪೂಜಾರಿಯವರಿಗೆ ಮೊದಲು ವಿಶ್ವನಾಥ ಪೂಜಾರಿ, ಕಿಟ್ಟ ಪೂಜಾರಿ, ತಮ್ಮಯ ಪೂಜಾರಿ, ವೆಂಕ ಪೂಜಾರಿ, ಮೊದಲಾದ ಹಿರಿಯರು ಪೂ ಪೂಜನೆಯ ಸೇವೆ ಮಾಡಿರುವರು. ದಿನೇಶ ಶೆಟ್ಟಿಯವರ ಮೊದಲು ಹಳೆಮನೆ ಸಂಜೀವ ಶೆಟ್ಟಿಯವರು ಆಡಳಿತ ಮೊಕ್ತೇಸರರಾಗಿದ್ದರು.
ಗರೋಡಿಯ ಅಜಲು ಸೇವೆಯ ನೃತ್ಯ ವಿಶಾರದರಾಗಿ ಸುಧಾಕರ ಪರವ ಚೆನ್ನಬೆಟ್ಟು ಹರಿಖಂಡಿಗೆ, ವಾದ್ಯದವರಾಗಿ ಅಣ್ಣಿ ಸೇರಿಗಾರ ಹರಿಖಂಡಿಗೆ, ಮಡಿವಾಳರಾಗಿ ಸಾದು ಮಡಿವಾಳ ದೊಂಡೇರಂಗಡಿ ಇವರುಗಳು ಸೇವೆ ಸಲ್ಲಿಸುತ್ತಿದ್ದಾರೆ.
ಗರೋಡಿಗೆ ಸಂಬಂಧಪಟ್ಟು “ ಬೈದಶ್ರೀಯವಕರ ಸಂಘ” ಎಂಬ ಯುವಕರ ಕೂಟವೊಂದು ಕಾರ್ಯನಿರ್ವಹಿಸುತ್ತಿದ್ದು, ಹರೀಶ್ ಪೂಜಾರಿ ಕಂರ್ಬುಕಲ್ಲು ಇವರು ಪ್ರಸ್ತುತ ಅಧ್ಯಕ್ಷರಾಗಿದ್ದಾರೆ.
ಗರೋಡಿಯಲ್ಲಿ ಮಂಗಳವಾರ ಪೂಜೆ, ಆದಿತ್ಯವಾರದ ಪೂಜೆ, ಸಂಕ್ರಾಂತಿ ಪೂಜೆ(ಪೆರ್ಡೂರು) ಚೌತಿ ಪೂಜೆ, ದೀಪಾವಳಿಯಂದು ಕಂಬಕ್ಕೆ ದೀಪವಿಟ್ಟು ಪೂಜೆ ಮಾಡುವುದು, ಹೂವಿನ ಪೂಜೆ, ಕದಿರು ಕಟ್ಟುವುದು, ಊರು ಸೇರಿ ಗಜ್ಜೆಯಿ ಸೇವೆ, ಕೊಡಿ ತಿಂಗಳಲ್ಲಿ ಪೊಸರಿತ ಅಗೆಲ್, ತುಳಸೀ ಪೂಜೆ ನಡೆಯುತ್ತದೆ. ಸುಗ್ಗಿ ತಿಂಗಳಲ್ಲಿ (ಫೆಬ್ರವರಿ-ಮಾರ್ಚ) ಒಂದನೇ ದಿನ ಮಣ್ಣ ಮುಹೂರ್ತ, ಮರ ಮುಹೂರ್ತ, ಎರಡನೇ ದಿನ ಅಂಗಣಕ್ಕೆ ಅಂಗಣಕ್ಕೆ ಸೆಗಣಿ ಸಾರಿಸುವುದು, ಮೂರನೇ ದಿನ – ಅಗೆಲು ಸೇವೆ ಬಾಲು ಬಂಡಾರ ಗರೋಡಿಯ ಹೊರಗೆ ತಂದು ಗುಂಡದಲ್ಲಿ ಇಡುವುದು. ನಾಲ್ಕನೇ ದಿನ ಬೈದೇರುಗಳ ನೇಮ, ಐದನೇ ದಿನ – ಮಾಯಂದಾಲ್, ಜುಮಾದಿ, ಮರ್ಲಜುಮಾದಿ, ಜೋಗಿಪುರುಷ, ಪಿಲ್ಚಂಡಿ ದೈವಗಳಿಗೆ ಕೋಲ ಸೇವೆ ನಡೆಯುತ್ತದೆ. 6ನೇ ದಿನ – ಶುದ್ದದ ಅಗೆಲು ಇರುತ್ತದೆ. ಇವಲ್ಲದೆ ನೀರುಸ್ನಾನ, ಕಂಚಿಲ್ ಸೇವೆ. ಮುದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ, ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಸೇವೆಗಳಲ್ಲಿ ಕೂಡುಕಟ್ಟಿಗೆ ಸೇರಿದ ಭಕ್ತರು ಪಾಲ್ಗೊಳ್ಳುತಾರೆ.
ಸ್ಥಿರ ಆದಾಯ ಇಲ್ಲದ ಈ ಗರೋಡಿಯ ಕಾರ್ಯಕ್ರಮಗಳ ವೆಚ್ಚವನ್ನು ಊರವರ ವಂತಿಗೆ, ಕಾಣಿಕೆ, ಹಾಗೂ ಸಹಾಯಧನಗಳಿಂದ ಭರಿಸುತ್ತಾರೆ.
ಹದಿನೇಳು ವರ್ಷಗಳ ಹಿಂದೆ ಅಂದರೆ 2006ರಲ್ಲಿ ಗರೋಡಿಯ ಕಾಂಕ್ರೀಟ್ ಚಪ್ಪರ ನಿರ್ಮಾಣವಾಗಿದ್ದು ಅದಕ್ಕೆ ಮೊದಲು 04-04-1971ರಲ್ಲಿ ಗರೋಡಿಯ ಜೀರ್ಣೋದ್ದಾರವಾಗಿತ್ತು.
ಈ ಗರೋಡಿಯ ನೃತ್ಯವಿಶಾರದರಾಗಿ ಜಯಪರವ ನೀರೆ, ಹಾಗೂ ಕಿಟ್ಟ ಪಂಬದ(ಮಾಯಂದಾಲ್ ಮತ್ತು ಜುಮಾದಿಗೆ) ಇವರುಗಳು ಸೇವೆ ಸಲ್ಲಿಸುತ್ತಿದ್ದಾರೆ.
ಹಿಂದೆ ಗರೋಡಿಗೆ ಸಂಬಂಧಪಟ್ಟ “ಕೋಟಿಚೆನ್ನಯ ವ್ಯಾಯಾಮ ಶಾಲೆ ‘’ ಯೊಂದು ಇತ್ತು. ಈಗ ಅಸ್ಥಿತ್ವದಲ್ಲಿಲ್ಲ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಪರ್ಕಳ,
ಹೆರ್ಗ ಗ್ರಾಮ,
ಪರ್ಕಳ ಅಂಚೆ,
ಉಡುಪಿ 576107.

ಪೂ ಪೂಜನೆಯವರ ವಿಳಾಸ:

ಪಿ.ಕೆ. ಶೀನ ಪೂಜಾರಿ,
” ಪದ್ಮಶ್ರೀ ‘’ ಶೆಟ್ಟಿಬೆಟ್ಟು ಶಾಲೆಯ ಹತ್ತಿರ,
ಹೆರ್ಗ ಗ್ರಾಮ,
ಪರ್ಕಳ ಅಂಚೆ, 576107.
ಮೊಬೈಲ್: 9449367825

ದರ್ಶನದ ಪೂಜಾರಿಯವರ ವಿಳಾಸ:

ದಿನೇಶ್ ಪೂಜಾರಿ,
ದರ್ಶನ ಪಾತ್ರಿ,
ಮಾರುತಿ ನಗರ ಪರ್ಕಳ,
ಪರ್ಕಳ ಅಂಚೆ,
ಉಡುಪಿ 576107.
ಮೊಬೈಲ್: 9844211997

ಮಾಹಿತಿ ಸಂಗ್ರಹಿಸಿದ ದಿನಾಂಕ:

16-11-2024

Shri Kodamannithaya Brahmabaidarkala Neralu Adisthana Garodi

ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ನೇರಳೆ ಅಡಿಸ್ಥಾನ ಗರೋಡಿ. 41 ನೇ ಶೀರೂರು, ಗ್ರಾಮ ಹರಿಖಂಡಿಗೆ

ಉಡುಪಿಯಿಂದ ಹಿರಿಯಡ್ಕ ಮಾರ್ಗವಾಗಿ ಶೀರೂರು ಮೂಲಮಠದ ರಸ್ತೆಯ ಮೂಲಕ ಸಾಗಿ ಹರಿಖಂಡಿಗೆ ಸರಕಾರಿ ಪ್ರಾಥಮಿಕ ಶಾಲೆಯ ಹತ್ತಿರ ಬಲಕ್ಕೆ ತಿರುಗಿ ಸುಮಾರು 350 ಮೀಟರ್ ದೂರ ಸಾಗಿದರೆ ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ನೇರಳೆ ಅಡಿಸ್ಥಾನ ಗರೋಡಿ ಸಿಗುವುದು. ಇದೋಂದು ಆಯದ ಗರೋಡಿಯಾಗಿದ್ದು 26.01.1996 ರ   ಜೀರ್ಣೋದ್ಧಾರದ ಸಮಯದಲ್ಲಿ ಷಢಾಧಾರ ಪ್ರತಿಷ್ಠೆಯಾಗಿದೆ. ಗರೋಡಿಯ ಮುಖ್ಯ ದ್ವಾರವು ಪೂರ್ವಾಭಿಮುಖವಾಗಿದ್ದು, ಬಡಗು ದಿಕ್ಕಿಗೆ ಇನ್ನೊಂದು ದ್ವಾರವಿದೆ. ಗರೋಡಿಯ ಆವರಣದಲ್ಲಿ ಬ್ರಹತ್ ನೇರಳೆ ಮರವಿದ್ದು ಅದರ ಅಡಿಯಲ್ಲಿ ಗರೋಡಿ ಇರುವುದರಿಂದ ಈ ಗರೋಡಿಗೆ ನೇರಳೆ ಅಡಿಸ್ಥಾನ ಗರೋಡಿಯೆಂಬ ಹೆಸರು ಬಂದಿದೆ.

ಗರೋಡಿಯ ಆವರಣದಲ್ಲಿರುವ ನೇರಳೆ ಮರ.

ಪ್ರಕಾಶ್ ಪೂಜಾರಿ

ಸುಧಾಕರ ಶೆಟ್ಟಿ

ಇಂದಿಗೆ ಸುಮಾರು ನಾಲ್ಕು ತಲೆಮಾರಿಗೆ ಮುಂಚೆ ಇಲ್ಲಿ ಗರಡಿ ಇಲ್ಲವಾಗಿದ್ದು, ಇಲ್ಲಿಯವರು ಹತ್ತಿರದ ಬೇರೆ ಗರೋಡಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಶೀರೂರು ಮಠದ ಪ್ರತಿನಿಧಿಗೆ ಆ ಗರೋಡಿಯಲ್ಲಿ ಸರಿಯಾದ ಗೌರವ ಸಲ್ಲಲಿಲ್ಲ ಎಂಬ ಕಾರಣಕ್ಕೆ ಕಂರ್ಬುಕಲ್ಲು ಮನೆಯ ಹಿರಿಯರಾದ ತೋಪ ಪೂಜಾರಿಯವರನ್ನು ಕರೆದು ಶೀರೂರು ಮಠದ ಸ್ವಾಮಿಗಳು ಗರೋಡಿ ಸ್ಥಾಪಿಸಿದರು ಎಂಬ ಸ್ಥಳ ಪುರಾಣವಿದೆ. ಅಂದಿನಿಂದ ಕಂರ್ಬುಕಲ್ಲು ಮನೆಯವರು ಗರೋಡಿಯ ಪೂ ಪೂಜನೆಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಕಾಶ್ ಪೂಜಾರಿಯವರ ಮೊದಲು ಅವರ ಹಿರಿಯರಾದ ಬೀರ ಪೂಜಾರಿ, ರಾಮಣ್ಣ ಪೂಜಾರಿ, ಕೂಕ್ರ ಪೂಜಾರಿ ಹಾಗೂ ತೋಪ ಪೂಜಾರಿ ಇವರುಗಳೂ ಪೂ ಪೂಜನೆಯವರಾಗಿ ಸೇವೆ ಸಲ್ಲಿಸಿರುವರು.
ಪ್ರಕಾಶ್ ಪೂಜಾರಿಯವರು (55 ವರ್ಷ ಪ್ರಾಯ) ಬೈದೇರುಗಳ ದರ್ಶನ ಪಾತ್ರಿಗಳಾಗಿಯೂ ಸೇವೆ ಸಲ್ಲಿಸುತ್ತಿದ್ದು,  ಇವರಲ್ಲದೆ ಶ್ರೀ ಕೃಷ್ಣ ಪೂಜಾರಿ, (60 ವರ್ಷ ಪ್ರಾಯ) ಇನ್ನೋರ್ವ ಕೃಷ್ಣ ಪೂಜಾರಿ (55 ವರ್ಷ ಪ್ರಾಯ), ಹರೀಶ್ ಪೂಜಾರಿ (40 ವರ್ಷ ಪ್ರಾಯ) ಹಾಗು ರಂಜಿತ್ ಪೂಜಾರಿ (32 ವರ್ಷ ಪ್ರಾಯ) ಇವರುಗಳು ಒಟ್ಟಿಗೆ ಐದು ಮಂದಿ ಸ್ಥಳ ಪಾತ್ರಿಗಳಾಗಿಸೇವೆ ಸಲ್ಲಿಸುತ್ತಿರುವುದು ಇಲ್ಲಿಯ ವಿಶೇಷತೆ.
ಈ ಗರೋಡಿಗೆ ಸಂಬಂಧಪಟ್ಟಂತೆ ವರಡ ವಂತಿಗೆ ನೀಡುವ ಹರಿಖಂಡಿಗೆ ಗ್ರಾಮದ 16 ಬಿಲ್ಲವ ಸಮಾಜ ಬಾಂಧವರ ಮನೆಯಿದ್ದು, 9 ಬಂಟರ ಮನೆಗಳಿವೆ. ಉಳಿದಂತೆ ಹರಿಖಂಡಿಗೆ ಹಾಗೂ ಸುತ್ತಮುತ್ತಲ ಊರ ಜನರು ಗರೋಡಿಯ ಕಾರ್ಯಕ್ರಮಗಳಲ್ಲಿ ಭಕ್ತಿಯಿಂದ ಪಾಲ್ಗೊಳ್ಳುವರು. ಗರೋಡಿಯಲ್ಲಿ ಮಂಗಳವಾರ ಪೂಜೆ, ಸೋಣ ಮತ್ತು ಆಟಿ ತಿಂಗಳ ಸಂಕ್ರಾಂತಿಗಳಂದು ಪೂಜೆ, ಚೌತಿಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಊರು ಸೇರಿ ಗಜ್ಜೆಯಿ ಸೇವೆ, ಹೊಸ ಭತ್ತದ ಅಗೆಲ್ ಸೇವೆ, ಕಾಲಾವಧಿ ಅಗೆಲ್ ಸೇವೆ, ನೇಮೋತ್ಸವಗಳು ನಡೆಯುತ್ತವೆ. ಕಾಲಾವಧಿ ಅಗೆಲ್ ಹಾಗೂ ನೇಮೋತ್ಸವವು ಸುಗ್ಗಿ ತಿಂಗಳ ಹುಣ್ಣಿಮೆಯಂದು ನಡೆಯುತ್ತವೆ. ಬೈದೇರುಗಳ ಅಗೆಲ್ ಸೇವೆ, ನೇಮೋತ್ಸವದ ಜೊತೆಗೆ ಧರ್ಮರಸು, ರಾಜನ್ ದೈವ, ಜೋಗಿ ಪುರುಷ ಹಾಗೂ ಮಾಯಂದಾಲ್, ದೈವಗಳ ಕೋಲ ಸೆವೆಯೂ ನಡೆಯುತ್ತದೆ
ಈ ಗರೋಡಿಗೆ ಬರ್ಕೆಮನೆ(ಕೇದಗೆ ಮನೆ) ಉದಯ ಪೂಜಾರಿ, ಕಂರ್ಬುಕಲ್ಲು ಮನೆ ಪ್ರಭಾಕರ ಪೂಜಾರಿ, ಪರಾರಿಮನೆ ಅಶೋಕ ಶೆಟ್ಟಿ, ಮೇಲ್ಮನೆ ಸತೀಶ್ ಶೆಟ್ಟಿ, ಕಿನ್ನಿಗುಡ್ಡೆ ಕೀಸು ಶೆಟ್ಟಿ, ತುರ್ಕೆರಬೆಟ್ಟು ಭೋಜ ಶೆಟ್ಟಿ ಇವರುಗಳು ಗುರಿಕಾರರಾಗಿರುತ್ತಾರೆ.
ಶೀರೂರು ಮಠದ ಜಾಗದಲ್ಲಿರುವ ಈ ಗರೋಡಿಗಯ ಕಾರ್ಯಕ್ರಮಗಳು ವರಡ, ವಂತಿಗೆ, ಹರಕೆ ಹಾಗೂ ಊರವರ, ಭಕ್ತರ ಸಹಾಯಧನದಿಂದ ನಡೆಯುತ್ತವೆ.
ಬ್ರಹ್ಮಗುಡಿಯ ಗುಂಡದ ಒಳಗೆ ಬೆರ್ಮೆರು, ಗಾಳಿದೇವರು, ಗುಂಡದ ಹೊರಗೆ ಮಣೆಮಂಚದಲ್ಲಿ ಕೋಟಿ ಚೆನ್ನಯರು, ಕುಜುಂಬ ಕಾಂಜವ, ಹಾಗು ಮಾಯಂದಾಲ್ ರ ಕಂಚಿನ ಮೂರ್ತಿ ಇವೆ.
ಬ್ರಹ್ಮ ಗುಡಿಯ ಹೊರಗೆ ಮಣೆಮಂಚದಲ್ಲಿ ಜೋಗಿಪುರುಷ, ಜುಮಾದಿಯ ಕಂಚಿನ ಮೂರ್ತಿಗಳಿವೆ.
ಗರೋಡಿಯ ಆವರಣದೊಳಗೆ ಧರ್ಮರಸು, ಕೊಡಮಣಿತ್ತಾಯ, ದೈವಗಳ ಗುಡಿ, ದೇವಿಕಟ್ಟೆ, ತುಳಸಿಕಟ್ಟೆ, ಹಾಗೂ ಅಯ್ಯ ಕಲ್ಲುಗಳಿವೆ. ಗರೋಡಿಯಲ್ಲಿ ನೀರುಸ್ನಾನ,ಕಂಚಿಲ್ ಸೇವೆ, ಮದುವೆ ಮುಂತಾದ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ, ಕಾಣಿಕೆ ಸೇವೆ, ಹೆರಿಗೆ ನಂತರದ ತಿಂಗಳು ಮಾಡಿಸುವ ಕ್ರಮ, ತುಲಾಭಾರ, ಕಳಸ ಕಟ್ಟಿ ಶುದ್ದ ಮಾಡುವ, ಕ್ರಮಗಳು ಹರಕೆಯ ರೂಪದಲ್ಲಿ ನಡೆಯುತ್ತದೆ.
ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಗದ್ದಿಗೆ ದೇವಸ್ಥಾನ 41 ನೇ ಶೀರೂರು, ಜಂಬೆ ಇಲ್ಲಿಂದ ದೇವಿಯ ಗದ್ದಿಗೆಯು ಗರೋಡಿಗೆ ಬಂದು ಇಲ್ಲಿ ದರ್ಶನ ಸೇವೆಯೂ ನಡೆಯುತ್ತದೆ.
ಗರೋಡಿಯ ಅಜಲು ಸೇವೆಯ ನೃತ್ಯ ವಿಶಾರದರಾಗಿ ಸುಧಾಕರ ಪರವ ಚೆನ್ನಬೆಟ್ಟು ಹರಿಖಂಡಿಗೆ, ವಾದ್ಯದವರಾಗಿ ಅಣ್ಣಿ ಸೇರಿಗಾರ ಹರಿಖಂಡಿಗೆ, ಮಡಿವಾಳರಾಗಿ ಸಾದು ಮಡಿವಾಳ ದೊಂಡೇರಂಗಡಿ ಇವರುಗಳು ಸೇವೆ ಸಲ್ಲಿಸುತ್ತಿದ್ದಾರೆ.
ಗರೋಡಿಗೆ ಸಂಬಂಧಪಟ್ಟು “ ಬೈದಶ್ರೀಯವಕರ ಸಂಘ” ಎಂಬ ಯುವಕರ ಕೂಟವೊಂದು ಕಾರ್ಯನಿರ್ವಹಿಸುತ್ತಿದ್ದು, ಹರೀಶ್ ಪೂಜಾರಿ ಕಂರ್ಬುಕಲ್ಲು ಇವರು ಪ್ರಸ್ತುತ ಅಧ್ಯಕ್ಷರಾಗಿದ್ದಾರೆ.

ಗರೋಡಿಯ ಪೂರ್ಣ ವಿಳಾಸ:

ಶ್ರೀ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ನೇರಳೆ ಅಡಿಸ್ಥಾನ ಗರಡಿ,
41 ನೇ ಶೀರೂರು, ,br>ಗ್ರಾಮ ಹರಿಖಂಡಿಗೆ,
ಹರಿಖಂಡಿಗೆ ಅಂಚೆ,
ಉಡುಪಿ ತಾಲೂಕು – 576124

ಗರೋಡಿ ಪೂ ಪೂಜನೆಯವರ ವಿಳಾಸ:

ಶ್ರೀ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ನೇರಳೆ ಅಡಿಸ್ಥಾನ ಗರಡಿ,
41 ನೇ ಶೀರೂರು,
ಗ್ರಾಮ ಹರಿಖಂಡಿಗೆ,
ಹರಿಖಂಡಿಗೆ ಅಂಚೆ,
ಉಡುಪಿ ತಾಲೂಕು – 576124

ಕೊಡಮಾಣಿತ್ತಾಯ ಮುಕ್ಕಾಲ್ದಿ ವಿಳಾಸ:

ಸುಧಾಕರ ಶೆಟ್ಟಿ,
ಬೆಟ್ಟುಮನೆ, 41 ನೇ ಶೀರೂರು,
ಹರಿಖಂಡಿಗೆ ಗ್ರಾಮ ಮತ್ತು ಅಂಚೆ,
ಉಡುಪಿ ತಾಲೂಕು – 576124.
ಮೊಬೈಲ್: 78993 09751

ಪ್ರವೀಣ್ ಪೂಜಾರಿ – ಅಧ್ಯಕ್ಷರು, ಆಡಳಿತ ಮಂಡಳಿ

ಮೊಬೈಲ್ : 98803 89859

ಮಾಹಿತಿ ಸಂಗ್ರಹಿಸಿದ ದಿನಾಂಕ:

12-11-2024