ಶ್ರೀ ಬ್ರಹ್ಮಬೈದರ್ಕಳ ಕೋಟಿ-ಚೆನ್ನಯ್ಯ, ಪಂಜುರ್ಲಿ ಹಾಗೂ ಪರಿವಾರ ದೈವಗಳ ಗರೋಡಿ, ಹೊಳ್ಮಗೆ
ಉಡುಪಿಯಿಂದ – ಕುಂದಾಪುರ – ಹೆಮ್ಮಾಡಿಯ ನಂತರ – ಅರಾಟೆ ಸೇತುವೆ ದಾಟಿ ಎನ್.ಎಚ್.66ರಿಂದ ಬಲಕ್ಕೆ ಗಂದಮಕ್ಕಿ ರಸ್ತೆಗೆ ತಿರುಗಿ ಹಕ್ಲಾಡಿ ಮಾರ್ಗವಾಗಿ ಸುಮಾರು 7ಕಿ.ಮೀ. ಸಾಗಿ ಈ ಗರೋಡಿ ತಲುಪ ಬಹುದು.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಬೆಳ್ಳಿಯ ಕವಚವಿರುವ ಮೂರ್ತಿಯಿದೆ.
ಗುಂಡದ ಎಡಭಾಗದಲ್ಲಿ ದೇಯಿಬೈದೆತಿ, ಕೋಟಿ-ಚೆನ್ನಯರು ಹಾಗೂ ಇಬ್ಬರು ಚಿಟುಕರ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ಕಾಂತಣ್ಣಬೈದ, ಮಗು ಹಾಗೂ ಕುದುರೆಯ ಮೇಲೆ ಕುಳಿತ ಬಲ್ಲಾಳರ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಹೈಗುಳಿ, ನೇತ್ರಹೈಗುಳಿ, ಮೂಡೂರ ಹೈಗುಳಿ, ನಂದಿಕೇಶ್ವರ ಹಾಗೂ ಪಂಜುರ್ಲಿ ದೈವಗಳಿಗ ಪೂಜೆ ನಡೆಯುತ್ತದೆ. ಎಡಬದಿಯಲ್ಲಿ ಶಂಕರಣ್ಣ ಹೈಗುಳಿ, ಕರಿಯಮ್ಮ, ಹಾಗೂ ಕರಿಬೆಟ್ಟಿನ ಹೈಗುಳಿ ದೈವಗಳ ಸಾನಿಧ್ಯವಿದೆ.
ಪಕ್ಕದಲ್ಲಿ ಪಂಜುರ್ಲಿ, ಮೋಡದ ಪಂಜುರ್ಲಿ, ಹೈಗುಳಿ, ಮಂಡಕಟ್ಟು ಹೈಗುಳಿ, ಜುಮಾದಿ, ಬಾಲಮ್ಮ, ಬಾಲಯ್ಯ, ದೊಟ್ಟಿಕಾಲು ಚಿಕ್ಕು, ಕುಡೂರ ಚಿಕ್ಕು, ಹಳೆಯಮ್ಮ, ಎಳೆಯಮ್ಮ, ಮರ್ಲಿಚಿಕ್ಕು, ಗುರಚಿಕ್ಕು, ಕೆಂಡಮ್ಮ, ಹೊನ್ನಮ್ಮ, ಚೆನ್ನಮ್ಮರ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಗೆ ಎದುರು ಮುಖವಾಗಿ ಹೈಗುಳಿ, (ಮೂರು) ಜೋಗಿಪುರುಷ, ಸಾವಿರ ಹೈಗುಳಿ, ಕೆಂಚಾರ ಹೈಗುಳಿ, ಹನಾರಹೈಗುಳಿ, ಹೀಂತ್ರ ಹೈಗುಳಿ, ಮೂತ್ರ ಹೈಗುಳಿ, ಚಂಡಿ, ಕೆಪ್ಪ ಹೈಗುಳಿ, ಮೂಕ ಹೈಗುಳಿ, ಮಾಸ್ತಿಯಮ್ಮ, ಪತ್ತಿನ ಚಿಕ್ಕು, ಅವತಾರ ಚಿಕ್ಕು, ಹೊಸ ಭೂತಗಳ ಮರದ ಮೂರ್ತಿ ಹಾಗೂ ಪಾತ್ರಿ ಪುರುಷರ ಕಲ್ಲುಗಳಿವೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯ ಮರದ ಮೂರ್ತಿ ಇದೆ.
ಗರೋಡಿಯ ಆವರಣದೊಳಗೆ ತುಳಸೀಕಟ್ಟೆ, ಬಲಿಕಲ್ಲು, ಕ್ಷೇತ್ರಪಾಲ ಸಾನಿಧ್ಯವಿದೆ.
ಗರೋಡಿಯ ಪರಿಸರದಲ್ಲಿ ನಾಗಬನವಿದೆ.
ಸಂಜೀವ ಪೂಜಾರಿ
ಸುಮಾರು 30 ವರ್ಷಗಳಿಂದ ಸಂಜೀವ ಪೂಜಾರಿಯವರು (64 ವರ್ಷ) ಗರೋಡಿಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮೊದಲು ಅಣ್ಣ ಅಂತ ಪೂಜಾರಿ, ಹಿರಿಯರಾದ ಬಾಲ ಪೂಜಾರಿ, ಕೃಷ್ಣ ಪೂಜಾರಿ, ನಾಗಪ್ಪ ಪೂಜಾರಿಯವರು ಈ ಸೇವೆ ಮಾಡಿದ್ದರು.
ಶಂಕರ ಪೂಜಾರಿಯವರು (60 ವರ್ಷ) ಗರೋಡಿಯ ದರ್ಶನದ ಸ್ಥಳ ಪಾತ್ರಿಗಳಾಗಿದ್ದಾರೆ. ಇವರ ಮೊದಲು ರಾಮ ಪೂಜಾರಿ, ಜಲ್ಲ ಪೂಜಾರಿಯವರು ಇಲ್ಲಿಯ ಪಾತ್ರಿಗಳಾಗಿದ್ದರು.
ಗರೋಡಿಯ ಉಸ್ತುವಾರಿಗೆ ಆಡಳಿತ ಸಮಿತಿಯಿದ್ದು, ಸುಭಾಷ್ ಶೆಟ್ಟಿಯವರು ಸಮಿತಿಯ ಅಧ್ಯಕ್ಷರಾಗಿ, ಚಂದ್ರಹಾಸ ನಾಯ್ಕ ಕಾರ್ಯದರ್ಶಿಯಾಗಿ, ಚಂದ್ರ ಪೂಜಾರಿ ಜತೆ ಕಾರ್ಯದರ್ಶಿಯಾಗಿ, ಸೂರು ನಾಯ್ಕ ಕೋಶಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗರೊಡಿಯಲ್ಲಿ ನಿತ್ಯ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಕೊಡಿತಿಂಗಳಲ್ಲಿ ಅಗೆಲು ಸೇವೆ, ಮರುದಿನ ದರ್ಶನ ತುಲಾಭಾರ ಸೇವೆ, ಕೈದ ಪೂಜೆಗಳು ನಡೆಯುತ್ತವೆ. ಮಾರ್ಚ 12ನೇ ತಾರೀಖಿಗೆ ಪಂಜುರ್ಲಿ ದೈವದ ಕೋಲ, 14ನೇ ತಾರೀಖಿನಂದು ಗೆಂಡ ಸೇವೆ ನಡೆಯುತ್ತದೆ.
ಹೊಳ್ಮಗೆ ಹಾಗೂ ಹಕ್ಲಾಡಿ ಗ್ರಾಮದ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಭಕ್ತ ಜನರ ವರಡ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಗರೋಡಿಗೆ 10ಸೆಂಟ್ಸ ಜಾಗವಿದ್ದು ಸುಮಾರು 20ವರ್ಷಗಳ ಹಿಂದೆ ಗರೋಡಿಯ ಜೀರ್ಣೋದ್ಧಾರ ನಡೆದಿದೆ.
ಪಂಜುರ್ಲಿ ದೈವದ ಕೋಲಕ್ಕೆ ಬಾಬು ಪಾಣಾರ ಮತ್ತು ಸಂಗಡಿಗರು ನೃತ್ಯವಿಶಾರದರಾಗಿ ಸೇವೆ ಸಲ್ಲಿಸುತ್ತಾರೆ. ಗರೋಡಿಯ ಮಡಿವಾಳರಾಗಿ ಮಹೇಶ್ ಮಡಿವಾಳರು ಸೇವೆ ಸಲ್ಲಿಸುತ್ತಿದ್ದಾರೆ.
ಗರೋಡಿಯ ವಿಳಾಸ:
ಶ್ರೀ ಬ್ರಹ್ಮಬೈದರ್ಕಳ ಕೋಟಿ-ಚೆನ್ನಯ್ಯ ಪಂಜುರ್ಲಿ ಹಾಗೂ ಪರಿವಾರ ದೈವಗಳ ಗರೋಡಿ,
ಹಕ್ಲಾಡಿ ಗ್ರಾಮ, ಕುಂದಾಪುರ ತಾಲೂಕು,
ಉಡುಪಿ ಜಿಲ್ಲೆ.
ಹಕ್ಲಾಡಿ ಗ್ರಾಮ, ಕುಂದಾಪುರ ತಾಲೂಕು,
ಉಡುಪಿ ಜಿಲ್ಲೆ.
ಗರೋಡಿಯ ಅರ್ಚಕರು:
ಸಂಜೀವ ಪೂಜಾರಿ – 9741953582
ಪಾತ್ರಿಗಳು
ಶಂಕರ ಪೂಜಾರಿ – 9845650365
ಮಾಹಿತಿ ನೀಡಿದವರು
ಸಂಜೀವ ಪೂಜಾರಿ
ಮಾಹಿತಿ ಸಂಗ್ರಹಿಸಿದ ದಿನಾಂಕ :
27.01.2025