Baidashree

Shree KJodamanittaya & Brhma Baidarkala Garodi, Thellar

ಶ್ರೀ ಕೊಡಮಣಿತ್ತಾಯ ಮತ್ತು ಬ್ರಹ್ಮಬೈದರ್ಕಳ ಗರೋಡಿ, ತೆಳ್ಳಾರು

ಉಡುಪಿಯಿಂದ ಹಿರಿಯಡ್ಕ – ಬೈಲೂರು – ಕಾರ್ಕಳ ತಲುಪಿ ಕಾರ್ಕಳ ತೆಳ್ಳಾರು ಮಾರ್ಗದಲ್ಲಿ ಸುಮಾರು4.5ಕಿ.ಮೀ.ದೂರದಲ್ಲಿದೆ ಈ ಗರೋಡಿ.
Thellar-Garodi-1
Thellar-Garodi-2
Thellar-Garodi-3
ಇದು ಶಿಲಾಮಯ ಗರೋಡಿಯಾಗಿದ್ದುಆಯದಲ್ಲಿದೆ. ಗರೋಡಿಗೆ ಎರಡು ದ್ವಾರಗಳಿದ್ದು ಮುಖ್ಯ ದ್ವಾರವು ಪೂರ್ವಾಭಿಮುಖವಾಗಿಯೂ, ಇನ್ನೊಂದು ದ್ವಾರವು ಉತ್ತರ ದಿಕ್ಕಿಗೆ ಇದೆ. ಹಿಂದೆ ಈ ಗರೋಡಿಯು ಕಲ್ಲೊಟ್ಟು ಎಂಬಲ್ಲಿದ್ದು 22-02-2015ರಲ್ಲಿ ಈಗಿರುವ ಹಂಪದೊಟ್ಟು, ತೆಳ್ಳಾರಿಗೆ ಸ್ಥಳಾಂತರಿಸಲಾಯಿತು. ಕಲೊಟ್ಟಿನಲ್ಲಿ ಈ ಹಿಂದೆ ಗರೋಡಿ ಇದ್ದ ಜಾಗದಲ್ಲಿ ಈಗ ಬ್ರಹ್ಮಸ್ಥಾನ (ಆಲಡೆ) ಹಾಗೂ ಗಣಪತಿ ದೇವಸ್ಥಾನಗಳಿವೆ.
Thellar-Garodi-4
Thellar-Garodi-5
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ನಾಗ ಬ್ರಹ್ಮರ ಪಂಚಲೋಹದ ಮೂರ್ತಿ, ಗುಂಡದ ಮೇಲಂತಸ್ಥಿನಲ್ಲಿ ಗಾಳಿ ದೇವರ ಆರಾಧನೆಯಿದೆ. ಗುಂಡದ ಎಡಬಲದಲ್ಲಿ ಇಬ್ಬರು ಸಿರಿಗಳ ಮರದ ಮೂರ್ತಿಯಿದೆ.
Thellar-Garodi-6
ಗುಂಡದ ಎಡಬದಿಯಲ್ಲಿ ಕೋಟಿ-ಚೆನ್ನಯರ ಹಾಗೂ ಕುಜುಂಬಕಾಂಜವರ ಹಾಗೂ ಪಕ್ಕದಲ್ಲಿಯೇ ಮೂವರು ಮಕ್ಕಳ ಮರದ ಮೂರ್ತಿಗಳಿವೆ.
Thellar-Garodi-7
ಗುಂಡದ ಬಲಬದಿಯಲ್ಲಿ ಮೂವರು ಬೈದೇರುಗಳ ಪಣಿಯಾರದ ಮಂಚವಿದೆ.
Thellar-Garodi-8
ಬ್ರಹ್ಮಗುಡಿಯ ಹೊರಗೆ ಎಡಬದಿಯಲ್ಲಿ ಮಾಯಂದಾಲ್ ಮತ್ತು ಮಗುವಿನ ಮರದ ಮೂರ್ತಿಗಳಿವೆ.
Thellar-Garodi-9
ಗರೋಡಿಯ ಬಲಬದಿಯಲ್ಲಿರುವ ಕಟ್ಟೆಯಲ್ಲಿ ಜುಮಾದಿ ಹಾಗೂ ಬಂಟರ ಸಾನಿಧ್ಯವಿದೆ.
Thellar-Garodi-10
ಗರೋಡಿಯ ಪಕ್ಕದಲ್ಲಿರುವ ಗುಡಿಯಲ್ಲಿ ಧರ್ಮರಸು ಹಾಗೂ ಕೊಡಮಣಿತ್ತಾಯ ದೈವಗಳ ಸಾನಿಧ್ಯವಿದೆ. ಗರೋಡಿಯ ಪರಿಸರದಲ್ಲಿ ಎರಡು ಅಜೆಕಾಯಿ ಕಲ್ಲುಗಳಿವೆ.
ಅರುಣ್ ಪೂಜಾರಿ (35 ವರ್ಷ) ಇವರು ಗರೋಡಿಯ ಪೂ ಪೂಜನೆಯವರು, ಅದಕ್ಕೂ ಮೊದಲು ಅವರ ಮಾವ ದೊಂಬ ಪೂಜಾರಿಯವರು ಈ ಸೇವೆ ಮಾಡಿದ್ದರು.
ಈ ಗರೋಡಿಯಲ್ಲಿ ಈಗ ಬೈದರ ದರ್ಶನದ ಸ್ಥಳ ಪಾತ್ರಿಗಳಿಲ್ಲ. ಹಿಂದೆ ತಬುರ ಪೂಜಾರಿ ಹಾಗೂ ಬಾಬು ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಗರೋಡಿಯ ಉಸ್ತುವಾರಿಗೆ 1) ಮಾಗಣೆ ಗುತ್ತು 2) ಅರಂತೊಟ್ಟು ಗುತ್ತು 3) ಅರಸರ ಗುತ್ತು 4) ಮೂಡುಮನೆ ಗುತ್ತು 5) ಮೇಗಿನ ಮನೆ ಗುತ್ತು 6) ನಿಲಬೆಟ್ಟು ಗುತ್ತುಗಳೆಂಬ ಆರು ಗುತ್ತು ಹಾಗೂ 1) ಮಾಂಜ ಬರ್ಕೆ 2) ಡೆಕ್ಕಿನಡ್ಕ ಬರ್ಕೆ 3) ನೇರೊಲ್ದಪಲ್ಕೆ ಬರ್ಕೆ ಹಾಗೂ 4) ಬಲಾಜೆ ಬರ್ಕೆಗಳೆಂಬ ನಾಲ್ಕು ಬರ್ಕೆಗಳಿವೆ.
ಗರೋಡಿಯಲ್ಲಿ ಸಂಕ್ರಾಂತಿ ಪೂಜೆ , ಚೌತಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರುಕಟ್ಟುವ ಕ್ರಮಗಳಿವೆ.
ಪ್ರತೀ ವರ್ಷ ಡಿಸೆಂಬರ್ ತಿಂಗಳಲ್ಲಿ ಒಂದು ದಿನ ಮಾಂಜ ಬರ್ಕೆಯಿಂದ ಬೈದೇರುಗಳ ಭಂಡಾರ ಹಾಗೂ ಮಾಗಣೆ ಗುತ್ತುವಿನಿಂದ ಕೊಡಮಣಿತ್ತಾಯ ಬಂಡಾರ ದರ್ಶನದಲ್ಲಿ ಬಂದು ಧ್ವಜಾರೋಹಣವಾಗಿ ಧರ್ಮರಸು ಹಾಗೂ ಕೊಡಮಣಿತ್ತಾಯ ದೈವಗಳ ಕೋಲ ನಡೆಯುತ್ತದೆ. ಮರುದಿನ ಬೈದೇರುಗಳ ನೇಮ, ಶನಿಪೂಜೆ, ನಡೆದು ದ್ವಜಾವರೋಹಣ ನಡೆಯುತ್ತದೆ. ಅದರ ಮರುದಿನ ಮಾಯಂದಾಲ್ ಕೋಲ ನಡೆದು ಭಂಡಾರ ವಾಪಾಸು ಹೋಗುತ್ತದೆ.
ಏಪ್ರಿಲ್ ತಿಂಗಳಲ್ಲಿ ಚಾಂದ್ರಮಾನ ಯುಗಾದಿಯ 9ನೇ ದಿನದಲ್ಲಿ ಹಾಕೊಡ ಬಾಕ್ಯಾರಿನಲ್ಲಿ ಬಂಡಾರ ಬಂದು ದೊಂಪದ ಬಲಿ ಧರ್ಮರಸು, ಕೊಡಮಣಿತ್ತಾಯ, ಬೈದರ್ಕಳ ನೇಮ ಹಾಗೂ ಪರಿವಾರ ದೈವಗಳ ಕೋಲ, ಗೋಂದೋಲ್ ಪೂಜೆ, ಗಡುವಾಡಿಗೆ ಸೂಟೆದಾರ ಇತ್ಯಾದಿ ನಡೆಯುತ್ತದೆ. ಮರುದಿನ ಬೆಳಿಗ್ಗೆ ನಂಬಿಕೆ ಪ್ರಸಾದ, ಭಕ್ತಾಧಿಗಳ ನ್ಯಾಯ, ಅನ್ಯಾಯ, ಕಷ್ಟಕಾರ್ಪಣ್ಯಗಳನ್ನು ದೈವದೊಡನೆ ಬಿನೈಯಿಸುವುದು ಹಾಗೂ ನುಡಿ ರೂಪದಲ್ಲಿ ಪರಿಹಾರ, ದೈವದ ಭಂಡಾರ ವಾಪಾಸು ಗುತ್ತು ಹಾಗೂ ಬರ್ಕೆಗಳಿಗೆ ಬರುವುದು, ಶುದ್ಧ ಕಲಶ ನಡೆಯುತ್ತದೆ.
ದುರ್ಗಾ ಹಾಗೂ ತೆಳ್ಳಾರಿನ ಜನ ಈ ಗರೋಡಿಗೆ ಸೇವೆ ಸಲ್ಲಿಸುತ್ತಾರೆ. ಊರಜನರ ವರಡ ವಂತಿಗೆಯಿAದ ಗರೋಡಿಯ ಕಾರ್ಯಕ್ರಮಗಳು ನಡೆಯುತ್ತವೆ.
ಗಂಗಯ್ಯ ಪರವ ಬಜಗೋಳಿ ಮತ್ತು ಸಂಘಡಿಗರು ಈ ಗರೋಡಿಯ ನೃತ್ಯ ವಿಶಾರದರಾಗಿ, ಸಂಜೀವ ಮಡಿವಾಳ ತೆಳ್ಳಾರು ಮಡಿವಾಳರಾಗಿ, ಪಾಂಡು ಕಾರ್ಕಳ ಇವರು ವಾಧ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.
Thellar-Garodi-11

ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು

ಗರೋಡಿಯ ವಿಳಾಸ:

ಶ್ರೀ ಕೊಡಮಣಿತ್ತಾಯಮತ್ತು ಬ್ರಹ್ಮಬೈದರ್ಕಳ ಗರೋಡಿ ತೆಳ್ಳಾರು,
ತೆಳ್ಳಾರು ಅಂಚೆ, ಕಾರ್ಕಳ ತಾಲೂಕು
ಉಡುಪಿ 576117

ಗರೋಡಿಯ ಪೂ ಪೂಜನೆಯವರು:

ಅರುಣ್ ಪೂಜಾರಿ – 9844681306

ಮಾಹಿತಿ ನೀಡಿದವರು:

ಅಭಿಲಾಷ – 8971719800
ಶೇಖರ ಪೂಜಾರಿ

ಮಾಹಿತಿ ಸಂಗ್ರಹಿಸಿದವರು:

ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

16-07-2025