Baidashree

Shree Kodamanittaya Shree Dharmarasu Shree Brahma Baidarkala Garodi, Hajankabetta, Ladi

ಶ್ರೀ ಕೊಡಮಣಿತ್ತಾಯ, ಶ್ರೀ ಧರ್ಮರಸುಕುಮಾರ, ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಹಜಂಕಾಲಬೆಟ್ಟ, ಲಾಡಿ ಮೂಡಬಿದಿರೆ

ಉಡುಪಿಯಿಂದ – ಮೂಡಬಿದಿರೆ ತಲುಪಿ, ಮೂಡಬಿದಿರೆ ನಗರದಿಂದ ಸುಮಾರು 1ಕಿ.ಮೀ.ದೂರದಲ್ಲಿದೆ ಈ ಗರೋಡಿ
Laadi-Garodi-1
Laadi-Garodi-2
ಗರೋಡಿಗೆ ಉತ್ತರಾಭಿಮುಖವಾದ ಒಂದು ದ್ವಾರವನ್ನು ಹೊಂದಿದೆ. ಗರೋಡಿಯ ಒಳಗೆ ಮಣೆ ಮಂಚದ ಮೇಲೆ ಮರದ ಗುಂಡವಿದೆ. ನಾಗಬ್ರಹ್ಮರ ಕಂಚಿಗೆ ಬೆಳ್ಳಿ ಮುಂಚ್ಚಿದ ಮೂರ್ತಿ ಇದೆ. ಮೂರು ಸುರಿಯಗಳಿವೆ. ಎಡಬದಿಯಲ್ಲಿ ಮಾಯಂದಾಲ್ ಮಣೆ ಮಂಚವಿದೆ.
Laadi-Garodi-4
ಗರೋಡಿಯ ಎದುರಿಗೆ ಇರುವ ಗುಡಿಯಲ್ಲಿ ಕೊಡಮಣಿತ್ತಾಯ ದೈವದ ಸಾನಿಧ್ಯವಿದೆ. ಎದುರಿಗೆ ಧ್ವಜಸ್ಥಂಭವಿದೆ. ಪಕ್ಕದಲ್ಲಿರುವ ಇನ್ನೊಂದು ಗುಡಿಯಲ್ಲಿ ಧರ್ಮರಸು, ದೇವಕುಮಾರ ದೈವಗಳ ಸಾನಿಧ್ಯವಿದೆ.
Laadi-Garodi-5
ಗರೋಡಿಯ ಆವರಣದೊಳಗೆ ಅಜೆಕಾಯಿಕಲ್ಲುಗಳಿವೆ.
Laadi-Garodi-6

ರಾಜು ಕೋಟ್ಯಾನ್

ರಾಜು ಕೋಟ್ಯಾನ್(83 ವರ್ಷ)ಇವರು ಗರೋಡಿಯ ಅರ್ಚಕರಾಗಿದ್ದಾರೆ. ಇವರಿಗೆ ಮೊದಲು ಕೂಕ್ರ ಪೂಜಾರಿ, ಕೊರಗ ಪೂಜಾರಿಯವರು ಈ ಸೇವೆ ಮಾಡಿದ್ದರು. ವೃಷಭರಾಜ ಬಲ್ಲಾಳರು ಈ ಗರೋಡಿಯ ಮೊಕ್ತೇಸರರು.
ಗರೋಡಿಯಲ್ಲಿ ಸಂಕ್ರಾಂತಿ ಪೂಜೆ, ದೀಪಾವಳಿ ಪೂಜೆಗಳು ನಡೆಯುತ್ತದೆ.
ಜನವರಿ ತಿಂಗಳ 14ನನೇ ತಾರೀಖಿನಂದು ಭಂಡಾರ ಬಂದು, ಕೊಡಿ ಏರಿ,ದೈವಕುಮಾರ ನೇಮ ನಡೆಯುತ್ತದೆ. 15ನೇ ತಾರೀಖಿನಂದು ಕೊಡಮಣಿತ್ತಾಯ ನೇಮ, ಬಲಿ, 16ನೇ ತಾರೀಖಿನಂದು ಬೈದೇರುಗಳ ನೇಮ, ಮಾಯಂದಾಲ್ ನೇಮದ ಬಳಿಕ ಬಲಿ 17ನೇ ತಾರೀಖಿನಂದು ಕೊಡಮಣಿತ್ತಾಯ ದೈವಕ್ಕೆ ಕುರಿತಂಬಿಲ ಸೇವೆ ನಡೆದು ಕೊಡಿ ಇಳಿಸಿ ಭಂಡಾರ ವಾಪಾಸು ಹೋಗುವುದು. ಬೈದೇರುಗಳ ಭಂಡಾರ ಅನರೊಟ್ಟು ಬರ್ಕೆಯಿಂದಲೂ, ದೈವಕುಮಾರ ಭಂಡಾರವು ಈಶ್ವರ ಪೂಜಾರಿ, ಗಡಿ ಪ್ರಧಾನರು, ಮಿತ್ತಲಾಡಿ ಬರ್ಕೆಯಿಂದಲೂ, ಕೊಡಮಣಿತ್ತಾಯ ದೈವ ಭಂಡಾರವು ಲಾಡಿಗುತ್ತು ವೃಷಭರಾಜ ಬಲ್ಲಾಳರ ಮನೆಯಿಂದಲೂ ಬರುವುದು.
ಲಾಡಿ ಗ್ರಾಮದ ಜನರು ಈ ಗರೋಡಿಯಲ್ಲಿ ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಅಂಸರ್ಭದಲ್ಲಿ ಪ್ರಾರ್ಥಿಸಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರಜನರ ವರಡ ವಂತಿಗೆಯಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಸುಮಾರು ಇಪ್ಪತೈದು ವರ್ಷಗಳ ಕಾಲ ಇಲ್ಲಿ ಜಾತ್ರೆ ನೇಮ ನಡೆಯದೆ ಇದ್ದು 2001ರಲ್ಲಿ ಜೀರ್ಣೋದ್ಧಾರವಾದ ನಂತರ ಪುನ: ನೇಮ ಜಾತ್ರೆ ನಡೆಯಲಾರಂಭಿಸಿದ್ದಿ ಈಗ ಪುನ: ಜೀರ್ಣೋದ್ದಾರದ ಯೋಜನೆಯಿದೆ.
ನಾರಾಯಣ ಪರವ ಮಾರೂರು, ಜಯ ಪರವ, ಪ್ರಶಾಂತ ಪರವ ವಾಲ್ಪಾಡಿ ಇವರು ಈ ಗರೋಡಿಯ ನೃತ್ಯ ವಿಶಾರದರಾಗಿ, ಶ್ರೀನಿವಾಸ ಮಡಿವಾಳ ಲಾಡಿ ಇವರು ಮಡಿವಾಳರಾಗಿ, ದಿನೇಶ್ ಹೊಸಬೆಟ್ಟು ವಾಧ್ಯದದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.
ಗರೋಡಿಗೆ ಸಂಬಂಧಪಟ್ಟು ಗರೋಡಿಯ ಆವರಣದಲ್ಲಿ ಭಜರಂಗದಳ ಲಾಡಿ ಘಟಕ, ಹೆಜಂಕಾಲಬೆಟ್ಟ ಭಜನಾಮಂಡಳಿಗಳು ಕಾರ್ಯನಿರ್ವಹಿಸುತ್ತಿವೆ
Laadi-Garodi-7

ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು

ಗರೋಡಿಯ ವಿಳಾಸ:

ಶ್ರೀ ಕೊಡಮಣಿತ್ತಾಯ ಶ್ರೀ ಧರ್ಮರಸುಕುಮಾರ ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಹಜಂಕಾಲಬೆಟ್ಟ, ಲಾಡಿ
ಮೂಡಬಿದಿರೆ

ಮಾಹಿತಿ ನೀಡಿದವರು:

ಸುರೇಶ್ ಕೋಟ್ಯಾನ್ – 9611098309
ಗಣೇಶ್ ಕೋಟ್ಯಾನ್
ರಾಜು ಕೋಟ್ಯಾನ್

ಮಾಹಿತಿ ಸಂಗ್ರಹಿಸಿದವರು:

ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

23-12-2025