ಶ್ರೀ ವ್ಯಾಘ್ರ ಚಾಮುಂಡಿ, ಶ್ರೀ ಬ್ರಹ ಬೈದರ್ಕಳ ಗರೋಡಿ, ಹಂಡೇಲು ದೇವಸ
ಉಡುಪಿ – ಮೂಡಬಿದಿರೆ ಮಾರ್ಗವಾಗಿ ಹಂಡೇಲು ತಲುಪಿ ಈ ಗರೋಡಿಗೆ ಹೋಗ ಬಹುದು.
ಗರೋಡಿಗೆ ಪೂವಾಭಿಮುಖವಾದ ಮುಖ್ಯ ದ್ವಾರವಿದ್ದು, ಇನ್ನೊಂದು ದ್ವಾರವು ಉತ್ತರ ದಿಕ್ಕಿಗೆ ಇದೆ.
ಗರೋಡಿಯ ಒಳಗೆ ಉತ್ತರಾಭಿಮುಖವಾಗಿ ಮಣೆಮಂಚದ ಮೇಲೆ ಮರದ ಗುಂಡವಿದೆ. ಪೂಜಾ ಸಂದರ್ಭಗಳಲ್ಲಿ ಭಂಡಾರದ ಮನೆಯಿಂದ ನಾಗಬ್ರಹ್ಮರ ಕಂಚಿನ ಮೂರ್ತಿ ಹಾಗೂ ಕೋಟಿ-ಚೆನ್ನಯರ ಎರಡು ಸುರಿಯ ಹಾಗೂ ಕುಜುಂಬ ಕಾಂಜವರ ಒಂದು ಸುರಿಯ ತಂದು ಇದರ ಮೇಲೆ ಇಡಲಾಗುತ್ತದೆ. ಕುಜುಂಬ ಕಾಂಜವರಿಗೂ ಮಣೆ ಮಂಚದಲ್ಲಿ ಪೂಜೆ ನಡೆಯುತ್ತದೆ. ಪಕ್ಕದಲ್ಲಿ ಮಾಯಂದಾಲ್ ಮಣೆ ಮಂಚ ಹಾಗೂ ಮೈಸಂದಾಯ, ಓಡಿಲ್ತಾಯ ದೈವಗಳ ಮಣೆ ಮಂಚಗಳಿವೆ.
ಪಕ್ಕದಲ್ಲಿ ಪೂರ್ವಾಭಿಮುಖವಾಗಿ ಪಿಲ್ಚಂಡಿ ದೈವದ ಮಣೆ ಮಂಚವಿದೆ. ಭಂಡಾರದ ಮನೆಯಿಂದ ದೈವದ ಮೂರ್ತಿ ಹಾಗೂ ಕಡ್ಸಲೆಗಳನ್ನು ಪೂಜಾ ಸಂದರ್ಭಗಳಲ್ಲಿ ಇಲ್ಲಿಗೆ ತಂದು ಇಟ್ಟು ಪೂಜೆ ಮಾಡಲಾಗುತ್ತದೆ.
ಗರೋಡಿಯ ಪಕ್ಕದಲ್ಲಿ ಬೈದೇರುಗಳ ಭಂಡಾರದ ಮನೆ.
ಬೈದೇರುಗಳ ಭಂಡಾರದ ಮನೆಯ ಮುಂದೆ ಇರುವ ಭಂಡಾರ ಇಡುವ ಗುಡಿ.
ಬೈದೇರುಗಳ ಭಂಡಾರ.
ಪಿಲ್ಚಂಡಿ ದೈವದ ಭಂಡಾರದ ಮನೆ.
ಪಿಲ್ಚಂಡಿ ದೈವದ ಭಂಡಾರದ ಮನೆಯ ಮುಂದೆ ಇರುವ ಭಂಡಾರ ಇಡುವ ಗುಡಿ.
ಗರೋಡಿಯ ಆವರದೊಳಗೆ ಅಜೆಕಾಯಿ ಕಲ್ಲುಗಳಿವೆ.
ಶಿವಾನಂದ ಪೂಜಾರಿ
ಶಿವಾನಂದ ಪೂಜಾರಿ (60 ವರ್ಷ) ಬೈದೇರುಗಳ ಭಂಡಾರದ ಮನೆಯ ಹಿರಿಯರಾಗಿದ್ದು, ಭಂಡಾರದ ಕೋಣೆಯಲ್ಲಿ ನಿತ್ಯ ಹೂ ನೀರು ಇಡುತ್ತಾರೆ ಸಂಕ್ರಾಂತಿಯಂದು ಪೂಜೆ ನಡೆಯುತ್ತದೆ. ಇವರಿಗೆ ಮೊದಲು ಅಣ್ಣಿ ಪೂಜಾರಿ, ನಕ್ರ ಪೂಜಾರಿ, ಪೂವ ಪೂಜಾರಿಯವರು ಇಲ್ಲಿಯ ಹಿರಿಯರಾಗಿ ಈ ಸೇವೆ ಮಾಡುತ್ತಿದ್ದರು.
ಶ್ರೀ ರಕ್ಷಿತ್ ಬಲ್ಲಾಳರು ಈ ಗರೋಡಿಯ ಆಡಳಿತ ಸಮಿತಿಯ ಗೌರವಾಧ್ಯಕ್ಷರಾಗಿ, ಎಚ್.ಧನಕೀರ್ತಿ ಬಲಿಪರು ಅಧ್ಯಕ್ಷರಾಗಿ, ಶ್ರೀಧರ್ ಕೆ ಇವರು ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಗರೋಡಿಯಲ್ಲಿ ಸೋಣ ಸಂಕ್ರಾಂತಿಯಂದು ಪೂಜೆ ಇದೆ. ಜಾರ್ದೆ ಹೋಗಿ ಪೆರಾರ್ದೆ ಬರುವ ಸಂಕ್ರಾಂತಿಯಂದು ಭಂಡಾರ ಬಂದು ಬೈದೇರುಗಳ, ಜೋಗಿಪುರುಷ, ಪಿಲ್ಚಂಡಿ ಹಾಗೂ ಮಾಯಂದಾಲ್ ಕೋಲ ನಡೆದು ಭಂಡಾರ ವಾಪಾಸು ಹೋಗುವ ಕ್ರಮ ಇದೆ.
ಹಂಡೇಲು ಗ್ರಾಮದ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಊರ ಜನರ ವರಡ ವಂತಿಗೆಯಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
1942 ಹಾಗೂ 1972ರಲ್ಲಿ ಈ ಗರೋಡಿಯ ಜೀರ್ಣೋದ್ದಾರವಾಗಿದೆ.
ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು
ಗರೋಡಿಯ ವಿಳಾಸ:
ವ್ಯಾಘ್ರ ಚಾಮುಂಡಿ ಶ್ರೀ ಬ್ರಹ್ಮಬೈದರ್ಕಳ ಗರೋಡಿ ಹಂಡೇಲು ದೇವಸ
ಮಿಜಾರು ಅಂಚೆ, ಪುತ್ತಿಗೆ ಗ್ರಾಮ,
ಮೂಡಬಿದಿರೆ – 574225
ಮಿಜಾರು ಅಂಚೆ, ಪುತ್ತಿಗೆ ಗ್ರಾಮ,
ಮೂಡಬಿದಿರೆ – 574225
ಮಾಹಿತಿ ನೀಡಿದವರು:
ಶಿವಾನಂದ ಪೂಜಾರಿ – 9900714790
ಯಕ್ಷಿತ್ ಪೂಜಾರಿ
ಯಕ್ಷಿತ್ ಪೂಜಾರಿ
ಮಾಹಿತಿ ಸಂಗ್ರಹಿಸಿದವರು:
ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ
ಹರೀಶ್ ಎಮ್. ಕೆ. ಕಲ್ಮಾಡಿ
ಮಾಹಿತಿ ಸಂಗ್ರಹಿಸಿದ ದಿನಾಂಕ:
23-12-2025