Baidashree

Shree Brahma Baidarkala Garodi, Navunda

ಶ್ರೀ ಬ್ರಹ್ಮಬೈದರ್ಕಳ ಕೋಟಿಚೆನ್ನಯ ಗರೋಡಿ, ನಾವುಂದ

ಉಡುಪಿಯಿಂದ – ಕುಂದಾಪುರ – ಮರವಂತೆಯಾಗಿ ನಾವುಂದ ತಲುಪಿ ರಾಷ್ಟ್ರೀಯ ಹೆದ್ದಾರಿ ಎನ್.ಎಚ್.66ರಿಂದ ಬಲಕ್ಕೆ ತಿರುಗಿ ಸುಮಾರು ಒಂದು ಕಿ.ಮೀ. ಸಾಗಿದರೆ ನಾವುಂದ ಗರೋಡಿ ಸಿಗುವುದು.
ಗರೋಡಿಯು ಪೂರ್ವಾಭಿಮುಖವಾದ ಒಂದು ದ್ವಾರವನ್ನು ಹೊಂದಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ಪಂಚಲೋಹಕ್ಕೆ ಬೆಳ್ಳಿಕವಚ ಹೊದಿಸಿದ ನಾಗಬ್ರಹ್ಮರ ಮೂರ್ತಿ ಹಾಗೂ ಇನ್ನೊಂದು ಮರದ ನಾಗಬ್ರಹ್ಮರ ಮೂರ್ತಿ ಹೀಗೆ ಎರಡು ಮೂರ್ತಿಗಳಿವೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರು, ಇಬ್ಬರು ಬಂಟರು, ದೇಯಿಬೈದೆತಿ ಹಾಗೂ ನಂದಿಕೋಣರ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ಬೈದ ಹಾಗೂ ಬಂಟ, ಕಿನ್ನಿದಾರುವಿನ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಭಾಗದಲ್ಲಿ ಹೊನ್ನಮ್ಮ, ಚಿನ್ನಮ್ಮ ಮರದ ಮೂರ್ತಿ , ಪ್ರಸಾದ ಹೈಗುಳಿ, ಮೂಡೂರ (ಕಡಕಟ್ಟಿನ) ಹೈಗುಳಿ ದೈವಗಳ ಕಂಚಿನ ಮೂರ್ತಿಗಳಿವೆ.
ಬ್ರಹ್ಮಗುಡಿಯ ಎಡಭಾಗದಲ್ಲಿ ಪಂಜುರ್ಲಿ ದೈವದ ಪಂಚಲೋಹಕ್ಕೆ ಬೆಳ್ಳಿಯ ಕವಚವಿರುವ ಮೂರ್ತಿ ಒಂಟಿ ಕೋಡೊನ ಪಂಜುರ್ಲಿ, ಧೂಮಾವತಿ, ಹೈಗುಳಿ, ಹಾಲು ಹಣ್ಣಿನ ಹೈಗುಳಿ ದೈವಗಳ ಸಾನಿದ್ಯವಿದೆ.
ಪಕ್ಕದಲ್ಲಿ ಜಟ್ಟಿಗ, ಮೈಂದಾಳ್ತಿ, ಬಾಲಕಂದರ ಮರದ ಮೂರ್ತಿಗಳಿವೆ.
ಅದರ ಪಕ್ಕದಲ್ಲಿ ನಂದಿ ಹಾಗೂಕರಿಬೆಟ್ಟಿನ ಹೈಗುಳಿ ಕಂಚಿನ ಮೂರ್ತಿ, ಮೂಡೂರ ಅಮ್ಮ (ಚಿಕ್ಕು) ದೊಟ್ಟಿಕಾಲು ಚಿಕ್ಕು, ಅವತಾರ ಚಿಕ್ಕು, ಬಾಲ ಚಿಕ್ಕು, ಮರ್ಲು ಚಿಕ್ಕು, ಬಗ್ಗು ಚಿಕ್ಕು, ಸನ್ಯಾಸಿ (ಜೋಗಿ ಪುರುಷ)ರ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಗೆ ಎದುರು ಮುಖವಾಗಿ ಕೆಪ್ಪ ಹೈಗುಳಿ, ಕುಜ್ಙಾಡಿ ಹೈಗುಳಿ, ಕುಂಟ ಹೈಗುಳಿ, ನಂದಿ, ಮುರ್ಚಂಡಿ, ಸುಂಕದಕಟ್ಟೆ ಹೈಗುಳಿ, ಯಕ್ಷಿ, ಮಾಸ್ತಿಕಟ್ಟೆ ಚಿಕ್ಕು, ಮಾರಣಕಟ್ಟೆ ಚಿಕ್ಕು, ಕೆಂಪಣ್ಣ ಹೈಗುಳಿ, ದೈವಗಳ ಮರದ ಮೂರ್ತಿಗಳಿವೆ.
ಗರೋಡಿಯ ಬಾಗಿಲ ಹತ್ತಿರ ಬಾಗಿಲು ಬೊಬ್ಬರ್ಯನ ಮರದ ಮೂರ್ತಿಯಿದೆ.
ಗರೋಡಿಯ ಹೊರಗೆ ಆವರಣದೊಳಗಿನ ಗುಡಿಯಲ್ಲಿ ಹೊರಸುತ್ತಿನ ಹೈಗುಳಿ ದೈವದ ಸಾನಿಧ್ಯವಿದೆ. ಇನ್ನೊಂದು ಗುಡಿಯಲ್ಲಿ ಕಂಚಿನ ಹೈಗುಳಿಯ ಕಂಚಿನ ಮೂರ್ತಿ ಹಾಗೂ ಯಕ್ಷಿಯ ಮರದ ಮೂರ್ತಿಯಿದೆ.
ಒಂದು ಕಟ್ಟೆಯಲ್ಲಿ ಕೀಳು, ಮಂತ್ರಿಗಣ ಹಾಗೂ ಕಲ್ಲುಕುಟ್ಟಿಗ ದೈವಗಳ ಸಾನಿಧ್ಯವಿದೆ. ಇನ್ನೊಂದು ಕಟ್ಟೆಯಲ್ಲಿ ರಾಹು, ನೀಚ, ರಕ್ತ ಹೈಗುಳಿ, ನೇತ್ರ ಹೈಗುಳಿ, ಹಾಗೂ ಗ್ರಾಮ ಶಕ್ತಿಗಳ ಆರಾಧನೆಯಿದೆ.
ಗರೋಡಿಯ ಹತ್ತಿರದಲ್ಲಿಯೇ ಗರೋಡಿಗೆ ಸಂಬಂಧಪಟ್ಟ ನಾಗಬನವಿದೆ. ಗರೋಡಿಯ ಆವರಣದಲ್ಲಿ ಬಲಿಕಲ್ಲು, ತುಳಸಿಕಟ್ಟೆಗಳಿವೆ.

ಸುಧಾಕರ ಪೂಜಾರಿ

ರಾಮಕೃಷ್ಣ ಬಿಲ್ಲವ

2016ರಿಂದ ಸುಧಾಕರ ಪೂಜಾರಿ(44ವರ್ಷ) ಇವರು ಗರೋಡಿಯ ಅರ್ಚಕರಾಗಿ, ರಾಮಕೃಷ್ಣ ಬಿಲ್ಲವ (49 ವರ್ಷ) ಇವರು ಸಹ ಅರ್ಚಕರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ. ಇವರ ಮೊದಲು ಹಿರಿಯರಾದ ತಿಮ್ಮಪ್ಪ ಪೂಜಾರಿ, ಕೃಷ್ಣ ಪೂಜಾರಿ, ರಾಮ ಪೂಜಾರಿ, ನಾಗ ಪೂಜಾರಿ, ನಾಗ ಪೂಜಾರಿ, ರಾಮಯ್ಯ ಪೂಜಾರಿ, ಮೋನ ಪೂಜಾರಿ, ಮಂಜ ಪೂಜಾರಿ, ಇವರುಗಳು ಈ ಗರೋಡಿಯ ಅರ್ಚಕರಾಗಿ ಸೇವೆ ಮಾಡಿದ್ದರು.

ನಾಗ ಪೂಜಾರಿ

ನಾಗ ಪೂಜಾರಿ(33 ವರ್ಷ) ಇವರು 2022ರಿಂದ ಗರೋಡಿಯ ದರ್ಶನದ ಸ್ಥಳ ಪಾತ್ರಿಗಳಾಗಿದ್ದಾರೆ. ಇವರ ಮೊದಲು ಮಂಜ ಪೂಜಾರಿ, ಮಾಲಿಂಗ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.

ಶೇಖರ ಪೂಜಾರಿ

ಶೇಖರ ಪೂಜಾರಿಯವರು ಗರೋಡಿಯ ಮೊಕ್ತೇಸರರು. ಇವರ ಮೊದಲು ನಾಗಪೂಜಾರಿ, ಮಾಲಿಂಗ ಪೂಜಾರಿಯವರು ಗರೋಡಿಯ ಮೊಕ್ತೇಸರರಾಗಿದ್ದರು.
ಗರೋಡಿಯ ಉಸ್ತುವಾರಿಗೆ 13 ಮಂದಿ ಟ್ರಸ್ಟಿಗಳನ್ನೊಳಗೊಂಡ ಶ್ರೀ ಬ್ರಹ್ಮಬೈದರ್ಕಳ ಗರಡಿ ಟ್ರಸ್ಟ್(ರಿ) ನಾವುಂದ ಎಂಬ ಹೆಸರಿನ ಟ್ರಸ್ಟ್ ಇದೆ. ಎನ್.ಕೆ.ಬಿಲ್ಲವ ಇವರು ಟ್ರಸ್ಟಿನ ಗೌರವಾಧ್ಯಕ್ಷರಾಗಿಯೂ, ಮುತ್ತ ಬಿಲ್ಲವ ಇವರು ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುಯತ್ತಿದ್ದಾರೆ.
ಗರೋಡಿಯಲ್ಲಿ ನಿತ್ಯ ಪೂಜೆ, ಸಂಕ್ರಾಂತಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಪ್ರತೀ ವರ್ಷ ಜನವರಿ 21ನೇ ತಾರೀಖಿನಂದು ಅಗೆಲು ಸೇವೆ, ಗೆಂಡ ಸೇವೆ, ದರ್ಶನ ಸೇವೆ, 22ಕ್ಕೆ ಸಿರಿಸೇವೆ, ದರ್ಶನ, ತುಲಾಭಾರ ಸೇವೆ, ಗುರಿ ಪೂಜೆಗಳು ನಡೆಯುತ್ತವೆ.
ಕಿರಿಮಂಜೇಶ್ವರ, ಮರವಂತೆ, ಬಡಾಕೇರಿ, ಹೇರೂರು, ಅರೆಹೊಳೆ, ನಾವುಂದ ಭಾಗದ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಮದುವೆ ಮುಂತಾದ ಶುಭ ಸಂದರ್ಭದಲ್ಲಿ ಜೋಡುಕಾಯಿ ತೆಗೆದಿಡುವುದು, ಹೆರಿಗೆಯ ನಂತರ ತಿಂಗಳು ಮಾಡಿಸುವುದು, ಮುಂತಾದ ಹರಕೆಯ ಸೇವೆಗಳನ್ನು ನೀಡುವ ಕ್ರಮವಿದೆ. ಊರ ಪರವೂರ ಜನರ ವರಡ ವಂತಿಗೆ, ಕಾಣಿಕೆ, ಸಹಾಯ ಧನಗಳಿಂದ ಗರೋಡಿಯ ಕಾರ್ಯಕ್ರಮಗಳ ಖರ್ಚುವೆಚ್ಚ ಭರಿಸಲಾಗುತ್ತದೆ.

ಗರೋಡಿಯ ಜೀರ್ಣೋದ್ದಾರದ ಮೊದಲಿನ ಫೋಟೋ.

ಗರೋಡಿಯು 2016ರಲ್ಲಿ ಜೀರ್ಣೋದ್ಧಾರಗೊಂಡಿದೆ. ಇದಕ್ಕೆ ಮೊದಲು 1982-84ರಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿತ್ತು.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಕೋಟಿಚೆನ್ನಯ ಗರೋಡಿ ನಾವುಂದ ಗರಡಿಬೆಟ್ಟು,
ಗ್ರಾಮ ಮತ್ತು ಅಂಚೆ ನಾವುಂದ,
ಬೈಂದೂರು ತಾಲೂಕು 576224.

ಗರೋಡಿಯ ಅರ್ಚಕರು:

ಸುಧಾಕರ ಪೂಜಾರಿ – 9742563521 – ಪ್ರಧಾನ ಅರ್ಚಕರು.
ರಾಮಕೃಷ್ಣ ಬಿಲ್ಲವ – 8850255132 – ಸಹ ಅರ್ಚಕರು.

ಗರೋಡಿಯ ಪಾತ್ರಿಗಳು:

ನಾಗರಾಜ ಪೂಜಾರಿ 9164722979

ಗರೋಡಿಯ ಮೊಕ್ತೇಸರರು:

ಶೇಖರ ಪೂಜಾರಿ – 9743647032

ಮಾಹಿತಿ ನೀಡಿದವರು :

ಶೇಖರ ಪೂಜಾರಿ,
ಸುಧಾಕರ ಪೂಜಾರಿ,
ರಾಮಕೃಷ್ಣ ಬಿಲ್ಲವ,
ನಾಗರಾಜ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

26.02.2025