ಶ್ರೀ ಬ್ರಹ ಬೈದರ್ಕಳ ಕೋಟಿಚೆನ್ನಯ್ಯ ಪಂಜುರ್ಲಿ ಗರೋಡಿ ಹೊಳೆತೋಟ – ಬಿಜೂರು
ಉಡುಪಿಯಿಂದ ರಾಷ್ಟಿçÃಯ ಹೆದ್ದಾರಿ ಎನ್.ಎಚ್.66ರಲ್ಲಿ ಬಿಜೂರು ತುಲು ರಾಷ್ಟ್ರೀಯ ಹೆದ್ದಾರಿಯಿಂದ ಬಲಕ್ಕೆ ತಿರುಗಿ ಸುಮಾರು 2.6ಕಿ.ಮೀ ಒಳಗೆ ಹೋದಾಗ ಬೈಂದೂರು ಹೊಳೆಯ ಬದಿಯಲ್ಲಿದೆ ಬಿಜೂರು ಹೊಳೆತೋಟ ಗರೋಡಿ.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಒಳಗೆ ಬ್ರಹ್ಮಗುಡಿಯಲ್ಲಿ ಸಿಮೆಂಟಿನಿಂದ ನಿರ್ಮಿಸಲಾದ ಬ್ರಹ್ಮಗುಂಡದ ಒಳಗೆ ನಾಗಬ್ರಹ್ಮರ ಪಂಚಲೋಹದ ಮೂರ್ತಿ ಹಾಗೂ ನಾಗದೇವರ ಮೂರ್ತಿಇದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರು, ಇಬ್ಬರು ಬಂಟರು ಹಾಗೂ ನಂದಿಕೇಶ್ವರ ದೈವದ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ಕುಬ್ಜಕೋಣದ (ಕುಜುಂಬ ಕಾಂಜವ ??) ಮರದ ಮೂರ್ತಿ ಹಾಗೂ ದೇಯಿಬೈದೆತಿಯ ಮಣೆಮಂಚವಿದೆ
ಬ್ರಹ್ಮಗುಡಿಯ ಹೊರಗೆ ಬಲ ಬದಿಯಲ್ಲಿ ಸಿಂಗಾರ ಹೈಗುಳಿ, ಪಂಜುರ್ಲಿ ವಾಹನ, ಪಂಜುರ್ಲಿ ದೈವಗಳ ಸಾನಿದ್ಯವಿದೆ. ಬ್ರಹ್ಮಗುಡಿಯ ಎಡಬದಿಯಲ್ಲಿ ಕರ್ತು, ಹೊನ್ನಳ್ಳಿ ಮಾಸ್ತಿ, ಚುಟ್ಟಿಬೇರುಮಾಸ್ತಿ ದೈವಗಳ ಸಾನಿದ್ಯವಿದೆ.
ಪಕ್ಕದಲ್ಲಿ ಧೂಮಾವತಿ, ಮಾಯಿಂದಾಳಮ್ಮನ ಮಗಳು, ಮಾಯಿಂದಾಳಮ್ಮ, ಮೂರು ಕಂಚಿನ ಹೈಗುಳಿ, ಕಾಮನ ಹೈಗುಳಿ, ಜೋಗದೇವರು, ಕೆರಾಡಿ ಹೈಗುಳಿ, ಮುರ್ಚಂಡಿ, ಕರಿಬೆಟ್ಟಿನ ಹೈಗುಳಿ, ಹೈಗುಳಿ, ತಿಮ್ಮಣ್ಣ ನಾಯ್ಕರು, ಮುಡೂರಮ್ಮ, ದೊಟ್ಟಿಕಾಲಮ್ಮ, ಮಲಕಮ್ಮ, ಹಿಜಾಣಮ್ಮ, ಮತ್ತು ವಾಹನ ದೈವಗಳ ಆರಾಧನೆಯಿದೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯನ ಮರದ ಮೂರ್ತಿಯಿದೆ. ಗರೋಡಿಯ ಆವರಣದೊಳಗೆ ಹೊರಸುತ್ತಿನ ಹೈಗುಳಿ, ಕ್ಷೇತ್ರಪಾಲ, ಆಶ್ವತ್ತಮರದ ಕಟ್ಟೆ, ತುಳಸಿಕಟ್ಟೆ, ಬೆಳಗಲ್ಲುಗಳಿವೆ.
ಅಯ್ಯಪ್ಪ ಪೂಜಾರಿ
ಕೋಟಿ ಪೂಜಾರಿ
2020ರಿಂದ ಅಯ್ಯಪ್ಪ ಪೂಜಾರಿ (50ವರ್ಷ) ಯವರು ಗರೋಡಿಯ ಅರ್ಚಕರಾಗಿ ಸೇವೆ ಮಾಡುತ್ತಿದ್ದು, ಕೋಟಿ ಪೂಜಾರಿ (80 ವರ್ಷ) ಯವರು ಸಹ ಅರ್ಚಕರಾಗಿ ಸೇವೆ ಮಾಡುತ್ತಿದ್ದಾರೆ. ಇವರ ಮೊದಲು ಕುಷ್ಠ ಪೂಜಾರಿ, ನಾಗ ಪೂಜಾರಿಯವರು ಈ ಸೇವೆ ಮಾಡಿದ್ದರು.
ನಾಗಪ್ಪ ಪೂಜಾರಿ
ಮಂಜ ಪೂಜಾರಿ
ನಾಗಪ್ಪ ಪೂಜಾರಿ ಹಾಗೂ ಮಂಜ ಪೂಜಾರಿಯವರು ಇಲ್ಲಿ ದರ್ಶನ ಸ್ಥಳ ಪಾತ್ರಿಗಳು. ಇವರ ಮೊದಲು ಮಂಜಯ್ಯ ಪೂಜಾರಿ, ಮೂಡೂರ ಪೂಜಾರಿ, ನಾರಾಯಣ ಪೂಜಾರಿಯವರು ಇಲ್ಲಿಯ ದರ್ಶನದ ಸ್ಥಳ ಪಾತ್ರಿಗಳಾಗಿದ್ದರು.
ಸಂಜೀವ ಶೆಟ್ಟಿ, ನೆಲ್ಯಾಡಿ ಇವರು ಇಲ್ಲಿಯ ಬಲ್ಲಾಳ(ಮುಕ್ಕಾಲಿ) ಯಾಗಿರುವರು.
ಗರೋಡಿಯ ಉಸ್ತುವಾರಿಗೆ ಆಡಳಿತ ಸಮಿತಿಯಿದ್ದು, ಪರಮೇಶ್ವರ ಪೂಜಾರಿಯವರು ಅಧ್ಯಕ್ಷರಾಗಿ, ಉದಯ ಪೂಜಾರಿಯವರುಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಗರೋಡಿಯಲ್ಲಿ ನಿತ್ಯಪೂಜೆ, ಸಂಕ್ರಾಂತಿ ಪೂಜೆ, ಅಷ್ಟಮಿ ಪೂಜೆ, ಕದಿರು ಕಟ್ಟುವುದು, ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಒಂದು ದಿನ ಅಗೆಲು ಸೇವೆ, ದರ್ಶನ, ನೇಮ, ಎರಡನೇ ದಿನ ಗುರಿಪೂಜೆ, ಹಾಗೂ ದರ್ಶನ ಸೇವೆಗಳು ನಡೆಯುತ್ತವೆ.
ಬಿಜೂರು, ಹೊಳೆತೋಟದ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಊರ ಜನರ ಕಾಲಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ಖರ್ಚುವೆಚ್ಚವನ್ನು ಭರಿಸಲಾಗುತ್ತದೆ.
ಗರೋಡಿಗೆ 25ಸೆಂಟ್ಸ ಜಾಗವಿದ್ದು 2000ರಲ್ಲಿ ಗರೋಡಿಯಿ ಜೀರ್ಣೋದ್ದಾರವಾಗಿದೆ.
ಸುಕುಮಾರ ಮಡಿವಾಳ ಹೊಳೆತೋಟ ಇವರು ಮಡಿವಾಳರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.
ಗರೋಡಿಯ ವಿಳಾಸ:
ಶ್ರೀ ಬ್ರಹ್ಮಬೈದರ್ಕಳ ಕೋಟಿಚೆನ್ನಯ ಪಂಜುರ್ಲಿ ಗರೋಡಿ ಹೊಳೆತೋಟ ಬಿಜೂರು,
ಬೈಂದೂರು ತಾಲೂಕು,
ಉಡುಪಿ ಜಿಲ್ಲೆ – 576244.
ಬೈಂದೂರು ತಾಲೂಕು,
ಉಡುಪಿ ಜಿಲ್ಲೆ – 576244.
ಗರೋಡಿಯ ಅರ್ಚಕರು:
ಅಯ್ಯಪ್ಪ ಪೂಜಾರಿ – 7758000835,
ಕೋಟಿ ಪೂಜಾರಿ – 9632904289.
ಕೋಟಿ ಪೂಜಾರಿ – 9632904289.
ಗರೋಡಿಯ ಪಾತ್ರಿಗಳು:
ನಾಗಪ್ಪ ಪೂಜಾರಿ -9880772880,
ಮಂಜ ಪೂಜಾರಿ – 9900825164
ಮಂಜ ಪೂಜಾರಿ – 9900825164
ಆಡಳಿತ ಸಮಿತಿ:
ಪರಮೇಶ್ವರ ಪೂಜಾರಿ – ಅಧ್ಯಕ್ಷರು – 7259585835 ;
ಉದಯ ಪೂಜಾರಿ – ಕಾರ್ಯದರ್ಶಿ – 9663003922.
ಉದಯ ಪೂಜಾರಿ – ಕಾರ್ಯದರ್ಶಿ – 9663003922.
ಮಾಹಿತಿ ನೀಡಿದವರು :
ಅಯ್ಯಪ್ಪ ಪೂಜಾರಿ,
ಶಂಕರ ಪೂಜಾರಿ – 97407 50372
ಶಂಕರ ಪೂಜಾರಿ – 97407 50372
ಮಾಹಿತಿ ಸಂಗ್ರಹಿಸಿದ ದಿನಾಂಕ :
26.02.2025