ಶ್ರೀ ಕೊಡಮಣಿತ್ತಾಯ, ಕುಕ್ಕಿನಂತಾಯ,ವ್ಯಾಘ್ರ ಚಾಮುಂಡಿ, ಶ್ರೀ ಬ್ರಹ್ಮಬೈದರ್ಕಳ ಗರೋಡಿ, ನಾಗರಕಟ್ಟೆ
ಉಡುಪಿಯಿಂದ ಮೂಡಬಿದಿರೆ ತಲುಪಿ ಮೂಡಬಿದಿರೆ ಪೇಟೆಯಿಂದ ನಾಗರಕಟ್ಟೆ ರಸ್ತೆಯಲ್ಲಿ ಸುಮಾರು 1 ಕಿ.ಮೀ. ಸಾಗಿದರೆ ಈ ಗರೋಡಿ ಸಿಗುವುದು.
ಗರೋಡಿಗೆ ಪೂರ್ವಾಭಿಮುಖವಾದ ಮುಖ್ಯದ್ವಾರ ಹಾಗೂ ಬಡಗು ದಿಕ್ಕಿಗೆ ಇನ್ನೊಂದು ದ್ವಾರವಿದೆ.
ಗರೋಡಿಯ ಮಾಡು ಕುಸಿದಿದ್ದು ಜೀರ್ಣೋದ್ದಾರದ ಅಗತ್ಯವಿದೆ. ಗರೋಡಿಯಿರುವ ಜಾಗದ ತಕರಾರಿನಿಂದ ಜೀರ್ಣೋದ್ಧಾರ ಸಾದ್ಯವಾಗುತ್ತಿಲ್ಲ ಎಂಬ ಮಾಹಿತಿ ಸಮೀಕ್ಷೆಯ ಸಮಯದಲ್ಲಿ ತಿಳಿದು ಬಂದಿದೆ. ಗರೋಡಿಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸೂಕ್ತ ವ್ಯಕ್ತಿಗಳು ಸಿಗದ ಕಾರಣ ಲಭ್ಯವಿದ್ದ ಕೆಲವು ಮಾಹಿತಿಗಳನ್ನು ಸಂಗ್ರಹಿಸಲಾಗಿದೆ.
ಗರೋಡಿಯ ಪಕ್ಕದಲ್ಲಿ ಕೊಡಮಣಿತ್ತಾಯ, ಕುಕ್ಕಿನಂತಯ, ದೈವಸ್ಥಾನವಿದೆ. ಎದುರಿಗೆ ಇರುವ ದ್ವಜಸ್ಥಂಭ ಶಿಧಿಲವಾಗಿರುವ ಕಾರಣ ತೆಗೆದಿಡಲಾಗಿದೆ.
ಪಕ್ಕದಲ್ಲಿಯೇ ಪಿಲಿ ಚಾಮುಂಡಿ ದೈವಸ್ಥಾನವಿದೆ.
ಭೋಜ ಶೆಟ್ಟಿಯವರು ಗರೋಡಿಯ ಮೊಕ್ತೇಸರರಾಗಿದ್ದಾರೆ.
ಗರೋಡಿಯಲ್ಲಿ ಸಂಕ್ರಾಂತಿ ಪೂಜೆ ನಡೆಯುತ್ತದೆ. ಪ್ರತೀ ವರ್ಷ ಜನವರಿ ತಿಂಗಳಲ್ಲಿ ಒಂದು ದಿನ ಭಂಡಾರ ಬಂದು ಕೊಡಮಣಿತ್ತಾಯ, ಕುಕ್ಕಿನಂತಾಯ, ಕೋಲ ನಡೆಯುತ್ತದೆ. ಎರಡನೇ ದಿನ ಬೈದೇರುಗಳ ನೇಮ, ಮೂರನೇ ದಿನ ಪಿಲ್ಚಂಡಿ ಕೋಲ ನಡೆದು ಭಂಡಾರ ವಾಪಾಸು ಹೋಗುವುದು.
ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು
ಗರೋಡಿಯ ವಿಳಾಸ:
ಶ್ರೀ ಕೊಡಮಣಿತ್ತಾಯ, ಕುಕ್ಕಿನಂತಾಯ, ವ್ಯಾಘ್ರ ಚಾಮುಂಡಿ ಬ್ರಹ್ಮ ಬೈದರ್ಕಳ ಗರೋಡಿ ನಾಗರ ಕಟ್ಟೆ,
ಮೂಡಬಿದರೆ
ಮೂಡಬಿದರೆ
ಮಾಹಿತಿ ನೀಡಿದವರು:
ಕೇಶವ ಅಂಚನ್ – 9945937690
ಮಾಹಿತಿ ಸಂಗ್ರಹಿಸಿದವರು:
ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ
ಹರೀಶ್ ಎಮ್. ಕೆ. ಕಲ್ಮಾಡಿ
ಮಾಹಿತಿ ಸಂಗ್ರಹಿಸಿದ ದಿನಾಂಕ:
09.12.2025