Baidashree

Shree Brahma Baidarkala Garodi, Navunda

ಶ್ರೀ ಬ್ರಹ್ಮಬೈದರ್ಕಳ ಕೋಟಿಚೆನ್ನಯ ಗರೋಡಿ, ನಾವುಂದ

ಉಡುಪಿಯಿಂದ – ಕುಂದಾಪುರ – ಮರವಂತೆಯಾಗಿ ನಾವುಂದ ತಲುಪಿ ರಾಷ್ಟ್ರೀಯ ಹೆದ್ದಾರಿ ಎನ್.ಎಚ್.66ರಿಂದ ಬಲಕ್ಕೆ ತಿರುಗಿ ಸುಮಾರು ಒಂದು ಕಿ.ಮೀ. ಸಾಗಿದರೆ ನಾವುಂದ ಗರೋಡಿ ಸಿಗುವುದು.
ಗರೋಡಿಯು ಪೂರ್ವಾಭಿಮುಖವಾದ ಒಂದು ದ್ವಾರವನ್ನು ಹೊಂದಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ಪಂಚಲೋಹಕ್ಕೆ ಬೆಳ್ಳಿಕವಚ ಹೊದಿಸಿದ ನಾಗಬ್ರಹ್ಮರ ಮೂರ್ತಿ ಹಾಗೂ ಇನ್ನೊಂದು ಮರದ ನಾಗಬ್ರಹ್ಮರ ಮೂರ್ತಿ ಹೀಗೆ ಎರಡು ಮೂರ್ತಿಗಳಿವೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರು, ಇಬ್ಬರು ಬಂಟರು, ದೇಯಿಬೈದೆತಿ ಹಾಗೂ ನಂದಿಕೋಣರ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ಬೈದ ಹಾಗೂ ಬಂಟ, ಕಿನ್ನಿದಾರುವಿನ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಭಾಗದಲ್ಲಿ ಹೊನ್ನಮ್ಮ, ಚಿನ್ನಮ್ಮ ಮರದ ಮೂರ್ತಿ , ಪ್ರಸಾದ ಹೈಗುಳಿ, ಮೂಡೂರ (ಕಡಕಟ್ಟಿನ) ಹೈಗುಳಿ ದೈವಗಳ ಕಂಚಿನ ಮೂರ್ತಿಗಳಿವೆ.
ಬ್ರಹ್ಮಗುಡಿಯ ಎಡಭಾಗದಲ್ಲಿ ಪಂಜುರ್ಲಿ ದೈವದ ಪಂಚಲೋಹಕ್ಕೆ ಬೆಳ್ಳಿಯ ಕವಚವಿರುವ ಮೂರ್ತಿ ಒಂಟಿ ಕೋಡೊನ ಪಂಜುರ್ಲಿ, ಧೂಮಾವತಿ, ಹೈಗುಳಿ, ಹಾಲು ಹಣ್ಣಿನ ಹೈಗುಳಿ ದೈವಗಳ ಸಾನಿದ್ಯವಿದೆ.
ಪಕ್ಕದಲ್ಲಿ ಜಟ್ಟಿಗ, ಮೈಂದಾಳ್ತಿ, ಬಾಲಕಂದರ ಮರದ ಮೂರ್ತಿಗಳಿವೆ.
ಅದರ ಪಕ್ಕದಲ್ಲಿ ನಂದಿ ಹಾಗೂಕರಿಬೆಟ್ಟಿನ ಹೈಗುಳಿ ಕಂಚಿನ ಮೂರ್ತಿ, ಮೂಡೂರ ಅಮ್ಮ (ಚಿಕ್ಕು) ದೊಟ್ಟಿಕಾಲು ಚಿಕ್ಕು, ಅವತಾರ ಚಿಕ್ಕು, ಬಾಲ ಚಿಕ್ಕು, ಮರ್ಲು ಚಿಕ್ಕು, ಬಗ್ಗು ಚಿಕ್ಕು, ಸನ್ಯಾಸಿ (ಜೋಗಿ ಪುರುಷ)ರ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಗೆ ಎದುರು ಮುಖವಾಗಿ ಕೆಪ್ಪ ಹೈಗುಳಿ, ಕುಜ್ಙಾಡಿ ಹೈಗುಳಿ, ಕುಂಟ ಹೈಗುಳಿ, ನಂದಿ, ಮುರ್ಚಂಡಿ, ಸುಂಕದಕಟ್ಟೆ ಹೈಗುಳಿ, ಯಕ್ಷಿ, ಮಾಸ್ತಿಕಟ್ಟೆ ಚಿಕ್ಕು, ಮಾರಣಕಟ್ಟೆ ಚಿಕ್ಕು, ಕೆಂಪಣ್ಣ ಹೈಗುಳಿ, ದೈವಗಳ ಮರದ ಮೂರ್ತಿಗಳಿವೆ.
ಗರೋಡಿಯ ಬಾಗಿಲ ಹತ್ತಿರ ಬಾಗಿಲು ಬೊಬ್ಬರ್ಯನ ಮರದ ಮೂರ್ತಿಯಿದೆ.
ಗರೋಡಿಯ ಹೊರಗೆ ಆವರಣದೊಳಗಿನ ಗುಡಿಯಲ್ಲಿ ಹೊರಸುತ್ತಿನ ಹೈಗುಳಿ ದೈವದ ಸಾನಿಧ್ಯವಿದೆ. ಇನ್ನೊಂದು ಗುಡಿಯಲ್ಲಿ ಕಂಚಿನ ಹೈಗುಳಿಯ ಕಂಚಿನ ಮೂರ್ತಿ ಹಾಗೂ ಯಕ್ಷಿಯ ಮರದ ಮೂರ್ತಿಯಿದೆ.
ಒಂದು ಕಟ್ಟೆಯಲ್ಲಿ ಕೀಳು, ಮಂತ್ರಿಗಣ ಹಾಗೂ ಕಲ್ಲುಕುಟ್ಟಿಗ ದೈವಗಳ ಸಾನಿಧ್ಯವಿದೆ. ಇನ್ನೊಂದು ಕಟ್ಟೆಯಲ್ಲಿ ರಾಹು, ನೀಚ, ರಕ್ತ ಹೈಗುಳಿ, ನೇತ್ರ ಹೈಗುಳಿ, ಹಾಗೂ ಗ್ರಾಮ ಶಕ್ತಿಗಳ ಆರಾಧನೆಯಿದೆ.
ಗರೋಡಿಯ ಹತ್ತಿರದಲ್ಲಿಯೇ ಗರೋಡಿಗೆ ಸಂಬಂಧಪಟ್ಟ ನಾಗಬನವಿದೆ. ಗರೋಡಿಯ ಆವರಣದಲ್ಲಿ ಬಲಿಕಲ್ಲು, ತುಳಸಿಕಟ್ಟೆಗಳಿವೆ.

ಸುಧಾಕರ ಪೂಜಾರಿ

ರಾಮಕೃಷ್ಣ ಬಿಲ್ಲವ

2016ರಿಂದ ಸುಧಾಕರ ಪೂಜಾರಿ(44ವರ್ಷ) ಇವರು ಗರೋಡಿಯ ಅರ್ಚಕರಾಗಿ, ರಾಮಕೃಷ್ಣ ಬಿಲ್ಲವ (49 ವರ್ಷ) ಇವರು ಸಹ ಅರ್ಚಕರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ. ಇವರ ಮೊದಲು ಹಿರಿಯರಾದ ತಿಮ್ಮಪ್ಪ ಪೂಜಾರಿ, ಕೃಷ್ಣ ಪೂಜಾರಿ, ರಾಮ ಪೂಜಾರಿ, ನಾಗ ಪೂಜಾರಿ, ನಾಗ ಪೂಜಾರಿ, ರಾಮಯ್ಯ ಪೂಜಾರಿ, ಮೋನ ಪೂಜಾರಿ, ಮಂಜ ಪೂಜಾರಿ, ಇವರುಗಳು ಈ ಗರೋಡಿಯ ಅರ್ಚಕರಾಗಿ ಸೇವೆ ಮಾಡಿದ್ದರು.

ನಾಗ ಪೂಜಾರಿ

ನಾಗ ಪೂಜಾರಿ(33 ವರ್ಷ) ಇವರು 2022ರಿಂದ ಗರೋಡಿಯ ದರ್ಶನದ ಸ್ಥಳ ಪಾತ್ರಿಗಳಾಗಿದ್ದಾರೆ. ಇವರ ಮೊದಲು ಮಂಜ ಪೂಜಾರಿ, ಮಾಲಿಂಗ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.

ಶೇಖರ ಪೂಜಾರಿ

ಶೇಖರ ಪೂಜಾರಿಯವರು ಗರೋಡಿಯ ಮೊಕ್ತೇಸರರು. ಇವರ ಮೊದಲು ನಾಗಪೂಜಾರಿ, ಮಾಲಿಂಗ ಪೂಜಾರಿಯವರು ಗರೋಡಿಯ ಮೊಕ್ತೇಸರರಾಗಿದ್ದರು.
ಗರೋಡಿಯ ಉಸ್ತುವಾರಿಗೆ 13 ಮಂದಿ ಟ್ರಸ್ಟಿಗಳನ್ನೊಳಗೊಂಡ ಶ್ರೀ ಬ್ರಹ್ಮಬೈದರ್ಕಳ ಗರಡಿ ಟ್ರಸ್ಟ್(ರಿ) ನಾವುಂದ ಎಂಬ ಹೆಸರಿನ ಟ್ರಸ್ಟ್ ಇದೆ. ಎನ್.ಕೆ.ಬಿಲ್ಲವ ಇವರು ಟ್ರಸ್ಟಿನ ಗೌರವಾಧ್ಯಕ್ಷರಾಗಿಯೂ, ಮುತ್ತ ಬಿಲ್ಲವ ಇವರು ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುಯತ್ತಿದ್ದಾರೆ.
ಗರೋಡಿಯಲ್ಲಿ ನಿತ್ಯ ಪೂಜೆ, ಸಂಕ್ರಾಂತಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಪ್ರತೀ ವರ್ಷ ಜನವರಿ 21ನೇ ತಾರೀಖಿನಂದು ಅಗೆಲು ಸೇವೆ, ಗೆಂಡ ಸೇವೆ, ದರ್ಶನ ಸೇವೆ, 22ಕ್ಕೆ ಸಿರಿಸೇವೆ, ದರ್ಶನ, ತುಲಾಭಾರ ಸೇವೆ, ಗುರಿ ಪೂಜೆಗಳು ನಡೆಯುತ್ತವೆ.
ಕಿರಿಮಂಜೇಶ್ವರ, ಮರವಂತೆ, ಬಡಾಕೇರಿ, ಹೇರೂರು, ಅರೆಹೊಳೆ, ನಾವುಂದ ಭಾಗದ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಮದುವೆ ಮುಂತಾದ ಶುಭ ಸಂದರ್ಭದಲ್ಲಿ ಜೋಡುಕಾಯಿ ತೆಗೆದಿಡುವುದು, ಹೆರಿಗೆಯ ನಂತರ ತಿಂಗಳು ಮಾಡಿಸುವುದು, ಮುಂತಾದ ಹರಕೆಯ ಸೇವೆಗಳನ್ನು ನೀಡುವ ಕ್ರಮವಿದೆ. ಊರ ಪರವೂರ ಜನರ ವರಡ ವಂತಿಗೆ, ಕಾಣಿಕೆ, ಸಹಾಯ ಧನಗಳಿಂದ ಗರೋಡಿಯ ಕಾರ್ಯಕ್ರಮಗಳ ಖರ್ಚುವೆಚ್ಚ ಭರಿಸಲಾಗುತ್ತದೆ.

ಗರೋಡಿಯ ಜೀರ್ಣೋದ್ದಾರದ ಮೊದಲಿನ ಫೋಟೋ.

ಗರೋಡಿಯು 2016ರಲ್ಲಿ ಜೀರ್ಣೋದ್ಧಾರಗೊಂಡಿದೆ. ಇದಕ್ಕೆ ಮೊದಲು 1982-84ರಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿತ್ತು.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಕೋಟಿಚೆನ್ನಯ ಗರೋಡಿ ನಾವುಂದ ಗರಡಿಬೆಟ್ಟು,
ಗ್ರಾಮ ಮತ್ತು ಅಂಚೆ ನಾವುಂದ,
ಬೈಂದೂರು ತಾಲೂಕು 576224.

ಗರೋಡಿಯ ಅರ್ಚಕರು:

ಸುಧಾಕರ ಪೂಜಾರಿ – 9742563521 – ಪ್ರಧಾನ ಅರ್ಚಕರು.
ರಾಮಕೃಷ್ಣ ಬಿಲ್ಲವ – 8850255132 – ಸಹ ಅರ್ಚಕರು.

ಗರೋಡಿಯ ಪಾತ್ರಿಗಳು:

ನಾಗರಾಜ ಪೂಜಾರಿ 9164722979

ಗರೋಡಿಯ ಮೊಕ್ತೇಸರರು:

ಶೇಖರ ಪೂಜಾರಿ – 9743647032

ಮಾಹಿತಿ ನೀಡಿದವರು :

ಶೇಖರ ಪೂಜಾರಿ,
ಸುಧಾಕರ ಪೂಜಾರಿ,
ರಾಮಕೃಷ್ಣ ಬಿಲ್ಲವ,
ನಾಗರಾಜ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

26.02.2025

Shree Brahma Baidarkala Koti Chennnaya Garodi – Ulluru 11

ಶ್ರೀ ಬ್ರಹ್ಮಬೈದರ್ಕಳ ಕೋಟಿಚೆನ್ನಯ ಗರೋಡಿ – ಉಳ್ಳೂರು 11

ಉಡುಪಿಯಿಂದ – ಕುಂದಾಪುರ – ನಾವುಂದದ ನಂತರ ಎನ್.ಎಚ್. 66ರಲ್ಲಿ ಅರೆಹೊಳೆ ಕ್ರಾಸ್ನಲ್ಲಿ ಬಲಕ್ಕೆ ತಿರುಗಿ ಸುಮಾರು 2.48ಕಿ.ಮೀ. ಸಾಗಿದ ನಂತರ ಎಡಕ್ಕೆ ತಿರುಗಿ ಸುಮಾರು 2.58 ಕಿ. ಮೀ. ಸಾಗಿದರೆ ಉಳ್ಳೂರು 11 ಗರೋಡಿ ಸಿಗುತ್ತದೆ.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಸಿಮೆಂಟಿನಿಂದ ಕಟ್ಟಿ, ಟೈಲ್ಸ್ ಹಾಕಲಾದ ಬ್ರಹ್ಮಗುಂಡದ ಒಳಗೆ ಮರದ ಮೂರ್ತಿಗೆ ಬೆಳ್ಳಿಯ ಕವಚ ಹಾಕಲಾದ ನಾಗ ಬ್ರಹ್ಮರ ಹಾಗೂಮರದ ಮೂರ್ತಿಗೆ ಬೆಳ್ಳಿ ಕವಚ ಹಾಕಲಾದ ವೆಂಕಟರಮಣ ದೇವರ ಮೂರ್ತಿಗಳಿವೆ.
ಗುಂಡದ ಎಡಭಾಗದಲ್ಲಿ ದೇಯಿಬೈದೆತಿ, ಕೋಟಿಚೆನ್ನಯರು ಬಂಟ ಹಾಗೂ ನಂದಿಯ ಮರದ ಮೂರ್ತಿಯಿದೆ.
ಗುಂಡದ ಬಲಭಾಗದಲ್ಲಿ ದೇಯಿ ಬೈದೆತಿಯ ಬೆಳ್ಳಿಯ ಮೂರ್ತಿ, ಬೈದ ಹಾಗೂ ಬಂಟರ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಬಲಭಾಗದಲ್ಲಿ ಪಂಜುರ್ಲಿ ಹಾಗೂ ಕುಪ್ಪೆ ಪಂಜುರ್ಲಿ ದೈವಗಳ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಹೊರಗೆ ಎಡಬದಿಯಲ್ಲಿ ಕರಿಬೆಟ್ಟಿನ ಹೈಗುಳಿ, ಕಂಚಿನ ಹೈಗುಳಿ, ಮೂಕ ಹೈಗುಳಿ, ಧೂಮಾವತಿ, ಮೈಂದಾಳತಿ, ವೀರ ಜಟ್ಟಿಗ, ದೊಟ್ಟೆಕಾಲಚಿಕ್ಕು, ಬಾಲಮ್ಮ, ದೊಟ್ಟೆಕಾಲಮ್ಮ, ಮಾಸ್ತಿ, ನಿರ್ವಾಣ ಚಿಕ್ಕು, ಮರ್ಲುಚಿಕ್ಕು, ಮರ್ಲಮ್ಮ ದೈವಗಳ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಗೆ ಎದುರು ಮುಖವಾಗಿ ಜೋಗಿಪುರುಷ, ಕೆಪ್ಪಹೈಗುಳಿ, ಮೂಡೂರ ಹೈಗುಳಿ, ಸುಕುರಹೈಗುಳಿ, ಮುರ್ಚಂಡಿ, ನಾಲ್ಕುಪಾದದಹೈಗುಳಿ, ಹಣೇರಹೈಗುಳಿ, ಸ್ಥಳದಹೈಗುಳಿ, ಮಾಸ್ತಿ, ಕೆಂಪುಬಣ್ಣದಹೈಗುಳಿ, ಜೈನಹೈಗುಳಿ, ಪಾತ್ರಿಪುರುಷ ಮರದ ಮೂರ್ತಿಗಳಿವೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಒಂದು ಬದಿಯಲ್ಲಿ ಬಾಗಿಲಬೊಬ್ಬರ್ಯನ ಮರದ ಮೂರ್ತಿ ಹಾಗೂ ಬಲಿಕಲ್ಲು, ಇನ್ನೊಂದು ಬದಿಯಲ್ಲಿ ಯಕ್ಷಿ ಹಾಗೂ ಹೊರಸುತ್ತಿನ ಹೈಗುಳಿ ದೈವಗಳ ಮರದ ಮೂರ್ತಿ ಹಾಗೂ ರಾಹು, ಭೂತ, ಚಂಡಿ, ಹಾಗೂ ಕೀಳು ದೈವಗಳ ಕಲ್ಲುಗಳಿವೆ.
ಗರೋಡಿಯ ಆವರಣದಲ್ಲಿರುವ ಗುಡಿಯೊಂದರಲ್ಲಿ ಹೊಸ ಹೈಗುಳಿ, ಹಾಗೂ ರಾಹುವಿನ ಸಾನಿಧ್ಯವಿದೆ.
ಗರೋಡಿಯ ಆವರಣದೊಳಗೆ ಹಿಂಬದಿಯಲ್ಲಿ ನಾಗಬನವಿದೆ.
ಗರೋಡಿಯ ಅಂಗಣದಲ್ಲಿ ಕ್ಷೇತ್ರಪಾಲ ಕಟ್ಟೆ ಹಾಗೂ ತುಳಸಿಕಟ್ಟೆಗಳಿವೆ.
ಗರೋಡಿಯ ಒಳಗೆ ಹೋಗುವ ಗಂಡಸರು, ಹುಡುಗರು ತಮ್ಮ ಅಂಗಿ ಬನಿಯಾನ್ ಗಳನ್ನು ತೆಗೆದು ಗರೋಡಿ ಪ್ರವೇಶಿಸಬೇಕೆಂಬ ಸಂಪ್ರದಾಯವಿದೆ.

ಗಣೇಶ ಪೂಜಾರಿ

2021 ರಿಂದ ಗಣೇಶ ಪೂಜಾರಿ (44 ವರ್ಷ) ಇವರು ಇಲ್ಲಿಯ ಅರ್ಚಕರಾಗಿದ್ದಾರೆ. ಇವರ ಮೊದಲು ನಾಗಯ್ಯ ಪೂಜಾರಿ, ಪುಟ್ಟಯ್ಯ ಪೂಜಾರಿಯವರು ಇಲ್ಲಿ ಅರ್ಚಕರಾಗಿ ಸೇವೆ ಮಾಡಿದ್ದರು.

ರಾಜು ಪೂಜಾರಿ

ರಾಜು ಪೂಜಾರಿ (36 ವರ್ಷ) ಇವರು ಇಲ್ಲಿ ದರ್ಶನದ ಸ್ಥಳ ಪಾತ್ರಿಯಾಗಿದ್ದಾರೆ. ಇವರ ಮೊದಲು ನರಸಿಂಹ ಪೂಜಾರಿಯವರು ಸ್ಥಳ ಪಾತ್ರಿಗಳಾಗಿದ್ದರು.
ಸೇಸ ಪೂಜಾರಿ ಯಾನೆ ಕೇಶವ ಪೂಜಾರಿ(68 ವರ್ಷ) ಇವರು ಗರೋಡಿಯ ಮೊಕ್ತೇಸರರಾಗಿದ್ದಾರೆ. ಇವರಿಗೆ ಮೊದಲು ಗುಡಾಡಿ ಮನೆ ಅಣ್ಣಪ್ಪ ಪೂಜಾರಿಯವರು ಇಲ್ಲಿ ಮೊಕ್ತೇಸರರಾಗಿದ್ದರು.
ಸೀತಾರಾಮ ಶೆಟ್ಟಿಯವರು ಇಲ್ಲಿಯ ಬಲ್ಲಾಳ ಶೆಟ್ಟಿಯವರಾಗಿದ್ದಾರೆ. ಇವರ ಮೊದಲು ಸುಬ್ಬಯ್ಯ ಶೆಟ್ಟಿಯವರು ಇಲ್ಲಿಯ ಬಲ್ಲಾಳಶೆಟ್ಟಿಯವರಾಗಿದ್ದರು.
ಗರೋಡಿಯಲ್ಲಿ ನಿತ್ಯ ನೀರು ಇಟ್ಟು ದೀಪ ಹಚ್ಚುವ ಕ್ರಮವಿದೆ. ಗರೋಡಿಯಲ್ಲಿ ಸಂಕ್ರಾಂತಿ ಪೂಜೆ, ಕದಿರು ಕಟ್ಟುವುದು, ಜನವರಿ ತಿಂಗಳ 14ರಂದು ಹಾಲಹಬ್ಬ, ದರ್ಶನಸೇವೆ, ಫೆಬ್ರವರಿ ತಿಂಗಳ ಒಂದು ದಿನ ಅಗೆಲು ಸೇವೆ, ಮಾರನೇ ದಿನ ಗುರಿ ಪೂಜೆ, ಮರುದಿನ ಮಾಸ್ತಿ ಪೂಜೆಗಳುನನಡೆಯುತ್ತವೆ. ಮೇ ತಿಂಗಳಲ್ಲಿ ಗಡಿ ಪೂಜೆ (ಮಾರಿ ಹಬ್ಬ) ನಡೆಯುತ್ತದೆ.
ಗರೋಡಿಯ ಕೂಡುಕಟ್ಟಿಗೆ ಉಳ್ಳೂರು 11 ಹಾಗೂ ಉಪ್ರಳ್ಳಿ ಊರುಗಳು ಸೇರಿದ್ದು ಜನರು ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ. ಊರ ಜನರ ಕಾಲಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
15ಸೆಂಟ್ಸ ಜಾಗವು ಗರೋಡಿಯ ಹೆಸರಲ್ಲಿದ್ದು 2013ರಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿದೆ.
ಕೃಷ್ಣ ಮಡಿವಾಳ, ಉಳ್ಳೂರು ಇವರು ಗರೋಟಿಯ ಮಡಿವಾಳರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಕೋಟಿಚೆನ್ನಯ ಗರೋಟಿ ಉಳ್ಳೂರು – 11,
ಮೂಡುಮಠ ಪೋಸ್ಟ, ಬೈಂದೂರು ತಾಲೂಕು ಉಡುಪಿ576219.

ಗರೋಡಿಯ ಅರ್ಚಕರು:

ಗಣೇಶ ಪೂಜಾರಿ – 8310048245

ಗರೋಡಿಯ ಪಾತ್ರಿಗಳು:

ರಾಜು ಪೂಜಾರಿ – 9686324662

ಗರೋಡಿಯ ಮೊಕ್ತೇಸರರು:

ಸೇಸ ಪೂಜಾರಿ ಯಾನೆ ಕೇಶವ ಪೂಜಾರಿ – 9900305246.

ಮಾಹಿತಿ ನೀಡಿದವರು :

ಗಣೇಶ ಪೂಜಾರಿ,
ಪ್ರಭಾಕರ ಪೂಜಾರಿ (ಸೇಸು ಪೂಜಾರಿಯವರ ತಮ್ಮ)

ಮಾಹಿತಿ ಸಂಗ್ರಹಿಸಿದ ದಿನಾಂಕ :

26.02.2025

Swamilinga, NagaBrahma, Koti Chennaya, Panjurli & Parivara Daivagala Devasthana, Kergalu Garodi

ಸ್ವಾಮಿಲಿಂಗ, ನಾಗಬ್ರಹ್ಮ, ಕೋಟಿಚೆನ್ನಯ, ಪಂಜುರ್ಲಿ, ಹಾಗೂ ಪರಿವಾರ ದೈವಗಳ ದೇವಸ್ಥಾನ ಕೆರ್ಗಾಲು ಗರೋಡಿ.

ಉಡುಪಿಯಿಂದ ಎನ್ಎಚ್ 66 ರಲ್ಲಿ ಕುಂದಾಪುರ – ಮರವಂತೆ – ನಾವುಂದ – ಕಿರಿಮಂಜೇಶ್ವರ ಖಂಬದಕೋಣೆಯ ನಂತರ ಕೆರ್ಗಾಲ್ ನಾಯ್ಕನ ಕಟ್ಟೆಯಲ್ಲಿ ಎಡಕ್ಕೆ ತಿರುಗಿ ಸುಮಾರು 800ಮೀಟರ್ ದೂರ ಸಾಗಿದರೆ ಈ ಗರೋಡಿ ಸಿಗುತ್ತದೆ.
ಗರೋಡಿಯ ಒಳಗೆ ಬ್ರಹ್ಮಗುಡಿಯಲ್ಲಿ ಸಿಮೆಂಟಿನಿಂದ ನಿರ್ಮಿಸಲಾದ ಬ್ರಹ್ಮಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿ ಇದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರು , ಇಬ್ಬರು ಬಂಟರು ಹಾಗೂ ತಾಣನಂದಿಯ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ಪಯ್ಯಬೈದ, ಬಂಟ ಹಾಗೂ ದೇವಿಬೈದೆತಿಯ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಕೆಂಪಿ ನಂದಿಯ ಮರದ ಹಾಗೂ ಕಂಚಿನ ಮೂರ್ತಿ, ಕಾಸಿನಂದಿ, ಬಂಟ ಪಂಜುರ್ಲಿ ಕಂಚಿನ ಮೂರ್ತಿಗಳಿವೆ.
ಬ್ರಹ್ಮಗುಡಿಯ ಎಡಬದಿಯಲ್ಲಿ ಪತ್ತಿನ ಹೈಗುಳಿ, ಪತ್ತಿನ ನಂದಿ, ಕರಿಬೆಟ್ಟಿನ ಹೈಗುಳಿ, ಪಾಂಡಾಳ, ಶ್ರೀಮಗ, ಮೈಂದಾಳಿ, ಮೂಡರ್ತ ಹೈಗುಳಿ, ಕೆಪ್ಪಹೈಗುಳಿ, ದೊಟ್ಟಿಕಾಲಮ್ಮ, ಮೂಡೂರಮ್ಮ, ಅಣ್ಣುಅಣ್ಣಾಹೈಗುಳಿ, ಜೋಗಿ, ಹೀತ್ರಹೈಗುಳಿ, ಮೂರ್ಚಂಡಿ, ಭೂತರಾಯ, ಗ್ರಾಮದ ಭೂತ, ಸ್ಥಳ ಮಾಸ್ತಿಅಮ್ಮ, ಕಂಡಿಕೋಡ್ಲು ಮಾಸ್ತಿ, ಹೊಲ್ಲಹೈಗುಳಿ, ಹೊಲ್ಲತಂಡದ ಹೈಗುಳಿ ದೈವಗಳ ಆರಾಧನೆಯಿದೆ. ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲಬೊಬ್ಬರ್ಯನ ಮರದ ಮೂರ್ತಿ ಇದೆ.
ಗರೋಡಿಯ ಆವರಣದೊಳಗೆ ಇರುವ ಗುಡಿಯೊಂದರಲ್ಲಿ ಪತ್ತಿನ ನಂದಿ, ಮುರನಂದಿ, ಪಂಗಡದಾರರು, ಏಳು ಕನ್ಯೆಯರು, ಸ್ವಾಮಿಲಿಂಗ, ಭೂಮಿಲಿಂಗ, ಪಲ್ಲ ಜಟ್ಟಿ, ಬೇತೆಬೀರ, ರಂಗ ಅಜ್ಜ, ವೆಂಕ್ಟು ಅಜ್ಜ, ನಾಗಪಾಲ ಹೈಗುಳಿ, ನಾಗದೇವರು, ಪತ್ತಿನ ಹೈಗುಳಿ ದೈವಗಳ ಮರದ ಮೂರ್ತಿಗಳಿವೆ.
ಇನ್ನೊಂದು ಗುಡಿಯೊಳಗೆ ಹಿಜಾಣ ಚಿಕ್ಕು, ಹಾಗೂ ಹಿಜಾಣ ಹೈಗುಳಿ ದೈವಗಳ ಮರದ ಮೂರ್ತಿಗಳಿವೆ.
ಇನ್ನೊಂದು ಗುಡಿಯಲ್ಲಿ ಕೆಂಚ ಹೈಗುಳಿ ದೈವದ ಕಲ್ಲು ಇದ.
ಪಕ್ಕದಲ್ಲಿರುವ ಇನ್ನೊಂದು ಗುಡಿಯಲ್ಲಿ ಬಲ್ಲೆ ಹೈಗುಳಿ ದೈವಗಳ ಕಲ್ಲಿನ ಮೂರ್ತಿ ಇದೆ.
ಗರೋಡಿಯ ಅಂಗಳದಲ್ಲಿ ಹೊರಸುತ್ತಿನ ಹೈಗುಳಿ, ಬಲಿಕಲ್ಲು, ತುಳಸಿಕಟ್ಟೆಗಳಿವೆ.
ಗರೋಡಿಗೆ ಪ್ರವೇಶದ್ವಾರದ ಗೋಪುರವಿದ್ದು, ಬದಿಯಲ್ಲಿ ಕಂಬಳದ ಕೋಣ ಹಾಗೂ ಓಡಿಸುವವರ ಸಿಮೆಂಟಿನ ಮೂರ್ತಿಗಳನ್ನು ರಚಿಸಲಾಗಿದೆ.

ಸಂಜೀವ ಪೂಜಾರಿ

ಸಂಜೀವ ಪೂಜಾರಿ (60ವರ್ಷ) ಇವರು 2014ರಿಂದ ಅರ್ಚಕರಾಗಿ ಸೇವೆ ಮಾಡುತ್ತಿದ್ದು ಇವರೊಂದಿಗೆ ಮೋಹನ ಪೂಜಾರಿ, ರಾಮ ಪೂಜಾರಿ, ರಾಜು ಪೂಜಾರಿ, ಹೆರಿಯ ಪೂಜಾರಿ, ರವಿ ಪೂಜಾರಿ, ವಿನೋದ ಪೂಜಾರಿ, ಸಂದೀಪ ಪೂಜಾರಿಯವರೂ ಅರ್ಚಕರಾಗಿ ಸೇವೆ ಮಾಡುತ್ತಿದ್ದಾರೆ. ಇವರ ಮೊದಲು ಇವರ ಹಿರಿಯರಾದ ಚೆನ್ನ ಪೂಜಾರಿ, ವೆಂಕ್ಟು ಪೂಜಾರಿ, ಪುಟ್ಟಯ್ಯ ಪೂಜಾರಿಯವರು ಈ ಗರೋಡಿಯ ಅರ್ಚಕರಾಗಿ ಸೇವೆ ಮಾಡಿದ್ದರು.
ಸುಬ್ಬ ಪೂಜಾರಿಯವರು ಗರೋಡಿಯ ಪಂಜುರ್ಲಿ ದರ್ಶನದ ಸ್ಥಳ ಪಾತ್ರಿಯಾಗಿದ್ದಾರೆ. ಹಿಂದೆ ಹಿರಿಯರಾದ ಮಂಜು ಪೂಜಾರಿಯವರು ದರ್ಶನದ ಸ್ಥಳ ಪಾತ್ರಿಯಾಗಿದ್ದರು.
ಅರ್ಚಕರಾದ ಸಂಜೀವ ಪೂಜಾರಿಯವರೇ ಗರೋಡಿಯ ಮೊಕ್ತೇಸರರಾಗಿದ್ದಾರೆ. ಗರೋಡಿಯ ಉಸ್ತುವಾರಿಗೆ ಆಡಳಿತ ಸಮಿತಿಯಿದ್ದು ಸುರೇಶ ಎಸ್.ಪೂಜಾರಿಯವರು ಗೌರವಾಧ್ಯಕ್ಷರಾಗಿ, ನರಸಿಂಹ ಪೂಜಾರಿ ಪಡಕೋಣೆಯವರು ಅಧ್ಯಕ್ಷರಾಗಿ, ಚಂದ್ರ ಬಿಲ್ಲವ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗರೋಡಿಯಲ್ಲಿ ನಿತ್ಯ ಪೂಜೆ, ಸಂಕ್ರಾಂತಿ ಪೂಜೆ, ಕದಿರುಕಟ್ಟುವುದು, ಫೆಬ್ರವರಿ ತಿಂಗಳಲ್ಲಿ ಒಂದು ದಿನ ಅಗೆಲು ಸೇವೆ ನಡೆದು ಎರಡನೇ ದಿನ ಗುರಿ ಪೂಜೆ ನಡೆಯುತ್ತದೆ. ಜನವರಿ 14ರಂದು ಹಾಲುಹಬ್ಬ ನಡೆಯುತ್ತದೆ. ಎರಡು ವರ್ಷಕ್ಕೊಮ್ಮೆ ಏಪ್ರಿಲ್ ತಿಂಗಳಲ್ಲಿ ಎಲ್ಲಾ ದೈವಗಳಿಗೆ ಕೋಲ ಸೇವೆ ನಡೆಯುತ್ತದೆ. (5ದಿನ) ಪ್ರತೀ ವರ್ಷ ನವೆಂಬರ್ ತಿಂಗಳ 25, 26ನೇ ತಾರೀಖಿನಂದು ಕಂಬಳವು ನಡೆಯುತ್ತದೆ.
ಕೆರ್ಗಾಲ್, ಚುರುಮಕ್ಕಿ, ಖಂಬದಕೋಣೆ, ನಾಗೂರು, ಬೈಂದೂರಿನ ಜನ ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಊರಜನರ ಕಾಲಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಗರೋಡಿಗೆ 12ಸೆಂಟ್ಸ ಜಾಗವಿದ್ದು, ಗರೋಡಿಯು 2002ರಲ್ಲಿ ಜೋರ್ಣೋದ್ಧಾರಗೊಂಡಿದೆ.
ನಾಗ ಪಾಣಾರ ಹಂಪಾರ್ ಈ ಗರೋಡಿಯ ನೃತ್ಯ ವಿಶಾರದರಾಗಿ, ಭಾಸ್ಕರ ದೇವಾಡಿಗ ಉಪ್ಪುಂದ ಇವರು ವಾದ್ಯದವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.
ಗರೋಡಿಗೆ ಸಂಬಂಧಪಟ್ಟು ಶ್ರೀ ರಾಮ ಭಜನಾ ಮಂಡಳಿ, ಕೆರ್ಗಾಲು ಎಂಬ ಭಜನಾ ಮಂಡಳಿಯೊಂದು ಚಟುವಟಿಕೆಯಲ್ಲಿದೆ.

ಗರೋಡಿಯ ವಿಳಾಸ:

ಶ್ರೀ ಸ್ವಾಮಿಲಿಂಗ, ನಾಗಬ್ರಹ್ಮ, ಕೋಟಿಚೆನ್ನಯ,
ಪಂಜುರ್ಲಿ ಹಾಗೂ ಪರಿವಾರ ದೈವಗಳ ದೇವಸ್ಥಾನ,
ಕೆರ್ಗಲ್ ಗರೋಡಿ, ನಾಯ್ಕನಕಟ್ಟೆ,
ಗ್ರಾಮ ಮತ್ತು ಅಂಚೆ ಕೆರ್ಗಲ್, ಬೈಂದೂರು ತಾಲೂಕು.

ಅರ್ಚಕರು ಮತ್ತು ಮೊಕ್ತೇಸರರು:

ಸಂಜೀವ ಪೂಜಾರಿ – 9742564864

ಮಾಹಿತಿ ನೀಡಿದವರು :

ಸಂಜೀವ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

26.02.2025

Shree Koti Chennayya Panjurli Garodi, Bijoor

ಶ್ರೀ ಕೋಟಿಚೆನ್ನಯ್ಯ ಪಂಜುರ್ಲಿ ಗರೋಡಿ, ಬಿಜೂರು

ಉಡುಪಿಯಿಂದ – ಕುಂದಾಪುರ – ನಾವುಂದ – ಕಿರಿಮಂಜೇಶ್ವರ – ಕೆರ್ಗಾಲ್ – ಖಂಬದಕೋಣೆ – ಉಪ್ಪುಂದದ ನಂತರ ಬಿಜೂರು ತಲುಪಿ ಎನ್ ಎಚ್ 66ರಲ್ಲಿ ಬಲಕ್ಕೆ ತಿರುಗಿ ಸುಮಾರು 2.5 ಕಿ. ಮೀ. ದೂರದಲ್ಲಿ ಬೈಂದೂರು ಹೊಳೆಯ ಬದಿಯಲ್ಲಿದೆ ಈ ಗರೋಡಿ.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಒಳಗೆ ಬ್ರಹ್ಮಗುಡಿಯಲ್ಲಿ ಸಿಮೆಂಟಿನಿಂದ ನಿರ್ಮಿಸಲ್ಪಟ್ಟ ಬ್ರಹ್ಮಗುಂಡದ ಒಳಗೆ ನಾಗಬ್ರಹ್ಮರ ಪಂಚಲೋಹದ ಮೂರ್ತಿ ಇದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರು, ಇಬ್ಬರು ಬಂಟರ ಮರದ ಮೂರ್ತಿ, ಆಕಾಶ ಪಂಜುವಿನ ಕಲ್ಲಿನ ಮೂರ್ತಿ, ಪಕ್ಕದಲ್ಲಿ ಸ್ಥಾನದ ನಂದಿಕೇಶ್ವರನ ಮರದಮೂರ್ತಿ ಇದೆ.
ಗುಂಡದ ಬಲಭಾಗದಲ್ಲಿ ದೇಯಿಬೈದೆತಿ, ಬೈದ, ಹಾಗೂ ಬಂಟರ ಆರಾಧನೆಯಿದೆ.
ಬ್ರಹ್ಮಗುಡಿಯ ಹೊರಗೆ ಬಲಭಾಗದಲ್ಲಿ ಮರ್ಲಮ್ಮ, ಹಿಜನ್ ಹೈಗುಳಿ, ದೊಟ್ಟಿಕಾಲ ಚಿಕ್ಕು, ಬಾಲಚಿಕ್ಕು, ಮರ್ಲ ಚಿಕ್ಕು, ಪಂಜುರ್ಲಿ ವಾಹನ, ಪಂಜಿರ್ಲಿ ದೈವಗಳ ಮರದ ಮೂರ್ತಿಗಳಿಗೆ ಪೂಜೆ ಇದೆ.
ಬ್ರಹ್ಮಗುಡಿಯ ಎಡಬದಿಯಲ್ಲಿ ಕಾಶಿನಂದಿ, ಪರಿವಾರ ದೈವಗಳು, ಧೂಮಾವತಿ, ಹೊನ್ನಳ್ಳಿ ಮಾಸ್ತಿ, ಮಾಯ್ದಳಿ, ಕರೂರು ಮಾಸ್ತಿ, ತಂತ್ರಿ, ಜೋಗದೇವರು, ಪರಿವಾರದೈವ, ಮೂಡೂರ ಹೈಗುಳಿ, ಪರಿವಾರ ದೈವ, ಸಿಂಗಾರ ಹೈಗುಳಿ, ಮೂರ್ಚಂಡು, ಪರಿವಾರ ದೈವಗಳು, ವಿಶ್ವಕರ್ಮ ಮರದ ಮೂರ್ತಿಗಳಿವೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯನ ಮರದ ಮೂರ್ತಿ ಇದೆ.
ಗರೋಡಿಯ ಆವರಣದೊಳಗಿರುವ ಗುಡಿಯಲ್ಲಿ ಸ್ವಾಮಿ, ಹೊರಸುತ್ತಿನ ಹೈಗುಳಿ, ಹಾಗೂ ಹೈಗುಳಿ ದೈವಗಳ ಸಾನಿಧ್ಯವಿದೆ.
ಇನ್ನೊಂದು ಗುಡಿಯಲ್ಲಿ ಕೆಂಚ ಹೈಗುಳಿ ದೈವದ ಕಲ್ಲು ಇದ.
ಗರೋಡಿಯ ಆವರಣದ ಹೊರಗೆ ಕೀಳಿನ ಕಲ್ಲು ಇದೆ.
ಬೈಂದೂರು, ಶೀರೂರು, ಕಳವಾಡಿ, ತಗ್ಗರ್ಸೆ, ಉಪ್ಪುಂದ, ಯೆಡ್ತರೆ, ಮುಡಿಕಲ್ಲು ಭಾಗದ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ.
ಗರೋಡಿಯ ಆವರಣದೊಳಗೆ ಹುಲಿಯಪ್ಪನ ಕಲ್ಲು, ತುಳಸಿಕಟ್ಟೆ, ಬಲಿಕಲ್ಲುಗಳಿವೆ.

ಬಾಬು ಪೂಜಾರಿ

ಬಾಬು ಪೂಜಾರಿ (58 ವರ್ಷ), ಶ್ರೀನಿವಾಸ ಪೂಜಾರಿ (45 ವರ್ಷ) ಇವರುಗಳು ಗರೋಡಿಯ ಪ್ರಧಾನ ಅರ್ಚಕರಾಗಿದ್ದಾರೆ. ಇವರೊಂದಿಗೆ ಹೆರಿಯ ಪೂಜಾರಿ, ಪಂಜು ಪೂಜಾರಿಯವರು, ಗರೋಡಿಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮೊದಲು ಕೊರಗ ಪೂಜಾರಿ, ಚಿಕ್ಕಯ್ಯ ಪೂಜಾರಿಯವರು ಗರೋಡಿಯ ಅರ್ಚಕರಾಗಿ ಸೇವೆ ಸಲ್ಲಿಸಿದ್ದಾರೆ.
ರಾಮ ಪೂಜಾರಿಯವರು ಗರೋಡಿಯ ದರ್ಶನದ ಸ್ಥಳ ಪಾತ್ರಿಗಳಾಗಿದ್ದಾರೆ. ಇವರ ಮೊದಲು ಬೈರ ಪೂಜಾರಿ, ಗೋವಿಂದ ಪೂಜಾರಿ, ಓಬು ಪೂಜಾರಿಯವರು ಈ ಗರೋಡಿಯ ಸ್ಥಳ ಪಾತ್ರಿಗಳಾಗಿದ್ದರು.
ಪ್ರಧಾನ ಅರ್ಚಕರಾದ ಬಾಬು ಪೂಜಾರಿಯವರು ಗರೋಡಿಯ ಮೊಕ್ತೇಸರರೂ ಆಗಿದ್ದಾರೆ.
ಗರೋಡಿಯಲ್ಲಿ ನಿತ್ಯ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಜನವರಿ ತಿಂಗಳಲ್ಲಿ ಒಂದು ದಿನ ಹಾಲು ಹಬ್ಬ, ಅಗೆಲು ಸೇವೆ, ದರ್ಶನ ಸೇವೆ ನಡೆದು ಮರುದಿನ ಗುರಿ ಪೂಜೆ ನಡೆಯುತ್ತದೆ.
ಬಿಜೂರು ಗ್ರಾಮದ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಊರಜನರ ಹರಕೆ, ಕಾಣಿಕೆ, ಸಹಾಯ ಧನದಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚವನ್ನು ಭರಿಸಲಾಗುತ್ತದೆ.
ಗರೋಡಿಗೆ 52ಸೆಂಟ್ಸ ಜಾಗವಿದ್ದು 2001 ರಲ್ಲಿ ಜೀರ್ಣೋದ್ದಾರಗೊಂಡಿದೆ. ಪ್ರಸ್ತುತ ಸುಮಾರು 5ಕೋಟಿ ರೂಪಾಯಿ ವೆಚ್ಚದಲ್ಲಿ ಪುನ: ಜೀರ್ಣೋದ್ಧಾರದ ಯೋಜನೆಯಿದೆ.

ಗರೋಡಿಯ ವಿಳಾಸ:

ಶ್ರೀ ಕೋಟಿಚೆನ್ನಯ್ಯ ಪಂಜುರ್ಲಿ ಗರೋಡಿ ಬಿಜೂರು,
ಬಿಜೂರು ಗ್ರಾಮ ಮತ್ತು ಅಂಚೆ,
ಬೈಂದೂರು ತಾಲೂಕು – 576232

ಅರ್ಚಕರು ಮತ್ತು ಮೊಕ್ತೇಸರರು:

ಬಾಬು ಪೂಜಾರಿ – 9741507620

ಮಾಹಿತಿ ನೀಡಿದವರು :

ಬಾಬು ಪೂಜಾರಿ, ಮಂಜು ಪೂಜಾರಿ – 99003 93953

ಮಾಹಿತಿ ಸಂಗ್ರಹಿಸಿದ ದಿನಾಂಕ :

26.02.2025

Shree Koti Chennayya Garodi, Nakatte, Baindoor

ಶ್ರೀ ಕೋಟಿಚೆನ್ನಯ್ಯ ಪಂಜುರ್ಲಿ ಗರೋಡಿ, ನಾಕಟ್ಟೆ, ಬೈಂದೂರು

ಉಡುಪಿಯಿಂದ – ಕುಂದಾಪುರ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಎನ್.ಎಚ್.66ರಲ್ಲಿ ಬೈಂದೂರು ತಲುಪಿದರೆ ಎನ್.ಎಚ್.66ರ ಎಡಬದಿಯಲ್ಲಿ ಸುಮಾರು 150ಮೀ. ದೂರದಲ್ಲಿದೆ ಈ ಗರೋಡಿ. ಉಡುಪಿ ಜಿಲ್ಲೆಯ ಉತ್ತರ ದಿಕ್ಕಿಗಿರುವ ಕೊನೆಯ ಗರೋಡಿ ಇದಾಗಿದೆ.
ಶಿಲಾಮಯವಾಗಿ ನಿರ್ಮಿಸಲಾದ ಈ ಗರೋಡಿಗೆ ಪೂರ್ವಾಭಿಮುಖವಾದ ಮುಖ್ಯ ದ್ವಾರವಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೊಡಿಯ ಒಳಗೆ ಬ್ರಹ್ಮಗುಡಿಯಲ್ಲಿ ಮರದಿಂದ ನಿರ್ಮಿಸಲ್ಪಟ್ಟ ಬ್ರಹ್ಮಗುಂಡದ ಒಳಗೆ ನಾಗಬ್ರಹ್ಮ ಪಂಚಲೋಹದ ಮೂರ್ತಿ ಇದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರು, ಇಬ್ಬರು ಮಕ್ಕಳು ಹಾಗೂ ತಾಣನಂದಿಯ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ದೇಯಿಬೈದೆತಿ, ಕುಜುಂಬ ಕಾಂಜವ, ಕುಬ್ಜಾಖಾನ್ ಹಾಗೂ ಯಕ್ಷೆಯ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಪಂಜುರ್ಲಿ ದೈವದ ಸಾನಿದ್ಯವಿದೆ. ಬ್ರಹ್ಮಗುಡಿಯ ಎಡಬದಿಯಲ್ಲಿ ಮರ್ಲಮ್ಮ, ಚಿಕ್ಕು, ಮಾಸ್ತಿ ದೈವದ ಸಾನಿದ್ಯವಿದೆ
ಪಕ್ಕದಲ್ಲಿ ಧೂಮಾವತಿ, ಮಾಯಿಂದಾಲ್, ಮಾಯಿಂದಾಲ್ ಪುತ್ರ, ಕತೃಹೈಗುಳಿ, ಸಿಂಗಾರದ ಹೈಗುಳಿ, ಮೂಡೂರ ಹೈಗುಳಿ, ಹೊರಸುತ್ತಿನ ಹೈಗುಳಿ ಜೋಗಿಪುರುಷರ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಗೆ ಎದುರು ಮುಖವಾಗಿ ಗುರು ಸಂಕಲ್ಪವಾಗಿ ಗುರುಕಂಬ ಹಾಗೂ ಮುರ್ಚಂಡಿಯ ಮರದ ಮೂರ್ತಿ ಇದೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯನ ಮರದ ಮೂರ್ತಿ ಇದೆ. ಇನ್ನೊಂದು ಬದಿಯಲ್ಲಿ ಹುಲಿದೇವ ಮರದ ಮೂರ್ತಿ ಇದೆ.
ಗರೋಡಿಯ ಅಂಗಣದಲ್ಲಿ ತೀರ್ಥಬಾವಿ, ತುಳಸಿಕಟ್ಟೆಗಳಿವೆ. ಪಕ್ಕದಲ್ಲಿ ಮೂಲದಲ್ಲಿ ಗರೋಡಿ ಇದ್ದ ಪ್ರತೀಕವಾಗಿ ಮರದ ಕಟ್ಟೆಯೊಂದಿದೆ. ಇಲ್ಲಿ ಇದ್ದ ಗರೋಡಿಯನ್ನು ಕಾಲಾಂತರದಲ್ಲಿ ಸ್ಥಳಾಂತರಿಸಿ ರಾಷ್ಟ್ರೀಯ ಹೆದ್ದಾರಿಯ ಪಕ್ಕ ಈಗ ಇರುವ ಸ್ವಾಗತಗೋಪುರದ ಹತ್ತಿರ ಕಟ್ಟಲಾಯಿತಂತೆ. ಅಲ್ಲಿಂದ ಪುನ: ಸ್ಥಳಾಂತರಿಸಿ ಈಗ ಇರುವ ಜಾಗದಲ್ಲಿ 2022ರಲ್ಲಿ ಶಿಲಾಮಯ ಹೊಸಗರೋಡಿಯನ್ನು ನಿರ್ಮಿಸಲಾಗಿದೆ. ಮೂಲಸ್ಥಾನದ ಪ್ರತೀಕವಾಗಿ ಆ ಸ್ಥಳದಲ್ಲಿದ್ದ ಮರಕ್ಕೆ ಕಟ್ಟೆಯನ್ನು ನಿರ್ಮಿಸಲಾಗಿದೆ.
ಗಣೇಶ ಪೂಜಾರಿ (40 ವರ್ಷ) ಇವರು ಇಲ್ಲಿಯ ಅರ್ಚಕರಾಗಿದ್ದಾರರ. ಇವರ ಮೊದಲು ಇವರ ಅಜ್ಜ ನಂದು ಪೂಜಾರಿಯವರು ಅರ್ಚಕರಾಗಿದ್ದರು.
ಗರೋಡಿಯ ಆಡಳಿತವನ್ನು ಕೋಟಿಚೆನ್ನಯ್ಯ ಪಂಜುರ್ಲಿ ಟ್ರಸ್ಟ್ ಎಂಬ ಹೆಸರಿನ ಟ್ರಸ್ಟ್ ನೋಡಿಕೊಳ್ಳುತ್ತಿದ್ದು, ರಾಜು ಪೂಜಾರಿಯವರು ಟ್ರಸ್ಟ್ನ ಅಧ್ಯಕ್ಷರಾಗಿದ್ದಾರೆ.
ಗರೋಡಿಯಲ್ಲಿ ನಿತ್ಯ ದೀಪ ಹಚ್ಚುತ್ತಾರೆ. ಸೋಮವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಬೆಳಕಿನ ಸೇವೆ, ಕದಿರು ಕಟ್ಟುವ ಕ್ರಮ ಇದೆ.
ಪ್ರತೀ ವರ್ಷ ಜನವರಿ 25ನೇ ತಾರೀಖಿಗೆ ಅಗೆಲು, ಬೈದರ್ಕಳ ಕೋಲ ನಡೆದು, 26ಕ್ಕೆ ಪಂಜುರ್ಲಿ ಹಾಗೂ ಧೂಮಾವತಿ ಕೋಲ ನಡೆಯುತ್ತದೆ.
ಬೈಂದೂರು, ಶೀರೂರು, ಕಳವಾಡಿ, ತಗ್ಗರ್ಸೆ, ಉಪ್ಪುಂದ, ಯೆಡ್ತರೆ, ಮುಡಿಕಲ್ಲು ಭಾಗದ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ.

ಗರೋಡಿಯ ವಿಳಾಸ:

ಶ್ರೀ ಕೋಟಿಚೆನ್ನಯ್ಯ ಪಂಜುರ್ಲಿ ಗರೋಡಿ ನಾಕಟ್ಟೆ,
ಬೈಂದೂರು ಯೆಡ್ತರೆ ಅಂಚೆ,
ಬೈಂದೂರು ತಾಲೂಕು
ಉಡುಪಿ ಜಿಲ್ಲೆ – 576214.

ಅರ್ಚಕರು:

ಗಣೇಶ ಪೂಜಾರಿ – 9980479952

ಟ್ರಸ್ಟ್ನ ಅಧ್ಯಕ್ಷರು :

ರಾಜು ಪೂಜಾರಿ – 9448344534.

ಮಾಹಿತಿ ನೀಡಿದವರು :

ಅಣ್ಣಪ್ಪ ಪೂಜಾರಿ – 94488 57516

ಮಾಹಿತಿ ಸಂಗ್ರಹಿಸಿದ ದಿನಾಂಕ :

26.02.2025

Shree Brahma Baidarkala Garodi, Huyyaru

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಹುಯ್ಯಾರು

ಉಡುಪಿ ಬ್ರಹ್ಮಾವರ ಸೈಬ್ರಕಟ್ಟೆಯಲ್ಲಿ ಬಲಕ್ಕೆ ತಿರುಗಿ ಜಾನುವಾರು ಕಟ್ಟೆ ವಂಡಾರು ಮೂಲಕ ಹೈಕಾಡಿ ತಲುಪಿ ಅಲ್ಲಿಂದ ಸುಮಾರು ಮೂರು ಕಿ. ಮೀ. ದೂರದಲ್ಲಿದೆ ಈ ಗರೋಡಿ.
ಇದು ಆಯದ ಗರೋಡಿಯಾಗಿದ್ದು ಉತ್ತರಾಭಿಮುಖವಾದ ಒಂದು ದ್ವಾರವಿದೆ. ಬ್ರಹ್ಮಗುಡಿಯು ಪೂರ್ವಾಭಿಮುಖವಾಗಿದ್ದು, ಷಡಾಧಾರ ಪ್ರತಿಷ್ಠೆಯಾಗಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
ಗುಂಡದ ಎಡಭಾಗದಲ್ಲಿ ದೇಯಿಬೈದೆತಿ, ಕೋಟಿಚೆನ್ನಯರು ಹಾಗೂ ಇಬ್ಬರು ಮಕ್ಕಳ ಮರದ ಮೂರ್ತಿಯಿದೆ.
ಬಲಭಾಗದಲ್ಲಿ ಬಲ್ಲಾಳರ ಮುಂಡಿಗೆ, ಕುಜುಂಬ ಕಾಂಜವರ ಹಾಗೂ ಮಗುವಿನ ಮರದ ಮೂರ್ತಿ ಇದೆ.
ಬ್ರಹ್ಮಗುಡಿಯ ಹೊರಗೆ ಎಡಬದಿಯಲ್ಲಿ ಪಂಜರ್ಲಿ ದೈವದ ಮುಂಡಿಗೆಯಿದೆ. ಬಲಬದಿಯಲ್ಲಿ ಮೈಂದಾಳ್ತಿ ಮತ್ತು ಬಾಲೆಯ ಮರದ ಮೂರ್ತಿಯಿದೆ.
ಬ್ರಹ್ಮಗುಡಿಯ ಎದುರಿಗೆ ಜೋಗಿ ಪುರುಷರ ಮರದ ಮೂರ್ತಿ ಇದೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಜಗುಲಿಯಲ್ಲಿ ಬಾಗಿಲ ಬೊಬ್ಬರ್ಯ, ನಂದಿಕೇಶ್ವರ ದೈವದ ಮರದ ಮೂರ್ತಿ ಹಾಗೂ ಹೈಗುಳಿ ದೈವದ ಮುಂಡಿಗೆಯಿದೆ.
ಗರೋಡಿಯ ಎದುರಿರುವ ಗುಡಿಯಲ್ಲಿ ಶಿವರಾಯ ಹಾಗೂ ಬಂಟರ ಮರದ ಮೂರ್ತಿ ಇದೆ.
ಗರೋಡಿಯ ಪರಿಸರದಲ್ಲಿ ಗರಡಿ ಗಣಪತಿ ದೇವಸ್ಥಾನವಿದೆ.

ಸುಧಾಕರ ಪೂಜಾರಿ

2009ರಿಂದ ಸುಧಾಕರ ಪೂಜಾರಿ (50 ವರ್ಷ) ಯವರು ಗರೋಡಿಯ ಅರ್ಚಕರಾಗಿ ಸೇವೆ ಮಾಡುತ್ತಿದ್ದಾರೆ. ಇವರ ಮೊದಲು ಇವರ ಹಿರಿಯರಾದ ನಾರಾಯಣ ಪೂಜಾರಿ, ಕೆಪ್ಪ ಪೂಜಾರಿಯವರು ಈ ಸೇವೆ ಮಾಡಿದ್ದರು.
ರಾಮ ಪೂಜಾರಿ (60 ವರ್ಷ) ಹಾಗೂ ನಾರಾಯಣ ಪೂಜಾರಿ (55 ವರ್ಷ) ಇವರು ಇಲ್ಲಿಯ ಬೈದರ ದರ್ಶನದ ಸ್ಥಳ ಪಾತ್ರಿಗಳಾಗಿದ್ದಾರೆ.
ಈ ಗರೋಡಿಯ ಮೊಕ್ತೇಸರರಾದ ವಿಶ್ವನಾಥ ಸೇರ್ವೆಗಾರರು 2023ರಲ್ಲಿ ನಿಧನರಾಗಿದ್ದು ಅವರ ಉತ್ತರಾಧಿಕಾರಿಯ ನೇಮಕವಾಗಲಿಲ್ಲ. ಮುರಳೀಧರ ಶೆಟ್ಟಿಯವರು ಮುಕ್ಕಾಲ್ತಿಯಾಗಿದ್ದಾರೆ
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ಹೂವಿನ ಪೂಜೆ, ಪಸರಣೆ ಪೂಜೆ, ಕದಿರು ಕಟ್ಟುವುದು, ಪ್ರತೀ ವರ್ಷ ಡಿಸೆಂಬರ್ 13ನೇ ತಾರೀಖಿನಂದು ಅಗೆಲು ಸೇವೆ, ಹಾಲುಹಬ್ಬ, ದರ್ಶನ ಸೇವೆ, ತುಲಾಭಾರ ಸೇವೆ, ಮಾರ್ಚ ತಿಂಗಳ 25ನೇ ತಾರೀಖಿನಂದು ಅಗೆಲು, 26ಕ್ಕೆ ಬೈದರ್ಕಳ ನೇಮ, ಶಿವರಾಯ, ಮೈಂದಾಳ್ತಿ, ಜೋಗಿಪುರುಷ ಕೋಲ ಹಾಗೂ ಪ್ರತೀ ವರ್ಷ ಡಿಸೆಂಬರ್ ತಿಂಗಳಲ್ಲಿ ಶಿವರಾಯ ಮಾರಿ ಹಬ್ಬ ನಡೆಯುತ್ತದೆ.
ಹುಯ್ಯಾರು, 76 ಹಾಲಾಡಿ, ರಟ್ಟಾಡಿ, ತುಳಂಜೆ, 28 ಹಾಲಾಡಿ ಗ್ರಾಮಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರಿವೆ. ತುಲಾಭಾರ ಸೇವೆ, ಮದುವೆ ಮುಂತಾದ ಶುಭ ಕಾರ್ಯಗಳ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಜನರು ಪಾಲ್ಗೊಳ್ಳುತ್ತಾರೆ.
ಗರೋಡಿಗೆ ಸಂಬಂಧಪಟ್ಟ ಒಂದು ಎಕರೆ ಸರಕಾರಿ ಜಮೀನು ಇದೆ. ಊರಜನರ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಗರೋಡಿಯ ಜೀರ್ಣೋದ್ದಾರದ ಮೊದಲಿನ ಫೋಟೋ.
ಗರೋಡಿಯು 1986-87ರಲ್ಲಿ ಜೀರ್ಣೋದ್ಧಾರಗೊಂಡಿದ್ದು ನಂತರ 2023ರಲ್ಲಿ ಪುನ: ಜಿರ್ಣೋದ್ಧಾರಗೊಂಡಿದೆ.
ನರಸಿಂಹ ಪರವ ಮತ್ತು ಸಂಘಡಿಗರು ನೃತ್ಯವಿಶಾರದರಾಗಿ, ಸಂತೋಷ ಮಡಿವಾಳ ಹುಯ್ಯಾರು ಮಡಿವಾಳರಾಗಿ, ಬಾಬಣ್ಣ ಹಾಲಾಡಿ ವಾದ್ಯದವರಾಗಿ, ಪುಂಡು ನರ್ಮಣ್ಣು ಡೋಲಿನವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗರೋಡಿ,
ಹುಯ್ಯಾರು, 76 ಹಾಲಾಡಿ,
ಹಿಲಿಯಾಣ ಅಂಚೆ ಬೈಂದೂರು ತಾಲೂಕು
ಉಡುಪಿ ಜಿಲ್ಲೆ – 526227

ಅರ್ಚಕರು:

ಸುಧಾಕರ ಪೂಜಾರಿ – 9663268584

ಮಾಹಿತಿ ನೀಡಿದವರು :

ಸುಧಾಕರ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

16.01.2025

Thobattu Shree Brahma Baidarkala Garodi

ತೊಂಬತ್ತು ಶ್ರೀ ಬ್ರಹ್ಮಬೈದರ್ಕಳ ಗರೋಡಿ.

ಉಡುಪಿಯಿಂದ ಬ್ರಹ್ಮಾವರ – ಬಾರ್ಕೂರು – ಸೈಬ್ರಕಟ್ಟೆಯಿಂದ ಗೋಳಿಯಂಗಡಿ ತಲುಪಿ ಅಲ್ಲಿಂದ ಗೋಳಿಯಂಗಡಿ – ಹೆಂಗವಳ್ಳಿ ರಸ್ತೆಯಲ್ಲಿ ಸುಮಾರು ಆರುವರೆ ಕಿ. ಮೀ. ದೂರದಲ್ಲಿದೆ ಈ ಗರೋಡಿ.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಒಳಗೆ ಬ್ರಹ್ಮಗುಡಿಯಲ್ಲಿ ಗುಂಡದೊಳಗೆ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರಿಗೆ ಪೂಜೆಯಿದೆ.
ಗುಂಡದ ಎಡಬದಿಯಲ್ಲಿ ಕೋಟಿಚೆನ್ನಯ, ಕುಜುಂಬ ಕಾಂಜವ ಹಾಗೂ ಮೂವರು ಮಕ್ಕಳ ಮರದ ಮೂರ್ತಿಯಿದೆ. ಗುಂಡದ ಹಿಂಬದಿಯಲ್ಲಿ ದೇಯಿ ಬೈದೆತಿಯ ಮುಂಡಿಗೆ ಇದೆ.
ಗುಂಡದ ಬಲಬದಿಯಲ್ಲಿ ಬಲ್ಲಾಳರ ಮಂಡಿಗೆ ಇದೆ.
ಬ್ರಹ್ಮಗುಡಿಯ ಹೊರಗೆ ಎಡಭಾಗದಲ್ಲಿ ಪರಿವಾರ ದೈವಗಳ ಮಣೆಮಂಚ, ಮೈಂದಾಳ್ತಿ ಹಾಗೂ ಮಗುವಿನ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಎದುರಿಗೆ ಜೋಗಿಪುರುಷರ ಮರದ ಮೂರ್ತಿ, ಪರಿವಾರ ದೈವಗಳ ಮುಂಡಿಗೆ ಹಾಗೂ ಬ್ರಾಹ್ಮಣರ ಮಂಡಿಗೆಗಳಿವೆ.
ಗರೋಡಿಗೆ ಬಲಭಾಗದಲ್ಲಿರುವ ಗುಡಿಯಲ್ಲಿ ಶಿವರಾಯ ಹಾಗೂ ಜಿಟಕರ ಮರದ ಮೂರ್ತಿ ಇದೆ.
ಪಕ್ಕದಲ್ಲಿರುವ ಇನ್ನೊಂದು ಗುಡಿಯಲ್ಲಿ ಕಲ್ಲು ಕುಟುಗ, ವರ್ತೆ, ಪಂಜುರ್ಲಿ, ಧೂಮಾವತಿ, ಬಂಟ, ಹುಲಿದೇವರು(ಚಾಂಡಿ) ನಂದಿ ದೈವಗಳ ಮರದ ಮೂರ್ತಿಗಳಿವೆ.
ಗರೋಡಿಯ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯನ ಮರದ ಎರಡು ಮುಂಡಿಗೆಗಳಿವೆ. ಗರೋಡಿಯ ಆವರಣದೊಳಗೆ ತುಳಸಿಕಟ್ಟೆ ಹಾಗೂ ಬಲಿ ಕಲ್ಲುಗಳಿವೆ.

ನಾರಾಯಣ ಪೂಜಾರಿ

ಸುಮಾರು 40 ವರ್ಷಗಳಿಂದ ನಾರಾಯಣ ಪೂಜಾರಿ (62 ವರ್ಷ) ಯವರು ಈ ಗರೋಡಿಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮೊದಲು ಅಪ್ಪು ಪೂಜಾರಿ, ನಂದ ಪೂಜಾರಿಯವರು ಈ ಸೇವೆ ಮಾಡಿದ್ದರು.
ನಾರಾಯಣ ಪೂಜಾರಿ (ಅರ್ಚಕರು), ಮಂಜಪ್ಪ ಪೂಜಾರಿ (62 ವರ್ಷ), ವಿಠಲ ಪೂಜಾರಿ (60 ವರ್ಷ) ಇವರು ಇಲ್ಲಿಯ ದರ್ಶನದ ಸ್ಥಳ ಪಾತ್ರಿಗಳು. ಇವರ ಮೊದಲು ಕೊರಗ ಪೂಜಾರಿ, ನಂದ ಪೂಜಾರಿ, ಇವರು ಇಲ್ಲಿ ಸ್ಥಳ ಪಾತ್ರಿಗಳಾಗಿ ಸೇವೆ ಮಾಡಿರುತ್ತಾರೆ.
ಸೀತಾರಾಮ ಶೆಟ್ಟಿಯವರು ಇಲ್ಲಿಯ ಮೊಕ್ತೇಸರರು. ಇವರ ಮೊದಲು ಸಂಜೀವ ಶೆಟ್ಟಿಯವರು ಈ ಗರೋಡಿಯ ಮೊಕ್ತೇಸರರಾಗಿದ್ದರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ಮಂಡಿಗೆ ಪೂಜೆ, ಹಗಲು ಪನಿಯಾರ, ಕದಿರು ಕಟ್ಟುವುದು, ಕೊಡಿ ತಿಂಗಳಲ್ಲಿ ಅಗೆಲು ಸೇವೆ, ದರ್ಶನ , ತುಲಾಭಾರ ಸೇವೆ, ಮಾರ್ಚ ತಿಂಗಳಲ್ಲಿ ಹಾಲು ಹಬ್ಬ, ಏಪ್ರಿಲ್ ತಿಂಗಳ 9ನೇ ತಾರೀಖಿಗೆ ಅಗೆಲು ಸೇವೆ, 10ಕ್ಕೆ ಬೈದರ್ಕಳ ನೇಮ, ಜೋಗಿಪುರುಷ, ಮೈಂದಾಳ್ತಿ, ಶಿವರಾಯ ದೈವಗಳ ಕೋಲ ಸೇವೆ ನಡೆಯುತ್ತದೆ.
ಹೆಂಗವಳ್ಳಿ, ದಬ್ಲಾಡಿ ಹಾಗೂ ಭಾಗಶ: ಶೇಡಿಮನೆ ಗ್ರಾಮಗಳ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದವರು. ಈ ಗ್ರಾಮಗಳ ಜನರು ಗರೋಡಿಯಲ್ಲಿ ತುಲಾಭಾರ ಸೇವೆ, ಮದುವೆ ಮುಂತಾದ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ.
ಗರೋಡಿಗೆ 85ಸೆಂಟ್ಸ ಜಾಗ ಸರಕಾರಿ ಜಾಗವಿದ್ದು ಊರಜನರ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತಿದೆ.
ನರಸಿಂಹ ಪರವ ಚೇರ್ಕಾಡಿ ಮತ್ತು ಸಂಘಡಿಗರು ನೃತ್ಯವಿಶಾರದರಾಗಿ, ಅಪ್ಪು ಮಡಿವಾಳ ತೊಂಬತ್ತು ಇವರು ಮಡಿವಾಳರಾಗಿ, ಸೂರ್ಯ ಶೇರಿಗಾರ ಹೆಬ್ರಿ ಇವರು ವಾದ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ತೊಂಬತ್ತು ಶ್ರೀ ಬ್ರಹ್ಮಬೈದರ್ಕಳ ಗರೋಡಿ,
ತೊಂಬತ್ತು ಹೆಂಗುವಳ್ಳಿ ಗ್ರಾಮ ಮತ್ತು ಅಂಚೆ,ಕುಂದಾಪುರ ತಾಲೂಕು, ಉಡುಪಿ 576212

ಅರ್ಚಕರು:

ನಾರಾಯಣ ಪೂಜಾರಿ – 9008757296

ಮಾಹಿತಿ ನೀಡಿದವರು :

ನಾರಾಯಣ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

16.01.2025

Shree Brahma Baidarkala & Sahaparivaara Daivagala Garodi, Molahalli

ಶ್ರೀ ಬ್ರಹ್ಮಬೈದರ್ಕಳ ಮತ್ತು ಸಹ ಪರಿವಾರ ದೈವಗಳ ಗರೋಡಿ, ಮೊಳಹಳ್ಳಿ

ಉಡುಪಿಯಿಂದ ಕೋಟೇಶ್ವರ ಬಲಕ್ಕೆ ಹಾಲಾಡಿ ರಸ್ತೆಯಲ್ಲಿ ಸಾಗಿ ಹುಣಸೆಮಕ್ಕಿ ಎಂಬಲ್ಲಿ ಎಡಕ್ಕೆ ತಿರುಗಿ ಸುಮಾರು ಒಂದೂವರೆ ಕಿ. ಮೀ.ದೂರ
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದೆ. ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ. ಗರೋಡಿಯು ಷಡಾಧಾರ ಪ್ರತಿಷ್ಠೆಯನ್ನು ಹೊಂದಿದೆ.
ಗರೋಡಿಯ ಒಳಗೆ ಬ್ರಹ್ಮಗುಡಿಯಲ್ಲಿ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆ ಇದೆ.
ಗುಂಡದ ಎಡಭಾಗದಲ್ಲಿ ದೇಯಿ ಬೈದೆತಿ, ಕೋಟಿಚೆನ್ನಯರು ಹಾಗೂ ಇಬ್ಬರು ಮಕ್ಕಳ ಮರದ ಮೂರ್ತಿಯಿದೆ.
ಗುಂಡದ ಬಲಭಾಗದಲ್ಲಿ ಪೈಯಬೈದ ಹಾಗೂ ಜಿಟಿಕರ ಮರದ ಮೂರ್ತಿ ಹಾಗೂ ಬಲ್ಲಾಳರ ಕಲ್ಲಿನ ಕಂಬವಿದೆ.
ಬ್ರಹ್ಮಗುಡಿಯ ಹೊರಗೆ ಬಲಭಾಗದಲ್ಲಿ ಕೋಣ ಬೊಬ್ಬರ್ಯನ ಮರದ ಮೂರ್ತಿಯಿದೆ. ಎಡಬದಿಯಲ್ಲಿ ಮರದ ಗದ್ದಿಗೆಯಲ್ಲಿ ಪಂಜುರ್ಲಿಯ ಮರದ ಮೂರ್ತಿ, ಮಹಾಶೇಷ, ಮೈಂದಾಳ್ತಿ ಮತ್ತು ಮಗು, ಕೋಣದ ಮರದ ಮೂರ್ತಿ ಇದೆ.
ಪಕ್ಕದಲ್ಲಿ ಕಲ್ಲಿನ ಮಾಸ್ತಿಕಂಬ, ಹಳೆಯಮ್ಮ, ಎಳೆಯಮ್ಮ, ಬಾಲಚಿಕ್ಕು, ಬಲಿಚಿಕ್ಕು, ದೈವಗಳ ಮರದ ಮೂರ್ತಿಗಳಿವೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯ ಮರದ ಮೂರ್ತಿ ಇದೆ.
ಗರೋಡಿಯ ಎದುರಿನ ಗುಡಿಯಲ್ಲಿ ಶಿವರಾಯ ಮತ್ತು ಜಿಟಿಕರ ಮರದ ಮೂರ್ತಿ ಇದೆ.
ಗರೋಡಿಯ ಆವರಣದೊಳಗೆ ತುಳಸೀಕಟ್ಟೆ, ಬಲಿಕಲ್ಲು, ಕ್ಷೇತ್ರಪಾಲ, ರಾಹು ಮತ್ತು ಪರಿವಾರ ದೈವಗಳ ಸಾನಿಧ್ಯವಿದೆ.
ಗರೋಡಿಯ ಪರಿಸರದಲ್ಲಿ ನಾಗ ಬನ, ವೀರಭದ್ರ ನಂದಿಕೇಶ್ವರ ಹೈಗುಳಿ ದೇವಸ್ಥಾನಗಳಿವೆ.

ಸುರೇಶ್ ಪೂಜಾರಿ

ಸುರೇಶ್ ಪೂಜಾರಿ (47 ವರ್ಷ) ಇವರು ಗರೋಡಿಯ ಅರ್ಚಕರಾಗಿದ್ದಾರೆ. ಇವರ ಮೊದಲು ಇವರ ತಂದೆ ಬಸವ ಪೂಜಾರಿ ಹಾಗೂ ಅಜ್ಜ ಬಡಿಯ ಪೂಜಾರಿಯವರು ಈ ಸೇವೆ ಮಾಡಿದ್ದರು. ಈ ಗರೋಡಿಯಲ್ಲಿ ದರ್ಶನದ ಸ್ಥಳ ಪಾತ್ರಿಗಳಿಲ್ಲ.
ಎಂ. ಮಹೇಶ್ ಹೆಗ್ಡೆಯವರು ಈ ಗರೋಡಿಯ ಮೊಕ್ತೇಸರರಾಗಿದ್ದು, ಆಡಳಿತ ಸಮಿತಿಯ ಅಧ್ಯಕ್ಷರಾಗಿದ್ದಾರೆ.
ಗರೋಡಿಯಲ್ಲಿ ಮಂಗಳವಾರ ಹಾಗು ಶುಕ್ರವಾರ ಪೂಜೆ ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಕೊಡಿ ತಿಂಗಳಲ್ಲಿ ಹಾಲಹಬ್ಬ (ಕೈದ ಪೂಜೆ), ಎಲ್ಲಾ ದೈವಗಳ ದರ್ಶನ ಸೇವೆ, ತುಲಾಭಾರ ಸೇವೆ, ಮಾರ್ಚ ತಿಂಗಳಲ್ಲಿ ಪ್ರತೀ ಮೂರು ವರ್ಷಕ್ಕೊಮ್ಮೆ ಶಿವರಾಯ ಮಾರಿ ಸೇವೆ ನಡೆಯುತ್ತದೆ. ಶಿವರಾಯನಿಗೆ ಮಂಗಳವಾರ ಮತ್ತು ಆದಿತ್ಯವಾರ ಊರವರು ಕೋಳಿ ಬಲಿ ಕೊಡುವ ಕ್ರಮ ಇದೆ.
ಮೊಳಹಳ್ಳಿ ಗ್ರಾಮದ ಜನರು ಈ ಗರೋಡಿಗೆ ಸೇವೆ ನೀಡುತ್ತಾರೆ. ತುಲಾಭಾರ ಸೇವೆ, ಮದುವೆ ಮುಂತಾದ ಶುಭ ಸಂದರ್ಭಗಳಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಪಾಲ್ಗೊಳ್ಳುತ್ತಾರೆ
ಗರೋಡಿಗೆ ಮೂರು ಮುಡಿ ಜಮೀನು ಉಂಬಳಿ ಇದೆ. ಊರವರ ವಂತಿಗೆ, ಕಾಣಿಕೆಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ. ಗರೋಡಿಯು ಸುಮಾರು ಒಂದೂವರೆ ಎಕ್ರೆ ಸರಕಾರಿ ಜಮೀನಿನಲ್ಲಿದೆ.
ಗರೋಡಿಯು 2023ರ ಫೆಬ್ರವರಿ ತಿಂಗಳಲ್ಲಿ ಜೀರ್ಣೋದ್ದಾರಗೊಂಡಿದೆ
ಶೀನ ದೇವಾಡಿಗ ಮೊಳಹಳ್ಳಿ ಇವರ ಪರಿವಾರಸ್ಥರು ವಾದ್ಯದವರಾಗಿ, ಹುಣಸೇ ಮಕ್ಕಿ ವೀರನ ಮಕ್ಕಳು ಡೋಳಿನವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹಬೈದರ್ಕಳ ಮತ್ತು ಸಹ ಪರಿವಾರ ದೈವಗಳ ಗರೋಡಿ,
ಮೊಳಹಳ್ಳಿ ಅಂಚೆ,
ಕುಂದಾಪುರ ತಾಲೂಕು,
ಉಡುಪಿ – 576222.

ಅರ್ಚಕರು:

ಸುರೇಶ್ ಪೂಜಾರಿ : 9945631027

ಮಾಹಿತಿ ನೀಡಿದವರು :

ಸುರೇಶ್ ಪೂಜಾರಿ,
ಅವಿನಾಶ್ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

16.01.2025

Sri Brahmabantara Kotichennaiah, Panjurli, Haiguli and the Garodi

ಶ್ರೀ ಬ್ರಹ್ಮಬಂಟರ ಕೋಟಿಚೆನ್ನಯ್ಯ, ಪಂಜುರ್ಲಿ, ಹೈಗುಳಿ ಹಾಗೂ ಪರಿವಾರ ದೈವಗಳ ಗರೋಡಿ, ಗುಜ್ಜಾಡಿ

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ ಎನ್ಎಚ್66 ರಲ್ಲಿ ಕುಂದಾಪುರ ದಾಟಿ, ಸೌಪರ್ಣಿಕ ನದಿಸೇತುವೆ ದಾಟಿದ ನಂತರ ಎಡಕ್ಕೆ ತಿರುಗಿ ನಾಯಕವಾಡಿ ರಸ್ತೆಯಲ್ಲಿ ಸುಮಾರು 3.5ಕಿ.ಮೀ. ಸಾಗಿದ ನಂತರ ಪುನ: ಎಡಕ್ಕೆ ತಿರುಗಿ ಸುಮಾರು 850ಮೀ. ಒಳಗೆ ಹೋದರೆ ಈ ಗರೋಡಿ ಸಿಗುವುದು.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ. ಇಲ್ಲಿ ಷಡಾಧಾರ ಪ್ರತಿಷ್ಟೆಯಾಗಿಲ್ಲ.
ಗರೋಡಿಯ ಬ್ರಹ್ಮಗುಡಿಯ ಎದುರು ನಾಗಬ್ರಹ್ಮರ ಪಂಚಲೋಹದ ಮೂರ್ತಿ, ಗುಂಡದ ಒಳಗೊಂದು ಬೆಳ್ಳಿ ಮುಚ್ಚಿದ ಮರದ ನಾಗಬ್ರಹ್ಮರ ಮೂರ್ತಿ ಇದೆ.
ಗುಂಡದ ಎಡಭಾಗದಲ್ಲಿ ದೇಯಿಬೈದೆತಿ, ಕೋಟಿಚೆನ್ನಯರು ಹಾಗೂ ಇಬ್ಬರು ಮಕ್ಕಳ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ಕುಜುಂಬ ಕಾಂಜವ ಹಾಗೂ ಮಗುವಿನ ಮರದ ಮೂರ್ತಿ ಇದೆ.
ಬ್ರಹ್ಮಗುಡಿಯ ಹೊರಗಡೆ ಬಲಬದಿಯಲ್ಲಿ ಮೂಡೂರು ಹೈಗುಳಿ, ನಂದಿ (ಎರಡು), ಪಂಜುರ್ಲಿ ದೈವಗಳ ಗದ್ದಿಗೆ ಹಾಗೂ ಮರದ ಮೂರ್ತಿಗಳಿವೆ. ಎಡಭಾಗದಲ್ಲಿ ಹಣಾರ ಹೈಗುಳಿ, ದೈವದ ಗದ್ದಿಗೆ ಹಾಗೂ ಪಂಚಲೋಹದ ಮೂರ್ತಿ ಇದೆ.
ಪಕ್ಕದಲ್ಲಿ ಮೈಂದಾಳ್ತಿ, ಬಾಲಯ್ಯ, ಬೊಬ್ಬರ್ಯ, ದೊಡ್ಡಕಾಲಮ್ಮ, ಮೂಡೂರ ಅಮ್ಮ, ಬಚ್ಚಲಮ್ಮ ದೈವಗಳ ಮರದ ಮೂರ್ತಿ ಹಾಗೂ ಕುಂ಼ಜ್ಞಾಡಿ ಹೈಗುಳಿ ದೈವದ ಮಣೆಮಂಚವಿದೆ.
ಬ್ರಹ್ಮಗುಡಿಯ ಎದರು ಸ್ಥಳದ ಮಾಸ್ತಿ, ಜೋಗಿಪುರುಷ, ಅಣ್ಣುಣ ಹೈಗುಳಿ, ಮುರಸಂಡಿ, ಸಂಕ್ರಣ ಹೈಗುಳಿ, ಹಿಂಜಾಣ ಚಿಕ್ಕು, ಮಾಸ್ತಿಕಟ್ಟೆ ಅಮ್ಮ, ಮರ್ಲುಚಿಕ್ಕು ಹಾಗೂ ಪಾತ್ರಿಗಳ ಮರದ ಮೂರ್ತಿಗಳಿವೆ.
ಗರೋಡಿಯ ಹೊರಗೆ ಬಾಗಿಲ ಪಕ್ಕದಲ್ಲಿ ಬಾಗಿಲು ಬೊಬ್ಬರ್ಯ ಮರದ ಮೂರ್ತಿಯಿದೆ.
ಗರೋಡಿಯ ಹೊರಾಂಗಣದಲ್ಲಿ ಹೊರಸುತ್ತಿನ ಹೈಗುಳಿ, ರಾಹು ಮತ್ತು ಗ್ರಾಮಕಲ್ಲು, ಕ್ಷೇತ್ರಪಾಲ, ಬಲಿಕಲ್ಲುಗಳಿವೆ. ಗರೋಡಿಯ ಪರಿಸರದಲ್ಲಿ ಸ್ವಾಮಿ ದೈವದ ಸಾನಿಧ್ಯ ಹಾಗೂ ನಾಗಬನಗಳಿವೆ.
ಸುಬ್ಬ ಪೂಜಾರಿ(65 ವರ್ಷ) ಹಾಗೂ ರಾಮ ಪೂಜಾರಿಯವರು ಗರೋಡಿಯ ಅರ್ಚಕರಾಗಿದ್ದಾರೆ. ಇವರ ಮೊದಲು ಬುಡ್ಡು ಪೂಜಾರಿ, ಭದ್ರ ಪೂಜಾರಿ ಮೊದಲಾದ ಹಿರಿಯರು ಈ ಸೇವೆ ಮಾಡಿದ್ದರು.
ರಾಘವೇಂದ್ರ ಪೂಜಾರಿ (40 ವರ್ಷ) ಇವರು ಇಲ್ಲಿಯ ದರ್ಶನದ ಸ್ಥಳ ಪಾತ್ರಿಯಾಗಿದ್ದಾರೆ. ಇವರ ಮೊದಲು ಚೆನ್ನ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಯಾಗಿದ್ದರು.
ರೋಹಿದಾಸ್ ನಾಯಕ್ ಇವರು ಗರೋಡಿಯ ಮೊಕ್ತೇಸರರಾಗಿ, ಪಟೇಲರ ಮನೆ ಪ್ರದೀಪ್ ಶೆಟ್ಟಿಯವರು ಮುಕ್ಕಾಲಿಯಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಶುಕ್ರ ಪೂಜಾರಿ

ಗರೋಡಿಯ ಉಸ್ತುವಾರಿಗೆ ಆಡಳಿತ ಸಮಿತಿಯಿದೆ. ಶಿವರಾಮ ಪೂಜಾರಿ ಜಡ್ಡಿನಕೋಡ್ಲು ಗೌರವಾಧ್ಯಕ್ಷರಾಗಿ, ಶಿವನಾಯ್ಕ ಇವರು ಅಧ್ಯಕ್ಷರಾಗಿ, ಶುಕ್ರ ಪೂಜಾರಿಯವರು ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗರೋಡಿಯಲ್ಲಿ ನಿತ್ಯಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಜನವರಿ 24ಕ್ಕೆ ಅಗೆಲು ಸೇವೆ ದರ್ಶನ ಸೇವೆ, ಹಾಲುಹಬ್ಬ ನಡೆಯುತ್ತದೆ.
27-04-2025ಕ್ಕೆ ಪಂಜುರ್ಲಿ ಹಾಗೂ ಹೈಗುಳಿ ದೈವಗಳಿಗೆ ಮೊದಲ ಬಾರಿಗೆ ಹರಕೆಯ ಕೋಲ ಸೇವೆ ನಡೆಯಲಿದೆ.
ಗುಜ್ಜಾಡಿ, ಮಂಕಿ, ಬೆಣ್ಗೇರಿ, ಕೊಡಪಾಡಿ, ಗಂಗೊಳ್ಳಿ, ಊರುಗಳ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದ್ದು, ಗರೋಡಿಯಲ್ಲಿ ತುಲಾಭಾರ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರಜನರ ಹರಕೆ, ಕಾಣಿಕೆ, ದೇಣಿಗೆ, ವರಡ ವಂತಿಗೆಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಗರೋಡಿಗೆ 11 ಸೆಂಟ್ಸ ಜಾಗವಿದೆ. ಗರೋಡಿಯು 24-01-2014ರಲ್ಲಿ ಜೀರ್ಣೋದ್ಧಾರವಾಗಿದೆ,
ಮಾಲಿಂಗ ದೇವಾಡಿಗ ಗಂಗೊಳ್ಳಿ ಇವರು ಈ ಗರೋಡಿಯ ವಾದ್ಯದವರಾಗಿ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬಂಟರ ಕೋಟಿಚೆನ್ನಯ್ಯ,
ಪಂಜುರ್ಲಿ, ಹೈಗುಳಿ ಹಾಗೂ ಪರಿವಾರ ದೈವಗಳ ಗರೋಡಿ,
ಗುಜ್ಜಾಡಿ,
ಕುಂದಾಪುರ ತಾಲೂಕು,
ಉಡುಪಿ – 576247.

ಗರೋಡಿಯ ಆಡಳಿತ ಸಮಿತಿ:

ಶುಕ್ರ ಪೂಜಾರಿ
ಕಾರ್ಯದರ್ಶಿ – 9341919878.

ಮಾಹಿತಿ ನೀಡಿದವರು :

ಶುಕ್ರ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

27.01.2025

Shree Brahma Baidarkala Garodi, Ulloor 74

ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಉಳ್ಳೂರು 74

ಶ್ರೀ ಬ್ರಹ್ಮಬೈಕರ್ದಳ ಗರೋಡಿ ಉಳ್ಳೂರು 74, ಈ ಗರೋಡಿಯು ಉಡುಪಿಯಿಂದ – ಬ್ರಹ್ಮಾವರ – ಬಾರ್ಕೂರು – ಎಡ್ತಾಡಿ – ಸೈಬ್ರಕಟ್ಟೆ – ಬಿದ್ಕಲ್ ಕಟ್ಟೆ – ಹಾಲಾಡಿ ಬಸ್ಸು ನಿಲ್ದಾಣದ ಹತ್ತಿರ ಕುಂದಾಪುರ – ಆಗುಂಬೆ ರಾಜ್ಯ ಹೆದ್ದಾರಿಯಲ್ಲಿ ಸುಮಾರು ನಾಲ್ಕು ಕಿ. ಮೀ. ಸಾಗಿದ ನಂತರ ಬಲಕ್ಕೆ ತಿರುಗಿ 6 ಕಿ. ಮೀ. ದೂರದಲ್ಲಿದೆ.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಒಳಗೆ ಬ್ರಹ್ಮಗುಡಿಯಲ್ಲಿ ಗುಂಡದ ಒಳಗೆ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿ ದೇವರ ಆರಾಧನೆಯಿದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರು, ಬಲ್ಲಾಳರು ಹಾಗೂ ಮೂವರು ಮಕ್ಕಳ ಮರದ ಮೂರ್ತಿಯಿದೆ.
ಗುಂಡದ ಬಲಭಾಗದಲ್ಲಿ ದೇಯಿಬೈದೆತಿ ಹಾಗೂ ಪರಿವಾರ ದೈವಗಳ ನಾಲ್ಕು ಮುಂಡಿಗೆಯಿದೆ.
ಬ್ರಹ್ಮಗುಡಿಯ ಎಡಭಾಗದಲ್ಲಿ ಪಂಜುರ್ಲಿ ದೈವದ ಮುಂಡಿಗೆ, ಮೈಂದಾಳ್ತಿ ಹಾಗೂ ಮಗುವಿನ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಎದುರಿಗೆ ಜೋಗಿಪುರುಷರ ಮರದ ಮೂರ್ತಿ ಹಾಗೂ ಮುಂಡಿಗೆಯಿದೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯ ಹಾಗೂ ಮೋಟುಕಾಲು ಬೊಬ್ಬರ್ಯ ದೈವಗಳ ಮಂಡಿಗೆಯಿದೆ.
ಗರೋಡಿಯ ಬಾಗಿಲ ಹತ್ತಿರ ಜಗುಲಿಯಲ್ಲಿ ಹೊರಸುತ್ತಿನ ಹೈಗುಳಿ ಸಾನಿಧ್ಯವಿದೆ. ಗರೋಡಿಯ ಪರಿಸರದಲ್ಲಿ ಸ್ವಾಮಿ ದೈವದ ಸಾನಿಧ್ಯ ಹಾಗು ನಾಗಬನಗಳಿವೆ.
ಗರೋಡಿಯ ಎದುರಿನ ಶ್ರೀ ಮಾರಿ ಶಿವರಾಯ ಗುಡಿಯಲ್ಲಿ ಶಿವರಾಯ ಹಾಗೂ ಹುಲಿಚಾಮುಂಡಿ ದೈವಗಳ ಮರದ ಮೂರ್ತಿಯಿದೆ. ಗುಡಿಯ ಬಾಗಿಲ ಎರಡು ಬದಿಯಲ್ಲಿ ಮಂತ್ರಿಗಣ ಹಾಗೂ ಕ್ಷೇತ್ರಪಾಲ ದೈವಗಳ ಮುಂಡಿಗೆಗಳಿವೆ.
ಗರೋಡಿಯ ಎದುರಿಗೆ ಮಾರಿ ಶಿವರಾಯ ದೇವಸ್ಥಾನವಿದೆ.
ಗರೋಡಿಯ ಆವರಣದಲ್ಲಿ ತುಳಸೀಕಟ್ಟೆ, ಬಲಿ ಕಲ್ಲುಗಳಿವೆ. ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ನಾಗ ಬನವಿದೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಹೊರಸುತ್ತಿನ ಹೈಗುಳಿ, ಹೊರಾಂಗಣದಲ್ಲಿ ತುಳಸಿ ಕಟ್ಟೆಗಳಿವೆ.

ಶ್ರೀಕಾಂತ ಪೂಜಾರಿ

ಶ್ರೀಕಾಂತ ಪೂಜಾರಿ(35 ವರ್ಷ) ಇವರು ಗರೋಡಿಯ ಅರ್ಚಕರಾಗಿದ್ದಾರೆ. ಇವರ ಮೊದಲು ಮುತ್ತ ಪೂಜಾರಿ, ಕೋಟಿ ಪೂಜಾರಿಯವರು ಇಲ್ಲಿಯ ಅರ್ಚಕರಾಗಿ ಸೇವೆ ಮಾಡಿದ್ದರು.

ಕೃಷ್ಣ ಪೂಜಾರಿ

ಕೃಷ್ಣ ಪೂಜಾರಿ (53 ವರ್ಷ), ಪ್ರಕಾಶ ಪೂಜಾರಿ, ಉಮೇಶ ಪೂಜಾರಿ ಇವರು ಇಲ್ಲಿಯ ದರ್ಶನ ಸ್ಥಳ ಪಾತ್ರಿಗಳು. ಇವರ ಮೊದಲು ರಘು ಪೂಜಾರಿ, ನಾರಾಯಣ ಪೂಜಾರಿ, ರಾಜು ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಸಂಜೀವ ಶೆಟ್ಟಿಯವರು ಗರೋಡಿಯ ಮೊಕ್ತೇಸರರು. ಸುಧಾಕರ ಶೆಟ್ಟಿಯವರು ಮುಕ್ಕಾಲಿ ಶೆಟ್ಟಿಯಾಗಿದ್ದಾರೆ. ನಾರಾಯಣ ಹೆಬ್ಬಾರರು, ಸಂಜೀವ ಶೆಟ್ಟಿಯವರ ಮೊದಲು ಈ ಗರೋಡಿಯ ಮೊಕ್ತೇಸರರಾಗಿದ್ದರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜದ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹಗಲು ಪನಿವಾರ, ಕದಿರು ಕಟ್ಟುವುದು, ಏಪ್ರಿಲ್ ತಿಂಗಳಲ್ಲಿ ಅಗೆಲು ಸೇವೆ, ದರ್ಶನ, ತುಲಾಭಾರ ಸೇವೆ, ಮರುದಿನ ಬೈದರ್ಕಳ ನೇಮ, ಜೋಗಿಪುರುಷ, ಮೈಂದಾಳ್ತಿ ಕೋಲ ನಡೆದು ಮರುದಿನ ಶಿವರಾಯ ಕೋಲ ನಡೆಯುತ್ತದೆ.
ಉಳ್ಳೂರು, ಸಿದ್ದಾಪುರ, ಶಂಕರನಾರಾಯಣ, ಹೊಸಂಗಡಿ ಗ್ರಾಮಗಳು ಈ ಕೂಡು ಕಟ್ಟಿಗೆ ಸೇರಿವೆ. ಕೂಡುಕಟ್ಟಿನ ಜನರು ಗರೋಡಿಯಲ್ಲಿ ತುಲಾಭಾರ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ. ಗರೋಡಿಯು ಐವತ್ತು ಸೆಂಟ್ಸ ಸರ್ಕಾರಿ ಜಾಗದಲ್ಲಿದೆ. ಭಕ್ತಾದಿಗಳು ನೀಡುವ ಕಾಣಿಕೆ, ಬತ್ತ, ಅಡಿಕೆ, ಇವುಗಳಿಂದ ಬರುವ ಆದಾಯದಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚವನ್ನು ಭರಿಸಲಾಗುತ್ತದೆ.
ಶೇಖರ ಪರವ ಚೇರ್ಕಾಡಿ ಮತ್ತು ಸಂಘಡಿಗರು ಈ ಗರೋಡಿಯ ನೃತ್ಯವಿಶಾರದರಾಗಿ, ಭುಜಂಗ ಮಡಿವಾಳ ಉಳ್ಳೂರು ಇವರು ಮಡಿವಾಳರಾಗಿ, ಬಸವ ಉಳ್ಳೂರು ಇವರು ಡೋಲಿನವರಾಗಿ ಸೇವೆ ಮಾಡುತ್ತಿದ್ದಾರೆ.
ಗರೋಡಿಗೆ ಸಂಬಂಧಪಟ್ಟು ಗರೋಡಿಯ ಪರಿಸರದಲ್ಲಿ ಉಳ್ಳೂರು ಬಿಲ್ಲವ ಸಂಘ ಚಟುವಟಿಕೆಯಲ್ಲಿದೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಉಳ್ಳೂರು 74,
ಅಂಚೆ ಉಳ್ಳೂರು 74,
ಕುಂದಾಪುರ ತಾಲೂಕು,
ಉಡುಪಿ ಜಿಲ್ಲೆ – 576224.

ಅರ್ಚಕರು:

ಶ್ರೀಕಾಂತ ಪೂಜಾರಿ – 9741150068

ಮಾಹಿತಿ ನೀಡಿದವರು :

ಕೃಷ್ಣ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

16.01.2025