Baidashree

Thobattu Shree Brahma Baidarkala Garodi

ತೊಂಬತ್ತು ಶ್ರೀ ಬ್ರಹ್ಮಬೈದರ್ಕಳ ಗರೋಡಿ.

ಉಡುಪಿಯಿಂದ ಬ್ರಹ್ಮಾವರ – ಬಾರ್ಕೂರು – ಸೈಬ್ರಕಟ್ಟೆಯಿಂದ ಗೋಳಿಯಂಗಡಿ ತಲುಪಿ ಅಲ್ಲಿಂದ ಗೋಳಿಯಂಗಡಿ – ಹೆಂಗವಳ್ಳಿ ರಸ್ತೆಯಲ್ಲಿ ಸುಮಾರು ಆರುವರೆ ಕಿ. ಮೀ. ದೂರದಲ್ಲಿದೆ ಈ ಗರೋಡಿ.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಒಳಗೆ ಬ್ರಹ್ಮಗುಡಿಯಲ್ಲಿ ಗುಂಡದೊಳಗೆ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರಿಗೆ ಪೂಜೆಯಿದೆ.
ಗುಂಡದ ಎಡಬದಿಯಲ್ಲಿ ಕೋಟಿಚೆನ್ನಯ, ಕುಜುಂಬ ಕಾಂಜವ ಹಾಗೂ ಮೂವರು ಮಕ್ಕಳ ಮರದ ಮೂರ್ತಿಯಿದೆ. ಗುಂಡದ ಹಿಂಬದಿಯಲ್ಲಿ ದೇಯಿ ಬೈದೆತಿಯ ಮುಂಡಿಗೆ ಇದೆ.
ಗುಂಡದ ಬಲಬದಿಯಲ್ಲಿ ಬಲ್ಲಾಳರ ಮಂಡಿಗೆ ಇದೆ.
ಬ್ರಹ್ಮಗುಡಿಯ ಹೊರಗೆ ಎಡಭಾಗದಲ್ಲಿ ಪರಿವಾರ ದೈವಗಳ ಮಣೆಮಂಚ, ಮೈಂದಾಳ್ತಿ ಹಾಗೂ ಮಗುವಿನ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಎದುರಿಗೆ ಜೋಗಿಪುರುಷರ ಮರದ ಮೂರ್ತಿ, ಪರಿವಾರ ದೈವಗಳ ಮುಂಡಿಗೆ ಹಾಗೂ ಬ್ರಾಹ್ಮಣರ ಮಂಡಿಗೆಗಳಿವೆ.
ಗರೋಡಿಗೆ ಬಲಭಾಗದಲ್ಲಿರುವ ಗುಡಿಯಲ್ಲಿ ಶಿವರಾಯ ಹಾಗೂ ಜಿಟಕರ ಮರದ ಮೂರ್ತಿ ಇದೆ.
ಪಕ್ಕದಲ್ಲಿರುವ ಇನ್ನೊಂದು ಗುಡಿಯಲ್ಲಿ ಕಲ್ಲು ಕುಟುಗ, ವರ್ತೆ, ಪಂಜುರ್ಲಿ, ಧೂಮಾವತಿ, ಬಂಟ, ಹುಲಿದೇವರು(ಚಾಂಡಿ) ನಂದಿ ದೈವಗಳ ಮರದ ಮೂರ್ತಿಗಳಿವೆ.
ಗರೋಡಿಯ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯನ ಮರದ ಎರಡು ಮುಂಡಿಗೆಗಳಿವೆ. ಗರೋಡಿಯ ಆವರಣದೊಳಗೆ ತುಳಸಿಕಟ್ಟೆ ಹಾಗೂ ಬಲಿ ಕಲ್ಲುಗಳಿವೆ.

ನಾರಾಯಣ ಪೂಜಾರಿ

ಸುಮಾರು 40 ವರ್ಷಗಳಿಂದ ನಾರಾಯಣ ಪೂಜಾರಿ (62 ವರ್ಷ) ಯವರು ಈ ಗರೋಡಿಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮೊದಲು ಅಪ್ಪು ಪೂಜಾರಿ, ನಂದ ಪೂಜಾರಿಯವರು ಈ ಸೇವೆ ಮಾಡಿದ್ದರು.
ನಾರಾಯಣ ಪೂಜಾರಿ (ಅರ್ಚಕರು), ಮಂಜಪ್ಪ ಪೂಜಾರಿ (62 ವರ್ಷ), ವಿಠಲ ಪೂಜಾರಿ (60 ವರ್ಷ) ಇವರು ಇಲ್ಲಿಯ ದರ್ಶನದ ಸ್ಥಳ ಪಾತ್ರಿಗಳು. ಇವರ ಮೊದಲು ಕೊರಗ ಪೂಜಾರಿ, ನಂದ ಪೂಜಾರಿ, ಇವರು ಇಲ್ಲಿ ಸ್ಥಳ ಪಾತ್ರಿಗಳಾಗಿ ಸೇವೆ ಮಾಡಿರುತ್ತಾರೆ.
ಸೀತಾರಾಮ ಶೆಟ್ಟಿಯವರು ಇಲ್ಲಿಯ ಮೊಕ್ತೇಸರರು. ಇವರ ಮೊದಲು ಸಂಜೀವ ಶೆಟ್ಟಿಯವರು ಈ ಗರೋಡಿಯ ಮೊಕ್ತೇಸರರಾಗಿದ್ದರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ಮಂಡಿಗೆ ಪೂಜೆ, ಹಗಲು ಪನಿಯಾರ, ಕದಿರು ಕಟ್ಟುವುದು, ಕೊಡಿ ತಿಂಗಳಲ್ಲಿ ಅಗೆಲು ಸೇವೆ, ದರ್ಶನ , ತುಲಾಭಾರ ಸೇವೆ, ಮಾರ್ಚ ತಿಂಗಳಲ್ಲಿ ಹಾಲು ಹಬ್ಬ, ಏಪ್ರಿಲ್ ತಿಂಗಳ 9ನೇ ತಾರೀಖಿಗೆ ಅಗೆಲು ಸೇವೆ, 10ಕ್ಕೆ ಬೈದರ್ಕಳ ನೇಮ, ಜೋಗಿಪುರುಷ, ಮೈಂದಾಳ್ತಿ, ಶಿವರಾಯ ದೈವಗಳ ಕೋಲ ಸೇವೆ ನಡೆಯುತ್ತದೆ.
ಹೆಂಗವಳ್ಳಿ, ದಬ್ಲಾಡಿ ಹಾಗೂ ಭಾಗಶ: ಶೇಡಿಮನೆ ಗ್ರಾಮಗಳ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದವರು. ಈ ಗ್ರಾಮಗಳ ಜನರು ಗರೋಡಿಯಲ್ಲಿ ತುಲಾಭಾರ ಸೇವೆ, ಮದುವೆ ಮುಂತಾದ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ.
ಗರೋಡಿಗೆ 85ಸೆಂಟ್ಸ ಜಾಗ ಸರಕಾರಿ ಜಾಗವಿದ್ದು ಊರಜನರ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತಿದೆ.
ನರಸಿಂಹ ಪರವ ಚೇರ್ಕಾಡಿ ಮತ್ತು ಸಂಘಡಿಗರು ನೃತ್ಯವಿಶಾರದರಾಗಿ, ಅಪ್ಪು ಮಡಿವಾಳ ತೊಂಬತ್ತು ಇವರು ಮಡಿವಾಳರಾಗಿ, ಸೂರ್ಯ ಶೇರಿಗಾರ ಹೆಬ್ರಿ ಇವರು ವಾದ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ತೊಂಬತ್ತು ಶ್ರೀ ಬ್ರಹ್ಮಬೈದರ್ಕಳ ಗರೋಡಿ,
ತೊಂಬತ್ತು ಹೆಂಗುವಳ್ಳಿ ಗ್ರಾಮ ಮತ್ತು ಅಂಚೆ,ಕುಂದಾಪುರ ತಾಲೂಕು, ಉಡುಪಿ 576212

ಅರ್ಚಕರು:

ನಾರಾಯಣ ಪೂಜಾರಿ – 9008757296

ಮಾಹಿತಿ ನೀಡಿದವರು :

ನಾರಾಯಣ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

16.01.2025

Shree Brahma Baidarkala & Sahaparivaara Daivagala Garodi, Molahalli

ಶ್ರೀ ಬ್ರಹ್ಮಬೈದರ್ಕಳ ಮತ್ತು ಸಹ ಪರಿವಾರ ದೈವಗಳ ಗರೋಡಿ, ಮೊಳಹಳ್ಳಿ

ಉಡುಪಿಯಿಂದ ಕೋಟೇಶ್ವರ ಬಲಕ್ಕೆ ಹಾಲಾಡಿ ರಸ್ತೆಯಲ್ಲಿ ಸಾಗಿ ಹುಣಸೆಮಕ್ಕಿ ಎಂಬಲ್ಲಿ ಎಡಕ್ಕೆ ತಿರುಗಿ ಸುಮಾರು ಒಂದೂವರೆ ಕಿ. ಮೀ.ದೂರ
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದೆ. ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ. ಗರೋಡಿಯು ಷಡಾಧಾರ ಪ್ರತಿಷ್ಠೆಯನ್ನು ಹೊಂದಿದೆ.
ಗರೋಡಿಯ ಒಳಗೆ ಬ್ರಹ್ಮಗುಡಿಯಲ್ಲಿ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆ ಇದೆ.
ಗುಂಡದ ಎಡಭಾಗದಲ್ಲಿ ದೇಯಿ ಬೈದೆತಿ, ಕೋಟಿಚೆನ್ನಯರು ಹಾಗೂ ಇಬ್ಬರು ಮಕ್ಕಳ ಮರದ ಮೂರ್ತಿಯಿದೆ.
ಗುಂಡದ ಬಲಭಾಗದಲ್ಲಿ ಪೈಯಬೈದ ಹಾಗೂ ಜಿಟಿಕರ ಮರದ ಮೂರ್ತಿ ಹಾಗೂ ಬಲ್ಲಾಳರ ಕಲ್ಲಿನ ಕಂಬವಿದೆ.
ಬ್ರಹ್ಮಗುಡಿಯ ಹೊರಗೆ ಬಲಭಾಗದಲ್ಲಿ ಕೋಣ ಬೊಬ್ಬರ್ಯನ ಮರದ ಮೂರ್ತಿಯಿದೆ. ಎಡಬದಿಯಲ್ಲಿ ಮರದ ಗದ್ದಿಗೆಯಲ್ಲಿ ಪಂಜುರ್ಲಿಯ ಮರದ ಮೂರ್ತಿ, ಮಹಾಶೇಷ, ಮೈಂದಾಳ್ತಿ ಮತ್ತು ಮಗು, ಕೋಣದ ಮರದ ಮೂರ್ತಿ ಇದೆ.
ಪಕ್ಕದಲ್ಲಿ ಕಲ್ಲಿನ ಮಾಸ್ತಿಕಂಬ, ಹಳೆಯಮ್ಮ, ಎಳೆಯಮ್ಮ, ಬಾಲಚಿಕ್ಕು, ಬಲಿಚಿಕ್ಕು, ದೈವಗಳ ಮರದ ಮೂರ್ತಿಗಳಿವೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯ ಮರದ ಮೂರ್ತಿ ಇದೆ.
ಗರೋಡಿಯ ಎದುರಿನ ಗುಡಿಯಲ್ಲಿ ಶಿವರಾಯ ಮತ್ತು ಜಿಟಿಕರ ಮರದ ಮೂರ್ತಿ ಇದೆ.
ಗರೋಡಿಯ ಆವರಣದೊಳಗೆ ತುಳಸೀಕಟ್ಟೆ, ಬಲಿಕಲ್ಲು, ಕ್ಷೇತ್ರಪಾಲ, ರಾಹು ಮತ್ತು ಪರಿವಾರ ದೈವಗಳ ಸಾನಿಧ್ಯವಿದೆ.
ಗರೋಡಿಯ ಪರಿಸರದಲ್ಲಿ ನಾಗ ಬನ, ವೀರಭದ್ರ ನಂದಿಕೇಶ್ವರ ಹೈಗುಳಿ ದೇವಸ್ಥಾನಗಳಿವೆ.

ಸುರೇಶ್ ಪೂಜಾರಿ

ಸುರೇಶ್ ಪೂಜಾರಿ (47 ವರ್ಷ) ಇವರು ಗರೋಡಿಯ ಅರ್ಚಕರಾಗಿದ್ದಾರೆ. ಇವರ ಮೊದಲು ಇವರ ತಂದೆ ಬಸವ ಪೂಜಾರಿ ಹಾಗೂ ಅಜ್ಜ ಬಡಿಯ ಪೂಜಾರಿಯವರು ಈ ಸೇವೆ ಮಾಡಿದ್ದರು. ಈ ಗರೋಡಿಯಲ್ಲಿ ದರ್ಶನದ ಸ್ಥಳ ಪಾತ್ರಿಗಳಿಲ್ಲ.
ಎಂ. ಮಹೇಶ್ ಹೆಗ್ಡೆಯವರು ಈ ಗರೋಡಿಯ ಮೊಕ್ತೇಸರರಾಗಿದ್ದು, ಆಡಳಿತ ಸಮಿತಿಯ ಅಧ್ಯಕ್ಷರಾಗಿದ್ದಾರೆ.
ಗರೋಡಿಯಲ್ಲಿ ಮಂಗಳವಾರ ಹಾಗು ಶುಕ್ರವಾರ ಪೂಜೆ ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಕೊಡಿ ತಿಂಗಳಲ್ಲಿ ಹಾಲಹಬ್ಬ (ಕೈದ ಪೂಜೆ), ಎಲ್ಲಾ ದೈವಗಳ ದರ್ಶನ ಸೇವೆ, ತುಲಾಭಾರ ಸೇವೆ, ಮಾರ್ಚ ತಿಂಗಳಲ್ಲಿ ಪ್ರತೀ ಮೂರು ವರ್ಷಕ್ಕೊಮ್ಮೆ ಶಿವರಾಯ ಮಾರಿ ಸೇವೆ ನಡೆಯುತ್ತದೆ. ಶಿವರಾಯನಿಗೆ ಮಂಗಳವಾರ ಮತ್ತು ಆದಿತ್ಯವಾರ ಊರವರು ಕೋಳಿ ಬಲಿ ಕೊಡುವ ಕ್ರಮ ಇದೆ.
ಮೊಳಹಳ್ಳಿ ಗ್ರಾಮದ ಜನರು ಈ ಗರೋಡಿಗೆ ಸೇವೆ ನೀಡುತ್ತಾರೆ. ತುಲಾಭಾರ ಸೇವೆ, ಮದುವೆ ಮುಂತಾದ ಶುಭ ಸಂದರ್ಭಗಳಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಪಾಲ್ಗೊಳ್ಳುತ್ತಾರೆ
ಗರೋಡಿಗೆ ಮೂರು ಮುಡಿ ಜಮೀನು ಉಂಬಳಿ ಇದೆ. ಊರವರ ವಂತಿಗೆ, ಕಾಣಿಕೆಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ. ಗರೋಡಿಯು ಸುಮಾರು ಒಂದೂವರೆ ಎಕ್ರೆ ಸರಕಾರಿ ಜಮೀನಿನಲ್ಲಿದೆ.
ಗರೋಡಿಯು 2023ರ ಫೆಬ್ರವರಿ ತಿಂಗಳಲ್ಲಿ ಜೀರ್ಣೋದ್ದಾರಗೊಂಡಿದೆ
ಶೀನ ದೇವಾಡಿಗ ಮೊಳಹಳ್ಳಿ ಇವರ ಪರಿವಾರಸ್ಥರು ವಾದ್ಯದವರಾಗಿ, ಹುಣಸೇ ಮಕ್ಕಿ ವೀರನ ಮಕ್ಕಳು ಡೋಳಿನವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹಬೈದರ್ಕಳ ಮತ್ತು ಸಹ ಪರಿವಾರ ದೈವಗಳ ಗರೋಡಿ,
ಮೊಳಹಳ್ಳಿ ಅಂಚೆ,
ಕುಂದಾಪುರ ತಾಲೂಕು,
ಉಡುಪಿ – 576222.

ಅರ್ಚಕರು:

ಸುರೇಶ್ ಪೂಜಾರಿ : 9945631027

ಮಾಹಿತಿ ನೀಡಿದವರು :

ಸುರೇಶ್ ಪೂಜಾರಿ,
ಅವಿನಾಶ್ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

16.01.2025

Sri Brahmabantara Kotichennaiah, Panjurli, Haiguli and the Garodi

ಶ್ರೀ ಬ್ರಹ್ಮಬಂಟರ ಕೋಟಿಚೆನ್ನಯ್ಯ, ಪಂಜುರ್ಲಿ, ಹೈಗುಳಿ ಹಾಗೂ ಪರಿವಾರ ದೈವಗಳ ಗರೋಡಿ, ಗುಜ್ಜಾಡಿ

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ ಎನ್ಎಚ್66 ರಲ್ಲಿ ಕುಂದಾಪುರ ದಾಟಿ, ಸೌಪರ್ಣಿಕ ನದಿಸೇತುವೆ ದಾಟಿದ ನಂತರ ಎಡಕ್ಕೆ ತಿರುಗಿ ನಾಯಕವಾಡಿ ರಸ್ತೆಯಲ್ಲಿ ಸುಮಾರು 3.5ಕಿ.ಮೀ. ಸಾಗಿದ ನಂತರ ಪುನ: ಎಡಕ್ಕೆ ತಿರುಗಿ ಸುಮಾರು 850ಮೀ. ಒಳಗೆ ಹೋದರೆ ಈ ಗರೋಡಿ ಸಿಗುವುದು.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ. ಇಲ್ಲಿ ಷಡಾಧಾರ ಪ್ರತಿಷ್ಟೆಯಾಗಿಲ್ಲ.
ಗರೋಡಿಯ ಬ್ರಹ್ಮಗುಡಿಯ ಎದುರು ನಾಗಬ್ರಹ್ಮರ ಪಂಚಲೋಹದ ಮೂರ್ತಿ, ಗುಂಡದ ಒಳಗೊಂದು ಬೆಳ್ಳಿ ಮುಚ್ಚಿದ ಮರದ ನಾಗಬ್ರಹ್ಮರ ಮೂರ್ತಿ ಇದೆ.
ಗುಂಡದ ಎಡಭಾಗದಲ್ಲಿ ದೇಯಿಬೈದೆತಿ, ಕೋಟಿಚೆನ್ನಯರು ಹಾಗೂ ಇಬ್ಬರು ಮಕ್ಕಳ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ಕುಜುಂಬ ಕಾಂಜವ ಹಾಗೂ ಮಗುವಿನ ಮರದ ಮೂರ್ತಿ ಇದೆ.
ಬ್ರಹ್ಮಗುಡಿಯ ಹೊರಗಡೆ ಬಲಬದಿಯಲ್ಲಿ ಮೂಡೂರು ಹೈಗುಳಿ, ನಂದಿ (ಎರಡು), ಪಂಜುರ್ಲಿ ದೈವಗಳ ಗದ್ದಿಗೆ ಹಾಗೂ ಮರದ ಮೂರ್ತಿಗಳಿವೆ. ಎಡಭಾಗದಲ್ಲಿ ಹಣಾರ ಹೈಗುಳಿ, ದೈವದ ಗದ್ದಿಗೆ ಹಾಗೂ ಪಂಚಲೋಹದ ಮೂರ್ತಿ ಇದೆ.
ಪಕ್ಕದಲ್ಲಿ ಮೈಂದಾಳ್ತಿ, ಬಾಲಯ್ಯ, ಬೊಬ್ಬರ್ಯ, ದೊಡ್ಡಕಾಲಮ್ಮ, ಮೂಡೂರ ಅಮ್ಮ, ಬಚ್ಚಲಮ್ಮ ದೈವಗಳ ಮರದ ಮೂರ್ತಿ ಹಾಗೂ ಕುಂ಼ಜ್ಞಾಡಿ ಹೈಗುಳಿ ದೈವದ ಮಣೆಮಂಚವಿದೆ.
ಬ್ರಹ್ಮಗುಡಿಯ ಎದರು ಸ್ಥಳದ ಮಾಸ್ತಿ, ಜೋಗಿಪುರುಷ, ಅಣ್ಣುಣ ಹೈಗುಳಿ, ಮುರಸಂಡಿ, ಸಂಕ್ರಣ ಹೈಗುಳಿ, ಹಿಂಜಾಣ ಚಿಕ್ಕು, ಮಾಸ್ತಿಕಟ್ಟೆ ಅಮ್ಮ, ಮರ್ಲುಚಿಕ್ಕು ಹಾಗೂ ಪಾತ್ರಿಗಳ ಮರದ ಮೂರ್ತಿಗಳಿವೆ.
ಗರೋಡಿಯ ಹೊರಗೆ ಬಾಗಿಲ ಪಕ್ಕದಲ್ಲಿ ಬಾಗಿಲು ಬೊಬ್ಬರ್ಯ ಮರದ ಮೂರ್ತಿಯಿದೆ.
ಗರೋಡಿಯ ಹೊರಾಂಗಣದಲ್ಲಿ ಹೊರಸುತ್ತಿನ ಹೈಗುಳಿ, ರಾಹು ಮತ್ತು ಗ್ರಾಮಕಲ್ಲು, ಕ್ಷೇತ್ರಪಾಲ, ಬಲಿಕಲ್ಲುಗಳಿವೆ. ಗರೋಡಿಯ ಪರಿಸರದಲ್ಲಿ ಸ್ವಾಮಿ ದೈವದ ಸಾನಿಧ್ಯ ಹಾಗೂ ನಾಗಬನಗಳಿವೆ.
ಸುಬ್ಬ ಪೂಜಾರಿ(65 ವರ್ಷ) ಹಾಗೂ ರಾಮ ಪೂಜಾರಿಯವರು ಗರೋಡಿಯ ಅರ್ಚಕರಾಗಿದ್ದಾರೆ. ಇವರ ಮೊದಲು ಬುಡ್ಡು ಪೂಜಾರಿ, ಭದ್ರ ಪೂಜಾರಿ ಮೊದಲಾದ ಹಿರಿಯರು ಈ ಸೇವೆ ಮಾಡಿದ್ದರು.
ರಾಘವೇಂದ್ರ ಪೂಜಾರಿ (40 ವರ್ಷ) ಇವರು ಇಲ್ಲಿಯ ದರ್ಶನದ ಸ್ಥಳ ಪಾತ್ರಿಯಾಗಿದ್ದಾರೆ. ಇವರ ಮೊದಲು ಚೆನ್ನ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಯಾಗಿದ್ದರು.
ರೋಹಿದಾಸ್ ನಾಯಕ್ ಇವರು ಗರೋಡಿಯ ಮೊಕ್ತೇಸರರಾಗಿ, ಪಟೇಲರ ಮನೆ ಪ್ರದೀಪ್ ಶೆಟ್ಟಿಯವರು ಮುಕ್ಕಾಲಿಯಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಶುಕ್ರ ಪೂಜಾರಿ

ಗರೋಡಿಯ ಉಸ್ತುವಾರಿಗೆ ಆಡಳಿತ ಸಮಿತಿಯಿದೆ. ಶಿವರಾಮ ಪೂಜಾರಿ ಜಡ್ಡಿನಕೋಡ್ಲು ಗೌರವಾಧ್ಯಕ್ಷರಾಗಿ, ಶಿವನಾಯ್ಕ ಇವರು ಅಧ್ಯಕ್ಷರಾಗಿ, ಶುಕ್ರ ಪೂಜಾರಿಯವರು ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗರೋಡಿಯಲ್ಲಿ ನಿತ್ಯಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಜನವರಿ 24ಕ್ಕೆ ಅಗೆಲು ಸೇವೆ ದರ್ಶನ ಸೇವೆ, ಹಾಲುಹಬ್ಬ ನಡೆಯುತ್ತದೆ.
27-04-2025ಕ್ಕೆ ಪಂಜುರ್ಲಿ ಹಾಗೂ ಹೈಗುಳಿ ದೈವಗಳಿಗೆ ಮೊದಲ ಬಾರಿಗೆ ಹರಕೆಯ ಕೋಲ ಸೇವೆ ನಡೆಯಲಿದೆ.
ಗುಜ್ಜಾಡಿ, ಮಂಕಿ, ಬೆಣ್ಗೇರಿ, ಕೊಡಪಾಡಿ, ಗಂಗೊಳ್ಳಿ, ಊರುಗಳ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದ್ದು, ಗರೋಡಿಯಲ್ಲಿ ತುಲಾಭಾರ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರಜನರ ಹರಕೆ, ಕಾಣಿಕೆ, ದೇಣಿಗೆ, ವರಡ ವಂತಿಗೆಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಗರೋಡಿಗೆ 11 ಸೆಂಟ್ಸ ಜಾಗವಿದೆ. ಗರೋಡಿಯು 24-01-2014ರಲ್ಲಿ ಜೀರ್ಣೋದ್ಧಾರವಾಗಿದೆ,
ಮಾಲಿಂಗ ದೇವಾಡಿಗ ಗಂಗೊಳ್ಳಿ ಇವರು ಈ ಗರೋಡಿಯ ವಾದ್ಯದವರಾಗಿ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬಂಟರ ಕೋಟಿಚೆನ್ನಯ್ಯ,
ಪಂಜುರ್ಲಿ, ಹೈಗುಳಿ ಹಾಗೂ ಪರಿವಾರ ದೈವಗಳ ಗರೋಡಿ,
ಗುಜ್ಜಾಡಿ,
ಕುಂದಾಪುರ ತಾಲೂಕು,
ಉಡುಪಿ – 576247.

ಗರೋಡಿಯ ಆಡಳಿತ ಸಮಿತಿ:

ಶುಕ್ರ ಪೂಜಾರಿ
ಕಾರ್ಯದರ್ಶಿ – 9341919878.

ಮಾಹಿತಿ ನೀಡಿದವರು :

ಶುಕ್ರ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

27.01.2025

Shree Brahma Baidarkala Garodi, Ulloor 74

ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಉಳ್ಳೂರು 74

ಶ್ರೀ ಬ್ರಹ್ಮಬೈಕರ್ದಳ ಗರೋಡಿ ಉಳ್ಳೂರು 74, ಈ ಗರೋಡಿಯು ಉಡುಪಿಯಿಂದ – ಬ್ರಹ್ಮಾವರ – ಬಾರ್ಕೂರು – ಎಡ್ತಾಡಿ – ಸೈಬ್ರಕಟ್ಟೆ – ಬಿದ್ಕಲ್ ಕಟ್ಟೆ – ಹಾಲಾಡಿ ಬಸ್ಸು ನಿಲ್ದಾಣದ ಹತ್ತಿರ ಕುಂದಾಪುರ – ಆಗುಂಬೆ ರಾಜ್ಯ ಹೆದ್ದಾರಿಯಲ್ಲಿ ಸುಮಾರು ನಾಲ್ಕು ಕಿ. ಮೀ. ಸಾಗಿದ ನಂತರ ಬಲಕ್ಕೆ ತಿರುಗಿ 6 ಕಿ. ಮೀ. ದೂರದಲ್ಲಿದೆ.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಒಳಗೆ ಬ್ರಹ್ಮಗುಡಿಯಲ್ಲಿ ಗುಂಡದ ಒಳಗೆ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿ ದೇವರ ಆರಾಧನೆಯಿದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರು, ಬಲ್ಲಾಳರು ಹಾಗೂ ಮೂವರು ಮಕ್ಕಳ ಮರದ ಮೂರ್ತಿಯಿದೆ.
ಗುಂಡದ ಬಲಭಾಗದಲ್ಲಿ ದೇಯಿಬೈದೆತಿ ಹಾಗೂ ಪರಿವಾರ ದೈವಗಳ ನಾಲ್ಕು ಮುಂಡಿಗೆಯಿದೆ.
ಬ್ರಹ್ಮಗುಡಿಯ ಎಡಭಾಗದಲ್ಲಿ ಪಂಜುರ್ಲಿ ದೈವದ ಮುಂಡಿಗೆ, ಮೈಂದಾಳ್ತಿ ಹಾಗೂ ಮಗುವಿನ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಎದುರಿಗೆ ಜೋಗಿಪುರುಷರ ಮರದ ಮೂರ್ತಿ ಹಾಗೂ ಮುಂಡಿಗೆಯಿದೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯ ಹಾಗೂ ಮೋಟುಕಾಲು ಬೊಬ್ಬರ್ಯ ದೈವಗಳ ಮಂಡಿಗೆಯಿದೆ.
ಗರೋಡಿಯ ಬಾಗಿಲ ಹತ್ತಿರ ಜಗುಲಿಯಲ್ಲಿ ಹೊರಸುತ್ತಿನ ಹೈಗುಳಿ ಸಾನಿಧ್ಯವಿದೆ. ಗರೋಡಿಯ ಪರಿಸರದಲ್ಲಿ ಸ್ವಾಮಿ ದೈವದ ಸಾನಿಧ್ಯ ಹಾಗು ನಾಗಬನಗಳಿವೆ.
ಗರೋಡಿಯ ಎದುರಿನ ಶ್ರೀ ಮಾರಿ ಶಿವರಾಯ ಗುಡಿಯಲ್ಲಿ ಶಿವರಾಯ ಹಾಗೂ ಹುಲಿಚಾಮುಂಡಿ ದೈವಗಳ ಮರದ ಮೂರ್ತಿಯಿದೆ. ಗುಡಿಯ ಬಾಗಿಲ ಎರಡು ಬದಿಯಲ್ಲಿ ಮಂತ್ರಿಗಣ ಹಾಗೂ ಕ್ಷೇತ್ರಪಾಲ ದೈವಗಳ ಮುಂಡಿಗೆಗಳಿವೆ.
ಗರೋಡಿಯ ಎದುರಿಗೆ ಮಾರಿ ಶಿವರಾಯ ದೇವಸ್ಥಾನವಿದೆ.
ಗರೋಡಿಯ ಆವರಣದಲ್ಲಿ ತುಳಸೀಕಟ್ಟೆ, ಬಲಿ ಕಲ್ಲುಗಳಿವೆ. ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ನಾಗ ಬನವಿದೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಹೊರಸುತ್ತಿನ ಹೈಗುಳಿ, ಹೊರಾಂಗಣದಲ್ಲಿ ತುಳಸಿ ಕಟ್ಟೆಗಳಿವೆ.

ಶ್ರೀಕಾಂತ ಪೂಜಾರಿ

ಶ್ರೀಕಾಂತ ಪೂಜಾರಿ(35 ವರ್ಷ) ಇವರು ಗರೋಡಿಯ ಅರ್ಚಕರಾಗಿದ್ದಾರೆ. ಇವರ ಮೊದಲು ಮುತ್ತ ಪೂಜಾರಿ, ಕೋಟಿ ಪೂಜಾರಿಯವರು ಇಲ್ಲಿಯ ಅರ್ಚಕರಾಗಿ ಸೇವೆ ಮಾಡಿದ್ದರು.

ಕೃಷ್ಣ ಪೂಜಾರಿ

ಕೃಷ್ಣ ಪೂಜಾರಿ (53 ವರ್ಷ), ಪ್ರಕಾಶ ಪೂಜಾರಿ, ಉಮೇಶ ಪೂಜಾರಿ ಇವರು ಇಲ್ಲಿಯ ದರ್ಶನ ಸ್ಥಳ ಪಾತ್ರಿಗಳು. ಇವರ ಮೊದಲು ರಘು ಪೂಜಾರಿ, ನಾರಾಯಣ ಪೂಜಾರಿ, ರಾಜು ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಸಂಜೀವ ಶೆಟ್ಟಿಯವರು ಗರೋಡಿಯ ಮೊಕ್ತೇಸರರು. ಸುಧಾಕರ ಶೆಟ್ಟಿಯವರು ಮುಕ್ಕಾಲಿ ಶೆಟ್ಟಿಯಾಗಿದ್ದಾರೆ. ನಾರಾಯಣ ಹೆಬ್ಬಾರರು, ಸಂಜೀವ ಶೆಟ್ಟಿಯವರ ಮೊದಲು ಈ ಗರೋಡಿಯ ಮೊಕ್ತೇಸರರಾಗಿದ್ದರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜದ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹಗಲು ಪನಿವಾರ, ಕದಿರು ಕಟ್ಟುವುದು, ಏಪ್ರಿಲ್ ತಿಂಗಳಲ್ಲಿ ಅಗೆಲು ಸೇವೆ, ದರ್ಶನ, ತುಲಾಭಾರ ಸೇವೆ, ಮರುದಿನ ಬೈದರ್ಕಳ ನೇಮ, ಜೋಗಿಪುರುಷ, ಮೈಂದಾಳ್ತಿ ಕೋಲ ನಡೆದು ಮರುದಿನ ಶಿವರಾಯ ಕೋಲ ನಡೆಯುತ್ತದೆ.
ಉಳ್ಳೂರು, ಸಿದ್ದಾಪುರ, ಶಂಕರನಾರಾಯಣ, ಹೊಸಂಗಡಿ ಗ್ರಾಮಗಳು ಈ ಕೂಡು ಕಟ್ಟಿಗೆ ಸೇರಿವೆ. ಕೂಡುಕಟ್ಟಿನ ಜನರು ಗರೋಡಿಯಲ್ಲಿ ತುಲಾಭಾರ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ. ಗರೋಡಿಯು ಐವತ್ತು ಸೆಂಟ್ಸ ಸರ್ಕಾರಿ ಜಾಗದಲ್ಲಿದೆ. ಭಕ್ತಾದಿಗಳು ನೀಡುವ ಕಾಣಿಕೆ, ಬತ್ತ, ಅಡಿಕೆ, ಇವುಗಳಿಂದ ಬರುವ ಆದಾಯದಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚವನ್ನು ಭರಿಸಲಾಗುತ್ತದೆ.
ಶೇಖರ ಪರವ ಚೇರ್ಕಾಡಿ ಮತ್ತು ಸಂಘಡಿಗರು ಈ ಗರೋಡಿಯ ನೃತ್ಯವಿಶಾರದರಾಗಿ, ಭುಜಂಗ ಮಡಿವಾಳ ಉಳ್ಳೂರು ಇವರು ಮಡಿವಾಳರಾಗಿ, ಬಸವ ಉಳ್ಳೂರು ಇವರು ಡೋಲಿನವರಾಗಿ ಸೇವೆ ಮಾಡುತ್ತಿದ್ದಾರೆ.
ಗರೋಡಿಗೆ ಸಂಬಂಧಪಟ್ಟು ಗರೋಡಿಯ ಪರಿಸರದಲ್ಲಿ ಉಳ್ಳೂರು ಬಿಲ್ಲವ ಸಂಘ ಚಟುವಟಿಕೆಯಲ್ಲಿದೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಉಳ್ಳೂರು 74,
ಅಂಚೆ ಉಳ್ಳೂರು 74,
ಕುಂದಾಪುರ ತಾಲೂಕು,
ಉಡುಪಿ ಜಿಲ್ಲೆ – 576224.

ಅರ್ಚಕರು:

ಶ್ರೀಕಾಂತ ಪೂಜಾರಿ – 9741150068

ಮಾಹಿತಿ ನೀಡಿದವರು :

ಕೃಷ್ಣ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

16.01.2025

Sri Bantara Kotichennaiyya Garodi and Panjurli and Mari Shivaraya Temple Kaipadi – Vaderahobali

ಶ್ರೀ ಬಂಟರ ಕೋಟಿಚೆನ್ನಯ್ಯ ಗರೋಡಿ ಹಾಗೂ ಪಂಜುರ್ಲಿ ಮತ್ತು ಮಾರಿ ಶಿವರಾಯ ದೇವಸ್ಥಾನ ಕೈಪಾಡಿ – ವಡೇರಹೋಬಳಿ

ಉಡುಪಿಯಿಂದ ಸಾಲಿಗ್ರಾಮ – ಕೋಟೇಶ್ವರ ನಂತರ ಕುಂದಾಪುರಕ್ಕೆ ಮೊದಲು ಟಿ.ಟಿ. ರೋಡ್ ನಲ್ಲಿ ಎಡಕ್ಕೆ ತಿರುಗಿ ಸುಮಾರು ಒಂದು ಕಿ.ಮೀ. ಒಳಗೆ ಸಾಗಿದರೆ ಈ ಗರೋಡಿ ಸಿಗುತ್ತದೆ.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದೆ. ಬ್ರಹ್ಮಗುಡಿಯು ಉತ್ತರಾಬಿಮುಖವಾಗಿದೆ.
ಬ್ರಹ್ಮಗುಂಡವನ್ನು ಗ್ರಾನೈಟ್ ಹಾಕಿ ನಿರ್ಮಿಸಲಾಗಿದೆ. ಗರೋಡಿಯ ಬ್ರಹ್ಮಗುಡಿಯಲ್ಲಿ ಒಳಗೆ ಗುಂಡದ ಎದುರಿನಲ್ಲಿ ನಾಗಬ್ರಹ್ಮರ ಕುದುರೆ ಮಾತ್ರವಿರುವ ಪಂಚಲೋಹದ ಮೂರ್ತಿ ಇದೆ. ಬ್ರಹ್ಮಗುಂಡದ ಒಳಗೆ ವಿಷ್ಣುಮೂರ್ತಿ ದೇವರ ಪಂಚಲೋಹದ ಮೂರ್ತಿ ಇದೆ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ ಸುಮಾರು 250 – 300 ವರ್ಷಗಳ ಹಿಂದೆ ಗರೋಡಿ ಮನೆಯ ಎರಡು ಸಂಸಾರದೊಳಗೆ ಜಗಳವಾಗಿ ಒಂದು ಕಡೆಯವರು ರಾತ್ರಿ ನಾಗಬ್ರಹ್ಮರ ಮೂರ್ತಿ (ಕುದುರೆಯನ್ನು ಬಿಟ್ಟು) ಹಾಗೂ ಘಂಟಾಮಣಿಯನ್ನು ತೆಗೆದುಕೊಂಡು ಹೋಗಿ ಈ ಗರೋಡಿಯಿಂದ ಸುಮಾರು 200ಮೀ. ದೂರದಲ್ಲಿ ಇನ್ನೊಂದು ಗರೋಡಿಯನ್ನು ನಿರ್ಮಿಸಿ ಪೂಜೆ ಮಾಡಲಾರಂಭಿಸಿದರಂತೆ. ಹಾಗಾಗಿ ಈ ಗರೋಡಿಯಲ್ಲಿ ನಾಗಬ್ರಹ್ಮರ ಕುದುರೆ ಮಾತ್ರ ಉಳಿದುಕೊಂಡಿದೆ. ಇತ್ತೀಚೆಗೆ ಈ ಗರೋಡಿಯಲ್ಲಿ ನಾಗಬ್ರಹ್ಮರ ಹೊಸ ಮೂರ್ತಿ ಮಾಡಿಸುವುದೆಂದು ನಿರ್ಣಯಿಸಿ ದರ್ಶನ ಮಾಡಿಸಿ ಕೇಳಿದಾಗ ಹೊಸ ಮೂರ್ತಿ ಮಾಡುವುದು ಬೇಡವೆಂದೂ, ಹಳೆಯದನ್ನು ವಾಪಾಸು ತರಿಸುವುದಾಗಿ ಬೈದೇರುಗಳ ಅಪ್ಪಣೆಯಾಯಿತಂತೆ. ಹಾಗಾಗಿ ಹಳೆಯ ಮೂರ್ತಿ ವಾಪಾಸು ಬರುವ ಶುಭಗಳಿಗೆಗಾಗಿ ಭಕ್ತರು ಕಾಯುತ್ತಿದ್ದಾರೆ.
ಬ್ರಹ್ಮಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರು ಹಾಗೂ ಮಗುವಿನ ಮರದ ಮೂರ್ತಿ, ದೇಯಿ ಬೈದೆತಿ ಮಣೆಮಂಚವಿದೆ.
ಗುಂಡದ ಬಲಭಾಗದಲ್ಲಿ ಶಿವಲಿಂಗದ ಕಲ್ಲಿನ ಕೆತ್ತನೆ, ಬಂಟ ಮತ್ತು ಚಿಟಕರ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಪಂಜುರ್ಲಿ ದೈವದ ಗದ್ದಿಗೆಯಲ್ಲಿ ಮರದ ಮೂರ್ತಿ, ಇನ್ನೊಂದು ಗದ್ದಿಗೆಯಲ್ಲಿ ಹಪ್ಪಿನ ಕೆರೆ ಹೈಗುಳಿ ದೈವದ ಮರದ ಮೂರ್ತಿಗಳಿವೆ. ಬ್ರಹ್ಮಗುಡಿಯ ಎಡಭಾಗದಲ್ಲಿ ನಂದಿಕೇಶ್ವರ, ಮೂಡುರ ಹೈಗುಳಿ, ಗೆಂಡದ ಹೈಗುಳಿ ದೈವಗಳ ಗದ್ದಿಗೆಯಲ್ಲಿ ಮರದ ಮೂರ್ತಿಗಳಿವೆ.
ಪಕ್ಕದಲ್ಲಿ ಧೂಮಾವತಿ, ಬಾಲಯ್ಯ, ಮೈಂದಾಳ್ತಿ, ಹಳಿಯಮ್ಮ, ಚಿಕ್ಕು, ಬೊಬ್ಬರ್ಯ ದೈವಗಳ ಮರದ ಮೂರ್ತಿ ಇದೆ.
ಬ್ರಹ್ಮಗುಡಿಯ ಎದುರಿಗೆ ಪಾತ್ರಿ ವೆಂಕಟಯ್ಯ ಪೂಜಾರಿ, ಜೋಗಿಪುರುಷ, ಮಾಸ್ತಿ ಅಮ್ಮನ ಮರದ ಮೂರ್ತಿ ಹಾಗೂ ಗಣಗಳ ಮಣೆಮಂಚವಿದೆ.
ಗರೋಡಿಯ ಬಾಗಿಲ ಹತ್ತಿರ ಜಗುಲಿಯಲ್ಲಿ ಹೊರಸುತ್ತಿನ ಹೈಗುಳಿ ಸಾನಿಧ್ಯವಿದೆ. ಗರೋಡಿಯ ಪರಿಸರದಲ್ಲಿ ಸ್ವಾಮಿ ದೈವದ ಸಾನಿಧ್ಯ ಹಾಗು ನಾಗಬನಗಳಿವೆ.
ಗರೋಡಿಯ ಎದುರಿಗೆ ಮಾರಿ ಶಿವರಾಯ ದೇವಸ್ಥಾನವಿದೆ.
ಗರೋಡಿಯ ಆವರಣದೊಳಗೆ ಕ್ಷೇತ್ರಪಾಲ, ತುಳಸಿಕಟ್ಟೆ, ಬಾವಿ, ಬಲಿ ಕಲ್ಲುಗಳಿವೆ.

ಸಂಜೀವ ಪೂಜಾರಿ

ವಿಶ್ವನಾಥ ಪೂಜಾರಿ

ವಿನೋದ ಪೂಜಾರಿ

ನಾರಾಯಣ ಪೂಜಾರಿ

ಯೋಗೀಶ ಪೂಜಾರಿ

ಗರೋಡಿಯ ಅರ್ಚಕರಾಗಿ ಕೈಪಾಡಿ ಮನೆಯವರು ಹಾಗೂ ಪೂಜಾರಿ ಮನೆಯವರು ವರ್ಷಕ್ಕೊಮ್ಮೆ ಬದಲಾವಣೆ ಮಾಡಿಕೊಂಡು ಸೇವೆ ಮಾಡುತ್ತಾರೆ. ಸಂಜೀವ ಪೂಜಾರಿ (65 ವರ್ಷ), ವಿಶ್ವನಾಥ (37 ವರ್ಷ), ವಿನೋದ (34 ವರ್ಷ) ಇವರು ಕೈಪಾಡಿ ಮನೆಯ ಅರ್ಚಕರಾಗಿ, ನಾರಾಯಣ ಪೂಜಾರಿ (65 ವರ್ಷ), ಯೋಗೀಶ ಪೂಜಾರಿ (40 ವರ್ಷ) ಇವರು ಪೂಜಾರಿ ಮನೆಯ ಅರ್ಚಕರಾಗಿ ಸೇವೆ ಮಾಡುತ್ತಿದ್ದಾರೆ. ಹಿಂದೆ ಮುತ್ತ ಪೂಜಾರಿ, ಬಾಬು ಪೂಜಾರಿ, ಗಣಪ ಪೂಜಾರಿ, ಮೊದಲಾದ ಹಿರಿಯರು ಇಲ್ಲಿ ಅರ್ಚಕರಾಗಿ ಸೇವೆ ಮಾಡಿದ್ದರು.
ಈಗ ಈ ಗರೋಡಿಯಲ್ಲಿ ದರ್ಶನದ ಸ್ಥಳ ಪಾತ್ರಿಗಳಿಲ್ಲ. ಹಿಂದೆ ಗಣಪ ಪೂಜಾರಿ, ವೆಂಕಟ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಗರೋಡಿಯ ಮೊಕ್ತೇಸರರಾಗಿ ಕೂಡಾ ಕೈಪಾಡಿ ಮನೆ ಹಾಗೂ ಪೂಜಾರಿ ಮನೆಯವರು ವರ್ಷಕ್ಕೊಬ್ಬರಂತೆ ಅಧಿಕಾರ ಬದಲಾವಣೆ ಮಾಡಿಕೊಳ್ಳುತ್ತಾರೆ. ಸಂಜೀವ ಪೂಜಾರಿಯವರು ಕೈಪಾಡಿ ಮನೆಯವರು ಮೊಕ್ತೇಸರರಾದರೆ, ವೆಂಕಟ ಪೂಜಾರಿಯವರು ಪೂಜಾರಿ, ಪೂಜಾರಿ ಮನೆಯ ಮೊಕ್ತೇಸರರು.
ಗರೋಡಿಯಲ್ಲಿ ನಿತ್ಯ ಪೂಜೆ, ಸಂಕ್ರಾಂತಿ ಪೂಜೆ ಚೌತಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಕೊಡಿ ತಿಂಗಳಲ್ಲಿ ಅಗೆಲು ಸೇವೆ, ದರ್ಶನ ಸೇವೆ, ಹಾಲು ಹಬ್ಬ, ಫೆಬ್ರವರಿ ತಿಂಗಳ 5ನೇ ತಾರೀಖಿನಂದು ಗೆಂಡ ಸೇವೆ, 6ಕ್ಕೆ ತುಲಾಭಾರ ಸೇವೆ, ಕುರಿಹಾರ ಸೇವೆಗಳು ನಡೆಯುತ್ತದೆ.
ಹಂಗಳೂರು, ಕೋಣಿ, ಕೋಡಿ, ಹೊಸಬೆಟ್ಟು, ವಿಠಲವಾಡಿ, ವಡೇರಹೋಬಳಿ, ಕೋಟೇಶ್ವರ ಊರುಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರುತ್ತವೆ.
ಈ ಊರ ಜನರು ಗರೋಡಿಯಲ್ಲಿ ತುಲಾಭಾರ ಸೇವೆ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರ ಪರವೂರ ಜನರ, ಹರಕೆ, ಕಾಣಿಕೆ, ಸಹಾಯಧನ,ವರಡ ವಂತಿಗೆಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತಿದೆ.
ಗರೋಡಿಗೆ ಸುಮಾರು ಒಂದೂವರೆ ಎಕ್ರೆ ಜಾಗವಿದೆ. 1972 ಹಾಗೂ 2000 ಇಸವಿಯಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿದೆ. ೨೦೦೦ ಇಸವಿಯ ಜೀರ್ಣೋದ್ದಾರದ ಕಾರ್ಯ ಪ್ರಗತಿಯಲ್ಲಿದ್ದಾಗ ನಮ್ಮ ಸಂಸ್ಥೆಯ ಅಧ್ಯಯನ ತಂಡವು ಈ ಗರೋಡಿಗೆ ಭೇಟಿ ಕೊಟ್ಟ ಸಂದರ್ಭದ ವಿಡಿಯೋ ಚಿತ್ರೀಕರಣ ಇಲ್ಲಿದೆ. ಗರೋಡಿಯ ಅಂದಿನ ಅರ್ಚಕರಾಗಿದ್ದ ಮುತ್ತು ಪೂಜಾರಿಯವರು ಜೀರ್ಣೋದ್ದಾರದ ಬಗ್ಗೆ ಮಾಹಿತಿ ನೀಡಿದ್ದರು.
ವಡೇರ ಹೋಬಳಿಯ ಸೀತ ಮಡಿವಾಳರ ಮಗ ಮಡಿವಾಳರಾಗಿ, ಮಂಜುನಾಥ ದೇವಾಡಿಗ ಕೋಟೇಶ್ವರ ವಾಧ್ಯದವರಾಗಿ, ವಿಠಲವಾಡಿಯ ರಂಗ ಡೋಲಿನವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.
ಮೂಲ ಗರೋಡಿಯಿಂದ ವಿವಾದದ ಕಾರಣ ನಾಗಬ್ರಹ್ಮರ ಮೂರ್ತಿ (ಕುದುರೆಯನ್ನು ಬಿಟ್ಟು) ಹಾಗೂ ಘಂಟಾಮಣಿ ತಂದು ಸ್ಥಾಪಿಸಿದ ಗರೋಡಿ ಹತ್ತಿರದಲ್ಲಿದೆ.
ಈ ಗರೋಡಿಯನ್ನು ಶ್ರೀ ಬ್ರಹ್ಮಬೈದರ್ಕಳ ಪಂಜುರ್ಲಿ ಗರೋಡಿ ಕೈಪಾಡಿ ಎಂದು ಹೆಸರಿಸಲಾಗಿದೆ.
ಇದರ ಬ್ರಹ್ಮಗುಡಿಯ ಒಳಗೆ ಸಿಮೆಂಟಿನಿಂದ ನಿರ್ಮಿಸಿ ಟೈಲ್ಸ್ ಹಾಕಲಾದ ಗುಂಡದಂತಿರುವ ಮಂಟಪದಲ್ಲಿ ನಾಗಬ್ರಹ್ಮರ ಮೂರ್ತಿ ಇದೆ. ಕುದುರೆಯ ಬದಲಿಗೆ ಕಂಚಿನಿಂದ ನಿರ್ಮಿಸಿದ ಪೀಠದ ಮೇಲೆ ಮೂರ್ತಿಯನ್ನಿಡಲಾಗಿದೆ.
ಬ್ರಹ್ಮಗುಡಿಯ ಹೊರಗೆ ಪಂಜುರ್ಲಿ, ಗೆಂಡದ ಹೈಗುಳಿ, ಮಾರಿ ಶಿವರಾಯ, ಮಾಸ್ತಿಯಮ್ಮ ದೈವಗಳ ಮರದ ಮೂರ್ತಿ, ಶ್ರೀ ಮರ್ಲುಚಿಕ್ಕು ಹಾಗೂ ಪರಿವಾರ ದೈವಗಳ ಮಣೆಮಂಚವಿದೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಹೊರಸುತ್ತಿನ ಹೈಗುಳಿ, ಹೊರಾಂಗಣದಲ್ಲಿ ತುಳಸಿ ಕಟ್ಟೆಗಳಿವೆ.

ಗರೋಡಿಯ ವಿಳಾಸ:

ಶ್ರೀ ಬಂಟರ ಕೋಟಿಚೆನ್ನಯರ ಗರೋಡಿ ಹಾಗೂ ಪಂಜುರ್ಲಿ ಮತ್ತು ಮಾರಿ ಶಿವರಾಯ ದೇವಸ್ಥಾನ,
ಕೈಪಾಡಿ, ಟ.ಟ.ರಸ್ತೆ, ವಡೇರಹೋಬಳಿ, ಕುಂದಾಪುರ – 576201.

ಅರ್ಚಕರು:

ಕೈಪಾಡಿ ಮನೆ ವಿಶ್ವನಾಥ ಪೂಜಾರಿ – 8105669153
ಕೈಪಾಡಿ ಮನೆ ವಿನೋದ ಪೂಜಾರಿ – 8971427022,
ಪೂಜಾರಿ ಮನೆ ಯೋಗೀಶ ಪೂಜಾರಿ – 9164954574.

ಮಾಹಿತಿ ನೀಡಿದವರು :

ಕೈಪಾಡಿ ಮನೆ ವಿನೋದ ಪೂಜಾರಿ,
ನಾರಾಯಣ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

27.01.2025

Shree Brahma Baidarkala, Shivaraya & Parivaara Garodi, Amavasebailu

ಶ್ರೀ ಬ್ರಹ್ಮಬೈದರ್ಕಳ ಹಾಗೂ ಶಿವರಾಯ ಮತ್ತು ಪರಿವಾರ ಗರೋಡಿ, ಅಮವಾಸೆಬೈಲು

ಉಡುಪಿಯಿಂದ ಹಾಲಾಡಿ – ರಟ್ಟಾಡಿ ಮಾರ್ಗವಾಗಿ ಅಮಾಸೆಬೈಲು ತಲುಪಿದರೆ ಅಮಾಸೆಬೈಲು ಪೇಟೆಯಿಂದ ಅರ್ಧ ಕಿ.ಮೀ. ದೂರದಲ್ಲಿದೆ ಈ ಗರೋಡಿ.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
ಗುಂಡದ ಎಡಭಾಗದಲ್ಲಿ ದೇಯಿಬೈದೆತಿ, ಕೋಟಿಚೆನ್ನಯರು ಕುಜುಂಬ ಕಾಂಜವ ಹಾಗು ಮಕ್ಕಳ ಮರದ ಮೂರ್ತಿಗಳಿವೆ.
ಗುಂಡದ ಎಡಬದಿಯಲ್ಲಿ ಪೆರುಮಳೆ ಬಲ್ಲಾಳ, ದೇವು ಬಲ್ಲಾಳ, ಹಾಗೂ ಬಂಟರ ಮಣೆಮಂಚಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಅಣ್ಣಪ್ಪ ಪಂಜುರ್ಲಿ, ಜೋಡು ಪಂಜುರ್ಲಿ ಹಾಗೂ ಬಂಟರ ಮಣೆಮಂಚಗಳಿವೆ.
ಎಡಬದಿಯಲ್ಲಿ ಕಾಂತಣ್ಣ ಜುಮಾದಿ ಹಾಗೂ ಬಂಟ, ಪಂಚದೂಮಾವತಿ, ಬಂಟ, ಪಂಚಸ್ಥಾನ ಪರಿವಾರ, ತತ್ವತ್ರ ಮೈಂದಾಳಿ, ದೈವಗಳ ಮಣೆಮಂಚ, ಬಾಲಯ್ಯ, ಮೈಂದಾಳಿಯ ಮರದ ಮೂರ್ತಿಗಳಿವೆ.
ಗುಂಡದ ಎದುರಿಗೆ ಚಾಮುಂಡಿ ಮಣೆಮಂಚ, ಹೊಸಮುಂಡಿಗೆ, ನರೀಶ್ವರ ದೈವಗಳ ಮಣೆಮಂಚ ಹಾಗೂ ಜೋಗಿ ಪುರುಷರ ಮರದ ಮೂರ್ತಿಗಳಿವೆ.
ಗರೋಡಿಯ ಹತ್ತಿರ ಬಾಗಿಲ ಬೊಬ್ಬರ್ಯ ಹಾಗೂ ಉಮ್ಮಾಳ್ತಿ ದೈವಗಳ ಮಣೆಮಂಚಗಳಿವೆ.
ಗರೋಡಿಯ ಎದುರಿನ ಗುಡಿಯಲ್ಲಿ ಶಿವರಾಯ ಹಾಗೂ ಬಂಟರ ಮರದ ಮೂರ್ತಿ ಇದೆ.
ಪಕ್ಕದ ಇನ್ನೊಂದು ಗುಡಿಯಲ್ಲಿ ಬಂಟರ ಹಾಗೂ ಬಂಟರ ಗದ್ದಿಗೆ, ಪಂಚ ದೂಮಾವತಿಯ ಮರದ ಮೂರ್ತಿ ಬಂಟ, ಬಂಟರ ಮಣೆಮಂಚ, ಪಂಜುರ್ಲಿಯ ಮರದ ಮೂರ್ತಿ, ವ್ಯಾಘ್ರಚಾಮುಂಡಿಯ ಮರದ ಮೂರ್ತಿಗಳಿವೆ. ಪಕ್ಕದಲ್ಲಿ ಬಂಟ ಹಾಗೂ ಬಂಟ ಹಾಗೂ ನಂದಿಕೇಶ್ವರ ದೈವದ ಮರದ ಮೂರ್ತಿ ಇದೆ.

ಭೋಜ ಪೂಜಾರಿ

ಅಪ್ಪು ಪೂಜಾರಿ

1996ರಿಂದ ಭೋಜ ಪೂಜಾರಿಯವರು (59 ವರ್ಷ) ಗರೋಡಿಯ ಅರ್ಚಕರಾಗಿದ್ದಾರೆ. ಅಪ್ಪು ಪೂಜಾರಿ (77 ವರ್ಷ)ಯವರು ಇಲ್ಲಿಯ ಇನ್ನೋರ್ವ ಅರ್ಚಕರು. ಇವರಿಬ್ಬರ ನಡುವೆ ಜುಲೈ ಒಂದಕ್ಕೆ ಅಧಿಕಾರ ಬದಲಾವಣೆ ನಡೆಯುತ್ತದೆ. ಇವರ ಮೊದಲು ಬಚ್ಚ ಪೂಜಾರಿ ಹಾಗೂ ಕೋಟಿ ಪೂಜಾರಿಯವರು ಇಲ್ಲಿಯ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು.
ಅಪ್ಪು ಪೂಜಾರಿ , ರಾಜು ಪೂಜಾರಿ (74 ವರ್ಷ) ಲಕ್ಷಣ ಪೂಜಾರಿ (76 ವರ್ಷ) ನಂದಿ ಪೂಜಾರಿ (67 ವರ್ಷ) ಇವರು ಈ ಗರೋಡಿಯ ದರ್ಶನದ ಸ್ಥಳ ಪಾತ್ರಿಗಳು.
ಶಂಕರನಾರಾಯಣ ಕೊಡ್ಗಿಯವರು ಗರೋಡಿಯ ಮೊಕ್ತೇಸರರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಹಗಲು ಪನಿಯಾರ, ಕದಿರು ಕಟ್ಟುವುದು, ಡಿಸೆಂಬರ್ 13ರಂದು ಕಾಯ್ದೆ ಪೂಜೆ, ಅಗೆಲು ಸೇವೆ, ದರ್ಶನ, ತುಲಾಭಾರ ಸೇವೆ, 22ಕ್ಕೆ ನೇಮ, ಜೋಗಿಪುರುಷ, ಮೈಂದಾಳಿ, ಶಿವರಾಯ ಕೋಲ, ಜೂನ್ ತಿಂಗಳಲ್ಲಿ ಶಿವರಾಯನಿಗೆ ಮಾರಿ ಸೇವೆ ನಡೆಯುತ್ತದೆ.
ಗರೋಡಿಯು ಸುಮಾರು ಒಂದು ಎಕರೆ ಸರಕಾರಿ ಭೂಮಿಯಲ್ಲಿದೆ.
ನರಸಿಂಹ ಪರವ ಚೇರ್ಕಾಡಿ ಮತ್ತು ಸಂಘಡಿಗರು ಈ ಗರೋಡಿಯ ನೃತ್ಯವಿಶಾರದರಾಗಿ, ರಾಮ ಹೆಂಗವಳ್ಳಿ ಇವರು ಡೋಲಿನವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಹಾಗೂ ಶ್ರೀ ವೀರ ಶಿವರಾಯ ಮತ್ತು ಸಹಪರಿವಾರ ಗರೋಡಿ,
ಅಮಾಸೆಬೈಲು ಕುಂದಾಪುರ ತಾಲೂಕು,
ಉಡುಪಿ, 576227.

ಅರ್ಚಕರು:

ಭೋಜ ಪೂಜಾರಿ – 9740967134,
ಅಪ್ಪು ಪೂಜಾರಿ – 9611802891.

ಮಾಹಿತಿ ನೀಡಿದವರು :

ಭೋಜ ಪೂಜಾರಿ,
ಅಪ್ಪು ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

16.01.2025

Shree Brahma Baidarkala Garodi Asodu

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಅಸೋಡು

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ ಎನ್.ಎಚ್. 66ರಲ್ಲಿ ಕೋಟೇಶ್ವರ ತಲುಪಿ ಅಲ್ಲಿಂದ ಬಲಕ್ಕೆ ಹಾಲಾಡಿ ರಸ್ತೆಯಲ್ಲಿ ಸುಮಾಅರು 3.7ಕಿ. ಮೀ. ದೂರ ಸಾಗಿದರೆ ಬಲಬದಿಯಲ್ಲಿದೆ ಈ ಗರೋಡಿ.
ಈ ಗರೋಡಿಯು ಆಯದ ಗರೋಡಿಯಾಗಿದೆ. ಪೂರ್ವಾಭಿಮುಖವಾಗಿರುವ ಒಂದು ದ್ವಾರವಿದ್ದು ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಒಳಗೆ ಬ್ರಹ್ಮಗುಡಿಯ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ನಾಗಬ್ರಹ್ಮರ ಮೂರ್ತಿಯ ಹಿಂಡ ದೇವಿಯ ಮರದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ರಕ್ತಚಂದನದ ಮೂರ್ತಿಯಿದೆ.
ಗುಂಡದ ಎಡಭಾಗದಲ್ಲಿ ದೇಯಿ ಬೈದೆತಿ, ಕೋಟಿಚೆನ್ನಯರು,ಇಬ್ಬರು ಮಕ್ಕಳ ಮರದ ಮೂರ್ತಿಯಿದೆ. ಪಕ್ಕದಲ್ಲಿ ಹುಲಿದೇವರ ಗದ್ದಿಗೆ ಹಾಗೂ ನಂದಿಕೋಣ ದೈವದ ಮರದ ಮೂರ್ತಿಯಿದೆ.
ಗುಂಡದ ಬಲಭಾಗದಲ್ಲಿ ಇಬ್ಬರು ಬಲ್ಲಾಳರ ಮರದ ಮೂರ್ತಿ ಹಾಗೂ ಇನ್ನೊಂದು (ಕುಜುಂಬ ಕಾಂಜವರ?) ಮರದ ಮೂರ್ತಿಯಿದೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಹೋರು ಬೊಬ್ಬರ್ಯ ಮತ್ತು ಗಣದ ಮರದ ಮೂರ್ತಿ ಇದೆ.
ಎಡ ಬದಿಯಲ್ಲಿ ಪಂಜುರ್ಲಿ ಗದ್ದಿಗೆಯಲ್ಲಿ ಮರದ ಮೂರ್ತಿ, ಚೌಂಡಿ, ಮೈಂದಾಳ್ತಿ ಮತ್ತು ಮಗು, ಗೂರಮ್ಮ, ಕೋಣದ ಮೂರ್ತಿಗಳಿವೆ. ಪಕ್ಕದಲ್ಲಿ ಹೈಗುಳಿಯ ಮರದ ಗದ್ದಿಗೆಯಲ್ಲಿ ಮರದ ಮೂರ್ತಿ, ಚಿಕ್ಕು ಮತ್ತು ಪರಿವಾರ ದೈವಗಳ ಮೂರ್ತಿಗಳಿವೆ.
ಪಕ್ಕದಲ್ಲಿ ಜೋಗಿ ಪುರುಷ ಪಕ್ಕದಲ್ಲಿ ನಾಯಿ ಮತ್ತು ಕೋಳಿ, ಚಂಡಿ ದೈವಗಳ ಮರದ ಮೂರ್ತಿಗಳಿವೆ. ಇವಲ್ಲದೆ ಗುರುಕಂಬ, ಗದ್ದಿಗೆಯಲ್ಲಿ ನಂದಿಯ ಕಂಚಿನ ಮೂರ್ತಿ, ಎಣ್ಣೆ ಕೊಪ್ಪರಿಗೆ ಹಾರಿದ ಪಾತ್ರಿಯ ಮರದ ಮೂರ್ತಿ, ಹೈಗುಳಿ ದೈವದ ಗದ್ದಿಗೆಗಳಿವೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯ ಹಾಗೂ ಆಂಜನೇಯ ದೇವರ ಮರದ ಮೂರ್ತಿಗಳಿವೆ.
ಗರೋಡಿಯ ಹೆಬ್ಬಾಗಿಲಿನ ಎಡಬದಿಯ ಗುಡಿಯಲ್ಲಿ ಶಿವರಾಯ ಬಂಟರ ಮರದ ಮೂರ್ತಿಗಳಿವೆ. ಪಕ್ಕದಲ್ಲೇ ಗಣಗಳ ಕಲ್ಲು ಇದೆ.
ಹೆಬ್ಬಾಗಿಲ ಬಲಬದಿಯ ಗುಡಿಯಲ್ಲಿ ಹೈಗುಳಿ ದೈವಗಳ ಮಣೆಮಂಚವಿದೆ.

ಮಹಾಬಲ ಪೂಜಾರಿ

ಗರೋಡಿ ಮನೆ ಮಹಾಬಲ ಪೂಜಾರಿ (75 ವರ್ಷ) ಯವರು ಕಳೆದ 30 ವರ್ಷಗಳಿಂದ ಅರ್ಚಕರಾಗಿ ಸೇವೆ ಮಾಡುತ್ತಿದ್ದಾರೆ. ಇವರ ಮೊದಲು ಇವರ ಮಾವ ನಾರಾಯಣ ಪೂಜಾರಿಯವರು ಈ ಗರೋಡಿಯ ಅರ್ಚಕರಾಗಿದ್ದರು. ಇಲ್ಲಿ ಬೈದರ ದರ್ಶನ ಸ್ಥಳ ಪಾತ್ರಿಗಳಿಲ್ಲ.
ಅಸೋಡು ಮೂಡು ಮನೆಯವರು ವರ್ಷಕ್ಕೊಬ್ಬರಂತೆ ಈ ಗರೋಡಿಯ ಮೊಕ್ತೇಸರರಾಗಿರುತ್ತಾರೆ. ಪ್ರತೀ ವರ್ಷ ಏಪ್ರಿಲ್ 8ಕ್ಕೆ ಈ ಬದಲಾವಣೆ ನಡೆಯುತ್ತದೆ. ಸದ್ಯಕ್ಕೆ ಏಪ್ರಿಲ್ 8, 2025ರವರೆಗೆ ಅಜಿತ್ ಕುಮಾರ್ ಸೆಟ್ಟಿಯವರು ಗರೋಡಿಯ ಮೊಕ್ತೇಸರರಾಗಿರುತ್ತಾರೆ.
ಗರೋಡಿಯಲ್ಲಿ ನಿತ್ಯ ಪೂಜೆ, ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಪಸರಣೆ ಪೂಜೆ, ಕದಿರು ಕಟ್ಟುವುದು, ಕೊಡಿ ತಿಂಗಳಲ್ಲಿ ಡಿಸೆಂಬರ್ 2ನೇ ತಾರೀಖಿನಂದು ಅಗೆಲು ಸೇವೆ, 3ರಕ್ಕೆ ಹಾಲುಹಬ್ಬ, ದರ್ಶನ ಸೇವೆ, ತಲಾಭಾರ, ಮೇ 16ಕ್ಕೆ ಶಿವರಾಯ ಮಾರಿ ಹಬ್ಬ ನಡೆಯುತ್ತದೆ.
ಕಾಳಾವರ, ವಕ್ವಾಡಿ, ಕೆದೂರು, ಸಲ್ವಾಡಿ ಊರಿನ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಗರೋಡಿಯಲ್ಲಿ ತುಲಾಭಾರ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮೊದಲಾದ ಹರಕೆಯ ಸೇವೆಗಳಲ್ಲಿ ಜನ ಪಾಲ್ಗೊಳ್ಳುತ್ತಾರೆ.
ಗರೋಡಿಗೆ 21 ಸೆಂಟ್ಸ ಜಾಗವಿದೆ. ಊರ ಜನರ ಹರಕೆ, ಕಾಣಿಕೆ, ದೇಣಿಗೆ, ವಂತಿಗೆಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಗರೋಡಿಯ ಕಟ್ಟಡವು ತುಂಬಾ ಹಳೆಯದಾಗಿದ್ದು ಈಗ ಜೀರ್ಣೋದ್ಧರ ಗೊಳಿಸುವ ಯೋಜನೆಯಿದೆ.
ಹೆರಿಯ ಮಡಿವಾಳ ಅಸೋಡು ಇವರು ಮಡಿವಾಳರಾಗಿ, ಸಂಜೀವ ದೇವಾಡಿಗ ಕೋಟೆಶ್ವರ ಇವರು ವಾದ್ಯದವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹಬೈದರ್ಕಳ ಗರೋಡಿ, ಅಸೋಡು,
ಅಸೋಡು ಗ್ರಾಮ, ಮತ್ತು ಅಂಚೆ,
ಕುಂದಾಪುರ ತಾಲೂಕು,
ಉಡುಪಿ 576222

ಅರ್ಚಕರು:

ಮಹಾಬಲ ಪೂಜಾರಿ – 9900475529

ಮಾಹಿತಿ ನೀಡಿದವರು :

ಮಹಾಬಲ ಪೂಜಾರಿ,
ಸಂತೋಷ ಪೂಜಾರಿ
(ಮಹಾಬಲ ಪೂಜಾರಿಯವರ ಮೊಮ್ಮಗ)- 9900475529

ಮಾಹಿತಿ ಸಂಗ್ರಹಿಸಿದ ದಿನಾಂಕ :

16.01.2025

Shree Shivaraya & Brahma Baidarkala Garodi – Kavadi

ಶ್ರೀ ಶಿವರಾಯ ಮತ್ತು ಬ್ರಹ್ಮ ಬೈದರ್ಕಳ ಗರೋಡಿ – ಕಾವಡಿ

ಉಡುಪಿಯಿಂದ ಬ್ರಹ್ಮಾವರಕ್ಕೆ ಬಂದು ಬಾರ್ಕೂರು ಮುಖ್ಯ ರಸ್ತೆಗೆ ತಿರುಗಿ ಬಾರ್ಕೂರು ಪೇಟೆಯಿಂದ ಸುಮಾರು 3 ಕಿ. ಮೀ. ನಂತರ ಎಡಕ್ಕೆ ತಿರುಗಿ ಸುಮಾರು 2.5 ಕಿ. ಮೀ ದೂರದಲ್ಲಿದೆ ಈ ಗರೋಡಿ.
ಇದು ತುಂಬಾ ಹಳೆಯ ಕಟ್ಟಡದ ಗರೋಡಿಯಾಗಿದ್ದು ಜೀರ್ಣೋದ್ಧಾರದ ಯೋಜನಾ ಹಂತದಲ್ಲಿದೆ. ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು, ಬ್ರಹ್ಮ ಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಬೆಳ್ಳಿ ಕವಚದ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರಿಗೆ ಪೂಜೆಯಿದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರು ಹಾಗೂ ತಾಯಿ ದೇಯಿ ಬೈದೆತಿಯ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ನಂದಿಕೇಶ್ವರ ದೈವದ ಮರದ ಮುಖ ಮೂರ್ತಿ ಹಾಗೂ ಮಣೆಮಂಚವಿದೆ. ಪಕ್ಕದಲ್ಲಿ ಮೈಸಂದಾಯ ದೈವದ ಮಣೆಮಂಚ ಹಾಗೂ ಪಂಜ ಬೈದರ ಮರದ ಮೂರ್ತಿಯಿದೆ.
ಬ್ರಹ್ಮಗುಡಿಯ ಹೊರಗಡೆ ಬಲಭಾಗದಲ್ಲಿ ಪಂಜುರ್ಲಿಯ ಮರದ ಮೂರ್ತಿ ಹಾಗೂ ಪರಿವಾರ ದೈವಗಳ ಮಣೆ ಮಂಚವಿದೆ. ಬ್ರಹ್ಮಗುಡಿಯ ಎಡಭಾಗದಲ್ಲಿ ಪಂಜುರ್ಲಿ ದೈವದ ಮರದ ಗದ್ದ್ದಿಗೆಯಲ್ಲಿ ಕಂಚಿನ ಮೂರ್ತಿ ಇದೆ. ಪಕ್ಕದಲ್ಲಿ ಪರಿವಾರ ದೈವಗಳ ಮಣೆ ಮಂಚಗಳಿವೆ.
ಬಾಲಯ್ಯ, ಮೈಂದಾಳ್ತಿ, ಗೋರಲಮ್ಮ, ಚಿಕ್ಕು, ಮರ್ಲುಚಿಕ್ಕು, ದೈವಗಳ ಮರದ ಮೂರ್ತಿಗಳು, ಪರಿವಾರ ದೈವಗಳ ಮಣೆ ಮಂಚಗಳಿವೆ.
ಬ್ರಹ್ಮ ಗುಡಿಯ ಎದುರಿಗೆ ಜೋಗಿಪುರುಷ, ಹಳಿಯಮ್ಮ, ಬಾಲಚಿಕ್ಕುವಿನ ಮರದ ಮೂರ್ತಿ ಹಾಗೂ ಚೌ೦ಡಿ ದೈವದ ಕಲ್ಲು ಇದೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲು ಬೊಬ್ಬರ್ಯ, ಬಬ್ಬರ್ತಿಯ ಮರದ ಮೂರ್ತಿಯಿದೆ.
ಗರೋಡಿಯ ಎದುರಿನ ಗುಡಿಯಲ್ಲಿ ಮರದ ಗದ್ದಿಗೆಯೊಳಗೆ ಪಂಚಲೋಹದ ಶಿವರಾಯ ಮೂರ್ತಿಯಿದೆ.
ಗರೋಡಿಯ ಆವರಣದೊಳಗೆ ತುಳಸಿಕಟ್ಟೆ, ಕ್ಷೇತ್ರಪಾಲ, ಹೈಗುಳಿ, ಕೊರಗಜ್ಜ, 17 ಶಕ್ತಿ ಕಲ್ಲುಗಳು ಹಾಗೂ ಬಲಿಕಲ್ಲುಗಳಿವೆ. ಗರೋಡಿಯ ಪರಿಸರದಲ್ಲಿ ರಾವು, ಕೇತು, ಹಾಗೂ ಯಕ್ಷಿಣಿ ದೈವಗಳ ಸಾನಿಧ್ಯವಿದೆ.

ಸತೀಶ್ ಪೂಜಾರಿ

ತಿಮ್ಮ ಪೂಜಾರಿ

ಸತೀಶ್ ಪೂಜಾರಿ (55 ವರ್ಷ) ತಿಮ್ಮ ಪೂಜಾರಿ (67 ವರ್ಷ) ಹಾಗೂ ರಾಜು ಪೂಜಾರಿ (72 ವರ್ಷ) ಇವರು ಗರೋಡಿಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮೊದಲು ಚಂದು ಪೂಜಾರಿ, ದೊಟ್ಟಿ ಪೂಜಾರಿ, ಬಚ್ಚ ಪೂಜಾರಿ, ಹಾಗೂ ಸಂಜೀವ ಪೂಜಾರಿ ಇವರು ಈ ಸೇವೆ ಮಾಡಿದ್ದರು.
ಈ ಗರೋಡಿಯಲ್ಲಿ ಈಗ ಬೈದರ ದರ್ಶನದ ಸ್ಥಳ ಪಾತ್ರಿಗಳಿಲ್ಲ. ಹಿಂದೆ ಶಿವ ಪೂಜಾರಿ, ಬಚ್ಚ ಪೂಜಾರಿಯವರು ಈ ಸೇವೆ ಮಾಡಿದ್ದರು,
ದಿನಕರ ಶೆಟ್ಟಿ, ಶೇಖರ ಶೆಟ್ಟಿಯವರು ಗರೋಡಿಯ ಮೊಕ್ತೇಸರರು.
ಗರೋಡಿಯಲ್ಲಿ ನಿತ್ಯವೂ ದೀಪ ಹಚ್ಚುವ ಕ್ರಮವಿದೆ. ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ದೀಪಾವಳಿ ಪೂಜೆ, ಹಸರಣೆ ಪೂಜೆ, ಕೊಡಿ ತಿಂಗಳಲ್ಲಿ ಅಗೆಲು ಸೇವೆ, ಹಾಲುಹಬ್ಬ, ನಡೆಯುತ್ತದೆ. ಫೆಬ್ರವರಿ 7ರಿಂದ ಕೆಂಡ ಸೇವೆ, ಶಿವರಾಯ ಕೋಲ, ಪಂಜುರ್ಲಿ ಕೋಲ, ಮತ್ತು ತುಲಾಭಾರ ಸೇವೆ ನಡೆಯುತ್ತದೆ.
ಹವರಾಲು, ಮಾನಂಬಳ್ಳಿ, ಮೂಡುತೋಟ, ಕಾವಡಿ ಊರುಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರುತ್ತವೆ. ಊರ ಜನರು ಗರೋಡಿಯಲ್ಲಿ ತುಲಾಭಾರ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆಯಂತಹ ಹರಕೆಯ ಸೇವೆಗಳಲ್ಲಿ ಪಾಲ್ಗೊಳ್ಳುತ್ತಾರೆ.
ಗರೋಡಿಯ ಪರಿಸರದಲ್ಲಿ ಶಿವರಾಯ ಪ್ರೆಂಡ್ಸ ಎನ್ನುವ ಯುವಕರ ಸಂಸ್ಥೆಯೊಂದು ಕಾರ್ಯನಿರ್ವಹಿಸುತ್ತಿದೆ.

ಗರೋಡಿಯ ವಿಳಾಸ:

ಶ್ರೀ ಶಿವರಾಯ ಮತ್ತು ಬ್ರಹ್ಮಬೈದರ್ಕಳ ಗರೋಡಿ, ಕಾವಡಿ,
ಅಂಚೆ ಕಾವಡಿ,
ಬ್ರಹ್ಮಾವರ ತಾಲೂಕು,
ಉಡುಪಿ 576210.

ಪಾತ್ರಿ:

ಸತೀಶ್ ಪೂಜಾರಿ – 9611050180
ತಿಮ್ಮ ಪೂಜಾರಿ – 7022207425
ರಾಜು ಪೂಜಾರಿ – 9743330753

ಮಾಹಿತಿ ನೀಡಿದವರು :

ಸತೀಶ್ ಪೂಜಾರಿ
ತಿಮ್ಮ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

04.01.2025

Shree Brahma Baidarkala Garodi, Hosala, Barkur

ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಹೊಸಾಳ, ಬಾರ್ಕೂರು.

ಉಡುಪಿಯಿಂದ ಬಾರ್ಕೂರು ತಲುಪಿ ಬಾರ್ಕೂರು ಪೇಟೆಯಿಂದ ಸುಮಾರು ಅರ್ಧ ಕಿ.ಮೀ. ದೂರದಲ್ಲಿದೆ ಈ ಗರೋಡಿ.
ಕೆಂಪು ಮುರಕಲ್ಲಿನಿಂದ ಕಟ್ಟಲ್ಪಟ್ಟು ನವೀಕೃತಗೊಂಡ ಈ ಗರೋಡಿಯ ದ್ವಾರವು ಪೂರ್ವಾಭಿಮುಖವಾಗಿದ್ದು ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ. ಬ್ರಹ್ಮಗುಂಡವು ಷಡಾಧಾರ ಪ್ರತಿಷ್ಠೆಯನ್ನು ಹೊಂದಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ಬೆಳ್ಳಿಯ ಪ್ರಭಾವಳಿಯುಳ್ಳ ಪಂಚಲೋಹದ ನಾಗಬ್ರಹ್ಮರ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರ ಮತ್ತು ಇಬ್ಬರು ಮಕ್ಕಳು, ದೇಯಿಬೈದೆತಿ ಹಾಗೂ ನಂದಿಯ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ಒಕ್ಕುಬಲ್ಲಾಳ, ಕುಜುಂಬ ಕಾಂಜವರ ಮರದ ಮೂರ್ತಿ, ಮೈಸಂದಾಯ ದೈವದ ಮಣೆಮಂಚದ ಮೇಲೆ ಕಂಚಿನ ಮುಖಮೂರ್ತಿಯಿದೆ.
ಬ್ರಹ್ಮಗುಡಿಯ ಹೊರಗೆ ಬಲಭಾಗದಲ್ಲಿ ಹೈಗುಳಿ ದೈವದ ಎರಡು ಮಣೆಮಂಚವಿದೆ. ಬ್ರಹ್ಮಗುಡಿಯ ಎಡಭಾಗದಲ್ಲಿ ಗದ್ದಿಗೆಯಲ್ಲಿ ಪಂಜುರ್ಲಿಯ ಕಂಚಿನ ಮುಖಮೂರ್ತಿ, ಹಾಗೂ ಪರಿವಾರ ದೈವಗಳ ಮೂರು ಮಣೆಮಂಚಗಳಿವೆ.
ಪಕ್ಕದಲ್ಲಿ ಮೈಂದಾಳ್ತಿ ಹಾಗೂ ಮಗುವಿನ ಮರದ ಮೂರ್ತಿ, ಚಿಕ್ಕಮ್ಮ ಪರಿವಾರ ದೈವಗಳ ಎರಡು ಮಣೆಮಂಚ, ಚಿಕ್ಕಮ್ಮ, ಜೋಗಿಪುರುಷ, ಚೌಂಡಿಯ ಮರದ ಮೂರ್ತಿಗಳು, ಗುರುಕಂಭ, ಚೌಂಡಿ ಪರಿವಾರ ದೈವಗಳ ಎರಡು ಮಣೆಮಂಚಗಳಿವೆ.
ಗರೋಡಿಯ ದ್ವಾರದ ಎರಡು ಬದಿಗಳಲ್ಲಿ ಬಾಗಿಲ ಬೊಬ್ಬರ್ಯನ ಎರಡು ಮರದ ಮೂರ್ತಿಗಳಿವೆ.
ಗರೋಡಿಯ ಎದುರಿನ ಗುಡಿಯಲ್ಲಿ ಶಿವರಾಯ, ಬಂಟರ ಮರದ ಮೂರ್ತಿಗಳಿವೆ. ಈ ಮೂರ್ತಿಗಳ ಹಿಂದೆ ವನದುರ್ಗಾದೇವಿಯ ಮರದ ಹಲಗೆಯ ಮೇಲೆ ಬಿಡಿಸಿದ ವನದುರ್ಗಾದೇವಿಯ ಚಿತ್ರಣವಿದೆ.
ಗರೋಡಿಯ ಎಡಭಾಗದಲ್ಲಿರುವ ಶಿಲಾಮಯ ಗುಡಿಯಲ್ಲಿ ಕಲ್ಕುಡ, ಹಾಗೂ ಕಾಳಮ್ಮ ದೈವಗಳ ಕಂಚಿನ ಮೂರ್ತಿಗಳಿಗೆ ಪೂಜೆ ನಡೆಯುತ್ತದೆ.
ಗರೋಡಿಯ ಆವರಣದಲ್ಲಿ ಕ್ಷೇತ್ರಪಾಲ ದೈವದ ಕಲ್ಲಿನ ಕಂಬ, ತುಳಸೀಕಟ್ಟೆ, ಮೂರು ಬಲಿಕಲ್ಲುಗಳಿವೆ. ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ನಾಗಬನವಿದೆ.
ರವಿ ಪೂಜಾರಿ (55 ವರ್ಷ) ಇವರು ಗರೋಡಿಯ ಅರ್ಚಕರಾಗಿರುವರು. ಇವರ ಮೊದಲು ರಘು ಪೂಜಾರಿ, ವೆಂಕಟಯ್ಯ ಪೂಜಾರಿ, ಮಂಜಯ್ಯ ಪೂಜಾರಿ, ಕುರುಡ ಪೂಜಾರಿಯವರು ಅರ್ಚಕರಾಗಿ ಈ ಗರೋಡಿಯ ಸೇವೆ ಮಾಡಿದ್ದರು.

ರಘು ಪೂಜಾರಿ

ರಘು ಪೂಜಾರಿ (63 ವರ್ಷ) ಹಾಗೂ ಕೃಷ್ಣ ಪೂಜಾರಿ (60 ವರ್ಷ) ಇವರು ಈ ಗರೋಡಿಯ ಬೈದರ ದರ್ಶನದ ಸ್ಥಳ ಪಾತ್ರಿಗಳು. ಇವರ ಮೊದಲು ವೆಂಕಟಯ್ಯ ಪೂಜಾರಿ, ಬಚ್ಚ ಪೂಜಾರಿಯವರು ಈ ಸೇವೆ ಮಾಡಿದ್ದರು.
ಯೆಡ್ತರೆ ಮನೆ ಗೌತಮ ಹೆಗ್ಡೆಯವರು ಗರೋಡಿಯ ಮೊಕ್ತೇಸರರಾಗಿದ್ದಾರೆ. ಇವರ ಮೊದಲು ವೈ,ಎಸ್. ಹೆಗ್ಡೆ, ವಿಠಲ ಹೆಗ್ಡೆ, ಮಂಜಯ್ಯ ಹೆಗ್ಡೆಯವರು ಇಲ್ಲಿ ಮೊಕ್ತೇಸರರಾಗಿದ್ದರು.
ಗರೋಡಿಯ ಉಸ್ತುವಾರಿಗೆ ಆಡಳಿತ ಸಮಿತಿಯಿದ್ದು ಗೌತಮ ಹೆಗ್ಡೆಯವರು ಅಧ್ಯಕ್ಷರಾಗಿ, ಗರೋಡಿಮನೆ ಜಗದೀಶ ಪೂಜಾರಿಯವರು ಕಾರ್ಯದರ್ಶಿಯಾಗಿ, ಪ್ರಮೋದ್ ಪೂಜಾರಿಯವರು ಕೋಶಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗರೊಡಿಯಲ್ಲಿ ನಿತ್ಯ ಪೂಜೆ, ಸಂಕ್ರಾಂತಿ ಪೂಜೆ (ಪೆರ್ಡೂರು), ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹಸಿರುವಾಣಿ ಪೂಜೆ, ಕದಿರುಕಟ್ಟುವುದು, ಅಷ್ಟಮಿಯಂದು ಆರ್ಘ್ಯ ಬಿಟ್ಟು ಮರುದಿನ ಅಗೆಲು ಸೇವೆ, ಡಿಸೆಂಬರ್ ತಿಂಗಳಲ್ಲಿ ಅಗೆಲು ಸೇವೆ, ಹಾಲುಹಬ್ಬ, ತುಲಾಭಾರ ಸೇವೆ, ಏಪ್ರಿಲ್ ತಿಂಗಳಲ್ಲಿ ಅಗೆಲು ಸೇವೆ, ಮೂರು ವರ್ಷಕ್ಕೊಮ್ಮೆ ನೇಮೋತ್ಸವ, ಜೋಗಿಪುರುಷ, ಮೈಂದಾಳ್ತಿ, ಹಾಗೂ ಶಿವರಾಯ ಕೋಲ, ಕಲ್ಕುಡ, ಪಂಜುರ್ಲಿ, ಕಾಳಮ್ಮ ಕೋಲ ನಡೆಯುತ್ತದೆ.
ಹೊಸಾಳ ಗ್ರಾಮ, ಕಚ್ಚೂರು, ಹಾಲೆಕೊಡೆ, ಹನೆಹಳ್ಳಿ, ಮೂಡುತೋಟ, ಕೂರಾಡಿ, ನೀಲಾವರ, ಯಡ್ತಾಡಿ, ಬಂಡಿಮಠ, ನಾಗರಮಠ, ನಲ್ಕುದ್ರು ಊರುಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರುತ್ತವೆ. ಈ ಕೂಡುಕಟ್ಟಿನ ಜನರು ತುಲಾಭಾರ ಸೇವೆ, ಮದುವೆ ಮುಂತಾದ ಶುಭಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ. ಊರಜನರ ವಂತಿಗೆಯಿಂದ ಗರೋಡಿಯ ಕಾರ್ಯಕ್ರಮಗಳ ಖರ್ಚುವೆಚ್ಚವನ್ನು ಭರಿಸಲಾಗುತ್ತದೆ.
ಗರೋಡಿಗೆ ಸಂಬಂಧಪಟ್ಟ 33 ಸೆಂಟ್ಸ ಜಾಗವು ಗರೋಡಿಯ ಹೆಸರಿನಲ್ಲಿದೆ. 1981ರಲ್ಲಿ ಜೀರ್ಣೋದ್ಧಾರಗೊಂದ ನಂತರ 26ನೇ ಮೇ 2022ರಲ್ಲಿ ಜೀರ್ಣೋದ್ಧಾರಗೊಂಡಿದೆ.
ನರಸಿಂಹ ಪರವ ಚೇರ್ಕಾಡಿ ಇವರು ಈ ಗರೋಡಿಯ ನೃತ್ಯವಿಶಾರದರಾಗಿ, ಗಣೇಶ ಮಡಿವಾಳ, ಹೊಸಾಳ ಇವರು ಮಡಿವಾಳರಾಗಿ, ರಾಮ ದೇವಾಡಿಗ ಹೊಸಾಳ ಇವರು ವಾದ್ಯದವರಾಗಿ, ಸುರೇಶ ಹೊಸಾಳ ಇವರು ಡೋಲಿನವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಹೊಸಾಳ, ಬಾರ್ಕೂರು,
ಬಾರ್ಕೂರು ಅಂಚೆ,
ಬ್ರಹ್ಮಾವರ ತಾಲೂಕು,
ಉಡುಪಿ 576210.

ಪಾತ್ರಿ:

ರಘು ಪೂಜಾರಿ – 9980052990.

ಮೊಕ್ತೇಸರರು:

ಗೌತಮ ಹೆಗ್ಡೆ: – 9611018893.

ಮಾಹಿತಿ ನೀಡಿದವರು :

ರಘು ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

02.01.2025

Shree Brahma Baidarkala Garodi Belthadi, Kadur

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಬೆಳ್ತಾಡಿ ಕಾಡೂರು

ಉಡುಪಿಯಿಂದ ಬ್ರಹ್ಮಾವರ – ಹೆಬ್ರಿ ರಸ್ತೆಯಲ್ಲಿ ಸಾಗಿ ಕುಂಜಾಲಿನ ನಂತರ ನೀಲಾವರ ದೇವಸ್ಥಾನದ ರಸ್ತೆಯಲ್ಲಿ ಮುಂದುವರಿದು ಕುರಾಡಿಯ ನಂತರ ಕಾಡೂರು ತಲುಪಿ ಕಾಡಿನ ನಡುವಿನ ಮಣ್ಣಿನ ರಸ್ತೆಯಲ್ಲಿ ಸುಮಾರು 1 ಕಿ.ಮೀ ಸಾಗಿದರೆ ಬೆಳ್ತಾಡಿ ಗರೋಡಿ ಸಿದುವುದು.
ಇದು ಆಯದ ಗರೋಡಿಯಾಗಿದ್ದು ಪೂರ್ವಾಭಿಮುಖವಾದ ದ್ವಾರವಿದೆ. ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಬ್ರಹ್ಮಗುಡಿಯೊಳಗೆ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿ ಇದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆ ಇದೆ.
ಗುಂಡದ ಎಡಭಾಗದಲ್ಲಿ ದೇಯಿಬೈದೆತಿ ಹಾಗೂ ಕಿನ್ನಿದಾರುವಿನ ಮಣೆಮಂಚ, ಕೋಟಿಚೆನ್ನಯರ ಹಾಗೂ ಇಬ್ಬರು ಮಕ್ಕಳ ಮರದ ಮೂರ್ತಿ ಇದೆ.
ಗುಂಡದ ಬಲಭಾಗದಲ್ಲಿ ಕುದುರೆಯ ಮೇಲೆ ಕುಳಿತ ಬಲ್ಲಾಳರ ಹಾಗೂ ಕುಜುಂಬ ಕಾಂಜವ ಮತ್ತು ಇಬ್ಬರು ಮಕ್ಕಳ ಮರದ ಮೂರ್ತಿ ಹಾಗೂ ಚಾಮುಂಡೇಶ್ವರಿಯ ಮಣೆಮಂಚವಿದೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಕಲ್ಕುಡ ಹಾಗೂ ಹೈಗುಳಿ ಮಣೆಮಂಚಗಳಿವೆ. ಬ್ರಹ್ಮಗುಡಿಯ ಹೊರಗೆ ಎಡಭಾಗದಲ್ಲಿ ಪಂಜುರ್ಲಿ ಮಣೆಮಂಚ, ಉಳಿದ ಆರು ಮಣೆಮಂಚಗಳಲ್ಲಿ ಪರಿವಾರ ದೈವಗಳು, ಮಾಯಂದಾಳ್ ಮತ್ತು ಮಗುವಿನ ಮರದ ಮೂರ್ತಿಗಳೂ ಇವೆ.
ಬ್ರಹ್ಮಗುಡಿಯ ಎದುರಿಗೆ ಚಿಕ್ಕುವಿನ ಮರದ ಮೂರ್ತಿ ಹಾಗೂ ಗುರುಕಂಭವಿದೆ. ಹಾಗೂ ಜೋಗಿಪುರುಷರ ಮರದ ಮೂರ್ತಿಗಳೂ ಇವೆ.
ಗರೋಡಿಯ ಪಕ್ಕದಲ್ಲಿರುವ ಇನ್ನೊಂದು ಗುಡಿಯಲ್ಲಿ ಮಲಸಾವರ ಮತ್ತು ಪರಿವಾರ ದೈವಗಳ ಸಾನಿಧ್ಯವಿದೆ.

ಸಂತೋಷ ಪೂಜಾರಿ

2021 ರಿಂದ ಸಂತೋಷ ಪೂಜಾರಿ (41 ವರ್ಷ) ಇವರು ಇಲ್ಲಿಯ ಅರ್ಚಕರಾಗಿದ್ದಾರೆ. ಇವರ ಮೊದಲು ಜಬ್ಬ ಪೂಜಾರಿ, ಸಂಕು ಪೂಜಾರಿ, ಕೂಸ ಪೂಜಾರಿ ಇವರು ಇಲ್ಲಿಯ ಅರ್ಚಕರಾಗಿದ್ದರು.
ಮಹಾಬಲ ಪೂಜಾರಿ (62 ವರ್ಷ) ಇವರು ಇಲ್ಲಿಯ ಬೈದರ ದರ್ಶನದ ಸ್ಥಳ ಪಾತ್ರಿ. ಹಿಂದೆ ತಿಮ್ಮ ಪೂಜಾರಿ ಹಾಗೂ ಸುಬ್ಬ ಪೂಜಾರಿ ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಸತೀಶ್ ಶೆಟ್ಟಿ ಇವರು ಗರೋಡಿಯ ಮೊಕ್ತೇಸರರು. ಇವರ ಮೊದಲು ಸಂಜೀವ ಹೆಗ್ಡೆಯವರು ಮೊಕ್ತೇಸರರಾಗಿದ್ದರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ (ಪೆರ್ಡೂರು), ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರುಕಟ್ಟುವುದು, ಡಿಸೆಂಬರ್ ತಿಂಗಳಲ್ಲಿ ಒಂದು ದಿನ ಊರಿನವರಿಂದ ಅಗೆಲು ಸೇವೆ, ಮರುದಿನ ಹಾಲುಹಬ್ಬ, ಹಾಗೂ ಮೊಕ್ತೇಸರರಿಂದ ಅಗೆಲು ಸೇವೆ ನಡೆಯುತ್ತದೆ. ಅಷ್ಟಮಿಯ ಮೂರನೇ ದಿನ ಅಗೆಲು ಸೇವೆ ಮೊಕ್ತೇಸರರಿಂದ ನಡೆಯುತ್ತದೆ. ಪುನ: ಏಪ್ರಿಲ್ ತಿಂಗಳ 16ನೇ ತಾರೀಖಿನಂದು ಅಗೆಲು ಸೇವೆ, 17ಕ್ಕೆ ಬೈದೇರುಗಳ ನೇಮ, ಶಿವರಾಯ ಕೋಲ, ಮಾಯಂದಾಳ್ ಕೋಲ ಜೋಗಿಪುರುಷ ಕೋಲ ನಡೆಯುತ್ತದೆ.
ಹೆಗ್ಗುಂಜೆ, ಕಾಡೂರು, ನಡೂರು, ಮುಂಡಾಡಿ, ಮಂದಾರ್ತಿ, ಕೊತ್ತೂರು, ಬೆಳ್ತಾಡಿ ಗ್ರಾಮದ ಜನರು ಈ ಗರೋಡಿಗೆ ಸೇವೆ ಸಲ್ಲಿಸುತ್ತಾರೆ. ಇಲ್ಲಿ ಮದುವೆ ಮುಂತಾದ ಶುಭಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವಗಳಲ್ಲಿ ಊರಜನರು ಭಾಗವಹಿಸುತ್ತಾರೆ.
ಗರೋಡಿಗೆ ಸಂಬಂಧಪಟ್ಟ 36ಸೆಂಟ್ಸ ಜಾಗವಿದೆ. ಊರಜನರ ವಂತಿಗೆ, ಕಾಣಿಕೆಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
2013 ರಲ್ಲಿ ಜೀರ್ಣೋದ್ದಾರಗೊಂಡ ಈ ಗರೋಡಿಯನ್ನು 2025-26ರಲ್ಲಿ ಜೀರ್ಣೋದ್ಧಾರಗೊಳಿಸುವ ಯೋಜನೆಯಿದೆ.
ನರಸಿಂಹ ಪರವ ಚೇರ್ಕಾಡಿ ಮತ್ತು ಸಂಘಡಿಗರು ಈ ಗರೋಡಿಯ ನೃತ್ಯವಿಶಾರದರಾಗಿ, ಬಾಬು ಮಡಿವಾಳ, ಕಾಡೂರು ಇವರು ಮಡಿವಾಳರಾಗಿ, ವಿಜೇತ ದೇವಡಿಗ ನೀಲಾವರ ಇವರು ವಾದ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಕಾಡೂರು, ಬೆಳ್ತಾಡಿ,
ಕಾಡೂರು ಗ್ರಾಮ ಮತ್ತು ಅಂಚೆ,
ಬ್ರಹ್ಮಾವರ ತಾಲೂಕು,
ಉಡುಪಿ ಜಿಲ್ಲೆ – 576234.

ಗರೋಡಿಯ ಅರ್ಚಕರು:

ಸಂತೋಷ ಪೂಜಾರಿ – 9482040719

ಮಾಹಿತಿ ನೀಡಿದವರು :

ಸಂತೋಷ ಪೂಜಾರಿ, ಅಶೋಕ್ ಶೆಟ್ಟಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

02.01.2025