Baidashree

Shree Brahma Baidarkala Garodi Hejamadi

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಹೆಜಮಾಡಿ

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ ಎನ್.ಎಚ್. 66ರಲ್ಲಿ ಪಡುಬಿದ್ರಿ ದಾಟಿ ಹೆಜಮಾಡಿ ಟೋಲ್ ಗೇಟಿಗಿಂತ ಸುಮಾರು 1/2ಕಿ.ಮೀ. ಮೊದಲು ರಸ್ತೆಯ ಎಡಭಾಗದಲ್ಲಿದೆ ಈ ಗರೋಡಿ.
ಇದು ಆಯದ ಗರೋಡಿಯಾಗಿದ್ದು ಮುಖ್ಯ ದ್ವಾರವು ಬಡಗು ದಿಕ್ಕಿಗೆ ಇದ್ದು ಪೂರ್ವ ದಿಕ್ಕಿಗೆ ಇನ್ನೊಂದು ದ್ವಾರವಿದೆ. ಷಡಾಧಾರ ಪ್ರತಿಷ್ಠೆಯೂ ಆಗಿದೆ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ಪಂಚಲೋಹದ ಬೆಳ್ಳಿ ಮುಚ್ಚಿದ ಅಶ್ವಾ ರೂಢ ಬ್ರಹ್ಮರ ಮೂರ್ತಿ ಇದೆ. ಗುಂಡದ ಮಧ್ಯದ ಅಂತಸ್ತಿನಲ್ಲಿ ಗಾಳಿ ದೇವರಿಗೆ ಹಾಗೂ ಮೇಲಂತಸ್ಥಿನಲ್ಲಿ ಗರುಡ ದೇವರಿಗೆ ಕೂಚಿ ಹಾಗೂ ದೀಪವನ್ನಿಟ್ಟು ಆರಾಧನೆ ಇದೆ. ಗುಂಡದ ಬಲಭಾಗದಲ್ಲಿ ಕುಜುಂಬ ಕಾಂಜವ ಮತ್ತು ಮಗುವಿನ ಪಾಪೆ, ಜೋಗಿ ಪುರುಷ ಹಾಗೂ ಒಕ್ಕು ಬಲ್ಲಾಳರಿಗೆ ಮಣೆ ಮಂಚವಿದೆ. ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯ ಮತ್ತು ಇಬ್ಬರು ಮಕ್ಕಳ ಮರದ ಪಾಪೆಯಿದೆ. ಬ್ರಹ್ಮ ಗುಡಿಯ ಹೊರಗೆ ಚಾವಡಿಯಲ್ಲಿ ಮಣೆ ಮಂಚದಲ್ಲಿ ಪಿಲ್ಚಂಡಿಯ ಕಂಚಿಯ ಮುಖ ಹಾಗೂ ಮಾಯಂದಾಲ್ ಮತ್ತು ಮಗುವಿನ ಮರದ ಪಾಪೆಗಳಿವೆ. ಗರಡಿಯೊಳಗೆ ಗುರುಕಭಕ್ಕೂ ಪೂಜೆ ನಡೆಯುತ್ತದೆ.
ಗರೋಡಿಯ ಆವರಣದ ಒಳಗೆ ತುಳಸೀಕಟ್ಟೆ, ಅಯ್ಯಕಲ್ಲು, ಕ್ಷೇತ್ರಪಾಲ ದೈವದ ಕಲ್ಲಿನ ಚಿಟ್ಟೆ, ರಕ್ತೇಶ್ವರಿ ಗುಡಿ, ಜಾರಂದಾಯ ಹಾಗೂ ಬಂಟರ ಗುಡಿ, ಜುಮಾದಿ ಸಾನಗಳಿವೆ. ಗರೋಡಿಯ ಪರಿಸರದಲ್ಲೇ ಗರೋಡಿಗೆ ಸಂಬಂಧಪಟ್ಟ ನಾಗಬನವೂ ಇದೆ.

ಗುರುರಾಜ ಪೂಜಾರಿ

2020ರಿಂದ ಗುರುರಾಜ ಪೂಜಾರಿಯವರು ಪೂ ಪೂಜನಯ ಸೇವೆ ಮಾಡುತ್ತಿದ್ದಾರೆ. ಇವರಿಗೆ ಮೊದಲು ಇವರ ತಂದೆ ಸೀನ ಪೂಜಾರಿ, ಅವರಿಗೆ ಮೊದಲು ಅಜ್ಜ ಸೋಮಯ್ಯ ಪೂಜಾರಿಯವರು ಈ ಸೇವೆ ಮಾಡಿದ್ದರು. ಗರೋಡಿಯಲ್ಲಿ ಬೈದರ ದರ್ಶನಕ್ಕೆ ಸ್ಥಳ ಪಾತ್ರಿಗಳಿಲ್ಲ. ಗರಡಿಯ ಆಡಳಿತವನ್ನು ಬಿಲ್ಲಬ ಸಂಘ ಹೆಜಮಾಡಿ ನೋಡಿ ಕೊಳ್ಳುತ್ತಿದ್ದು, ಪ್ರಸ್ತುತ ಮೋಹನದಾಸ ಹೆಜಮಡಿ ಇವರು ಅಧ್ಯಕ್ಷರಾಗಿದ್ದಾರೆ.

ಗರೋಡಿಯಲ್ಲಿ ನಿತ್ಯ ಪೂಜೆ, ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, (ಸೂಡ), ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರುಕಟ್ಟುವುದು, ಸೋಣದ ಅಗೆಲು, ಎಳ್ಳಮವಾಸೆಯ ನಾಲ್ಕನೇ ದಿನ ಅಗೆಲು ಸೇವೆ, ಐದನೇ ದಿನ ಜೋಗಿ ಪುರುಷ ಕೋಲ, ಆರನೇ ದಿನ ಮಾಯಂದಾಲ್ ನೇಮ, ಹಾಗೂ ಜುಮಾದಿ ತಂಬಿಲಗಳು ನಡೆಯುತ್ತವೆ.

ಹೆಜಮಾಡಿ ಗ್ರಾಮದ ಸುಮಾರು 600 ಮನೆಗಳು ಈ ಗರೋಡಿಯ ಕೂಡುಕಟ್ಟಿಗೆ, ಸೇರಿದ್ದು ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ನಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ ಮುಂತಾದ ಸಾಂಪ್ರದಾಯಿಕ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ.

ಗರೋಡಿಯ ಹೆಸರಿನಲ್ಲಿ 44 ಸೆಂಟ್ಸ ಜಾಗವಿದೆ. ಸ್ಥಿರ ಆದಾಯ ಇಲ್ಲದಿರುವುದರಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚವನ್ನು ಊರವರ ವರಡ ವಂತಿಗೆ, ಕಾಣಿಕೆ, ದೇಣಿಗೆಗಳಿಂದ ಭರಿಸಲಾಗುತ್ತದೆ.

2012ರಲ್ಲಿ ಗರೋಡಿಯಲ್ಲಿ ಬ್ರಹ್ಮ ಕಲಶೋತ್ಸವ ನಡೆದಿದೆ.

ಬೊಗ್ಗು ಪರವ ಮೂಡುಬೆಳ್ಳೆ ಇವರು ಗರೋಡಿಯ ನೃತ್ಯ ವಿಶಾರದರಾಗಿ, ಕರುಣಾಕರ ಮಡಿವಾಳ, ಹೆಜಮಾಡಿ ಇವರು ಮಡಿವಾಳರಾಗಿ, ಹಿದಾಯತುಲ್ಲ ಎರ್ಮಾಳು ಇವರು ವಾಧ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಹೆಜಮಾಡಿ,
ಹೆಜಮಾಡಿ ಅಂಚೆ,
ಕಾಪು ತಾಲೂಕು.- 574103
ಗುರುರಾಜ ಪೂಜಾರಿ ಮೊಬೈಲ್: 9945166869.

ಮಾಹಿತಿ ಸಂಗ್ರಹಿಸಿದ ದಿನಾಂಕ:

26-11-2024

Kannangaar Shree Brahma Baidarkala Garodi, Padubidri

ಕಣ್ಣಂಗಾರು ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಪಡುಬಿದ್ರಿ

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿಎನ್‌.ಎಚ್. 66ರಲ್ಲಿ ಪಡುಬಿದ್ರಿ ತಲುಪಿ, ಪಡುಬಿದ್ರಿಯಿಂದ ಮುಲ್ಕಿ ಕಡೆಗೆ ಮತ್ತೆ ಸುಮಾರು 2ಕಿ.ಮೀ. ಸಾಗಿದಾಗ ಹೆದ್ದಾರಿಯ ಬಲಬದಿಯಲ್ಲಿ ಕಣ್ಣಂಗಾರು ಗರೋಡಿಯಿದೆ.
ಇದೊಂದು ಆಯದ ಗರೋಡಿಯಾಗಿದ್ದು, ಮುಖ್ಯದ್ವಾರವು ಬಡಗು ಮುಖವಾಗಿಯೂ ಇನ್ನೊಂದು ದ್ವಾರವು ಪೂರ್ವಾಭಿಮುಖವಾಗಿಯೂ ಇದೆ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ಅಶ್ವಾರೂಢ ಬ್ರಹ್ಮರ ಪಂಚಲೋಹದ ಮೂರ್ತಿ ಇದೆ. ಬೆಳ್ಳಿಯ ಮೂರ್ತಿಯೂ ಇದೆ. ಗುಂಡದ ಮೇಲಿನ ಅಂತಸ್ಧಿನಲ್ಲಿ ಗಾಳಿ ದೇವರಿಗೆ ಮಣೆ ಹಾಗೂ ಕೂಚಿಯಿಟ್ಟು ಆರಾಧನೆ ಇದೆ
ಗುಂಡದ ಎಡಭಾಗದಲ್ಲಿ ಮಣೆ ಮಂಚದಲ್ಲಿ ಕೋಟಿಚೆನ್ನಯರು ಬಲಭಾಗದಲ್ಲಿ ಕುಜುಂಬ ಕಾಂಜವ ಹಾಗೂ ಕೊಡಮಣಿತ್ತಾಯ ಆರಾಧನೆಯಿದೆ.
ಬ್ರಹ್ಮ ಗುಡಿಯ ಹೊರಗೆ ಬಲಭಾಗದಲ್ಲಿ ಮಣೆ ಮಂಚದಲ್ಲಿ ಜೋಗಿ ಪುರುಷ, ಜುಮಾದಿ, ಹಾಗೂ ಮಾಯಂದಾಲ್ ಮತ್ತು ಮಗುವಿನ ಮರದ ಪಾಪೆಗಳಿಗೆ ಪೂಜೆ ನಡೆಯುತ್ತದೆ.
ಬ್ರಹ್ಮಗುಡಿಯ ಎದುರಿಗೆ ಗುರುಕಂಭಕ್ಕೆ ಪೂಜೆ ನಡೆಯುತ್ತದೆ.
ಗರೋಡಿಯ ಆವರಣದಲ್ಲಿ ಜಾರಂದಾಯ ದೈವದ ಗುಡಿಯಲ್ಲಿ ಮಣೆ ಮಂಚದಲ್ಲಿ ಕ್ಷೇತ್ರಪಾಲ ಹಾಗೂ ರಕ್ತೇಶ್ವರಿ ದೈವಗಳಿಗೆ ಕಲ್ಲಿನ ಕಟ್ಟೆಯಲ್ಲಿ ಆರಾಧನೆಯಿದೆ.
ತುಳಸೀಕಟ್ಟೆ ಹಾಗೂ ಅಯ್ಯಕಲ್ಲು, ಅರಸುಗಳು ನೇಮೋತ್ಸವದಂದು ಕುಳಿತುಕೊಳ್ಳುವ ಕಟ್ಟೆಗಳಿವೆ. ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ನಾಗಬನವೂ ಇದೆ.

ಗಿರಿಧರ ಅಂಚನ್

ಕನ್ನಂಗಾರು ಗರಡಿ ಮನೆ ಗಿರಿಧರ ಅಂಚನ್ (56 ವರ್ಷ ಪ್ರಾಯ) ಇವರು ಪೂ ಪೂಜನೆಯವರಾಗಿದ್ದಾರೆ. ಹಿಂದೆ ಚಂದಪ್ಪ ಪೂಜಾರಿ, ಕೂಕ್ರ ಪೂಜಾರಿಯವರು ಈ ಸೇವೆ ಮಾಡಿದ್ದರು.

ಗರೋಡಿಯಲ್ಲಿ ಈಗ ಬೈದ್ಯರ ದರ್ಶನಕ್ಕೆ ಸ್ಧಳ ಪಾತ್ರಿಗಳಿಲ್ಲ.

ಗರೋಡಿಯಲ್ಲಿ ನಿತ್ಯ ದೀಪ ಇಡುವ ಕ್ರಮ ಇದೆ. ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ (ಸೂಡ) ಚೌತಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಎಳ್ಯಮಾವಾಸೆಯ ಎರಡು ದಿನ ಮೊದಲು ಅಗೆಲು ಸೇವೆ, ಮರುದಿನ ಬೈದೇರುಗಳ ನೇಮ, ಜೋಗಿಪುರುಷರ ಕೋಲ ನಡೆದು ಎಳ್ಳಮಾವಾಸ್ಯೆಯ ದಿನ ಮಾಯಂದಾಲ್ ಕೋಲ ನಡೆಯುತ್ತದೆ. ಪಡುಬಿದ್ರಿ ಗ್ರಾಮದ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದವರಾಗಿ ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ.

ಗರೋಡಿಗೆ ಆಡಳಿತ ಸಮಿತಿಯಿದ್ದು, ಶೀನ ಪೂಜಾರಿಯವರು ಅಧ್ಯಕ್ಷರಾಗಿಯೂ, ರವಿ ಪೂಜಾರಿಯು ಕಾರ್ಯದರ್ಶಿಯಾಗಿಯೂ, ಶ್ರೀಧರ್ ಅಂಚನ್ ಇವರು ಕೋಶಾಧಿಕಾರಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಗರೋಡಿಯು 04-03-2014ರಲ್ಲಿ ಜೀರ್ಣೋದ್ಧಾರವಾಗಿದೆ.

ಸಂತೋಷ ಪರವ ನೀರೆಬೈಲೂರು ಈ ಗರೋಡಿಯ ನೃತ್ಯವಿಶಾದರಾಗಿದ್ದಾರೆ. ಶರತ್ ಮಡಿವಾಳ ಹೆಜಮಾಡಿ ಇವರು ಮಡಿವಾಳರಾಗಿಯೂ, ನಜೀರ್ ಎರ್ಮಾಳ್ ತೆಂಕ ಇವರು ವಾದ್ಯದವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಕಣ್ಣಂಗಾರು ಶ್ರೀ ಬ್ರಹ್ಮ ಬೈದರ್ಕಳ ಗರೋಡಿ,
ಪಡುಬಿದ್ರಿ ಅಂಚೆ, ಕಾಪು ತಾಲೂಕು, ಉಡುಪಿ 574111.

ಪೂ ಪೂಜನೆಯವರ ವಿಳಾಸ:

ಗಿರಿಧರ ಅಂಚನ್,
ಕಣ್ಣಂಗಾರು ಗರೋಡಿ ಮನೆ,
ಪಡುಬಿದ್ರಿ ಅಂಚೆ ಕಾಪು ತಾಲೂಕು,
ಉಡುಪಿ 574111.
ಮೊಬೈಲ್: 9880051876.

ಆಡಳಿತ ಸಮಿತಿ:

ಶೀನ ಪೂಜಾರಿ,
ಅಧ್ಯಕ್ಷರು, ಕಣ್ಣಂಗಾರು ಗರೋಡಿ ಆಡಳಿತ ಸಮಿತಿ,
ಪಡುಬಿದ್ರಿ ಅಂಚೆ, ಕಾಪು ತಾಲೂಕು,
ಉಡುಪಿ 574111.
ಮೊಬೈಲ್: 9845478932.

ಮಾಹಿತಿ ಸಂಗ್ರಹಿಸಿದ ದಿನಾಂಕ:

26-11-2024

Shree Brahma Baidarkala Garodi Kolachur

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕೊಳಚ್ಚೂರು

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ ಎನ್‌ಎಚ್ 66ರಲ್ಲಿ ಪಡುಬಿದ್ರಿ – ಕಾರ್ಕಳ ರಸ್ತೆಯಲ್ಲಿ ಸುಮಾರು 3.5 ಕಿ.ಮೀ. ಸಾಗಿದಾಗ ರೈಲ್ವೇ ಬ್ರಿಡ್ಜ ನಂತರ ಎಡಕ್ಕೆ ತಿರುಗಿ ಸುಮಾರು 1 ಕಿ.ಮೀ. ಸಾಗಿದರೆ ರೈಲ್ವೆ ಟ್ರಾಕಿನ ಹತ್ತಿರ ಕೊಳಚ್ಚೂರು ಗರೋಡಿ ಇದೆ.
ಇದು ಆಯದ ಗರೋಡಿಯಾಗಿದ್ದು, ಮೂರು ದ್ವಾರಗಳಿವೆ. ಮುಖ್ಯ ದ್ವಾರವು ದಕ್ಷಿಣಕ್ಕೂ ಇನ್ನೆರಡು ದ್ವಾರಗಳು ಪೂರ್ವ ಹಾಗೂ ಉತ್ತರಕ್ಕೆ ಇವೆ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ಅಶ್ವಾರೂಢ ಬ್ರಹ್ಮರ ಬೆಳ್ಳಿಯ ಮೂರ್ತಿ ಇದೆ. ಗುಂಡದ ಮೇಲಂತತ್ತಿನಲ್ಲಿ ಗಾಳಿದೇವರ ಆರಾಧನೆಯಿದೆ. ಗುಂಡದ ಬಲಭಾಗದಲ್ಲಿ ಜುಮಾದಿ, ಒಕ್ಕು ಬಲ್ಲಾಳ ಹಾಗೂ ಕುಜುಂಬ ಕಾಂಜವರ ಮಣೆ ಮಂಚವಿದೆ. ಗುಂಡದ ಎಡಭಾಗದಲ್ಲಿ ಮಣೆ ಮಂಚದಲ್ಲಿ ಕೋಟಿಚೆನ್ನಯರ ಬೆಳ್ಳಿಯ ಮೂರ್ತಿ ಇದೆ.
ಬ್ರಹ್ಮ ಗುಡಿಯ ಹೊರಗೆ ಬಲಭಾಗದಲ್ಲಿ ಮಾಯಂದಾಲ್ ಮತ್ತು ಮಗುವಿನ ಮರದ ಪಾಪೆ ಹಾಗೂ ಹಿರಿಯರ ಮಣೆ ಮಂಚವಿದೆ.
ಗರೋಡಿಯಲ್ಲಿ ಗುರು ಕಂಬಕ್ಕೆ ಪೂಜೆ ನಡೆಯುತ್ತದೆ.

ಗರೋಡಿಯ ಆವರಣದೊಳಗೆ ಪಿಲ್ಚಂಡಿ ದೈವದ ಗುಡಿಯೊಳಗೆ ಮಣೆ ಮಂಚದಲ್ಲಿ ಪಿಲ್ಚಂಡಿಯ ಆರಾಧನೆಯಿದೆ. ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ನಾಗಬನವೊಂದಿದೆ.

ಪೂ ಪೂಜನೆ ಸೇವೆ ಮಾಡುತ್ತಿದ್ದ ಗರೋಡಿ ಮನೆ ಕುಟ್ಟಿ ಪೂಜಾರಿಯವರು ಇತ್ತೀಚೆಗೆ ತೀರಿ ಕೊಂಡಿದ್ದು ಪೂ ಪೂಜನೆಯ ಪೂಜಾರಿಯ ನೇಮಕವಾಗಲಿಲ್ಲ. ಸದ್ಯ ಎಲ್ಲೂರು ಗರೋಡಿಯ ಕರುಣಾಕರ ಪೂಜಾರಿಯವರು ಪೂ ಪೂಜನೆ ಮಾಡುತ್ತಿದ್ದಾರೆ. ಕುಟ್ಟಿ ಪೂಜಾರಿಯವರಿಗೆ ಮೊದಲು ಸೇಸು ಪೂಜಾರಿ, ಕುಡ್ಡು ಪೂಜಾರಿಯವರು ಈ ಸೇವೆ ಮಾಡುತ್ತಿದ್ದರು.

ಗರೋಡಿಗೆ ಆಡಳಿತ ಸಮಿತಿಯಿದ್ದು ಕೃಷ್ಣ ಅಂಚನ್ ಉಳ್ಳೂರು ಇವರು ಅಧ್ಯಕ್ಷರಾಗಿಯೂ ದಾಮೋದರ ಬಿ. ಕೋಟ್ಯಾನ್, ಪಾದೆಬೆಟ್ಟು ಇವರು ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತದ್ದಾರೆ.

ಸದ್ಯ ಈ ಗರೋಡಿಯಲ್ಲಿ ಬೈದ್ಯರ ದರ್ಶನಕ್ಕೆ ಸ್ಥಳ ಪಾತ್ರಿಗಳಿಲ್ಲ. ಹಿಂದೆ ಹಿರಿಯರಾದ ಕುಡ್ಡು ಪೂಜಾರಿ, ಗುರುವ ಪೂಜಾರಿ ಸ್ಥಳ ಪಾತ್ರಿಗಳಾಗಿದ್ದರು.

ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ (ಸೂಡ) ಚೌತಿ ಪೂಜೆ, ಹೂವಿನ ಪೂಜೆ, ಕದಿರುಕಟ್ಟುವುದು, ಮಕರದ ಹುಣ್ಣಿಮೆಯಂದು ಗರಡಿ ಪ್ರವೇಶ ಮರುದಿನ ಅಗೆಲು ಸೇವೆ, ನಂತರದ ದಿನ ಬೈದೇರುಗಳ ನಮೋತ್ಸವ, ಜೋಗಿಪುರುಷರ ಕೋಲ, ಅದರ ಮರುದಿನ ಮಾಯಂದಾಲ್ ದೈವದ ಕೋಲ ಸೇವೆ ನಡೆಯುತ್ತದೆ.

ಕೊಳಚ್ಚೂರು, ಉಳ್ಳೂರು, ಕೇಮುಂಡೇಲು, ಸಜೆ ಗ್ರಾಮಗಳಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದವರಾಗಿದ್ದು ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭಗಳಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ, ಮುಂತಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಗರೋಡಿಯ ಎಲ್ಲಾ ಕಾರ್ಯಕ್ರಮಗಳ ಖರ್ಚು ವೆಚ್ಚವನ್ನು ಊರ ಪರವೂರ ಜನರ ವಂತಿಗೆ, ಕಾಣಿಕೆ, ದೇಣಿಗೆಗಳಿಂದ ಭರಿಸಲಾಗುತ್ತಿದೆ.

24-04-2003ರಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿದ್ದು ಹಿಂದೆ 1941ರಲ್ಲಿ ಜೀರ್ಣೋದ್ಧಾರಗೊಂಡಿತ್ತು.

ಬೊಗ್ಗು ಪರವ, ಮೂಡುಬೆಳ್ಳೆ ಮತ್ತು ಸಂಗಡಿಗರು ಗರೋಡಿಯ ನೃತ್ಯ ವಿಶಾರದರಾಗಿ, ರಮೇಶ್ ಮಡಿವಾಳ ಮುದರಂಗಡಿ ಇವರು ಮಡಿವಾಳರಾಗಿ, ಅಬ್ದುಲ್ ಕರೀಂ ಸಾಹೇಬ್ ಎಲ್ಲೂರು ಇವರು ವಾದ್ಯದವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕೊಳಚ್ಚೂರು,
ನಂದಿಕೂರು ಅಂಚೆ, ಕಾಪು ತಾಲೂಕು,
ಉಡುಪಿ 576111,
ದಾಮೋದರ ಬಿ.ಕೋಟ್ಯಾನ್ ಪಾದೆಬೆಟ್ಟು
ಮೊಬೈಲ್: 9880022901.

ಮಾಹಿತಿ ಸಂಗ್ರಹಿಸಿದ ದಿನಾಂಕ:

26-11-2024

Shree Dharmarasu Kodamanittaaua Garodi, Bommarabettu

ಶ್ರೀ ಧರ್ಮರಸು ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರೋಡಿ, ಬೊಮ್ಮರಬೆಟ್ಟು

ಉಡುಪಿಯಿಂದ ಹಿರಿಯಡಕಕ್ಕೆ ಬಂದು, ಹಿರಿಯಡ್ಕದಿಂದ ಬಸ್ತಿ ಮಾರ್ಗವಾಗಿ ಸುಮಾರು ೪ ಕಿ.ಮೀ. ಮುಂದೆ ಹೋದರೆ ಬೊಮ್ಮರಬೆಟ್ಟು ಗರೋಡಿ ಇದೆ.
ಉಡುಪಿ ಹಿರಿಯಡ್ಕ ಬೊಮ್ಮರಬೆಟ್ಟುವಿನಲ್ಲಿರುವ ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರೋಡಿಯು ಆಯದ ಗರೋಡಿಯಾಗಿದ್ದು, ಇದಕ್ಕೆ ಸುಮಾರು ಇನ್ನೂರು ಮೂನ್ನೂರು ವರ್ಷಗಳ ಇತಿಹಾಸವಿದೆಯೆಂದು ಹೇಳಲಾಗುತ್ತದೆ. ಷಡಾಧಾರ ಪ್ರತಿಷ್ಠೆಯಾದ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ, ಜೈನರ ಕಾಲದಲ್ಲಿ ಕೋಟಿಚೆನ್ನಯ್ಯರು ದೊಡ್ಡಕೆರೆ ಬೆಟ್ಟು ಬಿಲ್ಲವ ಯಜಮಾನರ ಬಳಿ ಬಂದು ಬೀಡಿಗೆ ಹೋಗುವ ದಾರಿ ತೋರಿಸಲು ಹೇಳುತ್ತಾರೆ. ತಾನು ಕೈಗೊಂಡ ಕೆಲಸ ಪೂರೈಸುವ ಅವಸರದಲ್ಲಿದ್ದ ಪೂಜಾರಿಯವರು ಬಂದವರಿಗೆ ಕುಳಿತು ಕೊಳ್ಳಲು ಹೇಳುತ್ತಾರೆ. ಕೋಟಿ ಚೆನ್ನಯ್ಯರು ಅದೃಶ್ಯರಾಗುತ್ತಾರೆ. ಹತ್ತಿರದ ಭಟ್ಟರ ಮನೆಗೆ ಹೋದಾಗ ಅಲ್ಲಿಯೂ ಅವರೂ ಸಕಾರಾತ್ಮಕವಾಗಿ ಸ್ಪಂದಿಸುವುದಿಲ್ಲ. ಮುಂದೆ ಅಂಗಡಿ ಬೆಟ್ಟು ಪೂಜಾರಿ ಯವರ ಮನೆಗೆ ತೆರಳುತ್ತಾರೆ. ತುಳಸಿ ಗಿಡಕ್ಕೆ ನೀರು ಹೊಯ್ಯುತ್ತಿದ್ದ ಪೂಜಾರಿಯವರು ಹೋಗುವ ಎಂದು ಹೇಳಿ ಬೀಡಿಗೆ ಕರೆದುಕೊಂಡು ಹೋಗುವರು. ದೂರದಲ್ಲೇ ಕಾಣುವ ಬೀಡನ್ನು ತೋರಿಸುತ್ತಾರೆ… ಅತ್ತ ಹೆಜ್ಜೆಯಿಟ್ಟ ಕೋಟಿ ಚೆನ್ನಯ್ಯರು ಇವರು ನೋಡುತ್ತಿದ್ದಂತೇ ಅದೃಶ್ಯರಾಗುತ್ತಾರೆ. ವಿಸ್ಮಯ ಗೊಂಡ ಪೂಜಾರಿಯವರು ಈ ವಿಷಯವನ್ನು ಬೀಡಿನ ಯಜಮಾನರಿಗೆ ತಿಳಿಸುತ್ತಾರೆ. ಅದೇ ದಿನ ರಾತ್ರಿ ಬೀಡಿನ ಯಜಮಾನರಿಗೆ ಕೋಟಿ ಚೆನ್ನಯ್ಯರು ಕನಸಿನಲ್ಲಿ ಬಂದು ನಿಶಾನೆಯಾಗಿ ಹತ್ತಿರದ ಪಾದೆಯಲ್ಲಿ ಸುರ್ಯ ಊರಿದ್ದೇವೆ. ಅಲ್ಲಿ ಗರೋಡಿ ಕಟ್ಟಿಸ ಬೇಕೆನ್ನುತ್ತಾರೆ. ಬೀಡಿನ ಯಜಮಾನರ ಆಣತಿಯಂತೆ ಇಲ್ಲಿನ ಐಂದ್ರಾಳ ಪಟ್ಟದ ಮಂದಿ ಮತ್ತು ಊರ ಹತ್ತು ಸಮಸ್ತರು ಸೇರಿ ಗರೋಡಿ ಕಟ್ಟುತ್ತಾರೆ.
ಕೋಟಿ ಚೆನ್ನಯ್ಯರು ಬೀಡಿನ ಯಜಮಾನರಿಗೆ ಕನಸಿನಲ್ಲಿ ಬಂದು ಹೇಳಿದ ಪಣೆ ಊರಿದ ಪಾದೆಯಲ್ಲಿ ಬಹುತೇಕ ವರ್ಷವಿಡೀ ನೀರು ಜಿನುಗುತ್ತದೆ. ಇಲ್ಲಿ ಕೋಟಿ ಚೆನ್ನಯ್ಯರ ಪಾದದ ಗುರುತುಗಳು ಇದೆ. ಗರೊಡಿಯಲ್ಲಿ ಏನೇ ಕೆಲಸ ಕಾರ್ಯಗಳಾಗಲಿ ಮೊದಲು ಈ ಸ್ಥಳದಲ್ಲಿ ದೀಪ ಇಡಲಾಗುವುದು. ಆವೇಶದಲ್ಲಿ ದರುಶನ ಪಾತ್ರಿಗಳು-ನೇಮ ಕಟ್ಟದ ಪರವರು ಇಲ್ಲಿಗೆ ಬಂದು ನೀರು ಜಿನುಗುವ ಸ್ಥಳದಲ್ಲಿ ದೀಪಕ್ಕೆ ಸುತ್ತು ಬಂದು ಹೋಗುವ ಪದ್ಧತಿ ಈಗಲೂ ಇದೆ. ಈ ಗರೋಡಿಗೆ ಅಗೆಲು- ನೇಮೋತ್ಸವದ ಸಂದರ್ಭ ನಿಗದಿತ ದಿನ ಮೂಡುಮಠ ಲಕ್ಷ್ಮೀ ಜನಾರ್ಧನ ದೇವರ ತೀರ್ಥ ಪ್ರಸಾದವನ್ನು ಅಲ್ಲಿನ ಅರ್ಚಕರು ತರುವ ವಾಡಿಕೆ ಈಗಲೂ ಇದೆ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಮೂರ್ತಿ, ಮೇಲೆ ಗಾಳಿದೇವರು, ಮಧ್ಯದಲ್ಲಿ ಕೆಳಗಿನ ದೇವರುಗಳಿಗೆ ಪೂಜೆ ಇದೆ
ಬ್ರಹ್ಮಗುಂಡದ ಎಡಕ್ಕೆ ಕೋಟಿಚೆನ್ನಯ್ಯರು ಮತ್ತು ಇಬ್ಬರು ಮಕ್ಕಳ ಮರದ ಪಾಪೆ ಇದೆ.
ಗುಂಡದ ಬಲಕ್ಕೆ ಒಕ್ಕು ಬಳ್ಳಾಲರು, ಕುಜುಂಬ ಕಾಂಜವ ಮತ್ತು ಒಬ್ಬ ಹುಡುಗನ ಮರದ ಪಾಪೆಗಳಿವೆ.
ಬ್ರಹ್ಮಗುಡಿಯ ಹೊರಗೆ ಮಾಯಂದಾಳ್ ಮತ್ತು ಮಗು (ಪಾಪೆಗಳು), ಜುಮಾದಿ-ಬಂಟ, ಜೋಗಿಪುರುಷ-ಪರಿವಾರ ದೈವ, ಹುಲಿಚಾಮುಂಡಿ-ಬಂಟ , ಮರ್ಲ್ ಭೂತ, ಬ್ರಾಂದಿಭೂತ, ಆಚಾರಿ ಮಂಚಗಳಿವೆ.
ಗರೋಡಿಯ ಆವರಣದಲ್ಲಿ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ ದೈವಗಳಗುಡಿ, ಆಯದ ಕಲ್ಲು, ಬೊಬ್ಬರ್ಯ ಮುಂಡಿಗೆ, ಹಲಸಿನ ಮರದ ಕಟ್ಟೆಯಲ್ಲಿ ಮಹಮ್ಮಾಯಿ ಸನ್ನಿಧಿಗಳಿವೆ.

ವಾಸು ಪೂಜಾರಿ

2007 ರಿಂದ ವಾಸು ಪೂಜಾರಿ (ಪ್ರಾಯ- 65), ಗರೋಡಿಮನೆ, ಇವರು ಪೂಪೂಜನೆಯ ಸೇವೆ ಮಾಡುತ್ತಿದ್ದಾರೆ. ಇವರ ಮೊದಲು : ವಿಠಲ ಪೂಜಾರಿ 1973-2007 ( ವಾಸು ಪೂಜಾರಿಯವರ ಮಾವ) ಕೋಟಿ ಪೂಜಾರಿ 1943-1973 (ವಿಠಲ ಪೂಜಾರಿಯವರ ಮಾವ) ಪೂವ ಪೂಜಾರಿ 1943 ರ ಮೊದಲು ( ಕೋಟಿ ಪೂಜಾರಿಯವರ ಮಾವ) ಈ ಸೇವೆ ಮಾಡಿದ್ದರು.
ಭವನ್ ಪೂಜಾರಿ ಮತ್ತು ಸದಾನಂದ ಪೂಜಾರಿಯವರು ಇಲ್ಲಿಯ ಬೈದರ ದರ್ಶನದ ಸ್ಥಳ ಪಾತ್ರಿಗಳು. ಇವರ ಮೊದಲು ಹಿರಿಯರಾದ ಬೊಗ್ಗು ಪೂಜಾರಿ, ಪೂವ ಪೂಜಾರಿ, ವೆಂಕಪ್ಪ ಪೂಜಾರಿ, ತನ್ಯ ಪೂಜಾರಿ, ಬೊಳ್ಳು ಪೂಜಾರಿ, ಅಪ್ಪು ಪೂಜಾರಿ, ರಾಮ ಪೂಜಾರಿ ಇವರುಗಳು ಈ ಸೇವೆ ಮಾಡಿದ್ದರು.
ಬೊಮ್ಮರಬೆಟ್ಟು ಬೀಡು ಮನೆತನದ ಯಜಮಾನರು ಈ ಗರೋಡಿಯ ಮೊಕ್ತೇಸರರು..
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಸೋಣ ಪೂರ್ತಿ ಒಂದು ತಿಂಗಳು ಹೂವಿನ ಪೂಜೆ, ಕದಿರು ಕಟ್ಟುವುದು, ಹರಕೆ ಗಜ್ಜೆಯಿ ಸೇವೆ ಇದೆ. ಅಗೆಲ್ ಅನ್ನ ನೈವೇದ್ಯ ಸೇವೆ, ಕಾಲಾವಧಿ ನೇಮೋತ್ಸವ ಮಾಯಿ ಹುಣ್ಣಿಮೆಯಂದು ಜರಗುತ್ತದೆ. ನೇಮೋತ್ಸವದ ಮರುದಿನ ಬೆಳಿಗ್ಗೆ ಮಾಯಂದಾಳ ನೇಮ, ಪರಿವಾರ ದೈವಗಳ ಕೋಲ ಕಟ್ಟು ಕಟ್ಟಳೆಯಾಗಿ ನಡೆಯುತ್ತದೆ. ಗರೋಡಿಯಲ್ಲಿ ಬೀಡು ಕುಟುಂಬದ ವತಿಯಿಂದ ಪ್ರತಿವರ್ಷ ತುಳಸಿ ಪೂಜೆ, ಕಂಬಳ ಹಾಗೂ ಅಗೆಲ್ ಅನ್ನ ನೈವೇದ್ಯ ಸೇವೆ, ಕೊಡಮಣಿತ್ತಾಯ ಕೋಲವಿದೆ, ಎರಡು ವರ್ಷಗಳಿಗೊಮ್ಮೆ ಬೈದರು ನೇಮ ನಡೆಯುತ್ತದೆ. ಹೊಸ ಭತ್ತದ ಅನ್ನ ನೈವೇದ್ಯ ಸೇವೆ ಗರೋಡಿಯಲ್ಲಿ ಜರಗದೆ ಊರಿನಲ್ಲಿ ಬೇರೆ ಯಾವುದೇ ಸಮಾರಂಭಗಳು ನಡೆಯುವುದಿಲ್ಲ. ಗರೋಡಿಯ ಅಂಗಣದಲ್ಲೇ ಮಹಮ್ಮಾಯಿ ಸನ್ನಿಧಾನ ಇರುವುದರಿಂದ ಮಾರಿ ಸೇವೆ ಇದೆ.
ಬೊಮ್ಮರಬೆಟ್ಟು, ಪಂಚನಬೆಟ್ಟು, ಕೈರಾಳಿ ಕೆರೆ, ಕೊಂಡಾಡಿ ಕೆರೆ, ಮಾಣ್ಯಾ ಕೆರೆ, ಮುಂಡುಜೆ ಊರುಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರುತ್ತವೆ. ಬೊಮ್ಮರ ಬೆಟ್ಟು ಕೂಡು ಕಟ್ಟಿನಲ್ಲಿ ಸುಮಾರು 400 ಮನೆಗಳಿವೆ. ಕೂಡುಕಟ್ಟಿನ ಮಂದಿ ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭಗಳಲ್ಲಿ ಜೋಡುಕಾಯಿ ಕಾಣಿಕೆ ತೆಗೆದಿಡುವುದು. ಹೆರಿಗೆ ನಂತರದ ತಿಂಗೊಳ್ ಮಾಡಿಸುವ ಕ್ರಮ, ಕಲಶ ಕಟ್ಟಿ ಶುದ್ಧ ಹೋಮ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ.
ಜಗ್ಗುಪರವ ದೊಂಡೇರಂಗಡಿ ಇವರು ಈ ಗರೋಡಿಯ ನೃತ್ಯ ವಿಷರಾದರು. ಇವರ ಮೊದಲು ಪಿಜಿನ ಪರವ, ಉಗ್ಗಪ್ಪ ಪರವ, ಮೆಣ್ಕ ಪರವ, ಬೂಬ ಪರವ, ಅಮ್ಮು ಪರವ, ಗುಡ್ಡ ಪರವ, ನರಂಗ ಪರವ, ಬಾಬು ಪರವ, ಚಲ್ಲ ಪರವ, ದೇವು ಪರವ ಇವರು ಈ ಸೇವೆ ಮಾಡಿದ್ದರು.
ಗರೋಡಿಯ ಜೀಣೋದ್ಧಾರದ ವಿವರ.
1944- ಜೀಣೋದ್ಧಾರ ಬೈ ಹುಲ್ಲಿನ ಮಾಡು ತೆಗೆದು ಹಂಚಿನ ಹೊದಿಕೆ
1978- ಜೀಣೋದ್ಧಾರ- ಬ್ರಹ್ಮಕಲಶ.
1996- ಸಂಪೂರ್ಣ ಜೀಣೋದ್ಧಾರ – ಬ್ರಹ್ಮಕಲಶ
2008- ಬ್ರಹ್ಮಕಲಶ

ಗರೋಡಿಯ ವಿಳಾಸ :

ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರೋಡಿ ಬೊಮ್ಮರ ಬೆಟ್ಟು,
ಅಂಚೆ ಹಿರಿಯಡ್ಕ,
ಉಡುಪಿ ತಾಲೂಕು & ಜಿಲ್ಲೆ – 576113

ಪೂಪೂಜನೆಯವರ ವಿಳಾಸ:

ವಾಸು ಪೂಜಾರಿ ಗರೋಡಿಮನೆ, ಅಂಗಡಿಬೆಟ್ಟು,
ಬೊಮ್ಮರಬೆಟ್ಟು, ಹಿರಿಯಡ್ಕ ಅಂಚೆ,
ಉಡುಪಿ-576113
ದೂರವಾಣಿ-9740689657

ಮಾಹಿತಿ ಸಂಗ್ರಹಿಸಿದ ದಿನಾಂಕ:

15-07-2022

Shree Brahma Baidarkala Garodi, Adve

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಅಡ್ವೆ

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ ಎನ್‌ಎಚ್ 66ರ ಮೂಲಕ ಪಡುಬಿದ್ರಿ ತಲುಪಿ, ಪಡುಬಿದ್ರಿ ಕಾರ್ಕಳ ರಸ್ತೆಗೆ ಎಡಕ್ಕೆ ತಿರುಗಿ ಸುಮಾರು 5.28ಕಿ.ಮೀ. ಸಾಗಿದಾಗ ರಸ್ತೆಯ ಬಲಬದಿಯಲ್ಲಿದೆ ಅಡ್ವೆ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ.
ಇದು ಆಯದ ಗರೋಡಿಯಾಗಿದ್ದು 3 ದ್ವಾರಗಳಿವೆ. ಮುಖ್ಯದ್ವಾರ ಪೂರ್ವಾಭಿಮುಖವಾಗಿದ್ದು ಪಶ್ಚಿಮ ಮತ್ತು ಉತ್ತರ ದಿಕ್ಕಿಗೆ ಉಳಿದೆರಡು ದ್ವಾರಗಳಿದ್ದು ಷಡಾಧಾರ ಪ್ರತಿಷ್ಠೆಯನ್ನು ಹೊಂದಿದೆ.
ಆಟಿ ತಿಂಗಳಲ್ಲಿ ಅಗೆಲು ಸೇವೆ ನಡೆಯುವ ಆರು ಗರೋಡಿಗಳಲ್ಲಿ ಇದೂ ಒಂದು. ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ ಕೋಟಿಚೆನ್ನಯರು ಅಡ್ಡೆಯ ಚೆಕ್ ಪಾದೆಯಲ್ಲಿ ಮೂಡ್ರಗುತ್ತಿನ ಯಜಮಾನರನ್ನು ಕರೆದಾಗ ಅವರು ಅಸಡ್ಡೆ ತೋರಿಸಿ ತಾನು ಬರದೆ ಮನೆ ಹೆಂಗಸರನ್ನು ಕಳುಹಿಸಿದ್ದರಿಂದ ಆ ಮನೆಯಲ್ಲಿ ಹೆಣ್ಣು ಸಂತಾನವೇ ಆಗುವಂತೆ ಶಾಪಗ್ರಸ್ತವಾಯಿತಂತೆ. ಆ ರಾತ್ರಿ ಯಜಮಾನನ ಕನಸಿನಲ್ಲಿ ಬಂದು ಕೋಟಿಚೆನ್ನಯರು ಆದೇಶವಿತ್ತಂತೆ ತೆಂಗಿನ ಕಾಯಿ ಹಾರಿಸಿ ಅದು ಬಿದ್ದ ಜಾಗದಲ್ಲಿ ಗರೋಡಿ ಕಟ್ಟುವಂತೆ ನಿರ್ಧರಿಸಲಾಯಿತು. ಆದರೆ ತೆಂಗಿನ ಕಾಯಿ ಬಿದ್ದ ಸ್ಥಳದಲ್ಲಿ 101 ನಾಗನ ಕಲ್ಲುಗಳಿದ್ದವು. 101 ಕಲ್ಲುಗಳಲ್ಲಿ 100 ಕಲ್ಲುಗಳನ್ನು ಗರೋಡಿಯ ಬ್ರಹ್ಮಗುಂಡದ ಅಡಿಯಲ್ಲಿರುವ ಬಾವಿಗೆ ಹಾಕಿ, ಉಳಿದ ಒಂದು ಕಲ್ಲನ್ನು ಹಾರಿಸಲಾಗಿ ಅದು ಬಿದ್ದ ಸ್ಥಳದಲ್ಲಿ ನಾಗಬನ ಸ್ಥಾಪಿಸಿ ಗರೋಡಿ ಕಟ್ಟಲಾಯಿತು. ಇಂದಿಗೂ ಆ ನಾಗ ಬನದಲ್ಲಿ ಒಂದೇ ನಾಗನ ಕಲ್ಲು ಇದ್ದು ಹೆಚ್ಚಿಗೆ ಕಲ್ಲು ಹಾಕುವಂತಿಲ್ಲ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ಬಂಗಾರ ಮುಚ್ಚಿದ ಪಂಚ ಲೋಹದ ಬಂಗಾರದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆ ಇದೆ.
ಗುಂಡದ ಎಡಭಾಗದಲ್ಲಿ ಮಣೆ ಮಂಚದಲ್ಲಿ ಕೋಟಿಚೆನ್ನಯರ ಹಾಗೂ ಜೋಗಿಪರುಷರ ಆರಾಧನೆಯಿದೆ
ಗುಂಡದ ಬಲಭಾಗದಲ್ಲಿ ಮಣೆ ಮಂಚದಲ್ಲಿ ಒಕ್ಕು ಬಲ್ಲಾಳ, ಕುಜುಂಬ ಕಾಂಜವರ ಆರಾಧನೆಯಿದೆ,
ಬ್ರಹ್ಮ ಗುಡಿಯ ಹೊರಗೆ ಮಣೆ ಮಂಚದಲ್ಲಿ ಪಿಲ್ಚಂಡಿ ಹಾಗೂ ಮಾಯಂದಾಲ್ ದೈವಗಳಿಗೆ ಪೂಜೆ ಸಲ್ಲುತ್ತದೆ.
ಬ್ರಹ್ಮಗುಡಿಯ ಎದುರಿಗೆ ಗುರುಕಂಭಕ್ಕೆ ಪೂಜೆ ನಡೆಯುತ್ತದೆ.
ಗರೋಡಿಯ ಆವರಣದೊಳಗೆ ಅಯ್ಯಕಲ್ಲು, ತುಳಸೀಕಟ್ಟಗಳಿವೆ. ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ನಾಗಬನ ಹಾಗೂ ಬ್ರಹ್ಮ ಸ್ಥಾನಗಳಿವೆ.

ರಾಮ ದಾದು ಪೂಜಾರಿ

ಸದಾನಂದ ಯಾನೆ ಪಕ್ಕು ಪೂಜಾರಿ

ರಾಮ ದಾದು ಪೂಜಾರಿ(72 ವರ್ಷ) ಇವರು ಗರೋಡಿಮನೆ ಮುಖ್ಯಸ್ಥರು. ಗರೋಡಿ ಮನೆಯ ಸದಾನಂದ ಯಾನೆ ಪಕ್ಕು ಪೂಜಾರಿ ಇವರು ಪೂ ಪೂಜನೆಯವರು. ಇವರಿಗೆ ಮೊದಲು ರಾಮ ದಾದು ಪೂಜಾರಿಯವರು ಪೂ ಪೂಜನೆ ಸೇವೆ ಮಾಡಿದ್ದು ಅವರಿಗೂ ಮೊದಲು ಹಿರಿಯರಾದ ರಾಘು ಪೂಜಾರಿ, ತೆನ್ನಯ ಪೂಜಾರಿ, ಸೇವೆ ಮಾಡಿದ್ದರು.

ಬೈದ್ಯರ ದರ್ಶನದ ಸ್ಥಳ ಪಾತ್ರಿಗಳು ಸದ್ಯ ಈ ಗರೋಡಿಯಲ್ಲಿ ಇಲ್ಲ. ಹಿಂದೆ ಚೆನ್ನು ಪೂಜಾರಿಯವರು ದರ್ಶನದ ಸ್ಥಳ ಪಾತ್ರಿಗಳಾಗಿದ್ದರು.

ಗರೋಡಿಗೆ ಸೇವಾ ಸಮಿತಿಯಿದ್ದು ಸುಂದರ ಸುವರ್ಣ ಇವರು ಅಧ್ಯಕ್ಷರಾಗಿಯೂ, ನವೀನ್ಚಂದ್ರ ಸುವರ್ಣ ಇವರು ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಪಲಿಮಾರು, ನಂದಿಕೂರು, ಅವರಾರು ಪೊಯ್ಯ ಹಾಗೂ ಅಡ್ಡೆ ಗ್ರಾಮಗಳ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದ್ದು ನೀರು ಸ್ನಾನ, ಕಂಚಿಲ್ ಸೇವೆ, ಮದುವೆ, ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ, ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಊರ ಜನರ ವರಡ ವಂತಿಗೆ, ಕಾಣಿಕೆ, ದೇಣಿಗೆಗಳಿಂದ ಕಾರ್ಯಕ್ರಮಗಳ ವೆಚ್ಚವನ್ನು ಭರಿಸಲಾಗುವುದು.

20-05-1998ರಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿದ್ದು 1960ರಲ್ಲಿಯೂ ಜೀರ್ಣೋದ್ಧಾರವಾಗಿತ್ತು.

ಚೇರ್ಕಾಡಿ ನರಸಿಂಹ ಪರವ ಸಂಗಡಿಗರು, ನೃತ್ಯ ವಿಶಾರದರಾಗಿ, ಅನಿಲ್ ಮಡಿವಾಳ, ಇವರು ಮಡಿವಾಳರಾಗಿ, ಅಬ್ದುಲ್ ಕರೀಂ ಸಾಹೇಬ್ ಎಲ್ಲೂರು ಇವರು ವಾದ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯಲ್ಲಿ ಶ್ರೀ ಬ್ರಹ್ಮ ಬೈದರ್ಕಳ ಅಡ್ವೆ ಗರೋಡಿ ಭಜನಾ ಮಂಡಳಿ ಕಾರ್ಯನಿರ್ವಹಿಸುತ್ತಿದ್ದು ಪ್ರತೀ ಶನಿವಾರ ಭಜನೆ, ಪೂಜೆಗಳು ನಡೆಯುತ್ತವೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಗರಡಿ ಅಡ್ವೆ,
ನಂದಿಕೂರು ಅಂಚೆ, ಕಾಪು ತಾಲೂಕು,
ಉಡುಪಿ 574111.

ಗರೋಡಿ ಮನೆ ವಿಳಾಸ:

‘’ಬೈದಶ್ರೀ ”ಅಡ್ವೆ,
ನಂದಿಕೂರು ಅಂಚೆ,
ಕಾಪು ತಾಲೂಕು,
ಉಡುಪಿ 574111.
ಮೊಬೈಲ್: ರಾಮದಾದು ಪೂಜಾರಿ – 9902212950
ಮೊಬೈಲ್: ಸದಾನಂದ ಪೂಜಾರಿ – 9980947120

ಮಾಹಿತಿ ಸಂಗ್ರಹಿಸಿದ ದಿನಾಂಕ:

26-11-2024

Shree Brahma Baidarkala Sandudaanti Garodi, Yermal Tenka

ಶ್ರೀ ಬ್ರಹ್ಮ ಬೈದೆರ್ಕಳ ಸಂದುದಾಂತಿ ಗರೋಡಿ, ಎರ್ಮಾಳ್ ತೆಂಕ

ಉಡುಪಿಯಿಂದ ಮಂಗಳೂರು ಕಡೆಗೆ ರಾಷ್ಟ್ರೀಯ ಹೆದ್ದಾರಿ ಎನ್.ಎಚ್.66ರಲ್ಲಿ ಎರ್ಮಾಳಿನಲ್ಲಿ ಹೆದ್ದಾರಿಯ ಎಡಭಾಗದಲ್ಲಿದೆ.
ಈ ಗರೋಡಿಯು ಆಯದ ಗರೋಡಿಯಾಗಿದೆ. ಈ ಗರೋಡಿಗೆ ಎರಡು ದ್ವಾರಗಳಿದ್ದು ಮುಖ್ಯ ದ್ವಾರವು ಪಶ್ಚಿಮಕ್ಕೂ ಇನ್ನೊಂದು ದ್ವಾರವು ಪೂರ್ವ ದಿಕ್ಕಿಗೂ ಇದೆ.
ಕೋಟಿಚೆನ್ನಯರ ಪಾಡ್ದನದಲ್ಲಿ ಉಲ್ಲೇಖಿಸಲ್ಪಟ್ಟಂತೆ 6 ಕಂಬಗಳೊಂದಿಗೆ ಸಂದು ಇಲ್ಲದ(ಸಂದುದಾಂತಿ) ಗರೊಡಿಯೆಂದು ಹೆಸರಾದ 18ನೇ ಶತಮಾನದ ಪ್ರಾಚೀನ ಗರಡಿ ಇದು.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ಬೆಳ್ಳಿಮುಚ್ಚಿದ ಪಂಚಲೋಹದ ಬ್ರಹ್ಮರ ಮೂರ್ತಿ ಇದೆ. ಗುಂಡದ ಮೇಲಂತಸ್ಥಿನಲ್ಲಿ ಗಾಳಿ ದೇವರ ಪಂಚಲೋಹದ ಮೂರ್ತಿಇದೆ. ಗುಂಡದ ಬಲಭಾಗದಲ್ಲಿ ಒಕ್ಕುಬಲ್ಲಾಳರು ಕುದುರೆಯ ಮೇಲೆ ಕುಳಿತ ಮರದ ಪಾಪೆ ಹಾಗೂ ಕುಜುಂಬ ಕಾಂಜವರ ನಿಂತ ಮರದ ಪಾಪೆ ಇದೆ. ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರ ಆಳೆತ್ತರದ ಮರದ ಪಾಪೆ ಇದೆ.
ಬ್ರಹ್ಮ ಗುಡಿಯ ಹೊರಗೆ ಜೋಗಿ ಪುರುಷರ ಮರದ ಪಾಪೆ, ಮಾಯಂದಾಲ್ ಹಾಗೂ ಮಗುವಿನ ಮರದ ಪಾಪೆಗಳಿವೆ. ಗರೋಡಿಯ ಒಳಗೆ ಗುರು ಕಂಬಕ್ಕೂ ಪೂಜೆ ಸಲ್ಲುತ್ತದೆ.
ಗರೋಡಿಯ ಹೊರಾಣಗಣದ ಗುಡಿಯಲ್ಲಿ ಮಣೆ ಮಂಚ ಹಾಗೂ ಪಿಲಿಚಂಡಿ ದೈವದ ಪ್ರತೀಕವಾಗಿ ಮರದ ಹುಲಿಯ ಪಾಪೆಯಿದೆ. ಹೊರಗೆ ಹುಲಿ ಬಂಡಿಯೂ ಇದೆ. ಅಯ್ಯಕಲ್ಲು ಹಾಗೂ ತುಳಸೀ ಕಟ್ಟೆಗಳೂ ಇವೆ. ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ನಾಗಬನವಿದೆ.

ವೈ. ಜಯಕರ ಪೂಜಾರಿ

ವೈ ಜಯಕರ ಪೂಜಾರಿ(87ವರ್ಷ)ಯವರು ಗರಡಿಮನೆ ಪೂ ಪೂಜನೆ ಪೂಜಾರಿಯವರಾಗಿದ್ದಾರೆ. ಹಿಂದೆ ಜಯಕರ ಪೂಜಾರಿಯವರ ಹಿರಿಯರಾದ ಗೋವಿಂದ ಪೂಜಾರಿ, ಚಿಂಗ ಪೂಜಾರಿ ಇವರುಗಳು ಪೂ ಪೂಜನೆ ಸೇವೆ ಮಾಡಿದ್ದರು.
ಗರೋಡಿಗೆ ಆಡಳಿತ ಸಮಿತಿಯಿದ್ದು ಸುಧೀರ್ ಕುಮಾರ್ ಇವರು ಅದ್ಯಕ್ಷರಾಗಿದ್ದಾರೆ. ಬೈದ್ಯರ ದರ್ಶನಕ್ಕೆ ಈ ಗರೋಡಿಯ ಸ್ಥಳಪಾತ್ರಿ ಸದ್ಯಕ್ಕೆ ಇಲ್ಲ. ಹಿಂದೆ ಹಿರಿಯರಾದ ಲಚ್ಚು ಪೂಜಾರಿಯವರು ಇಲ್ಲಿಯ ಸ್ಥಳಪಾತ್ರಿಗಳಾಗಿದ್ದರು.
ಗರೋಡಿಯಲ್ಲಿ ಸಂಕ್ರಾಂತಿ ಪೂಜೆ, ಚೌತಿ ಪೂಜೆ, ದೀಪಾವಳಿ ಪೂಜೆ, ಕದಿರು ಕಟ್ಟುವುದು, ಹೂವಿನ ಪೂಜೆಗಳು ನಡೆಯುತ್ತವೆ. ಏಪ್ರಿಲ್, ಮೇ, ತಿಂಗಳಲ್ಲಿ ಅಗೆಲು ಸೇವೆ, ಬೈದೇರುಗಳ ನೇಮೋತ್ಸವ, ಜೋಗಿಪುರುಷ, ಮಾಯಂದಾಲ್ ಹಾಗೂ ಪಿಲ್ಚಂಡಿ ದೈವಗಳಿಗೆ ಕೋಲ ಸೇವೆ ನಡೆಯುತ್ತದೆ
ತೆಂಕ ಎರ್ಮಾಳಿನ ಜನ ಈ ಗರೋಡಿಯ ಕೂಡುಕಟ್ಟಿಗೆ ಸೇರಿದವರಾಗಿದ್ದು, ನೀರುಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರನರ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
2022ನೇ ಇಸವಿಯಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿದ್ದು ಹಿಂದೆ 1936ರಲ್ಲಿ ಜೀರ್ಣೋದ್ಧಾರವಾಗಿತ್ತು.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಸಂದು ದಾಂತಿ ಗರೋಡಿ,
ಎರ್ಮಾಳ್ ತೆಂಕ, ಎರ್ಮಾಳ್ ಅಂಚೆ,
ಕಾಪು ತಾಲೂಕು, ಉಡುಪಿ 574119.

ಪೂಪೂಜನೆಯವರು:

ವೈ. ಜಯಕರ ಪೂಜಾರಿ,
ಜಯಚಂದ್ರ ನಿವಾಸ,
ಎರ್ಮಾಳ್ ತೆಂಕ, ಎರ್ಮಾಳ್ ಅಂಚೆ,
ಕಾಪು ತಾಲೂಕು, ಉಡುಪಿ 574119. ಮೊಬೈಲ್: 9900160673,
9900160675, ಪ್ರಶಾಂತ್ (ಮಗ)

ಮಾಹಿತಿ ಸಂಗ್ರಹಿಸಿದ ದಿನಾಂಕ:

26-11-2024

Shree Brahma Baidarkal Aadi Garodi Belapu-Paniyoor

ಶ್ರೀ ಬ್ರಹ್ಮ ಬೈದರ್ಕಳ ಆದಿಗರೋಡಿ ಬೆಳಪು - ಪಣಿಯೂರು

ಉಡುಪಿಯಿಂದ ಕಾಪು ಉಚ್ಚಿಲ ಮಾರ್ಗವಾಗಿ ಉಚ್ಚಿಲ ಮಹಾಲಕ್ಷಮಿ ದೇವಸ್ಥಾನದ ಹತ್ತಿರ ಎಡಕ್ಕೆ ತಿರುಗಿ ಪಣಿಯೂರು ರಸ್ತೆಯಲ್ಲಿ ಸುಮಾರು 3ಕಿ.ಮೀ. ಸಾಗಿದಾಗ ಪಣಿಯೂರು ಆದಿ ಗರೋಡಿ ಸಿಗುತ್ತದೆ.
ಇದು ಷಡಾಧಾರ ಪ್ರತಿಷ್ಠೆ ಇರುವ ಆಯದ ಗರೋಡಿಯಾಗಿದ್ದು ಮುಖ್ಯ ದ್ವಾರವು ಪೂರ್ವಾಭಿಮುಖವಾಗಿಯೂ ಇನ್ನೊಂದು ದ್ವಾರವು ಬಡಗು ದಿಕ್ಕಿಗೂ ಇದೆ. ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ ಇಲ್ಲಿ ಗರೋಡಿ ಇಲ್ಲದ ಸಮಯದಲ್ಲಿ ಎಲ್ಲೂರು ಗರೋಡಿಗೆ ಊರ ಜನರು ಅನ್ನ ನೈವೇದ್ಯದ ಸಮಯಕ್ಕೆ ಸರಿಯಾಗಿ ಹೋಗದೇ ಇದ್ದಾಗ ಬೈದೇರುಗಳ ವಾಗ್ದಾನದಂತೆ ಇಲ್ಲಿ ಗರೋಡಿ ಸ್ಥಾಪನೆಯಾಯಿತು.
ಗರೋಡಿಯ ಬ್ರಹ್ಮರ ಗುಡಿಯಲ್ಲಿ ಬ್ರಹ್ಮ ಗುಂಡದೊಳಗೆ ಕುದುರೆಯ ಮೇಲೆ ಕುಳಿತ ಬ್ರಹ್ಮರ ಪಂಚ ಲೋಹದ ಮೂರ್ತಿ, ಗುಂಡದ ಮೇಲಿನ ಅಂತಸ್ತಿನಲ್ಲಿ ಗಾಳಿದೇವರ ಪಂಚಲೋಹದ ಮೂರ್ತಿ ಇದೆ.
ಗುಂಡದ ಎಡಭಾಗದ ಮಣೆ ಮಂಚದಲ್ಲಿ ಕೋಟಿಚೆನ್ನಯರು ಹಾಗೂ ಜೋಗಿ ಪುರುಷರನ್ನು ಕಲಶವಿಟ್ಟು ಪೂಜಿಸುತ್ತಾರೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯ ಮಣೆ ಮಂಚದಲ್ಲಿ ಪಿಲ್ಚಂಡಿ ಹಾಗೂ ಎಡಭಾಗದ ಮಣೆ ಮಂಚದಲ್ಲಿ ಜಾರಂದಾಯ ಹಾಗೂ ಬಂಟರಿಗೆ ಆರಾಧನೆಯಿದೆ.
ಗರೋಡಿಯ ಹೊರಾಂಗಣದ ಗುಡಿಯಲ್ಲಿ ಮಾಯಂದಾಲ್ ಹಾಗೂಮಗುವಿನ ಮರದ ಪಾಪೆಗೆ ಪೂಜೆ ನಡೆಯುತ್ತದೆ.
ಗರೋಡಿಯ ಆವರಣದ ಒಳಗೆ ಅಯ್ಯಕಲ್ಲು, ತುಳಸೀಕಟ್ಟೆ ಹಾಗೂ 6ದೀಪದ ಕಂಬಗಳೂ ಇವೆ. ಗರೋಡಿಯ ಹತ್ತಿರದಲ್ಲಿ ಗರೋಡಿಗೆ ಸಂಬಂಧಪಟ್ಟ ನಾಗಬನವೂ ಇದೆ.

ಮಾಧವ ಪೂಜಾರಿ

ಜಗನ್ನಾಥ ಪೂಜಾರಿ

ಗರೋಡಿಮನೆ ಮಾಧವ ಪೂಜಾರಿ (70 ವರ್ಷ ಪ್ರಾಯ)ಇವರು ಪೂ ಪೂಜನೆಯವರಾಗಿದ್ದು, ಮೂಡುಮನೆ ಜಗನ್ನಾಥ ಪೂಜಾರಿ (70 ವರ್ಷ ಪ್ರಾಯ) ಎರಡನೇ ಪೂ ಪೂಜನೆಯವರಾಗಿದ್ದಾರೆ. ಇವರಿಗಿಂತ ಮೊದಲು ಕಾಂತ ಪೂಜಾರಿ, ರುಕ್ಕ ಪೂಜಾರಿ, ಕಿಟ್ಟ ಪೂಜಾರಿ ಹಾಗೂ ಪಣಿಯೂರು ಅಪ್ಪು ಪೂಜಾರಿ ಮೊದಲಾದ ಹಿರಿಯರು ಈ ಸೇವೆ ಮಾಡಿದ್ದರು. ಸದ್ಯ ಗರೋಡಿಯಲ್ಲಿ ಬೈದರ ದರ್ಶನಕ್ಕೆ ಸ್ಥಳ ಪಾತ್ರಿಗಳಿರುವುದಿಲ್ಲ.
ಬೆಳಪು ಹಾಗೂ ಪಣಿಯೂರು ಗ್ರಾಮದ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದ್ದಾರೆ. ಊರ ಜನರು ನೀರುಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ.
ಕಾಲಾವಧಿ ನೇಮೋತ್ಸವದ ಸಮಯದಲ್ಲಿ ಪೆರಾರ್ದೆ ಹುಣ್ಣಿಮೆಯ ಪಂಚಮಿಯಂದು ಅಗೆಲು ಸೇವೆ, (ಗರೋಡಿ ಮನೆಯವರಿಂದ) ಮರುದಿನ ಬೈದೇರುಗಳ ನೇಮೋತ್ಸವ, ಜೋಗಿಪುರುಷ, ಮಾಯಂದಾಲ್, ದೈವಗಳಿಗೆ ಕೋಲ ಸೇವೆ ಹಾಗೂ ಬಡಕರ ಗುತ್ತಿನವರಿಂದ ಶುದ್ಧದ ಅಗೆಲು ಸೇವೆ ನಡೆಯುತ್ತದೆ. ಈ ಎಲ್ಲಾ ಸೇವೆಗಳು ಆದಿ ಗರೋಡಿ ಹಾಗೂ ಹೊಸ ಗರೋಡಿಗಳಲ್ಲಿ ಒಂದೇ ದಿನ ನಡೆಯುತ್ತದೆ. ಆಟಿ ತಿಂಗಳ ಅಗೆಲ್ ಸೇವೆಯು ಊರವರ ವತಿಯಿಂದ ನಡೆಯುತ್ತದೆ. ಗರೋಡಿಯಲ್ಲಿ ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಹರಕೆಯ ಗಜ್ಜೆಯಿ ಸೇವೆ ಇತ್ಯಾದಿ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಈ ಎಲ್ಲಾ ಕಾರ್ಯಕ್ರಮಗಳು ಊರವರ ವಂತಿಗೆ, ಕಾಣಿಕೆ, ಸಹಾಯಧನದಲ್ಲಿ ನಡೆಯುತ್ತದೆ.
ಸದ್ಯ ಗರೋಡಿಯು ಜೀರ್ಣೋದ್ದಾರದ ಯೋಜನಾವಸ್ಥೆಯಲ್ಲಿದೆ. ಈ ಮೊದಲು 17-03-2009ರಲ್ಲಿ ಹೆಬ್ಬಾಗಿಲಿನ ಜೀರ್ಣೋದ್ಧಾರ 28-12-2007, 30-06-2002ರಲ್ಲಿ ಮಾಯಿಂದಾಲ್ ಗುಡಿ ಜೀರ್ಣೋದ್ಧಾರ ಹಾಗೂ 29-04-1955ರಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿದೆ.
ನಕ್ರೆಯ ವಿಠಲ ಪರವ ಮತ್ತು ಸಂಗಡಿಗರು ಈ ಗರೋಡಿಯ ನೃತ್ಯ ವಿಶಾರದರಾಗಿದ್ದು, ಶಶಿ ಮಡಿವಾಳ ಬೆಳಪು ಇವರು ಮಡಿವಾಳರಾಗಿಯೂ, ಲಚ್ಚು ಸೇರಿಗಾರ ಎಲ್ಲೂರು ಇವರು ವಾದ್ಯದವರಾಗಿಯೂ ಸೇವೆ ಮಾಡುತ್ತಿದ್ದಾರೆ.
ಗರೋಡಿಗೆ ಸಂಬಂಧಪಟ್ಟ “ ಆದಿಗರೋಡಿ ಜವನೆರೆ ಕೂಟ ‘’ ಎಂಬ ಯುವಕರ ಸಂಘ ಅಸ್ಥಿತ್ವದಲ್ಲಿದೆ. ನಾಗೇಶ ಪೂಜಾರಿ (9823658047) ಯವರು ಇದರ ಮುಖ್ಯಸ್ಥರಾಗಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಆದಿಗರೋಡಿ ಗ್ರಾಮ ಬೆಳಪು,
ಪಣಿಯೂರು ಅಂಚೆ, ಕಾಪು ತಾಲೂಕು,
ಉಡುಪಿ 574117.

ಪೂಪೂಜನೆಯವರು:

1. ಮಾದವ ಪೂಜಾರಿ,
ಗರಡಿಮನೆ ಆದಗರೋಡಿ, ಗ್ರಾಮ ಬೆಳಪು, ಪಣಿಯೂರು ಅಂಚೆ 574117.
ಮೊಬೈಲ್: 8073060616.
2. ಜಗನ್ನಾಥ ಪೂಜಾರಿ,
ಮೂಡುಮನೆ, ಬೆಳಪು ಗ್ರಾಮ,
ಪಣಿಯೂರು ಅಂಚೆ, 574117.
ಮೊಬೈಲ್: 7348858194.

ಮಾಹಿತಿ ಸಂಗ್ರಹಿಸಿದ ದಿನಾಂಕ:

26-11-2024

Shree Brahma Baidarkala Hosa Garodi, Paniyoor

ಶ್ರೀ ಬ್ರಹ್ಮ ಬೈದರ್ಕಳ ಹೊಸ ಗರೋಡಿ ಪಣಿಯೂರು

ಉಡುಪಿಯಿಂದ ಕಾಪು – ಉಚ್ಚಿಲ ಮಾರ್ಗವಾಗಿ, ಉಚ್ಚಿಲ ಮಹಾಲಕ್ಷಿ ದೇವಸ್ಥಾನದ ಹತ್ತಿರ ಎಡಕ್ಕೆ ತಿರುಗಿ ಪಣಿಯೂರು ರಸ್ತೆಯಲ್ಲಿ ಸುಮಾರು 3ಕಿ.ಮೀ. ಸಾಗಿದರೆ ಈ ಗರೋಡಿಯು ಸಿಗುವುದು.
ಪಣಿಯೂರು ಆದಿಗರೋಡಿಯಲ್ಲಿ ನಡೆದ ವಿವಾದವೊಂದರ ಪರಿಣಾಮ ವಿಭಜನೆಗೊಂಡು 1947ನೇ ಇಸವಿಯಲ್ಲಿ ಹತ್ತಿರದಲ್ಲಿಯೇ ಸ್ಥಾಪನೆಗೊಂಡ ಗರೋಡಿ ಇದು. ಇದೊಂದು ಆಯದ ಗರೋಡಿಯಾಗಿದ್ದು ಮುಖ್ಯ ದ್ವಾರವು ಪೂರ್ವಾಭಿಮುಖವಾಗಿಯೂ ಇನ್ನೊಂದು ದ್ವಾರವು ಬಡಗು ದಿಕ್ಕಿಗೂ ಇದೆ.
ಗರೋಡಿಯ ಬ್ರಹ್ಮರ ಗುಡಿಯ ಒಳಗೆ ಗುಂಡದಲ್ಲಿ ಪಂಚಲೋಹದ ಬೆಳ್ಳಿ ಮುಚ್ಚಿದ ಅಶ್ವಾರೂಢ ಬ್ರಹ್ಮರ ಮೂರ್ತಿ ಇದೆ. ಗುಂಡದ ಮೇಲಂತಸ್ಥಿನಲ್ಲಿ ಗಾಳಿದೇವರ ಪಂಚಲೋಹದ ಮೂರ್ತಿ ಇದೆ.
ಗುಂಡದ ಎಡಭಾಗದ ಮಣೆಮಂಚದಲ್ಲಿ ಕೋಟಿಚೆನ್ನಯರಿಗೆ ಕಲಶ ಇಟ್ಟು ಪೂಜಿಸುತ್ತಾರೆ.
ಗುಂಡದ ಬಲಭಾಗದಲ್ಲಿ ಮಣೆಮಂಚದಲ್ಲಿ ಒಕ್ಕುಬಲ್ಲಾಳ ಮತ್ತು ಕುಜುಂಬ ಕಾಂಜವ ಹಾಗೂ ಇನ್ನೆರಡು ಮಣೆಮಂಚಗಳ ಆರಾಧನೆ ಇದೆ.
ಬ್ರಹ್ಮಗುಡಿಯ ಹೊರಗೆ ಬಲಭಾಗದಲ್ಲಿ ಗಣಪತಿ ಹಾಗೂ ಮಣೆಮಂಚದಲ್ಲಿ ಜೋಗಿಪುರುಷರಿಗೂ, ಬಲಬದಿಯಲ್ಲಿ ಮಣೆಮಂಚದಲ್ಲಿ ಜಾರಂದಾಯ ಹಾಗೂ ಬಂಟ ದೈವಗಳಿಗೆ ಆರಾಧನೆ ಇದೆ.
ಗರೋಡಿಯ ಒಳಗೆ ಗುರುಕಂಬಕ್ಕೂ ಪೂಜೆ ನಡೆಯುತ್ತದೆ.
ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ಬ್ರಹ್ಮ ಸ್ಥಾನದಲ್ಲಿ ಪಂಚದೈವಗಳ ಸಾನಿಧ್ಯವಿದೆ.
ಇನ್ನೊಂದು ಸಣ್ಣ ಗುಡಿಯಲ್ಲಿ ಲೆಕ್ಕೆಸಿರಿದೈವ, ಅಯ್ಯಕಲ್ಲು ಹಾಗೂ ತುಳಸೀಕಟ್ಟೆಗಳಿವೆ.

ಶಿವ ಪೂಜಾರಿ

ಗರೋಡಿಮನೆ ಶಿವ ಪೂಜಾರಿ(65ವರ್ಷ) ಇವರು ಗರೋಡಿಯ ಪೂ ಪೂಜನೆಯವರಾಗಿದ್ದಾರೆ. ಹಿಂದೆ ಇವರ ಮಾವ ಚಂದು ಪೂಜಾರಿಯವರು ಪೂ ಪೂಜನೆಯವರಾಗಿದ್ದರು. ಚಂದು ಪೂಜಾರಿಯವರು ಇಲ್ಲಿಯ ದರ್ಶನ ಪಾತ್ರಿಯಾಗಿಯೂ ಇದ್ದರು. ಸದ್ಯ ಈ ಗರೋಡಿಯಲ್ಲಿ ಬೈದ್ಯರ ದರ್ಶನದ ಸ್ಥಳ ಪಾತ್ರಿ ಇಲ್ಲ.
ಪೆರಾರ್ದೆ ಹುಣ್ಣಿಮೆಯ ಪಂಚಮಿಯಂದು ಗರೋಡಿಯಲ್ಲಿ ಗರಡಿ ಮನೆಯವರಿಂದ ಅಗೆಲು ಸೇವೆ, ಮರುದಿನ ಬೈದೇರುಗಳ ನೇಮೋತ್ಸವ, ಮರುದಿನ ಜೋಗಿಪುರುಷ ಹಾಗೂ ಮಾಯಂದಾಲ್ ದೈವಗಳ ಕೋಲ ಸೇವೆ ಹಾಗೂ ಪಣಿಯೂರು ಗುತ್ತಿನವರಿಂದ ಶುದ್ಧದ ಅಗೆಲ್ ಸೇವೆ ನಡೆಯುತ್ತದೆ. ಪಣಿಯೂರು ಆದಿ ಗರೋಡಿಯಂತೆ ಈ ಗರೋಡಿಯಲ್ಲೂ ಆಟಿ ತಿಂಗಳ ಅಗೆಲ್ ಸೇವೆ ನಡೆಯುತ್ತದೆ.
ಬೆಳಪು ಹಾಗೂ ಪಣಿಯೂರು ಗ್ರಾಮದ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದ್ದಾರೆ. ಊರ ಜನರು ನೀರುಸ್ನಾನ, ಕಂಚಿಲ್ ಸೇವೆ ಮದುವೆ ಮುಂತಾದ ಶುಭ ಸಂಧರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ.
ಸಂತೋಷ ಪರವ ನೀರೆ ಬೈಲೂರು ಮತ್ತು ಸಂಘಟಿಗರು ಗರೋಡಿಯ ನೃತ್ಯ ವಿಶಾರದರಾಗಿ, ಭುಜಂಗ ಮಡಿವಾಳ, ಉದ್ಯಾವರ ಇವರು ಮಡಿವಾಳರಾಗಿ, ರಸೂಲ್ ಸಾಹೇಬ್ ಎಲ್ಲೂರು ಇವರು ವಾದ್ಯದವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಹೊಸಗರೋಡಿ,
ಬೆಳಪು ಗ್ರಾಮ, ಪಣಿಯೂರು ಅಂಚೆ,
ಕಾಪು ತಾಲೂಕು, ಉಡುಪಿ 574117.

ಪೂಪೂಜನೆಯವರು:

ಶಿವ ಪೂಜಾರಿ,
ಶ್ರೀ ಬ್ರಹ್ಮ ಬೈದರ್ಕಳ ಹೊಸ ಗರೋಡಿ ಮನೆ,
ಬೆಳಪು ಗ್ರಾಮ, ಪಣಿಯೂರು ಅಂಚೆ,
ಕಾಪು ತಾಲೂಕು, ಉಡುಪಿ 574117.
ಮೊಬೈಲ್: 7349420565.

ಮಾಹಿತಿ ಸಂಗ್ರಹಿಸಿದ ದಿನಾಂಕ:

26-11-2024

Pakkibettu Shree Brahma Baidarkala Garodi

ಪಕ್ಕಿಬೆಟ್ಟು ಶ್ರೀ ಬ್ರಹ್ಮ ಬೈದರ್ಕಳ ಗರೋಡಿ

ಉಡುಪಿಯಿಂದ ಕಲ್ಯಾಣಪುರ ಸಂತೆಕಟ್ಟೆ ಕಡವಿನ ಬಾಗಿಲು ರಸ್ತೆಯಲ್ಲಿ ಸುಮಾರು ಒಂದು ಕಿ.ಮೀ. ಸಾಗಿ ಬಲಕ್ಕೆ ತಿರುಗಿ ಕಾಡಿನ ರಸ್ತೆಯಲ್ಲಿ ಮುಂದುವರಿದು ಗರೋಡಿ ತಲುಪಬಹುದು. ಗರೋಡಿಯು ಪ್ರಕೃತಿ ರಮಣೀಯ ಸುವರ್ಣಾ ನದೀ ತಟದಲ್ಲಿದೆ.
ಇದು ಆಯದ ಗರೋಡಿಯಾಗಿದ್ದು ಇಲ್ಲಿ ಷಡಾಧಾರ ಪ್ರತಿಷ್ಠೆ ಆಗಿದೆ.
1983ರಿಂದ ಇಲ್ಲಿ ಶ್ರೀ ಮೋಹನ್ ಪೂಜಾರಿಯವರು ಪೂ ಪೂಜನೆದಾರರಾಗಿದ್ದಾರೆ. 1955ರಿಂದ 1983ರವರೆಗೆ ಮೋಹನ್ ಪೂಜಾರಿ ಅವರ ತಂದೆ ಅನಂತ ಪೂಜಾರಿ ಪೂ ಪೂಜನೆಯವರಾಗಿದ್ದರು. 1955ರ ಮೊದಲು ಅನಂತ ಪೂಜಾರಿ ಅವರ ಮಾವ ಪಿಜಿನ ಪೂಜಾರಿಯವರು ಪೂಜನೆಯವರಾಗಿದ್ದರು.
ಪಕ್ಕಿಬೆಟ್ಟು ಗರೋಡಿಯಲ್ಲಿ ಶ್ರೀ ಸತೀಶ್ ಪೂಜಾರಿ ಹಾಗೂ ಶಂಕರ ಪೂಜಾರಿ ಸ್ಥಳ ಪಾತ್ರಿಗಳಾಗಿದ್ದಾರೆ. ಇವರು ಸೇವೆಗೆ ಬರುವ ಮೊದಲು ಗುರುವ ಪೂಜಾರಿ ಹಾಗೂ ಚಂದು ಪೂಜಾರಿಯವರು ಸ್ಥಳ ಪಾತ್ರಿಗಳಾಗಿದ್ದರು
ಇಲ್ಲಿ ಆಡಳಿತ ಸಮಿತಿಯು ಗರೋಡಿಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತದೆ
ಸುಮಾರು 400 ವರ್ಷಗಳ ಹಿಂದೆ ಪಕ್ಕಿಬೆಟ್ಟು ಗರೋಡಿಯನ್ನು ಕಟ್ಟಲಾಗಿದೆ ಎಂದು ಹೇಳುತ್ತಾರೆ. ಗರೋಡಿಯ ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ, ಮೊದಲು ಇಲ್ಲಿ ಪಕ್ಕಿಬೆಟ್ಟು ಪಂಜುರ್ಲಿ ಸಾನ್ನಿಧ್ಯವಿತ್ತು. ಈ ಊರಿನಲ್ಲಿ ಒಂದು ಗರೋಡಿ ಸ್ಥಾಪಿಸಬೇಕು ಎಂದು ಇಲ್ಲಿಗೆ ಕೋಟಿ ಚೆನ್ನಯರು ಬಂದಿದ್ದರು. ಅವರು ಇಲ್ಲೇ ಹತ್ತಿರದ ವೀರಭದ್ರ ದೇವಸ್ಥಾನದ ಬಳಿಯ ಕಟ್ಟೆಯಲ್ಲಿ ಕುಳಿತು ಗೆಂದಾಳಿ ಸೀಯಾಳವನ್ನು ಕತ್ತಿಯಿಂದ ಕೆತ್ತುವಾಗ ಒಂದು ಕೆತ್ತೆ “ಪಂಜುರ್ಲಿ”ಮಹಿಮೆಯಿಂದ ಹಕ್ಕಿಯಂತೆ ಹಾರಿ ಬಂದು ಇಲ್ಲಿ ಬಿತ್ತು. ಅದನ್ನು ಕಂಡ ಹಿರಿಯರು ಇಲ್ಲೇ ಗರೋಡಿ ಕಟ್ಟಲು ನಿರ್ಧರಿಸಿದರು. ಈ ಗರೋಡಿಯಲ್ಲಿ ಪಂಜುರ್ಲಿಗೆ ವಿಶೇಷ ಸ್ಥಾನಮಾನವಿದೆ.
ಗುಂಡದ ಒಳಗೆ ಬ್ರಹ್ಮರಮೂರ್ತಿ, ಗಾಳಿ ದೇವರು. ಎಡಭಾಗದಲ್ಲಿ ಕೋಟಿ ಚೆನ್ನಯರ ಆಳೆತ್ತರದ ಪಾಪೆ, ಬಲಭಾಗದಲ್ಲಿ ಕುಜುಂಬ ಕಾಂಜವನ ಪಾಪೆ, ಮೈಸಂದಾಯ ಪಂಚಲೋಹದ ಮುಖ ಇದೆ. ಗುಂಡದ ಹೊರಗೆ ವಾಲಗ ಚಾವಡಿಯಲ್ಲಿ ಅಣ್ಣಪ್ಪ ಪಂಜುರ್ಲಿ ಮೂರ್ತಿ, ಕುಲತ ಜುಮಾದಿ ಮುಂಡಿಗೆ, ಮಾಯಂದಾಳ್ ಮತ್ತು ಮಗುವಿನ ಪಾಪೆ, ಕತ್ತರಿಮಂಚದಲ್ಲಿ ಕೊಡಂಗ ಪಂಜುರ್ಲಿ, ಗುರುಕಂಬ ಹಾಗೂ ಜೋಗಿ ಪುರುಷ ಪಾಪೆ ಇದೆ.
ಈ ಗರೋಡಿಯಲ್ಲಿ ನಿತ್ಯ ದೀಪ ಹಚ್ಚುತ್ತಾರೆ. ಆದಿತ್ಯವಾರ-ವಿಶೇಷ ಪೂಜೆ, ಮಂಗಳವಾರದ ಪೂಜೆ ಇದೆ. ಉಳಿದಂತೆ ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ದೀಪಕಂಬ ಇಟ್ಟು ಬಲಿಯೇಂದ್ರನನ್ನು ಕರೆಯುವ ಕ್ರಮ ಇದೆ. ಹೂವಿನ ಪೂಜೆ, ಕದಿರುಕಟ್ಟುವುದು, ಊರುಸೇರಿ ಗಜ್ಜೆಯಿ ಸೇವೆ ಇದೆ. ಅಗೆಲ್ ಸೇವೆ ಇದೆ. ನೇಮೋತ್ಸವ ಇದೆ. ಗರೋಡಿಯ ಹೊರಗೆ ಪಂಜುರ್ಲಿಗೆ ಭೋಗ ಇದೆ.
ಪಕ್ಕಿಬೆಟ್ಟು ಗರೋಡಿಯ ಕೂಡುಕಟ್ಟಿನಲ್ಲಿ ಸುಮಾರು 1400 ಮನೆಗಳಿವೆ. ಪಕ್ಕಿಬೆಟ್ಟು, ಕಡವಿನ ಬಾಗಿಲು, ಕೊಳಂಬೆ ಮೂಡುಬೆಟ್ಟು ಅರ್ಕಳಬೆಟ್ಟು, ಪುತ್ತೂರು, ನಯಂಪಳ್ಳಿ, ತೆಂಕು ನಯಂಪಳ್ಳಿ, ಮಾವಿನಕುದ್ರು ಹೀಗೆ ಒಂಭತ್ತು ಊರುಗಳಿವೆ. ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭಗಳಲ್ಲಿ ಜೋಡುಕಾಯಿ ಕಾಣಿಕೆ ತೆಗೆದಿಡುತ್ತಾರೆ. ಅಕ್ಕಿ, ತೆಂಗಿನಕಾಯಿ, ಸೀಯಾಳ, ಪಿಂಗಾರದಲ್ಲಿ ತುಲಾಭಾರ ನಡೆಸುವುದಿದೆ. ವಿಶೇಷ ಸಂದರ್ಭದಲ್ಲಿ ಕಲಶ ಕಟ್ಟಿ ಶುದ್ಧ ಮಾಡುವ ಕ್ರಮ ಇದೆ.
ಗರೋಡಿಯ ಹೊರಗೆ ಬಾಗಿಲ ಬೊಬ್ಬರ್ಯ ಮೂರ್ತಿ ಇದೆ. ಆವರಣದಲ್ಲಿ ತನ್ನಿಮಾನಿಗ, ಅಜಕಾಯಿ ಕಲ್ಲು, ನೀಚ ದೈವವಿದೆ. ಗರೋಡಿ ಎದುರಿನಲ್ಲಿ ಹೊರಗೆ ನಾಗಬನ, ಹತ್ತಿರದಲ್ಲೇ ಕೆರೆ ಇದೆ.
ಗರೋಡಿಗೆ 13 ಸೆಂಟ್ಸ್ ಜಾಗ ಇದೆ.
ಗರೋಡಿ ಜೀರ್ಣೋದ್ಧಾರ
17-03-1927 : ಮಾಡಿಗೆ ಹಂಚು ಹಾಕಿ ಪುನರ್ಪ್ರತಿಷ್ಠೆ
03-03-1963 – ಬ್ರಹ್ಮಕಲಶ
22-04-1995 – ಜೀರ್ಣೋದ್ಧಾರ
28-04-2008 – ಜೀರ್ಣೋದ್ಧಾರ
2023-2024ರಲ್ಲಿ ಜೀರ್ಣೋದ್ಧಾರ ನಡೆಸಲು ಸಕಲ ಸಿದ್ಧತೆಗಳಾಗುತ್ತಿರುವ ಬಗ್ಗೆ 9-07-2022ರಲ್ಲಿ ಗರೋಡಿ ವಕ್ತಾರರು ತಿಳಿಸಿರುತ್ತಾರೆ.
ಈ ಗರೋಡಿಗೆ ಬೊಗ್ಗು ಪರವ, ಬೂಬ ಪರವ, ಸಂತೋಷ ಪರವ ನೃತ್ಯ ವಿಶಾರದರಾಗಿ ಸೇವೆಗೆ ಬರುತ್ತಾರೆ. ಹಿಂದೆ ನರಂಗ ಪರವ, ಬೂಬ ಪರವನ ತಂದೆ ಬೆರ್ಮು ಪರವ ನೃತ್ಯವಿಶಾರದರಾಗಿದ್ದರು.
ಗರೋಡಿಯ ಹೊರಗೆ ಪ್ರತ್ಯೇಕ ಗುಂಡವನ್ನು ಇರಿಸಲಾಗಿದ್ದು, ಇದು ಅಗೆಲು ಸೇವೆ, ನೇಮೋತ್ಸವದ ದಿನ ಉಪಯೋಗಕ್ಕೆ ಬರುತ್ತದೆ. ಅಂಗಣದಲ್ಲಿ ಇದನ್ನು ಇರಿಸಿ ಎದುರಿನಲ್ಲಿ ದಲ್ಲೆ ಹಾಕಲಾಗುವುದು. ಮೊದಲು ಭತ್ತದಲ್ಲಿ ಎರಡು ಮನುಷ್ಯಾಕೃತಿಗಳನ್ನು ನಿರ್ಮಿಸಲಾಗುವುದು. ಇದರ ಮೇಲೆ ನೀರೊಳಿಗೆ ಎಲೆಯನ್ನು ಹಾಕಲಾಗುವುದು. ಇದನ್ನು ಬಾಳೆದಿಂಡಿನ ದಪ್ಪ ಸಿಪ್ಪೆಯಿಂದ ಹೊದಿಸಲಾಗುವುದು.

ಬಾಗಿಲ ಬೊಬ್ಬರ್ಯ:-

ಅದೊಂದು ಕಾಲದಲ್ಲಿ ಪಕ್ಕಿಬೆಟ್ಟು ಗರೋಡಿಯ ಮಾಡು ಸಂಪೂರ್ಣ ಕೆಟ್ಟು ಹೋಗಿದ್ದ ಸಂದರ್ಭದಲ್ಲಿ ಅದಕ್ಕೆ ಬೇಕಾಗಿದ್ದ ಬಿದಿರನ್ನು ತರಲು ಹಿರಿಯರಾದ ಅಣ್ಣು ಪೂಜಾರಿಯವರು ಘಟ್ಟಕ್ಕೆ ಹೋಗಿದ್ದರಂತೆ. ಅವರು ಬಯಸಿದ ರೇಟಿಗೆ ಬಿದಿರು ಸಿಕ್ಕದಾಗ ವಾಪಾಸು ಬಂದು ಬೈದೇರುಗಳ ದರುಶನದಲ್ಲಿ ನಿಮಗೆ ಬೇಕಾದಲ್ಲಿ ಗರೋಡಿ ಬೀಳುವುದನ್ನು ಉಳಿಸಿಕೊಳ್ಳಿ ಅನ್ನುತ್ತಾರೆ. ಆಗ ಬೈದೇರುಗಳು ಮೂರು ಎಲೆ ಗಂಧ ತೆಗೆದುಕೊAಡು ಸುವರ್ಣಾನದಿಯಲ್ಲಿನ ಪಕ್ಕಿಬೆಟ್ಟು ಗುಂಡಿಗೆ ಹಾಕಲು ಹೇಳುತ್ತಾರೆ. ಹಾಗೆ ಮಾಡಿದಾಗ-ಅದೇ ಗುಂಡಿಯಲ್ಲಿ ಬಿದಿರಿನ ಹಿಂಡು ಮೇಲೆದ್ದು ಬಂದಾಗ ಅದರಿಂದ ಮತ್ತೆ ಗರೋಡಿ ಕಟ್ಟುತ್ತಾರೆ. ಆ ಬಿದಿರ ಹಿಂಡು ಘಟ್ಟದ್ದೇ ಆಗಿತ್ತು. ಮತ್ತೊಂದು ವಿಶೇಷವೆಂದರೆ ಆ ಬಿದಿರ ಹಿಂಡಿನೊಳಗಡೆ ಬೊಬ್ಬರ್ಯನ ಪಾಪೆ ಇತ್ತು. ಆ ಬಿದಿರನ್ನು ಬೊಬ್ಬರ್ಯನೇ ತಂದಿದ್ದು ಎಂಬ ನಂಬಿಕೆ. ಇದೇ ಬೊಬ್ಬರ್ಯ ಬಾಗಿಲು ಬೊಬ್ಬರ್ಯನಾಗಿದ್ದಾನೆ.

ಸಂಪಿಗೆ ಮರಗಳು :

ಇಲ್ಲಿ ವರ್ಷದ 365ದಿನಗಳಲ್ಲೂ ಹೂವು ಬಿಡುವ ಎರಡು ಸಂಪಿಗೆ ಮರಗಳಿದ್ದು ಇವು 400 ವರ್ಷಗಳ ಹಿಂದಿನದ್ದು ಎನ್ನಲಾಗಿದೆ. ಜೀರ್ಣೋದ್ಧಾರ ಕಾಲದಲ್ಲೂ ಈ ಮರಗಳನ್ನು ಕಡಿಯಲು ಬೈದೇರುಗಳು ಒಪ್ಪಿಗೆ ನೀಡಿಲ್ಲ.

ಕಕ್ಕುಂಜೆ ಗರೋಡಿಗೆ ಕಾರಣ

ಒಮ್ಮೆ ಪಕ್ಕಿಬೆಟ್ಟು ಗರೋಡಿ ಪುನರ್ನಿರ್ಮಾಣ ಆಗುತ್ತಿರುವಾಗ ಗೋಡೆ ಕಟ್ಟುವ ವಿಚಾರದಲ್ಲಿ ಕಕ್ಕುಂಜೆಯ ಗುರಿಕಾರರುಗಳಿಗೆ ಅಸಮಾಧಾನವಾಗಿ, ಅವರು ತಮ್ಮದೇ ಒಂದು ಕೂಡುಕಟ್ಟನ್ನು ಕಟ್ಟಿಕೊಂಡು ಗರೋಡಿ ನಿರ್ಮಿಸುವ ಬಗ್ಗೆ ತೀರ್ಮಾನಿಸುತ್ತಾರೆ. ಅದರಂತೆ ಕಕ್ಕುಂಜೆಯಲ್ಲಿ ಹೊಸ ಗರೋಡಿ ನಿರ್ಮಾಣವಾಯಿತು.

ಸಂಕು ಬಾಲೆಗೆ ಪ್ರಸಾದ

1927ರಲ್ಲಿ ಗರೋಡಿ ಜೀರ್ಣೋದ್ಧಾರಗೊಳ್ಳುತ್ತಿದ್ದ ಕಾಲ. ಸಂಕು ಎಂಬ ಮಹಿಳೆ ದೋಣಿಯಲ್ಲಿ ಬರುತ್ತಿರಬೇಕಾದರೆ ಗರೋಡಿ ಬಳಿಯಲ್ಲಿ ಹೊಳೆಯಲ್ಲಿ ದೋಣಿ ಸುರುಳಿ ಸುತ್ತ ತೊಡಗಿದಾಗ ಅವರು ಗರೋಡಿಗೆ ಗುಂಡ ಕಟ್ಟಿಸಿಕೊಡುವುದಾಗಿ ಹರಕೆ ಹೇಳುತ್ತಾರೆ. ಸುರಕ್ಷಿತರಾಗಿ ದಡ ಸೇರುತ್ತಾರೆ. ಸಂಕು ಅವರು ಗುಂಡ ಕಟ್ಟಿಸಿದ್ದು ಗರೋಡಿಯಲ್ಲಿ ಇದೀಗಲೂ ಅವರ ಮನೆತನಕ್ಕೆ ಸಂಕುಬಾಲೆ ಅಂತ ಕರೆದು ಗೌರವಿಸುವ, ಪ್ರಸಾದ ನೀಡುವ ಪದ್ಧತಿಯಿದೆ.
2024-25 ರಲ್ಲಿ ಗರೋಡಿಯು ಜೇರ್ಣೋದ್ಧಾರಗೊಂಡು ಶಿಲಾಮಯ ಗರೋಡಿಯಾಗಿ ಮೂಡಿಬರಲಿದೆ.

ಪೂ ಪೂಜನೆಯವರ ವಿಳಾಸ :

ಮೋಹನ್ ಪೂಜಾರಿ
ಪಕ್ಕಿಬೆಟ್ಟು ಗರೋಡಿಮನೆ,
ಅಂಚೆ ಕಲ್ಯಾಣಪುರ,
ಫೋನ್ ನಂಬರ್ – 99453 61812

ಮಾಹಿತಿ ಸಂಗ್ರಹಿಸಿದ ದಿನಾಂಕ:

09-07-2022

Shree Brahma Baidarkala Garodi, Paddam

ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಪಡುಭಾಗ ಪಡ್ಡಾಂ

ಉಡುಪಿಯಿಂದ ಪರ್ಕಳ, ಆತ್ರಾಡಿ ಮಾರ್ಗವಾಗಿ ಓಂತಿಬೆಟ್ಟುವಿನಿಂದ ಮುಂದೆ 1.5 ಕಿ.ಮೀ.ದೂರದಲ್ಲಿ ಬಲಕ್ಕೆ ಪಡ್ಡಾಂ ರಸ್ತೆಗೆ ತಿರುಗಿ ಮತ್ತೆ 1.5 ಕಿ.ಮೀ. ದೂರದಲ್ಲಿ ಎಡಭಾಗದಲ್ಲಿರುವ ಸ್ವಾಗತ ಗೋಪುರದ ಮೂಲಕ ಸಾಗಿ ಪಡ್ಡಾಂ ಗರೋಡಿ ತಲುಪಬಹುದು.
ಪಡ್ಡಾಂನಲ್ಲಿ ಗರೋಡಿ ಸ್ಥಾಪನೆಗೆ ಮೊದಲು ಪಡ್ಡಾಂ ಬೀಡಿನ ಮನಡಯವರು ಹಾಗೂ ಗರಡಿ ಮನೆಯ ಹಿರಿಯ ಬಾಬು ಪೂಜಾರಿ ಹತ್ತಿರದ ಗರೊಡಿಗೆ ನೇಮೋತ್ಸವಕ್ಕೆ ಹೋದಾಗ ಪಡ್ಡಾಂ ಬೀಡಿನ ಮನೆಯವರಿಗೆ ಅಗೌರವವಾದ ಸಂದರ್ಭದಲ್ಲಿ ಪಡ್ಡಾಂ ಪಡುಭಾಗ ಗರಡಿ ಸ್ಥಾಪನೆಯಾಯಿತು.
ಇದೊಂದು ಪುರಾತನ ಆಯದ ಗರೋಡಿಯಾಗಿದ್ದು, ಗರೋಡಿಯ ಮುಖ್ಯ ದ್ವಾರವು ಪೂರ್ವಾಭಿಮುಖವಾಗಿಯೂ ಇನ್ನೊಂದು ದ್ವಾರವು ಬಡಗು ದಿಕ್ಕಿಗೆ ಇದೆ. ಗರಡಿಯು ಇತ್ತೀಚೆಗೆ 23-03-2003ರಲ್ಲಿ ಜೀರ್ಣೋದ್ದಾರವಾಗಿ, ಷಢಾದಾರ ಪ್ರತಿಷ್ಠೆಯೂ ನಡೆದಿದೆ. ಇದಕ್ಕೆ ಮೊದಲು 1975 ರಲ್ಲಿ ಗರಡಿಯ ಜೀರ್ಣೋದ್ದಾರವಾಗಿದೆ.
ಬ್ರಹ್ಮರ ಗುಡಿಯಲ್ಲಿ ಬ್ರಹ್ಮ ಗುಂಡದ ಒಳಗೆ ಕುದುರೆಯ ಮೇಲೆ ಕುಳಿತ ನಾಗ ಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಬ್ರಹ್ಮಗುಂಡದ ಮದ್ಯದ ಅಂತಸ್ತಿನಲ್ಲಿ ಕೀಲು ದೇವರು ಹಾಗೂ ಮೇಲಿನ ಅಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
ಬ್ರಹ್ಮಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರು ಹಾಗೂ ಇಬ್ಬರು ಮಕ್ಕಳ ಮರದ ಪಾಪೆಇದೆ.
ಬ್ರಹ್ಮಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರು ಹಾಗೂ ಇಬ್ಬರು ಮಕ್ಕಳ ಮರದ ಪಾಪೆಇದೆ.
ಬ್ರಹ್ಮಗುಡಿಯ ಹೊರಭಾಗದಲ್ಲಿ ಜೋಗಿ ಪುರುಷ, ಮಾಯಂದಾಲ್ ಮತ್ತು ಮಗುವಿನ ಮರದ ಪಾಪೆಗಳಿವೆ. ಮಣೆ ಮಂಚದಲ್ಲಿ ಜುಮಾದಿ ಬಂಟ, ಹುಲಿಚಾಮುಂಡಿ, ಮಲೆಜುಮಾದಿ ಬಂಟ, ಆಚಾರಿಭೂತ. ಬ್ರಾಂದಿ ಮಂಚಗಳಿವೆ.
ಗರಡಿಯ ಆವರಣದೊಳಗೆ ತುಳಸೀಕಟ್ಟೆ, ಅಯ್ಯ ಕಲ್ಲುಗಳಿವೆ. ಇದಲ್ಲದೆ ಗರಡಿಯ ದ್ವಾರದ ಬಳಿ ಗಡುಕಲ್ಲೊಂದು ಇದೆ. ಕಾಲಾವದಿ ಕೋಲದ ಮೂರು ದಿನ ಈ ಗಡುಕಲ್ಲಿಗೆ ಮೇಲೆ ಕೆತ್ತಿದ ಹಣತೆಯಲ್ಲಿ ಎಣ್ಣೆ ಹಾಕಿ ದೀಪ ಉರಿಸುವ ಸಂಪ್ರದಾಯವಿದೆ.

ದಿನೇಶ್ ಪೂಜಾರಿ

ಪಡುಭಾಗ ಗರೋಡಿ ಮನೆಯ ವಸಂತ ಪೂಜಾರಿಯವರು (ಪ್ರಾಯ 50 ವರ್ಷ) ಪೂ ಪೂಜನೆ ಸೇವೆ ಮಾಡುತ್ತಿದ್ದು, ನಿತ್ಯಾನಂದ ಶೆಟ್ಟಿ ಇವರು ಗಾಳಿ ದೇವರ ಮುಕ್ಕಾಲ್ದಿಯಾಗಿ ಸೇವೆ ಮಾಡುತ್ತಿರುವರು. ವಸಂತ ಪೂಜಾರಿಯವರ ಮೊದಲು, ಶ್ರೀಧರ ಪೂಜಾರಿ, ಮಹಾಬಲ ಪೂಜಾರಿ ಹಾಗೂ ಗುಲ್ಲ ಪೂಜಾರಿ ಇವರುಗಳು ಪೂ ಪೂಜನೆಯವರಾಗಿ ಸೇವೆ ಸಲ್ಲಿಸಿರುವರು.
ಗರಡಿ ಮನೆಯ ರವಿ ಪೂಜಾರಿ(72 ವರ್ಷ ಪ್ರಾಯ), ವಿಜಯ ಪೂಜಾರಿ ಹಾಗೂ ರಮೇಶ್ ಪೂಜಾರಿ ಇವರುಗಳು ಬೈದೇರುಗಳ ದರ್ಶನದ ಸ್ಥಳ ಪಾತ್ರಿಗಳು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಮಣ ಪೂಜೆ(ಸೂಡ), ಚೌತಿ ಪೂಜೆ, ದೀಪಾವಳಿ ಪೂಜೆ (ಪೊಸ ಬಾರ ಅಗೆಲ್), ಹೂವಿನ ಪೂಜೆ, (ವರ್ಷಕ್ಕೆ ಒಂದು ದಿನ ಮಾತ್ರ ಹರಕೆಯದ್ದು ಸೇರಿಸಿ) ಕದಿರು ಕಟ್ಟುವುದು, ಮಕರದ ಹುಣ್ಣಿಮೆಯಂದು ಕಾಲಾವಧಿ ಅಗೆಲು, ನೇಮೋತ್ಸವಗಳು ನಡೆಯುತ್ತವೆ. ಬೈದೇರುಗಳ ನೇಮೋತ್ಸವದ ಜೊತೆಗೆ ಮಾಯಂದಾಲ್, ಜುಮಾದಿ, ಜುಮಾದಿ ಬಂಟ, ಪಿಲ್ಚಂಡಿ, ಮರ್ಲು ಜುಮಾದಿ, ಮರ್ಲುಜುಮಾದಿ ಬಂಟ, ಜೋಗಿ ಪುರುಷರಿಗೂ ಕೋಲ ಸೇವೆ ನಡೆಯುತ್ತದೆ.
ಗರೋಡಿಯ ಕೂಡು ಕಟ್ಟಿಗೆ ಪಡ್ಡಂ(ಪಡುಭಾಗ), ಆತ್ರಾಡಿ, ಹಾಗೂ ಪುತ್ತಿಗೆಯ ಕೆಲವು ಮನೆಗಳು ಸೇರಿವೆ. ಗರೋಡಿಯ ಮೊಕ್ತೇಸರರಾಗಿ ಪಡುಭಾಗ ಬೀಡಿನ ಹರೀಶ್ ಹೆಗ್ಡೆ, ಹಾಗೂ ಗುತ್ತಿನವರಾಗಿ ಬಡಗು ಮನೆ ಶೇಖರ ಶೆಟ್ಟಿ ಇವರು ನಿರ್ವಹಿಸುತ್ತಿದ್ದಾರೆ. ಪಡುಭಾಗ ಗರೋಡಿ ಮನೆಯಲ್ಲಿ ಮೇಲ್ಮನೆ ಮತ್ತು ಕೆಳಮನೆ ಎಂಬ ಎರಡು ಮನೆಗಳಿವೆ.
ಗರೋಡಿಯಲ್ಲಿ ನೀರುಸ್ನಾನ, ಕಂಚಿಲ್ ಸೇವೆ, ಮದುವೆ ಮುತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಣಿಕೆಯ ಸೇವೆ, ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ, ಕಳಸಕಟ್ಟಿ ಶುದ್ಧ ಮಾಡುವ ಕ್ರಮಗಳು ಆಚರಣೆಯಲ್ಲಿದೆ.
ಗರೋಡಿಗೆ ಸ್ಥಿರ ಆದಾಯವಿರುವುದಿಲ್ಲ. ಹರಕೆ ಮತ್ತು ವಂತಿಗೆಯಿಂದ ಗರೋಡಿಯ ನೇಮೋತ್ಸವ ಕಾರ್ಯಕ್ರಮಗಳು ನಡೆಯುತ್ತವೆ.
ಗರೋಡಿಯ ನೃತ್ಯವಿಶಾರದರಾಗಿ ಬೊಗ್ಗು ಮೂಡುಬೆಳ್ಳೆ ಇವರು ಸೇವೆ ಮಾಡುತ್ತಿದ್ದಾರೆ. ಇವರಿಗೆ ಮೊದಲು ಹಿರಿಯರಾದ ಮೆಣ್ಕ ಪರವ, ಪಿಜಿನ ಪರವ, ಬಂಟು ಪರವ, ನರಂಗ ಪರವ ಇವರು ಸೇವೆ ಸಲ್ಲಿಸಿರುತ್ತಾರೆ. ಮಡಿವಾಳರಾಗಿ ಶಿವಾನಂದ ಮಡಿವಾಳ ಪಡುಭಾಗ ಇವರು ವಾದ್ಯಕ್ಕೆ ಸದಾನಂದ ಹಿರಿಯಡ್ಕ ಇವರು ಸೇವೆ ಮಾಡುತ್ತಾರೆ.
ಗರೋಡಿಗೆ ಸಂಬಂಧಪಟ್ಟು ಕೋಟಿಚೆನ್ನಯ ಪ್ರೆಂಡ್ಸ, ಪಡುಭಾಗ ಎಂಬ ಯುವಕರ ಕೂಟವೊಂದು ಗರೋಡಿಯ ಕೆಲಸ ಕಾರ್ಯಗಳಲ್ಲಿ ಭಾಗಿಯಾಗುತ್ತಿದೆ. ಗಣೇಶ ಪೂಜಾರಿ ಇದರ ಅಧ್ಯಕ್ಷರಾಗಿರುತ್ತಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಗರಡಿ ಪಡುಭಾಗ ಪಡ್ಡಾಂ,
ಗ್ರಾಮ ಬೊಮ್ಮರಬೆಟ್ಟು,
ಹಿರಿಯಡೆÆಬೈಅಂಚೆ,
ಉಡುಪಿ ತಾಲೂಕು – 576113.

ಗರೋಡಿ ಪೂ ಪೂಜನೆಯವರ ಹೆಸರು ವಿಳಾಸ:

ವಸಂತ ಪೂಜಾರಿ,
ಪಡುಭಾಗ ಗರಡಿಮನೆ,
ಗ್ರಾಮ ಬೊಮ್ಮರಬೆಟ್ಟು,
ಹಿರಿಯಡ್ಕ ಅಂಚೆ,
ಉಡುಪಿ ತಲೂಕು 576113.
ಮೊಬೈಲ್: 9880205676.

ದರ್ಶನ ಸ್ಥಳ ಪಾತ್ರಿಗಳು:

1) ರವಿ ಪೂಜಾರಿ, ಪಡುಭಾಗ ಗರಡಿ ಕೆಳಮನೆ,
ಮೊಬೈಲ್: 9902179956.
2) ವಿಜಯ ಪೂಜಾರಿ, ಪಡುಭಾಗ ಗರೋಡಿಮನೆ,
ಮೊಬೈಲ್:9739510897.
3) ರಮೇಶ್ ಪೂಜಾರಿ, ಪಡುಭಾಗ ಗರಡಿ ಕೆಳಮನೆ ,
ಮೊಬೈಲ್: 9901190480

ಮಾಹಿತಿ ಸಂಗ್ರಹಿಸಿದ ದಿನಾಂಕ:

12-11-2022