Baidashree

Shree Brahma Baidarkala Koti Chennayya, Shree Panjurli Saparivaara Garodi, Yarukone

ಶ್ರೀ ಬ್ರಹ್ಮಬೈದರ್ಕಳ ಕೋಟಿ-ಚೆನ್ನಯ ಶ್ರೀ ಪಂಜುರ್ಲಿ ಸಹಪರಿವಾರ ಗರೋಡಿ, ಯರುಕೋಣೆ.

ಉಡುಪಿಯಿಂದ – ಕುಂದಾಪುರ – ನಾವುಂದ ಪೇಟೆಯಿಂದ ಸುಮಾರು ಒಂದು ಕಿ.ಮೀ. ದೂರದಲ್ಲಿ ಬಲಕ್ಕೆ ತಿರುಗಿ ಸುಮಾರು 6ಕಿ.ಮೀ. ದೂರ ಸಾಗಿದರೆ ಯರುಕೋಣೆ ಗರೋಡಿ ಸಿಗುವುದು.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ. ಷಡಾಧಾರ ಪ್ರತಿಷ್ಟೆಯೂ ಇದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದ ಕೆಳ ಅಂತಸ್ತಿನಲ್ಲಿ ವೆಂಕಟರಮಣ ದೇವರ ಕಲ್ಲಿನ ಮೂರ್ತಿ, ಮೇಲಂತಸ್ತಿನಲ್ಲಿ ನಾಗಬ್ರಹ್ಮರ ಮರದ ಮೂರ್ತಿ ಇದೆ.
ಗುಂಡದ ಎಡಬದಿಯಲ್ಲಿ ಬಂಟ, ಕೋಟಿ, ಬಂಟ, ಚೆನ್ನಯ್ಯ, ದೇಯಿ ಬೈದೆತಿ ಹಾಗೂ ನಂದಿಯ ಮರದ ಮೂರ್ತಿಗಳಿವೆ.
ಬಲಬದಿಯಲ್ಲಿ ಬೈದ, ಬಂಟ ಹಾಗೂ ಕಿನ್ನಿದಾರುವಿನ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಭಾಗದಲ್ಲಿ ಗೆಂಡದ ಹೈಗುಳಿ, ಪಂಜುರ್ಲಿ, ಪಂಜುರ್ಲಿ ಹಾಗೂ ಕಂಚಿನ ಪಂಜುರ್ಲಿ, ಎಡಭಾಗದಲ್ಲಿ ಕಂಬೆಟ್ಟಿನ ಹೈಗುಳಿ, ಕಂಚಿನ ಕರಿಬೆಟ್ಟಿನ ಹೈಗುಳಿ, ಕರಿಬೆಟ್ಟಿನ ಹೈಗುಳಿ ಪರಿವಾರ, ನಂದಿಕೋಣ ಮೂಡೂರ ಹೈಗುಳಿ ದೈವದ ಸಾನಿಧ್ಯವಿದೆ.
ಪಕ್ಕದಲ್ಲಿ ಮಾರಣಕಟ್ಟೆ ಚಿಕ್ಕು, ಬಾಲ ಚಿಕ್ಕು, ಅವತಾರ ಚಿಕ್ಕು, ಮರ್ಲಿ ಚಿಕ್ಕು, ಬಗ್ ಚಿಕ್ಕು, ಚಿಕ್ಕು ಪರಿವಾರ, ದೊಟ್ಟಿಕಾಲು ಚಿಕ್ಕು, ಧೂಮಾವತಿ, ಬಾಲಕಂದ, ಮೈಂದಾಳ್ತಿ, ಉಳ್ಳಾಲ್ತಿ ದೈವಗಳ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಗೆ ಎದುರು ಮುಖವಾಗಿ ಜೋಗಿ ಪುರುಷ, ಹೊಸಿ ಹೈಗುಳಿ, ಕೆಂಪಣ್ಣ ಹೈಗುಳಿ, ಮುರ್ ಶಂಡಿ, ಮೂಕ ಹೈಗುಳಿ, ಕೆಪ್ಪ ಹೈಗುಳಿ, ದೈವಗಳ ಮರದ ಮೂರ್ತಿಗಳಿವೆ.
ಗರೋಡಿಯ ಹೊರಗೆ ಬಾಗಿಲು ಬೊಬ್ಬರ್ಯನ ಮರದ ಮೂರ್ತಿ ಇದೆ.
ಗರೋಡಿಯ ಪಕ್ಕದಲ್ಲಿರುವ ಒಂದು ಗುಡಿಯಲ್ಲಿ ಮಾಸ್ತಿ ಇನ್ನೊಂದರಲ್ಲಿ ಹೊರಸುತ್ತಿನ ಹೈಗುಳಿ ಹಾಗೂ ನೇತ್ರಾ ಹೈಗುಳಿ ದೈವಗಳ ಸಾನಿಧ್ಯವಿದೆ.
ಗರೋಡಿಯ ಆವರಣದಲ್ಲಿ ತುಳಸಿ ಕಟ್ಟೆ, ಬಲಿಕಲ್ಲುಗಳಿವೆ. ಗರೋಡಿಯ ಪರಿಸರದಲ್ಲಿ ನಾಗಬನವಿದೆ.

ಮಹಾಬಲ ಪೂಜಾರಿ

1984ರಿಂದ ಮಹಾಬಲ ಪೂಜಾರಿ (61 ವರ್ಷ) ಇವರು ಗರೋಡಿಯ ಅರ್ಚಕರಾಗಿದ್ದಾರೆ. ಇವರ ಮೊದಲು ಇವರ ಅಜ್ಜ ಸುಬ್ಬ ಪೂಜಾರಿಯವರು ಇಲ್ಲಿಯ ಅರ್ಚಕರಾಗಿದ್ದರು.
ಈ ಗರೋಡಿಯಲ್ಲಿ ಸದ್ಯಕ್ಕೆ ಸ್ಥಳ ಪಾತ್ರಿಗಳಿಲ್ಲ.
ಗರೋಡಿಯಲ್ಲಿ ಸಂಕ್ರಾಂತಿ ಪೂಜೆ, ಕದಿರುಕಟ್ಟುವ ಕ್ರಮ ಇದೆ. ಧರ್ಮಸ್ಥಳದ ದೀಪೋತ್ಸವದ ಅಮವಾಸ್ಯೆಯಂದು ತುಳಸೀ ಪೂಜೆ ನಡೆಯುತ್ತದೆ. ಗರೋಡಿಯಲ್ಲಿ ಅಗೆಲ್ ಸೇವೆ, ಹಾಲು ಹಬ್ಬ ಇತ್ಯಾದಿ ಆಚರಣೆಗಳು ಸದ್ಯಕ್ಕೆ ನಡೆಯುತ್ತಿಲ್ಲ. ಮುಂದೆ ಸ್ಥಳ ಪಾತ್ರಿಗಳ ನೇಮಕವಾದ ನಂತರ ಸರಿಯಾದ ಮಾಹಿತಿ ಪಡೆದು ಈ ಬಗ್ಗೆ ನಿರ್ಧರಿಸಲಾಗುವುದು.
ಹೇರೂರು, ಯರುಕೋಣೆ ಭಾಗದ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಊರಜನರ ಕಾಣಿಕೆ, ಸಹಾಯ ಧನಗಳಿಂದ ಗರೋಡಿಯ ಖರ್ಚು ವೆಚ್ಚಗಳನ್ನು ಭರಿಸಲಾಗುತ್ತದೆ. ಗರೋಡಿಗೆ ಸಂಬಂಧಪಟ್ಟ ಒಂದು ಎಕರೆ 15ಸೆಂಟ್ಸ ಜಾಗವಿದೆ.
22-03-2023ರಲ್ಲಿ ಗರೋಡಿಯ ಜೀರ್ಣೋದ್ದಾರವಾಗಿದೆ.

ಜೀರ್ಣೋದ್ದಾರಕ್ಕೆ ಮೊದಲಿನ ಗರೋಡಿಯ ಛಾಯಾಚಿತ್ರ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಕೋಟಿ-ಚೆನ್ನಯ ಶ್ರೀ ಪಂಜುರ್ಲಿ ಸಹಪರಿವಾರ ಗರೋಡಿ ಯರುಕೋಣೆ,
ಹೇರೂರು ಗ್ರಾಮ, ರಾಗಿಹಕ್ಲು ಅಂಚೆ ,
ಬೈಂದೂರು ತಾಲೂಕು,
ಉಡುಪಿ 576224.

ಗರೋಡಿಯ ಅರ್ಚಕರು:

ಮಹಾಬಲ ಪೂಜಾರಿ – 9901853769

ಮಾಹಿತಿ ನೀಡಿದವರು

ಮಹಾಬಲ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

29.04.2025

Shree Brhma Baidarkala Moodura Haiguli Parivaara Garodi, Thallur

ಶ್ರೀ ಬ್ರಹ್ಮಬೈದರ್ಕಳ ಮೂಡೂರ ಹೈಗುಳಿ ಪರಿವಾರ ಗರೋಡಿ, ತಲ್ಲೂರು

ಉಡುಪಿಯಿಂದ ಕುಂದಾಪುರ ದಾಟಿ ಸುಮಾರು 4.2ಕಿ. ಮೀ. ನಂತರ ಎಡಕ್ಕೆ ಶ್ರೀ ಮಹಾಲಿಂಗೇಶ್ವರ ದೇವಸ್ತಾನದ ರಸ್ತೆಗೆ ತಿರುಗಿ ಸುಮಾರು 800ಮೀ. ಸಾಗಿದರೆ ತಲ್ಲೂರು ಗರೋಡಿ ಸಿಗುತ್ತದೆ.
ಇದು ಶಿಲಾಮಯ ಗರೋಡಿಯಾಗಿದ್ದು, ಪೂರ್ವಾಭಿಮುಖವಾದ ಮುಖ್ಯ ದ್ವಾರ ಹಾಗೂ ಉತ್ತರಾಭಿಮುಖವಾದ ಬ್ರಹ್ಮಗುಡಿಯನ್ನು ಹೊಂದಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಕಂಚಿನ ಮೂರ್ತಿಯಿದೆ.
ಗುಂಡದ ಎಡಭಾಗದಲ್ಲಿ ದೇಯಿ ಬೈದೆತಿ, ಕೋಟಿಚೆನ್ನಯ, ಇಬ್ಬರು ಮಕ್ಕಳ ಹಾಗೂ ನಂದಿಕೇಶ್ವರ ದೈವದ ಮರದ ಮೂರ್ತಿಗಳಿವೆ.
ಗುಂಡದ ಬಲ ಭಾಗದಲ್ಲಿ ಕುಜುಂಬ ಕಾಂಜವ ಹಾಗೂ ಮಗುವಿನ ಮರದ ಮೂರ್ತಿ ಹಾಗೂ ಬಲ್ಲಾಳ ಪೀಠವಿದೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ನಾರಾಯಣ ಹೈಗುಳಿ, ಶಂಕರ ಹೈಗುಳಿ ದೈವಗಳ ಗದ್ದುಗೆಯಲ್ಲಿ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಎಡಬದಿಯಲ್ಲಿ ಕರಿಬೆಟ್ಟಿನ ಹೈಗುಳಿ, ರಕ್ತ ಹೈಗುಳಿ, ಪಂಜುರ್ಲಿ ಪರಿವಾರ ಹೈಗುಳಿ, ಮೂಡೂರ ಹೈಗುಳಿ, ಬಾಲಯ್ಯ , ಮೈಂದಾಳ್ತಿ, ದೊಟ್ಟಿಕಾಲ ಚಿಕ್ಕು, ಮರ್ಲು ಚಿಕ್ಕು, ಮಾಸ್ತಿಅಮ್ಮ, ಬಾಲ ಚಿಕ್ಕು, ಬಗ್ಗು ಚಿಕ್ಕು ದೈವಗಳ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಗೆ ಎದುರು ಮುಖವಾಗಿ ಹಳೆಯಮ್ಮ, ಎಳೆಯಮ್ಮ, ಬೊಬ್ಬರ್ಯ, ಉಮ್ಮಾಳ್ತಿ, ಚಂಡೇಶ್ವರ, ಬಾಲ ಚಂಡಿ, ಜೋಗಿ ಪುರುಷ, ಸ್ವಾಮಿ, ಕುಂಜ್ಙಾಡಿ,ಹೈಗುಳಿ ದೈವಗಳ ಮರದ ಮೂರ್ತಿಗಳಿವೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯ, ಹೊರಸುತ್ತಿನ ಹೈಗುಳಿಯ ಮರದ ಮೂರ್ತಿಗಳಿವೆ. ಗರೋಡಿಯ ಆವರಣದೊಳಗೆ ತುಳಸೀ ಕಟ್ಟೆ, ಕ್ಷೇತ್ರಪಾಲ ಗುಡಿ ಹಾಗೂ ಬಲಿಕಲ್ಲುಗಳಿವೆ.
ಗರೋಡಿಯ ಪಕ್ಕದಲ್ಲಿ ಮಹಾಕಾಳಿ ದೇವಸ್ಥಾನ ಮತ್ತು ಪರಿವಾರ ದೈವಗಳ ಸಾನಿಧ್ಯವಿದೆ.
ಗರೋಡಿಯ ಹತ್ತಿರದಲ್ಲಿಯೇ ಗರೋಡಿಗೆ ಸಂಬಂಧಪಟ್ಟ ನಾಗಬನವಿದೆ.

ಕುಮಾರ ಪೂಜಾರಿ

ಗೋಪಾಲ ಪೂಜಾರಿ

ನಾಗರಾಜ ಪೂಜಾರಿ

ಕುಮಾರ ಪೂಜಾರಿ (45 ವರ್ಷ) ಗೋಪಾಲ ಪೂಜಾರಿ 61 ವರ್ಷ) ನಾಗರಾಜ ಪೂಜಾರಿ (60 ವರ್ಷ) ಇವರು ಗರೋಡಿಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮೊದಲು ಮುತ್ತ ಪೂಜಾರಿ, ಮಾಸ್ತಿ ಪೂಜಾರಿ ಮೊದಲಾದ ಹಿರಿಯರು ಈ ಗರೋಡಿಯಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು.
ರಾಜು ಪೂಜಾರಿ (72 ವರ್ಷ) ಇವರು 1990ರಿಂದ ಇಲ್ಲಿಯ ದರ್ಶನದ ಸ್ಥಳ ಪಾತ್ರಿಗಳಾಗಿದ್ದಾರೆ. ಇವರಿಗೆ ಮೊದಲು ಇವರ ಅಜ್ಜ ವೆಂಕ ಪೂಜಾರಿ, ಶೇಷ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ತಲ್ಲೂರು ದೊಡ್ಡಮನೆ ವಸಂತ್ ಆರ್ ಹೆಗ್ಡೆಯವರು ಮೊಕ್ತೇಸರಾಗಿದ್ದಾರೆ.
ಗರೊಡಿಯಲ್ಲಿ ನಿತ್ಯ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಕೊಡಿ ತಿಂಗಳಲ್ಲಿ ತಲ್ಲೂರು ಕಂಬಳದ ಮೂರನೇ ದಿನ ಅಗೆಲು ಸೇವೆ, ದರ್ಶನ ಸೇವೆ ನಡೆಯುತ್ತದೆ. ಜನವರಿ 27ನೇ ತಾರೀಖಿನಂದು ಗೆಂಡ ಸೇವೆ, 28 ನೇ ತಾರೀಖಿನಂದು ತುಲಾಭಾರ ಸೇವೆ, 29 ನೇ ತಾರೀಖಿನಂದು ಕರಿಬೆಟ್ಟಿನ ಹೈಗುಳಿ ದೈವಕ್ಕೆ ಕುರಿ ಸೇವೆ ನಡೆಯುತ್ತದೆ. ಜೂನ್ ತಿಂಗಳಲ್ಲಿ ಮಹಾಕಾಳಿ ಮಾರಿ ಹಬ್ಬ ನಡೆಯುತ್ತದೆ.
ಹೆಮ್ಮಾಡಿ, ಉಪ್ಪಿನ ಕುದ್ರು, ಹೇರಿಕುದ್ರು, ಹಟ್ಟಿಯಂಗಡಿ, ನೇರಳೆಕಟ್ಟೆಯ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಭಕ್ತಜನರ ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಖರ್ಚುವೆಚ್ಚಗಳನ್ನು ಭರಿಸಲಾಗುತ್ತದೆ.
ಗರೋಡಿಗೆ ಸಂಬಂಧಪಟ್ಟ ಒಂದು ಎಕರೆ 92ಸೆಂಟ್ಸ ಜಾಗವಿದೆ. 2024ರ ಜನವರಿ ತಿಂಗಳಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿದೆ.
ನಾಗರಾಜ ಮಡಿವಾಳ ತಲ್ಲೂರು ಇವರು ಮಡಿವಾಳರಾಗಿ, ಅಮ್ಮಯ್ಯ ದೇವಾಡಿಗ ಉಪ್ಪಿನ ಕುದ್ರು ಇವರು ವಾದ್ಯದವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹಬೈದರ್ಕಳ ಮೂಡೂರ ಹೈಗುಳಿ ಪರಿವಾರ ಗರೋಡಿ
ತಲ್ಲೂರು ಗ್ರಾಮ ಮತ್ತು ಅಂಚೆ,
ಕುಂದಾಪುರ ತಾಲೂಕು,
ಉಡುಪಿ ಜಿಲ್ಲೆ 576230

ಗರೋಡಿಯ ಅರ್ಚಕರು:

ಕುಮಾರ ಪೂಜಾರಿ – 9845605256
ಗೋಪಾಲ ಪೂಜಾರಿ – 9008854523
ನಾಗರಾಜು ಪೂಜಾರಿ – 8971914099

ಪಾತ್ರಿಗಳು

ರಾಜು ಪೂಜಾರಿ – 9845980346

ಮಾಹಿತಿ ನೀಡಿದವರು

ರಾಜು ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

29.04.2025

Shree Brahma Baidarkala Koti-Chennayya, Panjurli Garodi, Holmage

ಶ್ರೀ ಬ್ರಹ್ಮಬೈದರ್ಕಳ ಕೋಟಿ-ಚೆನ್ನಯ್ಯ, ಪಂಜುರ್ಲಿ ಹಾಗೂ ಪರಿವಾರ ದೈವಗಳ ಗರೋಡಿ, ಹೊಳ್ಮಗೆ

ಉಡುಪಿಯಿಂದ – ಕುಂದಾಪುರ – ಹೆಮ್ಮಾಡಿಯ ನಂತರ – ಅರಾಟೆ ಸೇತುವೆ ದಾಟಿ ಎನ್.ಎಚ್.66ರಿಂದ ಬಲಕ್ಕೆ ಗಂದಮಕ್ಕಿ ರಸ್ತೆಗೆ ತಿರುಗಿ ಹಕ್ಲಾಡಿ ಮಾರ್ಗವಾಗಿ ಸುಮಾರು 7ಕಿ.ಮೀ. ಸಾಗಿ ಈ ಗರೋಡಿ ತಲುಪ ಬಹುದು.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಬೆಳ್ಳಿಯ ಕವಚವಿರುವ ಮೂರ್ತಿಯಿದೆ.
ಗುಂಡದ ಎಡಭಾಗದಲ್ಲಿ ದೇಯಿಬೈದೆತಿ, ಕೋಟಿ-ಚೆನ್ನಯರು ಹಾಗೂ ಇಬ್ಬರು ಚಿಟುಕರ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ಕಾಂತಣ್ಣಬೈದ, ಮಗು ಹಾಗೂ ಕುದುರೆಯ ಮೇಲೆ ಕುಳಿತ ಬಲ್ಲಾಳರ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಹೈಗುಳಿ, ನೇತ್ರಹೈಗುಳಿ, ಮೂಡೂರ ಹೈಗುಳಿ, ನಂದಿಕೇಶ್ವರ ಹಾಗೂ ಪಂಜುರ್ಲಿ ದೈವಗಳಿಗ ಪೂಜೆ ನಡೆಯುತ್ತದೆ. ಎಡಬದಿಯಲ್ಲಿ ಶಂಕರಣ್ಣ ಹೈಗುಳಿ, ಕರಿಯಮ್ಮ, ಹಾಗೂ ಕರಿಬೆಟ್ಟಿನ ಹೈಗುಳಿ ದೈವಗಳ ಸಾನಿಧ್ಯವಿದೆ.
ಪಕ್ಕದಲ್ಲಿ ಪಂಜುರ್ಲಿ, ಮೋಡದ ಪಂಜುರ್ಲಿ, ಹೈಗುಳಿ, ಮಂಡಕಟ್ಟು ಹೈಗುಳಿ, ಜುಮಾದಿ, ಬಾಲಮ್ಮ, ಬಾಲಯ್ಯ, ದೊಟ್ಟಿಕಾಲು ಚಿಕ್ಕು, ಕುಡೂರ ಚಿಕ್ಕು, ಹಳೆಯಮ್ಮ, ಎಳೆಯಮ್ಮ, ಮರ್ಲಿಚಿಕ್ಕು, ಗುರಚಿಕ್ಕು, ಕೆಂಡಮ್ಮ, ಹೊನ್ನಮ್ಮ, ಚೆನ್ನಮ್ಮರ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಗೆ ಎದುರು ಮುಖವಾಗಿ ಹೈಗುಳಿ, (ಮೂರು) ಜೋಗಿಪುರುಷ, ಸಾವಿರ ಹೈಗುಳಿ, ಕೆಂಚಾರ ಹೈಗುಳಿ, ಹನಾರಹೈಗುಳಿ, ಹೀಂತ್ರ ಹೈಗುಳಿ, ಮೂತ್ರ ಹೈಗುಳಿ, ಚಂಡಿ, ಕೆಪ್ಪ ಹೈಗುಳಿ, ಮೂಕ ಹೈಗುಳಿ, ಮಾಸ್ತಿಯಮ್ಮ, ಪತ್ತಿನ ಚಿಕ್ಕು, ಅವತಾರ ಚಿಕ್ಕು, ಹೊಸ ಭೂತಗಳ ಮರದ ಮೂರ್ತಿ ಹಾಗೂ ಪಾತ್ರಿ ಪುರುಷರ ಕಲ್ಲುಗಳಿವೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯ ಮರದ ಮೂರ್ತಿ ಇದೆ.
ಗರೋಡಿಯ ಆವರಣದೊಳಗೆ ತುಳಸೀಕಟ್ಟೆ, ಬಲಿಕಲ್ಲು, ಕ್ಷೇತ್ರಪಾಲ ಸಾನಿಧ್ಯವಿದೆ.
ಗರೋಡಿಯ ಪರಿಸರದಲ್ಲಿ ನಾಗಬನವಿದೆ.

ಸಂಜೀವ ಪೂಜಾರಿ

ಸುಮಾರು 30 ವರ್ಷಗಳಿಂದ ಸಂಜೀವ ಪೂಜಾರಿಯವರು (64 ವರ್ಷ) ಗರೋಡಿಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮೊದಲು ಅಣ್ಣ ಅಂತ ಪೂಜಾರಿ, ಹಿರಿಯರಾದ ಬಾಲ ಪೂಜಾರಿ, ಕೃಷ್ಣ ಪೂಜಾರಿ, ನಾಗಪ್ಪ ಪೂಜಾರಿಯವರು ಈ ಸೇವೆ ಮಾಡಿದ್ದರು.
ಶಂಕರ ಪೂಜಾರಿಯವರು (60 ವರ್ಷ) ಗರೋಡಿಯ ದರ್ಶನದ ಸ್ಥಳ ಪಾತ್ರಿಗಳಾಗಿದ್ದಾರೆ. ಇವರ ಮೊದಲು ರಾಮ ಪೂಜಾರಿ, ಜಲ್ಲ ಪೂಜಾರಿಯವರು ಇಲ್ಲಿಯ ಪಾತ್ರಿಗಳಾಗಿದ್ದರು.
ಗರೋಡಿಯ ಉಸ್ತುವಾರಿಗೆ ಆಡಳಿತ ಸಮಿತಿಯಿದ್ದು, ಸುಭಾಷ್ ಶೆಟ್ಟಿಯವರು ಸಮಿತಿಯ ಅಧ್ಯಕ್ಷರಾಗಿ, ಚಂದ್ರಹಾಸ ನಾಯ್ಕ ಕಾರ್ಯದರ್ಶಿಯಾಗಿ, ಚಂದ್ರ ಪೂಜಾರಿ ಜತೆ ಕಾರ್ಯದರ್ಶಿಯಾಗಿ, ಸೂರು ನಾಯ್ಕ ಕೋಶಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗರೊಡಿಯಲ್ಲಿ ನಿತ್ಯ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಕೊಡಿತಿಂಗಳಲ್ಲಿ ಅಗೆಲು ಸೇವೆ, ಮರುದಿನ ದರ್ಶನ ತುಲಾಭಾರ ಸೇವೆ, ಕೈದ ಪೂಜೆಗಳು ನಡೆಯುತ್ತವೆ. ಮಾರ್ಚ 12ನೇ ತಾರೀಖಿಗೆ ಪಂಜುರ್ಲಿ ದೈವದ ಕೋಲ, 14ನೇ ತಾರೀಖಿನಂದು ಗೆಂಡ ಸೇವೆ ನಡೆಯುತ್ತದೆ.
ಹೊಳ್ಮಗೆ ಹಾಗೂ ಹಕ್ಲಾಡಿ ಗ್ರಾಮದ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಭಕ್ತ ಜನರ ವರಡ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಗರೋಡಿಗೆ 10ಸೆಂಟ್ಸ ಜಾಗವಿದ್ದು ಸುಮಾರು 20ವರ್ಷಗಳ ಹಿಂದೆ ಗರೋಡಿಯ ಜೀರ್ಣೋದ್ಧಾರ ನಡೆದಿದೆ.
ಪಂಜುರ್ಲಿ ದೈವದ ಕೋಲಕ್ಕೆ ಬಾಬು ಪಾಣಾರ ಮತ್ತು ಸಂಗಡಿಗರು ನೃತ್ಯವಿಶಾರದರಾಗಿ ಸೇವೆ ಸಲ್ಲಿಸುತ್ತಾರೆ. ಗರೋಡಿಯ ಮಡಿವಾಳರಾಗಿ ಮಹೇಶ್ ಮಡಿವಾಳರು ಸೇವೆ ಸಲ್ಲಿಸುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಕೋಟಿ-ಚೆನ್ನಯ್ಯ ಪಂಜುರ್ಲಿ ಹಾಗೂ ಪರಿವಾರ ದೈವಗಳ ಗರೋಡಿ,
ಹಕ್ಲಾಡಿ ಗ್ರಾಮ, ಕುಂದಾಪುರ ತಾಲೂಕು,
ಉಡುಪಿ ಜಿಲ್ಲೆ.

ಗರೋಡಿಯ ಅರ್ಚಕರು:

ಸಂಜೀವ ಪೂಜಾರಿ – 9741953582

ಪಾತ್ರಿಗಳು

ಶಂಕರ ಪೂಜಾರಿ – 9845650365

ಮಾಹಿತಿ ನೀಡಿದವರು

ಸಂಜೀವ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

27.01.2025

Shree Brahma Baidarkala & Shivaraya Garodi, Handadi

ಶ್ರೀ ಬ್ರಹ್ಮಬೈದರ್ಕಳ ಮತ್ತು ಶಿವರಾಯ ಗರೋಡಿ, ಹಂದಾಡಿ.

ಉಡುಪಿಯಿಂದ ಬ್ರಹ್ಮಾವರ ತಲುಪಿ, ಬ್ರಹ್ಮಾವರ ಪೇಟೆಯಿಂದ ಸುಮಾರು 1.2ಕಿ.ಮೀ. ದೂರದಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಬಲಕ್ಕೆ ತಿರುಗಿ 1.2ಕಿ.ಮೀ ದೂರ ಸಾಗಿದರೆ ಹಂದಾಡಿ ಗರೋಡಿ ಸಿಗುತ್ತದೆ.
ಗರೋಡಿಗೆ ಪೂರ್ವಾಭಿಮುಖವಾದ ದ್ವಾರವಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ. ಷಡಾಧಾರ ಪ್ರತಿಷ್ಟೆಯೂ ಇದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಉಪಾಸನೆಯಿದೆ.
ಗುಂಡದ ಎಡಭಾಗದಲ್ಲಿ ದೇಯಿಬೈದೆತಿ, ಕೋಟಿ-ಚೆನ್ನಯರ ಹಾಗೂ ಇಬ್ಬರು ಮಕ್ಕಳ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ಕುಜುಂಬ ಕಾಂಜವ ಹಾಗೂ ಮಗುವಿನ ಮರದ ಮೂರ್ತಿಯಿದೆ.
ಬ್ರಹ್ಮಗುಡಿಯ ಹೊರಗೆ ಬಲಭಾಗದಲ್ಲಿ ಪಂಜುರ್ಲಿ ದೈವದ ಸಾನಿಧ್ಯವಿದೆ.
ಬ್ರಹ್ಮಗುಡಿಯ ಎಡಭಾಗದಲ್ಲಿ ಹುಲಿಚೌಂಡಿ, ಜುಮಾದಿ, ಬಂಟ, ಮೈಂದಾಳ್ತಿ, ಬಾಲಯ್ಯ, ಪಂಜುರ್ಲಿ, ಚಿಕ್ಕಮ್ಮ, ಹಾಗೂ ಹೈಗುಳಿ ದೈವಗಳಿಗೆ ಪೂಜೆ ನಡೆಯುತ್ತದೆ.
ಬ್ರಹ್ಮಗುಡಿಗೆ ಎದುರುಮುಖವಾಗಿ ನಂದಿ, ಜೋಗಿಪುರುಷ, ಚಾವುಂಡಾ, ಗುರುಕಂಬ, ಸ್ಥಳ ಚಿಕ್ಕಮ್ಮ, ಹೈಗುಳಿ ದೈವಗಳ ಸಾನಿಧ್ಯವಿದೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯ ಎರಡು ಮೂರ್ತಿಗಳಿವೆ.
ಗರೋಡಿಯ ಹೆಬ್ಬಾಗಿಲಿಗೆ ತಾಗಿಕೊಂಡಿರುವ ಗುಡಿಯಲ್ಲಿ ಶಿವರಾಯ, ಬಂಟ ಹಾಗೂ ಕಾಳಮ್ಮ ದೈವಗಳ ಮರದ ಮೂರ್ತಿಗಳಿವೆ.
ಗರೋಡಿಯ ಆವರಣದಲ್ಲಿ ಕ್ಷೇತ್ರಪಾಲ ಕಟ್ಟೆ, ತುಳಸಿಕಟ್ಟೆ, ಬಲಿಕಲ್ಲುಗಳಿವೆ.
ಗರೋಡಿಯ ಪಕ್ಕದಲ್ಲಿ ಗರೋಡಿಗೆ ಸಂಬಂಧಪಟ್ಟ ನಾಗಬನವಿದೆ.

ಹೆರಿಯ ಪೂಜಾರಿ

ಶ್ರೀಕಾಂತ ಪೂಜಾರಿ

ಪ್ರಕಾಶ ಪೂಜಾರಿ

ರಮೇಶ ಪೂಜಾರಿ

ಅಶೋಕ ಪೂಜಾರಿ

ಹೆರಿಯ ಪೂಜಾರಿ (75 ವರ್ಷ), ಶ್ರೀಕಾಂತ ಪೂಜಾರಿ (40 ವರ್ಷ), ಪ್ರಕಾಶ ಪೂಜಾರಿ (50 ವರ್ಷ), ರಮೇಶ ಪೂಜಾರಿ (50 ವರ್ಷ), ಅಶೋಕ ಪೂಜಾರಿ (38 ವರ್ಷ) ಇವರು ಗರೋಡಿಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮೊದಲು ಸೋಮ ಪೂಜಾರಿ, ಜಬ್ಬ ಪೂಜಾರಿ, ರಾಮ ಪೂಜಾರಿಯವರು ಗರೋಡಿಯ ಅರ್ಚಕರಾಗಿದ್ದರು.
ಸೀನ ಪೂಜಾರಿ (75 ವರ್ಷ) ಸುಧೀರ ಪೂಜಾರಿ (50 ವರ್ಷ) ಇವರು ಗರೋಡಿಯ ದರ್ಶನದ ಸ್ಥಳ ಪಾತ್ರಿಗಳಾಗಿದ್ದಾರೆ. ಇವರ ಮೊದಲು ಶಾಸ ಪೂಜಾರಿ, ಬಾಬಿ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಗರೋಡಿಯ ಉಸ್ತುವಾರಿಗೆ ಆಡಳಿತ ಸಮಿತಿಯಿದ್ದು, ರಾಜೇಶ್ ಶೆಟ್ಟಿ ಅಧ್ಯಕ್ಷರಾಗಿ, ಕರುಣಾಕರ ಶೆಟ್ಟಿ ಕಾರ್ಯದರ್ಶಿಯಾಗಿ, ಶೇಖರ ಪೂಜಾರಿ ಕೋಶಾಧಿಕಾರಿಯಾಗಿ, ಕಾರ್ಯನಿರ್ವಹಿಸುತ್ತಿದ್ದಾರೆ.
ಗರೋಡಿಯಲ್ಲಿ ಆದಿತ್ಯವಾರ, ಶುಕ್ರವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಮಾರ್ಚ್ ತಿಂಗಳಲ್ಲಿ ಅಗೆಲು ಸೇವೆ, ಮರುದಿನ ಹಾಲು ಹಬ್ಬ, ತುಲಾಭಾರ ಸೇವೆಗಳು ನಡೆಯುತ್ತದೆ. ಎರಡು ವರ್ಷಕ್ಕೊಮ್ಮೆ ಬೈದರ್ಕಳ ನೇಮ, ಶಿವರಾಯ ಕೋಲ ಸೇವೆಗಳು ನಡೆಯುತ್ತವೆ.
ಹಂದಾಡಿ, ಕುಂಬ್ರಗೋಡು, ಹಾಗೂ ಬೆಣ್ಣೆ ಕುದ್ರುವಿನ ಜನ ಈ ಗರೋಡಿಯಲ್ಲಿ ಕೂಡುಕಟ್ಟಿಗೆ ಸೇರಿದವರಾಗಿದ್ದು, ತುಲಾಭಾರ ಸೇವೆ, ಕಾಣಿಕೆ ಸೇವೆ ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರಜನರ ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚವನ್ನು ಭರಿಸಲಾಗುತ್ತದೆ.
ಗರೋಡಿಗೆ ಸಂಬಂಧಪಟ್ಟ 84ಸೆಂಟ್ಸ ಜಾಗವಿದ್ದು, ಗರೋಡಿಯು 2013ರಲ್ಲಿ ಜೀರ್ಣೋದ್ದಾರಗೊಂಡಿದೆ.
ಗುಂಡ ಪರವ ಚೇರ್ಕಾಡಿ ಇವರು ಗರೋಡಿಯ ನೃತ್ಯವಿಶಾರದರಾಗಿ, ಬಾಲಕೃಷ್ಣ ಮಡಿವಾಳರಾಗಿ, ಗಣೇಶ ದೇವಾಡಿಗ ಬಾರ್ಕೂರು ಇವರು ವಾಧ್ಯದವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಮತ್ತು ಶಿವರಾಯ ಗರೋಡಿ ಹಂದಾಡಿ,
ಬ್ರಹ್ಮಾವರ ತಾಲೂಕು – 576213.

ಗರೋಡಿಯ ಅರ್ಚಕರು:

ಶ್ರೀಕಾಂತ ಪೂಜಾರಿ – 8861885814
ಪ್ರಕಾಶ ಪೂಜಾರಿ – 9964023518
ರಮೇಶ ಪೂಜಾರಿ – 994513741
ಅಶೋಕ ಪೂಜಾರಿ – 9741633406

ಮಾಹಿತಿ ನೀಡಿದವರು

ರಮೇಶ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

27.04.2025

Shree Koti Chennayyara panjurli Garodi, Mudkeri Basruru

ಶ್ರೀ ಕೋಟಿ ಚೆನ್ನಯ್ಯರ ಪಂಜುರ್ಲಿ ಗರೋಡಿ, ಮೂಡ್ಕೇರಿ ಬಸ್ರೂರು

ಉಡುಪಿಯಿಂದ ಕುಂದಾಪುರ ತಲುಪಿ ಬಸ್ರೂರು ಮೂರುಕೈ ಬಸ್ ನಿಲ್ದಾಣದ ಹತ್ತಿರ ಕುಂದಾಪುರ ಶಿವಮೊಗ್ಗ ರಸ್ತೆಗೆ ಬಲಕ್ಕೆ ತಿರುಗಿ ಸುಮಾರು 6ಕಿ.ಮೀ. ದೂರದಲ್ಲಿ ಬಸ್ರೂರಿನಲ್ಲಿ ಎಡಕ್ಕೆ ತಿರುಗಿ 800ಮೀ. ಸಾಗಿದರೆ ರಸ್ತೆಯ ಎಡಬದಿಯಲ್ಲಿ ಈ ಗರೋಡಿ ಇದೆ.
ಬ್ರಹ್ಮ ಗುಡಿಯ ಹೊರಗೆ ಬಲಬದಿಯಲ್ಲಿ ಮಾಸ್ತಿಯಮ್ಮ ಊಮಲ್ತಿ ಹಾಗೂ ಬೊಬ್ಬರ್ಯರ ಮರದ ಮೂರ್ತಿಗಳಿವೆ. ಎಡಬದಿಯಲ್ಲಿ ಆಂಜನೇಯ ವರಾಹ ಪಂಜುರ್ಲಿ ಹಾಗೂ ವಾರಾಹಿ ದೈವಗಳ ಆರಾಧನೆಯಿದೆ.
ಗರೋಡಿಗೆ ಪೂರ್ವಾಭಿಮುಖವಾಗಿ ಒಂದು ದ್ವಾರವಿದ್ದು ಷಡಾಧಾರ ಪ್ರತಿಷ್ಠೆಯನ್ನು ಹೊಂದಿರುವ ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಒಳಗೆ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿ, ಲಕ್ಷೀವೆಂಕಟೇಶ ಹಾಗೂ ಪದ್ಮಾವತಿಯರ ಮೂರ್ತಿಯಿದೆ. ಗುಂಡದ ಮೇಲಂತಸ್ಥಿನಲ್ಲಿ ಈಶ್ವರ ದೇವರಿಗೆ ಪೂಜೆಯಿದೆ.
ಬ್ರಹ್ಮಗುಡಿಯ ಹೊರಗೆ ಎಡಬದಿಯಲ್ಲಿ ದೇಯಿ ಬೈದೆತಿ, ಚಿಟುಕರ, ಕೋಟಿ, ಚಿಟುಕರ, ಚೆನ್ನಯ್ಯ ಚಿಟುಕರ ಹಾಗೂ ನಿಗಳರ ಮರದ ಮೂರ್ತಿಗಳಿವೆ.
ಗುಂಡದ ಬಲ ಭಾಗದಲ್ಲಿ ಪೈಯ್ಯ ಬೈದ್ಯರು, ಚಿಟುಕರ, ಪಾತ್ರಿ ಬಿಂಬ ಹಾಗೂ ಕುದುರೆಯ ಮೇಲೆ ಕುಳಿತ ಬಲ್ಲಾಳರ ಮರದ ಮೂರ್ತಿಗಳಿವೆ.
ಬ್ರಹ್ಮ ಗುಡಿಯ ಹೊರಗೆ ಬಲಬದಿಯಲ್ಲಿ ಮಾಸ್ತಿಯಮ್ಮ ಊಮಲ್ತಿ ಹಾಗೂ ಬೊಬ್ಬರ್ಯರ ಮರದ ಮೂರ್ತಿಗಳಿವೆ. ಎಡಬದಿಯಲ್ಲಿ ಆಂಜನೇಯ ವರಾಹ ಪಂಜುರ್ಲಿ ಹಾಗೂ ವಾರಾಹಿ ದೈವಗಳ ಆರಾಧನೆಯಿದೆ.
ಪಕ್ಕದಲ್ಲಿ ಧೂಮಾವತಿ, ಬಾಲಯ್ಯ, ಮೈಂದಾಲ್ತಿ, ಬಾಲಯ್ಯ, ದೊಟ್ಟೆಕಾಲು ಚಿಕ್ಕು, ಜೋಡು ಹೈಗುಳಿ, ನಂದಿಕೇಶ್ವರ, ಒಂಟಿ ಹೈಗುಳಿ ಮೋಡ, ಮರ್ಲು ಚಿಕ್ಕು, ರಕ್ತ ಹೈಗುಳಿ ಮೋಡ, ಚಿನಿಕರ ಭೂತ ಅಮ್ಮನವರ ದೈವಗಳ ಆರಾಧನೆಯಿದೆ.
ಬ್ರಹ್ಮಗುಡಿಗೆ ಎದುರು ಮುಖವಾಗಿ ಗಣಕೂಟ, ಜೋಡು ಹೈಗುಳಿ, ಜೋಗಿ ಪುರುಷ, ಕಳುವಿನ ಚಿಕ್ಕು ದೈವಗಳ ಮರದ ಮೂರ್ತಿಯಿದೆ.
ಗರೋಡಿಯ ಬಲಬದಿಯಲ್ಲಿರುವ ಗುಡಿಯೊಂದರಲ್ಲಿ ಶಿವರಾಯ ಹಾಗೂ ಚಿಟುಕರ ಮರದ ಮೂರ್ತಿಗಳಿವೆ. ಇನ್ನೊಂದು ಗುಡಿಯಲ್ಲಿ ವೀರಮಾಸ್ತಿ, ಮಹಾಕಾಳಿ ಹಾಗೂ ಹೊರಸುತ್ತಿನ ಹೈಗುಳಿ ದೈವಗಳ ಸಾನಿಧ್ಯವಿದೆ.
ಗರೋಡಿಯ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯನ ಮರದ ಮೂರ್ತಿಯಿದೆ. ಗರೋಡಿಯ ಅಂಗಣದಲ್ಲಿ ತುಳಸೀಕಟ್ಟೆ ಹಾಗೂ ಕ್ಷೇತ್ರಪಾಲ ಕಟ್ಟೆ ಹಾಗೂ ಅಮ್ಮನವರ ಕಟ್ಟೆಗಳಿವೆ.
ಇನ್ನೊಂದು ಗುಡಿಯಲ್ಲಿ ಸ್ವಾಮಿ ಹಾಗೂ ನಾಗದೇವರಿಗೆ ಪೂಜೆ ನಡೆಯುತ್ತದೆ.

ಶಂಕರ ಪೂಜಾರಿ

ಪ್ರಶಾಂತ ಪೂಜಾರಿ

ಶಂಕರ ಪೂಜಾರಿ (76 ವರ್ಷ ಪ್ರಾಯ), ರಾಘವೇಂದ್ರ ಪೂಜಾರಿ (42 ವರ್ಷ), ಪ್ರಶಾಂತ ಪೂಜಾರಿ (40 ವರ್ಷ) ಇವರು ಈ ಗರೋಡಿಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮೊದಲು ಹಿರಿಯರಾದ ನಂದು ಪೂಜಾರಿ, ವೆಂಕಟ ಪೂಜಾರಿಯವರು ಇಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು.

ಅಶೋಕ ಪೂಜಾರಿ

ಅಶೋಕ ಪೂಜಾರಿ (48 ವರ್ಷ) ಯವರು ಇಲ್ಲಿಯ ಸ್ಥಳ ಪಾತ್ರಿಗಳು. ಹಿಂದೆ ಗೋಪಾಲ ಪೂಜಾರಿ, ಕೃಷ್ಣ ಪೂಜಾರಿ, ಚೆನ್ನಯ್ಯ ಪೂಜಾರಿಯವರು ಈ ಗರೋಡಿಯ ಸ್ಥಳ ಪಾತ್ರಿಗಳಾಗಿದ್ದರು.
14ಜನ ಸದಸ್ಯರಿರುವ “ಬಸ್ರೂರು ಮೂಡ್ಕೇರಿ ಗರೋಡಿ ಮನೆ ಅಳಿಯ ಸಂತಾನ ಕುಟುಂಬ ಟ್ರಸ್ಟ್” ಎಂಬ ಟ್ರಸ್ಟ್ ಆಡಳಿತ ನೋಡಿ ಕೊಳ್ಳುತ್ತಿದ್ದು, ಶಂಕರ ಪೂಜಾರಿಯವರು ಗೌರವ ಅಧ್ಯಕ್ಷರಾಗಿಯೂ, ಅಪ್ಪು ಪೂಜಾರಿಯವರು ಅಧ್ಯಕ್ಷರಾಗಿಯೂ, ವಿಜಯ ಇವರು ಕಾರ್ಯದರ್ಶಿಯಾಗಿಯೂ ಸೇವೆ ಮಾಡುತ್ತಿದ್ದಾರೆ.
ಗರೋಡಿಯಲ್ಲಿ ನಿತ್ಯವೂ ಬೆಳಿಗ್ಗೆ ಹಾಗೂ ಸಂಜೆ ಪೂಜೆ ನಡೆಯುತ್ತಿದೆ. ಸಂಕ್ರಾಂತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ನವರಾತ್ರಿಯಲ್ಲಿ ನವಮಿ ಪೂಜೆ, ನವೆಂಬರ್ ತಿಂಗಳಲ್ಲಿ ಅಗೆಲು ಸೇವೆ, ಮರುದಿನ ಎಲ್ಲಾ ದೈವಗಳ ದರ್ಶನ ಸೇವೆ ನಡೆಯುತ್ತದೆ.
ಬಸ್ರೂರು, ಕಂದಾವರ, ಕೋಣಿ, ಜಪ್ತಿ ಹಾಗೂ ಬಳ್ಕೂರು ಭಾಗದ ಜನರು ಈ ಗರೋಡಿಯಲ್ಲಿ ತುಲಾಭಾರ ಸೇವೆ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ. ಭಕ್ತ ಜನರ ಕಾಣಿಕೆ ಸಹಾಯ ಧನಗಳಿಂದ ಗರೋಡಿಯ ಖರ್ಚುವೆಚ್ಚಗಳನ್ನು ಭರಿಸಲಾಗುತ್ತದೆ.
ಗರೋಡಿಗೆ ಸುಮಾರು ಮೂರು ಎಕರೆ ಜಮೀನು ಇದೆ. 1967ರಲ್ಲಿ, 1983ರಲ್ಲಿ ಗರೋಡಿಯ ಜೀಣೋದ್ಧಾರವಾಗಿದ್ದು, ಸದ್ಯ ಪುನ: ಜೀರ್ಣೋದ್ಧಾರದ ಯೋಜನೆಯಿದೆ.
ಕುಷ್ಟ ಮಡಿವಾಳ ಕುಂದಾಪುರ ಇವರು ಗರೋಡಿಯ ಮಡಿವಾಳರಾಗಿ, ಭಾಸ್ಕರ ದೇವಾಡಿಗ ಬಸ್ರೂರು ಇವರು ವಾದ್ಯದವರಾಗಿ, ವೀರ ಬಸ್ರೂರು ಡೋಲಿನವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಕೋಟಿ ಚೆನ್ನಯರ ಪಂಜುರ್ಲಿ ಗರೋಡಿ,
ಮೂಡ್ಕೇರಿ, ಬಸ್ರೂರು ಅಂಚೆ,
ಕುಂದಾಪುರ ತಾಲೂಕು,
ಉಡುಪಿ ಜಿಲ್ಲೆ 576211.

ಗರೋಡಿಯ ಅರ್ಚಕರು:

ಶಂಕರ ಪೂಜಾರಿ – 9686125686
ರಾಘವೇಂದ್ರ ಪೂಜಾರಿ – 9535652787
ಪ್ರಶಾಂತ ಪೂಜಾರಿ – 8971884487

ಪಾತ್ರಿ:

ಅಶೋಕ ಪೂಜಾರಿ – 9741184139

ಮಾಹಿತಿ ನೀಡಿದವರು :

ಶಂಕರ ಪೂಜಾರಿ
ಪ್ರಶಾಂತ ಪೂಜಾರಿ
ಅಶೋಕ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

27.04.2025

Shree Brahma Baidarkala Garodi, Bannadi.

ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಬನ್ನಾಡಿ.

ಉಡುಪಿಯಿಂದ – ಬ್ರಹ್ಮಾವರದ ಮೂಲಕ ಕೋಟ ಮೂರುಕೈಯಲ್ಲಿ ಬಲಕ್ಕೆ ಸೈಬ್ರಕಟ್ಟೆ ರಸ್ತೆಗೆ ತಿರುಗಿ ಸುಮಾರು 2.5 ಕಿ. ಮೀ. ನಂತರ ಎಡಕ್ಕೆ ತಿರುಗಿ 1.1 ಕಿ. ಮೀ. ಸಾಗಿದರೆ ಬನ್ನಾಡಿ ಗರೋಡಿ ಸಿಗುತ್ತದೆ.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು, ಬ್ರಹ್ಮಗುಡಿಯ ಉತ್ತರಾಭಿಮುಖವಾಗಿದೆ.
ಗರೋಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರಿಗೆ ಪೂಜೆಯಿದೆ.
ಗುಂಡದ ಎಡಭಾಗದಲ್ಲಿ ದೇಯಿಬೈದೆತಿ, ದೇವಕನ್ಯೆ, ಕೋಟಿ-ಚೆನ್ನಯರು, ಇಬ್ಬರು ಕಿರುಬಂಟರು, ದೇವಕನ್ಯೆಯರ ಮರದ ಮೂರ್ತಿ, ಮೈಸಂದಾಯ ದೈವದ ಮಣೆ ಮಂಚವಿದೆ.
ಗುಂಡದ ಬಲಭಾಗದಲ್ಲಿ ಕಾಂತ ಕರ್ಟು, ಬಂಟ, ಕುದುರೆಯ ಮೇಲೆ ಕುಳಿತ ಪುರುಮಲ ಬಲ್ಲಾಳರ ಮರದ ಮೂರ್ತಿ, ನಂದಿಕೋಣ, ಹಾಗೂ ದೇವ ಬಲ್ಲಾಳರ ಮಣೆಮಂಚಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಹೈಗುಳಿ, ಕಾಸಿನ ಹೈಗುಳಿ ಹಾಗೂ ಪ್ರಧಾನ ಪಂಜುರ್ಲಿ ದೈವಗಳ ಸಾನಿಧ್ಯವಿದೆ. ಎಡಬದಿಯಲ್ಲಿ ಬೊಬ್ಬರ್ಯನ ಮರದ ಮೂರ್ತಿ, ಎರಡು ಹೈಗುಳಿ ದೈವಗಳ ಮಣೆ ಮಂಚವಿದೆ.
ಪಕ್ಕದಲ್ಲಿ ಮೈಂದಾಳ್ತಿ ಬಂಟ, ಮಂದಾಳ್ತಿ, ಬಾಲಪುರುಷ, ಜುಮಾದಿ, ವರಾಹ ಪಂಜುರ್ಲಿ, ಪ್ರಧಾನ ಚಿಕ್ಕು, ಚಿಕ್ಕು, ಅವತಾರ ಚಿಕ್ಕು, ದೊಟ್ಟಿಕಾಲ ಚಿಕ್ಕು, ಹಳ್ಳಾಡಿ ಚಿಕ್ಕು, ಮಾರಣೆಕಟ್ಟೆ ಚಿಕ್ಕು, ಬಗ್ಗು ಚಿಕ್ಕು, ಹಳೆಯಮ್ಮರ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಗೆ ಎದುರುಮುಖವಾಗಿ ಯಕ್ಷಿ, ನಂದಿಕೋಣ, ಬಾಲಚಿಕ್ಕು, ಗುರಿಕಂಬ, ಜೋಗಿಪುರುಷ, ಪ್ರಧಾನ ಹೈಗುಳಿ, ಮುರಚೌಂಡೇಶ್ವರ, ಬಂಟ, ನಂದಿಕೋಣದ ಮರದ ಮೂರ್ತಿಗಳಿವೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯ ಎರಡು ಮೂರ್ತಿಗಳಿವೆ.
ಗರೋಡಿಯ ಎದುರಿನ ಗುಡಿಯಲ್ಲಿ ಹುಲಿರಾಯ, ಬಂಟ, ಶಿವರಾಯ, ಹೈಗುಳಿ, ಕಾಳಮ್ಮನ ಆರಾಧನೆಯಿದೆ.
ಗರೋಡಿಯ ಆವರಣದೊಳಗೆ ಹೈಗುಳಿ, ಕ್ಷೇತ್ರಪಾಲ, ತುಳಸಿಕಟ್ಟೆಗಳಿವೆ.
ಗರೋಡಿಯ ಪಕ್ಕದಲ್ಲಿ ಕೊರತಿ ಬೈಕಾಡ್ತಿ ಪರಿವಾರ ಹಾಗೂ ನೀಚ ಪರಿವಾರ ದೈವಗಳ ಕಟ್ಟೆಗಳಿವೆ.

ರಾಮ ಪೂಜಾರಿ

ರಾಮ ಪೂಜಾರಿಯವರು (55 ವರ್ಷ) ಗರೋಡಿಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಮೊದಲು ಶೀನ ಪೂಜಾರಿ, ಗಣಪ ಪೂಜಾರಿ, ತಿಮ್ಮ ಪೂಜಾರಿ, ವೆಂಕ್ಟು ಪೂಜಾರಿಯವರು ಇಲ್ಲಿ ಅರ್ಚಕರಾಗಿದ್ದರು.
ಈ ಗರೋಡಿಯಲ್ಲಿ ಈಗ ದರ್ಶನದ ಸ್ಥಳ ಪಾತ್ರಿಗಳಿಲ್ಲ. ಮೊದಲು ಬನ್ನಾಡಿ ಚಾಂಪ ಪೂಜಾರಿಯವರು, ಬಚ್ಚ ಪೂಜಾರಿ, ಕುರುಡು ಪೂಜಾರಿ, ಮಾಲಿಂಗ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಕಂಬಳ ಗದ್ದೆ ಮನೆ ರಘುರಾಮ ಶೆಟ್ಟಿಯವರು ಗರೋಡಿಯ ಮೊಕ್ತೇಸರರಾಗಿದ್ದಾರೆ. ಇವರಿಗೆ ಮೊದಲು ಮಹಾಬಲ ಶೆಟ್ಟಿ, ಸುಬ್ಬಣ್ಣ ಶೆಟ್ಟಿ, ಶೀನಪ್ಪ ಶೆಟ್ಟಿಯವರು ಇಲ್ಲಿಯ ಮೊಕ್ತೇಸರರಾಗಿದ್ದರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಆದಿತ್ಯವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ಹೂವಿನ ಪೂಜೆ, ಕದಿರುಕಟ್ಟುವುದು, ಕೊಡಿ ತಿಂಗಳಲ್ಲಿ ಅಗೆಲು ಸೇವೆ, ಹಾಲು ಹಬ್ಬ, ದರ್ಶನ ಸೇವೆ, ತುಲಾಭಾರ ಸೇವೆಗಳು ನಡೆಯುತ್ತವೆ. ಮಾರ್ಚ 3ನೇ ತಾರೀಖಿನಂದು ಅಗೆಲು ಸೇವೆ, 4ನೇ ತಾರೀಖಿನಂದು ಹೈಗುಳಿ, ಶಿವರಾಯ ಹಾಗೂ ಚಿಕ್ಕಮ್ಮ ದೈವಗಳಿಗೆ ಗೆಂಡ ಸೇವೆ, ನಂತರ ಪಂಜುರ್ಲಿ ಕೋಲ ನಡೆಯುತ್ತದೆ. ನಂತರ ಶಿವರಾಯ ಕೋಲ (ಹರಕೆಯದ್ದು ಇದ್ದರೆ ಮಾತ್ರ) ನಡೆಯುತ್ತದೆ.
ವಡ್ಡರ್ಸೆ, ಗಿಳಿಯಾರು, ಬೇಳೂರು, ಕೋಟ, ಗುಲ್ವಾಡಿ, ಯಾಳಹಕ್ಲು, ಅಕಿಲಾಡಿ, ಮಧುವನ, ಉಪ್ಪಾಡಿ, ಹಾಗೂ ಬನ್ನಾಡಿಯ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ. ತುಲಾಭಾರ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ತೆಂಗಿನ ಕಾಯಿ ಕಾಣಿಕೆ ಸೇವೆ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಭಕ್ತಜನರ ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ. 2015ರಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿದೆ.
ನರಸಿಂಹ ಪರವ, ಗುಂಡು ಪರವ ಚೇರ್ಕಾಡಿ ಇವರು ಗರೋಡಿಯ ನೃತ್ಯ ವಿಶಾರದರಾಗಿ, ವೆಂಕಟೇಶ ಮಡಿವಾಳ ಸಾಲಿಗ್ರಾಮ ಇವರು ಮಡಿವಾಳರಾಗಿ, ನಾರಾಯಣ ಶೇರಿಗಾರ ವಡ್ಡರ್ಸೆ ವಾದ್ಯದವರಾಗಿ, ಐತ ವಡ್ಡರ್ಸೆ ಡೋಲಿನವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಬನ್ನಾಡಿ,
ಬನ್ನಾಡಿ ಗ್ರಾಮ ಮತ್ತು ಅಂಚೆ,
ಬ್ರಹ್ಮಾವರ ತಾಲೂಕು,
ಉಡುಪಿ 576225

ಗರೋಡಿಯ ಅರ್ಚಕರು:

ರಾಮ ಪೂಜಾರಿ – 9902669188

ಮಾಹಿತಿ ನೀಡಿದವರು :

ರಾಮ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

04.01.2025

Shree Brahma Baidarkala Garodi Kurudunje, Aroor

ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಕುರುಡುಂಜೆ, ಆರೂರು

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ ಎನ್ಎಚ್ 66 ರಲ್ಲಿ ಬ್ರಹ್ಮಾವರಕ್ಕೆ ಮೊದಲು ಭದ್ರಗಿರಿಯಲ್ಲಿ ಬಲಕ್ಕೆ ತಿರುಗಿ ಬ್ರಹ್ಮಾವರ-ಹೆಬ್ರಿ ರಸ್ತೆಯಲ್ಲಿ ಸುಮಾರು 8 ಕಿ.ಮೀ. ಸಾಗಿದ ನಂತರ, ಆರ್.ಕೆ.ಪಾಟ್ಕರ್ ಶಾಲೆಯ ಹತ್ತಿರ ಬಲಕ್ಕೆ ಆರೂರು ರಸ್ತೆಯಲ್ಲಿ ಸುಮಾರು 2.5ಕಿ.ಮೀ. ದೂರದಲ್ಲಿ ಇದೆ ಈ ಗರೋಡಿ.
ಗರೋಡಿಯು ಪೂರ್ವಾಭಿಮುಖವಾದ ಒಂದು ದ್ವಾರವನ್ನು ಹೊಂದಿದ್ದು ಬ್ರಹ್ಮಗುಡಿಯು ಯತ್ತರಾಭಿಮುಖವಾಗಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ಕುದುರೆಯೇರಿ ಕುಳಿತ ನಾಗಬ್ರಹ್ಮರ ಬೆಳ್ಳಿಯ ಕವಷ ಹೊದಿಸಿದ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
ಗುಂಡದ ಎಡಭಾಗದಲ್ಲಿ ದೇಯಿಬೈದೆತಿಯ ಮಣೆಮಂಚ, ಕೋಟಿಚೆನ್ನಯರು ಹಾಗೂ ಇಬ್ಬರು ಮಕ್ಕಳ ಮರದ ಮೂರ್ತಿಯಿದೆ.
ಗುಂಡದ ಬಲಭಾಗದಲ್ಲಿ ಕುದುರೆಯೇರಿ ಕುಳಿತ ಒಕ್ಕು ಬಲ್ಲಾಳ ಹಾಗೂ ಮಗುವಿನ ಮರದ ಮೂರ್ತಿ, ಕುಜುಂಬ ಕಾಂಜವ ಹಾಗೂ ಮಗುವಿನ ಮರದ ಮೂರ್ತಿ ಹಾಗೂ ಮೂಲ ಮೈಸಂದಾಯ ದೈವದ ಮಣೆಮಂಚವಿದೆ.
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಶಿವರಾಯ ದೈವದ ಮಣೆಮಂಚ, ಜುಮಾದಿ, ಬಾಲೆ, ಹಾಗೂ ಮೈಂದಾಳ್ತಿಯ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಎದುರಿಗೆ ಹೈಗುಳಿ ದೈವದ ಮಣೆಮಂಚ, ಜೋಗಿಪುರುಷ, ಬಾಲೆ ಹಾಗೂ ಚಿಕ್ಕಮ್ಮ ದೈವಗಳ ಮರದ ಮೂರ್ತಿ ಹಾಗೂ ಗುರುಕಂಬವಿದೆ.
ಗರೋಡಿಯ ಹೊರಗೆ ಜಗಲಿಯಲ್ಲಿ ಬಾಗಿಲ ಒಂದು ಪಕ್ಕದಲ್ಲಿ ಬಾಗಿಲಬೋಬ್ಬರ್ಯ ಮರದ ಮೂರ್ತಿ ಇನ್ನೊಂದು ಪಕ್ಕದಲ್ಲಿ ಪಿಲ್ಚಂಡಿ ದೈವದ ಮಣೆಮಂಚವಿದೆ.
ಗರೊಡಿಯ ಎದುರಿನ ಒಂದು ಗುಡಿಯಲ್ಲಿ ಶಿವರಾಯ ಹಾಗೂ ಬಂಟರ ಮರದ ಮೂರ್ತಿಯಿದೆ. ಪಕ್ಕದಲ್ಲಿರುವ ಇನ್ನೊಂದು ಗುಡಿಯಲ್ಲಿ ಅಮ್ಮನವರ ಸಾನಿದ್ಯವಿದೆ.
ಗರೋಡಿಯ ಪರಿಸರದಲ್ಲಿ ನಾಗಬನ, ಬ್ರಹ್ಮಸ್ಥಾನಗಳಿವೆ.

ದೋಜು ಪೂಜಾರಿ

ದೋಜು ಪೂಜಾರಿ (80 ವರ್ಷ) ಇವರು ಇಲ್ಲಿಯ ಅರ್ಚಕರು ಹಾಗೂ ದರ್ಶನದ ಸ್ಥಳ ಪಾತ್ರಿ. ಇವರ ಮೊದಲು ಸಂಜೀವ ಪೂಜಾರಿಯವರು ಈ ಗರೋಡಿಯ ಅರ್ಚಕರಾಗಿದ್ದರು.
ಅಶೋಕ ಶೆಟ್ಟಿಯವರು ಈ ಗರೋಡಿಯ ಮೊಕ್ತೇಸರರು. ಇವರ ಮೊದಲು ಸುಖಾನಂದ ಶೆಟ್ಟಿ ಹಾಗೂ ನಾರಾಯಣ ಶೆಟ್ಟಿ ಇವರು ಇಲ್ಲಿಯ ಮೊಕ್ತೇಸರರಾಗಿದ್ದರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರುಕಟ್ಟುವುದು, ಕೊಡಿತಿಂಗಳಲ್ಲಿ ಡಿಸೆಂಬರ್ ಒಂದನೇ ತಾರೀಖಿನಂದು ಪೂಜಾರಿ ಮನೆಯವರಿಂದ ಅಗೆಲು ಸೇವೆ, ಮರುದಿನ ಭಂಡಾರದ ಮನೆಯವರಿಂದ ಶುದ್ಧದ ಅಗೆಲು, ಹನೊಂದಕ್ಕೆ ಬೈದರ್ಕಳ ನೇಮ, ಜೋಗಿ ಪುರುಷ, ಮೈಂದಾಳ್ತಿ ಕೋಲ ನಡೆದು ಹನ್ನೆರಡನೇ ತಾರೀಖಿನಂದು ಶಿವರಾಯ ದೈವಕ್ಕೆ ಮುಂಡಿಗೆ ಪೂಜೆ ನಡೆಯುತ್ತದೆ.
ಆರೂರು, ಬೆಳ್ಮಾರು, ಅಡ್ಪು, ಆಳುಂಜೆ, ಅಡ್ಜಿಲ್, ನಡಿಬೆಟ್ಟು, ಗ್ರಾಮಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರಿವೆ. ಊರ ಜನರು ಗರೋಡಿಯಲ್ಲಿ ನೀರು ಸ್ನಾನ, ಮದುವೆಯಂತಹ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ, ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ. ಗರೋಡಿಯ ಕಾರ್ಯಕ್ರಮಗಳ ವೆಚ್ಚವನ್ನು ಊರಜನರ ವರಡ ವಂತಿಗೆಯಿಂದ ಭರಿಸಲಾಗುತ್ತದೆ.
ಗರೋಡಿಯು 1953, 1978-79 ಹಾಗೂ 2010ರಲ್ಲಿ ಜೀರ್ಣೋದ್ಧಾರವಾಗಿದೆ.
ನರಸಿಂಹ ಪರವ ಮತ್ತು ಸಂಘಡಿಗರು ಚೇರ್ಕಾಡಿ ಇವರು ಈ ಗರೋಡಿಯ ನೃತ್ಯ ವಿಶಾರದರಾಗಿ, ರವಿ ಸೇರಿಗಾರ ಆರೂರು ಇವರು ವಾದ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಕುರುಡುಂಜೆ, ಆರೂರು,
ಬ್ರಹ್ಮಾವರ ತಾಲೂಕು,
ಉಡುಪಿ ಜಿಲ್ಲೆ – 576213.

ಗರೋಡಿಯ ಅರ್ಚಕರು:

ದೋಜು ಪೂಜಾರಿ
ಸಂತೋಷ್ ಪೂಜಾರಿ – 96861 79964

ಮಾಹಿತಿ ನೀಡಿದವರು :

ಸಂಸಂತೋಷ್ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

27.12.2024

Singara Garodi Naaguru, Kirimanjeshwara

ಸಿಂಗಾರ ಗರೋಡಿ ನಾಗೂರು, ಕಿರಿಮಂಜೇಶ್ವರ.

ಉಡುಪಿಯಿಂದ – ಕುಂದಾಪುರ – ಮರವಂತೆ – ನಾವುಂದ – ಕಿರಿಮಂಜೇಶ್ವರದಿAದ ಸುಮಾರು ಒಂದು ಕಿ.ಮೀ. ನಂತರ ಎನ್.ಎಚ್. 66 ರಲ್ಲಿ ಎಡಕ್ಕೆ ತಿರುಗಿ ಸುಮಾರು ಒಂದು ಕಿ.ಮೀ. ದೂರದಲ್ಲಿದೆ. ಈ ಗರೋಡಿ.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಒಳಗೆ ಬ್ರಹ್ಮಗುಡಿಯಲ್ಲಿ ಸಿಮೆಂಟಿನಿಂದ ನಿರ್ಮಿಸಲಾದ ಎರಡು ಅಂತಸ್ತಿನ ಗುಂಡದ ಕೆಳ ಅಂತಸ್ತಿನಲ್ಲಿ ನಾಗಬ್ರಹ್ಮರ ಮೇಲಂತಸ್ತಿನಲ್ಲಿ ಗುಂಡದ ಕರ್ತುವಿನ ಮರದ ಮೂರ್ತಿಗಳಿವೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯ, ಇಬ್ಬರು ಬಂಟರು ಹಾಗೂ ದೇಯಿ ಬೈದೆತಿಯ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ಮೂರ್ ಬಂಟರ ಹಾಗೂ ಗುಂಡದ ನಂದಿಕೇಶ್ವರರ ಮರದ ಮೂರ್ತಿಯಿದೆ.
ಬ್ರಹ್ಮಗುಡಿಯ ಹೊರಗೆ ಬಲಭಾಗದಲ್ಲಿ ಬಾಗಿಲನಂದಿ, ಕಾಶಿ ಪಂಜುರ್ಲಿ, ಮಳಿಯಾಳಿ ಪಂಜುರ್ಲಿ ಬಂಟ ಪಂಜುರ್ಲಿ ( ತುಳು ಪಂಜುರ್ಲಿ) ಅಣ್ಣಪ್ಪ ಪಂಜುರ್ಲಿ, ವಾಹನ ಪಂಜುರ್ಲಿ ದೈವಗಳ ಸಾನಿದ್ಯವಿದೆ.
ಗುಂಡದ ಎಡಭಾಗದಲ್ಲಿ ಗೆಂಡದ ಹೈಗುಳಿ, ಮುಡೂರ ಹೈಗುಳಿ, ದೊಟ್ಟಿಕಾಲಮ್ಮ, ದೊಟ್ಟಿಕಾಲ ಚಿಕ್ಕು, ಚಿಕ್ಕು, ಮರ್ಲಮ್ಮ, ಬಗ್ಗ ಚಿಕ್ಕು, ಬಾಲಚಿಕ್ಕು, ನೇತ್ರ ಹೈಗುಳಿ, ಗುರುದೇವ್ರು, ಮೈದಾಳಿ ಅಮ್ಮ, ಬಾಲಮ್ಮ, ಪಾತ್ರಿ ಕೋಟಿಗಳ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಗೆ ಎದರು ಮುಖವಾಗಿ ಜೋಗದೇವರು (ಜೋಗಿಪುರುಷ) ಮಾಸ್ತಿ ಅಮ್ಮ, ಕ್ಷೇತ್ರ ಹೈಗುಳಿ, ಹನಾರ ಹೈಗುಳಿ, ಮೂರ್ಚಂಡಿ, ಹೀತ್ರ ಮೂತ್ರ ಹೈಗುಳಿ, ಕಂಚಿನ ಹೈಗುಳಿ, ಮೂಕ ಹೈಗುಳಿ, ಖಂಬದ ಕೋಣೆ ಹೈಗುಳಿ, ಬಣ್ಣದ ಹೈಗುಳಿ, ಕರಿಬೆಟ್ಟು ಹೈಗುಳಿ, ದೈವಗಳ ಮರದ ಮೂರ್ತಿಗಳಿವೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯ ಮರದ ಮೂರ್ತಿಯಿದೆ.
ಗರೊಡಿಯ ಆವರದಲ್ಲಿರುವ ಗುಡಿಯೊಂದರಲ್ಲಿ ಬ್ಯಾಟಿ ಬೀರ ಹಾಗೂ ಅಸಲ ತಿಮ್ಮ ಶಕ್ತಿಗಳ ಆರಾಧನೆಯಿದೆ.
ಇನ್ನೊಂದು ಗುಡಿಯಲ್ಲಿ ಒತ್ತಿನ ಹೈಗುಳಿ, ಸಿಂಗೂರ ಹೈಗುಳಿ, ಸಿಂಗೂರ ನಂದಿ, ಪರಿವಾರ, ಊರ್ ಮಾರಮ್ಮ, ಜಪದಮಣಿ, ಸನ್ಯಾಸಿ, ಸ್ವಾಮಿಲಿಂಗ, ಭುವನೇಶ್ವರ, ಮರ್ರಕಾಳ, ಪಾತ್ರಿಕೋಲಿ, ಮೈಸ್ವಾಮಿ, ಗಂಡ ಯಕ್ಷಿ, ಹೆಣ್ಣು ಯಕ್ಷಿ, ಜಟ್ಕ, ಜೋಡು ಕೋಣ, ಬಾಗಿಲ ನಂದಿ ದೈವಗಳ ಸಾನಿದ್ಯವಿದ್ದು, ಈ ಗುಡಿಯ ಹೊರಗೆ ಕಾಡಚಿ ಅಮ್ಮನ ಮರದ ಮೂರ್ತಿಯಿದೆ.
ಇನ್ನೊಂದು ಗುಡಿಯಲ್ಲಿ ಒತ್ತಿನ ಹೈಗುಳಿ, ಸಿಂಗೂರ ಹೈಗುಳಿ, ಸಿಂಗೂರ ನಂದಿ, ಪರಿವಾರ, ಊರ್ ಮಾರಮ್ಮ, ಜಪದಮಣಿ, ಸನ್ಯಾಸಿ, ಸ್ವಾಮಿಲಿಂಗ, ಭುವನೇಶ್ವರ, ಮರ್ರಕಾಳ, ಪಾತ್ರಿಕೋಲಿ, ಮೈಸ್ವಾಮಿ, ಗಂಡ ಯಕ್ಷಿ, ಹೆಣ್ಣು ಯಕ್ಷಿ, ಜಟ್ಕ, ಜೋಡು ಕೋಣ, ಬಾಗಿಲ ನಂದಿ ದೈವಗಳ ಸಾನಿದ್ಯವಿದ್ದು, ಈ ಗುಡಿಯ ಹೊರಗೆ ಕಾಡಚಿ ಅಮ್ಮನ ಮರದ ಮೂರ್ತಿಯಿದೆ.
ಗಂಡಸರು, ಹುಡುಗರು, ಈ ಗರೋಡಿಯೊಳಗೆ ಅಂಗಿ, ಬನಿಯನ್, ತೆಗೆದು ಪ್ರವೇಶಿಸುವ ಸಂಪ್ರದಾಯವಿದೆ.
ನಾಗೂರು ಬಡಾಮನೆ ಪಂಜು ಪೂಜಾರಿಯವರು, ಸಿಂಗಾರ ಬಡಾಮನೆ ಮೂಡೂರ ಪೂಜಾರಿ, ಗಣೇಶ ಪೂಜಾರಿ, ಚಂದ್ರ ಪೂಜಾರಿ, ಗೆದ್ದೆಮನೆ ಪಂಜು ಪೂಜಾರಿ, ಪಡುಮನೆ ವೆಂಕಟೇಶ ಪೂಜಾರಿ, ಮಗಿರಬೆಟ್ಟು ಚಿಕ್ಕ ಪೂಜಾರಿ ಇವರುಗಳು ಈ ಗರೋಡಿಯ ಅರ್ಚಕರು.
ಗೆದ್ದೆಮನೆ ರವಿ ಪೂಜಾರಿ, ಸಿಂಗಾರ ಬಡಾಮನೆ ಭಾಸ್ಕರ ಪೂಜಾರಿ ಹಾಗೂ ಪಡುಮನೆ ಗಿರೀಶ್ ಪೂಜಾರಿ ಇವರು ಈ ಗರೋಡಿಯ ದರ್ಶನದ ಸ್ಥಳ ಪಾತ್ರಿಗಳು.
ಮುಡೂರ ಪೂಜಾರಿಯವರು ಈ ಗರೋಡಿಯ ಮೊಕ್ತೇಸರರು. ನರಸಿಂಹ ಶೆಟ್ಟಿ, ಕಂಬಳ ಗದ್ದೆ ಮನೆ ಹಳಗೇರಿ ಇವರು ಈ ಗರೋಡಿಯ ಬಲ್ಲಾಳ ಸೆಟ್ರು.
ಗರೋಡಿಯಲ್ಲಿ ನಿತ್ಯ ಪೂಜೆ, ಸಂಕ್ರಾಂತಿಪೂಜೆ, ಸೋಣಾರತಿ, ಪ್ರತೀ ವರ್ಷ ಜನವರಿ 14-15ನೇ ತಾರೀಖಿಗೆ ಹಾಲುಹಬ್ಬ, ಅಗೆಲು ಸೇವೆ, ತುಲಾಭಾರ ಸೇವೆ, ನಡೆಯುತ್ತದೆ. ಎರಡು ವರ್ಷಕ್ಕೊಮ್ಮೆ ಎಲ್ಲಾ ದೈವಗಳ ಕೋಲ ಸೇವೆ ನಡೆಯುತ್ತದೆ.
ನಾಗೂರು, ಬೈಂದೂರು, ಉಪ್ಪುಂದ, ಯೆರುಕೋಣೆ ಭಾಗದ ಜನರು ಈ ಗರೋಡಿಯಲ್ಲಿ ಶುಭ ಸಂದರ್ಭಗಳಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ, ತುಲಾಭಾರ ಸೇವೆ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ. ಊರ ಜನರ ಕಾಲಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ಖರ್ಚನ್ನು ಭರಿಸಲಾಗುತ್ತದೆ.
ಗರೋಡಿಗೆ 89 ಸೆಂಟ್ಸ ಜಾಗವಿದ್ದು 2010ರಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿದೆ.
ನಾಗ ಪಾಣೇರ ಹಂಪಾರು ಇವರು ಈ ಗರೋಡಿಯ ನೃತ್ಯವಿಶಾರದರಾಗಿ, ಸುರೇಶ ಮಡಿವಾಳ, ಉಳ್ಳೂರು ಇವರು ಮಡಿವಾಳರಾಗಿ, ಕೃಷ್ಣ ದೇವಾಡಿಗ ಆಕಲಬೈಲು ಕಿರಿಮಂಜೇಶ್ವರ ಇವರು ವಾಧ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಸಿಂಗಾರ ಗರೋಡಿ, ನಾಗೂರು,
ಕಿರಿಮಂಜೇಶ್ವರ ಅಂಚೆ,
ಬೈಂದೂರು ತಾಲೂಕು.

ಗರೋಡಿಯ ಅರ್ಚಕರು:

ಗಣೇಶ ಪೂಜಾರಿ – 9535388261

ಮಾಹಿತಿ ನೀಡಿದವರು :

ಗಣೇಶ ಪೂಜಾರಿ,
ಚಂದ್ರೇಶ ಪೂಜಾರಿ – 9880005048

ಮಾಹಿತಿ ಸಂಗ್ರಹಿಸಿದ ದಿನಾಂಕ :

26.02.2025

Shree Brahma Baidarkala Koti Chennayya Panjurli Garodi, Holethota – Bijoor

ಶ್ರೀ ಬ್ರಹ ಬೈದರ್ಕಳ ಕೋಟಿಚೆನ್ನಯ್ಯ ಪಂಜುರ್ಲಿ ಗರೋಡಿ ಹೊಳೆತೋಟ – ಬಿಜೂರು

ಉಡುಪಿಯಿಂದ ರಾಷ್ಟಿçÃಯ ಹೆದ್ದಾರಿ ಎನ್.ಎಚ್.66ರಲ್ಲಿ ಬಿಜೂರು ತುಲು ರಾಷ್ಟ್ರೀಯ ಹೆದ್ದಾರಿಯಿಂದ ಬಲಕ್ಕೆ ತಿರುಗಿ ಸುಮಾರು 2.6ಕಿ.ಮೀ ಒಳಗೆ ಹೋದಾಗ ಬೈಂದೂರು ಹೊಳೆಯ ಬದಿಯಲ್ಲಿದೆ ಬಿಜೂರು ಹೊಳೆತೋಟ ಗರೋಡಿ.
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಒಳಗೆ ಬ್ರಹ್ಮಗುಡಿಯಲ್ಲಿ ಸಿಮೆಂಟಿನಿಂದ ನಿರ್ಮಿಸಲಾದ ಬ್ರಹ್ಮಗುಂಡದ ಒಳಗೆ ನಾಗಬ್ರಹ್ಮರ ಪಂಚಲೋಹದ ಮೂರ್ತಿ ಹಾಗೂ ನಾಗದೇವರ ಮೂರ್ತಿಇದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರು, ಇಬ್ಬರು ಬಂಟರು ಹಾಗೂ ನಂದಿಕೇಶ್ವರ ದೈವದ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ಕುಬ್ಜಕೋಣದ (ಕುಜುಂಬ ಕಾಂಜವ ??) ಮರದ ಮೂರ್ತಿ ಹಾಗೂ ದೇಯಿಬೈದೆತಿಯ ಮಣೆಮಂಚವಿದೆ
ಬ್ರಹ್ಮಗುಡಿಯ ಹೊರಗೆ ಬಲ ಬದಿಯಲ್ಲಿ ಸಿಂಗಾರ ಹೈಗುಳಿ, ಪಂಜುರ್ಲಿ ವಾಹನ, ಪಂಜುರ್ಲಿ ದೈವಗಳ ಸಾನಿದ್ಯವಿದೆ. ಬ್ರಹ್ಮಗುಡಿಯ ಎಡಬದಿಯಲ್ಲಿ ಕರ್ತು, ಹೊನ್ನಳ್ಳಿ ಮಾಸ್ತಿ, ಚುಟ್ಟಿಬೇರುಮಾಸ್ತಿ ದೈವಗಳ ಸಾನಿದ್ಯವಿದೆ.
ಪಕ್ಕದಲ್ಲಿ ಧೂಮಾವತಿ, ಮಾಯಿಂದಾಳಮ್ಮನ ಮಗಳು, ಮಾಯಿಂದಾಳಮ್ಮ, ಮೂರು ಕಂಚಿನ ಹೈಗುಳಿ, ಕಾಮನ ಹೈಗುಳಿ, ಜೋಗದೇವರು, ಕೆರಾಡಿ ಹೈಗುಳಿ, ಮುರ್ಚಂಡಿ, ಕರಿಬೆಟ್ಟಿನ ಹೈಗುಳಿ, ಹೈಗುಳಿ, ತಿಮ್ಮಣ್ಣ ನಾಯ್ಕರು, ಮುಡೂರಮ್ಮ, ದೊಟ್ಟಿಕಾಲಮ್ಮ, ಮಲಕಮ್ಮ, ಹಿಜಾಣಮ್ಮ, ಮತ್ತು ವಾಹನ ದೈವಗಳ ಆರಾಧನೆಯಿದೆ.
ಗರೋಡಿಯ ಹೊರಗೆ ಬಾಗಿಲ ಹತ್ತಿರ ಬಾಗಿಲ ಬೊಬ್ಬರ್ಯನ ಮರದ ಮೂರ್ತಿಯಿದೆ. ಗರೋಡಿಯ ಆವರಣದೊಳಗೆ ಹೊರಸುತ್ತಿನ ಹೈಗುಳಿ, ಕ್ಷೇತ್ರಪಾಲ, ಆಶ್ವತ್ತಮರದ ಕಟ್ಟೆ, ತುಳಸಿಕಟ್ಟೆ, ಬೆಳಗಲ್ಲುಗಳಿವೆ.

ಅಯ್ಯಪ್ಪ ಪೂಜಾರಿ

ಕೋಟಿ ಪೂಜಾರಿ

2020ರಿಂದ ಅಯ್ಯಪ್ಪ ಪೂಜಾರಿ (50ವರ್ಷ) ಯವರು ಗರೋಡಿಯ ಅರ್ಚಕರಾಗಿ ಸೇವೆ ಮಾಡುತ್ತಿದ್ದು, ಕೋಟಿ ಪೂಜಾರಿ (80 ವರ್ಷ) ಯವರು ಸಹ ಅರ್ಚಕರಾಗಿ ಸೇವೆ ಮಾಡುತ್ತಿದ್ದಾರೆ. ಇವರ ಮೊದಲು ಕುಷ್ಠ ಪೂಜಾರಿ, ನಾಗ ಪೂಜಾರಿಯವರು ಈ ಸೇವೆ ಮಾಡಿದ್ದರು.

ನಾಗಪ್ಪ ಪೂಜಾರಿ

ಮಂಜ ಪೂಜಾರಿ

ನಾಗಪ್ಪ ಪೂಜಾರಿ ಹಾಗೂ ಮಂಜ ಪೂಜಾರಿಯವರು ಇಲ್ಲಿ ದರ್ಶನ ಸ್ಥಳ ಪಾತ್ರಿಗಳು. ಇವರ ಮೊದಲು ಮಂಜಯ್ಯ ಪೂಜಾರಿ, ಮೂಡೂರ ಪೂಜಾರಿ, ನಾರಾಯಣ ಪೂಜಾರಿಯವರು ಇಲ್ಲಿಯ ದರ್ಶನದ ಸ್ಥಳ ಪಾತ್ರಿಗಳಾಗಿದ್ದರು.
ಸಂಜೀವ ಶೆಟ್ಟಿ, ನೆಲ್ಯಾಡಿ ಇವರು ಇಲ್ಲಿಯ ಬಲ್ಲಾಳ(ಮುಕ್ಕಾಲಿ) ಯಾಗಿರುವರು.
ಗರೋಡಿಯ ಉಸ್ತುವಾರಿಗೆ ಆಡಳಿತ ಸಮಿತಿಯಿದ್ದು, ಪರಮೇಶ್ವರ ಪೂಜಾರಿಯವರು ಅಧ್ಯಕ್ಷರಾಗಿ, ಉದಯ ಪೂಜಾರಿಯವರುಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಗರೋಡಿಯಲ್ಲಿ ನಿತ್ಯಪೂಜೆ, ಸಂಕ್ರಾಂತಿ ಪೂಜೆ, ಅಷ್ಟಮಿ ಪೂಜೆ, ಕದಿರು ಕಟ್ಟುವುದು, ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಒಂದು ದಿನ ಅಗೆಲು ಸೇವೆ, ದರ್ಶನ, ನೇಮ, ಎರಡನೇ ದಿನ ಗುರಿಪೂಜೆ, ಹಾಗೂ ದರ್ಶನ ಸೇವೆಗಳು ನಡೆಯುತ್ತವೆ.
ಬಿಜೂರು, ಹೊಳೆತೋಟದ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಊರ ಜನರ ಕಾಲಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ಖರ್ಚುವೆಚ್ಚವನ್ನು ಭರಿಸಲಾಗುತ್ತದೆ.
ಗರೋಡಿಗೆ 25ಸೆಂಟ್ಸ ಜಾಗವಿದ್ದು 2000ರಲ್ಲಿ ಗರೋಡಿಯಿ ಜೀರ್ಣೋದ್ದಾರವಾಗಿದೆ.
ಸುಕುಮಾರ ಮಡಿವಾಳ ಹೊಳೆತೋಟ ಇವರು ಮಡಿವಾಳರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಕೋಟಿಚೆನ್ನಯ ಪಂಜುರ್ಲಿ ಗರೋಡಿ ಹೊಳೆತೋಟ ಬಿಜೂರು,
ಬೈಂದೂರು ತಾಲೂಕು,
ಉಡುಪಿ ಜಿಲ್ಲೆ – 576244.

ಗರೋಡಿಯ ಅರ್ಚಕರು:

ಅಯ್ಯಪ್ಪ ಪೂಜಾರಿ – 7758000835,
ಕೋಟಿ ಪೂಜಾರಿ – 9632904289.

ಗರೋಡಿಯ ಪಾತ್ರಿಗಳು:

ನಾಗಪ್ಪ ಪೂಜಾರಿ -9880772880,
ಮಂಜ ಪೂಜಾರಿ – 9900825164

ಆಡಳಿತ ಸಮಿತಿ:

ಪರಮೇಶ್ವರ ಪೂಜಾರಿ – ಅಧ್ಯಕ್ಷರು – 7259585835 ;
ಉದಯ ಪೂಜಾರಿ – ಕಾರ್ಯದರ್ಶಿ – 9663003922.

ಮಾಹಿತಿ ನೀಡಿದವರು :

ಅಯ್ಯಪ್ಪ ಪೂಜಾರಿ,
ಶಂಕರ ಪೂಜಾರಿ
– 97407 50372

ಮಾಹಿತಿ ಸಂಗ್ರಹಿಸಿದ ದಿನಾಂಕ :

26.02.2025

Shree Brahma Baidarkala Garodi, Navunda

ಶ್ರೀ ಬ್ರಹ್ಮಬೈದರ್ಕಳ ಕೋಟಿಚೆನ್ನಯ ಗರೋಡಿ, ನಾವುಂದ

ಉಡುಪಿಯಿಂದ – ಕುಂದಾಪುರ – ಮರವಂತೆಯಾಗಿ ನಾವುಂದ ತಲುಪಿ ರಾಷ್ಟ್ರೀಯ ಹೆದ್ದಾರಿ ಎನ್.ಎಚ್.66ರಿಂದ ಬಲಕ್ಕೆ ತಿರುಗಿ ಸುಮಾರು ಒಂದು ಕಿ.ಮೀ. ಸಾಗಿದರೆ ನಾವುಂದ ಗರೋಡಿ ಸಿಗುವುದು.
ಗರೋಡಿಯು ಪೂರ್ವಾಭಿಮುಖವಾದ ಒಂದು ದ್ವಾರವನ್ನು ಹೊಂದಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ಪಂಚಲೋಹಕ್ಕೆ ಬೆಳ್ಳಿಕವಚ ಹೊದಿಸಿದ ನಾಗಬ್ರಹ್ಮರ ಮೂರ್ತಿ ಹಾಗೂ ಇನ್ನೊಂದು ಮರದ ನಾಗಬ್ರಹ್ಮರ ಮೂರ್ತಿ ಹೀಗೆ ಎರಡು ಮೂರ್ತಿಗಳಿವೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರು, ಇಬ್ಬರು ಬಂಟರು, ದೇಯಿಬೈದೆತಿ ಹಾಗೂ ನಂದಿಕೋಣರ ಮರದ ಮೂರ್ತಿಗಳಿವೆ.
ಗುಂಡದ ಬಲಭಾಗದಲ್ಲಿ ಬೈದ ಹಾಗೂ ಬಂಟ, ಕಿನ್ನಿದಾರುವಿನ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಯ ಹೊರಗೆ ಬಲಭಾಗದಲ್ಲಿ ಹೊನ್ನಮ್ಮ, ಚಿನ್ನಮ್ಮ ಮರದ ಮೂರ್ತಿ , ಪ್ರಸಾದ ಹೈಗುಳಿ, ಮೂಡೂರ (ಕಡಕಟ್ಟಿನ) ಹೈಗುಳಿ ದೈವಗಳ ಕಂಚಿನ ಮೂರ್ತಿಗಳಿವೆ.
ಬ್ರಹ್ಮಗುಡಿಯ ಎಡಭಾಗದಲ್ಲಿ ಪಂಜುರ್ಲಿ ದೈವದ ಪಂಚಲೋಹಕ್ಕೆ ಬೆಳ್ಳಿಯ ಕವಚವಿರುವ ಮೂರ್ತಿ ಒಂಟಿ ಕೋಡೊನ ಪಂಜುರ್ಲಿ, ಧೂಮಾವತಿ, ಹೈಗುಳಿ, ಹಾಲು ಹಣ್ಣಿನ ಹೈಗುಳಿ ದೈವಗಳ ಸಾನಿದ್ಯವಿದೆ.
ಪಕ್ಕದಲ್ಲಿ ಜಟ್ಟಿಗ, ಮೈಂದಾಳ್ತಿ, ಬಾಲಕಂದರ ಮರದ ಮೂರ್ತಿಗಳಿವೆ.
ಅದರ ಪಕ್ಕದಲ್ಲಿ ನಂದಿ ಹಾಗೂಕರಿಬೆಟ್ಟಿನ ಹೈಗುಳಿ ಕಂಚಿನ ಮೂರ್ತಿ, ಮೂಡೂರ ಅಮ್ಮ (ಚಿಕ್ಕು) ದೊಟ್ಟಿಕಾಲು ಚಿಕ್ಕು, ಅವತಾರ ಚಿಕ್ಕು, ಬಾಲ ಚಿಕ್ಕು, ಮರ್ಲು ಚಿಕ್ಕು, ಬಗ್ಗು ಚಿಕ್ಕು, ಸನ್ಯಾಸಿ (ಜೋಗಿ ಪುರುಷ)ರ ಮರದ ಮೂರ್ತಿಗಳಿವೆ.
ಬ್ರಹ್ಮಗುಡಿಗೆ ಎದುರು ಮುಖವಾಗಿ ಕೆಪ್ಪ ಹೈಗುಳಿ, ಕುಜ್ಙಾಡಿ ಹೈಗುಳಿ, ಕುಂಟ ಹೈಗುಳಿ, ನಂದಿ, ಮುರ್ಚಂಡಿ, ಸುಂಕದಕಟ್ಟೆ ಹೈಗುಳಿ, ಯಕ್ಷಿ, ಮಾಸ್ತಿಕಟ್ಟೆ ಚಿಕ್ಕು, ಮಾರಣಕಟ್ಟೆ ಚಿಕ್ಕು, ಕೆಂಪಣ್ಣ ಹೈಗುಳಿ, ದೈವಗಳ ಮರದ ಮೂರ್ತಿಗಳಿವೆ.
ಗರೋಡಿಯ ಬಾಗಿಲ ಹತ್ತಿರ ಬಾಗಿಲು ಬೊಬ್ಬರ್ಯನ ಮರದ ಮೂರ್ತಿಯಿದೆ.
ಗರೋಡಿಯ ಹೊರಗೆ ಆವರಣದೊಳಗಿನ ಗುಡಿಯಲ್ಲಿ ಹೊರಸುತ್ತಿನ ಹೈಗುಳಿ ದೈವದ ಸಾನಿಧ್ಯವಿದೆ. ಇನ್ನೊಂದು ಗುಡಿಯಲ್ಲಿ ಕಂಚಿನ ಹೈಗುಳಿಯ ಕಂಚಿನ ಮೂರ್ತಿ ಹಾಗೂ ಯಕ್ಷಿಯ ಮರದ ಮೂರ್ತಿಯಿದೆ.
ಒಂದು ಕಟ್ಟೆಯಲ್ಲಿ ಕೀಳು, ಮಂತ್ರಿಗಣ ಹಾಗೂ ಕಲ್ಲುಕುಟ್ಟಿಗ ದೈವಗಳ ಸಾನಿಧ್ಯವಿದೆ. ಇನ್ನೊಂದು ಕಟ್ಟೆಯಲ್ಲಿ ರಾಹು, ನೀಚ, ರಕ್ತ ಹೈಗುಳಿ, ನೇತ್ರ ಹೈಗುಳಿ, ಹಾಗೂ ಗ್ರಾಮ ಶಕ್ತಿಗಳ ಆರಾಧನೆಯಿದೆ.
ಗರೋಡಿಯ ಹತ್ತಿರದಲ್ಲಿಯೇ ಗರೋಡಿಗೆ ಸಂಬಂಧಪಟ್ಟ ನಾಗಬನವಿದೆ. ಗರೋಡಿಯ ಆವರಣದಲ್ಲಿ ಬಲಿಕಲ್ಲು, ತುಳಸಿಕಟ್ಟೆಗಳಿವೆ.

ಸುಧಾಕರ ಪೂಜಾರಿ

ರಾಮಕೃಷ್ಣ ಬಿಲ್ಲವ

2016ರಿಂದ ಸುಧಾಕರ ಪೂಜಾರಿ(44ವರ್ಷ) ಇವರು ಗರೋಡಿಯ ಅರ್ಚಕರಾಗಿ, ರಾಮಕೃಷ್ಣ ಬಿಲ್ಲವ (49 ವರ್ಷ) ಇವರು ಸಹ ಅರ್ಚಕರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ. ಇವರ ಮೊದಲು ಹಿರಿಯರಾದ ತಿಮ್ಮಪ್ಪ ಪೂಜಾರಿ, ಕೃಷ್ಣ ಪೂಜಾರಿ, ರಾಮ ಪೂಜಾರಿ, ನಾಗ ಪೂಜಾರಿ, ನಾಗ ಪೂಜಾರಿ, ರಾಮಯ್ಯ ಪೂಜಾರಿ, ಮೋನ ಪೂಜಾರಿ, ಮಂಜ ಪೂಜಾರಿ, ಇವರುಗಳು ಈ ಗರೋಡಿಯ ಅರ್ಚಕರಾಗಿ ಸೇವೆ ಮಾಡಿದ್ದರು.

ನಾಗ ಪೂಜಾರಿ

ನಾಗ ಪೂಜಾರಿ(33 ವರ್ಷ) ಇವರು 2022ರಿಂದ ಗರೋಡಿಯ ದರ್ಶನದ ಸ್ಥಳ ಪಾತ್ರಿಗಳಾಗಿದ್ದಾರೆ. ಇವರ ಮೊದಲು ಮಂಜ ಪೂಜಾರಿ, ಮಾಲಿಂಗ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.

ಶೇಖರ ಪೂಜಾರಿ

ಶೇಖರ ಪೂಜಾರಿಯವರು ಗರೋಡಿಯ ಮೊಕ್ತೇಸರರು. ಇವರ ಮೊದಲು ನಾಗಪೂಜಾರಿ, ಮಾಲಿಂಗ ಪೂಜಾರಿಯವರು ಗರೋಡಿಯ ಮೊಕ್ತೇಸರರಾಗಿದ್ದರು.
ಗರೋಡಿಯ ಉಸ್ತುವಾರಿಗೆ 13 ಮಂದಿ ಟ್ರಸ್ಟಿಗಳನ್ನೊಳಗೊಂಡ ಶ್ರೀ ಬ್ರಹ್ಮಬೈದರ್ಕಳ ಗರಡಿ ಟ್ರಸ್ಟ್(ರಿ) ನಾವುಂದ ಎಂಬ ಹೆಸರಿನ ಟ್ರಸ್ಟ್ ಇದೆ. ಎನ್.ಕೆ.ಬಿಲ್ಲವ ಇವರು ಟ್ರಸ್ಟಿನ ಗೌರವಾಧ್ಯಕ್ಷರಾಗಿಯೂ, ಮುತ್ತ ಬಿಲ್ಲವ ಇವರು ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುಯತ್ತಿದ್ದಾರೆ.
ಗರೋಡಿಯಲ್ಲಿ ನಿತ್ಯ ಪೂಜೆ, ಸಂಕ್ರಾಂತಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಪ್ರತೀ ವರ್ಷ ಜನವರಿ 21ನೇ ತಾರೀಖಿನಂದು ಅಗೆಲು ಸೇವೆ, ಗೆಂಡ ಸೇವೆ, ದರ್ಶನ ಸೇವೆ, 22ಕ್ಕೆ ಸಿರಿಸೇವೆ, ದರ್ಶನ, ತುಲಾಭಾರ ಸೇವೆ, ಗುರಿ ಪೂಜೆಗಳು ನಡೆಯುತ್ತವೆ.
ಕಿರಿಮಂಜೇಶ್ವರ, ಮರವಂತೆ, ಬಡಾಕೇರಿ, ಹೇರೂರು, ಅರೆಹೊಳೆ, ನಾವುಂದ ಭಾಗದ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಮದುವೆ ಮುಂತಾದ ಶುಭ ಸಂದರ್ಭದಲ್ಲಿ ಜೋಡುಕಾಯಿ ತೆಗೆದಿಡುವುದು, ಹೆರಿಗೆಯ ನಂತರ ತಿಂಗಳು ಮಾಡಿಸುವುದು, ಮುಂತಾದ ಹರಕೆಯ ಸೇವೆಗಳನ್ನು ನೀಡುವ ಕ್ರಮವಿದೆ. ಊರ ಪರವೂರ ಜನರ ವರಡ ವಂತಿಗೆ, ಕಾಣಿಕೆ, ಸಹಾಯ ಧನಗಳಿಂದ ಗರೋಡಿಯ ಕಾರ್ಯಕ್ರಮಗಳ ಖರ್ಚುವೆಚ್ಚ ಭರಿಸಲಾಗುತ್ತದೆ.

ಗರೋಡಿಯ ಜೀರ್ಣೋದ್ದಾರದ ಮೊದಲಿನ ಫೋಟೋ.

ಗರೋಡಿಯು 2016ರಲ್ಲಿ ಜೀರ್ಣೋದ್ಧಾರಗೊಂಡಿದೆ. ಇದಕ್ಕೆ ಮೊದಲು 1982-84ರಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿತ್ತು.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಕೋಟಿಚೆನ್ನಯ ಗರೋಡಿ ನಾವುಂದ ಗರಡಿಬೆಟ್ಟು,
ಗ್ರಾಮ ಮತ್ತು ಅಂಚೆ ನಾವುಂದ,
ಬೈಂದೂರು ತಾಲೂಕು 576224.

ಗರೋಡಿಯ ಅರ್ಚಕರು:

ಸುಧಾಕರ ಪೂಜಾರಿ – 9742563521 – ಪ್ರಧಾನ ಅರ್ಚಕರು.
ರಾಮಕೃಷ್ಣ ಬಿಲ್ಲವ – 8850255132 – ಸಹ ಅರ್ಚಕರು.

ಗರೋಡಿಯ ಪಾತ್ರಿಗಳು:

ನಾಗರಾಜ ಪೂಜಾರಿ 9164722979

ಗರೋಡಿಯ ಮೊಕ್ತೇಸರರು:

ಶೇಖರ ಪೂಜಾರಿ – 9743647032

ಮಾಹಿತಿ ನೀಡಿದವರು :

ಶೇಖರ ಪೂಜಾರಿ,
ಸುಧಾಕರ ಪೂಜಾರಿ,
ರಾಮಕೃಷ್ಣ ಬಿಲ್ಲವ,
ನಾಗರಾಜ ಪೂಜಾರಿ

ಮಾಹಿತಿ ಸಂಗ್ರಹಿಸಿದ ದಿನಾಂಕ :

26.02.2025