Baidashree

Shree Kodamanittaya Brahmaidarkala & Mayandal Garodi, Mitthottu Gutthu, Ajekar

ಶ್ರೀ ಕೊಡಮಣ್ತಾಯ ಬ್ರಹ್ಮಬೈದರ್ಕಳ ಹಾಗೂ ಮಾಯಂದಾಳ್ ಗರೋಡಿ, ಮಿತ್ತೊಟ್ಟು ಗುತ್ತು, ಅಜೆಕಾರು

ಉಡುಪಿಯಿಂದ ಹಿರಿಯಡ್ಕ ಮಾರ್ಗವಾಗಿ ಅಜೆಕಾರು ತಲುಪಿ ಕೆರ್ವಾಶೆ ರಸ್ತೆಗೆ ತಿರುಗಿ ಸುಮಾರು ಒಂದು ಕಿ. ಮೀ. ಮುಂದೆ ಶ್ರೀ ಮಹಾ ವಿಷ್ಣು ದೇವಸ್ಥಾನ, ಅಜೆಕಾರು ಇದರ ಸ್ವಾಗತ ಗೋಪುರದ ಮೂಲಕ ಹಾದು ಸುಮಾರು 850 ಮೀ. ಸಾಗಿದರೆ ರಸ್ತೆಯ ಎಡಬದಿಯಲ್ಲಿದೆ ಈ ಗರೋಡಿ.
Mitthottu-Gutthu-Ajekar-Garodi-1
Mitthottu-Gutthu-Ajekar-Garodi-2
ಗರೋಡಿಗೆ ಎರಡು ದ್ವಾರಗಳಿದ್ದು, ಮುಖ್ಯ ದ್ವಾರವು ಪೂರ್ವಾಭಿಮುಖವಾಗಿದ್ದು ಇನ್ನೊಂದು ದ್ವಾರವು ಉತ್ತರ ದಿಕ್ಕಿಗಿದೆ. ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದ್ದು ಷಢಾಧಾರ ಪ್ರತಿಷ್ಠೆಯನ್ನು ಹೊಂದಿದೆ.
ಈ ಗರೋಡಿಯು 2010ರವರೆಗೆ ಸುಮಾರು 62 ವರ್ಷಗಳ ಕಾಲ ಯಾವುದೇ ಪೂಜೆ ಪುರಸ್ಕಾರಗಳಿಲ್ಲದೆ ಬೀಗ ಹಾಕಿಯೇ ಇತ್ತು. 2010 ರ ನಂತರ ಇಲ್ಲಿ ಪೂಜೆ ಪುರಸ್ಕಾರ, ಕೋಲ ಸೇವೆಗಳು ನಡೆಯಲಾರಂಭಿಸಿ, 2024 ಗರೋಡಿಯ ಜೀರ್ಣೋದ್ದಾರವಾಗಿದೆ.
Mitthottu-Gutthu-Ajekar-Garodi-3
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗ ಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
Mitthottu-Gutthu-Ajekar-Garodi-4
ಗುಂಡದ ಎಡಬದಿಯಲ್ಲಿರುವ ಮಣೆಮಂಚದಲ್ಲಿ ಕೋಟಿ-ಚೆನ್ನಯರ ಪಂಚಲೋಹದ ಮೂರ್ತಿ, ಪಕ್ಕದಲ್ಲಿರುವ ಇನ್ನೊಂದು ಮಣೆಮಂಚದಲ್ಲಿ ಕುಜುಂಬ ಕಾಂಜವರ ಪಂಚಲೋಹದ ಮೂರ್ತಿ ಇದೆ.
Mitthottu-Gutthu-Ajekar-Garodi-5
Mitthottu-Gutthu-Ajekar-Garodi-6
ಬ್ರಹ್ಮ ಗುಡಿಯ ಹೊರಗೆ ಎಡಬದಿಯಲ್ಲಿ ಮಣೆಮಂಚದ ಮೇಲೆ ಮಾಯಂದಾಲ್‌ಗೆ ತತ್ರ ಹಾಗೂ ಗೆಜ್ಜೆಕತ್ತಿಗಳನ್ನಿಟ್ಟು ಪೂಜಿಸಲಾಗುತ್ತದೆ. ಪಕ್ಕದಲ್ಲಿ ಜೋಗಿ ಪುರುಷರ ಮರದ ಮೂರ್ತಿ ಇದೆ.
Mitthottu-Gutthu-Ajekar-Garodi-7
ಗರೋಡಿಯ ಪಕ್ಕದಲ್ಲಿರುವ ಗುಡಿಯಲ್ಲಿ ಧರ್ಮರಸು, ಕೊಡಿಮಂತಾಯ, ಕುಕ್ಕಿನಂತಾಯ, ದೈವಗಳ ಮಣೆ ಮಂಚದಲ್ಲಿ ಪಂಚಲೋಹದ ಮೂರ್ತಿ ಇದೆ.
Mitthottu-Gutthu-Ajekar-Garodi-8
ಎದುರಿಗೆ ಕಲ್ಕುಡ ದೈವದ ಕಲ್ಲಿನ ಮಂಡಿಗೆ ಇದೆ. ಗರೋಡಿಯ ಆವರಣದಲ್ಲಿ ದ್ವಜ ಸ್ಥಂಭ, ಬಲಿಕಲ್ಲು, ಅಜೆಕಾಯಿ ಕಲ್ಲುಗಳಿವೆ. ಗರೋಡಿಗೆ ಸಂಬಂಧಪಟ್ಟ ಬ್ರಹ್ಮಸ್ಥಾನವು ಗರೋಡಿಯಿಂದ ಸುಮಾರು 2ಕಿ. ಮೀ. ದೂರದಲ್ಲಿದೆ.
Mitthottu-Gutthu-Ajekar-Garodi-9

ಶೇಖರ ಪೂಜಾರಿ

Mitthottu-Gutthu-Ajekar-Garodi-10

ವಿಜಯ ಪೂಜಾರಿ

ಶೇಖರ ಪೂಜಾರಿ (65 ವರ್ಷ) ಹಾಗೂ ವಿಜಯ ಪೂಜಾರಿ (52 ವರ್ಷ) ಇವರು ಇಲ್ಲಿಯ ಪೂ ಪೂಜನೆಯವರಾಗಿ ಸೇವೆ ಮಾಡುತ್ತಿದ್ದಾರೆ. ಇವರಿಗೆ ಮೊದಲು ಅಜ್ಜ ಕೊರಗ ಪೂಜಾರಿಯವರು ಈ ಸೇವೆ ಮಾಡಿದ್ದರು.
ಗರೋಡಿಯಲ್ಲಿ ಈಗ ದರ್ಶನ ಸ್ಥಳ ಪಾತ್ರಿಗಳಿಲ್ಲ. ಹಿಂದೆ ಕೊರಗ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು. ಮಿತ್ತೊಟ್ಟು ಗುತ್ತು ರತ್ನವರ್ಮ ಜೈನರು ಇಲ್ಲಿಯ ಮೊಕ್ತೇಸರರಾಗಿದ್ದಾರೆ.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ದೀಪಾವಳಿ ಪೂಜೆ, ಕದಿರು ಕಟ್ಟುವ ಕ್ರಮಗಳಿವೆ.
ಫೆಬ್ರವರಿ ತಿಂಗಳ 15ನೇ ತಾರೀಖಿನಂದು ಮಿತ್ತೊಟ್ಟು ಗುತ್ತಿನ ಮನೆಯಿಂದ ಭಂಡಾರ ಬಂದು, ದ್ವಜಾರೋಹಣ ಮಾಡಿ, ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ ಕೋಲ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯುತ್ತದೆ. 16ನೇ ತಾರೀಕಿನಂದು ಬೈದರ್ಕಳ ನೇಮ, ಕಲ್ಕುಡ ಕೋಲ, ಮಾಯಂದಾಲ್, ಜೋಗಿಪುರುಷ ಕೋಲ, ಅನ್ನ ಸಂತರ್ಪಣೆ ನಡೆಯುತ್ತದೆ. 17ನೇ ತಾರೀಖಿನಂದು ದ್ವಜಾರೋಹಣ ನಂತರ ಭಂಡಾರ ವಾಪಾಸು ಹೋಗುವುದು.
ಮರ್ಣೆ, ಅಜೆಕಾರಿನ ಜನ ಈ ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ, ಕಾಣಿಕೆ ಸೇವೆ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರ ಜನರ ವರಡ ವಂತಿಗೆ, ಕಾಣಿಕೆ ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮದ ವೆಚ್ಚ ಭರಿಸಲಾಗುತ್ತದೆ. ಗರೋಡಿಯು ಸರಕಾರಿ ಜಾಗದಲ್ಲಿದ್ದು 24-04-2024ರಲ್ಲಿ ಜೀರ್ಣೋದ್ಧಾರಗೊಂಡಿದೆ.
ಸುನಿಲ್ ಪರವ ಅಜೆಕಾರು ಮತ್ತು ಸಂಘಡಿಗರು ಇಲ್ಲಿಯ ನೃತ್ಯವಿಶಾರದರಾಗಿ, ಬೋಜು ಮಡಿವಾಳರು ಮಡಿವಾಳರಾಗಿ, ಸದಾಶಿವ ದೇವಾಡಿಗ ವರಂಗ ಇವರು ವಾಧ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.
Mitthottu-Gutthu-Ajekar-Garodi-11

ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಹಾಗೂ ಮಾಯಂದಾಲ್ ಗರೋಡಿ ದೊಡ್ಡಮನೆ ಮಿತ್ತೊಟ್ಟು ಗುತ್ತು, ಅಜೆಕಾರು
ಅಜೆಕಾರು ಅಂಚೆ,
ಕಾರ್ಕಳ ತಾಲೂಕು, 574101

ಅರ್ಚಕರು:

ಶೇಖರ ಪೂಜಾರಿ – 990135798 ವಿಜಯ ಪೂಜಾರಿ – 9845017299

ಮಾಹಿತಿ ನೀಡಿದವರು:

ಶೇಖರ ಪೂಜಾರಿ
ವಿಜಯ ಪೂಜಾರಿ

ಮಾಹಿತಿ ಸಂಗ್ರಹಿಸಿದವರು:

ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

14-07-25

Shree Brahma Baidarkala Garodi, Palli

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಪಳ್ಳಿ

ಉಡುಪಿ ಮೂಡುಬೆಳ್ಳೆ ಮಾರ್ಗವಾಗಿ ಪಳ್ಳಿ ತಲುಪಿ ಈ ಗರೋಡಿಗೆ ಹೋಗಬಹುದು.
Palli-Garadi-1
Palli-Garadi-2
Palli-Garadi-3
ಇದು ಆಯದ ಗರೋಡಿಯಾಗಿದ್ದು, ಪೂರ್ವಾಭಿಮುಖವಾಗಿರುವ ಮುಖ್ಯದ್ವಾರ ಬಡಗು ಮುಖವಾಗಿರುವ ಇನ್ನೊಂದು ದ್ವಾರವಿದೆ. ಬ್ರಹಗುಡಿಯು ಬಡಗು ಮುಖವಾಗಿದೆ. ಮಂಗಳವಾರ ಹಾಗೂ ಸಂಕ್ರಾಂತಿಯ ದಿನಗಳಲ್ಲಿ ಬೆಳಿಗ್ಗೆ ಈ ಗರೋಡಿಯಲ್ಲಿ ಇತರ ಭಕ್ತಿಗೀತೆಗಳಿಗೆ ಬದಲಾಗಿ ಕೋಟಿ-ಚೆನ್ನಯರ ಪಾರ್ಧನವನ್ನು ದ್ವನಿವರ್ದಕದಲ್ಲಿ ಹಾಕುವುದು ಈ ಗರೋಡಿಯ ವಿಶೇಷತೆ.
Palli-Garadi-4
Palli-Garadi-5
ಗರೋಡಿಯ ಬ್ರಹ್ಮಗುಡಿಯ ಒಳಗೆ ಮರದ ಹಿತ್ತಾಳೆ ಕವಚವಿರುವ ಬ್ರಹ್ಮಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಬೆಳ್ಳಿಯ ಪ್ರಭಾವಳಿಯನ್ನು ಹೊಂದಿದ ಮೂರ್ತಿ ಇದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
Palli-Garadi-6
ಗುಂಡದ ಎಡಬದಿಯಲ್ಲಿ ಉಯ್ಯಾಲೆಯಲ್ಲಿ ಕೋಟಿ-ಚೆನ್ನಯರಿಗೆ ಪೂಜೆ ಇದೆ. ಪಕ್ಕದಲ್ಲಿ ಜೋಗಿ ಪುರುಷರ ಮಣೆ ಮಂಚವಿದೆ.
Palli-Garadi-7
ಗುಂಡದ ಬಲಬದಿಯಲ್ಲಿ ಉಯ್ಯಲೆಯಲ್ಲಿ ಕಾಂಜವರ ಹಾಗೂ ಪಕ್ಕದಲ್ಲಿ ಪಿಲ್ಚಂಡಿ ದೈವದ ಮಣೆಮಂಚವಿದೆ.
Palli-Garadi-8
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಮಾಯಂದಾಲ್ ಮತ್ತು ಮಗುವಿನ ಮರದ ಮೂರ್ತಿಗಳಿವೆ.
Palli-Garadi-9
ಗರೋಡಿಯ ಹೊರಗೆ ಅಂಗಣದಲ್ಲಿರುವ ಕಲ್ಲಿನ ಕಂಬದ ಮೇಲಿರುವ ಗುಡಿಯಲ್ಲಿ ಮರ್ಲು ಜುಮಾದಿ ಹಾಗೂ ಬಂಟರ ಸಾನಿದ್ಯವಿದೆ.
ಊರಿನ ಬೂದ ಪೂಜಾರಿ ಎಂಬವರ ಮನೆಯಲ್ಲಿ ಪುಚ್ಚೊಟ್ಟುವಿನ ಭೂತ ಸದಾಕಾಲ ಕಿರುಕುಳ ಕೊಡುತ್ತಿತ್ತು. ಮನೆಯವರು ಈ ಭೂತದ ಉಪಟಳ ತಡೆಯಲಾರದೆ ಬೈದೇರುಗಳಲ್ಲಿ ದೂರಿತ್ತಾಗ ಅವರ ಅಣತಿಯಂತೆ ಗರೋಡಿಯಲ್ಲಿ ಈ ಕಂಬದಲ್ಲಿ ಆ ಭೂತವನ್ನು ನೆಲೆಗೊಳಿಸಿದ ನಂತರ ಆ ಭೂತದ ಉಪದ್ರವ ನಿಂತು ಹೋಯಿತಂತೆ.
Palli-Garadi-10
ಗರೋಡಿಯ ಬಲಬದಿಯಲ್ಲಿರುವ ಗುಡಿಯಲ್ಲಿರುವ ಗುಡಿಯಲ್ಲಿ ಧರ್ಮರಸು, ಕೊಡಮಣಿತ್ತಾಯ ಹಾಗೂ ಕುಕ್ಕಿನಂತಾಯ ದೈವಗಳ ಸಾನಿದ್ಯವಿದೆ.
Palli-Garadi-11
ಗರೋಡಿಯ ಆವರಣದೊಳಗೆ ತುಳಸಿಕಟ್ಟೆ, ಅಜೆಕಾಯಿ ಕಲ್ಲುಗಳಿವೆ.
ಸ್ಥಳ ಪುರಾಣದಲ್ಲಿ ತಿಳಿಯುವಂತೆ ಪೂರ್ವದಲ್ಲಿ ಕೋಟಿಚೆನ್ನಯರು ಪಳ್ಳಿ ಗ್ರಾಮದ ನಿಂಜೂರಿಗೆ ಬಂದು ಅಲ್ಲಿ ಕೊಡಮಣಿತ್ತಾಯ ದೈವವಿದ್ದುದರಿಂದ ಮುಂದೆ ಸಾಗಿ ಪಳ್ಳಿಯ ಪಾದೆ (ಶಿಲೆ ಕಲ್ಲು) ಯ ಮೇಲೆ ಸುರಿಯ ಊರಿ ಗುರುತು ಹಾಕಿದರು. ಅನಂತರ ಕೋಟಿ-ಚೆನ್ನಯರು ಪಳ್ಳಿಯ ಪಿಜಕೊಡಂಗೆ ಮನೆಗೆ ಬಂದು ಕುಡಿಯಲು ನೀರು ಕೇಳಿದಾಗ ಅವರು ಹಾಲುಕೊಟ್ಟು ಸತ್ಕರಿಸಿದರು. ಅಲ್ಲಿ ಸಂತೋಷದಿಂದ ಕೋಟಿ-ಚೆನ್ನಯರು ಆ ಮನೆಯಲ್ಲಿ ಹಾಲು ಉಕ್ಕಿ ಬರಲಿ ಎಂದು ವರವಿತ್ತು ಮುಂದೆ ಗುತ್ತಿನ ಮನೆಯಾದ ದೊಡ್ಡ ಮನೆಗೆ ಹೋಗಿ ಊಟ ಕೇಳಿದರು. ಅವರು ತಂಗುಳನ್ನ ಮತ್ತು ನೀರು ಮಾವಿನ ಕಾಯಿಯನ್ನು (ನೀರುಪ್ಪಡ್) ಕೆಸುವಿನ ಎಲೆಯಲ್ಲಿ ಹಾಕಿ ಕೊಟ್ಟದ್ದಕ್ಕೆ ಈ ಮನೆಯಲ್ಲಿ ಸದಾ ದಾರಿದ್ರ ತುಂಬಿ ಬರಲಿ ಎಂದು ಶಪಿಸಿ ಅದನ್ನು ತೆಗೆದು ಬಿಸಾಡಿದರು. ಈ ಸ್ಥಳದಲ್ಲಿ ಸದಾಕಾಲ ಕೆಸು ಬೆಳೆಯುತ್ತಿದೆ. ಬೈದ್ಯರ ಅಪ್ಪಣೆಯಂತೆ ಅಲ್ಲಿಂದ ಕೆಸುವನ್ನು ಈಗಲೂ ಈ ಗರೋಡಿಗೆ ಪ್ರತೀ ವರ್ಷ ತರಲಾಗುತ್ತಿದೆ.
Palli-Garadi-12
Palli-Garadi-13
Palli-Garadi-14
ಗರೋಡಿಯ ಪಕ್ಕದಲ್ಲಿ ಶಿಲಾಮಯವಾದ ಗರೋಡಿ ಮನೆಯಿದೆ.
Palli-Garadi-15

ಸತೀಶ್ ಪೂಜಾರಿ

ಗರೋಡಿಮನೆ ಸತೀಶ್ ಪೂಜಾರಿ(50 ವರ್ಷ) ಇವರು ಗರೋಡಿಯ ಪೂ ಪೂಜನೆಯವರಾಗಿದ್ದಾರೆ. ಇವರಿಗೆ ಮೊದಲು ಇವರ ಅಜ್ಜ ಶೇಖರ ಪೂಜಾರಿಯವರು, ಅವರಿಗೂ ಮುಂದೆ ಅವರ ತಂದೆ ದೇಜು ಪೂಜಾರಿಯವರು ಇಲ್ಲಿ ಪೂ ಪೂಜನೆಯ ಸೇವೆ ಮಾಡುತ್ತಿದ್ದರು. ದೇಜು ಪೂಜಾರಿಯವರಿಗೆ ಮೊದಲು ಈ ಗರೋಡಿ ಹಾಗೂ ಅದರ ಜಾಗವೆಲ್ಲವೂ ಊರ ಸೆಟ್ಟರೊಬ್ಬರ ಒಕ್ಕಲಿನಲ್ಲಿದ್ದು, ಗರೋಡಿ ಮನೆಯಲ್ಲಿ ಒಕ್ಕಲಿದ್ದವರು ಪೂಜೆ ಮಾಡುತ್ತಿದ್ದರು. ನಂತರ ದೇಜು ಪೂಜಾರಿಯವರು ಅವರ ಕಾಲದಲ್ಲಿ ಈ ಜಾಗವನ್ನು ಖರೀಧಿ ಮಾಡಿದ್ದರು.
ಪೂ ಪೂಜನೆಯ ಸತೀಶ್ ಪೂಜಾರಿ ಹಾಗೂ ರಾಜೇಶ್ ಪೂಜಾರಿ (48 ವರ್ಷ) ಇವರು ಈ ಗರೋಡಿಯ ಬೈದ್ಯರ ದರ್ಶನದ ಸ್ಥಳ ಪಾತ್ರಿಗಳು. ಇವರಿಗೆ ಮೊದಲು ರಾಜು ಪೂಜಾರಿ, ಶೀನ ಪೂಜಾರಿ, ಬೇಡು ಪೂಜಾರಿ, ಕಾಳು ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಲಾಗಿದ್ದರು.
ಪೆಜಕೊಡಂಗೆ ಜಗಧೀಶ ಹೆಗ್ಡೆಯವರು ಇಲ್ಲಿಯ ಮೊಕ್ತೇಸರರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವ ಕ್ರಮವಿದೆ. ಮಕರ ಸಂಕ್ರಾಂತಿಯಂದು ದಿನವಿಟ್ಟು ಜನವರಿ ಪೆಭ್ರವರಿ ತಿಂಗಳಲ್ಲಿ ಒಂದು ದಿನ ಭಂಡಾರ ತಂದು ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ, ಕೋಲ ನಡೆಯುತ್ತದೆ. ಮರುದಿನ ಬೈದೇರುಗಳಿಗೆ ಅನ್ನ ನೈವೇದ್ಯದ ಅಗಲು ಸೇವೆ, ಅದರ ಮರುದಿನ ಬೈದರ್ಕಳ ನೇಮ, ಮರುದಿನ ಮಾಯಂದಾಲ್ ನೇಮ, ಜೋಗಿಪುರುಷ ಕೋಲ ನಡೆದು ಭಂಡಾರ ವಾಪಾಸು ಹೋಗುವುದು. ಇದಲ್ಲದೆ ಹರಕೆಯ ಅಗಲು ಸೇವೆ, ಹೂವಿನ ಪೂಜೆಗಳು ನಡೆಯುತ್ತವೆ.
ಎರಡು ವರ್ಷಕ್ಕೊಮ್ಮೆ ಭಂಡಾರ ಹೊರಟು ನಿಂಜೂರಿನಲ್ಲಿ ದೊಂಪದ ಬಲಿ ನಡೆಯುತ್ತದೆ. ಈ ಸಂದರ್ಭದಲ್ಲಿ ರಾತ್ರಿಯಿಡೀ ಮಾಯಂದಾಲ್‌ಗೆ ಹೊರತುಪಡಿಸಿ ಎಲ್ಲಾ ದೈವಗಳ ಕೋಲ ನಡೆದು ಬೆಳಗ್ಗೆ ಭಂಡಾರ ವಾಪಾಸ್ಸು ಬರುವುದು.
ಪಳ್ಳಿ, ನಿಂಜೂರು, ಕುಂಟಾಡಿಯ ಜನರು ಈ ಗರೋಡಿಯಲ್ಲಿ ನೀರುಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ, ಮಂಗಳವಾರದಂದು ತುಪ್ಪದ ದೀಪ ಸೇವೆ ಇತ್ಯಾದಿ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ.
ಉಗ್ಗಪ್ಪ ಪರವ ಕೆರ್ವಾಶೆ, ಶೇಖರ ಪರವ ಪಾಡಿಗಾರ, ಗೋಪಾಲ ಪರವ ಪಳ್ಳಿ ಇವರು ಈ ಗರೋಡಿಯ ನೃತ್ಯ ವಿಶಾರದರಾಗಿ, ರಮೇಶ ಮಡಿವಾಳ, ಸತೀಶ ದೇವಾಡಿಗ ಪಳ್ಳಿ ಇವರು ಕೊಂಬಿನವರಾಗಿ ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Palli-Garadi-16

ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಪಳ್ಳಿ
ಪಳ್ಳಿ ಅಂಚೆ
ಕಾರ್ಕಳ ತಾಲೂಕು

ಪೂ ಪೂಜನೆಯವರು:

ಸತೀಶ್ ಪೂಜಾರಿ – 9686125103

ಮಾಹಿತಿ ನೀಡಿದವರು:

ಸತೀಶ್ ಪೂಜಾರಿ

ಮಾಹಿತಿ ಸಂಗ್ರಹಿಸಿದವರು:

ಎ.ಮಾಧವ ಆದಿಉಡುಪಿ
ಹರೀಶ್ ಎಮ್.ಕೆ.ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

15-07-2025

Atthur Shree Kodamanittaya Daivasthana, Brahma Baidarkala Garodi, Berandottu

ಅತ್ತೂರು ಶ್ರೀ ಕೋಡಮಣಿತ್ತಾಯ ದೈವಸ್ಥಾನ, ಬ್ರಹ್ಮಬೈದರ್ಕಳ ಗರೋಡಿ, ಬೆರಂದೊಟ್ಟು

ಉಡುಪಿಯಿಂದ ಬೆಳ್ಮಣ್ಣು-ಕಾರ್ಕಳ ಮಾರ್ಗವಾಗಿ ನಿಟ್ಟೆ ದಾಟಿದ ನಂತರ ದೂಪದ ಕಟ್ಟೆಯಲ್ಲಿ ಎಡಕ್ಕೆ ತಿರುಗಿ ಸುಮಾರು 2.5 ಕಿ. ಮೀ. ಸಾಗಿದರೆ ಬೆರೊಂದೊಟ್ಟು ಗರೋಡಿ ಸಿಗುವುದು.
Berandottu-Garodi-1
Berandottu-Garodi-2
Berandottu-Garodi-3
ಶಿಲಾಮಯವಾದ ಈ ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದೆ.
Berandottu-Garodi-4
ಗರೋಡಿಯ ಒಳಗೆ ಗುಂಡದಲ್ಲಿ ನಾಗ ಬ್ರಹ್ಮರ ಪಂಚಲೋಹದ ಮೂರ್ತಿಗೆ ಪೂಜೆ ನಡೆಯುತ್ತದೆ. ವಿಶೇಷ ಸಂದರ್ಭಗಳಲ್ಲಿ ಮಾತ್ರ ಈ ಮೂರ್ತಿಯನ್ನು ತಂದು ಪೂಜಿಸಲಾಗುತ್ತಿದೆ. ಮಿಕ್ಕಿದಂತೆ ಈ ಮೂರ್ತಿ ಭಂಡಾರದ ಮನೆಯಾದ ಬಲಿಪ ಗುತ್ತಿನಲ್ಲಿ ಇಡಲಾಗುತ್ತದೆ. ಗುಂಡದ ಎಡಬಲಗಳಲ್ಲಿ ಕೋಟಿ-ಚೆನ್ನಯರ ಮರದ ಮೂರ್ತಿಗಳಿವೆ.
Berandottu-Garodi-5
ಬಲಬದಿಯಲ್ಲಿ ಕುಜುಂಬ ಕಾಂಜವರ ಮರದ ಮೂರ್ತಿಯಿದೆ.
Berandottu-Garodi-6
ಬಲಬದಿಯಲ್ಲಿ ಮಾಯಂದಾಳ್ ಹಾಗೂ ಮಗುವಿನ ಮರದ ಮೂರ್ತಿಗಳಿವೆ.
Berandottu-Garodi-7
ಗರೋಡಿಯ ಬಲಬದಿಯಲ್ಲಿರುವ ಗುಡಿಯಲ್ಲಿ ಕೊಡಮಣಿತ್ತಾಯ, ಕುಕ್ಕಿನಂತಾಯ, ಧರ್ಮರಸು ದೈವಗಳ ಸಾನಿಧ್ಯವಿದೆ.
Berandottu-Garodi-8
ಗರೋಡಿಯ ಆವರಣದಲ್ಲಿ ಮಹಾಮ್ಮಾಯಿ ಕಟ್ಟೆಯಿದೆ.
Berandottu-Garodi-9
ಗರೋಡಿಯ ಆವರಣದಲ್ಲಿ ಗರೋಡಿಯ ಹಿಂಬದಿಯಲ್ಲಿ ನಾಗನಕಟ್ಟೆ, ಅಜೆಕಾಯಿ ಕಲ್ಲು ಇದೆ.
Berandottu-Garodi-10
ಗರೋಡಿಯ ಹೊರಾಂಗಣದಲ್ಲಿರು ಗುಡಿಯಲ್ಲಿ ವರ್ತೆ, ಕಲ್ಕುಡ, ತೂಕತ್ತರಿ ದೈವಗಳ ಸಾನಿಧ್ಯವಿದೆ.
ರಾಮ ಪೂಜಾರಿ (65 ವರ್ಷ), ಸುರೇಂದ್ರ ಪೂಜಾರಿ, ಕಿಟ್ಟಣ್ಣ ಇವರು ಈ ಗರೋಡಿಯ ಪೂ ಪೂಜನೆಯವರಾಗಿದ್ಧಾರೆ. ಇವರ ಮೊದಲು ಬಾಬು ಪೂಜಾರಿ, ತನಿಯ ಪೂಜಾರಿಯವರು ಇಲ್ಲಿ ಪೂ ಪೂಜನೆಯ ಸೇವೆ ಮಾಡಿದ್ದರು. ಈಗ ಈ ಗರೋಡಿಯಲ್ಲಿ ಬೈದ್ಯರ ದರ್ಶನದ ಸ್ಥಳ ಪಾತ್ರಿಗಳಿಲ್ಲ. ಹಿಂದೆ ರಾಮ ಪೂಜಾರಿಯವರು ಇಲ್ಲಿ ಪೂ ಪೂಜನೆಯ ಸೇವೆ ಮಾಡಿದ್ದರು.
ಈ ಗರೋಡಿಯ ಕೂಡುಕಟ್ಟಿನಲ್ಲಿ 1. ಬಲಿಪ ಗುತ್ತು 2. ಕೈಲಜೆ ಗುತ್ತು 3. ಕಡಂಬರ ಗುತ್ತು 4. ಕಿಲಬೆಟ್ಟು ಗುತ್ತು 5. ಎಲಿಕಾನ ಗುತ್ತು 6. ಕಲಂಬಾಡಿ ಗುತ್ತು 7. ಗುಂಡ್ಯಡ್ಕ ಗುತ್ತುಗಳೆಂಬ ಏಳು ಗುತ್ತು ಹಾಗೂ 1. ಮೊಯ್‌ಲ್ದೊಟ್ಟು ಬರ್ಕೆ 2. ಮಹಾಬಲೊಟ್ಟು ಬರ್ಕೆ 3. ಮೈಲಾಜೆ ಬರ್ಕೆಗಳೆಂಬ ಮೂರು ಬರ್ಕೆ ಮನೆಗಳು ಇವೆ. ಬಲಿಪ ವಿಠಲ್ ಶೆಟ್ಟಿಯವರು ಒಂದನೇ ಗುತ್ತಿನವರಾಗಿದ್ದಾರೆ.
ಗರೋಡಿಯಲ್ಲಿ ವರ್ಷದ 12 ಸಂಕ್ರಾಂತಿಯಂದು ಪೂಜೆ, ಅನ್ನ ಸಂತರ್ಪಣೆ, ಚೌತಿ ಪೂಜೆ, ದೀಪಾವಳಿ ಪೂಜೆ, ಕದಿರುಕಟ್ಟುವುದು, ಚಾಂದ್ರಮಾನ ಯುಗಾದಿಯಂದು ಭಂಡಾರ ಬಂದು ದ್ವಜಾರೋಹಣ, ಧರ್ಮರಸು ಕೋಲ, ಅನ್ನ ಸಂತರ್ಪಣೆ, ಅದರ ಮರುದಿನ ಸತ್ಯ ನಾರಾಯಣ ಪೂಜೆ, ಕೊಡಮಣಿತ್ತಾಯ, ಕುಕ್ಕಿನಂತಾಯ ಕೋಲ, ವರ್ತೆ, ಕಲ್ಕುಡ, ತೂಕತ್ತರಿ ಕೋಲ, ಗೋಂದೋಲು ಸೇವೆ, ಅನ್ನ ಸಂತರ್ಪಣೆ ನಡೆಯುತ್ತದೆ. ಅದರ ಮರುದಿನ ಬೈದರ್ಕಳ ಕೋಲ, ಬಲಿಪೂಜೆ, ಬಾಕ್ಯಾಅರಿಗೆ ಇಳಿದು ಬುದ್ಯಂತ ಜಯಿಸುವುದು ಅನ್ನ ಸಂತರ್ಪಣೆ ನಡೆಯುತ್ತದೆ. ನಾಲ್ಕನೇ ದಿನ ಮಾಯಂದಾಲ್ ಕೋಲ, ಅನ್ನ ಸಂತರ್ಪಣೆ, ಭಂಡಾರ ವಾಪಾಸು ಹೋಗುವುದು.
ಐದು ವರ್ಷಗಳಿಗೊಮ್ಮೆ ದೂಪದಕಟ್ಟೆ, ಕಂಚಾರಬೆಟ್ಟು ಕಟ್ಟೆ (ಗಣಪತಿ ದೇವಸ್ಥಾನದ ಎದುರಿನಲ್ಲಿ) ಭಂಡಾರ ಬಂದು ದೊಂಪದ ಬಲಿ ನಡೆಯುತ್ತದೆ. ಮಾಯಂದಾಲ್ ಹೊರತುಪಡಿಸಿ ಉಳಿದೆಲ್ಲಾ ದೈವಗಳ ಕೋಲ ನಡೆದು ಭಂಡಾರ ವಾಪಾಸು ಹೋಗುವುದು.
ಅತ್ತೂರು ಗ್ರಾಮದ ಜನರು ಈ ಗರೋಡಿಯಲ್ಲಿ ಕಂಚಿಲ್ ಸೇವೆ, ಮದುವೆಯ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಊರ ಪರಊರ ಜನರ ವರಡ, ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ. ಗರೋಡಿಯು 1978 ಹಾಗೂ 2014ರಲ್ಲಿ ಜೀರ್ಣೋದ್ಧಾರಗೊಂಡಿದೆ.
ಚುಕುಡ ಪರವ ಕುಕ್ಕುಂಜಾರು, (ಮಾಯಂದಾಲ್ ಹಾಗೂ ಕೊಡಮಣಿತ್ತಾಯ) ಸುಕೇಶ ಕುಕ್ಕುಂದೂರು (ಕುಕ್ಕಿನಂತಾಯ) ಗಂಗಯ್ಯ ಪರವ ಕೆರ್ವಾಸೆ, ಪ್ರಶಾಂತ ಪರವ, ರಮೇಶ್ ಪರವ, ಇವರು ಬೈದೇರುಗಳ ನೃತ್ಯ ವಿಶಾರದರಾಗಿ, ಜಗನ್ನಾಥ ಶೇರಿಗಾರ ನಿಟ್ಟೆ ಇವರು ವಾಧ್ಯದವರಾಗಿ, ನಾರಾಯಣ ಕಾರ್ಕಳ ಇವರು ಬ್ಯಾಂಡ್‌ನವರಾಗಿ, ಸುಧಾಕರ ಕುಕ್ಕುಂದೂರು ಡೋಲಿನವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.
ಗರೋಡಿಗೆ ಸಂಬಂಧಪಟ್ಟು ಗರಡಿ ಪ್ರೆಂಡ್ಸ, ಬೆರಂದೊಟ್ಟು ಎಂಬ ಯುವಕರ ಸಂಘಟನೆಯು ಇಲ್ಲಿ ಸಕ್ರಿಯವಾಗಿದೆ.
Berandottu-Garodi-11

ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು

ಗರೋಡಿಯ ವಿಳಾಸ:

ಅತ್ತೂರು ಶ್ರೀ ಕೊಡಮಣಿತ್ತಾಯ ದೈವಸ್ಥಾನ, ಬ್ರಹ್ಮಬೈದರ್ಕಳ ಗರೋಡಿ, ಬೆರಂದೊಟ್ಟು ದೂಪದ ಕಟ್ಟೆ,
ಅಂಚೆ ಕಾರ್ಕಳ ಉಡುಪಿ – 574110

ಮಾಹಿತಿ ನೀಡಿದವರು:

ಬಾಲಕೃಷ್ಣ ಹೆಗಡೆ, ಕಿಲ್ಲಬೆಟ್ಟು ಗುತ್ತು (ಸಂಚಾಲಕರು) – 9008091987
ಕಿಶೋರ್ ಶೆಟ್ಟೆ ಬೆರೊಂದೊಟ್ಟ – 8296292820
ಸುಕೇಶ ಪೂಜಾರಿ ಕೊಡಂಗೆ – 7090812186

ಮಾಹಿತಿ ಸಂಗ್ರಹಿಸಿದವರು:

ಎ.ಮಾಧವ ಆದಿವುಡುಪಿ
ಹರೀಶ್ ಎಂ.ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

19-06-2025

Shree Kodamanittaya Brahma Baidarkala Garodi Kalya, Kairabettu

ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರೋಡಿ ಕಲ್ಯ, ಕೈರಬೆಟ್ಟು

ಉಡುಪಿಯಿಂದ ಬೆಳ್ಮಣ್ಣು ಮಾರ್ಗವಾಗಿ ಕಾರ್ಕಳಕ್ಕೆ ಹೋಗುವ ದಾರಿಯಲ್ಲಿ ಬೆಳ್ಮಣ್ಣಿನ ನಂತರ ಸುಮಾರು 6 ಕಿ. ಮೀ.ದೂರದಲ್ಲಿ ಸ್ವಾಗತ ಗೋಪುರದ ಮೂಲಕ ಎಡಕ್ಕೆ ತಿರುಗಿ ಅರ್ಧ ಕಿ. ಮೀ. ದೂರ ಸಾಗಿದರೆ ಈ ಗರೋಡಿ ಇದೆ.
Kalya-Garadi-1
Kalya-Garadi-2
Kalya-Garadi-3
ಶಿಲಾಮಯವಾದ ಈ ಗರೋಡಿಗೆ ಪೂರ್ವಾಭಿಮುಖವಾದ ಮುಖ್ಯದ್ವಾರ ಹಾಗೂ ಇನ್ನೊಂದು ಬಡಗು ಮುಖವಾಗಿರುವ ದ್ವಾರವಿದೆ. ಬ್ರಹ್ಮಗುಡಿಯು ಬಡಗು ಮುಖವಾಗಿದ್ದು, ಷಢಾದಾರ ಪ್ರತಿಷ್ಠೆಯನ್ನು ಹೊಂದಿದೆ. ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಗುಂಡದ ಎಡಭಾಗದಲ್ಲಿ ಕೋಟಿ-ಚೆನ್ನಯರ ಮರದ ಮೂರ್ತಿ ಹಾಗೂ ಜೋಗಿಪುರುಷರ ಮರದ ಮೂರ್ತಿಗಳಿವೆ.
Kalya-Garadi-4
ಗರೋಡಿಯ ಆವರಣದೊಳಗೆ ಗರೋಡಿಯ ಬಲಬದಿಗೆ ಇರುವ ಗುಡಿಯಲ್ಲಿ ಕೊಡಮಣಿತ್ತಾಯ, ಪಿಲ್ಚಂಡಿ, ಕುಕ್ಕಿನಂತಾಯ, ಧರ್ಮರಸು, ದೈವಗಳ ಸಾನಿದ್ಯವಿದೆ.
Kalya-Garadi-5
ಪಕ್ಕದಲ್ಲಿರುವ ಇನ್ನೊಂದು ಗುಡಿಯಲ್ಲಿ ಮಹಮ್ಮಾಯಿಯ ಮಣೆ ಮಂಚವಿದೆ.
Kalya-Garadi-6
ಗರೋಡಿಯ ಎಡಭಾಗದಲ್ಲಿರುವ ಗುಡಿಯಲ್ಲಿ ಮಾಯಂದಾಲ್, ಮಗುವಿನ ಮರದ ಮೂರ್ತಿಗಳಿವೆ.
Kalya-Garadi-7
ಗರೋಡಿಯ ಆವರಣದಲ್ಲಿ ತುಳಸಿಕಟ್ಟೆ, ಅಜೆಕಾಯಿ ಕಲ್ಲುಗಳಿವೆ. ಗರೋಡಿಯ ಪರಿಸರದಲ್ಲಿ ನಾಗಬ್ರಹ್ಮಸ್ಥಾನ ಹಾಗೂ ರಕ್ತೇಶ್ವರಿ ಬನಗಳಿವೆ.
Kalya-Garadi-8

ರಾಜೇಶ್ ಪೂಜಾರಿ

Kalya-Garadi-9

ಸುಧಾಕರ ಪೂಜಾರಿ

Kalya-Garadi-10

ಶ್ರೀಧರ ಪೂಜಾರಿ

ರಾಜೇಶ್ ಪೂಜಾರಿ (40 ವರ್ಷ) ಸುಧಾಕರ ಪೂಜಾರಿ (58 ವರ್ಷ) ಕರುಣಾಕರ ಪೂಜಾರಿ ಇವರು ಗರೋಡಿಯ ಅರ್ಚಕರಾಗಿದ್ದಾರೆ. ಶ್ರೀಧರ ಪೂಜಾರಿಯವರು ಮಾಯಂದಾಳ್ ಗುಡಿಯ ಅರ್ಚಕರಾಗಿದ್ದಾರೆ. ಈ ಗರೋಡಿಯಲ್ಲಿ ದರ್ಶನ ಪಾತ್ರಿಗಳಿಲ್ಲ. ಹಿಂದೆ ಶೀನ ಪೂಜಾರಿಯವರು ಇಲ್ಲಿ ಅರ್ಚಕರಾಗಿಯೂ, ಸ್ಥಳ ಪಾತ್ರಿಗಳಾಗಿಯೂ ಸೇವೆ ಮಾಡಿದ್ದರು.
ಗರೋಡಿಯ ಉಸ್ತುವಾರಿಗೆ ಆಡಳಿತ ಸಮಿತಿ ಇದೆ. ಶಶಿಧರ ಕರ್ಕೇರರು ಅಧ್ಯಕ್ಷರಾಗಿ ಹಾಗೂ ಕರುಣಾಕರ ಪೂಜಾರಿಯವರು ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಕದಿರು ಕಟ್ಟುವ ಕ್ರಮ ಇದೆ. ಪುಯಿಂತೆಲ್ ತಿಂಗಳ ಹುಣ್ಣಿಮೆಯ ಮೊದಲ ದಿನ ಕೈರಬೆಟ್ಟು ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಮಹಮ್ಮಾಯಿ ಗದ್ದಿಗೆಯು ದೊಡ್ಡಮನೆ ವೈ. ದಾಮೋದರ ಬೋಂಟ್ರರ ಮನೆಗೆ ಬಂದು ಅಲ್ಲಿಂದ ಬೈದೇರುಗಳ ಭಂಡಾರದೊಂದಿಗೆ ಕಲ್ಯ ಪರಾಡಿ ಜೀತು ಅತಿಕಾರಿಯವರ ಮನೆಗೆ ಹೋಗಿ ಅಲ್ಲಿಂದ ಕೊಡಮಣಿತ್ತಾಯ ಭಂಡಾರದೊಂದಿಗೆ ದರ್ಶನದಲ್ಲಿ ಗರೋಡಿಗೆ ಬಂದು ಅಂದು ಕೊಡಮಣಿತ್ತಾಯ, ಕುಕ್ಕಿನಂತಾಯ, ಕೋಲ ನಡೆಯುತ್ತದೆ. ಮರುದಿನ ಬೈದರ್ಕಳ ನೇಮ ದೇವಿ ದರ್ಶನ ನಡೆಯುತ್ತದೆ. ಮೂರನೇ ದಿನ ಜೋಗಿ ಪುರುಷ, ಮಾಯಂದಾಲ್, ಕೋಲ ನಡೆದ ನಂತರ ಭಂಡಾರ ವಾಪಾಸು ಹೋಗುವುದು.
Kalya-Garadi-11
ಮೇ ತಿಂಗಳ ಮೊದಲ ಗುರುವಾರದಂದು ಮಟ್ಟಾರು ಜಾತ್ರೆಯ ಸಂದರ್ಭದಲ್ಲಿ ಭಂಡಾರ ಬಂದು ಮಾಯಂದಾಳ ಹಾಗೂ ಜೋಗಿಪುರುಷ ಹೊರತುಪಡಿಸಿ ಉಳಿದೆಲ್ಲಾ ದೈವಗಳ ಕಟ್ಟು ಕಟ್ಟಳೆಯ ಕೋಲ ನಡೆದು ಬೆಳಗ್ಗೆ ಭಂಡಾರ ವಾಪಾಸು ಹೋಗುತ್ತದೆ.
ಕಲ್ಯ ಕೈರಬೆಟ್ಟುವಿನ ಜನ ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭಸಂದರ್ಭದ್ಲಿ ತೆಗೆದಿಡುವ ಜೋಡಿ ಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ.
ಗರೋಡಿಗೆ 60 ಸೆಂಟ್ಸ ಜಾಗವಿದ್ದು, 2021ರಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿದೆ.
ಮಾಳದ ಪರವರು ಈ ಗರೋಡಿಯ ನೃತ್ಯ ವಿಶಾರದರು. ಶೇಖರ ಮಡಿವಾಳ ಇವರು ಮಡಿವಾಳರಾಗಿ, ರಾಜೇಶ್ ಮೊಯಿಲಿಯವರು ವಾಧ್ಯದವರಾಗಿ ಈ ಗರೊಡಿಯ ಸೇವೆ ಮಾಡುತ್ತಿದ್ದಾರೆ.
Kalya-Garadi-12

ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು

ಗರೋಡಿಯ ವಿಳಾಸ:

ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದೇರುಗಳ ಗರೋಡಿ ಕಲ್ಯ, ಕೈರಬೆಟ್ಟು ಕಾರ್ಕಳ ತಾಲೂಕು,
ಉಡುಪಿ – 574116

ಗರೋಡಿಯ ಅರ್ಚಕರು:

ರಾಜೇಶ್‌ಪೂಜಾರಿ – 9741848280
ಸುಧಾಕರ ಪೂಜಾರಿ – 9901699073
ಶ್ರೀಧರ ಪೂಜಾರಿ – 9901355943

ಮಾಹಿತಿ ನೀಡಿದವರು:

ಯಶೋಧರ ಬೋಂಟ್ರ – 9611052905

ಮಾಹಿತಿ ಸಂಗ್ರಹಿಸಿದವರು:

ಎ.ಮಾಧವ ಆದಿಉಡುಪಿ
ಹರೀಶ್ ಎಮ್.ಕೆ.ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

19.06.2025

Shree Brahma Baidarkala Garodi, Bola

ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಬೋಳ

ಉಡುಪಿಯಿಂದ ಶಿರ್ವ, ಬೆಳ್ಮಣ್ ನಂತರ ಸುಮಾರು 3ಕಿ. ಮೀ. ನಲ್ಲಿ ಬಲಕ್ಕೆ ತಿರುಗಿ 1.7 ಕಿ. ಮೀ. ದೂರ ಸಾಗಿದರೆ ಬೋಳ ಮಲ್ಲಿಗೆ ಗರೋಡಿ ಸಿಗುತ್ತದೆ.
Bola-Garodi-1
Bola-Garodi-2
Bola-Garodi-3
Bola-4
ಈ ಗರೋಡಿಗೆ ಮೂರು ದ್ವಾರಗಳಿದ್ದು ಮುಖ್ಯ ದ್ವಾರವು ಮೂಡು ಮುಖವಾಗಿದ್ದು ಇನ್ನೆರಡು ದ್ವಾರಗಳು ಬಡಗು ಹಾಗೂ ಪಡುವಣ ದಿಕ್ಕಿಗೆ ಇದೆ.
Bola-Garodi-5
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ಪಂಚಲೋಹದ ಬಂಗಾರದ ಲೇಪನ ಮಾಡಿದ ನಾಗಬ್ರಹ್ಮರ ಮೂರ್ತಿ ಇದೆ. ಗುಂಡದ ಮದ್ಯದ ಅಂತಸ್ತಿನಲ್ಲಿ ಬಲ್ಲಾಳರಿಗೂ ಗಾಳಿದೇವರಿಗೂ ಪೂಜೆ ಇದೆ.
Bola-Garodi-6
ಗುಂಡದ ಎಡಭಾಗದಲ್ಲಿ ಕೋಟಿ-ಚೆನ್ನಯ ಮತ್ತು ಮಗುವಿನ ಮರದ ಮೂರ್ತಿ, ಹಾಗೂ ಮಾಯಂದಾಳ್ ಮತ್ತು ಮಗುವಿನ ಮರದ ಮೂರ್ತಿ ಹಾಗೂ ಮಣೆ ಮಂಚಗಳಿವೆ.
Bola-Garodi-7
ಗುಂಡದ ಬಲಬದಿಯಲ್ಲಿ ಕುದುರೆಯ ಮೇಲೆ ಕುಳಿತ ಬಲ್ಲಾಳರ, ಕುಜುಂಬ ಕಾಂಜವರ ಹಾಗು ಜೋಹೈ ಪುರುಷರ ಮರದ ಮೂರ್ತಿಗಳಿವೆ.
Bola-Garodi-8
ಬ್ರಹ್ಮಗುಡಿಯ ಹೊರಗೆ ಗುರುಕಂಬವಿದೆ.
Bola-Garodi-9
ಗರೋಡಿಯ ಹೊರಗೆ ಆವರಣದೊಳಗೆ ಬೊಳ್ಳಿ ಶಾಂತಿ ಮರದ ಕಟ್ಟೆ, ತುಳಸಿಕಟ್ಟೆ, ಅಜೆಕಾಯಿ ಕಲ್ಲುಗಳಿವೆ.
Bola-Garodi-10
ಗರೋಡಿಯ ಆವರಣದೊಳಗೆ ಗುಡಿಯಲ್ಲಿ ಹುಲಿಚಾಮುಂಡಿ ದೈವದ ಸಾನಿಧ್ಯವಿದೆ. ಗರೋಡಿಯ ಹೆಬ್ಬಾಗಿಲ ಹೊರಗಿನ ಗುಡಿಯಲ್ಲಿ ಕಲ್ಕುಡ, ಕಲ್ಲುರ್ಟಿ ಹಾಗೂ ತೂಕತ್ತರಿ ದೈವಗಳ ಸಾನಿಧ್ಯವಿದೆ. ಗರೋಡಿಯ ಪರಿಸರದಲ್ಲಿ ನಾಗಬನವಿದೆ.
Bola-Garodi-11
Bola-Garodi-12
Bola-Garodi-13
ಗರೋಡಿಗೆ ಹತ್ತಿರದಲ್ಲೇ ಇರುವ ಒಂದು ಗುಡಿಯಲ್ಲಿ ಧೂಮಾವತಿ, ಸತ್ಯದೇವತೆ, ಮೈಸಂದಾಯ ಹಾಗೂ ಬಂಟ ದೈವಗಳ ಸಾನಿಧ್ಯವಿದೆ. ಪಕ್ಕದಲ್ಲಿರುವ ಇನ್ನೊಂದು ಗುಡಿಯಲ್ಲಿ ಧರ್ಮರಸು, ಪಂಜುರ್ಲಿ, ವರ್ತೆ ಪಂಜುರ್ಲಿ ದೈವಗಳ ಸಾನಿಧ್ಯವಿದೆ.
Bola-Garodi-14
Bola-Garodi-15
ಪಕ್ಕದಲ್ಲಿಯೇ ರಕ್ತೇಶ್ವರಿ ಬನ ಹಾಗೂ ತೀರ್ಧಭಾವಿಗಳಿವೆ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ, ಕೋಟಿ-ಚೆನ್ನಯರು ಬೆಳ್ಮಣ್ ಗ್ರಾಮದ ಕೋಡಿಮಾರ್ ಪುಂಚಡ್ಕದ ಹತ್ತಿರ ಕುದುರೆಮಾರ್ ಮತ್ತು ನೆಲಮಾರ್ ಎಂಬ ಗದ್ದೆಗಳಲ್ಲಿ ತಮ್ಮ ಸುರಿಯದಿಂದ ನೀರು ತೆಗದ ಇತಿಹಾಸವಿದೆ. ಅಲ್ಲಿನ ಗ್ರಾಮ ದೇವತೆಯಾದ ದುರ್ಗಾಪರಮೇಶ್ವರಿ ದೇವಿಯ ಹತ್ತಿರ ಇಲ್ಲಿ ಗರಡಿ ಕಟ್ಟಿಸ ಬಹುದೇ ಎಂದು ಕೇಳಿದಾಗ, ದೇವಿಯು ಪ್ರತ್ಯಕ್ಷಳಾಗಿ, ಇದು ಪುಟ್ಟ ಗ್ರಾಮ ಇಲ್ಲಿಂದ ಮೂಡು ದಿಕ್ಕಿಗೆ ಬೋಳ ಎಂಬ 6 ಕರೆಯ ದೊಡ್ಡ ಗ್ರಾಮವಿದೆ ನೀವು ಅಲ್ಲಿಗೆ ಹೋಗಿ ಇಲ್ಲಿಯ ಭಕ್ತರ ಹರಕೆಯಾಗಿ ನಿಮ್ಮ ಸನ್ನಿಧಾನಕ್ಕೆ ಸಂದಾಯವಾಗುವಂತೆ ಮಾಡುತ್ತೇನೆ ಎಂದು ವಾಗ್ದಾನವಿತ್ತರು. ಅಲ್ಲಿಂದ ಮುಂದುವಿರಿದು ಕೋಟಿ-ಚೆನ್ನಯರು ಮೂಡು ದಿಕ್ಕಿಗೆ ಬಂದು ಜಲಪಾದೆ ನರಸಿಂಹ ದೇವರ ಬೇಟಿಮಾಡಿ ಬೊಳ್ಳಿಶಾಂತಿ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಾರೆ. ಅದೇ ಸಮಯದಲ್ಲಿ ಬೋಳ ಪರ್ತಿಮಾರು ಗುತ್ತುವಿನ ದುಗ್ಗಪ್ಪ ಶೆಟ್ಟರ ಮನೆಗೆ ನೆಂಟರು ಬಂದಾಗ ಅವರ ಮನೆಯಲ್ಲಿ ಒಂದು ಮುಷ್ಠಿ ಅಕ್ಕಿಯೂ ಇರುವುದಿಲ್ಲ. ಅಕ್ಕಿ ತರಲು ಜಲಪಾದೆಗೆ ಹೊರಟ ದುಗ್ಗಪ್ಪ ಶೆಟ್ಟಿ ದಾರಿಯಲ್ಲಿ ಬೊಳ್ಳಿಶಾಂತಿ ಮರದ ಕೆಳಗೆ ಕುಳಿತ ತರುಣರೊಂದಿಗೆ ತನ್ನ ಮನದ ನೋವನ್ನು ಹಂಚಿಕೊಂಡರು. ಆಗ ಕೋಟಿ-ಚೆನ್ನಯರು ದಾದ ಪನ್ಪರ್ ಗುತ್ತಿನಾರೇ ಅಟ್ಟೊಡು ಅರಿತ ಮುಡಿ ಉಂಡು ದಿಕ್ಕೆಲುಡು ಉರ್ಕಾರೊಂದು ಉಂಡು ಎಂದು ಹೇಳುತ್ತಾರೆ. ಅವಳಿ ವೀರರ ಮಾತಿನಂತೆ ಮನೆಗೆ ಹಿತಿರುಗಿದ ದುಗ್ಗಪ್ಪ ಶೆಟ್ಟಿಗೆ ಆಶ್ಚರ್ಯ ಕಾದಿತ್ತು. ಕೋಟಿಚೆನ್ನಯರ ಮಾತು ನಿಜವಾಗಿತ್ತು. ತಕ್ಷಣವೇ ಬೊಳ್ಳಿಶಾಂತಿ ಮರದ ಬಳಿ ಬಂದು ನೋಡಿದಾಗ ಕೋಟಿ-ಚೆನ್ನಯರು ಅಲ್ಲಿ ಇರುವುದಿಲ್ಲ. ದುಗ್ಗಪ್ಪ ಶೆಟ್ಟಿಯವರು ಜಲಪಾದೆ ತಂತ್ರಿಯವರ ಮನೆಗೆ ಬಂದು ಕೇಳಿದಾಗ ಕೋಟಿ-ಚೆನ್ನಯರಿಗೆ 16 ಕೋಲಿನ ಆಯದ ಗರೋಡಿ ಕಟ್ಟುವಂತೆ ಆಜ್ಙಾಪಿಸುತ್ತಾರೆ. ಆ ಗರೋಡಿಯೇ ಇದೀಗ ಬೋಳ ಮಲ್ಲಿಗೆ ಗರೋಡಿ ಎಂದು ಪ್ರಸಿದ್ದವಾಗಿದೆ.
Bola-Garodi-16

ಹರೀಶ್ ಪೂಜಾರಿ

ಹರೀಶ್ ಪೂಜಾರಿ (61 ವರ್ಷ) ಇವರು ಈ ಗರೋಡಿಯ ಪೂ ಪೂಜನೆಯವರು. ಇವರ ಮೊದಲು ಶ್ರೀಧರ ಕರ್ಕೆರ, ಅಂತಪ್ಪ ಪೂಜಾರಿ, ಚೆನ್ನು ಪೂಜಾರಿ, ಮೊದಲಾದ ಹಿರಿಯರು ಸೇವೆ ಮಾಡಿದ್ದರು.
ರಾಜೇಶ್ ಪೂಜಾರಿ (42 ವರ್ಷ) ರಮೇಶ್ ಪೂಜಾರಿ (43 ವರ್ಷ) ಇವರು ಇಲ್ಲಿಯ ದರ್ಶನದ ಸ್ಥಳ ಪಾತ್ರಿಗಳು. ಹಿಂದೆ ನೀಲಯ್ಯ ಪೂಜಾರಿ, ಪೋಂಕ್ರ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಪರ್ತಿಮಾರು ಗುತ್ತು ಸುಬ್ಬಯ್ಯ ಶೆಟ್ಟಿಯವರು ಕುಟುಂಬಸ್ತರು ಇಲ್ಲಿಯ ಮೊಕ್ತೇಸರರಾಗಿದ್ದಾರೆ. ಗರೋಡಿಯ ಉಸ್ತುವಾರಿಗೆ ಆಡಳಿತ ಸಮಿತಿಯಿದ್ದು ಗೋಪಾಲ ಶೆಟ್ಟಿ ಬೋಳ, ಪರಾಡಿ ಇವರು ಅಧ್ಯಕ್ಷರಾಗಿ, ವಿಕಾಶ ಶೆಟ್ಟಿಯವರು ಕಾರ್ಯದರ್ಶಿಯಾಗಿ, ಜಯರಾಮ ಸಾಲ್ಯಾನ್ ಜೊತೆ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗರೋಡಿಯಲ್ಲಿ ನಿತ್ಯ ಪೂಜೆ, ಸಂಕ್ರಾಂತಿ ಪೂಜೆ ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಪಂಚ ಕಜ್ಜಾಯ ಸೇವೆ, ಕದಿರು ಕಟ್ಟುವುದು, ಜಾರ್ದೆ ತಿಂಗಳ ಹುಣ್ಣಿಮೆಯ ಮೊದಲ ದಿನ ಅಗೆಲು ಸೇವೆ, ಹುಣ್ಣಿಮೆಯಂದು ಬೈದರ್ಕಳ ನೇಮ, ಮರುದಿನ ಜೋಗಿ ಪುರುಷ, ಮಾಯಂದಾಲ್ ಹಾಗೂ ಪಿಲ್ಚಂಡಿ ಕೋಲಗಳು ನಡೆಯುತ್ತದೆ.
ಈ ಗರೋಡಿಯ ಕೂಡುಕಟ್ಟಿನಲ್ಲಿ 16 ಗುತ್ತು ಹಾಗೂ 16 ಬರ್ಕೆಗಳಿವೆ. ಮರಿಮಾರು ಕರೆ, ಪಾಲಿಂಗೇರಿ, ಪಿಲಿಯೂರು, ಪೊತರ‍್ಮ,, ಪರಾರಿ ಕರೆ, ಬೋಳ, ಬೆಳ್ಮಣ್ಣು, ಜಾಗದ ಜನರು ಈ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಾರೆ.
ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ, ಸೇವೆ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ.
ಗರೊಡಿಗೆ 2 ಎಕರೆ 40 ಸೆಂಟ್ಸ ಜಾಗವಿದ್ದು 2019ರಲ್ಲಿ ಜೀರ್ಣೋದ್ಧಾರಗೊಂಡಿದೆ.
ನಾರಾಯಣ ಪರವ ಶಿರ್ತಾಡಿ ಇವರು ಗರೋಡಿಯ ನೃತ್ಯ ವಿಶಾರದರಾಗಿ, ಬೊಗ್ಗು ಮಡಿವಾಳ ಪಾಲಿಂಗೇರಿ ಇವರು ಮಡಿವಾಳರಾಗಿ, ಸೀತಾರಾಮ ಪೂಜಾರಿ ಬರಾಬೈಲು ಇವರು ವಾಧ್ಯದವರಾಗಿ, ಬಾಬು ಬೋಳ ಇವರು ಡೋಲಿನವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.
ಗರೋಡಿಗೆ ಸಂಬಂಧಪಟ್ಟು ಗರೋಡಿಯ ವಠಾರದಲ್ಲಿ ಗರಡಿ ಪ್ರಂಡ್ಸ ಬೋಳ, ಬೋಳ ಮಲ್ಲಿಗೆ ಭಜನಾ ಮಂಡಳಿ, ಶ್ರೀ ಬ್ರಹ್ಮಬೈದರ್ಕಳ ಸೇವಾ ಸಂಘ, ವಿಶ್ವ ಹಿಂದೂ ಪರಿಷತ್ ಬೋಳ ಘಟಕ ಮೊದಲಾದ ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ.
Bola-Garodi-17

ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಬೋಳ,
ಕಾರ್ಕಳ ತಾಲೂಕು,
ಉಡುಪಿ – 574116

ಗರೋಡಿಯ ಪೂ ಪೂಜನೆಯವರು:

ಶ್ರೀ ಹರೀಶ್ ಪೂಜಾರಿ – 9945944302

ಮಾಹಿತಿ ನೀಡಿದವರು:

ಹರೀಶ್ ಪೂಜಾರಿ

ಮಾಹಿತಿ ಸಂಗ್ರಹಿಸಿದವರು:

ಎ.ಮಾಧವ ಆದಿಉಡುಪಿ
ಹರೀಶ್ ಎಮ್.ಕೆ.ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

19-06-2025

Shree Brahma Baidarkala Garodi, Sooda

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಸೂಡ

ಉಡುಪಿಯಿಂದ ಶಿರ್ವ ತಲುಪಿ ಶಿರ್ವ ಪೇಟೆಯಿಂದ ಶಿರ್ವ – ಬೆಳ್ಮಣ್ ರಸ್ತೆಯಲ್ಲಿ ಸುಮಾರು 2 ಕಿ.ಮೀ. ಸಾಗಿದ ನಂತರ ಬಲಕ್ಕೆ ತಿರುಗಿ ಸುಮಾರು 2 ಕಿ.ಮೀ. ಸಾಗಿದರೆ ಸೂಡ ಗರೋಡಿ ಇದೆ.
Sooda-Garodi-1
Sooda-Garodi-2
Sooda-Garodi-3
Sooda-Garodi-4
Sooda-Garodi-5
ಗರೋಡಿಗೆ ಎರಡು ದ್ವಾರಗಳಿದ್ದು, ಮುಖ್ಯ ದ್ವಾರವು ಪೂರ್ವಾಭಿಮುಖವಾಗಿಯೂ, ಇನ್ನೊಂದು ದ್ವಾರವು ದಕ್ಷಿಣಾಭಿಮುಖವಾಗಿ ಇದೆ. ಬ್ರಹ್ಮಗುಡಿಯು ಪೂರ್ವಾಭಿಮುಖವಾಗಿದ್ದು, ಷಡಾಧಾರ ಪ್ರತಿಷ್ಠೆ ಇದೆ.
Sooda-Garodi-6
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಬಂಗಾರ ಹೊದಿಸಿದ, ಪ್ರಭಾವಳಿಗೆ ಬೆಳ್ಳಿ ಹೊದಿಸಿದ ಮೂರ್ತಿ ಇದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
Sooda-Garodi-7
ಗುಂಡದ ಬಲಭಾಗದಲ್ಲಿ ಕೋಟಿ-ಚೆನ್ನಯರು ಹಾಗೂ ಇಬ್ಬರು ಮಕ್ಕಳ ಮರದ ಪಾಪೆಯಿದೆ. ಪಕ್ಕದಲ್ಲಿ ಪಿಲ್ಚಂಡಿ ದೈವದನ ಮಣೆ ಮಂಚವಿದೆ
Sooda-Garodi-8
ಗುಂಡದ ಎಡಭಾಗದಲ್ಲಿ ಕುದುರೆಯ ಮೇಲೆ ಕುಳಿತ ಬಲ್ಲಾಳರ ಮರದ ಪಾಪೆ, ಕುಜುಂಬ ಕಾಂಜವರ ಮರದ ಪಾಪೆ, ಇಬ್ಬರು ಮಕ್ಕಳ ಮರದ ಪಾಪೆ ಹಾಗೂ ಕೊಡಮಣಿತ್ತಾಯ ದೈವದ ಮಣೆ ಮಂಚವಿದೆ.
Sooda-Garodi-9
ಬ್ರಹ್ಮಗುಡಿಯ ಹೊರಗೆ ಬಲಬದಿಯಲ್ಲಿ ಜೋಗಿ ಪುರುಷರ ಮರದ ಮೂರ್ತಿ, ಎಡಬದಿಯಲ್ಲಿ ಮಾಯಂದಾಲ್ ಮತ್ತು ಮಗುವಿನ ಮರದ ಮೂರ್ತಿ, ಮೈಸಂದಾಯ ಹಾಗೂ ಕುಕ್ಕಿನಂತಾಯ ದೈವಗಳ ಮಣೆ ಮಂಚವಿದೆ.
Sooda-Garodi-10
Sooda-Garodi-11
ಗರೋಡಿಯ ಹೊರಗೆ ಆವರಣದೊಳಗೆ ಬಲಬದಿಯಲ್ಲಿರುವ ಗುಡಿಯಲ್ಲಿ ಪಿಲ್ಚಂಡಿ ದೈವದ ಮರದ ಪಾಪೆ ಹಾಗೂ ಮಣೆ ಮಂಚವಿದೆ.
Sooda-Garodi-12
ಗರೋಡಿಯ ಆವರಣದೊಳಗೆ ತುಳಸಿಕಟ್ಟೆ, ಅಜೆಕಾಯಿ ಕಲ್ಲುಗಳಿವೆ. ಗರೋಡಿಯ ಪರಿಸರದಲ್ಲಿ ನಾಗಬ್ರಹ್ಮಸ್ಥಾನವಿದೆ.
Sooda-Garodi-13

ನಾರಾಯಣ ಪೂಜಾರಿ

2015ರಿಂದ ನಾರಾಯಣ ಪೂಜಾರಿ (60 ವರ್ಷ) ಇವರು ಗರೋಡಿಯ ಪೂ ಪೂಜನೆಯವರಾಗಿದ್ದಾರೆ. ಸತೀಶ್ ಪೂಜಾರಿ (40 ವರ್ಷ) ಇವರು ಸಹ ಪೂ ಪೂಜನೆಯವರಾಗಿದ್ದು, ನಾರಾಯಣ ಪೂಜಾರಿಯವರಿಗೆ ಮೊದಲು ಅವರ ಹಿರಿಯರಾದ ಕೃಷ್ಣ ಪೂಜಾರಿ (ಅಣ್ಣ) ದೂಜ ಪೂಜಾರಿ (ಮಾವ) ಸೂರು ಪೂಜಾರಿ, ವೆಂಕ ಪೂಜಾರಿ, ಅಪ್ಪಣ್ಣ ಪೂಜಾರಿಯವರು ಇಲ್ಲಿ ಪೂ ಪೂಜನೆಯ ಸೇವೆ ಮಾಡಿದ್ದರು.
Sooda-Garodi-14

ಕೋಟಿ ಪೂಜಾರಿ

ಕೋಟಿ ಪೂಜಾರಿಯವರು ಇಲ್ಲಿಯ ಬೈದರ ದರ್ಶನದ ಸ್ಥಳ ಪಾತ್ರಿಗಳಾಗಿದ್ದಾರೆ. ಇವರ ಮೊದಲು ದೂಜ ಪೂಜಾರಿ, ವೆಂಕ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಶಿರ್ವಕೋಡು ಜಯಶೀಲ ಹೆಗ್ಡೆಯವರು ಗರೋಡಿಯ ಮೊಕ್ತೇಸರರಾಗಿದ್ದಾರೆ. ಇವರ ಮೊದಲು ಕುಮರ ಹೆಗ್ಡೆ, ಕರುಣಾಕರ ಹೆಗ್ಡೆ, ಮುದ್ದಣ್ಣ ಹೆಗ್ಡೆಯವರು ಇಲ್ಲಿಯ ಮೊಕ್ತೇಸರರಾಗಿದ್ದರು.
ಗರೋಡಿಯಲ್ಲಿ ಸಂಕ್ರಾತಿ ಪೂಜೆ, ಚೌತಿ ಪೂಜೆ, ಸೋಣ ಸಂಕ್ರಾಂತಿಯಂದು ಹೂವಿನ ಪೂಜೆ, ಕದಿರು ಕಟ್ಟುವುದು, ಜನವರಿ ತಿಂಗಳ ಷಷ್ಠಿಯಂದು ಅಗೆಲು ಸೇವೆ, ಸಪ್ತಮಿಯಂದು ಬೈದೇರುಗಳ ನೇಮೋತ್ಸವ, ಅಷ್ಠಮಿಯಂದು ಜೋಗಿ ಪುರುಷ ಹಾಗೂ ಮಾಯಿಂದಾಲ್ ಕೋಲ ಸೇವೆಗಳು ನಡೆಯುತ್ತವೆ.
ಸೂಡ, ಕುಂಬ್ಳೆ, ನಂದಳಿಕೆ ಹಾಗೂ ಭಾಗಷ: ನಂದಳಿಕೆಯ ಜನರು ಈ ಗರೋಡಿಯ ಕೂಡು ಕಟ್ಟಿಗೆ ಸೇರಿದವರಾಗಿದ್ದು ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ, ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ.
2008ರಲ್ಲಿ ಗರೋಡಿಯ ಜೀರ್ಣೋದ್ದಾರವಾಗಿದೆ.
ನರಸಿಂಹ ಪರವ ಚೇರ್ಕಾಡಿ ಮತ್ತು ಸಂಘಟಿಗರು ಈ ಗರೋಡಿಯ ನೃತ್ಯ ವಿಶಾದರಾಗಿ, ಸತೀಶ ಬಂಗೇರ ಸೂಡ ಇವರು ಮಡಿವಾಳರಾಗಿ, ಸುನಿಲ್ ದೇವಾಡಿಗ ಇವರು ವಾದ್ಯದವರಾಗಿ ಸೇವೆ ಮಾಡುತ್ತಿದ್ದಾರೆ.
Sooda-Garodi-15

ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಸೂಡ,
ಸೂಡ ಗ್ರಾಮ, ಮತ್ತು ಅಂಚೆ,
ಕಾರ್ಕಳ ತಾಲೂಕು,
ಉಡುಪಿ – 574116

ಪೂ ಪೂಜನೆಯವರು:

ಶ್ರೀ ನಾರಾಯಣ ಪೂಜಾರಿ – 9880472393

ಸ್ಥಳ ಪಾತ್ರಿಗಳು:

ಶ್ರೀ ಕೋಟಿ ಪೂಜಾರಿ – 9008355957

ಮಾಹಿತಿ ನೀಡಿದವರು:

ಶ್ರೀ ನಾರಾಯಣ ಪೂಜಾರಿ

ಮಾಹಿತಿ ಸಂಗ್ರಹಿಸಿದವರು:

ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

19-06-2025

Shree Dharnarasu, Kodamanittaaya, Kukkinantaya Daivastana & Brah Baidarkala Garodi – Nadyodibettu, Sanoor

ಶ್ರೀ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ ದೈವಸ್ಥಾನ ಮತ್ತು ಬ್ರಹ್ಮ ಬೈದರ್ಕಳ ಗರೋಡಿ - ನಡ್ಯೋಡಿಬೆಟ್ಟು - ಸಾಣೂರು

ಉಡುಪಿಯಿಂದ ಕಾರ್ಕಳ ಮೂಡುಬಿದಿರೆ ರಸ್ತೆಗೆ ತಿರುಗಿ ಸುಮಾರು 2.5ಕಿ.ಮೀ. ನಂತರ ಬಲಕ್ಕೆ ತಿರುಗಿ 3ಕಿ.ಮೀ. ಸಾಗಿದರೆ ಈ ಗರೊಡಿ ಸಿಗುತ್ತದೆ.
sanoor-nadyodibettu-1
sanoor-nadyodibettu-2
sanoor-nadyodibettu-3
ಗರೋಡಿಗೆ ಉತ್ತರಾಭಿಮುಖವಾದ ಒಂದು ದ್ವಾರವಿದ್ದು, ಬ್ರಹ್ಮಗುಡಿಯೂ ಉತ್ತರಾಭಿಮುಖವಾಗಿದೆ.
sanoor-nadyodibettu-4
sanoor-nadyodibettu-5
ಗರೋಡಿಯ ಒಳಗೆ ಮೂರಂತಸ್ತಿನ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಮದ್ಯದಲ್ಲಿ ಗಾಳಿದೇವರು ಹಾಗೂ ಮೇಲಂತಸ್ತಿನಲ್ಲಿ ಗರುಡ ದೇವರ ಆರಾಧನೆಯಿದೆ. ಗುಂಡದ ಬದಿಯಲ್ಲಿ ಕೋಟಿಚೆನ್ನಯರ ಮಣೆಮಂಚ ಹಾಗೂ ಕೋಟಿಬೈದ್ಯರ ಮರದ ಮೂರ್ತಿ, ಗುಂಡದ ಎಡಬದಿಯಲ್ಲಿ ಚೆನ್ನಯಬೈದ್ಯರ ಮರದ ಮೂರ್ತಿ ಹಾಗೂ ಕುಜುಂಬಕಾಂಜವರ ಮಣೆಮಂಚವಿದೆ. ಪಕ್ಕದಲ್ಲಿ ಮರದ ಬಿಳಿ ಕುದುರೆಯಿದೆ.
sanoor-nadyodibettu-6
ಗರಡಿಯ ಎದುರಿಗೆ ಧರ್ಮರಸು ದೈವದ ಮಾಡ, ಹಾಗೂ ಇನ್ನೊಂದು ಗುಡಿಯಲ್ಲಿ ಕೊಡಮಣಿತ್ತಾಯ ಹಾಗೂ ಕುಕ್ಕಿನಂತಾಯ ದೈವಗಳ ಸಾನಿದ್ಯವಿದೆ. ಎದುರಿಗೆ ದ್ವಜಸ್ಥಂಭವಿದೆ.
sanoor-nadyodibettu-7
sanoor-nadyodibettu-8
sanoor-nadyodibettu-9
ಗರೋಡಿಯ ಆವರಣದೊಳಗೆ ವಸಂತ ಮಂಟಪ, ಅಜೆಕಾಯಿ ಕಲ್ಲು, ತೀರ್ಥಭಾವಿಗಳಿವೆ. ಇಲ್ಲಿ ಕೊಡಮಣಿತ್ತಾಯ ದೈವಕ್ಕೆ ಗುರ್ಜಿ ರಥವೂ ಇದೆ.
sanoor-nadyodibettu-10
sanoor-nadyodibettu-11
ಶಿವ ಪೂಜಾರಿ ಹಾರ್ದಡ್ಪು ಬರ್ಕೆ ಇವರುಬೈದರ್ಕಳ ಪೂ ಪೂಜನೆಯವರಾಗಿದ್ದಾರೆ. ಇಲ್ಲಿ ದರ್ಶನದ ಸ್ಥಳ ಪಾತ್ರಿಗಳಿಲ್ಲ.
ಸಾಣೂರು ಗುತ್ತು ಪ್ರಭಾತ್ ನಾಯ್ಕ ಇವರು ಇಲ್ಲಿಯ ಅನುವಂಶೀಯ ಮೊಕ್ತೇಸರರಾಗಿದ್ದಾರೆ.
ಸ್ಥಳೀಯ ಕ್ಷೇತ್ರದ ಅನುವಂಶೀಯ ಪ್ರಧಾನ ಅಸ್ರಣ್ಣರಾದ ವೇದಮೂರ್ತಿ ಶ್ರೀ ಶ್ರೀರಾಮಭಟ್ ದೇಂದಬೆಟ್ಟು ಇವರು ಇಲ್ಲಿಯ ಪ್ರಧಾನ ಅಸ್ರರಾಗಿದ್ದಾರೆ.
ಗರೋಡಿಯಲ್ಲಿ ಸಂಕ್ರಾಂತಿ ಪೂಜೆ, ಚೌತಿ ಪೂಜೆ, ದೀಪಾವಳಿ ಪೂಜೆ, ಕದಿರು ಕಟ್ಟುವುದು, ಶಿವರಾತ್ರಿ ಪೂಜೆ, ಚಾಂದ್ರಮಾನ ಪೂಜೆಗಳು ನಡೆಯುತ್ತವೆ. ಸೌರಮಾನ ಯುಗಾದಿಯಂದು ಭಂಡಾರ ಕೋಣೆಯಿಂದ ಧರ್ಮದೈವಗಳ ಭಂಡಾರಗರೋಡಿಗೆ ಬಂದು ದ್ವಜಾರೋಹಣ ನಡೆಯುತ್ತದೆ.
ಎರಡನೇ ದಿನ ಬೆಳಗ್ಗೆ ಧರ್ಮರಸು ಉಲ್ಲಾಯ ದೈವದ ನೇಮೋತ್ಸವ, ಪಲ್ಲ ಪೂಜೆ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯುತ್ತಿದೆ. ಸಂಜೆ 5ಗಂಟೆಗೆ ಚೆಂಡು, ರಾತ್ರಿ 9ಕ್ಕೆ ಉತ್ಸವ ಬಲಿ, ಕೊಡಮಣಿತ್ತಾಯ, ಕುಕ್ಕಿನಂತಾಯ, ಧರ್ಮದೈವಗಳ ನೇಮೋತ್ಸವ, ಕಡ್ಸಲೆ ಬಲಿ, ಕೋಟಿಚೆನ್ನಯರ ದರ್ಶನ ನಡೆಯುತ್ತದೆ.
ಮೂರನೇ ದಿನ ಬೆಳಿಗ್ಗೆ 7-00ಕ್ಕೆ ಕೊಡಮಣಿತ್ತಾಯ ದೈವದ ಹರಕೆ ಸ್ವೀಕಾರ, 11-30ರಿಂದ ಸಾರ್ವಜನಿಕ ಅನ್ನ ಸಂತರ್ಪಣೆ.
ಸಂಜೆ 5-00 ಕ್ಕೆ ಚೆಂಡು, ರಾತ್ರಿ 9-00 ಕ್ಕೆ ಬೈದರ್ಕಳ ನೇಮೋತ್ಸ, ಕಡ್ಸಲೆ ಬಲಿ, ಅಭಯ ವಾಕ್ಯ, ದ್ವಜ ಅವರೋಹಣ ನಡೆಯುತ್ತದೆ.
ನಾಲ್ಕನೇ ಶುದ್ದ ಸಂಪ್ರೋಕ್ಷಣೆಯ ನಂತರ ಭಂಡಾರ ವಾಪಾಸು ಹೋಗುವುದು.
ನವಂಬರ್ ತಿಂಗಳಲ್ಲಿ ಕಂಬಳದ ಕೋಲ ನಡೆಯುತ್ತದೆ. ಈ ಸಂದರ್ಭದಲ್ಲಿ ಕೊಡಮಣಿತ್ತಾಯ ಕೋಲ, ಎರುನಲಿಕೆ ನಡೆಯುತ್ತದೆ.
ನಾರಾಯಣ ಪರವ ಮತ್ತು ಸಂಗಡಿಗರು ಈ ಗರೋಟಡಿಯ ಈ ಗರೋಡಿಯ ನೃತ್ಯ ವಿಶಾರದರಾಗಿ, ಸೋಮಯ್ಯ ಮಡಿವಾಳ ಮಡಿವಾಳರಾಗಿ, ರಮೇಶ್ ದೇವಾಡಿಗ ಇರ್ವತ್ತೂರು ಇವರು ವಾದ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.
sanoor-nadyodibettu-12

ಮಾಹಿತಿ ಸಂಗ್ರಹಿಸಿದವರು

ಗರೋಡಿಯ ವಿಳಾಸ:

ಶ್ರೀ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ ದೈವಸ್ಥಾನ ಮತ್ತು ಬ್ರಹ್ಮಬೈದರ್ಕಳ ಗರೋಡಿ, ನಡ್ಯೋಡಿಬೆಟ್ಟು
ಮುದ್ದಣ್ಣ ನಗರ, ಸಾಣೂರು,
ಕಾರ್ಕಳ ತಾಲೂಕು
ಉಡುಪಿ 574114

ಅರ್ಚಕರು:

ಶಿವ ಪೂಜಾರಿ

ಮೊಕ್ತೇಸರರು:

ಪ್ರಭಾತ್ ನಾಯ್ಕ ಸಾಣೂರು ಗುತ್ತು – 98804463344

ಪ್ರಧಾನ ಅಸ್ರಣ್ಣ:

ವೇದಮೂರ್ತಿ ಶ್ರೀ ರಾಮ್ ಭಟ್

ಮಾಹಿತಿ ನೀಡಿದವರು:

ವೇದಮೂರ್ತಿ ಶ್ರೀ ರಾಮ್ ಭಟ್

ಮಾಹಿತಿ ಸಂಗ್ರಹಿಸಿದವರು:

ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

10.06.2025

Shree Satyadekke, Dharmarasu, Kodamnittaaya, Kukkinantaaya, Brahma Baidarkala & Mayandal Devi Jodu Garodi, Sanoor

ಶ್ರೀ ಸತ್ಯದೆಕ್ಕೆ, ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ, ಬ್ರಹ್ಮ ಬೈದರ್ಕಳ ಹಾಗೂ ಮಾಯಂದಾಲ್ ದೇವಿ ಜೋಡುಗರೋಡಿ ಸಾಣೂರು

ಉಡುಪಿಯಿಂದ ಕಾರ್ಕಳ ತಲುಪಿ ಕಾರ್ಕಳ – ಪಡುಬಿದ್ರಿ ರಸ್ತೆಯಲ್ಲಿ ಕುಂಟಲ್ಪಾಡಿ ಬಸ್ ಸ್ಟಾಪ್ನ ಹತ್ತಿರ ಎಡಕ್ಕೆ ತಿರುಗಿ ಸುಮಾರು ಒಂದು ಕಿ. ಮೀ. ಸಾಗಿದರೆ ಸಾಣೂರು ಜೋಡು ಗರೊಡಿ ಇದೆ.
sanoor-jodu-garodi-1
sanoor-jodu-garodi-2
sanoor-jodu-garodi-3
sanoor-jodu-garodi-4
sanoor-jodu-garodi-5
ಗರೋಡಿಯು ಶಿಲಾಮಯವಾಗಿದ್ದು ಪೂರ್ವಾಭಿಮುಖವಾದ ಮುಖ್ಯದ್ವಾರ ಹಾಗೂ ಉತ್ತರಾಭಿಮುಖವಾದ ಇನ್ನೊಂದು ದ್ವಾರವಿದೆ. ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದ್ದು ಷಢಾದಾರ ಪ್ರತಿಷ್ಟೆಯನ್ನು ಹೊಂದಿದೆ.
sanoor-jodu-garodi-6
ಗರೋಡಿಯ ಬ್ರಹ್ಮಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿ, ಮಧ್ಯದಲ್ಲಿ ಗಾಳಿ ದೇವರು ಹಾಗೂ ಮೇಲಂತಸ್ತಿನಲ್ಲಿ ಗರುಡ ದೇವರ ಆರಾಧನೆಯಿದೆ.
sanoor-jodu-garodi-7
ಗುಂಡದ ಎಡಬದಿಯಲ್ಲಿ ಕೋಟಿಚೆನ್ನಯರ ಮಣೆಮಂಚ, ಮಣೆಮಂಚದ ಹಿಂದೆ ಕೋಟಿಚೆನ್ನಯರ ಮರದ ಮೂರ್ತಿಗಳಿವೆ.
sanoor-jodu-garodi-8
ಗುಂಡದ ಬಲಬದಿಯಲ್ಲಿ ಕುಜುಂಬಕಾಂಜವರ ಮರದ ಮಣೆಮಂಚವಿದೆ.
sanoor-jodu-garodi-9
sanoor-jodu-garodi-10
ಬ್ರಹ್ಮಗುಡಿಯ ಹೊರಗೆ ಎಡಭಾಗದಲ್ಲಿ ಜೋಗಿಪುರುಷರ ಮಣೆಮಂಚ, ಪಕ್ಕದಲ್ಲಿ ಮಾಯಂದಾಲ್ ಹಾಗೂ ಮಾಣಿ ಬಾಲೆಯ ಮರದ ಮೂರ್ತಿ ಹಾಗೂ ಮಣೆಮಂಚಗಳಿವೆ.
sanoor-jodu-garodi-11
ಉತ್ತರ ಈಶಾನ್ಯ ದಿಕ್ಕಿನಲ್ಲಿ ಗುರುಕಂಬವಿದೆ.
sanoor-jodu-garodi-12
ಗರೋಡಿಯ ಆವರಣದೊಳಗೆ ಗುಡಿಯೊಂದರಲ್ಲಿ ಕೊಡಮಣಿತ್ತಾಯ ಹಾಗೂ ಕುಕ್ಕಿನಂತಾಯ ದೈವಗಳ ಸಾನಿಧ್ಯವಿದ್ದು, ಎದುರಿಗೆ ದ್ವಜಸ್ಥಂಭವಿದೆ. ಕೊಡಮಣಿತ್ತಾಯ ದೈವದ ಕೋಲದ ದಿನ ಅಂಗಣದಲ್ಲಿ ಮೂರು ಸುತ್ತು ಬಲಿ ಬರುವ ಮರದ ಹುಲಿ ಬಂಡಿಯಿದೆ.
sanoor-jodu-garodi-13
ಹತ್ತಿರದಲ್ಲಿ ಧರ್ಮರಸು ದೈವದ ಮಾಡವಿದೆ. ಉತ್ಸವದ ಸಂದರ್ಭದಲ್ಲಿ ಕೊಡಮಣಿತ್ತಾಯ ದೈವದ ಬಲಿಮೂರ್ತಿಯನ್ನಿಟ್ಟು ಪೂಜಿಸುವ ವಸಂತ ಮಂಟಪವಿದೆ.
sanoor-jodu-garodi-14
ಗರೋಡಿಯ ಆವರಣದೊಳಗೆ ಕ್ಷೇತ್ರಪಾಲ ಕಲ್ಲು, ತುಳಸಿಕಟ್ಟೆ, ಅಜೆಕಾಯಿ ಕಲ್ಲು, ತೀರ್ಥಭಾವಿಗಳಿವೆ.
sanoor-jodu-garodi-15

ನಿತಿನ್ ಬೋಂಟ್ರ

ನಿತಿನ್ ಬೋಂಟ್ರ ಸಾತಿಂಜೆ ಬರ್ಕೆ ಇವರು ಈ ಗರೋಡಿಯ ಪೂ ಪೂಜನೆಯವರಾಗಿದ್ದಾರೆ. ಇವರ ಮೊದಲು ಹಿರಿಯರಾದ ಕಾಡ್ಯ ಪೂಜಾರಿಯವರು ಈ ಸೇವೆ ಮಾಡಿದ್ದರು. ಈ ಗರೋಡಿಯಲ್ಲಿ ದರ್ಶನದ ಸ್ಥಳ ಪಾತ್ರಿಗಳಿಲ್ಲ.
sanoor-jodu-garodi-16

ಜಗಧೀಶ ಪೂಜಾರಿ

ಜಗಧೀಶ ಪೂಜಾರಿ ಸೇನರ ಬೆಟ್ಟು ಸಾಣೂರು ಇವರು ಗರೋಡಿಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿದ್ದು , ಜೀರ್ಣೋದ್ದಾರದ ನಂತರ ಆಡಳಿತ ಸಮಿತಿಯ ಅಧ್ಯಕ್ಷರಾಗಿದ್ದಾರೆ.
sanoor-jodu-garodi-17

ವೇದಮೂರ್ತಿ ಶ್ರೀ ರಾಮ್ ಭಟ್

ಸಾಣೂರು ಕ್ಷೇತ್ರದ ಅನುವಂಶೀಯ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ರಾಮ್ ಭಟ್ ದೇಂದಬೆಟ್ಟು ಇವರು ಇಲ್ಲಿಯ ಪ್ರಧಾನ ಅಸ್ರಣ್ಣರು ಆಗಿದ್ದಾರೆ.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ದೀಪಾವಳಿ ಪೂಜೆ, ಕದಿರು ಕಟ್ಟುವುದು, ಶಿವರಾತ್ರಿ ಪೂಜೆ ಸೌರಮಾನ ಯುಗಾದಿ, ಪೂಜೆಗಳು ನಡೆಯುತ್ತವೆ.
ಸುಗ್ಗಿ ತಿಂಗಳಲ್ಲಿ 18 ದಿನ ಮಾನದಲ್ಲಿ ಏಪ್ರಿಲ್ 1 ರಂದು ಸಾಯಂಕಾಲ ಸಾಯಂಕಾಲ 5ಕ್ಕೆ ಬೈದರ್ಕಳ ಭಂಡಾರ ಸಾಂತಿಂಜ ಬರ್ಕೆಯಿಂದ, ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ ಭಂಡಾರ ಪೊರ್ಲೊಟ್ಟು ಗುತ್ತುವಿನಿಂದ ಗರೋಡಿಗೆ ಬಂದು ದ್ವಜಾರೋಹಣ ನಡೆಯುತ್ತದೆ.
ಏಪ್ರಿಲ್ 2ರಂದು ಬೆಳಿಗ್ಗೆ ಧರ್ಮರಸು ಉಲ್ಲಾಯ ನೇಮ ನಡೆದು ಪಲ್ಲಪೂಜೆಯ ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯುತ್ತದೆ. ಸಂಜೆ 5ಕ್ಕೆ ಚೆಂಡು, ರಾತ್ರಿ ಕೊಡಮಣಿತ್ತಾಯ, ಕುಕ್ಕಿನಂತಾಯ, ಧರ್ಮದೈವಗಳ ನೇಮೋತ್ಸ, ಕಡ್ಸಲೆ ಬಲಿ, ಬೈದರ್ಕಳ ದರ್ಶನ ಸೇವೆ ನಡೆಯುತ್ತದೆ.
ಏಪ್ರಿಲ್ 3ರಂದು ಬೆಳಿಗ್ಗೆ ಕೊಡಮಣಿತ್ತಾಯ ಕೋಲದಲ್ಲಿ ಹರಕೆ ಸ್ವೀಕಾರ, ಸಂಜೆ 6ರಿಂದ ಬೈದರ್ಕಳ ಅನ್ನನೈವೇದ್ಯದ ಅಗೆಲು ಸೇವೆ ಬೈದರ್ಕಳ ದರ್ಶನ ಸೇವೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯುತ್ತದೆ.
ಏಪ್ರಿಲ್ 4ರಂದು ಸಂಜೆ 5ಕ್ಕೆ ಚೆಂಡು ರಾತ್ರಿ 9ಕ್ಕೆ ಬೈದರ್ಕಳ ನೇಮದ ನಂತರ ದ್ವಜ ಅವರೋಹಣ ನಡೆಯುತ್ತದೆ.
ಏಪ್ರಿಲ್ 5ರಂದು ಜೋಗಿಪುರುಷರ ಕೋಲ, 10ಕ್ಕೆ ಮಾಯಂದಾಲ್ ಕೋಲದ ನಂತರ ಹರಕೆ ಸ್ವೀಕಾರ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯುತ್ತದೆ. ನಂತರ ಭಂಡಾರ ವಾಪಾಸು ಹೋಗುವುದು. ಶುದ್ದ ಸಂಪ್ರೋಕ್ಷಣೆಯಾಗುವುದು.
ಇದಲ್ಲದೆ ಡಿಸೆಂಬರ್ 14ರಂದು ಮಂಡಕಲ್ಲು ದೊಂಪದ ಬಲಿ, ಗಡುವಾಡು ಜಾಗದಲ್ಲಿರುವ ಚಾವುಂಡಿ ದೈವ ಸಾನಿದ್ಯದಲ್ಲಿ, ಮಹಮ್ಮಾಯಿಗೆ ಗದ್ದಿಗೆ ಪೂಜೆ,(ಧರ್ಮರಸು, ಮಾಯಂದಾಲ್, ಜೋಗಿಪುರುಷ ಹೊರತುಪಡಿಸಿ) ಉಳಿದೆಲ್ಲ ದೈವಗಳಿಗೆ ಕೋಲ ನಡೆಯುತ್ತದೆ.
ಸಾಣೂರು ಗ್ರಾಮದ ಜನರು ಕಂಚಿಲ್ ಸೇವೆ, ಮದುವೆ ಮೊದಲಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ ಮೊದಲಾದ ಹರಕೆ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಬೈದೇರುಗಳಿಗೆ ಹರಕೆಯ ಅನ್ನ ನೈವೇದ್ಯ ಸೇವೆ ನೀಡುವುದಕ್ಕೆ ಈ ಗರೋಡಿಯಲ್ಲಿ ಅವಕಾಶವಿದೆ.
ಭಕ್ತ ಜನರ ಕಾಣಿಕೆ, ವರಡ ವಂತಿಗೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಗರೋಡಿಗೆ 73ಸೆಂಟ್ಸ ಜಾಗವಿದ್ದು 2023ರಲ್ಲಿ ಗರೋಡಿಯು ಜೀರ್ಣೋದ್ದಾರಗೊಂಡು ಶಿಲಾಮಯವಾಗಿ ಮೂಡಿ ಬಂದಿದೆ.
ನಾರಾಯಣ ಪರವ ಮಾಂಟ್ರಾಡಿ ಮತ್ತು ಸಂಗಡಿಗರು ಗರೋಡಿಯ ನೃತ್ಯವಿಶಾರದರಾಗಿ, ಸೋಮಯ್ಯ ಮಡಿವಾಳ ಮತ್ತು ಸಂಘಡಿಗರು ಮಡಿವಾಳರಾಗಿ, ಸಂತೋಷ ದೇವಾಡಿಗ ಕಾಂತಾವರ ಇವರು ವಾದ್ಯದವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.
sanoor-jodu-garodi-18

ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು

ಗರೋಡಿಯ ವಿಳಾಸ:

ಶ್ರೀ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ ಬ್ರಹ್ಮಬೈಕರ್ದಳ ಮಾಯಂದಾಲ್ ದೇವಿ ಜೋಡು ಗರೋಡಿ ಸಾಣೂರು,
ಕಾರ್ಕಳ ತಾಲೂಕು,
ಉಡುಪಿ ಜಿಲ್ಲೆ

ಅರ್ಚಕರು

ನಿತಿನ್ ಬೋಂಟ್ರ – 8722370077

ಆಡಳಿತ ಸಮಿತಿಯ ಅಧ್ಯಕ್ಷರು

ಜಗಧೀಶ ಪೂಜಾರಿ – 7624833315

ಮಾಹಿತಿ ನೀಡಿದವರು

ವೇದಮೂರ್ತಿ ಶ್ರೀ ರಾಮ್ ಭಟ್
ನಿತಿನ್ ಬೋಂಟ್ರ
ಜಗಧೀಶ ಪೂಜಾರಿ

ಮಾಹಿತಿ ಸಂಗ್ರಹಿಸಿದವರು:

ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

10.06.2025

Bailadka Anekallu Shree Brahma Baidarkala Garodi Anekere, Karkala

ಬೈಲಡ್ಕ ಆನೆಕಲ್ಲು ಶ್ರೀ ಬ್ರಹ್ಮಬೈದರ್ಕಳ ಗರೋಡಿ ಆನೆಕೆರೆ, ಕಾರ್ಕಳ

ಉಡುಪಿಯಿಂದ ಕಾರ್ಕಳಕ್ಕೆ ಬಂದು, ಕಾರ್ಕಳ ನಗರದಲ್ಲಿ ಆನೆಕೆರೆ ಎಂಬ ಸ್ಥಳದಲ್ಲಿ ಇದೆ ಈ ಗರೋಡಿ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ ಈ ಗರೋಡಿ ಬೈರವ ಅರಸರ ಕಾಲದ್ದೆನ್ನಲಾಗಿದೆ. ಬೈದೇರುಗಳು ಬೈರವ ಅರಸರಿಗೆ ಕನಸಿನಲ್ಲಿ ತೋರಿ ಬಂದು ಗರೋಡಿ ಕಟ್ಟಬೇಕೆಂದು ಎಚ್ಚರಿಸಿದಾಗ ಅರಸರು ಗಣನೆಗೆ ತಾರದೆ ತಾತ್ಸಾರ ಭಾವ ತೋರಿದರಂತೆ. ಕೋಟಿಚೆನ್ನಯರ ಕಾರಣೀಕದಿಂದಾಗಿ ಅರಸರ ಪಟ್ಟದ ಆನೆ ಆಹಾರ ಸ್ವೀಕರಿಸದೆ ಮಾರಣಾಂತಿಕ ಸ್ಥಿತಿಯಲ್ಲಿದ್ದು ಅರಮನೆಯಲ್ಲಿ ಅನೇಕ ಅನಿಷ್ಟಕಾರಕ ವಿಘ್ನಗಳು ತೋರಿದಾಗ ಅರಸರು ಜ್ಯೋತಿಷಿಗಳಲ್ಲಿ ಕೇಳಿದಾಗ “ ಈ ರಾಜ್ಯಕ್ಕೆ ಬೈದೇರುಗಳು” ಬಂದಿದ್ದಾರೆ. ಅವರಿಗೆ ಮೊದಲು ಗರೋಡಿ ಕಟ್ಟಿಸಿ ಆಗ ಪಟ್ಟದ ಆನೆಗೆ ಮತ್ತು ಅರಮನೆಗೆ ಕ್ಷೇಮವಾಗುವುದೆಂದು ತಿಳಿದು ಅರಸರು ಹರಕೆ ಕಾಣಿಕೆ ಹಿಡಿದು ಪಟ್ಟದ ಆನೆ ಸೌಖ್ಯವಾದರೆ ಅದೇ ಆನೆಯಿಂದ ಕಲ್ಲೆಳಸಿ ಗರೋಡಿ ಕಟ್ಟಿಸುವುದಾಗಿ ನೆನೆಸಿಕೊಂಡರು. ಆ ಪ್ರಕಾರ ಪಟ್ಟದ ಆನೆ ಸೌಖ್ಯವಾಗಿ ಅರಸರ ಎಲ್ಲಾ ಕೆಲಸಗಳೂ ಜಯ ಹೊಂದಿ ವಾಗ್ದಾನ ಪ್ರಕಾರ ಆನೆಯಿಂದ ಕಲ್ಲೆಳೆಸಿ ಗರೋಡಿ ಕಟ್ಟಿಸಿದರು. ಈಗಲೂ ಈ ಗರೋಡಿಗೆ “ ಆನೆಕಲ್ಲು “ ಗರೋಡಿ ಎಂಬ ಹೆಸರೂ ಇದೆ.
bailadka-1
bailadka-2
ಗರೋಡಿಗೆ ಪೂರ್ವಮುಖವಾದ ಮುಖ್ಯ ದ್ವಾರವಿದ್ದು ಉತ್ತರಕ್ಕೆ ಇನ್ನೊಂದು ದ್ವಾರವಿದೆ.
bailadka-3
ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದ್ದು ಷಢಾದಾರ ಪ್ರತಿಷ್ಠೆಯನ್ನು ಹೊಂದಿದೆ.
bailadka-4
ಗರೋಡಿಯ ಬ್ರಹ್ಮಗುಡಿಯ ಒಳಗೆ ಮೂರಂತಸ್ತಿನ ಗುಂಡದಲ್ಲಿ ನಾಗಬ್ರಹ್ಮರ ಪಂಚಲೋಹದ ಮೂರ್ತಿ, ಮದ್ಯದಲ್ಲಿ ಗಾಳಿದೇವರಿಗೆ ಹಾಗೂ ಮೇಲಂತಸ್ತಿನಲ್ಲಿ ಆಕಾಶಕ್ಕೂ ಪೂಜೆ ನಡೆಯುತ್ತದೆ.
bailadka-5
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರ ಮರದ ಮೂರ್ತಿ ಇದೆ.
bailadka-6
ಗುಂಡದ ಬಲಭಾಗದಲ್ಲಿ ಕುಜುಂಬಕಾಂಜವರ ಮಣೆಮಂಚವಿದೆ.
bailadka-8
ಬ್ರಹ್ಮಗುಡಿಯ ಎದುರು ಮುಖವಾಗಿ ಗುರುಕಂಭವಿದೆ.
bailadka-9
ಬ್ರಹ್ಮಗುಡಿಯ ಎಡಬದಿಯಲ್ಲಿ ಮಾಯಂದಾಲ್ ಮತ್ತು ಮಗುವಿನ ಮರದ ಮೂರ್ತಿಗಳಿವೆ.
bailadka-10
bailadka-11
bailadka-12
ಗರೋಡಿಯ ಹೊರಗೆ ಗುಡಿಯೊಂದರಲ್ಲಿ ಧರ್ಮರಸು, ಕೊಡಮಣಿತ್ತಾಯ, ಹಾಗೂ ಕುಕ್ಕಿನಂತಾಯ ದೈವಗಳ ಮಣೆಮಂಚಗಳಿವೆ. ಎದುರಿಗೆ ದ್ವಜಸ್ಥಂಭವಿದೆ.
bailadka-13
ಇನ್ನೊಂದು ಗುಡಿಯಲ್ಲಿ ಪಿಲ್ಚಂಡಿ ದೈವದ ಮಣೆಮಂಚದಲ್ಲಿ ಕಂಚಿನ ಮೂರ್ತಿ ಇದೆ.
bailadka-14
ಗರೋಡಿಯ ಆವರಣದೊಳಗೆ ತುಳಸಿಕಟ್ಟೆ, ತೀರ್ಥಬಾವಿ, ಅಜೆಕಾಯಿ ಕಲ್ಲುಗಳಿವೆ. ಹತ್ತಿರದಲ್ಲಿಯೇ ಗರೋಡಿಗೆ ಸಂಬಂಧಪಟ್ಟ ನಾಗಬನವಿದೆ.
bailadka-15

ಶರತ್ ಕುಮಾರ್

ಶರತ್ ಕುಮಾರ್ (36 ವರ್ಷ) ಇವರು ಇಲ್ಲಿಯ ಅರ್ಚಕರಾಗಿದ್ದಾರೆ. ಇಲ್ಲಿ ದರ್ಶನದ ಸ್ಥಳ ಪಾತ್ರಿಗಳಿಲ್ಲ.
ವಿನಾಯಕ ಚಂದರ್ (70 ವರ್ಷ) ಇವರು ಈ ಗರೋಡಿಯ ಮೊಕ್ತೇಸರರು.
ಗರೋಡಿಯಲ್ಲಿ ಮಂಗಳವಾರದ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಮಾಯಿ ತಿಂಗಳ ಹುಣ್ಣಿಮೆಯ ಹಿಂದಿನ ದಿವಸ ಕೊಡಿ ಏರಿಸಿ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ, ದೈವಗಳ ಕೋಲ, ಮರುದಿನ ಬೈದರ್ಕಳ ನೇಮ, ದರ್ಶನ, ಪಿಲ್ಚಂಡಿ ಕೋಲ, ಮರುದಿನ ಮಾಯಂದಾಲ್ ಕೋಲ ನಡೆಯುತ್ತದೆ.
ಕಾರ್ಕಳದ ಕಸಬದ ಜನರು ಈ ಗರೋಡಿಯಲ್ಲಿ ನೀರು ಸ್ನಾನ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಮೊದಲಾದ ಹರಕೆಯ ಸೇವೆಗಳಲ್ಲಿ ಭಾಗವಹಿಸುತ್ತಾರೆ. ಊರಜನರ ವರಡ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಗರೋಡಿಗೆ ಸುಮಾರು 2ಎಕರೆ ಜಾಗವಿದ್ದು 2016ರಲ್ಲಿ ಗರೋಡಿಯ ಜೀರ್ಣೋದ್ದಾರವಾಗಿದೆ.
ಉಗ್ಗಪ್ಪ ಪರವ ಕೆರ್ವಾಸೆ ಮತ್ತು ಸಂಗಡಿಗರು ಈ ಗರೋಡಿಯ ನೃತ್ಯ ವಿಶಾರದರಾಗಿ ಸೇವೆ ಮಾಡುತ್ತಿದ್ದಾರೆ. ಯೂತ್ ಬಿಲ್ಲವ (ರಿ) ಕಾರ್ಕಳ ಎಂಬ ಯುವಕ ಸಂಘವೊಂದು ಗರೊಡಿಗೆ ಸಂಬಂಧಪಟ್ಟು ಸಕ್ರಿಯವಾಗಿದೆ.
bailadka-16

ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು

ಗರೋಡಿಯ ವಿಳಾಸ:

ಬೈಲಡ್ಕ ಆನೆಕಲ್ಲು ಶ್ರೀ ಬ್ರಹ್ಮಬೈದರ್ಕಳ ಗರೋಡಿ ಆನೆಕೆರೆ
ಕಾರ್ಕಳ ತಾಲೂಕು,
ಉಡುಪಿ ಜಿಲ್ಲೆ

ಅರ್ಚಕರು

ಶರತ್ ಕುಮಾರ್ – 990207842

ಮೊಕ್ತೇಸರರು

ವಿನಾಯಕ ಚಂದರ್ – 9741931961 ಧೀರಜ್ ಚಂದರ್

ಮಾಹಿತಿ ನೀಡಿದವರು

ಶರತ್ ಕುಮಾರ್

ಮಾಹಿತಿ ಸಂಗ್ರಹಿಸಿದವರು:

ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

10.06.2025

Shree Dharmarasu, Shree Kodittaya, Shree Brahma Baidarkala Garodi, Kolake Irvatturu

ಶ್ರೀ ಧರ್ಮರಸು, ಶ್ರೀ ಕೊಡಮಣಿತ್ತಾಯ, ಶ್ರೀ ಕುಕ್ಕಿನಂತಾಯ, ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಕೊಳಕೆ ಇರ್ವತ್ತೂರು

ಉಡುಪಿ ಬೈಲೂರು ಕಾರ್ಕಳ ಮಾರ್ಗವಾಗಿ ನಂತರ ಕಾರ್ಕಳ ಮೂಡುಬಿದಿರೆ ರಸ್ತೆಯಲ್ಲಿ ಸುಮಾರು 3.5ಕಿ.ಮೀ. ಸಾಗಿ ಸಾಣೂರು ನಂತರ ಎಡಕ್ಕೆ ಇರ್ವತ್ತೂರು ಮುಖ್ಯ ರಸ್ತೆಗೆ ತಿರುಗಿ 3ಕಿ.ಮೀ. ದೂರ ಸಾಗಿದಾಗ ರಸ್ತೆಯ ಎಡಬದಿಯಲ್ಲಿದೆ ಇರ್ವತ್ತೂರು ಗರೋಡಿ.
Kolake-irvattur-1
Kolake-irvattur-2
Kolake-irvattur-3
Kolake-irvattur-4
ಗರೋಡಿಗೆ ಪೂರ್ವಾಭಿಮುಖವಾದ ಒಂದು ದ್ವಾರವಿದ್ದು, ಬ್ರಹ್ಮಗುಡಿಯು ಉತ್ತರಾಭಿಮುಖವಾಗಿದೆ.
Kolake-irvattur-5
ಗರೋಡಿಯ ಒಳಗೆ ಮೂರಂತಸ್ತಿನ ಮರದ ಗುಂಡವಿದೆ. ಗುಂಡದೊಳಗಿರುವ ನಾಗಬ್ರಹ್ಮರ ಮೂರ್ತಿಯು ಭಂಡಾರದ ಮನೆಯಲ್ಲಿದ್ದು ಉತ್ಸವದ ಸಮಯದಲ್ಲಿ ತರಲಾಗುವುದು. ಗುಂಡದ ಬಲಬದಿಯಲ್ಲಿ ಕೋಟಿ ಹಾಗೂ ಎಡಬದಿಯಲ್ಲಿ ಚೆನ್ನಯ ಮಣೆಮಂಚಗಳಿವೆ.
Kolake-irvattur-6
ಎದುರಿಗೆ ಮರದ ಕುದುರೆ ಇದೆ.
Kolake-irvattur-7
Kolake-irvattur-8
ಗರೋಡಿಯ ಬದಿಯಲ್ಲಿರುವ ಗುಡಿಯಲ್ಲಿ ಮಾಯಂದಾಲ್ ಮತ್ತು ಮಗುವಿನ ಮರದ ಮೂರ್ತಿಗಳಿವೆ.
Kolake-irvattur-9
Kolake-irvattur-10
ಇನ್ನೊಂದು ಬದಿಯಲ್ಲಿ ಮಾಡದಲ್ಲಿ ಧರ್ಮರಸು ದೈವದ ಸಾನಿಧ್ಯವಿದೆ.
Kolake-irvattur-11
ಪಕ್ಕದಲ್ಲಿರುವ ಇನ್ನೊಂದು ಗುಡಿಯಲ್ಲಿ ಕೊಡಮಣಿತ್ತಾಯ ಹಾಗೂ ಹತ್ತಿರದಲ್ಲಿರುವ ಗುಡಿಯಲ್ಲಿ ಕುಕ್ಕಿನಂತಾಯ ದೈವಗಳ ಸಾನಿಧ್ಯವಿದೆ.
Kolake-irvattur-12
ಹತ್ತಿರದಲ್ಲಿಯೇ ಕಲ್ಕುಡ, ಕಲ್ಲುರ್ಟಿ,ಕಾಳಮ್ಮ, ಪಂಜುರ್ಲಿ, ತೂಕತ್ತರಿ, ಪಂಚ ದೈವಗಳ ಗುಡಿಯಿದೆ.
Kolake-irvattur-13
ಗರೋಡಿಯ ಆವರಣದೊಳಗೆ ಕ್ಷೇತ್ರಪಾಲಕಟ್ಟೆ, ಕೊಡಿಮರ,(ದ್ವಜಸ್ಥಂಭ) ಐದು ಅಜೆಕಾಯಿ ಕಲ್ಲು, ಆರು ಬಲಿಕಲ್ಲುಗಳು, ಗರೋಡಿಯ ಆವರಣದಲ್ಲಿ ಎರಡು ಕೊಡಮಣಿತ್ತಾಯ ದೈವದ ಸವಾರಿ ಕಟ್ಟೆ, ಆವರಣದ ಹೊರಗೆ ಒಂದು ಸವಾರಿ ಕಟ್ಟೆಯಿದೆ.
ಉರುಂದಾರು ಬರ್ಕೆ ಚಂದ್ರಹಾಸ (40 ವರ್ಷ) ಇವರು ಗರೋಡಿಯ ಪೂ ಪೂಜನೆಯವರಾಗಿದ್ದಾರೆ. ಇವರ ಮೊದಲು ಸಂಜೀವ ಪೂಜಾರಿ, ಕೃಷ್ಣ ಪೂಜಾರಿ, ಮುತ್ತಯ್ಯ ಪೂಜಾರಿ ಮೊದಲಾದ ಹಿರಿಯರು ಈ ಸೇವೆ ಮಾಡಿದ್ದರು.
ಅವಳಿ ಜವಳಿಗಳಾದ ಉಮೇಶ ಅಂಚನ್ ಹಾಗೂ ರಮೇಶ ಅಂಚನ್ (70 ವರ್ಷ) ಇವರುಗಳು ಇಲ್ಲಿಯ ದರ್ಶನ ಪಾತ್ರಿಗಳು. ಇವರ ಮೊದಲು ಬೊಮ್ಮಯ್ಯ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ರತ್ನರಾಜ ಹೆಗ್ಡೆಯವರು (60 ವರ್ಷ) ಇವರು ಇಲ್ಲಿಯ ಕೊಡಮಣಿತ್ತಾಯ ದೈವದ ಸ್ಥಳ ಪಾತ್ರಿಗಳು. ಕೊಳಕೆಮನೆ ಜಯತೀರ್ಥ ಕಡಂಬ ಇವರು ಗರೋಡಿಯ ಮೊಕ್ತೇಸರರು.
ಗರೋಡಿಯಲ್ಲಿ ಸಂಕ್ರಾಂತಿ ಪೂಜೆ, ದೀಪಾವಳಿ ಪೂಜೆ, ಕದಿರುಕಟ್ಟುವ ಕ್ರಮಗಳಿವೆ. ಸೋಣ ತಿಂಗಳ ಸಂಕ್ರಾಂತಿಯಂದು ವಿಶೇಷ ಪೂಜೆ ನಡೆಯುತ್ತದೆ. ಸೋಣಸಂಕ್ರಾಂತಿ ನಂತರ ಕೊಡಮಣಿತ್ತಾಯ, ಕುಕ್ಕಿನಂತಾಯ ಕೋಲ ನಡೆಯುತ್ತದೆ.
ಜನವರಿ ತಿಂಗಳ 14ನೇ ತಾರೀಖಿನಂದು ಕೋಳಿಗುಂಟ ಹಾಕಿ, ನಾಲ್ಕು ಬರ್ಕೆ ಮನೆಯವರಿಂದ 10 ದಿನಗಳ ಕೋಳಿ ಅಂಕ ನಡೆಯುತ್ತದೆ. 10ನೇ ದಿನ ಜನವರಿ24ರಂದು ಭಂಡಾರ ಮನೆಯಿಂದ ಭಂಡಾರ ಬಂದು ದ್ವಜಾರೋಹಣ ನಡೆಯುತ್ತದೆ.
ಜನವರಿ 25ರಂದು ಧರ್ಮರಸು ನೇಮ ನಡೆಯುತ್ತದೆ. ನೇಮದಂದು ನೇಮ ಚಪ್ಪರಕ್ಕೆ 250-300 ಬಾಳೆ ಗೊನೆಗಳನ್ನು ಊರವರು ಹರಕೆಯ ರೂಪದಲ್ಲಿ ತಂದು ಕಟ್ಟುತ್ತಾರೆ. ಜನವರಿ 26ರಂದು ಜಾಗರ ಅಂದರೆ ಗರಡಿಯಿಂದ ಊರ ಬಸದಿಗೆ ಹೋಗಿ ದೇವರಿಗೆ ಪಂಚಾಮೃತ ಅಭಿಷೇಕದ ನಂತರ ಗರೋಡಿಗೆ ಬಂದು ಬಾಗಿಲು ಹಾಕುವುದು.
ಜನವರಿ 27ರಂದು ಬೆಳಗ್ಗೆ ಬಾಗಿಲು ತೆಗೆದು ಕೊಡಮಣಿತ್ತಾಯ ದೈವದ ದರ್ಶನ, ರಾತ್ರಿ ಕೊಡಮಣಿತ್ತಾಯ, ಕುಕ್ಕಿನಂತಾಯ ದೈವಗಳ ನೇಮ ನಡೆಯುತ್ತದೆ. ಜನವರಿ 28ರಂದು ಸಾರ್ವಜನಿಕ ಅನ್ನ ಸಂತರ್ಪಣೆ, ಬೈದರ್ಕಳ ನೇಮ, ಇರ್ಲ ದೈವಗಳ ಕೋಲ ಹಾಗೂ ಜೋಗಿಪುರುಷ ಕೋಲ ನಡೆಯುತ್ತದೆ. ಜನವರಿ 29ರಂದು ಮಾಯಂದಾಲ್ ಕೋಲ, ದ್ವಜ ಅವರೋಹಣ , ಕುರಿ ತಂಬಿಲ, ನಡೆದು ಭಂಡಾರ ವಾಪಾಸು ಹೋಗುವುದು.
ಗರೋಡಿಯಲ್ಲಿ ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮೊದಲಾದ ಹರಕೆಯ ಸೇವೆಗಳಲ್ಲಿ ಊರ ಜನರು ಭಾಗಿಯಾಗುತ್ತಾರೆ.
ಭಂಡಾರದ ಮನೆಯಿಂದ ಭಂಡಾರ ಹೊರಟು, ಮಿನ್ನಿಕಲ್ಲು, ಮಲೆಯಾಳ ಕಟ್ಟೆ, ಕೋರಂಜ ಬಾಕ್ಯಾರು, ಕೋರಂಜ, ಪಾಲ್ದೆಬೆಟ್ಟು ಈ ಐದು ಸ್ಥಳಗಳಲ್ಲಿ ದೊಂಪದ ಬಲಿ ನಡೆಯುತ್ತದೆ. ಗರೋಡಿಯಲ್ಲಿರುವ ಎಲ್ಲಾ ದೈವಗಳಿಗೆ (ಮಾಯಂದಾಲ್ ಹೊರತುಪಡಿಸಿ) ಕಟ್ಟುಕಟ್ಟಳೆ ನೇಮ, ಕೋಲ, ರಾತ್ರಿಯಿಡೀ ನಡೆದು ಬೆಳಗ್ಗೆ ಮಾರಿ ಪೂಜೆ ನಡೆದು ಭಂಡಾರ ವಾಪಾಸು ಬರುವುದು.
ಊರವರ ವರಡ ವಂತಿಗೆ, ಕಾಣಿಕೆ ಸಹಾಯಧನಗಳಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತಿದೆ. ಗರೋಡಿಗೆ 10 ಎಕರೆ ಜಾಗವಿದ್ದು 2006ರಲ್ಲಿ ಗರೋಡಿಯ ಜೀರ್ಣೋದ್ದಾರವಾಗಿದೆ.
ಸುರೇಶ ಪರವರು ಕೊಡಮಣಿತ್ತಾಯ ದೈವದ ನೃತ್ಯ ವಿಶಾರದರಾಗಿ, ಸುನಿಲ್ ಪರವರು ಕುಕ್ಕಿನಂತಾಯ ದೈವದ ನೃತ್ಯವಿಶಾರದರಾಗಿ, ಗಂಗಯ್ಯ ಪರವ, ರಮೇಶ್ ಪರವ ಹಾಗೂ ರಮೇಶ್ ಪರವ ಇವರು ಬೈದೇರುಗಳ ನೃತ್ಯವಿಶಾರದರಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ. ಸತೀಶ್ ಮಡಿವಾಳ ಇರ್ವತ್ತೂರು ಇವರು ಮಡಿವಾಳರಾಗಿ ಶೇಖರ ಮೊಯಿಲಿ ಇರ್ವತ್ತೂರು ವಾದ್ಯದವರಾಗಿ, ರಮೇಶ್ ಮೊಯಿಲಿ ಬ್ಯಾಂಡಿನವರಾಗಿ, ವಿಶ್ವನಾಥ ಕೆಲ್ಲಪುತ್ತಿಗೆ ಇವರು ಡೋಲಿನವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.
Kolake-irvattur-14

ಮಾಹಿತಿ ನೀಡಿದವರು ಮತ್ತು ಮಾಹಿತಿ ಸಂಗ್ರಹಿಸಿದವರು

ಗರೋಡಿಯ ವಿಳಾಸ:

ಶ್ರೀ ಧರ್ಮರಸು, ಶ್ರೀ ಕೊಡಮಣಿತ್ತಾಯ, ಶ್ರೀ ಕುಕ್ಕಿನಂತಾಯ, ಶ್ರೀ ಬ್ರಹ್ಮಬೈದರ್ಕಳ ಗರೋಡಿ ಕೊಳಕೆ – ಇರ್ವತ್ತೂರು,
ಕಾರ್ಕಳ ತಾಲೂಕು,
ಉಡುಪಿ ಜಿಲ್ಲೆ.

ಅರ್ಚಕರು

ಉರುಂದಾರ ಬರ್ಕೆ ಚಂದ್ರಹಾಸ – 897156927

ಮಾಹಿತಿ ನೀಡಿದವರು:

ಜಯತೀರ್ಥ ಕಡಂಬ
ಗೋಪಾಲ ಪೂಜಾರಿ
ಶಂಕರ ಪೂಜಾರಿ
ರಘುಚಂದ್ರ ಜೈನ್

ಮಾಹಿತಿ ಸಂಗ್ರಹಿಸಿದವರು:

ಎ. ಮಾಧವ ಆದಿಉಡುಪಿ
ಹರೀಶ್ ಎಮ್. ಕೆ. ಕಲ್ಮಾಡಿ

ಮಾಹಿತಿ ಸಂಗ್ರಹಿಸಿದ ದಿನಾಂಕ:

10.06.2025